Homeಮುಖಪುಟಪತ್ರಿಕಾ ದಿನಾಚರಣೆ: ಕಾವಲುನಾಯಿ ಮಲಗಿದೆ... ಏಳುವುದೆಂತೋ?

ಪತ್ರಿಕಾ ದಿನಾಚರಣೆ: ಕಾವಲುನಾಯಿ ಮಲಗಿದೆ… ಏಳುವುದೆಂತೋ?

- Advertisement -
- Advertisement -

ಭಾರತ ಮುಕ್ತ ಮಾರುಕಟ್ಟೆಗೆ ತೆರೆದುಕೊಂಡ ಬಳಿಕ ಪತ್ರಿಕೋದ್ಯಮ ಭಿನ್ನದಾರಿ ಹಿಡಿದಿದೆ. ಪತ್ರಿಕೋದ್ಯಮದ ಆಶಯಗಳು ಮತ್ತು ಮೌಲ್ಯಗಳು ಮಾರುಕಟ್ಟೆಯ ದಾಳಿಗೆ ಸಿಕ್ಕಿ ನಾಶವಾಗಿವೆ ಮತ್ತು ಹಳ್ಳ ಹಿಡಿದಿವೆ. ಆರಂಭದಲ್ಲಿ ನಿಗದಿಪಡಿಸಿಕೊಂಡಿದ್ದ ಪ್ರಮಾಣಗಳೆಲ್ಲವೂ ಉಲ್ಟಾ ಆಗಿವೆ.. ಸುದ್ದಿಯ ಜಾಗದಲ್ಲಿ ಜಾಹಿರಾತು ಕೂತಿದೆ. ಜಾಹಿರಾತುಗಳಿಗೆ ಮೀಸಲಿಟ್ಟಿದ್ದ ಜಾಗದಲ್ಲಿ ಸುದ್ದಿಗಳು ಪ್ರಕಟವಾಗುತ್ತಿವೆ. ಸುದ್ದಿ ಮೌಲ್ಯ, ಸುದ್ದಿಯ ಖಚಿತತೆ, ಸ್ಪಷ್ಟವಾದ ಸುದ್ದಿ ಜನರಿಗೆ ತಲುಪಿಸಬೇಕೆಂಬ ಸ್ವಾತಂತ್ರ್ಯಾ ನಂತರದ ಆಶಯಗಳು ಮಣ್ಣುಗೂಡಿವೆ.

ಪತ್ರಿಕಾ-ಧರ್ಮ ಮರೆಯಾಗಿ ಹಲವು ವರ್ಷಗಳೇ ಉರುಳಿಹೋಗಿವೆ. ವೃತ್ತಿ ಅಥವಾ ಪತ್ರಿಕಾಧರ್ಮದ ಜಾಗದಲ್ಲಿ ಕೇವಲ ಧರ್ಮವೊಂದು ಬಲವಾಗಿ ಬೇರೂರಿದೆ. ಪರಿಣಾಮ ಸಮಾಜದಲ್ಲಿ ಜನರ ನಡುವೆ ಗಲಭೆಗಳು, ಸಂಘರ್ಷಗಳು, ಹಿಂಸಾವೃತ್ತಿಗಳು ಹೆಚ್ಚಲು ತಲೆದೋತ್ತಿವೆ. ಕಳೆದ ಎರಡು ದಶಕದ ಅವಧಿಯಲ್ಲಿ ಭಾರತ ಅಭಿವೃದ್ಧಿ ದಿಕ್ಕು ಬದಲಾದಂತೆ ಜನಸಾಮಾನ್ಯರ ಸಮಸ್ಯೆಗಳು ಹೆಚ್ಚತೊಡಗಿವೆ. ಈ ಸಮಸ್ಯೆಗಳಿಗೆ ಪರಿಹಾರ ಪೂರಕವಾಗಿ ಬೆಳಕು ಚೆಲ್ಲುವಂತಹ ಕೆಲಸ ಮಾಡಬೇಕಾದ ಪತ್ರಿಕೆಗಳು ತಮ್ಮ ಜವಾಬ್ದಾರಿಯಿಂದ ನುಣಿಚಿಕೊಂಡಿವೆ.

ಪತ್ರಿಕೆಗಳ ಮಾಲಿಕತ್ವ ಬಂಡವಾಳಿಗರ ಕೈಗೆ ಸೇರಿ ಪತ್ರಿಕೆಗಳಲ್ಲಿ ಬರುವ ಸುದ್ದಿಗಳ ಸ್ವರೂಪವೂ ಬದಲಾಗಿದೆ. ಶ್ರೀಮಂತರ ಹುಚ್ಚುಗಳಿಗೆ ಹೆಚ್ಚಿನ ಪ್ರಾಧಾನ್ಯತೆ ದೊರೆಯುತ್ತಿದೆ. ಫ್ಯಾಷನ್, ಕ್ರೈಂ, ಧಾರ್ಮಿಕ ಭಾವನೆಯನ್ನು ಕೆರಳಿಸುವಂತಹ ಸುದ್ದಿಗಳಿಗೆ ಮಹತ್ವ ಬಂದಿದೆ. ಬಂಡವಾಳಿಗರು ತಮಗೆ ಬೇಕಾದಂತೆ ಪತ್ರಿಕೆಗಳನ್ನು ಬಳಸಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಯಾವುದೇ ಸರ್ಕಾರಗಳನ್ನೂ ನಿಯಂತ್ರಿಸುವ ಶಕ್ತಿಯನ್ನು ಬಂಡವಾಳಿಗ ಪತ್ರಿಕೆಗಳು ಹೊಂದಿವೆ.

ಪತ್ರಿಕೆಗಳು ಜನರ ನೋವು, ಸಂಕಟಗಳಿಗೆ ವೇದಿಕೆಯಾಗಬೇಕಿತ್ತು. ರೈತರು ಸಮಸ್ಯೆಗಳಿಗೆ ದನಿಯಂತೆ ಕೆಲಸ ಮಾಡಬೇಕಿತ್ತು. ಕಾರ್ಮಿಕರ ವೇದನೆಗಳನ್ನು ಹೊರಚೆಲ್ಲಬೇಕಿತ್ತು. ಮಹಿಳೆಯರು, ದಲಿತರು ಮತ್ತು ಬಡವರ ಬಗೆಗಿನ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆದು ಪರಿಹಾರ ಒದಗಿಸುವಂತಹ ಮಹತ್ವದ ಕೆಲಸವನ್ನು ಮಾಡಬೇಕಿತ್ತು. ಈ ವಿಷಯಗಳು ತೆರೆ ಮೆರೆಗೆ ಸರಿದಿವೆ. ಮುಕ್ತ ಮಾರುಕಟ್ಟೆಗೆ ಪೂರಕವಾಗಿ ಪತ್ರಿಕೆಗಳು ಕೆಲಸ ಮಾಡುತ್ತಿವೆ. ಧರ್ಮ-ಧರ್ಮಗಳ ನಡುವಿನ ಭಾವನೆಗಳನ್ನು ಕೆರಳಿಸುವಂತಹ ಸುದ್ದಿಗಳಿಗೆ ಪೂರಕ ಸನ್ನಿವೇಶವನ್ನು ಒದಗಿಸಿಕೊಡುತ್ತಿವೆ.

ಮುಕ್ತಮಾರುಕಟ್ಟೆ ಪ್ರವೇಶಕ್ಕೂ ಮೊದಲು ಬಹುತೇಕ ಪತ್ರಿಕೆಗಳು ಉತ್ತಮ ಕೆಲಸ ಮಾಡುತ್ತಿದ್ದವು. ಸರ್ಕಾರಗಳ ಹಗರಣಗಳನ್ನು ಬಯಲು ಮಾಡಿದ್ದವು. ಭ್ರಷ್ಟರ ಕುತಂತ್ರವನ್ನು ಬಹಿರಂಗಪಡಿಸಿದ್ದವು. ಹಲವು ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಬೆವರು ಇಳಿಯುವಂತೆ ಮಾಡಿದ್ದವು. ಹಲವ ಸಚಿವರ ರಾಜಿನಾಮೆಗೆ ಕಾರಣವಾಗಿದ್ದವು. ಸರ್ಕಾರದ ಕಿವಿಯನ್ನು ಹಿಂಡುತ್ತಿದ್ದವು. ಲೋಪಗಳನ್ನು ಎತ್ತಿಹಿಡಿಯುತ್ತಿದ್ದವು. ಆ ಲೋಪಗಳು ಸರಿಪಡಿಸಿ ಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದವು. ಈಗ ಇದ್ಯಾವುದೂ ಇಲ್ಲ.

ದೆಹಲಿಯ ಗಡಿಗಳಲ್ಲಿ ಸಾವಿರಾರು ರೈತರು ಏಳು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಲೇ ಬರುತ್ತಿದ್ದಾರೆ. ಕರಾಳ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಭಾರತ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಅವರ ನೋವನ್ನು ಸಮರ್ಥವಾಗಿ ಪರಿಣಾಮಕಾರಿಯಾಗಿ ಭಾರತ ಸರ್ಕಾರದ ಗಮನಕ್ಕೆ ತರಬೇಕಿತ್ತು. ಪತ್ರಿಕೆಗಳು ಈ ಕೆಲಸವನ್ನು ಮಾಡುವಲ್ಲಿ ಸಂಪೂರ್ಣ ವಿಫಲವಾದವು. ರೈತರ ಕೂಗು ಒಕ್ಕೂಟ ಸರ್ಕಾರದ ಗಿರಿಗೆ ಕೇಳಲೇ ಇಲ್ಲ. ಸರ್ಕಾರದ ಕಿವಿಗೆ ಮುಟ್ಟಿಸಬೇಕಿದ್ದ ಜವಾಬ್ದಾರಿ ಹೊರಬೇಕಿದ್ದ ಪತ್ರಿಕೆಗಳು ಜಾಣ ಮರೆಗುಳಿತನಕ್ಕೆ ಜಾರಿದವು. ಹಾಗಾಗಿ ರೈತರು ಕೂಗು ದೊರೆಯ ಕಿವಿಗೆ ಕೇಳಿಸಲೇ ಇಲ್ಲ. ಯಾಕೆಂದರೆ ಪತ್ರಿಕೆಗಳ ‘ಅವರ’ ಪರವಾಗಿದ್ದವು.

ಪತ್ರಿಕೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರು ಕಾವಲುನಾಯಿಯಂತೆ ಕೆಲಸ ಮಾಡಬೇಕೆಂಬ ಪಾಠ ಈಗಲೂ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಹೇಳಿಕೊಡುವ ಪರಿಪಾಠ ಮುಂದುವರಿದಿದೆ. ಆದರೆ ಕಾವಲುನಾಯಿಗಳು ಕಳೆದೊಂದು ದಶಕದಿಂದ ಮಲಗಿವೆ. ಮಾಲಿಕರು ಮತ್ತು ಬಂಡವಾಳಿಗರು, ಮುಕ್ತಮಾರುಕಟ್ಟೆಯ ಪ್ರತಿನಿಧಿಗಳು ಗಡತ್ತಾಗಿ ಹಾಕುವ ಊಟ ತಿಂದು ಅವು ಮೇಲೆ ಏಳುತ್ತಲೇ ಇಲ್ಲ. ಮಾಲಿಕರು ಬಂದರೆ ಬಾಲ ಅಲ್ಲಾಡಿಸುತ್ತಿವೆ. ಮನೆಗೆ ಕಳ್ಳ ಬಂದರೂ ಬೊಗಳುತ್ತಿಲ್ಲ. ಪತ್ರಕರ್ತರು ಒಂದು ರೀತಿಯಲ್ಲಿ ಮಹಿಳೆಯರ ಪೆಟ್ ಡಾಗ್ ಗಳಂತಿದ್ದಾರೆ. ಕುಯ್ಂಗುಟ್ಟಿಕೊಂಡು ಹೋಗುವುದು, ಬೆಳಗು ಮತ್ತು ಸಂಜೆಯ ವಾಕಿಂಗ್ ಮಾಡುವುದು ಅಷ್ಟೇ ಪೆಟ್ ಡಾಗ್ ಗಳ ಕೆಲಸ. ಅದನ್ನು ಮಾಲಿಕ ಪ್ರಭುಗಳು ವ್ಯವಸ್ಥಿತವಾಗಿ ಮಾಡಿಕೊಂಡು ಬರುತ್ತಿದ್ದಾರೆ.

ಪತ್ರಕರ್ತ ಸ್ವತಂತ್ರವಾಗಿ ಆಲೋಚಿಸುತ್ತಿಲ್ಲ. ಅಂತಹ ಆಲೋಚನೆಗೆ ಅವಕಾಶವೂ ಇಲ್ಲ. ಶಕ್ತಿಕೇಂದ್ರಗಳಲ್ಲಿ ತರಬೇತಿ ಪಡೆದು ಬರುವ ಪತ್ರಕರ್ತರು ಶಕ್ತಿಕೇಂದ್ರಗಳಲ್ಲಿ ಬೋದಿಸಿದ ರೀತಿಯಲ್ಲೇ ವೃತ್ತಿ ಮಾಡುತ್ತಾರೆ. ಇಲ್ಲ ಪತ್ರಿಕಾಧರ್ಮ, ವೃತ್ತಿಧರ್ಮ ಯಾವುದಕ್ಕೂ ಮಾನ್ಯತೆ ಇಲ್ಲ. ಧರ್ಮದ ಪರ, ಸರ್ಕಾರಗಳ ಪರ, ಬಲಿಷ್ಠ ಜಾತಿಗಳ ಪರ ಹೇಗೆ ವಕ್ತಾರಿಕೆ ಮಾಡಬೇಕೆಂಬ ಕಸುಬನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಜಾಗಟೆ ಬಡಿಯಬೇಕು, ಶಂಖ ಊದಬೇಕು. ತಟ್ಟೆ ಬಡಿಯಬೇಕು ಎಂಬ ಸುದ್ದಿಗಳಿಗೆ ಇನ್ನಿಲ್ಲದ ಪ್ರಚಾರ ಸಿಗುತ್ತದೆ. ಇದು ಶಕ್ತಿಕೇಂದ್ರಗಳ ತರಬೇತಿಯ ಪರಿ.

ಕೊರೊನ ಕಾಲದಲ್ಲಿ ಪತ್ರಿಕೆಗಳ ನಡೆದುಕೊಂಡ/ನಡೆದುಕೊಳ್ಳುತ್ತಿರುವ ರೀತಿ ಜನರಿಗೆ ಬೇಸರ ತರಿಸುವಂತೆ ಮಾಡಿದೆ. ದೇಶೀಯ ಸರ್ಕಾರಗಳು ಕೊರೊನಾ ನಿಭಾಯಿಸುವಲ್ಲಿ ವಿಫಲವಾಗಿರುವ ಕುರಿತು ಸುದ್ದಿಗಳೇ ಬರುವುದಿಲ್ಲ. ಬಂದರೂ ತೇಪೆ ಹಾಕಿದಂತೆ ಇರುತ್ತವೆ. ದೇಶೀಯ ತಯಾರಕ ಸಂಸ್ಥೆ ಭಾರತ್ ಬಯೋಟೆಕ್ ನ  ಕೊವಾಕ್ಸಿನ್ ಮತ್ತು ಸೆರೆಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಕೊವಿಶೀಲ್ಡ್ ಲಸಿಕೆಗಳು ಜನರಿಗೆ ಸುಲಭವಾಗಿ ದೊರೆಯುವಂತೆ ಮಾಡಲು ಏನು ಮಾಡಬೇಕೆಂಬ ಬಗ್ಗೆ ವರದಿಗಳನ್ನು ಬಿತ್ತರಿಸಲೇ ಇಲ್ಲ. ಡೋಸ್ ಗಳ ತಯಾರಿಕೆ ಸಾಮರ್ಥ್ಯ, ಲಸಿಕೆ ದೊರಕುವಂತಾಗಲು ಮಾಡಬೇಕಾದ ವೈಜ್ಞಾನಿಕ ಕ್ರಮದ ಬಗ್ಗೆ ಸರ್ಕಾರ ಗಮನ ಹರಿಸಲಿಲ್ಲ. ಉದಾಹರಣೆಗೆ ದೇಶದಲ್ಲಿ 45 ವರ್ಷ ಮೇಲ್ಪಟ್ಟವರು ಎಷ್ಟು ಜನರಿದ್ದಾರೆ? 18 ವರ್ಷದಿಂದ 45 ವರ್ಷದ ಒಳಗಿನ ಜನರು ಎಷ್ಟು ಮಂದಿ ಇದ್ದಾರೆ? ಎಂಟು ವರ್ಷ ಮೇಲ್ಪಟ್ಟು 18 ವರ್ಷದೊಳಗಿನವರು ಎಷ್ಟು ಮಂದಿ ಇದ್ದಾರೆ ಎಂಬ ಬಗ್ಗೆ ಯಾವ ಸರ್ಕಾರಗಳ ಬಳಿಯೂ ಮಾಹಿತಿ ಇರಲಿಲ್ಲವೇ? ಆದರೂ ಏಕೆ ಸಮರ್ಪಕವಾಗಿ ಹೇಳಲಿಲ್ಲ?

ಈಗಲೂ ಈ ಮಾಹಿತಿ ಸರ್ಕಾರದ ಬಳಿ ಇಲ್ಲ. ಸರ್ಕಾರದ ಬಳಿ ಈ ಅಂಕಿಅಂಶಗಳು ಇದ್ದರೆ ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಕಿತ್ತು. ಆ ಕೆಲಸವೂ ಆಗಿಲಿಲ್ಲ. ಬರೀ ಗೊಂದಲಗಳಲ್ಲೇ ಜನರು ಮುಳುಗುವಂತೆ ನೋಡಿಕೊಳ್ಳಲಾಯಿತು. ಸರ್ಕಾರಗಳು ಸೃಷ್ಟಿಸುತ್ತಿರುವ ಗೊಂದಲಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಜವಾಬ್ದಾರಿಯನ್ನು ಪತ್ರಿಕೆಗಳು ಮಾಡಲಿಲ್ಲವೆಂಬುದು ನೋವಿನ ಸಂಗತಿ. ಲಸಿಕೆ ಪಡೆಯುವ ಜನರಿಗೆ ಕ್ರಮಸಂಖ್ಯೆಗಳನ್ನು ನೀಡಿ, ಲಸಿಕಾ ಕೇಂದ್ರಗಳನ್ನು ತೆರೆದು ಯಾವ್ಯಾವ ಲಸಿಕಾ ಕೇಂದ್ರಗಳಿಗೆ ಎಷ್ಟೆಷ್ಟು ಮಂದಿ ಬರಬೇಕು. ಅಲ್ಲಿ ಅವರಿಗೆ ಲಸಿಕೆ ವ್ಯವಸ್ಥಿತವಾಗಿ ಹೇಗೆ ದೊರೆಯುವಂತೆ ಮಾಡಬೇಕೆಂಬ ಬಗ್ಗೆ ಕ್ರಮಗಳನ್ನು ಅನುಸರಿಸಬೇಕಿತ್ತು. ಆದರೆ ಪ್ರಭಾವಿ ರಾಜಕಾರಣಿಗಳು, ಶಾಶಸಕರು, ಸಚಿವರು ತಮ್ಮ ಬೆಂಬಲಿಗರು ಮತ್ತು ಕಾರ್ಯಕರ್ತರಿಗೆ ಮಾತ್ರ ಲಸಿಕೆಗಳು ಸಿಗುವಂತೆ ನೋಡಿಕೊಳ್ಳಲಾಯಿತು. ಇದನ್ನು ಜನರು ಈಗಲೂ ಮಾತನಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಜನರ ನಾಡಿಮಿಡಿತವನ್ನು ಅರ್ಥ ಮಾಡಿಕೊಳ್ಳಲು,ಪತ್ರಿಕೆಗಳು ಪ್ರಯತ್ನ ಮಾಡಲೇ ಇಲ್ಲ ಎಂಬುದು ಈವರೆಗಿನ ವರದಿಗಳಿಂದ ಜಗಜಾಹಿರಾಗಿದೆ.

ಪತ್ರಿಕೆಗಳು ಸರ್ಕಾರಗಳು ಮತ್ತು ಮುಕ್ತಮಾರುಕಟ್ಟೆಯ ತುತ್ತೂರಿಗಳಾದಂತೆ ಜನರಿಂದ ದೂರ ಸರಿಯ ತೊಡಗಿದವು. ಜನರು ಪತ್ರಿಕೆ ಕೊಳ್ಳುವುದನ್ನು ಕೈಬಿಟ್ಟರು. ಪತ್ರಿಕೆಗಳು ಸಾಮಾಜಿಕ ಜವಾಬ್ದಾರಿಯಿಂದ ನುಣುಚಿಕೊಂಡವು. ಹೀಗಾಗಿ ಸಾಮಾನ್ಯರು ಅದರ ಪರಿಣಾಮವನ್ನು ಉಣ್ಣುವಂತೆ ಆಗಿದೆ. ದೇಶೀಯ ಸುದ್ದಿಗಳಿಗೆ ಆದ್ಯತೆ ನೀಡುವ ಬದಲು ವಿದೇಶದ ಸುದ್ದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು. ಗ್ರಾಮೀಣ ಭಾರತದ ಆಗುಹೋಗುಗಳತ್ತ ಬೆಳಕು ಚೆಲ್ಲುವ ಕೆಲಸಕ್ಕೆ ಮಾಧ್ಯಮ ಮಾಲಿಕತ್ವ ಅಡ್ಡಿ ಬಂತು. ಪತ್ರಕರ್ತ ಕೂಡ ಮಾಲಿಕತ್ವಕ್ಕೆ ನಡುಬಗ್ಗಿಸಿ ನಡೆದುಕೊಂಡ. ವೈದ್ಯ ಹೇಳಿದ್ದೂ ಹಾಲು ಅನ್ನ, ರೋಗಿ ಬಯಸ್ಸಿದ್ದೂ ಅದನ್ನೇ ಎಂಬಂತಹ ಪರಿಸ್ಥಿತಿಗೆ ಪತ್ರಿಗಳು ಮತ್ತು ಪತ್ರಕರ್ತರು ಬಂದು ನಿಂತಿದ್ದಾರೆ.

ಪತ್ರಿಕೆಗಳು ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ ನಗರಕೇಂದ್ರಿತವಾಗಿ ಕೆಲಸ ಮಾಡುತ್ತಿವೆ. ಯಾವುದೇ ಪತ್ರಕರ್ತನೂ ಹಳ್ಳಿಯ ಸಮಸ್ಯೆಗಳನ್ನು ಬಿಂಬಿಸುವ ಗೋಜಿಗೆ ಹೋಗುತ್ತಿಲ್ಲ. ಇವು ಟಿಆರ್ ಪಿ ತರುವಂಥ ಸುದ್ದಿಗಳೇನೂ ಅಲ್ಲ. ಹಾಗಾಗಿ ಗ್ರಾಮೀಣ ಪ್ರದೇಶದ ಸುದ್ದಿಗಳಿಗೆ ಮಹತ್ವವನ್ನೇ ಸಿಗುತ್ತಿಲ್ಲ ಎನ್ನುವುದಕ್ಕಿಂತ ಕೊಡುತ್ತಿಲ್ಲ ಎನ್ನಬೇಕು. ಅಂದಮೇಲೆ ಪ್ರಕಟಿಸುವುದು ಎಲ್ಲಿಂದ ಬಂತು.

ಇಷ್ಟೆಲ್ಲಾ ಕಷ್ಟಕೋಟಲೆಗಳ ನಡುವೆ ಒಂದಿಷ್ಟು ಪತ್ರಿಕೆಗಳು, ಬೆರಳೆಣಿಕೆಯ ಪತ್ರಕರ್ತರು, ನ್ಯೂಸ್ ಪೋರ್ಟಲ್ ಗಳು ಜನರ ಪರವಾಗಿ ಕೆಲಸ ಮಾಡುತ್ತಿವೆ. ಅವರ ನೋವುಗಳನ್ನು ಕಿವುಡಾಗಿರುವ ಸರ್ಕಾರಗಳ ಕಿವಿಗೆ ಹಾಕುತ್ತಿವೆ ಇದೇ ಸಮಾಧಾನದ ಸಂಗತಿ.

  • ಕೆ.ಈ.ಸಿದ್ದಯ್ಯ, ತುಮಕೂರು

ಇದನ್ನೂ ಓದಿ; ಹೀಗೊಬ್ಬ ಬಡವರ ವೈದ್ಯ : ಒಂದು ರೂ ಸಹ ಪಡೆಯದೆ ಸೇವೆ ನೀಡುತ್ತಿರುವ ಡಾ.ಬಿ.ಸಂಜೀವ ರೈ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...