Homeಚಳವಳಿಭಾರತ ಜೋಡೋದ ಸಿದ್ಧಾಂತ: ಅವರು ಒಡೆಯುವರು, ನಾವು ಜೋಡಿಸುವೆವು

ಭಾರತ ಜೋಡೋದ ಸಿದ್ಧಾಂತ: ಅವರು ಒಡೆಯುವರು, ನಾವು ಜೋಡಿಸುವೆವು

- Advertisement -
- Advertisement -

“ಇದೇನು ಭಾರತ ಜೋಡೋ ಎಂಬುದನ್ನು ಶುರು ಹಚ್ಕೊಂಡಿದೀರಿ, ಆಂದೋಲನಜೀವಿಗಳೆ? ಯಾವ ಭಾರತವನ್ನು ಜೋಡಿಸುವಿರಿ ನೀವು? ನೋಡುತ್ತಿಲ್ಲವೇ, ದೇಶ ತನ್ನಿಂತಾನೇ ಒಂದುಗೂಡುತ್ತಿದೆ. ಈ ದೇಶ ಜೋಡಿಸುವುದು ನಿಮಗ್ಯಾಕೆ ಬೇಕಿದೆ?”

ಯಾವಾಗಿನಿಂದ ನಾನು ‘ಭಾರತ ಜೋಡೊ ಯಾತ್ರಾ’ದೊಂದಿಗೆ ಸೇರಿಕೊಳ್ಳುವುದಾಗಿ ಸಾರ್ವಜನಿಕ ಘೋಷಿಣೆ ಮಾಡಿದೆನೋ, ಆವಾಗಿನಿಂದ ಇಂತಹ ಪ್ರಶ್ನೆಗಳು ಬರುತ್ತಲೇ ಇವೆ. ಸಾಮಾಜಿಕ ಜಾಲತಾಣಗಳ ಮೂಲಕ ಬರುವ ಈ ಪ್ರಶ್ನೆಗಳು ಬಹುತೇಕವಾಗಿ ತೀಕ್ಷ್ಣವಾಗಿಯೂ ಹಾಗೂ ತಮಾಷೆಯಾಗಿಯೂ ಇರುತ್ತವೆ. ಈ ಯಾತ್ರೆಯ ಘೋಷಣೆಯನ್ನು ಕಾಂಗ್ರೆಸ್ ಪಕ್ಷ ಮಾಡಿದೆಯಾದರೂ, ಈ ದೇಶದ ಜನಾಂದೋಲನಗಳ ದೊಡ್ಡ ಭಾಗ, ಮುಂಚೂಣಿಯಲ್ಲಿರುವ ಚಿಂತಕರು ಹಾಗೂ ಗಣ್ಯ ವ್ಯಕ್ತಿಗಳೂ ಇದನ್ನು ಸ್ವಾಗತಿಸಿದ್ದಾರೆ ಮತ್ತು ಸಮರ್ಥನೆ ಮಾಡಿದ್ದಾರೆ. ಅತ್ತ ಅನೇಕ ಜನಾಂದೋಲನಗಳು ಹಾಗೂ ಜನರ ಸಂಘಟನೆಗಳು ಈ ಯಾತ್ರೆಯ ಸಮರ್ಥನೆ ಮಾಡುತ್ತ ಇದಕ್ಕೆ ಸಮಾನಾಂತರವಾಗಿ “ದ್ವೇಷ ಬಿಡಿ, ಭಾರತ ಜೋಡೊ” ಅಭಿಯಾನ ಘೋಷಣೆ ಮಾಡಿದ್ದಾರೆ. ವೈಚಾರಿಕವಾಗಿ ಬೇರೆಬೇರೆ ದಿಕ್ಕುಗಳಲ್ಲಿ ನಡೆಯುವ ಈ ಧ್ವನಿಗಳಲ್ಲಿ ‘ಭಾರತ ಜೋಡೊ’ದ ಮನವಿ ಕಾಣಿಸಿಕೊಂಡಿರುವುದು ಕೇವಲ ಸಂಯೋಗವಲ್ಲ. ಆದರೆ ಎಲ್ಲರೂ ಇದರ ಬೇರೆಬೇರೆ ಅರ್ಥಗಳನ್ನು ಹುಡುಕುತ್ತಿದ್ದಾರೆ.

“ಹಿಂದೂ ಮುಸ್ಲಿಂ ಏಕತೆಯ ಯಾತ್ರೆ ಮಾಡುತ್ತಿದ್ದೀರಲ್ಲವಾ ನೀವು? ಇದರ ಬಹಳ ಅವಶ್ಯಕತೆ ಇದೆ” ಈ ಸಂದೇಶವನ್ನು ಒಬ್ಬ ಹಿರಿಯ ಗಾಂಧಿವಾದಿ ನೀಡಿದರು. “ಇಲ್ಲ. ಅದು ಇದೆ, ಆದರೆ ಅದು ಮುಖ್ಯ ವಿಷಯವಲ್ಲ” ನಾನು ಅಳಕುತ್ತಲೇ ಉತ್ತರ ನೀಡಿದೆ. ನಿಸ್ಸಂದೇಹವಾಗಿಯೂ ಹಿಂದೂ ಮುಸ್ಲಿಂ ಏಕತೆಯನ್ನು ಗಟ್ಟಿಗೊಳಿಸುವುದು ಭಾರತಮಾತೆಯ ಕರೆಯಾಗಿದೆ. ಭಾರತದ ವಿಭಜನೆಯ ದುರಂತದ ನಂತರ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಇಷ್ಟೊಂದು ಅಸಮಧಾನ ಮತ್ತು ದ್ವೇಷ ಹರಡುತ್ತಿರುವ ಇಷ್ಟು ದೊಡ್ಡ ಮಟ್ಟದ, ಇಷ್ಟು ವ್ಯವಸ್ಥಿತವಾದ, ಇಷ್ಟು ಯೋಜಿತವಾದ ಹಾಗೂ ಸರಕಾರದ ಪೋಷಣೆಯುಳ್ಳ ಪ್ರಯತ್ನ ಮತ್ತೆಂದೂ ಆಗಿದ್ದಿಲ್ಲ. ನಿಸ್ಸಂದೇಹವಾಗಿಯೂ ಸಮುದಾಯಗಳನ್ನು ಪರಸ್ಪರ ಕಿತ್ತಾಡುವಂತೆ ಪ್ರಚೋದನೆ ನೀಡುವುದು ದೇಶದ್ರೋಹವಾಗಿದೆ ಹಾಗೂ ಅವುಗಳನ್ನು ಜೋಡಿಸುವುದು ದೇಶಭಕ್ತಿಯ ಮೊದಲ ಧರ್ಮವಾಗಿದೆ.

ಆದರೆ, ಇಂದು ಮೊದಲ ಸವಾಲು ಹಿಂದೂ ಹಾಗೂ ಮುಸ್ಲಿಂರನ್ನು ಜೋಡಿಸುವುದು ಆಗಿಲ್ಲ. ಎಲ್ಲಕ್ಕಿಂತ ದೊಡ್ಡ ಸವಾಲು, ಹಿಂದೂಗಳನ್ನು ಹಿಂದೂ ಧರ್ಮದ ಆತ್ಮದ ಜೊತೆಗೆ ಹಾಗೂ ಮುಸಲ್ಮಾನರನ್ನು ನಿಜವಾದ ಇಸ್ಲಾಂನೊಂದಿಗೆ ಜೋಡಿಸುವುದಾಗಿದೆ. ಸ್ವಾಮಿ ವಿವೇಕಾನಂದರ ಪ್ರಕಾರ, ಹಿಂದೂ ಧರ್ಮದ ಶ್ರೇಷ್ಠತೆಯು ಇತರ ಧರ್ಮಗಳಗಿಂತ ತನ್ನ ಮತವನ್ನು ಮೇಲೆ ನಿಲ್ಲಿಸುವುದರಲ್ಲಿ ಇಲ್ಲ, ಅದರ ಬದಲಿಗೆ ಹಿಂದೂ ಧರ್ಮದ ಶ್ರೇಷ್ಠತೆಯು ಜಗತ್ತಿನ ಎಲ್ಲಾ ಧರ್ಮಗಳ ಸತ್ಯವನ್ನು ಸ್ವೀಕರಿಸುವುದರಲ್ಲಿ ಅಡಗಿದೆ. ಕುರ್‌ಆನ್ ಶರೀಫ್‌ದ ಸಂದೇಶವು ಕಾಫಿರನ ರುಂಡವನ್ನು ಮುಂಡದೊಂದಿಗೆ ಬೇರ್ಪಡಿಸುವುದು ಆಗಿಲ್ಲದೇ, ಪ್ರತಿಯೊಬ್ಬ ವ್ಯಕ್ತಿಯ ಮನಸ್ಸನ್ನು ಜೋಡಿಸುವುದು ಆಗಿದೆ. ಎಲ್ಲಿಯವರೆಗೆ ಪ್ರತಿಯೊಂದು ಧರ್ಮದ ಅನುಯಾಯಿ ತನ್ನತನ್ನ ಧರ್ಮದ ಸಂಕೀರ್ಣವಾದ ವ್ಯಾಖ್ಯಾನವನ್ನು ಅರಿತು, ಧಾರ್ಮಿಕ ಗುತ್ತಿಗೆದಾರರು ಹಾಗೂ ಧರ್ಮದ ಹೆಸರಿನಲ್ಲಿ ದ್ವೇಷವನ್ನು ಬಿತ್ತುವ ವ್ಯಾಪಾರಿಗಳಿಂದ ಮುಕ್ತವಾಗುವುದಿಲ್ಲವೋ, ಅಲ್ಲಿಯವರೆಗೆ ದೇಶ ಒಂದಾಗಲು ಸಾಧ್ಯವಿಲ್ಲ. ಹಾಗಾಗಿಯೇ ಭಾರತ ಜೋಡೊದ ಮೊದಲ ಅರ್ಥ, ಧರ್ಮವನ್ನು ಅದರ ಮರ್ಮದೊಂದಿಗೆ ಜೋಡಿಸುವುದಾಗಿದೆ.

ಯಾವ ಮಾತು ಧರ್ಮಕ್ಕೆ ಅನ್ವಯವಾಗುತ್ತೋ, ಅದೇ ಜಾತಿ, ಕ್ಷೇತ್ರ, ಭಾಷೆ ಹಾಗೂ ಭೂಷಣಗಳ ಭೇದಗಳ ಬಗ್ಗೆಯೂ ನಿಜವಾಗಿರುತ್ತದೆ. ಭಾರತ ಜೋಡೊದ ಅರ್ಥವು, ಪ್ರದೇಶ ಮತ್ತು ಭಾಷೆಯ ಕಂದರವನ್ನು ಕಡಿಮೆ ಮಾಡುವುದು. ಆದರೆ ಇದಕ್ಕಾಗಿ ತನ್ನ ಪ್ರಾದೇಶಿಕ ಅಸ್ಮಿತೆಯನ್ನು ಮರೆತುಬಿಡುವ ಹಾಗೂ ಭಾಷಾ ಸಂಸ್ಕೃತಿಯನ್ನು ಬಿಟ್ಟುಬಿಡುವಂತೆ ಮನವಿ ಮಾಡುವುದು ಅಥವಾ ಒತ್ತಾಯ ಮಾಡುವುದು ಮಾರಕವಾಗಲಿದೆ. ಅದರಲ್ಲೂ ವಿಶೇಷವಾಗಿ ಉತ್ತರಭಾರತದ ಹಿಂದಿ ಭಾಷಿಕರು ಇತರ ದೇಶವಾಸಿಗಳಿಗೆ ಕ್ಷೇತ್ರೀಯತೆ (ಪ್ರಾದೇಶಿಕತೆ)ಯನ್ನು ಬಿಡುವ ಹಾಗೂ ಬಾಷೆಯ ಸಂಕೀರ್ಣತೆಯಿಂದ ಹೊರಬರುವ ಉಪದೇಶ ಮಾಡಿದರೆ ಅದು ಸರಿಯಾದ ಮಾರ್ಗವಲ್ಲ. ಭಾರತವನ್ನು ಜೋಡಿಸಲು ಎಲ್ಲಕ್ಕಿಂತ ಮೊದಲು ಹಿಂದಿ ಭಾಷಿಕರು ‘ತಾವು ದೇಶದ ಮಾಲೀಕರು ಹಾಗೂ ಇತರರೆಲ್ಲ ಬಾಡಿಗೆದಾರರು’ ಎಂಬ ಭಾವನೆಯಿಂದ ಹೊರಬರಬೇಕು. ಈ ನಿಟ್ಟಿನಲ್ಲಿ ನೋಡಿದರೆ, ಹಿಂದಿಗಿಂತ ತುಲನಾತ್ಮಕವಾಗಿ ಪ್ರಾಚೀನವಾದ ಮತ್ತು ಸಮೃದ್ಧವಾದ ತಮಿಳ ಭಾಷೆ ಮತ್ತು ಸಂಸ್ಕೃತಿಗೆ ನಮಿಸುತ್ತ ಕನ್ಯಾಕುಮಾರಿಯಿಂದ ಶುರುವಾಗುತ್ತಿರುವುದು ಒಂದು ಸುಂದರ ಸಂಯೋಗವೇ ಆಗಿದೆ.

ಅದೇ ರೀತಿಯಲ್ಲಿ ಜಾತಿ ಭೇದದ ಕಂದರವನ್ನು ಇಲ್ಲವಾಗಿಸುವ ಅರ್ಥ, ನಾವು ಜಾತಿ ಕಡೆಗೆ ಕಣ್ಣು ಮುಚ್ಚುವುದು ಅಥವಾ ನಮ್ಮ ಹೆಸರಿನಿಂದ ಜಾತಿಸೂಚಕ ಪದಗಳನ್ನು ಸೇರಿಸುವುದು ಯಾ ಬಿಡುವುದು ಅಲ್ಲ. ನಮ್ಮ ದೇಶದಲ್ಲಿ ತನ್ನ ಜಾತಿ ಗೊತ್ತಿಲ್ಲದೇ ಇರುವ ವಿಶೇಷಾಧಿಕಾರ ಮೇಲ್ಜಾತಿಯ ನಗರಗಳಲ್ಲಿರುವ ಜನರಿಗೆ ಮಾತ್ರ ಇರುತ್ತದೆ. ಜಾತಿ ಸೂಚಕ ಹೆಸರನ್ನು ಬಿಡುವುದರಿಂದ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಜಾತಿಯ ಕಂದರವನ್ನು ಇಲ್ಲವಾಗಿಸುವ ದಾರಿ, ಸಮಾಜದಲ್ಲಿ ಇಂದಿಗೂ ಜಾತಿಯ ಆಧಾರದ ಮೇಲೆ ನಿಷೇಧ, ವಂಚನೆ ಮತ್ತು ವಿಶೇಷಾಧಿಕಾರ ಮುಂತಾದವುಗಳ ಅವಶೇಷಗಳನ್ನು ಕೊನೆಗೊಳಿಸುವುದರಿಂದ ಮಾತ್ರ ಸಾಧ್ಯವಾಗಬಲ್ಲದು. ಅಂದರೆ ಜಾತಿ ವ್ಯವಸ್ಥೆಯ ಮೇಲುಕೀಳುಗಳನ್ನು ನಾಶಗೊಳಿಸಬೇಕು. ಭಾರತ ಜೋಡೊದ ಅರ್ಥ ಜಾತಿ ಒಡೆಯುವುದು ಆಗುವುದು.

ಭಾರತ ಜೋಡೊ ಎಂಬುದು ಕೇವಲ ಸಾಂಸ್ಕೃತಿಕ ಅಸ್ಮಿತೆಯ ಆಂದೋಲನವಾಗಲು ಸಾಧ್ಯವಿಲ್ಲ. ಎಲ್ಲಿಯವರೆಗೆ ದೇಶದ ಅಂತಿಮ ವ್ಯಕ್ತಿಯ ಜೀವನವನ್ನು ಸುಖಸಂತೋಷದ ಜೊತೆಗೆ ಜೋಡಿಸುವುದಿಲ್ಲವೋ ಅಲ್ಲಿಯವರೆಗೆ ಭಾರತ ಜೋಡೊ ಎಂಬುದು ಕೇವಲ ಘೋಷಣೆಯಾಗಿ ಉಳಿಯಲಿದೆ. ಭಾರತ ಜೋಡೊವನ್ನು ಸಾಕಾರಗೊಳಿಸಲು ನಾವುಗಳು ಒಂದು ಕಹಿ ಸತ್ಯವನ್ನು ಎದುರಿಸುವುದು ಅತ್ಯಗತ್ಯವಾಗಿದೆ. ಕಳೆದ 2 ವರ್ಷಗಳಲ್ಲಿ ದೇಶದ 97% ಜನರ ಆದಾಯ ಕಡಿಮೆಯಾಗಿದೆ, ಆದರೆ ಅದೇ ಸಮಯದಲ್ಲಿ ಮುಕೇಶ್ ಅಂಬಾನಿಯ ಸಂಪತ್ತು ಮೂರು ಪಟ್ಟು ಹೆಚ್ಚಾಗಿದೆ ಹಾಗೂ ಅದಾನಿಯ ಸಾಮ್ರಾಜ್ಯ 14 ಪಟ್ಟು ದೊಡ್ಡದಾಗಿದೆ. ಇತ್ತೀಚಿಗೆ ಬೆಳಕಿಗೆ ಬಂದಿದ್ದೇನೆಂದರೆ, ದೇಶದ ಶ್ರೀಮಂತ ವರ್ಗದಲ್ಲಿ ಭಾರತ ಛೋಡೋ (ಬಿಡುವ) ಆಂದೋಲನ ನಡೆಯುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಲಕ್ಷಾಂತರ ಭಾರತೀಯರು ದೇಶದ ನಾಗರಿಕತೆಯನ್ನು ಬಿಟ್ಟುಕೊಟ್ಟಿದ್ದಾರೆ. ಭಾರತದ ಎಲ್ಲಾ ಶ್ರೀಮಂತರು ದೇಶದ ಹೊರಗೆ ಹೂಡಿಕೆ ಮಾಡುತ್ತಿದ್ದಾರೆ. ಈ ಸರಕಾರದ ‘ನಾವಿಬ್ಬರು ನಮ್ಮ ಇಬ್ಬರು’ ಆರ್ಥಿಕ ನೀತಿಯಿಂದ ದೇಶವು ಎರಡು ಹೋಳಾಗುತ್ತಿದೆ. ಇದಕ್ಕೆ ಎದರು ನಿಂತು ಸವಾಲು ಒಡ್ಡದೇ ಭಾರತ ಜೋಡೊದ ಕನಸು ಕಾಣುವುದೂ ವ್ಯರ್ಥ. ಅಭೂತಪೂರ್ವ ನಿರುದ್ಯೋಗ, ಹೆಚ್ಚುತ್ತಿರುವ ಬೆಲೆ ಏರಿಕೆ ಹಾಗೂ ಸಾಮಾನ್ಯ ವ್ಯಕ್ತಿಯ ಅಸಾಹಯಕತೆಯ ಈ ಯುಗದಲ್ಲಿ ಭಾರತ ಜೋಡೊದ ಅರ್ಥ ಲೂಟಿಕೋರರ ಸ್ಥಾನದಲ್ಲಿ ಕಾರ್ಮಿಕರನ್ನು ಆರ್ಥಿಕ ನೀತಿಯ ಕೇಂದ್ರದಲ್ಲಿ ಇರಿಸುವುದು ಹಾಗೂ ಕರ್ಮವನ್ನು ಹೆಮ್ಮೆಯೊಂದಿಗೆ ಜೋಡಿಸುವುದೇ ಆಗಬೇಕಿದೆ.

ಭಾರತ ಜೋಡೊ ಸಂಕಲ್ಪವು ದೇಶದ ರಾಜಕೀಯ ವ್ಯವಸ್ಥೆಯನ್ನು ಮುಟ್ಟದೇ ಇರಲು ಸಾಧ್ಯವಿಲ್ಲ. ಈ ಯಾತ್ರೆಯ ಸಫಲತೆ ರಾಜಕೀಯ ಪಕ್ಷಗಳು ಹಾಗೂ ಜನಾಂದೋಲನಗಳನ್ನು ಜೋಡಿಸುವುದರ ಮೇಲೆ ಅವಲಂಬಿತವಾಗಿದೆ. ಆದರೆ, ಇದಕ್ಕೆ ನಮ್ಮ ಗಣರಾಜ್ಯದಲ್ಲಿ ಕೆಲವು ಮೂಲಭೂತವಾದ ಜೋಡಣೆಯನ್ನೂ ಮಾಡಬೇಕಾಗುತ್ತದೆ. ಭಾರತದ ಸ್ವಾತಂತ್ರದ ನಂತರದಿಂದ ನಮ್ಮ ಲೋಕತಂತ್ರ (ಪ್ರಜಾಪ್ರಭುತ್ವ) ಯಾವಾಗಲೂ ಬಗ್ಗಿ ನಿಂತಿದೆ, ಲೋಕದ (ಪ್ರಜೆಗಳ) ಮೇಲೆ ತಂತ್ರ (ಪ್ರಭುತ್ವ) ಯಾವಾಗಲೂ ಮೇಲುಗೈ ಸಾಧಿಸಿದೆ. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಲೋಕ (ಪ್ರಜೆ) ಎಂಬುದೇ ಕಣ್ಮರೆಯಾಗುತ್ತಿದೆ, ಅಥವಾ ಅದು ಒಂದು ಗುಂಪಾಗಿ ಬದಲಾಗುತ್ತಿದೆ ಎನ್ನಬಹುದು. ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳು ಕೇವಲ ಹಾಳೆಯ ತುಂಡಗಳಾಗಿ ಬದಲಾಗುತ್ತಿವೆ. ಸರಕಾರದ ವಿರುದ್ಧ ಧ್ವನಿ ಎತ್ತುವವರ ಸ್ಥಳ ಜೈಲು ಎಂದಾಗಿದೆ. ರಾಜಕೀಯ ವಿರೋಧಿಗಳನ್ನು ಬೆಂಬತ್ತಿ ಪೊಲೀಸ್ ವ್ಯವಸ್ಥೆಯ ಜೊತೆಗೆ ಈಗ ಸಿಬಿಐ, ಇಡಿ ಹಾಗೂ ಇನ್‌ಕಂ ಟ್ಯಾಕ್ಸ್ ಇಲಾಖೆ ಕೂಡ ಕೈಜೋಡಿಸಿವೆ. ಸಾಮಾನ್ಯ ವ್ಯಕ್ತಿಗಳನ್ನು ಬಿಟ್ಟುಬಿಡಿ, ಈಗ ಮುಖ್ಯಮಂತ್ರಿಗಳದ್ದೂ ಯಾವುದೇ ಸ್ಥಾನಮಾನ ಉಳಿದಿಲ್ಲ. ಯಾವ ರಾಜ್ಯದಲ್ಲಿ ಯಾರ ಸರಕಾರ ರಚಿಸಲಾಗುವುದು, ಯಾವುದು ಉಳಿಯುವುದು, ಯಾವುದು ಇಲ್ಲವಾಗುವುದು ಎಂಬುದರ ನಿರ್ಣಯ ದೆಹಲಿಯ ದರ್ಬಾರಿನಲ್ಲಿ ಆಗುತ್ತಿದೆ. ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಈಗ ನ್ಯಾಯಾಲಯದ ಬಾಗಿಲುಗಳೂ ಬಹುತೇಕ ಮುಚ್ಚಿವೆ. ಇಂತಹ ಪರಿಸ್ಥಿತಿಗಳಲ್ಲಿ ಭಾರತ ಜೋಡೊದ ಅರ್ಥ, ಲೋಕವನ್ನು ತಂತ್ರದೊಂದಿಗೆ ಜೋಡಿಸುವುದು ಹಾಗೂ ಗಣವನ್ನು ರಾಜ್ಯದೊಂದಿಗೆ ಜೋಡಿಸುವುದು ಆಗಲಿದೆ.

ಇಂದು ಭಾರತ ಜೋಡೊ ಯಾತ್ರೆಯ ಸಂಕಲ್ಪ ಒಂದೇ ಒಂದು ಆಗಲು ಸಾಧ್ಯ: ಅವರು ತುಂಡು ತುಂಡಾಗಿ ವಿಭಜಿಸುವರು, ನಾವು ಕಾಮನಬಿಲ್ಲು ಕಟ್ಟುವೆವು. ಈ ಆಂದೋಲನದ ಘೋಷಣೆ ಒಂದೇ ಒಂದು ಆಗಲು ಸಾಧ್ಯ: ಅವರು ಒಡೆಯುವರು, ನಾವು ಜೋಡಿಸುವೆವು. ಭಾರತದೊಂದಿಗೆ ಸುಂದರ ಭವಿಷ್ಯವನ್ನು ಜೋಡಿಸುವುದೇ ಭಾರತ ಜೋಡೊದ ಸಾರ್ಥಕ ಪರಿಣಾಮ ಆಗಬಹುದಾಗಿದೆ.

– ಯೋಗೇಂದ್ರ ಯಾದವ್

ಕನ್ನಡಕ್ಕೆ: ರಾಜಶೇಖರ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...