Homeಮುಖಪುಟಪತ್ರಿಕಾ ದಿನಾಚರಣೆ: ಕಾವಲುನಾಯಿ ಮಲಗಿದೆ... ಏಳುವುದೆಂತೋ?

ಪತ್ರಿಕಾ ದಿನಾಚರಣೆ: ಕಾವಲುನಾಯಿ ಮಲಗಿದೆ… ಏಳುವುದೆಂತೋ?

- Advertisement -
- Advertisement -

ಭಾರತ ಮುಕ್ತ ಮಾರುಕಟ್ಟೆಗೆ ತೆರೆದುಕೊಂಡ ಬಳಿಕ ಪತ್ರಿಕೋದ್ಯಮ ಭಿನ್ನದಾರಿ ಹಿಡಿದಿದೆ. ಪತ್ರಿಕೋದ್ಯಮದ ಆಶಯಗಳು ಮತ್ತು ಮೌಲ್ಯಗಳು ಮಾರುಕಟ್ಟೆಯ ದಾಳಿಗೆ ಸಿಕ್ಕಿ ನಾಶವಾಗಿವೆ ಮತ್ತು ಹಳ್ಳ ಹಿಡಿದಿವೆ. ಆರಂಭದಲ್ಲಿ ನಿಗದಿಪಡಿಸಿಕೊಂಡಿದ್ದ ಪ್ರಮಾಣಗಳೆಲ್ಲವೂ ಉಲ್ಟಾ ಆಗಿವೆ.. ಸುದ್ದಿಯ ಜಾಗದಲ್ಲಿ ಜಾಹಿರಾತು ಕೂತಿದೆ. ಜಾಹಿರಾತುಗಳಿಗೆ ಮೀಸಲಿಟ್ಟಿದ್ದ ಜಾಗದಲ್ಲಿ ಸುದ್ದಿಗಳು ಪ್ರಕಟವಾಗುತ್ತಿವೆ. ಸುದ್ದಿ ಮೌಲ್ಯ, ಸುದ್ದಿಯ ಖಚಿತತೆ, ಸ್ಪಷ್ಟವಾದ ಸುದ್ದಿ ಜನರಿಗೆ ತಲುಪಿಸಬೇಕೆಂಬ ಸ್ವಾತಂತ್ರ್ಯಾ ನಂತರದ ಆಶಯಗಳು ಮಣ್ಣುಗೂಡಿವೆ.

ಪತ್ರಿಕಾ-ಧರ್ಮ ಮರೆಯಾಗಿ ಹಲವು ವರ್ಷಗಳೇ ಉರುಳಿಹೋಗಿವೆ. ವೃತ್ತಿ ಅಥವಾ ಪತ್ರಿಕಾಧರ್ಮದ ಜಾಗದಲ್ಲಿ ಕೇವಲ ಧರ್ಮವೊಂದು ಬಲವಾಗಿ ಬೇರೂರಿದೆ. ಪರಿಣಾಮ ಸಮಾಜದಲ್ಲಿ ಜನರ ನಡುವೆ ಗಲಭೆಗಳು, ಸಂಘರ್ಷಗಳು, ಹಿಂಸಾವೃತ್ತಿಗಳು ಹೆಚ್ಚಲು ತಲೆದೋತ್ತಿವೆ. ಕಳೆದ ಎರಡು ದಶಕದ ಅವಧಿಯಲ್ಲಿ ಭಾರತ ಅಭಿವೃದ್ಧಿ ದಿಕ್ಕು ಬದಲಾದಂತೆ ಜನಸಾಮಾನ್ಯರ ಸಮಸ್ಯೆಗಳು ಹೆಚ್ಚತೊಡಗಿವೆ. ಈ ಸಮಸ್ಯೆಗಳಿಗೆ ಪರಿಹಾರ ಪೂರಕವಾಗಿ ಬೆಳಕು ಚೆಲ್ಲುವಂತಹ ಕೆಲಸ ಮಾಡಬೇಕಾದ ಪತ್ರಿಕೆಗಳು ತಮ್ಮ ಜವಾಬ್ದಾರಿಯಿಂದ ನುಣಿಚಿಕೊಂಡಿವೆ.

ಪತ್ರಿಕೆಗಳ ಮಾಲಿಕತ್ವ ಬಂಡವಾಳಿಗರ ಕೈಗೆ ಸೇರಿ ಪತ್ರಿಕೆಗಳಲ್ಲಿ ಬರುವ ಸುದ್ದಿಗಳ ಸ್ವರೂಪವೂ ಬದಲಾಗಿದೆ. ಶ್ರೀಮಂತರ ಹುಚ್ಚುಗಳಿಗೆ ಹೆಚ್ಚಿನ ಪ್ರಾಧಾನ್ಯತೆ ದೊರೆಯುತ್ತಿದೆ. ಫ್ಯಾಷನ್, ಕ್ರೈಂ, ಧಾರ್ಮಿಕ ಭಾವನೆಯನ್ನು ಕೆರಳಿಸುವಂತಹ ಸುದ್ದಿಗಳಿಗೆ ಮಹತ್ವ ಬಂದಿದೆ. ಬಂಡವಾಳಿಗರು ತಮಗೆ ಬೇಕಾದಂತೆ ಪತ್ರಿಕೆಗಳನ್ನು ಬಳಸಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಯಾವುದೇ ಸರ್ಕಾರಗಳನ್ನೂ ನಿಯಂತ್ರಿಸುವ ಶಕ್ತಿಯನ್ನು ಬಂಡವಾಳಿಗ ಪತ್ರಿಕೆಗಳು ಹೊಂದಿವೆ.

ಪತ್ರಿಕೆಗಳು ಜನರ ನೋವು, ಸಂಕಟಗಳಿಗೆ ವೇದಿಕೆಯಾಗಬೇಕಿತ್ತು. ರೈತರು ಸಮಸ್ಯೆಗಳಿಗೆ ದನಿಯಂತೆ ಕೆಲಸ ಮಾಡಬೇಕಿತ್ತು. ಕಾರ್ಮಿಕರ ವೇದನೆಗಳನ್ನು ಹೊರಚೆಲ್ಲಬೇಕಿತ್ತು. ಮಹಿಳೆಯರು, ದಲಿತರು ಮತ್ತು ಬಡವರ ಬಗೆಗಿನ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆದು ಪರಿಹಾರ ಒದಗಿಸುವಂತಹ ಮಹತ್ವದ ಕೆಲಸವನ್ನು ಮಾಡಬೇಕಿತ್ತು. ಈ ವಿಷಯಗಳು ತೆರೆ ಮೆರೆಗೆ ಸರಿದಿವೆ. ಮುಕ್ತ ಮಾರುಕಟ್ಟೆಗೆ ಪೂರಕವಾಗಿ ಪತ್ರಿಕೆಗಳು ಕೆಲಸ ಮಾಡುತ್ತಿವೆ. ಧರ್ಮ-ಧರ್ಮಗಳ ನಡುವಿನ ಭಾವನೆಗಳನ್ನು ಕೆರಳಿಸುವಂತಹ ಸುದ್ದಿಗಳಿಗೆ ಪೂರಕ ಸನ್ನಿವೇಶವನ್ನು ಒದಗಿಸಿಕೊಡುತ್ತಿವೆ.

ಮುಕ್ತಮಾರುಕಟ್ಟೆ ಪ್ರವೇಶಕ್ಕೂ ಮೊದಲು ಬಹುತೇಕ ಪತ್ರಿಕೆಗಳು ಉತ್ತಮ ಕೆಲಸ ಮಾಡುತ್ತಿದ್ದವು. ಸರ್ಕಾರಗಳ ಹಗರಣಗಳನ್ನು ಬಯಲು ಮಾಡಿದ್ದವು. ಭ್ರಷ್ಟರ ಕುತಂತ್ರವನ್ನು ಬಹಿರಂಗಪಡಿಸಿದ್ದವು. ಹಲವು ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಬೆವರು ಇಳಿಯುವಂತೆ ಮಾಡಿದ್ದವು. ಹಲವ ಸಚಿವರ ರಾಜಿನಾಮೆಗೆ ಕಾರಣವಾಗಿದ್ದವು. ಸರ್ಕಾರದ ಕಿವಿಯನ್ನು ಹಿಂಡುತ್ತಿದ್ದವು. ಲೋಪಗಳನ್ನು ಎತ್ತಿಹಿಡಿಯುತ್ತಿದ್ದವು. ಆ ಲೋಪಗಳು ಸರಿಪಡಿಸಿ ಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದವು. ಈಗ ಇದ್ಯಾವುದೂ ಇಲ್ಲ.

ದೆಹಲಿಯ ಗಡಿಗಳಲ್ಲಿ ಸಾವಿರಾರು ರೈತರು ಏಳು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಲೇ ಬರುತ್ತಿದ್ದಾರೆ. ಕರಾಳ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಭಾರತ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಅವರ ನೋವನ್ನು ಸಮರ್ಥವಾಗಿ ಪರಿಣಾಮಕಾರಿಯಾಗಿ ಭಾರತ ಸರ್ಕಾರದ ಗಮನಕ್ಕೆ ತರಬೇಕಿತ್ತು. ಪತ್ರಿಕೆಗಳು ಈ ಕೆಲಸವನ್ನು ಮಾಡುವಲ್ಲಿ ಸಂಪೂರ್ಣ ವಿಫಲವಾದವು. ರೈತರ ಕೂಗು ಒಕ್ಕೂಟ ಸರ್ಕಾರದ ಗಿರಿಗೆ ಕೇಳಲೇ ಇಲ್ಲ. ಸರ್ಕಾರದ ಕಿವಿಗೆ ಮುಟ್ಟಿಸಬೇಕಿದ್ದ ಜವಾಬ್ದಾರಿ ಹೊರಬೇಕಿದ್ದ ಪತ್ರಿಕೆಗಳು ಜಾಣ ಮರೆಗುಳಿತನಕ್ಕೆ ಜಾರಿದವು. ಹಾಗಾಗಿ ರೈತರು ಕೂಗು ದೊರೆಯ ಕಿವಿಗೆ ಕೇಳಿಸಲೇ ಇಲ್ಲ. ಯಾಕೆಂದರೆ ಪತ್ರಿಕೆಗಳ ‘ಅವರ’ ಪರವಾಗಿದ್ದವು.

ಪತ್ರಿಕೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರು ಕಾವಲುನಾಯಿಯಂತೆ ಕೆಲಸ ಮಾಡಬೇಕೆಂಬ ಪಾಠ ಈಗಲೂ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಹೇಳಿಕೊಡುವ ಪರಿಪಾಠ ಮುಂದುವರಿದಿದೆ. ಆದರೆ ಕಾವಲುನಾಯಿಗಳು ಕಳೆದೊಂದು ದಶಕದಿಂದ ಮಲಗಿವೆ. ಮಾಲಿಕರು ಮತ್ತು ಬಂಡವಾಳಿಗರು, ಮುಕ್ತಮಾರುಕಟ್ಟೆಯ ಪ್ರತಿನಿಧಿಗಳು ಗಡತ್ತಾಗಿ ಹಾಕುವ ಊಟ ತಿಂದು ಅವು ಮೇಲೆ ಏಳುತ್ತಲೇ ಇಲ್ಲ. ಮಾಲಿಕರು ಬಂದರೆ ಬಾಲ ಅಲ್ಲಾಡಿಸುತ್ತಿವೆ. ಮನೆಗೆ ಕಳ್ಳ ಬಂದರೂ ಬೊಗಳುತ್ತಿಲ್ಲ. ಪತ್ರಕರ್ತರು ಒಂದು ರೀತಿಯಲ್ಲಿ ಮಹಿಳೆಯರ ಪೆಟ್ ಡಾಗ್ ಗಳಂತಿದ್ದಾರೆ. ಕುಯ್ಂಗುಟ್ಟಿಕೊಂಡು ಹೋಗುವುದು, ಬೆಳಗು ಮತ್ತು ಸಂಜೆಯ ವಾಕಿಂಗ್ ಮಾಡುವುದು ಅಷ್ಟೇ ಪೆಟ್ ಡಾಗ್ ಗಳ ಕೆಲಸ. ಅದನ್ನು ಮಾಲಿಕ ಪ್ರಭುಗಳು ವ್ಯವಸ್ಥಿತವಾಗಿ ಮಾಡಿಕೊಂಡು ಬರುತ್ತಿದ್ದಾರೆ.

ಪತ್ರಕರ್ತ ಸ್ವತಂತ್ರವಾಗಿ ಆಲೋಚಿಸುತ್ತಿಲ್ಲ. ಅಂತಹ ಆಲೋಚನೆಗೆ ಅವಕಾಶವೂ ಇಲ್ಲ. ಶಕ್ತಿಕೇಂದ್ರಗಳಲ್ಲಿ ತರಬೇತಿ ಪಡೆದು ಬರುವ ಪತ್ರಕರ್ತರು ಶಕ್ತಿಕೇಂದ್ರಗಳಲ್ಲಿ ಬೋದಿಸಿದ ರೀತಿಯಲ್ಲೇ ವೃತ್ತಿ ಮಾಡುತ್ತಾರೆ. ಇಲ್ಲ ಪತ್ರಿಕಾಧರ್ಮ, ವೃತ್ತಿಧರ್ಮ ಯಾವುದಕ್ಕೂ ಮಾನ್ಯತೆ ಇಲ್ಲ. ಧರ್ಮದ ಪರ, ಸರ್ಕಾರಗಳ ಪರ, ಬಲಿಷ್ಠ ಜಾತಿಗಳ ಪರ ಹೇಗೆ ವಕ್ತಾರಿಕೆ ಮಾಡಬೇಕೆಂಬ ಕಸುಬನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಜಾಗಟೆ ಬಡಿಯಬೇಕು, ಶಂಖ ಊದಬೇಕು. ತಟ್ಟೆ ಬಡಿಯಬೇಕು ಎಂಬ ಸುದ್ದಿಗಳಿಗೆ ಇನ್ನಿಲ್ಲದ ಪ್ರಚಾರ ಸಿಗುತ್ತದೆ. ಇದು ಶಕ್ತಿಕೇಂದ್ರಗಳ ತರಬೇತಿಯ ಪರಿ.

ಕೊರೊನ ಕಾಲದಲ್ಲಿ ಪತ್ರಿಕೆಗಳ ನಡೆದುಕೊಂಡ/ನಡೆದುಕೊಳ್ಳುತ್ತಿರುವ ರೀತಿ ಜನರಿಗೆ ಬೇಸರ ತರಿಸುವಂತೆ ಮಾಡಿದೆ. ದೇಶೀಯ ಸರ್ಕಾರಗಳು ಕೊರೊನಾ ನಿಭಾಯಿಸುವಲ್ಲಿ ವಿಫಲವಾಗಿರುವ ಕುರಿತು ಸುದ್ದಿಗಳೇ ಬರುವುದಿಲ್ಲ. ಬಂದರೂ ತೇಪೆ ಹಾಕಿದಂತೆ ಇರುತ್ತವೆ. ದೇಶೀಯ ತಯಾರಕ ಸಂಸ್ಥೆ ಭಾರತ್ ಬಯೋಟೆಕ್ ನ  ಕೊವಾಕ್ಸಿನ್ ಮತ್ತು ಸೆರೆಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಕೊವಿಶೀಲ್ಡ್ ಲಸಿಕೆಗಳು ಜನರಿಗೆ ಸುಲಭವಾಗಿ ದೊರೆಯುವಂತೆ ಮಾಡಲು ಏನು ಮಾಡಬೇಕೆಂಬ ಬಗ್ಗೆ ವರದಿಗಳನ್ನು ಬಿತ್ತರಿಸಲೇ ಇಲ್ಲ. ಡೋಸ್ ಗಳ ತಯಾರಿಕೆ ಸಾಮರ್ಥ್ಯ, ಲಸಿಕೆ ದೊರಕುವಂತಾಗಲು ಮಾಡಬೇಕಾದ ವೈಜ್ಞಾನಿಕ ಕ್ರಮದ ಬಗ್ಗೆ ಸರ್ಕಾರ ಗಮನ ಹರಿಸಲಿಲ್ಲ. ಉದಾಹರಣೆಗೆ ದೇಶದಲ್ಲಿ 45 ವರ್ಷ ಮೇಲ್ಪಟ್ಟವರು ಎಷ್ಟು ಜನರಿದ್ದಾರೆ? 18 ವರ್ಷದಿಂದ 45 ವರ್ಷದ ಒಳಗಿನ ಜನರು ಎಷ್ಟು ಮಂದಿ ಇದ್ದಾರೆ? ಎಂಟು ವರ್ಷ ಮೇಲ್ಪಟ್ಟು 18 ವರ್ಷದೊಳಗಿನವರು ಎಷ್ಟು ಮಂದಿ ಇದ್ದಾರೆ ಎಂಬ ಬಗ್ಗೆ ಯಾವ ಸರ್ಕಾರಗಳ ಬಳಿಯೂ ಮಾಹಿತಿ ಇರಲಿಲ್ಲವೇ? ಆದರೂ ಏಕೆ ಸಮರ್ಪಕವಾಗಿ ಹೇಳಲಿಲ್ಲ?

ಈಗಲೂ ಈ ಮಾಹಿತಿ ಸರ್ಕಾರದ ಬಳಿ ಇಲ್ಲ. ಸರ್ಕಾರದ ಬಳಿ ಈ ಅಂಕಿಅಂಶಗಳು ಇದ್ದರೆ ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಕಿತ್ತು. ಆ ಕೆಲಸವೂ ಆಗಿಲಿಲ್ಲ. ಬರೀ ಗೊಂದಲಗಳಲ್ಲೇ ಜನರು ಮುಳುಗುವಂತೆ ನೋಡಿಕೊಳ್ಳಲಾಯಿತು. ಸರ್ಕಾರಗಳು ಸೃಷ್ಟಿಸುತ್ತಿರುವ ಗೊಂದಲಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಜವಾಬ್ದಾರಿಯನ್ನು ಪತ್ರಿಕೆಗಳು ಮಾಡಲಿಲ್ಲವೆಂಬುದು ನೋವಿನ ಸಂಗತಿ. ಲಸಿಕೆ ಪಡೆಯುವ ಜನರಿಗೆ ಕ್ರಮಸಂಖ್ಯೆಗಳನ್ನು ನೀಡಿ, ಲಸಿಕಾ ಕೇಂದ್ರಗಳನ್ನು ತೆರೆದು ಯಾವ್ಯಾವ ಲಸಿಕಾ ಕೇಂದ್ರಗಳಿಗೆ ಎಷ್ಟೆಷ್ಟು ಮಂದಿ ಬರಬೇಕು. ಅಲ್ಲಿ ಅವರಿಗೆ ಲಸಿಕೆ ವ್ಯವಸ್ಥಿತವಾಗಿ ಹೇಗೆ ದೊರೆಯುವಂತೆ ಮಾಡಬೇಕೆಂಬ ಬಗ್ಗೆ ಕ್ರಮಗಳನ್ನು ಅನುಸರಿಸಬೇಕಿತ್ತು. ಆದರೆ ಪ್ರಭಾವಿ ರಾಜಕಾರಣಿಗಳು, ಶಾಶಸಕರು, ಸಚಿವರು ತಮ್ಮ ಬೆಂಬಲಿಗರು ಮತ್ತು ಕಾರ್ಯಕರ್ತರಿಗೆ ಮಾತ್ರ ಲಸಿಕೆಗಳು ಸಿಗುವಂತೆ ನೋಡಿಕೊಳ್ಳಲಾಯಿತು. ಇದನ್ನು ಜನರು ಈಗಲೂ ಮಾತನಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಜನರ ನಾಡಿಮಿಡಿತವನ್ನು ಅರ್ಥ ಮಾಡಿಕೊಳ್ಳಲು,ಪತ್ರಿಕೆಗಳು ಪ್ರಯತ್ನ ಮಾಡಲೇ ಇಲ್ಲ ಎಂಬುದು ಈವರೆಗಿನ ವರದಿಗಳಿಂದ ಜಗಜಾಹಿರಾಗಿದೆ.

ಪತ್ರಿಕೆಗಳು ಸರ್ಕಾರಗಳು ಮತ್ತು ಮುಕ್ತಮಾರುಕಟ್ಟೆಯ ತುತ್ತೂರಿಗಳಾದಂತೆ ಜನರಿಂದ ದೂರ ಸರಿಯ ತೊಡಗಿದವು. ಜನರು ಪತ್ರಿಕೆ ಕೊಳ್ಳುವುದನ್ನು ಕೈಬಿಟ್ಟರು. ಪತ್ರಿಕೆಗಳು ಸಾಮಾಜಿಕ ಜವಾಬ್ದಾರಿಯಿಂದ ನುಣುಚಿಕೊಂಡವು. ಹೀಗಾಗಿ ಸಾಮಾನ್ಯರು ಅದರ ಪರಿಣಾಮವನ್ನು ಉಣ್ಣುವಂತೆ ಆಗಿದೆ. ದೇಶೀಯ ಸುದ್ದಿಗಳಿಗೆ ಆದ್ಯತೆ ನೀಡುವ ಬದಲು ವಿದೇಶದ ಸುದ್ದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು. ಗ್ರಾಮೀಣ ಭಾರತದ ಆಗುಹೋಗುಗಳತ್ತ ಬೆಳಕು ಚೆಲ್ಲುವ ಕೆಲಸಕ್ಕೆ ಮಾಧ್ಯಮ ಮಾಲಿಕತ್ವ ಅಡ್ಡಿ ಬಂತು. ಪತ್ರಕರ್ತ ಕೂಡ ಮಾಲಿಕತ್ವಕ್ಕೆ ನಡುಬಗ್ಗಿಸಿ ನಡೆದುಕೊಂಡ. ವೈದ್ಯ ಹೇಳಿದ್ದೂ ಹಾಲು ಅನ್ನ, ರೋಗಿ ಬಯಸ್ಸಿದ್ದೂ ಅದನ್ನೇ ಎಂಬಂತಹ ಪರಿಸ್ಥಿತಿಗೆ ಪತ್ರಿಗಳು ಮತ್ತು ಪತ್ರಕರ್ತರು ಬಂದು ನಿಂತಿದ್ದಾರೆ.

ಪತ್ರಿಕೆಗಳು ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ ನಗರಕೇಂದ್ರಿತವಾಗಿ ಕೆಲಸ ಮಾಡುತ್ತಿವೆ. ಯಾವುದೇ ಪತ್ರಕರ್ತನೂ ಹಳ್ಳಿಯ ಸಮಸ್ಯೆಗಳನ್ನು ಬಿಂಬಿಸುವ ಗೋಜಿಗೆ ಹೋಗುತ್ತಿಲ್ಲ. ಇವು ಟಿಆರ್ ಪಿ ತರುವಂಥ ಸುದ್ದಿಗಳೇನೂ ಅಲ್ಲ. ಹಾಗಾಗಿ ಗ್ರಾಮೀಣ ಪ್ರದೇಶದ ಸುದ್ದಿಗಳಿಗೆ ಮಹತ್ವವನ್ನೇ ಸಿಗುತ್ತಿಲ್ಲ ಎನ್ನುವುದಕ್ಕಿಂತ ಕೊಡುತ್ತಿಲ್ಲ ಎನ್ನಬೇಕು. ಅಂದಮೇಲೆ ಪ್ರಕಟಿಸುವುದು ಎಲ್ಲಿಂದ ಬಂತು.

ಇಷ್ಟೆಲ್ಲಾ ಕಷ್ಟಕೋಟಲೆಗಳ ನಡುವೆ ಒಂದಿಷ್ಟು ಪತ್ರಿಕೆಗಳು, ಬೆರಳೆಣಿಕೆಯ ಪತ್ರಕರ್ತರು, ನ್ಯೂಸ್ ಪೋರ್ಟಲ್ ಗಳು ಜನರ ಪರವಾಗಿ ಕೆಲಸ ಮಾಡುತ್ತಿವೆ. ಅವರ ನೋವುಗಳನ್ನು ಕಿವುಡಾಗಿರುವ ಸರ್ಕಾರಗಳ ಕಿವಿಗೆ ಹಾಕುತ್ತಿವೆ ಇದೇ ಸಮಾಧಾನದ ಸಂಗತಿ.

  • ಕೆ.ಈ.ಸಿದ್ದಯ್ಯ, ತುಮಕೂರು

ಇದನ್ನೂ ಓದಿ; ಹೀಗೊಬ್ಬ ಬಡವರ ವೈದ್ಯ : ಒಂದು ರೂ ಸಹ ಪಡೆಯದೆ ಸೇವೆ ನೀಡುತ್ತಿರುವ ಡಾ.ಬಿ.ಸಂಜೀವ ರೈ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...