Homeಮುಖಪುಟಕರೆನ್ಸಿಯೊಂದಿಗೆ ಆಡುವ ಆಟ ಕರೆಂಟ್ ಜೊತೆಗೆ ಆಡಿದ ಆಟದಂತೆ; ಇದು ತುಘಲಕ್ ಮೋಜಿನಾಟ

ಕರೆನ್ಸಿಯೊಂದಿಗೆ ಆಡುವ ಆಟ ಕರೆಂಟ್ ಜೊತೆಗೆ ಆಡಿದ ಆಟದಂತೆ; ಇದು ತುಘಲಕ್ ಮೋಜಿನಾಟ

- Advertisement -
- Advertisement -

ದೆಹಲಿಯ ತೀನ್‌ಮೂರ್ತಿ ಭವನದಲ್ಲಿರುವ ದೇಶದ ಪ್ರಧಾನಮಂತ್ರಿಗಳ ಸಂಗ್ರಹಾಲಯದಲ್ಲಿ ಸದ್ಯಕ್ಕೆ ನರೇಂದ್ರ ಮೋದಿಯವರ ಕೊಠಡಿ ಅಪೂರ್ಣವಾಗಿದೆ. ಯಾವಾಗ ಅವರನ್ನು ಬೀಳ್ಕೊಡಲಾಗುವುದೋ ಆಗ, ಅವರು ತೆಗೆದುಕೊಂಡು ಒಳ್ಳೆಯ, ಕೆಟ್ಟ ತೀರ್ಮಾನಗಳ ನೆನಪುಗಳನ್ನು ಹೆಣೆಯುತ್ತ ಹೋದಲ್ಲಿ, ಆ ಮ್ಯೂಸಿಯಂನಲ್ಲಿ ನೋಟು ರದ್ದತಿಗೆ ಒಂದು ಸ್ಥಾನ ಅಥವಾ ಕೊಠಡಿ ಖಂಡಿತವಾಗಿಯೂ ಇರಲಿದೆ. ಆ ಕೊಠಡಿಯಲ್ಲಿ ಗುಲಾಬಿ ಬಣ್ಣದ 2000 ರೂಪಾಯಿಯ ನೋಟಿಗೂ ಸ್ಥಾನ ಇರಲಿದೆ. ಆ ಕೊಠಡಿಯನ್ನು ಹುಚ್ಚ ತುಘಲಕ್ ಎಂದು ಕರೆಯಲಾಗುವುದೋ ಅಥವಾ ತಮಾಷೆಯ ಕೊಠಡಿಯೆಂದು ಕರೆಯಲಾಗುವದೋ ಗೊತ್ತಿಲ್ಲ.

ಆ ಹೊಸ ರೀತಿಯ ಸಂಗ್ರಹಾಲಯದಲ್ಲಿ ಈ ನೋಟಿನ ಬಗ್ಗೆ ರಚಿಸಲಾದ ಜೋಕುಗಳಿಗೂ ಜಾಗ ಇರುವ ಸಾಧ್ಯತೆ ಇದೆ. ಬೇರೆ ಏನಾದರೂ ಇರಲಿ ಬಿಡಲಿ, ‘ಆಜ್ ತಕ್’ನ ಆಂಕರ್‌ನ ಆ ವಿಡಿಯೋ ತುಣುಕು; ನೋಟು ರದ್ದತಿಯ ದಿನದಂದು 2000 ರೂಪಾಯಿಯಲ್ಲಿ ‘ನ್ಯಾನೊ ಚಿಪ್’ನ ಇದೆ ಎಂದು ಖಡಾಖಂಡಿತವಾಗಿ ವರದಿ ಮಾಡುತ್ತಿರುವ ವಿಡಿಯೋ ತುಣುಕಂತೂ ಇರಲಿದೆ. ನನ್ನ ಮಾತು ನಡೆದರೆ, 2000 ರೂಪಾಯಿ ನೋಟನ್ನು ಹಿಂಪಡೆದಾಗ, ಆರ್‌‌ಓ‌ಎಫ್‌ಎಲ್ ಗಾಂಧಿ (ROFL Gandhi) ಹೆಸರಿನಲ್ಲಿ ಬಂದ ಈ ಟ್ವೀಟ್‌ಗೂ ಸಂಗ್ರಾಹಲಯದಲ್ಲಿ ಸ್ಥಾನ ನೀಡಬೇಕು; “ವಿಶ್ವಾಸಾರ್ಹ ಮೂಲಗಳ ಪ್ರಕಾರ 2000ದ ನೋಟಿನ ಚಿಪ್‌ಗೆ 5Gಯೊಂದಿಗೆ ಕನೆಕ್ಷನ್ ಆಗುತ್ತಿಲ್ಲ. ಈಗ 5G ಹೊಂದಿರುವ ಹೊಸ 5000ದ ಸೂಪರ್ ನ್ಯಾನೋ ಚಿಪ್‌ನ ನೋಟು ಬರಲಿದೆ. ಒಂದು ವೇಳೆ ಕಾಳಧನದ ಧಣಿಗಳು ಇದನ್ನು ತಿಜೋರಿಯಲ್ಲಿ ಇಟ್ಟರೆ, ಅದು ಖುದ್ದಾಗಿ ಊಬರ್ ಟ್ಯಾಕ್ಸಿ ಬುಕ್ ಮಾಡಿಕೊಂಡು ಆರ್‌ಬಿಐನ ಕಚೇರಿಗೆ ವಾಪಸ್ ಬರುವುದು!”

ಆ ಕೊಠಡಿಯಲ್ಲಿ 2016ರ ನವೆಂಬರ್ 8ರ ಸಂಜೆಯಿಂದ ಶುರುಮಾಡಿ 2023ರ ಮೇ 23ರತನಕದ ನೋಟುರದ್ದತಿಯ ಕಥೆಯನ್ನು ಹೇಳಲಾಗುವುದು. ಪ್ರಧಾನ ಮಂತ್ರಿ ದೊಡ್ಡದೊಡ್ಡ ಭರವಸೆ ನೀಡಿದ ಭಾಷಣದ ವಿಡಿಯೋ ತುಣುಕಿನೊಂದಿಗೆ ಆ ಕಥೆ ಪ್ರಾರಂಭವಾಗುವುದು. ಅದರಲ್ಲಿ ಇತರ ಅನೇಕ ಉಪಕಥೆಗಳು ಇರಲಿವೆ: ದೇಶಾದ್ಯಂತ ಕಂಡುಬಂದ ಸರತಿ ಸಾಲುಗಳು, ಹಳೆಯ ನೋಟುಗಳನ್ನು ಕೈಯಲ್ಲಿ ಹಿಡಿದುಕೊಂಡು ಕಾತುರದಿಂದ ಕಾಯುತ್ತಿರುವ ಕಣ್ಣುಗಳು ಇತ್ಯಾದಿ. ನಿಸ್ಸಂದೇಹವಾಗಿ, ಅಲ್ಲಿ ಅನೇಕ ದಸ್ತಾವೇಜುಗಳೂ ಇರಲಿವೆ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮೂರು ಹೊಸ ನಿರ್ದೇಶನಗಳು, ದಿನನಿತ್ಯ ಬದಲಾಗುತ್ತಿರುವ ಬ್ಯಾಂಕ್‌ಗಳ ನಿಯಮಗಳು.

ಒಂದು ವೇಳೆ ಆ ಸಂಗ್ರಹಾಲಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದರೆ, ಯಾವುದೇ ವಿತ್ತೀಯ ಅರ್ಥಶಾಸ್ತ್ರಜ್ಞರ ಅಭಿಪ್ರಾಯ ಪಡೆದುಕೊಳ್ಳದೇ, ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ್ ರಾಜನ್‌ನ ಎಚ್ಚರಿಕೆಯನ್ನು ಕಡೆಗಣಿಸಿ ಹೇಗೆ ದೇಶದ ಕರೆನ್ಸಿಯೊಂದಿಗೆ ಇಷ್ಟು ದೊಡ್ಡ ಆಟ ಆಡಲಾಯಿತು ಎಂಬುದನ್ನು ಅದರಲ್ಲಿ ದಾಖಲಿಸಲಾಗುವುದು. ಒಂದು ವೇಳೆ ಆ ಸಂಗ್ರಹಾಲಯ ಭವಿಷ್ಯದ ಪ್ರಜ್ಞೆಯನ್ನು ಹೊಂದಿದ್ದರೆ ಅದರಲ್ಲಿ ನೋಟು ರದ್ದತಿಯ ದಾವೆಗಳು ಮತ್ತು ಅದರ ಅಸಲಿಯತ್ತನ್ನು ಎದುರುಬದರು ಇರಿಸುವ ಒಂದು ಪ್ಯಾನೆಲ್ ಕೂಡ ಇರಿಸಬೇಕಾಗುವುದು. ನೋಟು ರದ್ದತಿಯಿಂದ ದೊಡ್ಡ ಪ್ರಮಾಣದಲ್ಲಿ ಕಾಳ ಧನ ಇಲ್ಲವಾಗುವುದು, ಭ್ರಷ್ಟಾಚಾರಕ್ಕೆ ಪೆಟ್ಟು ಬೀಳುವುದು ಎಂಬ ದಾವೆಗಳನ್ನು ಮಾಡಲಾಗಿತ್ತು. ಹೊರಬಂದ ಅಸಲಿಯತ್ತೇನೆಂದರೆ, ರಿಸರ್ವ್ ಬ್ಯಾಂಕಿನದ್ದೇ ವರದಿಯ ಪ್ರಕಾರ 99.3% ನೋಟುಗಳು ವಾಪಸ್ ಬಂದುಬಿಟ್ಟವು. ದುಡ್ಡಿನ ದೊಡ್ಡದೊಡ್ಡ ಚೀಲಗಳನ್ನು ಹೊಂದಿದ್ದ ಸೇಠರ ದುಡ್ಡು ಮುಳುಗಲಿಲ್ಲ, ಆದರೆ ಬಡವರ ಕರುಳಲ್ಲಿದ್ದ ಒಂದಿಷ್ಟು ನೋಟುಗಳು ಖಂಡಿತವಾಗಿಯೂ ಕೊಳೆತುಹೋದವು. ಕಾಳ ಧನ ಇರಿಸಿಕೊಳ್ಳುವ ದೊಡ್ಡ ದೊಡ್ಡ ಭ್ರಷ್ಟಾಚಾರಿಗಳು ಕರೆನ್ಸಿ ನೋಟುಗಳ ಕಂತೆಗಳನ್ನು ಬಚ್ಚಿಟ್ಟುಕೊಂಡಿರುತ್ತಾರೆ ಎಂಬುದು ಈ ತೀರ್ಮಾನದ ಹಿಂದಿದ್ದ ತಿಳಿವಳಿಕೆ. ಗೊತ್ತಾಗಿದ್ದೇನೆಂದರೆ, ಕಾಳಧನ ಇಟ್ಟುಕೊಳ್ಳುವವರು ನಮಗಿಂತ ಜಾಣರಾಗಿರುತ್ತಾರೆ, ಅವರು ತಮ್ಮ ಧನ, ಬೇನಾಮಿ ಸಂಪತ್ತನ್ನು ಭೂಮಿ ಅಥವಾ ವಜ್ರದಂತಹ ವಸ್ತುಗಳಲ್ಲಿ ಹೂಡಿಕೆ ಮಾಡಿರುತ್ತಾರೆ. ನಕಲಿ ನೋಟುಗಳ ಸಂಖ್ಯೆಯೂ ಹೆಚ್ಚಿದೆ ಎಂಬ ದಾವೆ ಹೂಡಲಾಗುತ್ತು. ನಂತರ ರಿಸರ್ವ್ ಬ್ಯಾಂಕ್ ಹೇಳಿದ್ದೇನೆಂದರೆ, ನಕಲಿ ನೋಟುಗಳು ಅನುಪಾತ ಇರುವುದು ಕೇವಲ 0.0007%ರಷ್ಟು ಎಂದು.

ಇಲ್ಲಿ ಪ್ರಧಾನಮಂತ್ರಿ ಸಂಗ್ರಾಹಾಲಯದ ಗುಲಾಬಿ ಬಣ್ಣದ ವ್ಯಂಗದ ಕೊಠಡಿ ನಿಮಗೆ ಒಂದು ಪ್ರಶ್ನೆ ಕೇಳಲಿದೆ: ಒಂದು ವೇಳೆ 500 ಮತ್ತು 1000 ರೂಪಾಯಿಗಳ ದೊಡ್ಡ ನೋಟಿನದ್ದೇ ಸಮಸ್ಯೆಯಾಗಿದ್ದಲ್ಲಿ ಅದಕ್ಕಿಂತ ದೊಡ್ಡ ಮೌಲ್ಯದ 2000 ರೂಪಾಯಿ ನೋಟಿನಿಂದ ಆ ಸಮಸ್ಯೆಯ ಪರಿಹಾರ ಆಗುವುದು ಹೇಗೆ? ಒಂದು ವೇಳೆ ಭ್ರಷ್ಟರಿಗೆ 1000 ರೂಪಾಯಿಯ ನೋಟುಗಳಿಂದ ಹಣ ಶೇಖರಣೆ ಮಾಡಲು ಅನುಕೂಲ ಆಗುತ್ತಿದೆ ಎಂದಲ್ಲಿ 2000 ರೂಪಾಯಿಯ ನೋಟುಗಳಿಂದ ಅವರಿಗೆ ಇನ್ನಷ್ಟು ಅನುಕೂಲ ಆಗುವುದಿಲ್ಲವೇ? ಈ ಪ್ರಶ್ನೆಯ ಉತ್ತರ ಆಗಲೂ ಸಿಗಲಿಲ್ಲ, ಇಲ್ಲಿಯತನಕವೂ ಸಿಕ್ಕಿಲ್ಲ. ತುಘಲಕ್ ದರ್ಬಾರಿನಿ ರೀತಿಯ ನೋಟು ರದ್ದತಿ ತೀರ್ಮಾನಕ್ಕಾಗಿ ಸರಕಾರವು ದೇಶದ ಜನತೆಗೆ ಎಂದೂ ಕ್ಷಮೆ ಕೇಳಿಲ್ಲ. ಆದರೆ ಕಾಳಧನ ಇಲ್ಲವಾಗಿಸುವ ದಾವೆಯ ಆಧಾರದ ಮೇಲೆ ಚುನಾವಣೆ ಗೆದ್ದರು, ಒಂದೆರಡು ಬಾರಿ ನೋಟು ರದ್ದತಿಯ ವಾರ್ಷಿಕ ಸಂಭ್ರಮ ಆಚರಿಸಿದರು ಹಾಗೂ ಅದರ ನಂತರ ಅದನ್ನು ಮರೆತುಬಿಟ್ಟರು. ಯಾರಿಗೂ ಗೊತ್ತಾಗದ ಹಾಗೆ ಸರಕಾರವು 2018ರಲ್ಲಿಯೇ 2000 ರೂಪಾಯಿಯ ನೋಟುಗಳ ಮುದ್ರಣ ನಿಲ್ಲಿಸಿತು ಹಾಗೂ ಮತ್ತೆ 2022 ಮೇ 19ರಂದು ಮತ್ತೆ ಇದನ್ನು ವಾಪಸ್ ಪಡೆಯುವ ಘೋಷಣೆ ಮಾಡಿತು. ಮತ್ತೆ ಇದನ್ನು ಭ್ರಷ್ಟಾಚಾರದ ವಿರುದ್ಧದ ಅಂತಿಮ ಯುದ್ಧ ಎಂದು ಭಟ್ಟಂಗಿಗಳು ದಾವೆ ಹೂಡಿದರು, ಆದರೆ ಈ ಬಾರಿ ಕೇಳುವವರು ಯಾರೂ ಇಲ್ಲ. 2000 ರೂಪಾಯಿ ನೋಟುಗಳ ಚಲಾವಣೆ ಹೆಚ್ಚು ಇಲ್ಲ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಆದರೆ ಇಷ್ಟು ಸರಳ ವಿಷಯವನ್ನು ತಿಳಿದುಕೊಳ್ಳಲು ಇಡೀ ದೇಶದೊಂದಿಗೆ ಇಂತಹ ಪ್ರಯೋಗ ಮಾಡುವ ಅವಶ್ಯಕತೆ ಏನಿತ್ತು ಎಂಬುದರ ಬಗ್ಗೆ ಹೇಳಿಲ್ಲ. 2000ದ ನಕಲಿ ನೋಟುಗಳನ್ನು ಮಾಡುವುದು ಮುಂಚಿನ 1000 ನೋಟುಗಳಿಗಿಂತ ಸುಲಭ ಎಂಬುದು ಕೇಳಿಬಂದಿದೆ. ಈಗ ಮತ್ತೊಮ್ಮೆ 2000 ಮೌಲ್ಯದ 181 ಕೋಟಿ ನೋಟುಗಳನ್ನು ಬ್ಯಾಂಕಿಗೆ ಮರಳಿಸುವ ಕಸರತ್ತು ಶುರುವಾಗಿದೆ, ಈಗ ಮತ್ತೊಮ್ಮೆ ಪ್ರತಿನಿತ್ಯ ಮಿತಿಗಳನ್ನು ನಿಗದಿಪಡಿಸಲಾಯಿತು, ಮತ್ತೊಮ್ಮೆ ಪ್ರತಿ ವಾರ ನಿಯಮಗಳನ್ನು ಬದಲಿಸಲಾಯಿತು, ಯಾವ ನೋಟುಗಳು ತನ್ನಿಂತಾನೆ ಚಲಾವಣೆಯಿಂದ ಹೊರಹೋಗುತ್ತಿದ್ದವೋ, ಅವುಗಳನ್ನು ಇಲ್ಲವಾಗಿಸಲು ಇಷ್ಟು ದೊಡ್ಡ ದುಬಾರಿಯಾದ ಕಸರತ್ತನ್ನು ಏಕೆ ಮಾಡಲಾಯಿತು ಎಂಬುದಕ್ಕೆ ಕಾರಣ ಎಂದೂ ಯಾರಿಗೂ ಗೊತ್ತಾಗುವುದಿಲ್ಲ. ಇಷ್ಟು ಅಂದುಕೊಂಡುಬಿಡಿ, ಸರಕಾರವು ನೋಟುರದ್ದತಿಯ ಸಮಾಧಿಯ ಮೇಲೆ 2000ದ ನೋಟಿನ ರೂಪದ ಗುಲಾಬಿ ಹೂ ಅರ್ಪಿಸಿದೆ ಎಂದು.

ಪ್ರಧಾನಮಂತ್ರಿ ಸಂಗ್ರಹಾಲಯದಲ್ಲಿ, ಮೋದಿಯವರ ಪ್ರಧಾನಿ ಅವಧಿಯ ನೋಟು ರದ್ದತಿಯ ಕೊಠಡಿ ಎಂದಿಗಾದರೂ ತಯ್ಯಾರಾಗಲಿ, ಅಲ್ಲಿಯತನಕ ವಿಶ್ವದೆಲ್ಲೆಡೆಯ ಅರ್ಥಶಾಸ್ತ್ರದ ಪುಸ್ತಕಗಳಲ್ಲಿ, ಭಾರತದ ನೋಟು ರದ್ದತಿಯ ಕೇಸ್ ಸ್ಟಡಿ ಪ್ರಕಟವಾಗುವುದು; ಚಲನೆಯಲ್ಲಿರುವ ಆರ್ಥವ್ಯವಸ್ಥೆಯೊಂದಿಗೆ ಆಟವಾಡಬಾರದು ಎಂಬುದು ಉದಾಹರಣೆಯ ರೂಪದಲ್ಲಿ ಅದು ಚರ್ಚೆಯಾಗುವುದು. ಹೇಗೆ ಕಣ್ಣಿನ ಆಪರೇಷನ್‌ನ್ನು ಸ್ಕ್ರೂಡ್ರೈವರ್‌ನಿಂದ ಮಾಡಲಾಗುವುದಿಲ್ಲವೋ ಹಾಗೆಯೇ ಆಧುನಿಕ ಅರ್ಥವ್ಯವಸ್ಥೆಯ ಕರೆನ್ಸಿಯನ್ನು ಹವ್ಯಾಸಿಗಳ ಕೈಗೆ ನೀಡಲಾಗುವುದಿಲ್ಲ ಎಂಬ ಪಾಠ ಮಾಡಲಾಗುವುದು. ಆ ಕೊಠಡಿಯ ಕೊನೆಯಲ್ಲಿ ಈ ಬರಹವಿರುವ ಒಂದು ಪಟ್ಟಿಯನ್ನು ಇರಿಸುವ ಸಾಧ್ಯತೆ ಇದೆ; “ಎಚ್ಚರಿಕೆ: ಕರೆನ್ಸಿ ನೋಟುಗಳೊಂದಿಗೆ ಆಟವಾಡುವುದು ಕರೆಂಟ್‌ನೊಂದಿಗೆ ಆಟವಾಡಿದಂತೆ!”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...