Homeಅಂಕಣಗಳುಪ್ರಜಾಪ್ರಭುತ್ವ ವಿರೋಧಿ ಬ್ರೆಜಿಲ್ ಗಲಭೆಗಳಿಗೆ ಕಾರಣವಾದ ತೀವ್ರ ಧ್ರುವೀಕರಣ; ಜಗತ್ತಿಗೆ ಎಚ್ಚರಿಕೆಯ ಗಂಟೆ!

ಪ್ರಜಾಪ್ರಭುತ್ವ ವಿರೋಧಿ ಬ್ರೆಜಿಲ್ ಗಲಭೆಗಳಿಗೆ ಕಾರಣವಾದ ತೀವ್ರ ಧ್ರುವೀಕರಣ; ಜಗತ್ತಿಗೆ ಎಚ್ಚರಿಕೆಯ ಗಂಟೆ!

- Advertisement -
- Advertisement -

ಯುಎಸ್‌ಎನಲ್ಲಿ ಅಧ್ಯಕ್ಷೀಯ ಚುನಾವಣೆ ಸೋತ ತೀವ್ರ ಬಲಪಂಥೀಯ ಮುಖಂಡ-ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಫಲಿತಾಂಶವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದ. ಇದು ಆತನ ಬೆಂಬಲಿಗ ಬಹುಸಂಖ್ಯಾತರನ್ನು ಎಷ್ಟು ಪ್ರಭಾವಿಸಿತ್ತೆಂದರೆ, ಇಡೀ ಚುನಾವಣೆಯನ್ನು ಟ್ರಂಪ್‌ನಿಂದ ಕಸಿಯಲಾಗಿದೆ ಎಂಬ ವಾದವನ್ನು ಸ್ವಲ್ಪವೂ ವಿವೇಚನೆಯಿಲ್ಲದೆ ಒಪ್ಪಿಕೊಂಡುಬಿಟ್ಟಿದ್ದರು. ಇದರ ಪರಿಣಾಮ ಜನವರಿ 6, 2021ರಂದು ಮತ ಎಣಿಕೆ ಪ್ರಕ್ರಿಯೆಯನ್ನು ಅಡ್ಡಿಪಡಿಸಲು ವಾಶಿಂಗ್ಟನ್‌ನ ಕ್ಯಾಪಿಟೊಲ್ ಭವನದ ಮೇಲೆ ನಡೆಸಿದ ದಾಳಿ. ಮಾರಕಾಸ್ತ್ರಗಳನ್ನು ಹಿಡಿದು ನಡೆಸಿದ ದಾಳಿ ಕೆಲ ಸಮಯದ ಮಟ್ಟಿಗೆ ಭಯಭೀತಿಯನ್ನು ಸೃಷ್ಟಿಸಿತ್ತು. ನಾಲ್ಕಾರು ಜನ ಮೃತಪಟ್ಟರೆ ನೂರಾರು ಜನ ಗಾಯಗೊಂಡರು. ಆ ಗಲಭೆಯನ್ನು ಶಮನ ಮಾಡಲಾಯಿತಾದರೂ, ಪ್ರಜಾಪ್ರಭುತ್ವದ ಬಗೆಗಿನ ನಂಬಿಕೆಯನ್ನು ಬುಡಮೇಲು ಮಾಡಲು ಬಿತ್ತಿರುವ ಸುಳ್ಳಿನ ನರೆಟಿವ್‌ಗೆ ಉಪಶಮನವೇನು? ಇದು ಈಗ ಬ್ರೆಜಿಲ್‌ನಲ್ಲಿ ಮರುಕಳಿಸಿದ್ದು, ಜಗತ್ತಿನಾದ್ಯಂತ ಸುಳ್ಳುಗಳ ಅಡಿಪಾಯದ ಮೇಲೆ ನಡೆದಿರುವ ಧ್ರುವೀಕರಣದ ದುರಂತವನ್ನು ಸೂಚಿಸುತ್ತಿದೆ. ನಾಗರಿಕ ಕದನ ಯಾವ ಸಮಯದಲ್ಲಾದರೂ ಸ್ಫೋಟಿಸಬಹುದಾದ ಅಪಾಯವನ್ನು ಜಗತ್ತಿನ ಹಲವು ದೇಶಗಳು ತಮ್ಮ ಒಡಲಲ್ಲಿ ಇಟ್ಟುಕೊಂಡು ಬೇಯುತ್ತಿವೆ!

ಬಲಪಂಥೀಯ ರಾಜಕಾರಣದ ಹುನ್ನಾರಕ್ಕೆ ಗುರಿಯಾಗಿ, ಜೈಲುವಾಸ ಅನುಭವಿಸಿ, ಆರೋಪಮುಕ್ತನಾಗಿ ಹೊರಬಂದಿದ್ದ ಯೂನಿಯನ್ ಲೀಡರ್ ಮತ್ತು ಎಡ ಪಕ್ಷವಾದ ವರ್ಕರ್ಸ್ ಪಾರ್ಟಿಯ ’ಲುಲಾ’ ಡಿ ಸಿಲ್ವಾ ಬ್ರೆಜಿಲ್‌ನಲ್ಲಿ ಅಕ್ಟೋಬರ್ 30ರಂದು ನಡೆದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಗೆಲುವು ಸಾಧಿಸಿದರು. ಆದರೆ ತೀವ್ರ ಬಲಪಂಥೀಯ ನಾಯಕ ಮತ್ತು ಟ್ರಂಪ್ ಗೆಳೆಯ ಅಂದು ಅಧ್ಯಕ್ಷನಾಗಿದ್ದ ಬೊಲ್ಸೊನಾರೊ ಚುನಾವಣೆಯನ್ನು ಫಿಕ್ಸ್ ಮಾಡಲಾಗಿದೆ ಮತ್ತು ಲೂಲಾ ಗೆದ್ದರೆ ಆ ಗೆಲುವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಪುನರುಚ್ಚರಿಸುತ್ತಲೇ ಚುನಾವಣೆಯುದ್ದಕ್ಕೂ ಪ್ರಚಾರ ಮಾಡಿಕೊಂಡುಬಂದಿದ್ದರು. ಸೋತ ನಂತರ ಪ್ರಭುತ್ವದ ಉಳಿದ ಸಂಸ್ಥೆಗಳು ತಮ್ಮ ಬೆಂಬಲಕ್ಕೆ ನಿಲ್ಲಲು ನಿರಾಕರಿಸಿದ ಕಾರಣ ತಮ್ಮ ವರಸೆಯನ್ನು ಸ್ವಲ್ಪಸ್ವಲ್ಪ ಬದಲಾಯಿಸುತ್ತಾ ಬಂದರು. ಆದರೆ ತನ್ನ ಬೆಂಬಲಿಗರಲ್ಲಿ ಬಿತ್ತಿದ್ದ ಪ್ರಜಾಪ್ರಭುತ್ವ ವಿರೋಧಿ ಫ್ಯಾಸಿಸ್ಟ್ ಚಿಂತನೆಗಳು ದೊಡ್ಡಮಟ್ಟದಲ್ಲಿ ಪಸರಿಸಿಯಾಗಿತ್ತು. ಲೂಲಾ ಅಧ್ಯಕ್ಷ ಪದವಿ ಸ್ವೀಕರಿಸುವುದಕ್ಕೆ ಮುಂಚಿತವಾಗಲೇ ಬೊಲ್ಸೊನಾರೊ ಯುಎಸ್‌ಎಗೆ ತೆರಳಿದ್ದರು. ಜನವರಿ 1, 2023ರಂದು ಲೂಲಾ ಪ್ರಮಾಣ ವಚನ ಸ್ವೀಕರಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಸಂಪುಟಕ್ಕೆ ಸೇರಿಸಿಕೊಂಡದ್ದು ಸೇರಿದಂತೆ, ಅಮೆಜಾನ್ ಕಾಡಿನ ಉಳಿವಿಗೆ ಹೋರಾಡಿದ್ದ ಕಾರ್ಯಕರ್ತೆಯನ್ನೂ ಸಂಪುಟಕ್ಕೆ ಸೇರಿಸಿಕೊಂಡಿದ್ದು ಧನಾತ್ಮಕ ಚರ್ಚೆಗೆ ಕಾರಣವಾಗಿತ್ತು. ಬೊಲ್ಸೊನಾರೊ ತಮ್ಮ ನಡುವೆ ಇರದಿದ್ದರೂ ಆತ ಬಿತ್ತಿದ ವಿಷಚಿಂತನೆ ಮಾತ್ರ ಬೆಂಬಲಿಗರ ತಲೆಯಿಂದ ಪರಾರಿಯಾಗಿರಲಿಲ್ಲ. ಜನವರಿ 8ನೇ ತಾರೀಕು ಬ್ರೆಜಿಲ್ ಪ್ರಜಾಪ್ರಭುತ್ವದ ಆಧಾರಸ್ಥಂಭಗಳೆಂದು ಕರೆಯಲಾಗುವ ರಾಜಧಾನಿ ಬ್ರೆಸಿಲಿಯಾದ ಕಾಂಗ್ರೆಸ್, ಸುಪ್ರೀಂ ಕೋರ್ಟ್ ಮತ್ತು ಅಧ್ಯಕ್ಷರ ಪ್ಯಾಲೆಸ್ ಮೇಲೆ ಬೊಲ್ಸೊನಾರೊ ಬೆಂಬಲಿಗರು ದಾಳಿ ನಡೆಸಿದರು. ನಂತರ ಈ ಗಲಭೆ ಅಥವಾ ದಂಗೆಯ ಪ್ರಯತ್ನವನ್ನು ತಹಬದಿಗೆ ತರಲಾಯಿತು. ಈಗ ಕಾಂಗ್ರೆಸ್ ಭವನದಲ್ಲಿ ಗ್ರೆನೇಡ್ ಮತ್ತಿತರ ಮಾರಾಕಾಸ್ತ್ರಗಳು ಸಿಕ್ಕಿರುವ ವರದಿಗಳಿವೆ. ಸುಮಾರು 1500ಕ್ಕೂ ಹಚ್ಚು ಜನರನ್ನು ಡೀಟೇನ್ ಮಾಡಲಾಗಿದ್ದು, ಸಾವಿರಾರು ಜನರ ಮೇಲೆ ಆರೋಪ ಹೊರಿಸುವ ಸಾಧ್ಯತೆಯಿದೆ. ಇಷ್ಟಾಗಿಯೂ ಜನರಲ್ಲಿ ಬಿತ್ತಲಾಗಿರುವ ಫ್ಯಾಸಿಸ್ಟ್ ವಿಷವನ್ನು ನಿವಾರಿಸದಂತೇನೂ ಆಗುವುದಿಲ್ಲ. ಅದು ಮುಂದೊಂದು ದಿನ ಬೇರೊಂದು ರೂಪದಲ್ಲಿ ಆಸ್ಫೋಟಿಸಲು ಕಾಯುತ್ತಲೇ ಇರುತ್ತದೆ.

ಅಮೆರಿಕ ಮತ್ತು ಬ್ರೆಜಿಲ್‌ನಲ್ಲಿ ನಡೆದ ಘಟನೆಗಳು ಭಾರತದಲ್ಲಿ ಘಟಿಸಲು ಸಾಧ್ಯವಿಲ್ಲ ಎನ್ನುವಂತಿಲ್ಲ. 2014ರ ನಂತರ ನಿರಂತರವಾಗಿ ನಡೆಯುತ್ತಿರುವ ಪೋಲರೈಸೇಷನ್ ಪ್ರಾಜೆಕ್ಟ್ ಭಾರತೀಯರನ್ನು ಧಾರ್ಮಿಕ ನೆಲೆಯಲ್ಲಿ ಒಡೆಯಲು ಪ್ರಯತ್ನಿಸುತ್ತಲೇ ಇದೆ. ಇಂದು ಸಂಘ ಪರಿವಾರ ಬಿತ್ತುತ್ತಿರುವ ವಿಷ ಬೀಜಗಳು ಟ್ರಂಪ್ ಮತ್ತು ಬೊಲ್ಸೊನಾರೊ ತಮ್ಮ ಬೆಂಬಲಿಗರಲ್ಲಿ ಬಿತ್ತಿದ ವಿಷಕ್ಕಿಂತಲೂ ಭಿನ್ನವಾಗೇನೂ ಇಲ್ಲ. ಇದು ತನ್ನ ರಾಜಕೀಯಕ್ಕೆ ಹಲವು ಬಾರಿ ಸಹಾಯ ಮಾಡಿರುವ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಇದನ್ನು ಉತ್ತೇಜಿಸುತ್ತಿದೆ. ಹಿಂದೆ ಹತ್ತುಹಲವು ಬಾರಿ ಇದರ ಬಗ್ಗೆ ಬರೆದಿದ್ದರೂ, ಹಿಂದೆಂದೂ ಕಾಣದಂತಹ ಗೋಡ್ಸೆ ಭಜನೆ, ಆತನ ದ್ವೇಷದ ಸಿದ್ಧಾಂತ ದಿನೇದಿನೇ ಪಸರಿಸುತ್ತಲೇ ಇದೆ. ಇದನ್ನು ಮುಸ್ಲಿಂ ದ್ವೇಷವಾಗಿ ಸಾಕಾರ ಮಾಡಿ ಬಲಪಂಥೀಯ ಪಕ್ಷಗಳು ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುತ್ತಿವೆ. ಇಂತಹ ದ್ವೇಷದ ಸಿದ್ಧಾಂತವನ್ನು ಒಡೆಯಲು ಪ್ರಜ್ಞಾವಂತ ನಾಗರಿಕರು ಸಂವಿಧಾನ, ಅಂಬೇಡ್ಕರ್, ಪೆರಿಯಾರ್, ಕುವೆಂಪುರವರಂತಹ ವಿಚಾರಧಾರೆಗಳನ್ನು ಮುಂದುಮಾಡುತ್ತಿದ್ದಾರೆ.

ಈ ವಿದ್ಯಮಾನಕ್ಕೆ ಒಂದು ಮಟ್ಟದಲ್ಲಿ ಕನ್ನಡಿ ಹಿಡಿದಂತಹ ಒಂದು ಅನುಭವವನ್ನು ಹಂಚಿಕೊಳ್ಳುತ್ತೇನೆ. ಜನವರಿ 6ರಿಂದ 8ರ ನಡುವೆ ನಡೆದ ಹಾವೇರಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮುಖ್ಯ ಆಕರ್ಷಣೆಯಾದ ಪುಸ್ತಕ ಮೇಳದಲ್ಲಿ ಈ ಬಾರಿ ಹಿಂದಿನ ಸಮ್ಮೇಳನಗಳಿಗಿಂತಲೂ, ಟೆರರಿಸ್ಟ್ ಗೋಡ್ಸೆ, ಹಿಂದೂ ಸುಪ್ರಿಮಿಸ್ಟ್‌ಗಳಾದ ಸಾವರ್ಕರ್, ಗೋಳ್ವಲ್ಕರ್ ಪುಸ್ತಕಗಳನ್ನು ಕೇಳಿಕೊಂಡು ಬರುವ ಮಂದಿ ಅತಿ ಹೆಚ್ಚಿದ್ದರು. ಹಿಂದೆಲ್ಲಾ ಗೋಡ್ಸೆಯನ್ನು ಆರಾಧಿಸುವ ಅಥವಾ ಗಾಂಧಿ ಕೊಲೆಯನ್ನು ಸಮರ್ಥಿಸುವ ಪುಸ್ತಕಗಳನ್ನು ಕೇಳುವಾಗ ಒಂದು ರೀತಿಯ ಅಂಜಿಕೆಯಿರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆತನನ್ನು ಸಮರ್ಥಿಸುವುದನ್ನೇ ಧ್ಯೇಯವನ್ನಾಗಿಸುವತ್ತ ಹಲವು ಯುವಕ-ಯುವತಿಯರನ್ನು ಸಂಘ ಪರಿವಾರ ಪ್ರಭಾವಿಸುತ್ತಿರುವುದು ತಿಳಿಯದ ವಿಷಯವೇನಲ್ಲ. ಅದು ಇಂದಿನ ರಾಜಕೀಯ ವಾತಾವರಣದಲ್ಲಿ ಮುಸ್ಲಿಂ ಸಮುದಾಯದ ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧದ ದ್ವೇಷವಾಗಿ ಹಾಗೂ ಬ್ರಾಹ್ಮಣ್ಯದ ಶ್ರೇಷ್ಠತೆಯಾಗಿ ಆಕಾರ ಪಡೆದುಕೊಳ್ಳುತ್ತಿದೆ. ಇಂತಹ ದ್ವೇಷವನ್ನು ಕೌಂಟರ್ ಮಾಡಲು, ವಿಚಾರವಾದವನ್ನು ಬಿತ್ತುವ ಅಂಬೇಡ್ಕರ್, ಕುವೆಂಪು, ಪೆರಿಯಾರ್, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಅಂತಹವರ ಚಿಂತನೆಗಳ ಪುಸ್ತಕಗಳಿಗೂ ಪುಸ್ತಕ ಮೇಳದಲ್ಲಿ ಅಪಾರ ಬೇಡಿಕೆಯಿತ್ತು. ನಡುವೆ ಸುಳಿವ ಶುದ್ಧ ಸಾಹಿತ್ಯದ ಪ್ರತಿಪಾದಕರ ಪುಸ್ತಕಗಳ ಬಗ್ಗೆ ಒಂದು ರೀತಿಯ ತಿರಸ್ಕಾರ ಮೂಡಿರುವಂತೆ ಭಾಸವಾಯಿತು. ವಿಚಾರಹೀನತೆ-ಸುಳ್ಳು-ಜೀವವಿರೋಧಿ ಹಾಗೂ ವಿಚಾರವಾದ-ಸತ್ಯ-ಜೀವಪರತೆಯ ಚಿಂತನೆಯುಳ್ಳ ಪುಸ್ತಕಗಳ ನಡುವೆ ಸ್ಪರ್ಧೆ ಏರ್ಪಟ್ಟಿರುವುದು ಆ ಮೂರು ದಿನಗಳ ಪುಸ್ತಕ ವ್ಯಾಪಾರದ ಅನುಭವ ಸೂಚಿಸಿತು. (ಇದು ತೀರ ವೈಯಕ್ತಿಕವಾದದ್ದಾದರೂ, ಹಲವು ಪುಸ್ತಕ ಮಾರಾಟಗಾರರು ಮತ್ತು ಪ್ರಕಾಶಕರು ಸಹಮತವನ್ನು ವ್ಯಕ್ತಪಡಿಸಿದರು.) ಇದು ಈ ದೇಶದಲ್ಲಿಯೂ ವಿಚಾರಹೀನತೆ ಮತ್ತು ವಿಚಾರವಾದದ ನಡುವೆ ತೀವ್ರ ಮಟ್ಟದಲ್ಲಿ ಆಗಿರುವ-ಆಗುತ್ತಿರುವ ಧ್ರುವೀಕರಣವನ್ನು ಸೂಚಿಸುತ್ತದೆ. ಆದರೆ ಭಾರತದ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ವಿಚಾರಹೀನತೆಗೇ ಹೆಚ್ಚು ಸ್ಪೇಸ್ ದೊರಕುವುದರಿಂದ ಅದು ಹೆಚ್ಚು ಮಿಂಚುತ್ತಿರುವಂತೆ ಮತ್ತು ಬೆಳೆಯುತ್ತಿರುವಂತೆ ಕಾಣಿಸಿಕೊಳ್ಳುತ್ತದೆ. ಪ್ರಭುತ್ವದ ಬೆಂಬಲ ಅದಕ್ಕಿರುವುದರಿಂದ ಅದು ತನ್ನ ಉಗ್ರತ್ವವನ್ನು ಎಗ್ಗಿಲ್ಲದೆ ಪ್ರತಿಪಾದಿಸುತ್ತದೆ. ವಿಚಾರಹೀನತೆಯನ್ನು, ದ್ವೇಷವನ್ನು ತೀವ್ರತೆಗೆ ತೆಗೆದುಕೊಂಡು ಹೋದಷ್ಟೂ, ಯುಎಸ್‌ಎನ ಕ್ಯಾಪಿಟೊಲ್ ಭವನ ಅಥವಾ ಬ್ರೆಜಿಲ್‌ನ ಸಂಸತ್ ಕಟ್ಟಡದಲ್ಲಿ ಆದಂತಹ ಗಲಭೆಗಳ ಸಂಭವನೀಯತೆ ಹೆಚ್ಚುತ್ತಾ ಹೋಗುತ್ತದೆ.

ಈ ನಿಟ್ಟಿನಲ್ಲಿ ವಿಚಾರಹೀನತೆಯ-ಪ್ರಗತಿಹೀನತೆಯ ಕಡೆಗೆ ಎಳೆಯಲಾಗಿರುವವರನ್ನು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸುವ, ಮಾನವೀಯತೆಯನ್ನು ತುಡಿಯುವ, ಬಹುತ್ವವನ್ನು ಗೌರವಿಸುವ ವಿಚಾರಗಳತ್ತ ಕರೆತರುವುದೊಂದೇ ಈಗ ಉಳಿದಿರುವ ದಾರಿ. ಅಂತಹ ದಾರಿಗಳನ್ನು ಒರೆಗೆ ಹಚ್ಚುತ್ತಾ, ಅಗತ್ಯ ಬಿದ್ದಲ್ಲಿ ಕಾರ್ಯಶೈಲಿಯನ್ನು ಬದಲಾಯಿಸಿಕೊಳ್ಳುತ್ತಾ ಮತ್ತೆಮತ್ತೆ ಹೊಸದಾಗಿ ಶೋಧಿಸಿಕೊಳ್ಳಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...