ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡದಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸರು ಬುಧವಾರ ಸುಮಾರು 1,500 ಪೊಲೀಸರನ್ನು ಈದ್ಗಾ ಮೈದಾನದಲ್ಲಿ ನಿಯೋಜಿಸಿದ್ದಾರೆ ಎಂದು ವರದಿಯಾಗಿದೆ.
ಮೈದಾನದಲ್ಲಿರುವ ಸಿಬ್ಬಂದಿಗಳಲ್ಲಿ 21 ಎಸಿಪಿಗಳು, 47 ಇನ್ಸ್ಪೆಕ್ಟರ್ಗಳು, 130 ಸಬ್ ಇನ್ಸ್ಪೆಕ್ಟರ್ಗಳು, 126 ಸಹಾಯಕ ಸಬ್ ಇನ್ಸ್ಪೆಕ್ಟರ್ಗಳು ಮತ್ತು 900 ಕಾನ್ಸ್ಟೆಬಲ್ಗಳು ಸೇರಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ಪತ್ರಿಕೆ ಉಲ್ಲೇಖಿಸಿದ್ದು, ಅವರನ್ನು ಡಿಸಿಪಿಗಳು ಮೇಲ್ವಿಚಾರಣೆ ಮಾಡುತ್ತಾರೆ ಎಂದು ವರದಿ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಒಟ್ಟು 120 ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್ಎಎಫ್) ಸಿಬ್ಬಂದಿ, 100 ವಿಶೇಷ ಮದ್ದುಗುಂಡು ತಜ್ಞರ ತಂಡ, ಕರ್ನಾಟಕ ರಾಜ್ಯ ಮೀಸಲು ಪೊಲೀಸರ (ಕೆಎಸ್ಆರ್ಪಿ) 10 ಪ್ಲಟೂನ್ಗಳನ್ನು ಕೂಡಾ ಸ್ಥಳದಲ್ಲಿ ಇರಿಸಲಾಗಿದೆ.
Security stepped up at Eidgah maidan in Bengaluru's Chamarajpet after SC order disallowing Ganesha Chaturthi celebrations. @samrahattar reports#Eidgah #EidgahMaidan #Bengaluru pic.twitter.com/VKDMyFPGAc
— TheNewsMinute (@thenewsminute) August 31, 2022
ಇದನ್ನೂ ಓದಿ: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ನಡೆಸುವಂತಿಲ್ಲ: ಸುಪ್ರೀಂ ಆದೇಶ
ಪೊಲೀಸರು ಈಗಾಗಲೇ ಈ ಪ್ರದೇಶದ ರೌಡಿ ಎಲಿಮೆಂಟ್ಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಧ್ವಜ ಮೆರವಣಿಗೆ ಮತ್ತು ಧಾರ್ಮಿಕ ಮುಖಂಡರೊಂದಿಗೆ ಸರಣಿ ಸಭೆಗಳನ್ನು ಸಹ ನಡೆಸಿದ್ದಾರೆ. ಈ ನಡುವೆ ಗಣೇಶೋತ್ಸವ ಆಚರಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ಕಾನೂನು ಹೋರಾಟ ನಡೆಸುತ್ತಿರುವ ಚಾಮರಾಜನಗರ ನಾಗರಿಕರ ವೇದಿಕೆ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸುವುದಾಗಿ ಹೇಳಿದೆ.
“ಸಂಘಟನೆಯು ತನ್ನ ಕಾನೂನು ಹೋರಾಟವನ್ನು ಮುಂದುವರೆಸಲಿದೆ. ಮುಂಬರುವ ದಿನಗಳಲ್ಲಿ ಜಯಶಾಲಿಯಾಗುವ ವಿಶ್ವಾಸವಿದೆ. ಅದರ ನಂತರ ಈದ್ಗಾ ಮೈದಾನದಲ್ಲಿ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತೇವೆ” ಎಂದು ವೇದಿಕೆಯ ಅಧ್ಯಕ್ಷ ರಾಮೇಗೌಡ ಹೇಳಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಗಣೇಶೋತ್ಸವ ಆಚರಣೆಗೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿರುವ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಕೂಡಾ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ ಎಂದು ವರದಿಯಾಗಿದೆ.
#WATCH | Karnataka: Security personnel conduct a flag march near the Eidgah Maidan in Bengaluru's Chamarajpet, ahead of Ganesh Chaturthi. pic.twitter.com/pFk1ExAYq3
— ANI (@ANI) August 30, 2022
ಕರ್ನಾಟಕ ವಕ್ಫ್ ಮಂಡಳಿಯ ಅರ್ಜಿಯ ಮೇರೆಗೆ ಸುಪ್ರೀಂಕೋರ್ಟ್ ಮಂಗಳವಾರ ಮಧ್ಯಂತರ ಆದೇಶ ನೀಡಿದ್ದು ‘ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಯಥಾಸ್ಥಿತಿ’ ಕಾಪಾಡಬೇಕು ಎಂದು ತೀರ್ಪು ನೀಡಿದ್ದು, ಗಣೇಶ ಚತುರ್ಥಿ ನಡೆಸಬಾರದೆಂದು ಹೇಳಿದೆ.
ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದ ಗಣೇಶ ಉತ್ಸವಕ್ಕೆ ತಡೆ ಇಲ್ಲ: ತಡರಾತ್ರಿ ವಿಚಾರಣೆಯಲ್ಲಿ ಹೈಕೋರ್ಟ್ ಹೇಳಿದ್ದೇನು?
ಈ ಹಿಂದೆ ಗಣೇಶ ಹಬ್ಬವನ್ನು ಇಲ್ಲಿ ಆಚರಿಸಲು ಸರ್ಕಾರ ಅನುಮತಿ ನೀಡಬಹುದು ಎಂದು ಹೈಕೋರ್ಟ್ ಇತ್ತೀಚೆಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ವಕ್ಫ್ ಬೋರ್ಡ್ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. “200 ವರ್ಷಗಳಿಂದ ಈ ಸ್ಥಳದಲ್ಲಿ ಇಂತಹ ಧಾರ್ಮಿಕ ಉತ್ಸವಗಳನ್ನು ನಡೆಸಿಲ್ಲ” ಎಂದು ವಕ್ಫ್ ಮಂಡಳಿ ವಾದಿಸಿತ್ತು.