Homeಮುಖಪುಟಬಡತನ, ಸಾಂಕ್ರಾಮಿಕ ಮತ್ತು ಮತ ಮಾರಾಟ; ಮಣಿಪುರ ಚುನಾವಣೆ 2022

ಬಡತನ, ಸಾಂಕ್ರಾಮಿಕ ಮತ್ತು ಮತ ಮಾರಾಟ; ಮಣಿಪುರ ಚುನಾವಣೆ 2022

- Advertisement -
- Advertisement -

ಮಣಿಪುರದಲ್ಲಿ ಇತ್ತೀಚಿಗೆ ನಡೆದ ಚುನಾವಣೆಯ ಫಲಿತಾಂಶವು, ಎಲ್ಲ ವಯೋಮಾನದ ಶಿಕ್ಷಿತ ಸಮುದಾಯವನ್ನು ಅಚ್ಚರಿ ಮತ್ತು ಆಳವಾದ ಆತ್ಮಾವಲೋಕನಕ್ಕೆ ದೂಡಿದೆ. ಚುನಾವಣಾ ಫಲಿತಾಂಶವು ನೈಜ ಜಗತ್ತಿನ ಅನುಭವವಾಗಿದ್ದು, ಶಿಕ್ಷಿತ ಮತ್ತು ಬುದ್ಧಿಜೀವಿ ವರ್ಗಗಳು ಈಗ ಈ ಅನಿರೀಕ್ಷಿತ ಫಲಿತಾಂಶಕ್ಕೆ ಸರಿಹೊಂದುವ ರೀತಿಯ ವ್ಯಾಖ್ಯಾನಗಳನ್ನು ಮತ್ತು ಕಾರಣಗಳನ್ನು ಹುಡುಕುವಲ್ಲಿ ನಿರತವಾಗಿವೆ.

ಚುನಾವಣೆಗಳು ಪ್ರಜಾಪ್ರಭುತ್ವದಲ್ಲಿನ ಪ್ರಕ್ರಿಯೆಯಾಗಿ, ಅತಿ ಕಡಿಮೆ ಸಮಯದಲ್ಲಿ ಬಹಳ ಆಳವಾದ ಮತ್ತು ವಿಸ್ತಾರವಾದ ಬದಲಾವಣೆಯ ಚಲನಶೀಲ ಶಕ್ತಿಯನ್ನು ಹೊಂದಿರುವ ಪ್ರಕ್ರಿಯೆಗಳಾಗಿವೆ. ಚುನಾವಣೆ ನಡೆದ ದಿನಗಳನ್ನು ಮತ್ತು ಅದರ ಹಿಂದಿನ ಕೆಲವು ದಿನಗಳನ್ನು ಮಣಿಪುರದಲ್ಲಿ ಈ ಹಿಂದೆಂದೂ ಕಾಣದಿದ್ದಷ್ಟು ಹಿಂಸೆಯ ದಿನಗಳನ್ನಾಗಿ ಗುರುತಿಸಬಹುದಾಗಿದೆ. ಇದರಲ್ಲಿ ಮೂರು ಅಂಶಗಳಿವೆ. ಮೊದಲನೆಯದಾಗಿ, ಬಿಜೆಪಿಯ ಮತ್ತು ಆಡಳಿತಾರೂಢ ಪಕ್ಷದ ಸದಸ್ಯರುಗಳಾಗಿ ಧಮ್ಕಿಯ-ಬೆದರಿಕೆಯ ರೀತಿಯ ಭಾಷಾಪ್ರಯೋಗವನ್ನು ಯಾವುದೇ ಅಂಜಿಕೆಯಿಲ್ಲದೆ ಮಾಡಿದ್ದು ಮತ್ತು ಅದನ್ನು ಕಾರ್ಯರೂಪಕ್ಕೂ ತಂದಿದ್ದು. ಎರಡನೆಯದಾಗಿ, ಬಹಳಷ್ಟು ಪ್ರಕರಣಗಳಲ್ಲಿ, ಈ ರೀತಿಯ ಹಲ್ಲೆಗಳಿಗೆ ಒಳಗಾಗಿದ್ದು ಹಿಂಸೆಗೆ ಹೆಸರಾದ ಕ್ಷೇತ್ರಗಳಲ್ಲಿ ಮತ್ತು ಬಿಜೆಪಿಯ ವಿರುದ್ಧವಾಗಿ ಸಮರ್ಥ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಿದ್ದ ಪಕ್ಷಗಳ ನಾಯಕರು ಮತ್ತು ಬೆಂಬಲಿಗರು. ಮೂರನೆಯದಾಗಿ, ತನ್ನ ಚುನಾವಣಾ ಪ್ರಣಾಳಿಕೆಯನ್ನು ಕೊನೆಯ ಕ್ಷಣದವರೆಗೂ ಬಿಡುಗಡೆಗೊಳಿಸದೆ ವಿಳಂಬಿಸುವ ಮೂಲಕ ಬಿಜೆಪಿ ಮುಕ್ತ ಸಾರ್ವಜನಿಕ ಚರ್ಚೆಗಳ ಸಾಧ್ಯತೆಗಳನ್ನು ಕ್ಷೀಣಗೊಳಿಸಿತು ಮತ್ತು ಬಿಜೆಪಿಯನ್ನು ಒಂದು ರಾಜಕೀಯ ಪಕ್ಷವೆಂದಾಗಲೀ ಅಥವಾ ಸರ್ಕಾರವನ್ನು ಮುನ್ನಡೆಸುತ್ತಿದ್ದ ಪಕ್ಷವೆಂದಾಗಲಿ ತಿಳಿದು ಅದರ ನಿಲುವುಗಳನ್ನು, ಸಾಧನೆಯನ್ನು ಮೌಲ್ಯಮಾಪನಕ್ಕೆ ಒಳಪಡಿಸುವುದನ್ನು ತಡೆಹಿಡಿಯಲಾಯಿತು.

ಬೆದರಿಕೆ-ಧಮ್ಕಿ ಮತ್ತು ಹಲ್ಲೆ-ಹಿಂಸೆಗಳನ್ನು ಹಿಂದೆಂದೂ ಕಂಡರಿಯದ ಪ್ರಮಾಣದಲ್ಲಿ ಬಳಸಿ ಚುನಾವಣೆಯ ಫಲಿತಾಂಶಗಳನ್ನು ಬದಲಾಯಿಸುವ ಕಾರ್ಯತಂತ್ರದ ಹಿನ್ನೆಲೆಯಲ್ಲಿ, ಶಿಕ್ಷಿತ ಮತ್ತು ತಿಳಿವಳಿಕೆಯುಳ್ಳ ಮತದಾರರಲ್ಲಿ ಬಹುತೇಕರು ಬಿಜೆಪಿಯು ಮತ್ತೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವುದು ಅನುಮಾನ ಎಂದೇ ಭಾವಿಸಿದ್ದರು. ಯಾವುದೇ ಪಕ್ಷ ಸರಳ ಬಹುಮತ ಸಾಧಿಸದೆ ಅತಂತ್ರ ವಿಧಾನಸಭೆಗೆ ಕಾರಣವಾಗುತ್ತದೆಯೆಂದೂ, ಅದರಲ್ಲೂ, 60 ಕ್ಷೇತ್ರಗಳಲ್ಲಿ ಬಿಜೆಪಿ ಕೇವಲ 15ರಲ್ಲಿ ಗೆಲುವು ಸಾಧಿಸುವುದೆಂದೇ ಬಹಳಷ್ಟು ಲೆಕ್ಕಾಚಾರಗಳು ಸೂಚಿಸಿದ್ದವು. ಆದರೆ 60 ಕ್ಷೇತ್ರಗಳಲ್ಲಿ 32ನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಬಿಜೆಪಿಯು ಸರಳ ಬಹುಮತ ಸಾಧಿಸಿದೆ.

ಶಿಕ್ಷಿತ ಮತ್ತು ತಿಳಿದ ಎಲೈಟ್ ವರ್ಗದ ನಿರೀಕ್ಷೆಯು ಪೂರಾಪೂರ ಹುಸಿಯಾಗಿರುವುದು, ಈ ವರ್ಗದ ಜನರಲ್ಲಿ ಸಾಮಾನ್ಯ ಮತದಾರರ ಮನಸನ್ನು ಪ್ರಭಾವಿಸಿರುವುದು ಏನೆಂಬ ಯಕ್ಷಪ್ರಶ್ನೆಯೊಂದು ಮೂಡಿ ಕಾಡುತ್ತಿದೆ. ಇಲ್ಲಿ, ಸೂಕ್ಷ್ಮವಾಗಿ ಗಮನಿಸಿದರೆ, ಈ ಪ್ರಭಾವವು ಕೆಲಸ ಮಾಡಿರುವುದು ಮತದಾನ ನಡೆದ ಎರಡು ಹಂತಗಳ ಮುಂಚಿನ ಸುಮಾರು 5-6 ದಿನಗಳಲ್ಲಿ ಮಾತ್ರ ಎಂಬುದು ತಿಳಿಯುತ್ತದೆ. ಶಿಕ್ಷಿತ ಸಮುದಾಯವು ತಮ್ಮನ್ನು ಬೆಂಬಲಿಸುತ್ತಿಲ್ಲ ಎಂಬುದನ್ನು ಆರಂಭದಲ್ಲೇ ಬಿಜೆಪಿಯು ಮನಗಂಡಂತಿದೆ. ಆದಕಾರಣ ಶಿಕ್ಷಿತ ಸಮುದಾಯವನ್ನು ಬಿಟ್ಟು ಇತರೆ ಮತ ಗುಂಪುಗಳ ಬಗ್ಗೆ ಗಮನ ಹರಿಸಿದೆ.

ಆಗ ಮೂರು ಮತ ಗುಂಪುಗಳು ಬಹುಮುಖ್ಯವಾಗಿರುವುದು ಗೋಚರಿಸುತ್ತದೆ ಮತ್ತು ಅದು ಬಿಜೆಪಿಯ ಪರ ಮತಗಳು ಬೀಳುವುದನ್ನು ಖಾತ್ರಿಪಡಿಸಿದ್ದು ಕಂಡುಬರುತ್ತದೆ.

ಒಂದು, ಒಟ್ಟು ಮತದಾರರಲ್ಲಿ ಸುಮಾರು 80%ರಷ್ಟಿರುವವರು ಬಡ ಕುಟುಂಬಗಳು. ಇನ್ನುಳಿದ 20% ಮತದಾರರಲ್ಲಿ ಅರ್ಧದಷ್ಟು ಮಾತ್ರ (10%) ಯಾವ ಪಕ್ಷವನ್ನು ಬೆಂಬಲಿಸಬೇಕು ಎಂಬುದರ ಬಗ್ಗೆ ಸ್ಪಷ್ಟ ನಿಲುವುಗಳನ್ನು ಹೊಂದಿದ್ದು ಇನ್ನುಳಿದ 10% ಮತದಾರರು ಯಾವುದೇ ಪಕ್ಷಕ್ಕೂ ಮತ ಚಲಾಯಿಸುವವರಾಗಿದ್ದರು. (ಅಂದರೆ ಬೇರೆಬೇರೆ ಪ್ರಭಾವಕ್ಕೆ ಒಳಗಾಗುವಂತವರು.) ಎರಡನೆಯದಾಗಿ, ನಿರೀಕ್ಷೆಯಂತೆಯೇ, ಸಾಮೂಹಿಕ ನಿರುದ್ಯೋಗದ ಸಮಸ್ಯೆಯ ಮತ್ತು ನೌಕರಿಗಳು ಸೃಷ್ಟಿಯಾಗದ ಹಿನ್ನೆಲೆಯಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿದ್ದ ಯುವಕರಲ್ಲಿ ಹಿಂಸಾತ್ಮಕ ಭಾವನೆಗಳನ್ನು ಬಳಸಿ ಕೆರಳಿಸಬಹುದು ಎಂಬುದನ್ನು ಮನಗಂಡಿದ್ದು ಮತ್ತು ಮೂರನೆಯದಾಗಿ, ಹಿಂಸೆಯ ನಿರಂತರ ಮುಂದುವರೆಸುವಿಕೆಯು, ಅಪಾಯಕ್ಕೆ ತುತ್ತಾಗಬಹುದಾದ ಸಮುದಾಯಗಳನ್ನು ಶರಣಾಗತಿ ಕಡೆಗೆ ಮತ್ತು ಮೆಚ್ಚುಗೆ ವ್ಯಕ್ತಪಡಿಸುವುದಕ್ಕೆ ಕಾರಣವಾಗುತ್ತದೆ.

ಇಲ್ಲಿ ನಾವು ಬಡತನದ ವ್ಯಾಪಕತೆ ಮತ್ತು ಕೊರೊನಾದ ಕಾರಣದಿಂದಾಗಿ ಅದು ಇನ್ನಷ್ಟು ಸಂಕಿರ್ಣಗೊಂಡಿದ್ದನ್ನು ಮನಗಾಣಬಹುದು. ಬಡತನವು, ಎಂತಹದ್ದೇ ಸಂದರ್ಭದಲ್ಲೂ ಯಾವ ಕುಟುಂಬವು ಅಪೇಕ್ಷಿಸುವಂತಹದ್ದಲ್ಲ. ಭ್ರಷ್ಟಾಚಾರದಿಂದಾಗಿ ಅವಕಾಶಗಳು ಸಮವಾಗಿ ಹಂಚಿಕೆಯಾಗುವುದಿಲ್ಲ ಎಂಬುದರ ಜೊತೆಗೆ ಆದಾಯ ಗಳಿಕೆಗೆ ಸರಿಯಾದ ಅವಕಾಶಗಳಿಲ್ಲ ಎಂಬುದೂ ಕೂಡಿ ಬಡತನದ ಸಂಕಷ್ಟಗಳನ್ನು ಬಹಳಷ್ಟು ಉಲ್ಬಣಿಸಿದೆ. ಇದು, ಅಧಿಕಾರ ಒಡ್ಡುವ ಸುಳ್ಳು ಆಶ್ವಾಸನೆಗಳಿಗೆ ಅಥವಾ ತತ್ ಕ್ಷಣದ ಮೋಹಗಳಿಗೆ, ಬಡಕುಟುಂಬಗಳ ಮತ ಚಲಾಯಿಸುವ ಹಕ್ಕು ಮತ್ತು ಅದರೊಳಗಿನ ಆಯ್ಕೆಗಳನ್ನು ಅತೀ ಸುಲಭವಾಗಿ ತುತ್ತಾಗಿಸುತ್ತವೆ. ಕಳೆದ ಎರಡು ವರ್ಷಗಳ ಕೋವಿಡ್ ಸಾಂಕ್ರಾಮಿಕವು ಆಹಾರ ಮತ್ತು ಆರೋಗ್ಯವೆಂಬ ದಿನನಿತ್ಯ ಜೀವನದ ಸಮಸ್ಯೆಗಳಿಂದ ಬಡ ಕುಟುಂಬಗಳು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ. ತಮ್ಮ ಜೀವನದ ಸಂಕಷ್ಟಗಳನ್ನು ಎದುರಿಸುವ ತಾಕತ್ತು ಈ ಹಿಂದೆ ಅಷ್ಟಿಷ್ಟೋ ಇದ್ದಿದ್ದನ್ನು ಸಾಂಕ್ರಾಮಿಕವು ಕಿತ್ತುಕೊಂಡಿದೆ.

ಅಧಿಕಾರದಲ್ಲಿದ್ದರಿಂದ ಆದ ಅನುಕೂಲಗಳು ಇವೇ ಆಗಿವೆ – ಸಂಕಷ್ಟದಲ್ಲಿದ್ದ 80% ಮತದಾರರಿಗೆ ಆ ತಕ್ಷಣಕ್ಕೆ ಬೇಕಿರುವ ಅಗತ್ಯಗಳನ್ನು ಪೂರೈಸಿದರೆ ಅವರ ಮತಗಳನ್ನು ಒಲಿಸಿಕೊಳ್ಳುವುದು ಕಷ್ಟವಲ್ಲ; ಹೇಗಿದ್ದರೂ ಬಡವರು ಹೊತ್ತಿಂದಹೊತ್ತಿಗೆ ತಾನೇ ಬದುಕುವುದು! ಸಾಂಕ್ರಾಮಿಕದೊಂದಿಗೆ ಬಡತನವೂ ಸೇರಿರುವುದರಿಂದ ಯಾವುದೇ ರಾಜಕೀಯ ಪಕ್ಷವಾಗಲೀ ಬಡವರ ಆಯ್ಕೆಗಳ ಖರೀದಿಗೆ ಮುಂದಾಗುವಂತೆ ಮಾಡುತ್ತದೆ. ’ಬಹುಸಂಖ್ಯಾತ’ 80% ಜನರಿಗೆ ಅತೀ ಹೆಚ್ಚು ಹಣ ಹಂಚುವ ಪಕ್ಷವು, ಚುನಾವಣಾ ಫಲಿತಾಂಶದ ವೇಳೆಗೆ ಜನರ ಆಯ್ಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಆದಕಾರಣ, ಮಣಿಪುರದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶವನ್ನು ನಿರ್ಣಯಿಸಿದ ಮೂರು ಅಂಶಗಳೆಂದರೆ – ಬಡತನ, ಸಾಂಕ್ರಾಮಿಕ ಮತ್ತು ಗೌಪ್ಯ ಮಾರುಕಟ್ಟೆಯಲ್ಲಿ ನಡೆದ ಮತಗಳ ಕೊಳ್ಳುವಿಕೆ. ಸಂವಿಧಾನವು ಸಮಾನತೆಯನ್ನು ಉಲ್ಲೇಖಿಸಿದರೂ, ಅತೀ ಹೆಚ್ಚು ವ್ಯಾಪಕವಾಗಿರುವ ಬಡತನದ ವಾಸ್ತವತೆಯು ಅಧಿಕಾರಸ್ಥರು ಆ ಹೊತ್ತಿನ ಸಾಮಾಜಿಕ ಭ್ರಷ್ಟಾಚಾರದಲ್ಲಿ ತೊಡಗುವಂತೆ ಮಾಡಿ, ಪ್ರಜಾಪ್ರಭುತ್ವದ ಅತೀ ಮುಖ್ಯ ಪ್ರಕ್ರಿಯೆಯಲ್ಲಿ ಗೆಲುವು ಸಾಧಿಸಲು ಕಾರಣವಾಗುತ್ತದೆ. ಆದ್ದರಿಂದ, ಅಧಿಕಾರದಲ್ಲಿರುವ ಜನರಿಗೆ ಮತ್ತು ಮುಂದೆ ಅಧಿಕಾರ ಹಿಡಿಯಬೇಕಾದ ಜನರ ಹಿತಾಸಕ್ತಿಯು ಬಡತನದ ಮುಂದುವರಿಕೆಯನ್ನು ಬಯಸುತ್ತವೆ. ಬಡತನದ ಜೊತೆ ಸಾಂಕ್ರಾಮಿಕವೂ ಕೂಡಿ ಅಧಿಕಾರಸ್ಥರು ಸಾಮಾಜಿಕ ಭ್ರಷ್ಟಾಚಾರದಲ್ಲಿ ತೊಡಗಲು ಬಯಸಿದಷ್ಟು ಹೆಚ್ಚೆಚ್ಚು ಒಳ್ಳೆಯ ಸಂದರ್ಭವನ್ನು ಒದಗಿಸಿಕೊಡುತ್ತದೆ. ಇಂತಹ ಸಂದರ್ಭಗಳಲ್ಲಿ ಯಾವುದೇ ಬಡವ ಕೂಡ ತಾನು ಹೊಂದಿರುವ ಯಾವುದೇ ಮಹತ್ವದ ಮತ್ತು ವಿರಳ ಶಕ್ತಿಯಾದ, ಐದು ವರ್ಷಕ್ಕೊಮ್ಮೆ ಮಾತ್ರ ಸಿಗುವ ಮತ ಚಲಾಯಿಸುವ ಹಕ್ಕನ್ನೂ ಮಾರುಕಟ್ಟೆಯಲ್ಲಿ ಅತಿಹೆಚ್ಚು ಬೆಲೆಗೆ ಮಾರಿಕೊಳ್ಳಲು
ಉತ್ಸುಕನಾಗಿರುತ್ತಾನೆ. ಆದ್ದರಿಂದ ಮತಗಳನ್ನು ಕೊಳ್ಳಲು ಮಾರುಕಟ್ಟೆಯೂ ಆ ಕ್ಷಣವೇ ಸೃಷ್ಟಿಯಾಗುತ್ತದೆ. ಇದರಲ್ಲಿ, ಮತಗಳಿಗೆ ಅತೀ ಹೆಚ್ಚು ಬೆಲೆ ಕೂಗುವವನು ಅವನ್ನು ಪಡೆದುಕೊಳ್ಳುತ್ತಾನೆ.

ಆದ್ದರಿಂದ, ಮಣಿಪುರದ ಚುನಾವಣೆಯ ಫಲಿತಾಂಶವು ನಮಗೆ ತಿಳಿಸುವ ಪಾಠ ಇಂತಿದೆ: ಚುನಾವಣೆಯ ಹಿತಾಸಕ್ತಿಗಾಗಿ ಬಡತನವನ್ನು ’ಮುಂದುವರೆಸಬೇಕಾಗುತ್ತದೆ’ ಮತ್ತು ಅಧಿಕಾರಸ್ಥ ವರ್ಗವು ಬಡತನವನ್ನು ಮುಂದುವರೆಸಲು ಸಾಧ್ಯವಾದರೆ ಆಡಳಿತದ ಗುಣಮಟ್ಟ ಮತ್ತು ರೀತಿ-ನೀತಿಗಳ ಬಗ್ಗೆ ಚಿಂತಿಸುವ ಯಾವುದೇ ಅಗತ್ಯವಿಲ್ಲ. ಪ್ರಜಾಪ್ರಭುತ್ವದ ಜ್ವಲಂತ ಸಮಸ್ಯೆಗಳನ್ನು ಮುಂದೆ ರಚಿಸಲಾಗುವ ಸರ್ಕಾರವು ನೀಡುವ ಅನುದಾನದಿಂದ ನಡೆಸಲಾಗುವ ವಿಚಾರ ಸಂಕಿರಣದಲ್ಲಿ ಚರ್ಚಿಸಿಕೊಳ್ಳೋಣ!

ಕನ್ನಡಕ್ಕೆ: ಶಶಾಂಕ್

ಪ್ರೊ. ಅಮರ್ ಯುಮ್ನಮ್

ಪ್ರೊ. ಅಮರ್ ಯುಮ್ನಮ್
ಮಣಿಪುರ ವಿಶ್ವವಿದ್ಯಾಲಯದ ನಿವೃತ್ತ ಉಪ ಕುಲಪತಿಗಳು ಮತ್ತು ಅರ್ಥಶಾಸ್ತ್ರ ಪ್ರಾಧ್ಯಾಪಕರು


ಇದನ್ನೂ ಓದಿ: ರಾಜಕೀಯ ಪಕ್ಷಗಳು ಚುನಾವಣಾ ಭರವಸೆಗಳನ್ನು ಈಡೇರಿಸದಿದ್ದರೆ ದಂಡ ವಿಧಿಸಲು ಸಾಧ್ಯವಿಲ್ಲ: ಅಲಹಾಬಾದ್ ಹೈಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...