Homeಮುಖಪುಟಕರೆನ್ಸಿಯೊಂದಿಗೆ ಆಡುವ ಆಟ ಕರೆಂಟ್ ಜೊತೆಗೆ ಆಡಿದ ಆಟದಂತೆ; ಇದು ತುಘಲಕ್ ಮೋಜಿನಾಟ

ಕರೆನ್ಸಿಯೊಂದಿಗೆ ಆಡುವ ಆಟ ಕರೆಂಟ್ ಜೊತೆಗೆ ಆಡಿದ ಆಟದಂತೆ; ಇದು ತುಘಲಕ್ ಮೋಜಿನಾಟ

- Advertisement -
- Advertisement -

ದೆಹಲಿಯ ತೀನ್‌ಮೂರ್ತಿ ಭವನದಲ್ಲಿರುವ ದೇಶದ ಪ್ರಧಾನಮಂತ್ರಿಗಳ ಸಂಗ್ರಹಾಲಯದಲ್ಲಿ ಸದ್ಯಕ್ಕೆ ನರೇಂದ್ರ ಮೋದಿಯವರ ಕೊಠಡಿ ಅಪೂರ್ಣವಾಗಿದೆ. ಯಾವಾಗ ಅವರನ್ನು ಬೀಳ್ಕೊಡಲಾಗುವುದೋ ಆಗ, ಅವರು ತೆಗೆದುಕೊಂಡು ಒಳ್ಳೆಯ, ಕೆಟ್ಟ ತೀರ್ಮಾನಗಳ ನೆನಪುಗಳನ್ನು ಹೆಣೆಯುತ್ತ ಹೋದಲ್ಲಿ, ಆ ಮ್ಯೂಸಿಯಂನಲ್ಲಿ ನೋಟು ರದ್ದತಿಗೆ ಒಂದು ಸ್ಥಾನ ಅಥವಾ ಕೊಠಡಿ ಖಂಡಿತವಾಗಿಯೂ ಇರಲಿದೆ. ಆ ಕೊಠಡಿಯಲ್ಲಿ ಗುಲಾಬಿ ಬಣ್ಣದ 2000 ರೂಪಾಯಿಯ ನೋಟಿಗೂ ಸ್ಥಾನ ಇರಲಿದೆ. ಆ ಕೊಠಡಿಯನ್ನು ಹುಚ್ಚ ತುಘಲಕ್ ಎಂದು ಕರೆಯಲಾಗುವುದೋ ಅಥವಾ ತಮಾಷೆಯ ಕೊಠಡಿಯೆಂದು ಕರೆಯಲಾಗುವದೋ ಗೊತ್ತಿಲ್ಲ.

ಆ ಹೊಸ ರೀತಿಯ ಸಂಗ್ರಹಾಲಯದಲ್ಲಿ ಈ ನೋಟಿನ ಬಗ್ಗೆ ರಚಿಸಲಾದ ಜೋಕುಗಳಿಗೂ ಜಾಗ ಇರುವ ಸಾಧ್ಯತೆ ಇದೆ. ಬೇರೆ ಏನಾದರೂ ಇರಲಿ ಬಿಡಲಿ, ‘ಆಜ್ ತಕ್’ನ ಆಂಕರ್‌ನ ಆ ವಿಡಿಯೋ ತುಣುಕು; ನೋಟು ರದ್ದತಿಯ ದಿನದಂದು 2000 ರೂಪಾಯಿಯಲ್ಲಿ ‘ನ್ಯಾನೊ ಚಿಪ್’ನ ಇದೆ ಎಂದು ಖಡಾಖಂಡಿತವಾಗಿ ವರದಿ ಮಾಡುತ್ತಿರುವ ವಿಡಿಯೋ ತುಣುಕಂತೂ ಇರಲಿದೆ. ನನ್ನ ಮಾತು ನಡೆದರೆ, 2000 ರೂಪಾಯಿ ನೋಟನ್ನು ಹಿಂಪಡೆದಾಗ, ಆರ್‌‌ಓ‌ಎಫ್‌ಎಲ್ ಗಾಂಧಿ (ROFL Gandhi) ಹೆಸರಿನಲ್ಲಿ ಬಂದ ಈ ಟ್ವೀಟ್‌ಗೂ ಸಂಗ್ರಾಹಲಯದಲ್ಲಿ ಸ್ಥಾನ ನೀಡಬೇಕು; “ವಿಶ್ವಾಸಾರ್ಹ ಮೂಲಗಳ ಪ್ರಕಾರ 2000ದ ನೋಟಿನ ಚಿಪ್‌ಗೆ 5Gಯೊಂದಿಗೆ ಕನೆಕ್ಷನ್ ಆಗುತ್ತಿಲ್ಲ. ಈಗ 5G ಹೊಂದಿರುವ ಹೊಸ 5000ದ ಸೂಪರ್ ನ್ಯಾನೋ ಚಿಪ್‌ನ ನೋಟು ಬರಲಿದೆ. ಒಂದು ವೇಳೆ ಕಾಳಧನದ ಧಣಿಗಳು ಇದನ್ನು ತಿಜೋರಿಯಲ್ಲಿ ಇಟ್ಟರೆ, ಅದು ಖುದ್ದಾಗಿ ಊಬರ್ ಟ್ಯಾಕ್ಸಿ ಬುಕ್ ಮಾಡಿಕೊಂಡು ಆರ್‌ಬಿಐನ ಕಚೇರಿಗೆ ವಾಪಸ್ ಬರುವುದು!”

ಆ ಕೊಠಡಿಯಲ್ಲಿ 2016ರ ನವೆಂಬರ್ 8ರ ಸಂಜೆಯಿಂದ ಶುರುಮಾಡಿ 2023ರ ಮೇ 23ರತನಕದ ನೋಟುರದ್ದತಿಯ ಕಥೆಯನ್ನು ಹೇಳಲಾಗುವುದು. ಪ್ರಧಾನ ಮಂತ್ರಿ ದೊಡ್ಡದೊಡ್ಡ ಭರವಸೆ ನೀಡಿದ ಭಾಷಣದ ವಿಡಿಯೋ ತುಣುಕಿನೊಂದಿಗೆ ಆ ಕಥೆ ಪ್ರಾರಂಭವಾಗುವುದು. ಅದರಲ್ಲಿ ಇತರ ಅನೇಕ ಉಪಕಥೆಗಳು ಇರಲಿವೆ: ದೇಶಾದ್ಯಂತ ಕಂಡುಬಂದ ಸರತಿ ಸಾಲುಗಳು, ಹಳೆಯ ನೋಟುಗಳನ್ನು ಕೈಯಲ್ಲಿ ಹಿಡಿದುಕೊಂಡು ಕಾತುರದಿಂದ ಕಾಯುತ್ತಿರುವ ಕಣ್ಣುಗಳು ಇತ್ಯಾದಿ. ನಿಸ್ಸಂದೇಹವಾಗಿ, ಅಲ್ಲಿ ಅನೇಕ ದಸ್ತಾವೇಜುಗಳೂ ಇರಲಿವೆ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮೂರು ಹೊಸ ನಿರ್ದೇಶನಗಳು, ದಿನನಿತ್ಯ ಬದಲಾಗುತ್ತಿರುವ ಬ್ಯಾಂಕ್‌ಗಳ ನಿಯಮಗಳು.

ಒಂದು ವೇಳೆ ಆ ಸಂಗ್ರಹಾಲಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದರೆ, ಯಾವುದೇ ವಿತ್ತೀಯ ಅರ್ಥಶಾಸ್ತ್ರಜ್ಞರ ಅಭಿಪ್ರಾಯ ಪಡೆದುಕೊಳ್ಳದೇ, ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ್ ರಾಜನ್‌ನ ಎಚ್ಚರಿಕೆಯನ್ನು ಕಡೆಗಣಿಸಿ ಹೇಗೆ ದೇಶದ ಕರೆನ್ಸಿಯೊಂದಿಗೆ ಇಷ್ಟು ದೊಡ್ಡ ಆಟ ಆಡಲಾಯಿತು ಎಂಬುದನ್ನು ಅದರಲ್ಲಿ ದಾಖಲಿಸಲಾಗುವುದು. ಒಂದು ವೇಳೆ ಆ ಸಂಗ್ರಹಾಲಯ ಭವಿಷ್ಯದ ಪ್ರಜ್ಞೆಯನ್ನು ಹೊಂದಿದ್ದರೆ ಅದರಲ್ಲಿ ನೋಟು ರದ್ದತಿಯ ದಾವೆಗಳು ಮತ್ತು ಅದರ ಅಸಲಿಯತ್ತನ್ನು ಎದುರುಬದರು ಇರಿಸುವ ಒಂದು ಪ್ಯಾನೆಲ್ ಕೂಡ ಇರಿಸಬೇಕಾಗುವುದು. ನೋಟು ರದ್ದತಿಯಿಂದ ದೊಡ್ಡ ಪ್ರಮಾಣದಲ್ಲಿ ಕಾಳ ಧನ ಇಲ್ಲವಾಗುವುದು, ಭ್ರಷ್ಟಾಚಾರಕ್ಕೆ ಪೆಟ್ಟು ಬೀಳುವುದು ಎಂಬ ದಾವೆಗಳನ್ನು ಮಾಡಲಾಗಿತ್ತು. ಹೊರಬಂದ ಅಸಲಿಯತ್ತೇನೆಂದರೆ, ರಿಸರ್ವ್ ಬ್ಯಾಂಕಿನದ್ದೇ ವರದಿಯ ಪ್ರಕಾರ 99.3% ನೋಟುಗಳು ವಾಪಸ್ ಬಂದುಬಿಟ್ಟವು. ದುಡ್ಡಿನ ದೊಡ್ಡದೊಡ್ಡ ಚೀಲಗಳನ್ನು ಹೊಂದಿದ್ದ ಸೇಠರ ದುಡ್ಡು ಮುಳುಗಲಿಲ್ಲ, ಆದರೆ ಬಡವರ ಕರುಳಲ್ಲಿದ್ದ ಒಂದಿಷ್ಟು ನೋಟುಗಳು ಖಂಡಿತವಾಗಿಯೂ ಕೊಳೆತುಹೋದವು. ಕಾಳ ಧನ ಇರಿಸಿಕೊಳ್ಳುವ ದೊಡ್ಡ ದೊಡ್ಡ ಭ್ರಷ್ಟಾಚಾರಿಗಳು ಕರೆನ್ಸಿ ನೋಟುಗಳ ಕಂತೆಗಳನ್ನು ಬಚ್ಚಿಟ್ಟುಕೊಂಡಿರುತ್ತಾರೆ ಎಂಬುದು ಈ ತೀರ್ಮಾನದ ಹಿಂದಿದ್ದ ತಿಳಿವಳಿಕೆ. ಗೊತ್ತಾಗಿದ್ದೇನೆಂದರೆ, ಕಾಳಧನ ಇಟ್ಟುಕೊಳ್ಳುವವರು ನಮಗಿಂತ ಜಾಣರಾಗಿರುತ್ತಾರೆ, ಅವರು ತಮ್ಮ ಧನ, ಬೇನಾಮಿ ಸಂಪತ್ತನ್ನು ಭೂಮಿ ಅಥವಾ ವಜ್ರದಂತಹ ವಸ್ತುಗಳಲ್ಲಿ ಹೂಡಿಕೆ ಮಾಡಿರುತ್ತಾರೆ. ನಕಲಿ ನೋಟುಗಳ ಸಂಖ್ಯೆಯೂ ಹೆಚ್ಚಿದೆ ಎಂಬ ದಾವೆ ಹೂಡಲಾಗುತ್ತು. ನಂತರ ರಿಸರ್ವ್ ಬ್ಯಾಂಕ್ ಹೇಳಿದ್ದೇನೆಂದರೆ, ನಕಲಿ ನೋಟುಗಳು ಅನುಪಾತ ಇರುವುದು ಕೇವಲ 0.0007%ರಷ್ಟು ಎಂದು.

ಇಲ್ಲಿ ಪ್ರಧಾನಮಂತ್ರಿ ಸಂಗ್ರಾಹಾಲಯದ ಗುಲಾಬಿ ಬಣ್ಣದ ವ್ಯಂಗದ ಕೊಠಡಿ ನಿಮಗೆ ಒಂದು ಪ್ರಶ್ನೆ ಕೇಳಲಿದೆ: ಒಂದು ವೇಳೆ 500 ಮತ್ತು 1000 ರೂಪಾಯಿಗಳ ದೊಡ್ಡ ನೋಟಿನದ್ದೇ ಸಮಸ್ಯೆಯಾಗಿದ್ದಲ್ಲಿ ಅದಕ್ಕಿಂತ ದೊಡ್ಡ ಮೌಲ್ಯದ 2000 ರೂಪಾಯಿ ನೋಟಿನಿಂದ ಆ ಸಮಸ್ಯೆಯ ಪರಿಹಾರ ಆಗುವುದು ಹೇಗೆ? ಒಂದು ವೇಳೆ ಭ್ರಷ್ಟರಿಗೆ 1000 ರೂಪಾಯಿಯ ನೋಟುಗಳಿಂದ ಹಣ ಶೇಖರಣೆ ಮಾಡಲು ಅನುಕೂಲ ಆಗುತ್ತಿದೆ ಎಂದಲ್ಲಿ 2000 ರೂಪಾಯಿಯ ನೋಟುಗಳಿಂದ ಅವರಿಗೆ ಇನ್ನಷ್ಟು ಅನುಕೂಲ ಆಗುವುದಿಲ್ಲವೇ? ಈ ಪ್ರಶ್ನೆಯ ಉತ್ತರ ಆಗಲೂ ಸಿಗಲಿಲ್ಲ, ಇಲ್ಲಿಯತನಕವೂ ಸಿಕ್ಕಿಲ್ಲ. ತುಘಲಕ್ ದರ್ಬಾರಿನಿ ರೀತಿಯ ನೋಟು ರದ್ದತಿ ತೀರ್ಮಾನಕ್ಕಾಗಿ ಸರಕಾರವು ದೇಶದ ಜನತೆಗೆ ಎಂದೂ ಕ್ಷಮೆ ಕೇಳಿಲ್ಲ. ಆದರೆ ಕಾಳಧನ ಇಲ್ಲವಾಗಿಸುವ ದಾವೆಯ ಆಧಾರದ ಮೇಲೆ ಚುನಾವಣೆ ಗೆದ್ದರು, ಒಂದೆರಡು ಬಾರಿ ನೋಟು ರದ್ದತಿಯ ವಾರ್ಷಿಕ ಸಂಭ್ರಮ ಆಚರಿಸಿದರು ಹಾಗೂ ಅದರ ನಂತರ ಅದನ್ನು ಮರೆತುಬಿಟ್ಟರು. ಯಾರಿಗೂ ಗೊತ್ತಾಗದ ಹಾಗೆ ಸರಕಾರವು 2018ರಲ್ಲಿಯೇ 2000 ರೂಪಾಯಿಯ ನೋಟುಗಳ ಮುದ್ರಣ ನಿಲ್ಲಿಸಿತು ಹಾಗೂ ಮತ್ತೆ 2022 ಮೇ 19ರಂದು ಮತ್ತೆ ಇದನ್ನು ವಾಪಸ್ ಪಡೆಯುವ ಘೋಷಣೆ ಮಾಡಿತು. ಮತ್ತೆ ಇದನ್ನು ಭ್ರಷ್ಟಾಚಾರದ ವಿರುದ್ಧದ ಅಂತಿಮ ಯುದ್ಧ ಎಂದು ಭಟ್ಟಂಗಿಗಳು ದಾವೆ ಹೂಡಿದರು, ಆದರೆ ಈ ಬಾರಿ ಕೇಳುವವರು ಯಾರೂ ಇಲ್ಲ. 2000 ರೂಪಾಯಿ ನೋಟುಗಳ ಚಲಾವಣೆ ಹೆಚ್ಚು ಇಲ್ಲ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಆದರೆ ಇಷ್ಟು ಸರಳ ವಿಷಯವನ್ನು ತಿಳಿದುಕೊಳ್ಳಲು ಇಡೀ ದೇಶದೊಂದಿಗೆ ಇಂತಹ ಪ್ರಯೋಗ ಮಾಡುವ ಅವಶ್ಯಕತೆ ಏನಿತ್ತು ಎಂಬುದರ ಬಗ್ಗೆ ಹೇಳಿಲ್ಲ. 2000ದ ನಕಲಿ ನೋಟುಗಳನ್ನು ಮಾಡುವುದು ಮುಂಚಿನ 1000 ನೋಟುಗಳಿಗಿಂತ ಸುಲಭ ಎಂಬುದು ಕೇಳಿಬಂದಿದೆ. ಈಗ ಮತ್ತೊಮ್ಮೆ 2000 ಮೌಲ್ಯದ 181 ಕೋಟಿ ನೋಟುಗಳನ್ನು ಬ್ಯಾಂಕಿಗೆ ಮರಳಿಸುವ ಕಸರತ್ತು ಶುರುವಾಗಿದೆ, ಈಗ ಮತ್ತೊಮ್ಮೆ ಪ್ರತಿನಿತ್ಯ ಮಿತಿಗಳನ್ನು ನಿಗದಿಪಡಿಸಲಾಯಿತು, ಮತ್ತೊಮ್ಮೆ ಪ್ರತಿ ವಾರ ನಿಯಮಗಳನ್ನು ಬದಲಿಸಲಾಯಿತು, ಯಾವ ನೋಟುಗಳು ತನ್ನಿಂತಾನೆ ಚಲಾವಣೆಯಿಂದ ಹೊರಹೋಗುತ್ತಿದ್ದವೋ, ಅವುಗಳನ್ನು ಇಲ್ಲವಾಗಿಸಲು ಇಷ್ಟು ದೊಡ್ಡ ದುಬಾರಿಯಾದ ಕಸರತ್ತನ್ನು ಏಕೆ ಮಾಡಲಾಯಿತು ಎಂಬುದಕ್ಕೆ ಕಾರಣ ಎಂದೂ ಯಾರಿಗೂ ಗೊತ್ತಾಗುವುದಿಲ್ಲ. ಇಷ್ಟು ಅಂದುಕೊಂಡುಬಿಡಿ, ಸರಕಾರವು ನೋಟುರದ್ದತಿಯ ಸಮಾಧಿಯ ಮೇಲೆ 2000ದ ನೋಟಿನ ರೂಪದ ಗುಲಾಬಿ ಹೂ ಅರ್ಪಿಸಿದೆ ಎಂದು.

ಪ್ರಧಾನಮಂತ್ರಿ ಸಂಗ್ರಹಾಲಯದಲ್ಲಿ, ಮೋದಿಯವರ ಪ್ರಧಾನಿ ಅವಧಿಯ ನೋಟು ರದ್ದತಿಯ ಕೊಠಡಿ ಎಂದಿಗಾದರೂ ತಯ್ಯಾರಾಗಲಿ, ಅಲ್ಲಿಯತನಕ ವಿಶ್ವದೆಲ್ಲೆಡೆಯ ಅರ್ಥಶಾಸ್ತ್ರದ ಪುಸ್ತಕಗಳಲ್ಲಿ, ಭಾರತದ ನೋಟು ರದ್ದತಿಯ ಕೇಸ್ ಸ್ಟಡಿ ಪ್ರಕಟವಾಗುವುದು; ಚಲನೆಯಲ್ಲಿರುವ ಆರ್ಥವ್ಯವಸ್ಥೆಯೊಂದಿಗೆ ಆಟವಾಡಬಾರದು ಎಂಬುದು ಉದಾಹರಣೆಯ ರೂಪದಲ್ಲಿ ಅದು ಚರ್ಚೆಯಾಗುವುದು. ಹೇಗೆ ಕಣ್ಣಿನ ಆಪರೇಷನ್‌ನ್ನು ಸ್ಕ್ರೂಡ್ರೈವರ್‌ನಿಂದ ಮಾಡಲಾಗುವುದಿಲ್ಲವೋ ಹಾಗೆಯೇ ಆಧುನಿಕ ಅರ್ಥವ್ಯವಸ್ಥೆಯ ಕರೆನ್ಸಿಯನ್ನು ಹವ್ಯಾಸಿಗಳ ಕೈಗೆ ನೀಡಲಾಗುವುದಿಲ್ಲ ಎಂಬ ಪಾಠ ಮಾಡಲಾಗುವುದು. ಆ ಕೊಠಡಿಯ ಕೊನೆಯಲ್ಲಿ ಈ ಬರಹವಿರುವ ಒಂದು ಪಟ್ಟಿಯನ್ನು ಇರಿಸುವ ಸಾಧ್ಯತೆ ಇದೆ; “ಎಚ್ಚರಿಕೆ: ಕರೆನ್ಸಿ ನೋಟುಗಳೊಂದಿಗೆ ಆಟವಾಡುವುದು ಕರೆಂಟ್‌ನೊಂದಿಗೆ ಆಟವಾಡಿದಂತೆ!”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...