Homeಮುಖಪುಟನಾವು ನೋಡಿದ ನಾಟಕ; ’ವಿ ದ ಪೀಪಲ್ ಆಫ್ ಇಂಡಿಯಾ’: ಬಾಬಾಸಾಹೇಬರ ಆಶಯಗಳಿಗೆ ಸೃಜನಶೀಲತೆಯ ಸ್ಪರ್ಶ

ನಾವು ನೋಡಿದ ನಾಟಕ; ’ವಿ ದ ಪೀಪಲ್ ಆಫ್ ಇಂಡಿಯಾ’: ಬಾಬಾಸಾಹೇಬರ ಆಶಯಗಳಿಗೆ ಸೃಜನಶೀಲತೆಯ ಸ್ಪರ್ಶ

- Advertisement -
- Advertisement -

ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನವನ್ನು ಅಪ್ರಸ್ತುತಗೊಳಿಸಲು ಹಲವು ರೀತಿಯ ತಂತ್ರಗಾರಿಕೆ ಹೆಣೆಯುತ್ತಿರುವ ದಿನಗಳಲ್ಲಿ ಸಂವಿಧಾನದ ಮಹತ್ವ ಮತ್ತು ಜರೂರತೆಯನ್ನು ಸಾರುವ ’ವಿ ದ ಪೀಪಲ್ ಆಫ್ ಇಂಡಿಯಾ’
ನಾಟಕ ಈ ಕಾಲಕ್ಕೆ ಅಗತ್ಯವಾದ ಮತ್ತು ಬಹಳ ಮಹತ್ವವಾದ ಪ್ರಯೋಗವಾಗಿದೆ. ರಾಜ್ಯದ ಹಲವಾರು ಭಾಗಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಈ ನಾಟಕವನ್ನು ಜನ ಅಷ್ಟೇ ಆಪ್ತವಾಗಿ ಅಪ್ಪಿಕೊಳ್ಳುತ್ತಿದ್ದಾರೆ.

ಸಂವಿಧಾನದ ಪ್ರಸ್ತಾವನೆಯ ’ಭಾರತೀಯ ಪ್ರಜೆಗಳಾದ ನಾವು’ ಎಂಬ ಮೊದಲ ಸಾಲನ್ನೇ ನಾಟಕದ ಹೆಸರನ್ನಾಗಿಟ್ಟುಕೊಂಡು ಸಂವಿಧಾನದ ರಚನೆಯ ಸಂದರ್ಭದಲ್ಲಿ ನಡೆದ ಅಂಬೇಡ್ಕರ್‌ರವರ ಆಶಯಗಳು, ಚರ್ಚೆಗಳು, ವಾಗ್ವಾದಗಳು ಮತ್ತು ಸಂವಿಧಾನ ಜಾರಿಯಾದ ನಂತರವೂ ಅವುಗಳನ್ನು ಮರೆಮಾಚಲು ನಡೆಸುತ್ತಿರುವ ಹುನ್ನಾರಗಳನ್ನು ಈ ನಾಟಕದ ಮೂಲಕ ಹೇಳಲು ಹೊರಟಿದ್ದಾರೆ ನಾಟಕದ ರಚನಕಾರರಾದ ರಾಜಪ್ಪ ದಳವಾಯಿಯವರು. ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ರಂಗದ ಮೇಲೆ ತಂದಿದ್ದಾರೆ ಯುವ ಪ್ರತಿಭಾನ್ವಿತ ನಿರ್ದೇಶಕ ಲಕ್ಷ್ಮಣ್ ಕೆ.ಪಿ.

ಬಾಬಾಸಾಹೇಬ್ ಅಂಬೇಡ್ಕರ್ ಅವರು ಪ್ರಸ್ತಾವನೆಯಲ್ಲೇ ಸಂವಿಧಾನದ ಆಶಯಗಳನ್ನು ಒಳಗೊಂಡು ಸಾರಿದ್ದಾರೆ. ಭಾರತೀಯ ಪ್ರಜೆಗಳಾದ ನಾವು ಎಂಬ ಮೊದಲ ಮಾತೇ ಅದನ್ನು ಧ್ವನಿಸುತ್ತದೆ. ಈ ಸಾಲುಗಳನ್ನು ಓದಿದಾಗ ಅಥವಾ ಕೇಳಿದಾಗ ನಿಜವಾದ ದೇಶಪ್ರೇಮಿಗಳಿಗೆ ರೋಮಾಂಚನ, ಪುಳಕ ಉಂಟಾಗುತ್ತದೆ. ಬಹುತ್ವದ, ವೈವಿಧ್ಯಮಯವಾದ ಭಾಷೆ, ಸಂಸ್ಕೃತಿ, ಧರ್ಮಗಳನ್ನು ಅನುಸರಿಸುವ ಭಾರತೀಯರನ್ನು ಒಂದೆಂಬಂತೆ ಭಾವಿಸಲು, ಒಗ್ಗೂಡಿಸಲು ಅದು ಪ್ರೇರಣೆ ನೀಡುತ್ತದೆ. ಸಮಾನತೆ, ಸಹಬಾಳ್ವೆ, ಸಹೋದರತೆ ಮತ್ತು ಸ್ವಾತಂತ್ರ್ಯದ ಭಾವಗಳನ್ನು ಹೊಮ್ಮಿಸುತ್ತದೆ.

ಬುದ್ಧನ ಸಂದೇಶಗಳಿಂದ ಪ್ರಭಾವಿತರಾದ ಬಾಬಾಸಾಹೇಬರು ಯಾವ ತತ್ವಗಳ ಅಡಿಪಾಯದ ಮೇಲೆ ಈ ದೇಶ ರೂಪಿತವಾದರೆ ಭವಿಷ್ಯದಲ್ಲಿ ಸಮಸಮಾಜ ನಿರ್ಮಾಣವಾಗುತ್ತದೆ, ದೀನ ದಲಿತರಿಗೆ, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ ಘನತೆ – ಗೌರವದ ಬದುಕು ಸಿಗುತ್ತದೆ ಎಂಬುದನ್ನು ಆಶಿಸಿದ್ದರು ಮತ್ತು ಅದನ್ನು ವೈಜ್ಞಾನಿಕ ವಿಧಾನದ ಅಳವಡಿಸಲು ಮುಂದಾಗಿದ್ದರು ಎಂಬುದನ್ನು ಈ ನಾಟಕ ಮನದಟ್ಟು ಮಾಡಿಕೊಡುತ್ತದೆ.

ಒಂದು ಕಡೆ ನೆಲೆ ನಿಲ್ಲದೆ ಊರೂರು ಅಲೆಯುತ್ತಾ, ಪದ ಹೇಳುತ್ತಾ ಭಿಕ್ಷೆ ಬೇಡಿ ಬದುಕು ಸಾಗಿಸುವ ಅಲೆಮಾರಿಗಳ ಮೂಲಕ ಈ ನಾಟಕದಲ್ಲಿ ಕತೆ ಹೇಳಲೊರಟಿರುವುದು ಮಾರ್ಮಿಕವಾಗಿದೆ. ನಾಟಕ ಆರಂಭವಾಗುವುದೇ ಕಲಾವಿದರು ಪ್ರೇಕ್ಷಕರ ನಡುವಿನಿಂದಲೇ ಹಾಡು ಹೇಳಿಕೊಂಡು ಭಿಕ್ಷೆ ಬೇಡುವುದರಿಂದ. ಇದು ನೋಡುಗರು ಮತ್ತು ನಟರು ಇಬ್ಬರೂ ಸಮಾಜದಂತೆ, ಈ ಸಮಾಜದ ನಡುವಿನಿಂದ ಬರುವ ಕಲಾವಿದರು ಸಮಾಜದ ಪ್ರತಿನಿಧಿಗಳು ಎಂಬಂತೆ ಭಾಸವಾಗುತ್ತದೆ. ಅಲ್ಲದೆ ಈ ಅಲೆಮಾರಿಗಳನ್ನೂ ಒಳಗೊಂಡಂತೆ ಒಟ್ಟು ಸಮಾಜಕ್ಕೆ ಸಂವಿಧಾನದ ಬಗ್ಗೆ ಸಂಪೂರ್ಣ ಅರಿವಿಲ್ಲ. ಆದಷ್ಟು ಬೇಗ ಅದನ್ನು ಅರಿತುಕೊಳ್ಳುವಂತೆ ಮಾಡುಬೇಕು ಎಂಬುದು ನಾಟಕದ ಉದ್ದೇಶವಾಗಿದೆ.

ಅಲೆಮಾರಿಗಳ ರೀತಿಯಲ್ಲಿ ಸಂವಿಧಾನದ ಬಗ್ಗೆ ಲಾವಣಿ ಪದಗಳು, ತತ್ವ ಪದಗಳನ್ನು ಕಟ್ಟಿ ಹಾಡಿದರೆ ಸಂವಿಧಾನದಲ್ಲಿರುವ ವಿಚಾರಗಳು ಜನಸಾಮಾನ್ಯರ ನಾಡಿಮಿಡಿತದಲ್ಲಿ ಮಿಳಿತವಾಗುತ್ತವೆ. ಸಂವಿಧಾನ ಉಳಿದು ನೊಂದವರ, ಅವಮಾನಿತರ, ಹಿಂದುಳಿದವರ ಏಳಿಗೆಗೆ ಬೆಳಕಾಗುವುದು ಹೀಗೆ ಎನ್ನುವುದು ನಾಟಕ ನೋಡಿದಾಗ ಮನದಟ್ಟಾಗುತ್ತದೆ. ಅಂಬೇಡ್ಕರ್ ರಚಿತ ಸಂವಿಧಾನವನ್ನು ನಿಷ್ಠೆಯಿಂದ ಕಾಪಿಟ್ಟುಕೊಳ್ಳಬೇಕು. ನಾವು ಸಂವಿಧಾನವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂಬುದನ್ನು ನಿರ್ದೇಶಕರು ಇಲ್ಲಿ ಸಾರಿ ಹೇಳಿದ್ದಾರೆ.

ಸ್ವಾತ್ರಂತ್ರ ಬಂದು ನಮ್ಮದೇ ಆದ ಸಂವಿಧಾನ ರಚಿಸಿಕೊಂಡ ಮೇಲೆಯೂ ಭಾರತದ ದುಡಿಯುವ ವರ್ಗಕ್ಕೆ ದಕ್ಕಿದ್ದು ರಾಜಕೀಯ ಸ್ವಾತ್ರಂತ್ರ್ಯ ಮಾತ್ರ. ಇದು ಒಂದು ಮತ ಒಂದು ಮೌಲ್ಯ ಎನ್ನುವುದನ್ನು ಹೇಳಿತು. ಆದರೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯವಿಲ್ಲದಿದ್ದರೆ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ, ಇದನ್ನು ನಾವು ಆದಷ್ಟು ಬೇಗ ಬಗಹರಿಸಿಕೊಳ್ಳಬೇಕು, ಇಲ್ಲದಿದ್ದಲ್ಲಿ ನಾವೇ ಕಟ್ಟಿದ ಈ ಸಂವಿಧಾನವನ್ನು ನಮ್ಮ ಜನರೆ ಸ್ಫೋಟಿಸುತ್ತಾರೆ ಎನ್ನುವ ಅಂಬೇಡ್ಕರ್ ಮಾತುಗಳು ನಾಟಕದಲ್ಲಿ ಎದ್ದು ಕಾಣುತ್ತವೆ.

ನಾಟಕ ಸಾಗುತ್ತಾ ಸದ್ಯದ ವರ್ತಮಾನದ ಸವಾಲುಗಳಿಗೆ ಮುಖಾಮುಖಿಯಾಗುತ್ತದೆ. ಮಹಿಳೆಯರು ಸಾಧಿಸಿದ ಪ್ರಗತಿಯ ಆಧಾರದಲ್ಲಿ ನಾನು ಒಟ್ಟಾರೆ ಆ ಸಮಾಜದ ಪ್ರಗತಿಯನ್ನು ಅಳೆಯುತ್ತೇನೆ ಎಂದಿದ್ದರು ಅಂಬೇಡ್ಕರ್. ಆದರೆ ಇಂದಿಗೂ ಭಾರತದಲ್ಲಿ ಮಹಿಳೆಯರು ಸ್ಥಿತಿಗತಿ ಹೇಗಿದೆ? ನಿತ್ಯ ನಿರಂತರ ದೌರ್ಜನ್ಯಗಳು ಮುಂದುವರೆಯಲು ಕಾರಣವೇನು? ಮಹಿಳಾ ಮೀಸಲಾತಿ ಕೇವಲ ಕಾಗದದ ಮೇಲಿರುವುದು ಏಕೆ? ಅಸ್ಪೃಶ್ಯತೆ ಮತ್ತು ಜಾತಿ ದೌರ್ಜನ್ಯಗಳಿಗೆ ಕೊನೆಯೆಂದು? ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಆತ್ಮಗೌರವ ಸಿಗುವ ಹಾಗೆ ಮಾಡಲು ನಡೆಸಬೇಕಾದ ಹೋರಾಟದ ಕುರಿತು ನಾಟಕದಲ್ಲಿ ಚರ್ಚೆಯಾಗಿ ಮೂಡಿಬಂದಿದೆ.

ದಳವಾಯಿಯವರ ನಾಟಕ ’ವಿ ದ ಪೀಪಲ್ ಆಫ್ ಇಂಡಿಯಾ’ ಸಂವಿಧಾನದ ಆಶಯಗಳನ್ನು ಸರಳವಾಗಿ, ನೇರವಾಗಿ, ತೆಳು ಹಾಸ್ಯದ ಮೂಲಕ ನೋಡುಗರ ಮನಮುಟ್ಟುತ್ತದೆ. ನಿರ್ದೇಶಕರು ನೋಡುಗರನ್ನು ತಲುಪಲು ಆಯ್ಕೆ ಮಾಡಿಕೊಂಡ ನಿರೂಪಣೆಯ ದಾರಿ ಯಶಸ್ವಿಯಾಗಿದೆ. ರಂಗಾಯಣದ ನಟರು ಸಹಜವೆಂಬಂತೆ ಪರಿಣಾಮಕಾರಿಯಾಗಿ ನಟಿಸಿದ್ದಾರೆ. ಪ್ರಸಾಧನ, ರಂಗಸಜ್ಜಿಕೆ, ಹಾಡುಗಳು ನಾಟಕದ ಸಿರಿವಂತಿಕೆಯನ್ನು ಹೆಚ್ಚಿಸಿವೆ.

ನಾಟಕ ನೋಡಿ ಹೊರಬಂದ ಮೇಲೆಯೂ ಒಟ್ಟಾರೆ ನಾಟಕದ ಆಶಯ ಮನದಲ್ಲಿ ಉಳಿಯುತ್ತದೆ ಮತ್ತು ಗುನುಗುತ್ತಿರುತ್ತದೆ. ಜೊತೆಗೆ ಇನ್ನೊಂದಷ್ಟು ಸಂಗತಿಗಳನ್ನು ಹೇಳಬಹುದಿತ್ತೇನೋ ಅನಿಸದಿರದು. ಸಂವಿಧಾನ ರಚನಾ ಸಂದರ್ಭದಲ್ಲಿ ಬಾಬಾಸಾಹೇಬರು ಅನುಭವಿಸಿದ ಅಡೆತಡೆಗಳು, ಅವಮಾನಗಳು, ಸವಾಲುಗಳು, ಹಿಂದು ಬಿಲ್ ಕೋಡ್ ತಿರಸ್ಕೃತವಾದಾಗ ಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದು ಹೀಗೆ ಇನ್ನೂ ಕೆಲವನ್ನು
ಸೇರಿಸಬಹುದಿತ್ತೇನೊ ಎಂಬ ಆಶಯ ಕೊರತೆಯಾಗಿ ಕಾಣಿಸಿ ಉಳಿಯುತ್ತಾದರೂ, ರಂಗಭೂಮಿಯೂ ಕೋಮುವಾದಿಕರಣಗೊಂಡಿರುವ ಈ ಕಾಲದಲ್ಲಿ ಈ ನಾಟಕ ಮಹತ್ವದ್ದಾಗಿದೆ. ನಾಟಕ ರಚಿಸಿದ ರಾಜಪ್ಪ ದಳವಾಯಿ, ನಿರ್ದೇಶಿಸಿದ ಲಕ್ಷ್ಮಣ್ ಕೆ.ಪಿ ಮತ್ತು ಪ್ರಸ್ತುತಪಡಿಸಿದ ಶಿವಮೊಗ್ಗ ರಂಗಾಯಣಕ್ಕೆ ಅಭಿನಂದನೆಗಳು. ಇದು ಸಾವಿರಾರು ಪ್ರದರ್ಶನ ಕಾಣಲಿ.

ಎಂ.ವಿ ಕೃಷ್ಣ

ಎಂ.ವಿ ಕೃಷ್ಣ
ರಂಗಭೂಮಿ ಕಲಾವಿದರಾಗಿರುವ ಕೃಷ್ಣರವರು ಹಲವು ನಾಟಕ ಮತ್ತು ಸಾಕ್ಷರತಾ ಆಂದೋಲನದ ಬೀದಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಪತ್ರಸಂಗಪ್ಪನ ಕೊಲೆ ಪ್ರಕರಣ ಎಂಬ ನಾಟಕ ಬರೆದು ನಿರ್ದೇಶಿಸಿದ್ದರು. ಪ್ರಾಂಶುಪಾಲರಾಗಿ ನಿವೃತ್ತರಾಗಿ ಮಳವಳ್ಳಿಯಲ್ಲಿ ನೆಲೆಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

 


ಇದನ್ನೂ ಓದಿ: ‘ಅಂಬೇಡ್ಕರ್ ಆ ಕಾಲದಲ್ಲಿ ಸಂವಿಧಾನ ಬರ್ದಿದ್ಕೋ, ನಮ್ಮಪ್ಪಾಮ್ಮ ಸ್ಕೂಲಿಗೆ ಕಳ್ಸಿದ್ಕೊ, ಇಷ್ಟೆಲ್ಲಾ ಜಗತ್ತು ತಿಳ್ಕೋಣಕ್ಕಾಯ್ತು’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...