Homeಮುಖಪುಟಅನುಮಾನದ ರೋಗ: ಹೆಣ್ಣುಮಕ್ಕಳ ಫೋಟೋ ಎಫ್‌ಬಿಯಲ್ಲಿ ಪೋಸ್ಟ್‌ ಮಾಡಿ ವಿಕೃತಿ

ಅನುಮಾನದ ರೋಗ: ಹೆಣ್ಣುಮಕ್ಕಳ ಫೋಟೋ ಎಫ್‌ಬಿಯಲ್ಲಿ ಪೋಸ್ಟ್‌ ಮಾಡಿ ವಿಕೃತಿ

- Advertisement -
- Advertisement -

ಕೆಲವು ಹಣವಂತರ ಅಹಂಕಾರ ಹೇಗೆಲ್ಲ ಪ್ರದರ್ಶನವಾಗುತ್ತದೆ, ಮಾನವ ಹಕ್ಕುಗಳು ಹೇಗೆಲ್ಲ ಉಲ್ಲಂಘನೆಯಾಗುತ್ತವೆ ಎಂಬುದಕ್ಕೆ ತಾಜಾ ನಿದರ್ಶನವಾಗಿ ‘ಹೆಲ್ಪ್‌ಚೆಕ್ಕರ್‌ ಹೆಲ್ಪಿಂಗ್ ಟ್ರೀ’ ಎಂಬ ಫೇಸ್‌ಬುಕ್‌ ಗ್ರೂಪ್‌ನ ಚಟುವಟಿಕೆಗಳು ಕಾಣಿಸಿಕೊಂಡಿವೆ.

ಪ್ರೈವೇಟ್‌ ಗ್ರೂಪ್ ಆಗಿರುವ ‘HelpChecker – Helping Tree’ ಮನೆಗೆಲಸದ ಹೆಣ್ಣುಮಕ್ಕಳ ಫೋಟೋಗಳನ್ನು ಹಾಕಿ ವಿಕೃತಿ ಮೆರೆಯುತ್ತಿದೆ. 13,227 ಸದಸ್ಯರನ್ನು ಹೊಂದಿರುವ ಈ ಗ್ರೂಪ್‌ 2015ರಿಂದಲೂ ಚಾಲ್ತಿಯಲ್ಲಿದೆ. ಏಪ್ರಿಲ್‌ 15, 2015ರಂದು ಗ್ರೂಪ್‌ ರಚನೆಯಾಗಿದೆ. ಕಾಲಕಾಲಕ್ಕೆ ಹೆಸರನ್ನು ಬದಲಾಯಿಸಲಾಗಿದೆ.

HELPCHECKER- MOMS & DADS WATCH OUT FOR THESE, MOMS & DADS WATCH OUT FOR THESE- HELPCHECKER, HELPCHECKER – Domestic Diaries ಹೀಗೆ ಆಗಾಗ್ಗೆ ಹೆಸರುಗಳನ್ನು ಬದಲಾಯಿಸಲಾಗಿದೆ. ಈಗ ಹೆಲ್ಪ್‌ಚೆಕ್ಕರ್‌- ಹೆಲ್ಪಿಂಗ್ ಟ್ರೀ ಎಂಬ ಅಂದದ ಹೆಸರನ್ನು ಇಟ್ಟುಕೊಂಡಿದ್ದು, ಮಾಡುತ್ತಿರುವ ಪೋಸ್ಟ್‌ಗಳು ಮಾತ್ರ ಆಘಾತಕಾರಿಯಾಗಿವೆ. ರುತ್ವಿಕ್‌ ಚಟರ್ಜಿ ಮತ್ತು ರಾಚೆಲ್‌ ಫರ್ನಾಂಡೀಸ್‌ ಚಟರ್ಜಿ ಎಂಬವರು ಈ ಗ್ರೂಪ್‌ನ ಅಡ್ಮಿನ್‌ ಆಗಿದ್ದಾರೆ. ರುತ್ವಿಕ್‌ ಅವರು ಆಸ್ಟ್ರೇಲಿಯಾದ ಮೊನಷ ವಿವಿಯಲ್ಲಿ ಓದಿದವರೆಂದು ಪ್ರೊಫೈಲ್‌ ಹೇಳುತ್ತದೆ. ರಾಚೆಲ್ ಅವರು ಮುಂಬೈ ಮೂಲದವರಾಗಿದ್ದಾರೆ.

“ಅತ್ಯಂತ ಅನಿರೀಕ್ಷಿತ ಮೂಲಗಳಿಂದ ಸಹಾಯವು ಎಲ್ಲಾ ರೂಪಗಳಲ್ಲಿ ಬರಲಿದೆ. ಈ ಸಮುದಾಯವು ನಿಮಗೆ ಸರಿಯಾದ ಸಹಾಯವನ್ನು ನೀಡುತ್ತದೆ” ಎಂದು ಗ್ರೂಪ್‌‌ನ ಅಡ್ಮಿನ್ ಬರೆದುಕೊಂಡಿದ್ದಾರೆ.

“ಒಂದೆರಡು ವರ್ಷಗಳ ಹಿಂದೆ ನಾನು ತುಂಬಾ ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹ ಎಂದು ತೋರುವ ದಾದಿಯನ್ನು ನೇಮಿಸಿಕೊಂಡಾಗ ಕೆಟ್ಟ ಅನುಭವವಾಯಿತು. ಆಕೆ ಕೋಪಗೊಳ್ಳುತ್ತಿದ್ದಳು, ನನ್ನ ಮಗನನ್ನು ಹಿಂಸಿಸಿದಳು. ಆಗ ನಾನು ಅರಿತುಕೊಂಡೆ, ನಮ್ಮ ಮನೆಗಳಿಗೆ ಯಾರನ್ನಾದರೂ ಕರೆತರುವ ಮೊದಲು ಅವರ ಎಲ್ಲ ಪೂರ್ವಪರವನ್ನು ತಿಳಿಯಬೇಕು ಎಂದು.”

ಇದನ್ನೂ ಓದಿರಿ: ಲಂಡನ್‌ನಲ್ಲಿ 300 ಎಕರೆ ಎಸ್ಟೇಟ್ ಖರೀದಿಸಿದ ಅಂಬಾನಿ: ಭಾರತ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟನೆ

“ಅವರು ನಮ್ಮ ಮನೆಗಳನ್ನು ಸ್ವಚ್ಛವಾಗಿಡುತ್ತಾರೆ, ಅವರು ನಮ್ಮ ಮೇಜಿನ ಮೇಲೆ ಬಿಸಿಬಿಸಿ ಊಟವಿಡುತ್ತಾರೆ, ನಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಾರೆ, ನಮ್ಮ ಕಾರುಗಳನ್ನು ಓಡಿಸುತ್ತಾರೆ, ನಮ್ಮ ಕೆಲಸಗಳನ್ನು ಮಾಡುತ್ತಾರೆ, ಕಚೇರಿಗಳಲ್ಲಿ ಸಹಾಯ ಮಾಡುತ್ತಾರೆ ಮತ್ತು ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡುತ್ತಾರೆ. ನಾವು ಅವರಿಲ್ಲದೆ ಬದುಕಲು ಸಾಧ್ಯವಿಲ್ಲ. ನಾವು ಯಾವಾಗಲೂ ಅವರಿಗೆ ಕೃತಜ್ಞರಾಗಿರುತ್ತೇವೆ. ಆದರೆ ಪ್ರತಿ ನಾಣ್ಯಕ್ಕೂ ಯಾವಾಗಲೂ ಎರಡು ಮುಖಗಳಿರುತ್ತವೆ. ಆದ್ದರಿಂದ ನಾವು ಯಾರನ್ನು ನೇಮಿಸಿಕೊಳ್ಳುತ್ತಿದ್ದೇವೆ, ಯಾರನ್ನು ನಮ್ಮ ಮನೆಗೆ ಬಿಡುತ್ತಿದ್ದೇವೆ ಎಂಬುದು ನಮಗೆ ತಿಳಿದಿರುವುದು ಬಹಳ ಮುಖ್ಯ” ಎಂದು ಅಡ್ಮಿನ್ ಹೇಳಿಕೊಂಡಿದ್ದಾರೆ.

“ಮನೆ ನಮ್ಮ ವೈಯಕ್ತಿಕ ಜಾಗ. ಕಳ್ಳತನ ಮಾಡಿದವರು, ಯಾರೊಬ್ಬರ ಮಗುವನ್ನು ಹೊಡೆದವರು, ವೃದ್ಧ ದಂಪತಿಯನ್ನು ಕೊಂದವರು, ಜೈಲಿನಿಂದ ಹೊರಬಂದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಕೆಲಸಕ್ಕೆ ತೆಗೆದುಕೊಳ್ಳುವ ಮುನ್ನ ಈ ಹಿಂದೆ ಇವರು ಎಲ್ಲಿ ಕೆಲಸ ಮಾಡುತ್ತಿದ್ದರೆಂದು ತಿಳಿದು, ಅಲ್ಲಿನ ಮಾಲೀಕರಿಂದ ಪ್ರತಿಕ್ರಿಯೆ ಪಡೆಯಬೇಕು…”

– ಹೀಗೆ ಗ್ರೂಪ್‌ನ ಉದ್ದೇಶವನ್ನು ಅಡ್ಮಿನ್‌ ಬರೆದುಕೊಂಡಿದ್ದಾರೆ. ನಿತ್ಯವೂ ಒಂದಲ್ಲ ಒಂದು ಹೆಣ್ಣುಮಕ್ಕಳ ಫೋಟೋ ಹಾಕಿ ಅಭಿಪ್ರಾಯ ಕೇಳಲಾಗುತ್ತಿದೆ. ಎಲ್ಲೋ ಒಂದು ಕಡೆ ಆಗಿದ್ದನ್ನು ನೆಪವಾಗಿಟ್ಟುಕೊಂಡು ಮನೆಗೆಲಸಕ್ಕೆ ಸೇರುವ ಎಲ್ಲ ಹೆಣ್ಣು ಮಕ್ಕಳ ಮೇಲೆ ಅನುಮಾನಪಡುವುದು ಎಷ್ಟು ಸರಿ? ಅವರ ಫೋಟೋಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಹಾಕಿ ಅಭಿಪ್ರಾಯ ಕೇಳುವುದು ವಿಕೃತಿಯಲ್ಲವೇ?

ಈ ಖಾಸಗಿ ಗ್ರೂಪ್‌ನಲ್ಲಿದ್ದ ಒಬ್ಬರು ‘ನಾನುಗೌರಿ.ಕಾಂ’ಗೆ ಮಾಹಿತಿ ನೀಡಿದ್ದಾರೆ. ಗ್ರೂಪ್‌ನಲ್ಲಿ ಹಾಕಿರುವ ಫೋಟೋಗಳ ಸ್ಕ್ರೀನ್‌ಶಾಟ್‌ಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಮನೆಗೆಲಸದವರ ಖಾಸಗಿತನ ಹಾಗೂ ಮಾನವ ಹಕ್ಕುಗಳಿಗೆ ಈ ಗ್ರೂಪ್‌ನಲ್ಲಿ ಬೆಲೆ ಇಲ್ಲವಾಗಿದೆ ಎಂದು ವಿಷಾದಿಸಿದ್ದಾರೆ.

ಕೆಲವು ಹೆಣ್ಣು ಮಕ್ಕಳ ಫೋಟೋವನ್ನು ಹಾಕಿ, ಇವರನ್ನು ಯಾರೂ ಕೆಲಸಕ್ಕೆ ತೆಗೆದುಕೊಳ್ಳಬೇಡಿ, ನಾವು ಬ್ಲಾಕ್‌ಲಿಸ್ಟ್‌ಗೆ ಹಾಕಿದ್ದೇವೆ ಎಂದು ಪೋಸ್ಟ್‌ ಮಾಡಲಾಗಿದೆ. ಇದನ್ನು ಪ್ರಶ್ನಿಸಿದವರನ್ನು ಗ್ರೂಪ್‌ನಿಂದ ಹೊರಹಾಕುವ ಕೆಲಸವೂ ನಡೆಯುತ್ತಿದೆ. ಹೆಚ್ಚಿನ ವಿವರ ಪಡೆಯಲು ನಾನುಗೌರಿ.ಕಾಂ ತಂಡವು ಗ್ರೂಪ್‌ಗೆ ಪ್ರವೇಶಿಸಲು ಯತ್ನಿಸಿತು. ಅಡ್ಮಿನ್‌ ಅವಕಾಶ ನೀಡದ ಕಾರಣ, ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.

ಬದುಕಿನ ಅನಿವಾರ್ಯತೆಗೆ ಸಿಲುಕಿ ಮನೆಗೆಲಸಕ್ಕೆ ಹೋಗುವ ಹೆಣ್ಣುಮಕ್ಕಳ ಮೇಲೆ ಈ ರೀತಿಯ ಅಮಾನುಷವಾಗಿ ವರ್ತಿಸುವುದು ಜಗತ್ತಿನ ಯಾವ ಮೂಲೆಯಲ್ಲಿ ನಡೆದರೂ ಖಂಡನೀಯ. ಇದೇ ರೀತಿಯ ಖಾಸಗಿ ಗ್ರೂಪ್‌ಗಳು ಬೆಂಗಳೂರಿನಲ್ಲಿಯೂ ಇರಬಹುದು.

ಮಹಿಳೆಯರ ಹಕ್ಕುಗಳ ಪರವಾಗಿ ದನಿ ಜೋರಾಗುತ್ತಿರುವ ಈ ಹೊತ್ತಿನಲ್ಲಿ ಇಂತಹ ವಿದ್ಯಮಾನಗಳು ಬೆಳಕಿಗೆ ಬರುವುದು ಆತಂಕಕಾರಿ. ಈ ರೀತಿ ಪ್ರಕರಣಗಳು ಕಂಡು ಬಂದಲ್ಲಿ ಪ್ರಜ್ಞಾವಂತರು ರಿಪೋರ್ಟ್ ಮಾಡಬೇಕಾಗಿ ವಿನಂತಿ. ಸಾಮಾಜಿಕ ಮಾಧ್ಯಮಗಳು ಹೀಗೆಲ್ಲ ದುರ್ಬಳಕೆ ಆಗುವುದು ತಪ್ಪಬೇಕಿದೆ.

ಯಾವುದೇ ಜೀವನ ಭದ್ರತೆ ಇಲ್ಲದೆ ಅತ್ಯಂತ ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ ಮನೆಗೆಲಸದ ಹೆಣ್ಣು ಮಕ್ಕಳನ್ನು ಇಷ್ಟು ಕ್ರೂರವಾಗಿ ನಡೆಸಿಕೊಳ್ಳುವುದು ದುರಾದೃಷ್ಟಕರ. ಆಧುನಿಕವಾಗಿ ಮುಂದುವರಿಯುತ್ತಿರುವ ಸಮಾಜವು ಇವುಗಳ ವಿರುದ್ಧ ದನಿ ಎತ್ತಬೇಕಿದೆ.


ಇದನ್ನೂ ಓದಿರಿ: ಇನ್ನೆಂದೂ ಆಗಿರದಷ್ಟು ಬಡತನ ಕಳೆದ 8 ವರ್ಷಗಳಲ್ಲಿ ಭಾರತದಲ್ಲಿ ಹೆಚ್ಚಳ: ಅಧ್ಯಯನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...