Homeಮುಖಪುಟದೇಶದ ಪ್ರಧಾನಿ ರಾಹುಲ್ ಗಾಂಧಿಯೋ, ಮೋದಿಯೋ?: ಸುವರ್ಣ ನ್ಯೂಸ್, ಕನ್ನಡಪ್ರಭ ವಿರುದ್ಧ ಸ್ಪೋಟಗೊಂಡ ಆಕ್ರೋಶ

ದೇಶದ ಪ್ರಧಾನಿ ರಾಹುಲ್ ಗಾಂಧಿಯೋ, ಮೋದಿಯೋ?: ಸುವರ್ಣ ನ್ಯೂಸ್, ಕನ್ನಡಪ್ರಭ ವಿರುದ್ಧ ಸ್ಪೋಟಗೊಂಡ ಆಕ್ರೋಶ

ದೇಶದ ಅನ್ನದಾತ ರೈತರು ರಸ್ತೆಯಲ್ಲಿ.. ದೇಶದ ಪ್ರಧಾನಿ ಮೋದಿ ಅದಾನಿ-ಅಂಬಾನಿ ಮನೆ ಬಾಗಿಲಿನಲ್ಲಿ..." ಎಂದು ವೀರ ಕನ್ನಡಿಗ ಎಂಬುವವರು ವ್ಯಂಗ್ಯವಾಡಿದ್ದಾರೆ.

- Advertisement -
- Advertisement -

“ರಸ್ತೆಯಲ್ಲಿ ರೈತ, ಇಟಲಿಯಲ್ಲಿ ರಾಹುಲ್” ಎಂಬ ಶೀರ್ಷಿಕೆಯಲ್ಲಿ ಕನ್ನಡದ ಸುವರ್ಣ ಟಿವಿಯಲ್ಲಿ ಕಾರ್ಯಕ್ರಮ ಪ್ರಸಾರ ಮಾಡಿದ ಅಜಿತ್ ಹನುಮಕ್ಕನವರ್ ಮತ್ತು ಕನ್ನಡಪ್ರಭ ಪತ್ರಿಕೆಯಲ್ಲಿ ಲೇಖನ ಬರೆದ ಪ್ರಶಾಂತ್ ನಾತು ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ದೇಶದ್ರ ಪ್ರಧಾನಿ ರಾಹುಲ್ ಗಾಂಧಿಯೋ, ಮೋದಿಯೋ? ನೇರವಾಗಿ ಮೋದಿಯನ್ನು ಪ್ರಶ್ನಿಸಲಾಗದೆ ವಿರೋಧಪಕ್ಷಗಳನ್ನು ಗುರುಮಾಡುವ ಗೋದಿ ಮೀಡಿಯಾ ನೀವು ಎಂಬ ಟೀಕೆ ಕೇಳಿಬಂದಿದೆ.

ರೈತರು ಜಿಯೋ ಸಿಮ್ ತಿರಸ್ಕರಿಸಲು ಕರೆ ನೀಡಿದಾಗ, ದೆಹಲಿಯಲ್ಲಿ ರೈತರ ಹೋರಾಟ ಆರಂಭವಾದಾಗಿನಿಂದಲೂ ಈ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ರೈತರ ವಿರುದ್ಧವೇ ಲೇಖನಗಳು ಬರೆಸುತ್ತಿವೆ. ಆದರೆ ಈಗ ಕೃಷಿ ಕಾಯ್ದೆಗಳನ್ನು ತಂದಿರುವುದು ನರೇಂದ್ರ ಮೋದಿ, ರೈತರು ಹೋರಾಡುತ್ತಿರುವುದು ಮೋದಿ ಸರ್ಕಾರದ ವಿರುದ್ಧ. ಹೀಗಿರುವಾಗ ಮೋದಿಯನ್ನು ಗುರಿಮಾಡಲು ಧೈರ್ಯವಿಲ್ಲದ ಈ ಪತ್ರಿಕೆಗಳು ರಾಹುಲ್‌ ಗಾಂಧಿಯನ್ನು ಗುರಿಮಾಡಿರುವುದು ಜಾಲತಾಣಿಗರ ಆಕ್ರೋಶವನ್ನು ಹೆಚ್ಚು ಮಾಡಿದೆ.

“ಇದನ್ನು ಅವರು ಸುಮ್ಮನೆ ಮಾಡ್ತಿಲ್ಲಾ ಪೊಲಿಟಿಕಲ್ ಹಿಕ್ ಮತ್ ಇಟ್ಕೊಂಡೆ ಮಾಡುವುದು. ಅಧಿಕಾರದಲ್ಲಿರುವವರನ್ನು ಕೇಳದೆ, ಅಧಿಕಾರದಲ್ಲಿರದ ರಾಹುಲ್ ನನ್ನು ಕೇಳುವುದು. ವಿರೋಧ ಪಕ್ಷಗಳ ಬಗ್ಗೆ ಅಪಪ್ರಚಾರ ಮಾಡುವುದು, ರಾಜಕೀಯ ವರ್ಚಸ್ಸು ಬೆಳೆಯದಂತೆ ಮಾಡುವುದು. ಬಿಜೆಪಿಯ ದೊಂಬಿ, ಅವೈಜ್ಞಾನಿಕ ಆಡಳಿತ ಪ್ರಜೆಗಳಿಗೆ ಗೊತ್ತಾಗದಂತೆ ಮಾಡುತ್ತಾ ಇಡೀ ದೇಶವನ್ನು ಖಾಸಗಿ ವ್ಯಕ್ತಿಗಳ ಕೈಗೆ ಅಡವಿಡುವುದು! ಇದು ಪತ್ರಿಕೋದ್ಯಮವಲ್ಲ,ದೇಶದ ತಲೆ ಹೊಡೆಯುವ ಕೆಲಸ” ಎಂದು ಕಾಂತರಾಜು ಕೆ ಗೊಲ್ಲರಹಟ್ಟಿಯವರು ಕಿಡಿಕಾರಿದ್ದಾರೆ.

ಈತನಿಗೆ ನಿಜವಾಗಿಯೂ ಪತ್ರಿಕಾಧರ್ಮ, ಸಾಮಾಜಿಕ ಕಾಳಜಿ ಎಂದರೆ ಏನೆಂದು ಗೊತ್ತಿದ್ದರೆ, ವೃತ್ತಿಯ ವಿಚಾರದಲ್ಲಿ ಯಾವುದೇ ಪಂಥದ ಪಕ್ಷಪಾತಿ ಅಲ್ಲದೇ ಇರುತ್ತಿದ್ದರೆ ಈ ಅಂಕಣದ ಹೆಡ್ಡಿಂಗ್ ‘ರಸ್ತೆಯಲ್ಲಿ ರೈತ ಮನೆಯಲ್ಲಿ ಮೋದಿ’ ಹೀಗೆ ಇರಬೇಕಿತ್ತು ಎಂದು ಪತ್ರಕರ್ತೆ ಹೇಮಾವತಿ ವೆಂಕಟ್ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯ ರಸ್ತೆಯಲ್ಲಿ ನೂರಾರು ಕಿಲೋಮೀಟರ್ ನಡಿಗೆಯಲ್ಲಿ ಸಾಗುತ್ತಿದ್ದ ಕಾರ್ಮಿಕರನ್ನು ರಾಹುಲ್ ಗಾಂಧಿ ಮಾತನಾಡಿಸಿದರೆ ಅದು ನಾಟಕ, ಕಾರ್ಮಿಕರಿಗೆ ಊರಿಗೆ ತೆರಳಲು ಬಸ್ ವ್ಯವಸ್ಥೆ ಮಾಡಿದರೆ ಗಿಮಿಕ್,
ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದವರನ್ನು ಭೇಟಿ ಮಾಡಲು ಹೋದರೆ ಅದು ರಾಜಕೀಯ. ಇಟಲಿಗೆ ಹೋದರೆ ಪಲಾಯನ ಎಂದು ಬೊಬ್ಬೆ ಹೊಡೆಯುವವರು ಇದೇ ಪತ್ರಕರ್ತರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರೈತ ರಸ್ತೆಯಲ್ಲಿರುವಾಗ ವಾರಣಾಸಿಯಲ್ಲಿ ದೀಪಾವಳಿ, ಆರ್ಕೆಸ್ಟ್ರಾ, ಕುಣಿತ ಎಲ್ಲ ಬೇಕಿತ್ತಾ? ಹೊಸ ಸಂಸತ್ತಿಗೆ ಭೂಮಿ ಪೂಜೆ ಮಾಡುವ ಅರ್ಜಂಟ್ ಏನಿತ್ತು? ಈ ತುರ್ತು ಸಂದರ್ಭದಲ್ಲಿ ಚಳಿಗಾಲದ ಅಧಿವೇಶನ ರದ್ದು ಪಡಿಸಿದ್ದು ಯಾಕೆ ಎಂದು ಒಬ್ಬರಾದರೂ ಅಂಕಣ ಬರೆದ್ರಾ? ಯಾಕೆ ಬಿಜೆಪಿ ಬೆಂಬಲಿಗರಾದ ಮಾತ್ರಕ್ಕೆ ಸರ್ಕಾರದ ವಿಲಕ್ಷಣ ನಡವಳಿಕೆ ಪ್ರಶ್ನೆ ಮಾಡಬಾರದೇ? ಈ ನಾತು ಅವರಿಗೆ ಈ ಅಂಕಣ ಬರೆಯುವ ಅಗತ್ಯ ಏನಿತ್ತು? ರಾಹುಲ್ ಪ್ರಧಾನಿಯೇ, ಗೃಹಮಂತ್ರಿಯೇ, ಕೃಷಿ ಸಚಿವರೇ? ಕನಿಷ್ಠ ಕಾಮನ್ ಸೆನ್ಸ್ ಬೇಡ್ವಾ!
ಈಗ ರಾಹುಲ್ ಏನು ಮಾಡಬೇಕಿತ್ತು; ಸರ್ಕಾರ ಅಗೆಯುವ ರಸ್ತೆ ಪಕ್ಕ ಕಾವಲು‌ ಕಾಯಬೇಕಿತ್ತಾ? ಎಂದು ಅವರು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿಗೆ ಧಿಕ್ಕಾರ
ತೊಲಗಲಿ ತೊಲಗಲಿ ರಾಹುಲ್ ಗಾಂಧಿ ತೊಲಗಲಿ
ಡೌನ್ ಡೌನ್ ರಾಹುಲ್ ಗಾಂಧಿ
ರಾಹುಲ್ ಗಾಂಧಿ ಪ್ರಧಾನಿ ಹುದ್ದೆಗೆ ರಾಜೀನಾಮೆ ಕೊಡಲಿ !! ಎಂದು ವಕೀಲರಾದ ಜಗನ್ನಾಥ್ ರಾಮಸ್ವಾಮಿಯವರು ವ್ಯಂಗ್ಯವಾಡಿದ್ದಾರೆ.

ಪ್ರತಿಭಟನಾ ನಿರತ ರೈತರನ್ನು ಖಾಲಿಸ್ತಾನಿ ಉಗ್ರರು, ಅವರನ್ನು ಬೆಂಬಲಿಸುತ್ತಿರುವವರೆಲ್ಲ ದೇಶದ್ರೋಹಿ ಅರ್ಬನ್ ನಕ್ಸಲ್‌ಗಳು ಎಂದೆಲ್ಲ ಸಂಭೋದಿಸಿದ್ದು ಇದೆ ಸುವರ್ಣ ಚಾನಲ್‌ನ ಅಜಿತ್ ಹನುಮಕ್ಕ ಮತ್ತು ಪ್ರಶಾಂತ್ ನಾತು ಅಲ್ಲವೇ? ಕ್ರಿಮಿ ಕೀಟಗಳಂತೆಯೂ ಕಾಲ ಕಸದಂತೆ ಅನ್ನದಾತನ ಚಳುವಳಿಯನ್ನು ಹೀಯಾಳಿಸಿದ ಇವರ ಕಣ್ಣಿಗೆ ಇಂದು ದೆಹಲಿ ಪ್ರತಿಭಟನಾ ನಿರತರು ನೈಜ ರೈತರಾಗಿ ಕಾಣಿಸಿತ್ತಿರುವುದು ಪರಮಾಶ್ಚರ್ಯ! ಎಂದು ದೀಪಕ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

“ದೇಶದ ಅನ್ನದಾತ ರೈತರು ರಸ್ತೆಯಲ್ಲಿ.. ದೇಶದ ಪ್ರಧಾನಿ ಮೋದಿ ಅದಾನಿ-ಅಂಬಾನಿ ಮನೆ ಬಾಗಿಲಿನಲ್ಲಿ…” ಎಂದು ಕನ್ನಡಿಗ ವೀರ ಕನ್ನಡಿಗ ಎಂಬುವವರು ವ್ಯಂಗ್ಯವಾಡಿದ್ದಾರೆ.

ರೈತರು ರಸ್ತೆಗಿಳಿಯುವಂತೆ ಮಾಡಿದ್ದು ಯಾರು? ಪ್ರಧಾನಿ ಮೋದಿಯವರು. ರೈತ ವಿರೋಧಿ ಕೃಷಿ ಕಾಯ್ದೆ ತರುತ್ತಿರುವವರು ಯಾರು ? ಪ್ರಧಾನಿ ಮೋದಿಯವರು….. ಚಳಿ,ಮಳೆ,ಗಾಳಿಯನ್ನದೆ ರಸ್ತೆಯಲ್ಲಿ ಕುಳಿತು ಪ್ರತಿಭಟಿಸುತ್ತಿರುವ ರೈತರ ಜೊತೆ ಮಾತಾಡಲು ಅಂಜುವ ನರೇಂದ್ರ ಮೋದಿಯವರು ಪ್ರಧಾನಿ ನಿವಾಸದಲ್ಲಿ ಬೆಚ್ಚಗಿದ್ದಾರೆ!! ಈ ಮಾಧ್ಯಮಗಳು ಮತ್ತು ಪತ್ರಕರ್ತರು ಪ್ರಶ್ನಿಸಬೇಕಾಗಿರುವುದು ಯಾರನ್ನು? ಪ್ರಧಾನಿ ಮೋದಿಯವರನ್ನು….ಆದರೆ…..? ನಾತ ಮತ್ತು ಅಜಿತ್ ನ ಅವತಾರಗಳ ನೋಡಿದ್ಮೇಲೆ ಅರ್ಥವಾಯ್ತು….ಗುಲಾಮಿ ಸಂತತಿ ಇನ್ನೂ ಜೀವಂತವಾಗಿದೆ ಅಂತ!! ಎಂದು ಓದು ಸಿದ್ದೇಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರು ಜಿಯೋ ಸಿಮ್ ತಿರಸ್ಕರಿಸಲು ಕರೆ ಕೊಟ್ಟಾಗ ಅಜಿತ್ ಹನುಮಕ್ಕನವರ್ ಅಂಬಾನಿ ಪರ ಬ್ಯಾಟಿಂಗ್ ಮಾಡಿ ಟೀಕೆಗೊಳಗಾಗಿದ್ದರು. ಈ ಹಿಂದೆಯೂ ಸಹ ಪೆಟ್ರೋಲ್ ದರ ಹೆಚ್ಚಾದಾಗ ಮೋದಿ ಹೆಸರೆತ್ತದೆ ವರದಿ ಮಾಡಿದ್ದರು. ಅವರು ಸಂಪೂರ್ಣ ಬಿಜೆಪಿ ಪರವಾಗಿ ವರದಿ ಮಾಡುವುದರಿಂದ ರೊಚ್ಚಿಗೆದ್ದ ನೆಟ್ಟಿಗರು ಈ ಹಿಂದೆ ‘ಅಜಿತ್ ಬಿಜೆಪಿ ಏಜೆಂಟ್’ ಎಂಬ ಹ್ಯಾಷ್‌ಟ್ಯಾಗ್ ಬಳಸಿ ಟ್ರೆಂಡ್ ಮಾಡಿದ್ದರು.


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...