Homeಮುಖಪುಟಪ್ರಜಾಪ್ರಭುತ್ವದ ಮೂಲತತ್ವಗಳನ್ನು ನೆನಪಿಸಿದ ಸುಪ್ರೀಂ ಕೋರ್ಟ್ ಪೆಗಸಸ್ ತೀರ್ಪು

ಪ್ರಜಾಪ್ರಭುತ್ವದ ಮೂಲತತ್ವಗಳನ್ನು ನೆನಪಿಸಿದ ಸುಪ್ರೀಂ ಕೋರ್ಟ್ ಪೆಗಸಸ್ ತೀರ್ಪು

- Advertisement -
- Advertisement -

ಸರ್ವೋಚ್ಚ ನ್ಯಾಯಾಲಯವು ಪೆಗಸಸ್ ಪ್ರಕರಣದಲ್ಲಿ ನೀಡಿರುವ ತೀರ್ಪಿನಲ್ಲಿ ಈಗಿನ ಡಿಜಿಟಲ್ ಯುಗದಲ್ಲಿ ಖಾಸಗಿತನಕ್ಕೆ ಇರಬೇಕಾದ ಮಹತ್ವವನ್ನು ಪುನರುಚ್ಚರಿಸಿದೆ ಹಾಗೂ ಸರಕಾರವು ಪೆಗಸಸ್ ಎಂಬ ಮ್ಯಾಲ್‌ವೇರ್‌ಅನ್ನು ಖರೀದಿಸಿತ್ತೆ ಮತ್ತು ಅದನ್ನು ಭಾರತೀಯ ನಾಗರಿಕರಿನ್ನು ಗುರಿ ಮಾಡಲು ಬಳಸಲಾಗಿತ್ತೆ ಎಂಬುದನ್ನು ಸ್ಪಷ್ಟಪಡಿಸಲು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ರವೀಂದ್ರನ್ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿದೆ.

ಈ ಆದೇಶವನ್ನು ಹಿರಿಯ ವಕೀಲ ದುಷ್ಯಂತ್ ದವೆ ಸ್ವಾಗತಿಸುತ್ತ, ಅದನ್ನು ’ಅಸಾಮಾನ್ಯವಾದದ್ದು ಹಾಗೂ ಪ್ರಜಾಪ್ರಭುತ್ವಕ್ಕೆ ಅತ್ಯಂತ ಮಹತ್ವವಾದ ಆದೇಶವಾಗಿದೆ’ ಎಂದಿದ್ದಾರೆ. ಹಿರಿಯ ಪತ್ರಕರ್ತ ಎಂ.ಕೆ. ವೇಣು, ಭಾರತವು ಮತ್ತೆ ಪ್ರಜಾಪ್ರಭುತ್ವವನ್ನು ಉಸಿರಾಡಲು ಅನುವು ಮಾಡುವ ಸಾಮರ್ಥ್ಯವನ್ನು ಈ ಆದೇಶ ಹೊಂದಿದೆ ಎಂದಿದ್ದಾರೆ.

ಪೆಗಸಸ್ ಎಂಬುದು ಒಂದು ಸ್ಪೈವೇರ್, (ಒಂದು ರೀತಿಯ ಕಳ್ಳತನ ಮಾಡುವ ಸಾಫ್ಟ್‌ವೇರ್), ಇದನ್ನು ಜಗತ್ತಿನ ಯಾವುದೇ ಭಾಗದಿಂದ ಒಬ್ಬ ವ್ಯಕ್ತಿಯ ಫೋನ್‌ನಲ್ಲಿ ಅಥವಾ ಡಿಜಿಟಲ್ ಸಾಧನದಲ್ಲಿ ಅಳವಡಿಸಬಹುದಾಗಿದೆ. ಈ ಸಾಫ್ಟ್‌ವೇರ್‌ನಿಂದ ಆ ಡಿಜಿಟಲ್ ಸಾಧನದ ಎಲ್ಲಾ ಮಾಹಿತಿಯನ್ನು ನೋಡಬಹುದು ಹಾಗೂ ಪೆಗಸಸ್‌ಅನ್ನು ಅಳವಡಿಸಿ ಬೇಹುಗಾರಿಕೆ ಮಾಡುತ್ತಿರುವ ಸಂಸ್ಥೆಗೆ ಆ ಎಲ್ಲಾ ಮಾಹಿತಿಯನ್ನು ಕಳುಹಿಸಬಹುದು. ಈ ಅತ್ಯಂತ ಸಾಮರ್ಥ್ಯವುಳ್ಳ ಮಿಲಿಟರಿ ಮಟ್ಟದ ಸಾಫ್ಟ್‌ವೇರ್‌ಅನ್ನು ಇಸ್ರೇಲಿನ ಎನ್‌ಎಸ್‌ಒ ಗ್ರೂಪ್ ಸೃಷ್ಟಿಸಿದೆ ಹಾಗೂ ಈ ಎನ್‌ಎಸ್‌ಒ ಪ್ರಕಾರ ಈ ಸಾಫ್ಟ್‌ವೇರ್‌ಗಳನ್ನು ಸರಕಾರಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ.

ಸಿಟಿಜನ್ ಲ್ಯಾಬ್ ಜೊತೆಗೂಡಿ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯು ಪೆಗಸಸ್ ಎಂಬ ಈ ಸಾಫ್ಟ್‌ವೇರ್ ಬಳಸಿ ವಿಶ್ವಾದ್ಯಂತ್ಯ 50,000ಕ್ಕೂ ಹೆಚ್ಚು ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಸುದ್ದಿಯನ್ನು ಬಯಲು ಮಾಡಿತು, ಅದರಲ್ಲಿ ಭಾರತೀಯರ ಹೆಸರುಗಳೂ ಇದ್ದವು. ಆಗ ಸ್ವಾಭಾವಿಕವಾಗಿಯೇ ಉದ್ಭವಿಸಿದ ಪ್ರಶ್ನೆಯೆಂದರೆ, ಭಾರತೀಯ ನಾಗರಿಕರ ಮೇಲೆ ಬೇಹುಗಾರಿಕೆ ಮಾಡುತ್ತಿರುವವರು ಯಾರು ಎಂಬುದು. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆರೋಪಿಗಳಾಗಿರುವ ಕೆಲವರ ವ್ಯಕ್ತಿಗಳ ಫೋನ್‌ಗಳೂ ಈ ಬೇಹುಗಾರಕೆಗೆ ಒಳಗಾಗಿದ್ದವು. ಡಿಜಿಟಲ್ ವಿಧಿವಿಜ್ಞಾನದಿಂದ ನಮಗೆ ಈಗ ತಿಳಿದಿರುವುದೇನೆಂದರೆ, ರೋಣಾ ವಿಲ್ಸನ್ ಮತ್ತು ಸುರೇಂದ್ರ ಗಾಡ್ಲಿಂಗ್ ಅವರ ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡಲಾಗಿತ್ತು ಹಾಗೂ ಅದರ ಮೂಲಕ ಆ ಕಂಪ್ಯೂಟರ್‌ಗಳಲ್ಲಿ ಫೈಲ್‌ಗಳನ್ನು ಇರಿಸಲಾಗಿತ್ತು. ಇದು ಸೂಚಿಸುವುದೇನೆಂದರೆ, ಈ ಕಾರ್ಯಾಚರಣೆ ಕೇವಲ ಬೇಹುಗಾರಿಕೆಯದ್ದಷ್ಟೇ ಅಲ್ಲದೇ, ಸುಳ್ಳು ಸಾಕ್ಷ್ಯಗಳನ್ನು ಕಂಪ್ಯೂಟರ್‌ಗಳಲ್ಲಿ ಮತ್ತು ಇತರ ಡಿಜಿಟಲ್ ಉಪಕರಣಗಳಲ್ಲಿ ಸೇರಿಸುವುದುಕ್ಕೂ ಬಳಸಲಾಗಿತ್ತು ಎಂಬುದು ಹಾಗೂ ಇದು ಭಾರತೀಯರೆಲ್ಲರೂ ಆತಂಕ ಪಡುವಂತೆ ಮಾಡಿತು.

ಈ ಸ್ಪೈವೇರ್‌ನಿಂದ ಗುರಿ ಮಾಡಲಾದ ವ್ಯಕ್ತಿಗಳು ಸರ್ವೋಚ್ಚ ನ್ಯಾಯಾಲಯದ ಕದ ತಟ್ಟಿ, ತಮ್ಮ ಖಾಸಗಿತನದ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಹೇಳಿದಾಗ, ಒಕ್ಕೂಟ ಸರಕಾರವು ಇದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡಲಿಲ್ಲ. ಸರಕಾರವು ತನ್ನ ಮೇಲೆ ಹೊರಿಸಿದ ಆರೋಪವು ತಪ್ಪು ಎಂದು ನಿರಾಕರಿಸಲೂ ಇಲ್ಲ, ಒಪ್ಪಿಕೊಳ್ಳಲೂ ಇಲ್ಲ. ಪೆಗಸಸ್‌ಅನ್ನು ಸರಕಾರ ಖರೀದಿ ಮಾಡಿತ್ತೆ ಎಂಬ ಪ್ರಶ್ನೆಯನ್ನು ಪದೇಪದೇ ಕೇಳಿದಾಗ, ಸರಕಾರ ಅದೊಂದು ರಾಷ್ಟ್ರೀಯ ಭದ್ರತೆಯ ವಿಷಯವಾಗಿರುವುದರಿಂದ ವಿವರಗಳನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದು ಉತ್ತರಿಸಿತು.

ಸರ್ವೋಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ಒಕ್ಕೂಟ ಸರಕಾರದ ’ರಾಷ್ಟ್ರೀಯ ಭದ್ರತೆ’ಯ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ’ರಾಷ್ಟ್ರೀಯ ಭದ್ರತೆ’ಯ ಭೀತಿಯನ್ನು ಮುಂದಿರಿಸಿ, ಸರಕಾರ ಪ್ರತಿ ಸಲ ’ಫ್ರೀ ಪಾಸ್’ ತೆಗೆದುಕೊಳ್ಳಲಿ ಆಗುವುದಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ. ಹಾಗೂ ’ಸರಕಾರವು ರಾಷ್ಟ್ರೀಯ ಭದ್ರತೆಯನ್ನು ಕೇವಲ ಉಲ್ಲೇಖಿಸುವುದರಿಂದ ನ್ಯಾಯಾಲಯವನ್ನು ಮೂಕಪ್ರೇಕ್ಷಕನನ್ನಾಗಿಸಲು ಆಗುವುದಿಲ್ಲ’ ಎಂತಲೂ ಹೇಳಿದೆ.

ಕಾನೂನನ್ನು ಈ ರೀತಿ ಒತ್ತಿ ಒತ್ತಿ ಹೇಳುವುದು ತುಂಬಾ ಮುಖ್ಯವಾಗಿದೆ. ಪ್ರಜಾಪ್ರಭುತ್ವದಲ್ಲಿ ಖಾಸಗಿತನ ಎಂಬುದು ಒಂದು ಅತ್ಯಗತ್ಯ ಹಕ್ಕು ಆಗಿದ್ದು, ಭಾರತದ ಎಲ್ಲಾ ನಾಗರಿಕರನ್ನು ಖಾಸಗಿತನದ ಉಲ್ಲಂಘನೆಯಿಂದ ರಕ್ಷಿಸಬೇಕು ಎಂದು ಕೋರ್ಟ್ ಹೇಳಿದೆ. ನಾಗರಿಕರಿಕರಿಗೆ ತಮ್ಮ ಖಾಸಗಿತನದ ಹಕ್ಕನ್ನು ರಕ್ಷಿಸಲಾಗಿದೆ, ಖಾತ್ರಿಪಡಿಸಲಾಗಿದೆ ಎಂದು ಗೊತ್ತಿದ್ದಾಗ ಮಾತ್ರ ಅವರು ತಮ್ಮ ’ಆಯ್ಕೆ ಮತ್ತು ಸ್ವಾತಂತ್ರದ’ ಹಕ್ಕನ್ನು ಚಲಾಯಿಸಬಹುದು.

ಆದರೆ ಅದರ ಜೊತೆಗೆ ನ್ಯಾಯಾಲಯವು ಇದನ್ನೂ ಹೇಳಿದೆ, ’ಮೂರು ಷರತ್ತುಗಳನ್ನು ಅನ್ವಯಿಸುವಂತೆ ನೋಡಿಕೊಂಡಾಗ ಪ್ರಭುತ್ವವು ಒಬ್ಬ ವ್ಯಕ್ತಿಯ ಖಾಸಗಿತನದ ಹಕ್ಕನ್ನು ನಿರ್ಬಂಧಿಸಬಹುದು. ಮೊದಲನೆಯದಾಗಿ, ಖಾಸಗಿತನದ ಹಕ್ಕಿನ ನಿರ್ಬಂಧನೆಯು ಕಾನೂನಿನಿಂದ ಸಮ್ಮತಿ ಪಡೆದಿರಬೇಕು, ಎರಡನೆಯದಾಗಿ ಅದು ಒಂದು ನ್ಯಾಯಸಮ್ಮತವಾದ ಉದ್ದೇಶ ಹೊಂದಿರಬೇಕು ಹಾಗೂ ಕೊನೆಯದಾಗಿ ಆ ನಿರ್ಬಂಧನೆಯು ಒಂದು ಸೂಕ್ತ ಪ್ರಮಾಣಕ್ಕೆ ಅನುಗುಣವಾಗಿರಬೇಕು.

ಈಗ ಆಗಿರುವುದನ್ನು ಮೂರು ಷರತ್ತುಗಳ ಪರೀಕ್ಷೆಗಳಿಗೆ ಅನ್ವಯಿಸಿದಾಗ ತಿಳಿಯುವುದೇನೆಂದರೆ, ಪೆಗಸಸ್ ಕಾನೂನಿನಿಂದ ಒಪ್ಪಿಗೆ ಪಡೆಯದೆ ಇರುವುದಷ್ಟೆ ಅಲ್ಲದೇ, ಇದು ಮಾಹಿತಿ ತಂತ್ರಜ್ಞಾನದ ಕಾಯಿದೆಯ ನಿಬಂಧನೆಗಳಿಗೆ ವಿರುದ್ಧವಾಗಿದೆ. ಮಾಹಿತಿ ತಂತ್ರಜ್ಞಾನದ ಕಾಯಿದೆ ಡಿಜಿಟಲ್ ಸಾಧನಗಳನ್ನು ಹ್ಯಾಕ್ ಮಾಡುವುದನ್ನು ಮತ್ತು ಯಾವುದೇ ವ್ಯಕ್ತಿಯ ಮಾಹಿತಿಯನ್ನು ಅಕ್ರಮವಾಗಿ ತಿದ್ದುವುದನ್ನು ನಿಷೇಧಿಸುತ್ತದೆ. ರಾಷ್ಟ್ರೀಯ ಭದ್ರತೆಯ ಕಾರಣದಿಂದ ರಾಜಕಾರಣಿಗಳ, ಕಾರ್ಯಕರ್ತರ, ವಿದ್ಯಾರ್ಥಿಗಳ ಮತ್ತು ಪತ್ರಕರ್ತರ ಸಾಧನಗಳನ್ನು ಹ್ಯಾಕ್ ಮಾಡಲಾಗಿತ್ತು ಎಂದು ಸಾಬೀತುಮಾಡಲು ಸರಕಾರಕ್ಕೆ ಕಷ್ಟವಾಗಲಿದೆ. ಕೊನೆಯದಾಗಿ, ಈ ವ್ಯಕ್ತಿಗಳ ಮೇಲೆ ಮಾಡಲಾದ ಆರ್ವೆಲಿಯನ್ (ಜಾರ್ಜ್ ಆರ್ವೆಲ್‌ನ ’1984’ ಎಂಬ ಕಾದಂಬರಿಯಿಂದ ಪ್ರೇರಿತವಾದ ನುಡಿಗಟ್ಟು) ಬೇಹುಗಾರಿಕೆ ಯಾವುದೇ ರೀತಿಯಲ್ಲಿ ಸೂಕ್ತ ಪ್ರಮಾಣದ ಪ್ರತಿಕ್ರಿಯೆ ಎಂದು ತೋರಿಸುವುದು ಸರಕಾರಕ್ಕೆ ಸುಲಭವಾಗುವುದಿಲ್ಲ.

ಈ ಎಲ್ಲ ಸಂಗತಿಗಳ ಕಾರಣದಿಂದ ನ್ಯಾಯಾಲಯವು ವಿನಂತಿಸಿದಂತೆ ವಿವರವಾದ ಅಫಿಡವಿಟ್ ಸಲ್ಲಿಸುವುದು ಬೇಡ ಎಂಬ ನಿರ್ಧಾರಕ್ಕೆ ಸರ್ಕಾರ ಬರುವಂತೆ ಮಾಡಿರಬಹುದು ಹಾಗೂ ಅದರ ಬದಲಿಗೆ ’ರಾಷ್ಟ್ರೀಯ ಭದ್ರತೆ’ಯ ಭಾಷೆಯ ಉದ್ಧಟತನವನ್ನು ಪ್ರದರ್ಶಿಸಿರಬಹುದು. ಅದೃಷ್ಟವಷಾತ್ ನ್ಯಾಯಾಲಯವು ಒಕ್ಕೂಟ ಸರಕಾರದ ವಾದವನ್ನು ಬೊಗಳೆ ಎಂದು ಪರಿಗಣಿಸಿದೆ.

ಇದರಿಂದ ತಪ್ಪಿಸಿಕೊಳ್ಳಲು ಸರಕಾರವು ತನ್ನ ಕೊನೆಯ ದಾರಿಯಾಗಿ, ಈ ವಿಷಯದ ವಿಚಾರಣೆ ಮಾಡಲು ತಾನೊಂದು ಸಮಿತಿಯನ್ನು ರಚಿಸುವ ಪ್ರಸ್ತಾಪವನ್ನು ನ್ಯಾಯಾಲಯದ ಎದುರು ಇಡುವ ಯೋಜನೆ ಮಾಡಿತ್ತು. ಆದರೆ ನ್ಯಾಯಾಲಯವು ಈ ಸಲಹೆಯನ್ನು ಸಾರಾಸಗಟಾಗಿ ತಿರಸ್ಕರಿಸಿ, ಸರಕಾರವು ರಚಿಸಿದ ಸಮಿತಿಯು ಇದರ ತನಿಖೆ ಮಾಡುವುದು ’ಪಕ್ಷಪಾತದ ವಿರುದ್ಧದ ನ್ಯಾಯಾಂಗವು ಇರಿಸಿದ ತತ್ವದ ಉಲ್ಲಂಘನೆ’ ಆಗುತ್ತದೆ ಎಂದು ಹೇಳಿದ್ದಲ್ಲದೆ, ’ನ್ಯಾಯ ಒದಗಿಸುವುದಷ್ಟೇ ಅಲ್ಲ ಆದರೆ ನ್ಯಾಯ ಒದಗಿಸಿದಂತೆ ಕಾಣಿಸಲೂಬೇಕು’ ಎಂದು ಹೇಳಿತು.

ಸರ್ವೋಚ್ಚ ನ್ಯಾಯಾಲಯವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಒಂದು ಸಮಿತಿಯನ್ನು ರಚಿಸಿದೆ. ಆ ಸಮಿತಿಗೆ ತನ್ನ ಸ್ವಾತಂತ್ರ್ಯ ಮತ್ತು ಬದ್ಧತೆಗೆ ಹೆಸರುವಾಸಿಯಾದ ಒಬ್ಬ ನ್ಯಾಯಾಧೀಶ ಜಸ್ಟೀಸ್ ರವೀಂದ್ರನ್ ಅವರನ್ನು ಮುಖ್ಯಸ್ಥರನ್ನಾಗಿಸಿ, ಐಪಿಎಸ್ ಅಧಿಕಾರಿ ಆಲೋಕ್ ಜೋಷಿ ಮತ್ತು ಸೈಬರ್ ಭದ್ರತೆಯ ತಜ್ಞ ಸಂದೀಪ್ ಒಬೆರಾಯ್ ಅವರನ್ನು ಆ ಸಮಿತಿಯಲ್ಲಿ ಸೇರಿಸಿದೆ. ಹಾಗೂ ಜಸ್ಟಿಸ್ ರವೀಂದ್ರನ್ ಅವರಿಗೆ ಕಾನೂನು ತಜ್ಞರ, ತಾಂತ್ರಿಕ ತಜ್ಞರ ಹಾಗೂ ಹಾಲಿ ಅಧಿಕಾರಿಗಳ ಸಹಾಯವನ್ನು ಪಡೆಯುವ ಸ್ವಾತಂತ್ರ್ಯ ನೀಡಲಾಗಿದೆ.

ನ್ಯಾಯಾಲಯವು ನೇಮಿಸಿದ ಸಮಿತಿಗೆ ಪೆಗಸಸ್ ಬಳಕೆಯ ಹಿಂದೆ ಯಾರಿದ್ದರು ಮತ್ತು ಯಾವ ಉದ್ದೇಶಕ್ಕಾಗಿ ಬಳಸಲಾಗಿತ್ತು ಎಂಬುದರ ಸತ್ಯಾಸತ್ಯತೆಯನ್ನು ಸಾಬೀತುಪಡಿಸುವ ಅಧಿಕಾರ ಮತ್ತು ಉದ್ದೇಶ ನೀಡಲಾಗಿದೆ. ಒಂದು ವೇಳೆ ಒಕ್ಕೂಟ ಸರಕಾರವು ತನಿಖೆಯದಾರಿ ಸುಗಮವಾಗಲು ಸಹಕಾರ ನೀಡದಿದ್ದರೆ, ಸಮಿತಿಯು ಪ್ರತಿಕೂಲ ತೀರ್ಮಾನಗಳನ್ನು ಅಂದಾಜಿಸಿ, ತನ್ನದೇ ಆದ ನಿರ್ಣಯಕ್ಕೆ ಬರಬಹುದು. ಹಾಗೂ ಈ ಸಮಿತಿಯು ಇತರ ತಜ್ಞರು ನೀಡುವ ಮಾಹಿತಿಯನ್ನು ಬಳಸಿಕೊಳ್ಳಬಹುದು, ಅದರಿಂದ ಒಕ್ಕೂಟ ಸರಕಾರದ ನಿಲುವು ಏನೇ ಆಗಿರಲಿ, ತನಿಖೆ ಮುಂದುವರೆಸಿ ಪೆಗಸಸ್ ಹಗರಣದ ಬುಡಕ್ಕೆ ತಲುಪಬಹುದು.

ಕಾನೂನುಬಾಹಿರ ಬೇಹುಗಾರಿಕೆಯ ಮತ್ತು ಸಾಕ್ಷ್ಯಗಳನ್ನು ಸಾಧನಗಳಲ್ಲಿ ತೂರಿಸುವ ಅಪರಾಧಗಳನ್ನು ಬಯಲಿಗೆಳೆಯುವ ಮತ್ತು ಒಕ್ಕೂಟ ಸರಕಾದಿಂದ ಉತ್ತರದಾಯಿತ್ವವನ್ನು ಅಪೇಕ್ಷಿಸುವ ಸಾಧ್ಯತೆ ಈಗ ನಮ್ಮ ಮುಂದೆ ಇದೆ. ನಾಗರಿಕ ಸಮಾಜವು ಈ ಸಮಿತಿಯೊಂದಿಗೆ ತೊಡಗಿಸಿಕೊಂಡು, ಪೆಗಸಸ್‌ಅನ್ನು ಬಳಸಿ ಭಾರತದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಸಾಧನವಾಗಿ ಬಳಸಿರುವ ಸತ್ಯವನ್ನು ಹೊರಗೆಳೆಯಲು ಈ ಸಮಿತಿಯ ಬಲವರ್ಧನೆ ಮಾಡಬೇಕಿದೆ.

(ಕನ್ನಡಕ್ಕೆ): ರಾಜಶೇಖರ್ ಅಕ್ಕಿ

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಪರ್ಯಾಯ ಕಾನೂನು ವೇದಿಕೆ (ಎಎಲ್‌ಎಫ್‌ನ) ಸ್ಥಾಪಕ ಸದಸ್ಯರು


ಇದನ್ನೂ ಓದಿ: ಪ್ರಜಾಪ್ರಭುತ್ವವನ್ನೇ ಪಣಕ್ಕಿಟ್ಟು ರಾಜಕೀಯ ವಿರೋಧಿಗಳನ್ನು ಮಣಿಸುವುದಕ್ಕೆ ಹಾರುವ ಕುದುರೆಯನೇರಿ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...