Homeಮುಖಪುಟಬಡತನ, ಸಾಂಕ್ರಾಮಿಕ ಮತ್ತು ಮತ ಮಾರಾಟ; ಮಣಿಪುರ ಚುನಾವಣೆ 2022

ಬಡತನ, ಸಾಂಕ್ರಾಮಿಕ ಮತ್ತು ಮತ ಮಾರಾಟ; ಮಣಿಪುರ ಚುನಾವಣೆ 2022

- Advertisement -
- Advertisement -

ಮಣಿಪುರದಲ್ಲಿ ಇತ್ತೀಚಿಗೆ ನಡೆದ ಚುನಾವಣೆಯ ಫಲಿತಾಂಶವು, ಎಲ್ಲ ವಯೋಮಾನದ ಶಿಕ್ಷಿತ ಸಮುದಾಯವನ್ನು ಅಚ್ಚರಿ ಮತ್ತು ಆಳವಾದ ಆತ್ಮಾವಲೋಕನಕ್ಕೆ ದೂಡಿದೆ. ಚುನಾವಣಾ ಫಲಿತಾಂಶವು ನೈಜ ಜಗತ್ತಿನ ಅನುಭವವಾಗಿದ್ದು, ಶಿಕ್ಷಿತ ಮತ್ತು ಬುದ್ಧಿಜೀವಿ ವರ್ಗಗಳು ಈಗ ಈ ಅನಿರೀಕ್ಷಿತ ಫಲಿತಾಂಶಕ್ಕೆ ಸರಿಹೊಂದುವ ರೀತಿಯ ವ್ಯಾಖ್ಯಾನಗಳನ್ನು ಮತ್ತು ಕಾರಣಗಳನ್ನು ಹುಡುಕುವಲ್ಲಿ ನಿರತವಾಗಿವೆ.

ಚುನಾವಣೆಗಳು ಪ್ರಜಾಪ್ರಭುತ್ವದಲ್ಲಿನ ಪ್ರಕ್ರಿಯೆಯಾಗಿ, ಅತಿ ಕಡಿಮೆ ಸಮಯದಲ್ಲಿ ಬಹಳ ಆಳವಾದ ಮತ್ತು ವಿಸ್ತಾರವಾದ ಬದಲಾವಣೆಯ ಚಲನಶೀಲ ಶಕ್ತಿಯನ್ನು ಹೊಂದಿರುವ ಪ್ರಕ್ರಿಯೆಗಳಾಗಿವೆ. ಚುನಾವಣೆ ನಡೆದ ದಿನಗಳನ್ನು ಮತ್ತು ಅದರ ಹಿಂದಿನ ಕೆಲವು ದಿನಗಳನ್ನು ಮಣಿಪುರದಲ್ಲಿ ಈ ಹಿಂದೆಂದೂ ಕಾಣದಿದ್ದಷ್ಟು ಹಿಂಸೆಯ ದಿನಗಳನ್ನಾಗಿ ಗುರುತಿಸಬಹುದಾಗಿದೆ. ಇದರಲ್ಲಿ ಮೂರು ಅಂಶಗಳಿವೆ. ಮೊದಲನೆಯದಾಗಿ, ಬಿಜೆಪಿಯ ಮತ್ತು ಆಡಳಿತಾರೂಢ ಪಕ್ಷದ ಸದಸ್ಯರುಗಳಾಗಿ ಧಮ್ಕಿಯ-ಬೆದರಿಕೆಯ ರೀತಿಯ ಭಾಷಾಪ್ರಯೋಗವನ್ನು ಯಾವುದೇ ಅಂಜಿಕೆಯಿಲ್ಲದೆ ಮಾಡಿದ್ದು ಮತ್ತು ಅದನ್ನು ಕಾರ್ಯರೂಪಕ್ಕೂ ತಂದಿದ್ದು. ಎರಡನೆಯದಾಗಿ, ಬಹಳಷ್ಟು ಪ್ರಕರಣಗಳಲ್ಲಿ, ಈ ರೀತಿಯ ಹಲ್ಲೆಗಳಿಗೆ ಒಳಗಾಗಿದ್ದು ಹಿಂಸೆಗೆ ಹೆಸರಾದ ಕ್ಷೇತ್ರಗಳಲ್ಲಿ ಮತ್ತು ಬಿಜೆಪಿಯ ವಿರುದ್ಧವಾಗಿ ಸಮರ್ಥ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಿದ್ದ ಪಕ್ಷಗಳ ನಾಯಕರು ಮತ್ತು ಬೆಂಬಲಿಗರು. ಮೂರನೆಯದಾಗಿ, ತನ್ನ ಚುನಾವಣಾ ಪ್ರಣಾಳಿಕೆಯನ್ನು ಕೊನೆಯ ಕ್ಷಣದವರೆಗೂ ಬಿಡುಗಡೆಗೊಳಿಸದೆ ವಿಳಂಬಿಸುವ ಮೂಲಕ ಬಿಜೆಪಿ ಮುಕ್ತ ಸಾರ್ವಜನಿಕ ಚರ್ಚೆಗಳ ಸಾಧ್ಯತೆಗಳನ್ನು ಕ್ಷೀಣಗೊಳಿಸಿತು ಮತ್ತು ಬಿಜೆಪಿಯನ್ನು ಒಂದು ರಾಜಕೀಯ ಪಕ್ಷವೆಂದಾಗಲೀ ಅಥವಾ ಸರ್ಕಾರವನ್ನು ಮುನ್ನಡೆಸುತ್ತಿದ್ದ ಪಕ್ಷವೆಂದಾಗಲಿ ತಿಳಿದು ಅದರ ನಿಲುವುಗಳನ್ನು, ಸಾಧನೆಯನ್ನು ಮೌಲ್ಯಮಾಪನಕ್ಕೆ ಒಳಪಡಿಸುವುದನ್ನು ತಡೆಹಿಡಿಯಲಾಯಿತು.

ಬೆದರಿಕೆ-ಧಮ್ಕಿ ಮತ್ತು ಹಲ್ಲೆ-ಹಿಂಸೆಗಳನ್ನು ಹಿಂದೆಂದೂ ಕಂಡರಿಯದ ಪ್ರಮಾಣದಲ್ಲಿ ಬಳಸಿ ಚುನಾವಣೆಯ ಫಲಿತಾಂಶಗಳನ್ನು ಬದಲಾಯಿಸುವ ಕಾರ್ಯತಂತ್ರದ ಹಿನ್ನೆಲೆಯಲ್ಲಿ, ಶಿಕ್ಷಿತ ಮತ್ತು ತಿಳಿವಳಿಕೆಯುಳ್ಳ ಮತದಾರರಲ್ಲಿ ಬಹುತೇಕರು ಬಿಜೆಪಿಯು ಮತ್ತೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವುದು ಅನುಮಾನ ಎಂದೇ ಭಾವಿಸಿದ್ದರು. ಯಾವುದೇ ಪಕ್ಷ ಸರಳ ಬಹುಮತ ಸಾಧಿಸದೆ ಅತಂತ್ರ ವಿಧಾನಸಭೆಗೆ ಕಾರಣವಾಗುತ್ತದೆಯೆಂದೂ, ಅದರಲ್ಲೂ, 60 ಕ್ಷೇತ್ರಗಳಲ್ಲಿ ಬಿಜೆಪಿ ಕೇವಲ 15ರಲ್ಲಿ ಗೆಲುವು ಸಾಧಿಸುವುದೆಂದೇ ಬಹಳಷ್ಟು ಲೆಕ್ಕಾಚಾರಗಳು ಸೂಚಿಸಿದ್ದವು. ಆದರೆ 60 ಕ್ಷೇತ್ರಗಳಲ್ಲಿ 32ನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಬಿಜೆಪಿಯು ಸರಳ ಬಹುಮತ ಸಾಧಿಸಿದೆ.

ಶಿಕ್ಷಿತ ಮತ್ತು ತಿಳಿದ ಎಲೈಟ್ ವರ್ಗದ ನಿರೀಕ್ಷೆಯು ಪೂರಾಪೂರ ಹುಸಿಯಾಗಿರುವುದು, ಈ ವರ್ಗದ ಜನರಲ್ಲಿ ಸಾಮಾನ್ಯ ಮತದಾರರ ಮನಸನ್ನು ಪ್ರಭಾವಿಸಿರುವುದು ಏನೆಂಬ ಯಕ್ಷಪ್ರಶ್ನೆಯೊಂದು ಮೂಡಿ ಕಾಡುತ್ತಿದೆ. ಇಲ್ಲಿ, ಸೂಕ್ಷ್ಮವಾಗಿ ಗಮನಿಸಿದರೆ, ಈ ಪ್ರಭಾವವು ಕೆಲಸ ಮಾಡಿರುವುದು ಮತದಾನ ನಡೆದ ಎರಡು ಹಂತಗಳ ಮುಂಚಿನ ಸುಮಾರು 5-6 ದಿನಗಳಲ್ಲಿ ಮಾತ್ರ ಎಂಬುದು ತಿಳಿಯುತ್ತದೆ. ಶಿಕ್ಷಿತ ಸಮುದಾಯವು ತಮ್ಮನ್ನು ಬೆಂಬಲಿಸುತ್ತಿಲ್ಲ ಎಂಬುದನ್ನು ಆರಂಭದಲ್ಲೇ ಬಿಜೆಪಿಯು ಮನಗಂಡಂತಿದೆ. ಆದಕಾರಣ ಶಿಕ್ಷಿತ ಸಮುದಾಯವನ್ನು ಬಿಟ್ಟು ಇತರೆ ಮತ ಗುಂಪುಗಳ ಬಗ್ಗೆ ಗಮನ ಹರಿಸಿದೆ.

ಆಗ ಮೂರು ಮತ ಗುಂಪುಗಳು ಬಹುಮುಖ್ಯವಾಗಿರುವುದು ಗೋಚರಿಸುತ್ತದೆ ಮತ್ತು ಅದು ಬಿಜೆಪಿಯ ಪರ ಮತಗಳು ಬೀಳುವುದನ್ನು ಖಾತ್ರಿಪಡಿಸಿದ್ದು ಕಂಡುಬರುತ್ತದೆ.

ಒಂದು, ಒಟ್ಟು ಮತದಾರರಲ್ಲಿ ಸುಮಾರು 80%ರಷ್ಟಿರುವವರು ಬಡ ಕುಟುಂಬಗಳು. ಇನ್ನುಳಿದ 20% ಮತದಾರರಲ್ಲಿ ಅರ್ಧದಷ್ಟು ಮಾತ್ರ (10%) ಯಾವ ಪಕ್ಷವನ್ನು ಬೆಂಬಲಿಸಬೇಕು ಎಂಬುದರ ಬಗ್ಗೆ ಸ್ಪಷ್ಟ ನಿಲುವುಗಳನ್ನು ಹೊಂದಿದ್ದು ಇನ್ನುಳಿದ 10% ಮತದಾರರು ಯಾವುದೇ ಪಕ್ಷಕ್ಕೂ ಮತ ಚಲಾಯಿಸುವವರಾಗಿದ್ದರು. (ಅಂದರೆ ಬೇರೆಬೇರೆ ಪ್ರಭಾವಕ್ಕೆ ಒಳಗಾಗುವಂತವರು.) ಎರಡನೆಯದಾಗಿ, ನಿರೀಕ್ಷೆಯಂತೆಯೇ, ಸಾಮೂಹಿಕ ನಿರುದ್ಯೋಗದ ಸಮಸ್ಯೆಯ ಮತ್ತು ನೌಕರಿಗಳು ಸೃಷ್ಟಿಯಾಗದ ಹಿನ್ನೆಲೆಯಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿದ್ದ ಯುವಕರಲ್ಲಿ ಹಿಂಸಾತ್ಮಕ ಭಾವನೆಗಳನ್ನು ಬಳಸಿ ಕೆರಳಿಸಬಹುದು ಎಂಬುದನ್ನು ಮನಗಂಡಿದ್ದು ಮತ್ತು ಮೂರನೆಯದಾಗಿ, ಹಿಂಸೆಯ ನಿರಂತರ ಮುಂದುವರೆಸುವಿಕೆಯು, ಅಪಾಯಕ್ಕೆ ತುತ್ತಾಗಬಹುದಾದ ಸಮುದಾಯಗಳನ್ನು ಶರಣಾಗತಿ ಕಡೆಗೆ ಮತ್ತು ಮೆಚ್ಚುಗೆ ವ್ಯಕ್ತಪಡಿಸುವುದಕ್ಕೆ ಕಾರಣವಾಗುತ್ತದೆ.

ಇಲ್ಲಿ ನಾವು ಬಡತನದ ವ್ಯಾಪಕತೆ ಮತ್ತು ಕೊರೊನಾದ ಕಾರಣದಿಂದಾಗಿ ಅದು ಇನ್ನಷ್ಟು ಸಂಕಿರ್ಣಗೊಂಡಿದ್ದನ್ನು ಮನಗಾಣಬಹುದು. ಬಡತನವು, ಎಂತಹದ್ದೇ ಸಂದರ್ಭದಲ್ಲೂ ಯಾವ ಕುಟುಂಬವು ಅಪೇಕ್ಷಿಸುವಂತಹದ್ದಲ್ಲ. ಭ್ರಷ್ಟಾಚಾರದಿಂದಾಗಿ ಅವಕಾಶಗಳು ಸಮವಾಗಿ ಹಂಚಿಕೆಯಾಗುವುದಿಲ್ಲ ಎಂಬುದರ ಜೊತೆಗೆ ಆದಾಯ ಗಳಿಕೆಗೆ ಸರಿಯಾದ ಅವಕಾಶಗಳಿಲ್ಲ ಎಂಬುದೂ ಕೂಡಿ ಬಡತನದ ಸಂಕಷ್ಟಗಳನ್ನು ಬಹಳಷ್ಟು ಉಲ್ಬಣಿಸಿದೆ. ಇದು, ಅಧಿಕಾರ ಒಡ್ಡುವ ಸುಳ್ಳು ಆಶ್ವಾಸನೆಗಳಿಗೆ ಅಥವಾ ತತ್ ಕ್ಷಣದ ಮೋಹಗಳಿಗೆ, ಬಡಕುಟುಂಬಗಳ ಮತ ಚಲಾಯಿಸುವ ಹಕ್ಕು ಮತ್ತು ಅದರೊಳಗಿನ ಆಯ್ಕೆಗಳನ್ನು ಅತೀ ಸುಲಭವಾಗಿ ತುತ್ತಾಗಿಸುತ್ತವೆ. ಕಳೆದ ಎರಡು ವರ್ಷಗಳ ಕೋವಿಡ್ ಸಾಂಕ್ರಾಮಿಕವು ಆಹಾರ ಮತ್ತು ಆರೋಗ್ಯವೆಂಬ ದಿನನಿತ್ಯ ಜೀವನದ ಸಮಸ್ಯೆಗಳಿಂದ ಬಡ ಕುಟುಂಬಗಳು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ. ತಮ್ಮ ಜೀವನದ ಸಂಕಷ್ಟಗಳನ್ನು ಎದುರಿಸುವ ತಾಕತ್ತು ಈ ಹಿಂದೆ ಅಷ್ಟಿಷ್ಟೋ ಇದ್ದಿದ್ದನ್ನು ಸಾಂಕ್ರಾಮಿಕವು ಕಿತ್ತುಕೊಂಡಿದೆ.

ಅಧಿಕಾರದಲ್ಲಿದ್ದರಿಂದ ಆದ ಅನುಕೂಲಗಳು ಇವೇ ಆಗಿವೆ – ಸಂಕಷ್ಟದಲ್ಲಿದ್ದ 80% ಮತದಾರರಿಗೆ ಆ ತಕ್ಷಣಕ್ಕೆ ಬೇಕಿರುವ ಅಗತ್ಯಗಳನ್ನು ಪೂರೈಸಿದರೆ ಅವರ ಮತಗಳನ್ನು ಒಲಿಸಿಕೊಳ್ಳುವುದು ಕಷ್ಟವಲ್ಲ; ಹೇಗಿದ್ದರೂ ಬಡವರು ಹೊತ್ತಿಂದಹೊತ್ತಿಗೆ ತಾನೇ ಬದುಕುವುದು! ಸಾಂಕ್ರಾಮಿಕದೊಂದಿಗೆ ಬಡತನವೂ ಸೇರಿರುವುದರಿಂದ ಯಾವುದೇ ರಾಜಕೀಯ ಪಕ್ಷವಾಗಲೀ ಬಡವರ ಆಯ್ಕೆಗಳ ಖರೀದಿಗೆ ಮುಂದಾಗುವಂತೆ ಮಾಡುತ್ತದೆ. ’ಬಹುಸಂಖ್ಯಾತ’ 80% ಜನರಿಗೆ ಅತೀ ಹೆಚ್ಚು ಹಣ ಹಂಚುವ ಪಕ್ಷವು, ಚುನಾವಣಾ ಫಲಿತಾಂಶದ ವೇಳೆಗೆ ಜನರ ಆಯ್ಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಆದಕಾರಣ, ಮಣಿಪುರದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶವನ್ನು ನಿರ್ಣಯಿಸಿದ ಮೂರು ಅಂಶಗಳೆಂದರೆ – ಬಡತನ, ಸಾಂಕ್ರಾಮಿಕ ಮತ್ತು ಗೌಪ್ಯ ಮಾರುಕಟ್ಟೆಯಲ್ಲಿ ನಡೆದ ಮತಗಳ ಕೊಳ್ಳುವಿಕೆ. ಸಂವಿಧಾನವು ಸಮಾನತೆಯನ್ನು ಉಲ್ಲೇಖಿಸಿದರೂ, ಅತೀ ಹೆಚ್ಚು ವ್ಯಾಪಕವಾಗಿರುವ ಬಡತನದ ವಾಸ್ತವತೆಯು ಅಧಿಕಾರಸ್ಥರು ಆ ಹೊತ್ತಿನ ಸಾಮಾಜಿಕ ಭ್ರಷ್ಟಾಚಾರದಲ್ಲಿ ತೊಡಗುವಂತೆ ಮಾಡಿ, ಪ್ರಜಾಪ್ರಭುತ್ವದ ಅತೀ ಮುಖ್ಯ ಪ್ರಕ್ರಿಯೆಯಲ್ಲಿ ಗೆಲುವು ಸಾಧಿಸಲು ಕಾರಣವಾಗುತ್ತದೆ. ಆದ್ದರಿಂದ, ಅಧಿಕಾರದಲ್ಲಿರುವ ಜನರಿಗೆ ಮತ್ತು ಮುಂದೆ ಅಧಿಕಾರ ಹಿಡಿಯಬೇಕಾದ ಜನರ ಹಿತಾಸಕ್ತಿಯು ಬಡತನದ ಮುಂದುವರಿಕೆಯನ್ನು ಬಯಸುತ್ತವೆ. ಬಡತನದ ಜೊತೆ ಸಾಂಕ್ರಾಮಿಕವೂ ಕೂಡಿ ಅಧಿಕಾರಸ್ಥರು ಸಾಮಾಜಿಕ ಭ್ರಷ್ಟಾಚಾರದಲ್ಲಿ ತೊಡಗಲು ಬಯಸಿದಷ್ಟು ಹೆಚ್ಚೆಚ್ಚು ಒಳ್ಳೆಯ ಸಂದರ್ಭವನ್ನು ಒದಗಿಸಿಕೊಡುತ್ತದೆ. ಇಂತಹ ಸಂದರ್ಭಗಳಲ್ಲಿ ಯಾವುದೇ ಬಡವ ಕೂಡ ತಾನು ಹೊಂದಿರುವ ಯಾವುದೇ ಮಹತ್ವದ ಮತ್ತು ವಿರಳ ಶಕ್ತಿಯಾದ, ಐದು ವರ್ಷಕ್ಕೊಮ್ಮೆ ಮಾತ್ರ ಸಿಗುವ ಮತ ಚಲಾಯಿಸುವ ಹಕ್ಕನ್ನೂ ಮಾರುಕಟ್ಟೆಯಲ್ಲಿ ಅತಿಹೆಚ್ಚು ಬೆಲೆಗೆ ಮಾರಿಕೊಳ್ಳಲು
ಉತ್ಸುಕನಾಗಿರುತ್ತಾನೆ. ಆದ್ದರಿಂದ ಮತಗಳನ್ನು ಕೊಳ್ಳಲು ಮಾರುಕಟ್ಟೆಯೂ ಆ ಕ್ಷಣವೇ ಸೃಷ್ಟಿಯಾಗುತ್ತದೆ. ಇದರಲ್ಲಿ, ಮತಗಳಿಗೆ ಅತೀ ಹೆಚ್ಚು ಬೆಲೆ ಕೂಗುವವನು ಅವನ್ನು ಪಡೆದುಕೊಳ್ಳುತ್ತಾನೆ.

ಆದ್ದರಿಂದ, ಮಣಿಪುರದ ಚುನಾವಣೆಯ ಫಲಿತಾಂಶವು ನಮಗೆ ತಿಳಿಸುವ ಪಾಠ ಇಂತಿದೆ: ಚುನಾವಣೆಯ ಹಿತಾಸಕ್ತಿಗಾಗಿ ಬಡತನವನ್ನು ’ಮುಂದುವರೆಸಬೇಕಾಗುತ್ತದೆ’ ಮತ್ತು ಅಧಿಕಾರಸ್ಥ ವರ್ಗವು ಬಡತನವನ್ನು ಮುಂದುವರೆಸಲು ಸಾಧ್ಯವಾದರೆ ಆಡಳಿತದ ಗುಣಮಟ್ಟ ಮತ್ತು ರೀತಿ-ನೀತಿಗಳ ಬಗ್ಗೆ ಚಿಂತಿಸುವ ಯಾವುದೇ ಅಗತ್ಯವಿಲ್ಲ. ಪ್ರಜಾಪ್ರಭುತ್ವದ ಜ್ವಲಂತ ಸಮಸ್ಯೆಗಳನ್ನು ಮುಂದೆ ರಚಿಸಲಾಗುವ ಸರ್ಕಾರವು ನೀಡುವ ಅನುದಾನದಿಂದ ನಡೆಸಲಾಗುವ ವಿಚಾರ ಸಂಕಿರಣದಲ್ಲಿ ಚರ್ಚಿಸಿಕೊಳ್ಳೋಣ!

ಕನ್ನಡಕ್ಕೆ: ಶಶಾಂಕ್

ಪ್ರೊ. ಅಮರ್ ಯುಮ್ನಮ್

ಪ್ರೊ. ಅಮರ್ ಯುಮ್ನಮ್
ಮಣಿಪುರ ವಿಶ್ವವಿದ್ಯಾಲಯದ ನಿವೃತ್ತ ಉಪ ಕುಲಪತಿಗಳು ಮತ್ತು ಅರ್ಥಶಾಸ್ತ್ರ ಪ್ರಾಧ್ಯಾಪಕರು


ಇದನ್ನೂ ಓದಿ: ರಾಜಕೀಯ ಪಕ್ಷಗಳು ಚುನಾವಣಾ ಭರವಸೆಗಳನ್ನು ಈಡೇರಿಸದಿದ್ದರೆ ದಂಡ ವಿಧಿಸಲು ಸಾಧ್ಯವಿಲ್ಲ: ಅಲಹಾಬಾದ್ ಹೈಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...