Homeಚಳವಳಿಪ್ರತಿರೋಧದ ಗತಿ-ಇಂದಿನ ಸ್ಥಿತಿ ಐದು ಅಂಶಗಳು : ಕೆ.ಫಣಿರಾಜ್

ಪ್ರತಿರೋಧದ ಗತಿ-ಇಂದಿನ ಸ್ಥಿತಿ ಐದು ಅಂಶಗಳು : ಕೆ.ಫಣಿರಾಜ್

- Advertisement -
- Advertisement -

ಬಳ್ಳಾರಿಯ ಫಣಿರಾಜ್ ಅವರ ಕರ್ಮಭೂಮಿ ಉಡುಪಿ. ಇಂಜಿನಿಯರಿಂಗ್ ಪ್ರಾಧ್ಯಾಪಕರಾಗಿದ್ದು, ಕನ್ನಡದ ಮುಖ್ಯ ಚಿಂತಕರಲ್ಲೊಬ್ಬರಾದ ಅವರು ಮೂಲತಃ ಒಬ್ಬ ಆಕ್ಟಿವಿಸ್ಟ್. ಪ್ರತಿನಿತ್ಯ ಅವರು ಚಿಂತಿಸುವುದು ಸಮಾಜ ಬದಲಾವಣೆ, ಸಿನೆಮಾ ಮತ್ತು ಕರಾವಳಿಯ ನಿತ್ಯದ ಸಮಸ್ಯೆಗಳ ಕುರಿತು. ಎಡಪಂಥೀಯರಾಗಿದ್ದೂ ಭಿನ್ನಮತ ಕಾಪಾಡಿಕೊಂಡು, ಅಂಬೇಡ್ಕರ್, ಗಾಂಧಿ, ಗ್ರಾಮ್ಶಿ ಎಲ್ಲರ ಜೊತೆ ಸಾವಯವ ಸಹವಾಸ ಇಟ್ಟುಕೊಂಡಿದ್ದಾರೆ.

* ಸ್ವತಃ ಪ್ರಖ್ಯಾತ ಭಾಷಾ ಶಾಸ್ತ್ರಜ್ಞರಾಗಿದ್ದೂ, ತನ್ನ ಶಾಸ್ತ್ರೀಯ ವೃತ್ತಿಯಾಚೆಗಿನ ಪ್ರಾಪಂಚಿಕ ಆಗುಹೋಗುಗಳಿಗೆ ತೆರೆದುಕೊಂಡು, ತಾನು ವಾಸಿಸುತ್ತಿರುವ ದೇಶದ ಪ್ರಭುತ್ವ ನೀತಿಗಳನ್ನು ಕಟುವಾಗಿ ವಿಮರ್ಶಿಸುತ್ತಿರುವವರು ನೋಮ್ ಚಾಮ್‍ಸ್ಕಿ. ಅವರು, ಎಲ್ಲ ಮನುಷ್ಯರಿಗೂ ಬೌದ್ಧಿಕ ಜ್ಞಾನವಿರುತ್ತದೆ ಎಂಬ ಸಹಜ ನೆಲೆಯಲ್ಲಿ, ‘ಬುದ್ಧಿಜೀವಿ’ಗಳು ಎಂದರೆ, ಇಂದಿನ ಅಸಮಾನ ಜ್ಞಾನ ಸಮಾಜದಲ್ಲಿ, ಅಧಿಕಾರದ ಆಗುಹೋಗುಗಳ ಬಗ್ಗೆ ಖಚಿತವಾದ ಮಾಹಿತಿ ಸಂಪನ್ಮೂಲವನ್ನು ಪಡೆಯುವ ಸವಲತ್ತು ಇರುವ ಒಂದು ಸಾಮಾಜಿಕ ವರ್ಗವೆಂದು ವಿವರಿಸುತ್ತಾರೆ. ಮತ್ತೂ, ಬುದ್ಧಿಜೀವಿ ವರ್ಗದ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಹೀಗೆ ಹೇಳುತ್ತಾರೆ: ಅಧಿಕಾರ ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ಖಚಿತವಾದ ವಿವರಗಳನ್ನು, ಪ್ರತಿರೋಧಿಸಲು ಸಾಧ್ಯವಿರುವ (ಹಾಗು ವಿವರಗಳನ್ನು ಪಡೆಯಲಾರದ ಸ್ಥಿತಿಯಲ್ಲಿರುವ) ಸಾಮಾನ್ಯ ಜನರಿಗೆ ತಲುಪಿಸುವುದು.

* ದೇಶದ ಸಮಚಿತ್ತದ ಬೌದ್ಧಿಕರಲ್ಲಿ ಒಬ್ಬರಾಗಿರುವ ಅಶೋಕ್ ವಾಜಪೇಯಿಯವರು, 2017ರಲ್ಲಿ, ‘ಇಂಡಿಯ ಡಿಸೆಂಟ್ಸ್: ಥ್ರೀ ಥೌಸೆಂಡ್ ಯಿಯರ್ಸ ಆಫ್ ಡಿಫೆರೆನ್ಸ್, ಡೌಟ್ ಅಂಡ್ ಅರ್ಗ್ಯುಮೆಂಟ್ಸ್’ (ಭಾರತದಲ್ಲಿ ಭಿನ್ನಮತ: ಮೂರು ಸಾವಿರ ವರ್ಷಗಳ ವಿರೋಧ, ಅನುಮಾನ ಹಾಗು ವಾಗ್ವಾದ) ಎಂಬ ಪುಸ್ತಕವನ್ನು ಸಂಪಾದಿಸಿದ್ದಾರೆ. ಅದರಲ್ಲಿ ಅವರು, ಅತಿ ಪ್ರಾಚೀನ ಗ್ರಂಥವಾದ ಋಗ್ವೇದದ ಅನುಮಾನಸಹಿತವಾದ ಸೂತ್ರಗಳಿಂದ ಹಿಡಿದು, ಬುದ್ಧ, ಸುಭಾಷಿತ, ಸಾಂಖ್ಯ ದರ್ಶನ, ಚಾರ್ವಾಕ ದರ್ಶನ, ವಚನ, ಸೂಫಿ ಚಿಂತನೆ, ಭಕ್ತಿ ಸಾಹಿತ್ಯಗಳಿಂದ ಹಿಡಿದು ಫುಲೆ ದಂಪತಿಗಳು, ಗಾಂಧಿ, ಅಂಬೇಡ್ಕರ್, ನಾರಾಯಣ ಗುರು, ಪೆರಿಯಾರ್, ಲೋಹಿಯ, ಜೇಪಿ, ದಲಿತ ಸಾಹಿತ್ಯ, ನಕ್ಸಲ್ ಚಳವಳಿಯಿಂದ ಪ್ರೇರಿತವಾದ ಸಾಹಿತ್ಯ ಹಾಗು ರವೀಶ್‍ಕುಮಾರರ ಚಿಂತನೆಗಳವರೆಗಿನ ಸುದೀರ್ಘವಾದ ಭಿನ್ನಮತ ಪರಂಪರೆ ಭಾರತಕ್ಕಿದೆ ಎಂದು ತಿಳಿಸಬಯಸುತ್ತಾರೆ. ಭಿನ್ನಮತವೆಂದರೆ ‘ದೇಶದ್ರೋಹ’ವೆನ್ನುವಂತೆ ಜನಜನಿತಗೊಳಿಸುವ ಕಾಲದಲ್ಲಿ ಅಶೋಕ್ ವಾಜಪೇಯಿಯವರು ಸಕಾಲಿಕವಾಗಿ ಈ ಗ್ರಂಥ ಪ್ರಕಟಿಸಿರುವರು- ಆ ಮೂಲಕ ಭಿನ್ನಮತದ ಮಹತ್ವವನ್ನು ಗಟ್ಟಿಯಾಗಿ ಹೇಳಲು ಬಯಸಿರುವರು.

* ಬ್ರಿಟಿಷ್ ವಸಾಹತುಶಾಹಿಯ ಕಾಲದಲ್ಲಿ, ಬೌದ್ಧಿಕ ಕೆಲಸಗಳನ್ನು ಮಾತ್ರ ನಿರ್ವಹಿಸುವ ಉದ್ಯೋಗಗಳಲ್ಲಿ ನಿರತವಾದ ‘ಮಧ್ಯಮ ವರ್ಗ’ವು ರೂಪ ತಾಳಿತು. ಬ್ರಿಟಿಷರು ತಮ್ಮ ಆಡಳಿತ ವ್ಯವಸ್ಥೆಯ ಸಕ್ಷಮತೆಗೆ ಪೂರಕವಾದ ಮಾನವ ಸಂಪನ್ಮೂಲ ಸೃಷ್ಟಿಗೆ ಸಹಕಾರಿಯಾಗುವಂತೆ, ಆಧುನಿಕ ಶಿಕ್ಷಣ-ಉದ್ಯೋಗ ವ್ಯವಸ್ಥೆಯನ್ನು ನಿರ್ಮಿಸಿದರು; ಆದರೂ ಈ ಮಧ್ಯಮ ವರ್ಗದ ನಡುವಿಂದಲೇ, ವಸಾಹತುಶಾಹಿ ಆಡಳಿತವನ್ನು ಪ್ರತಿರೋಧಿಸುವ ಬೌದ್ಧಿಕತೆ ಹುಟ್ಟಿಕೊಂಡಿತು. ಬೌದ್ಧಿಕ ಸಂಪನ್ಮೂಲ ಉಳ್ಳ ವಕೀಲರು, ಶಿಕ್ಷಕರು, ವಿಜ್ಞಾನಿಗಳು, ವೈದ್ಯರು ಹಾಗು ಭೂಮಾಲಿಕರು-ವ್ಯಾಪಾರಸ್ಥ ವರ್ಗಗಳ ಮಂದಿ ಹೀಗೆ ವಿದ್ಯೆ ಪಡೆದುಕೊಂಡರು. ಈ ಮಧ್ಯಮ ವರ್ಗಗಳಿಂದ ಹುಟ್ಟಿಬಂದ ಚಿಂತಕರು ವಸಾಹತುಶಾಹಿ ವಿರೋಧಿ ಹೋರಾಟದ ಚಿಂತನೆಗಳ ಬೆನ್ನೆಲುಬಾಗಿತ್ತು. ಈ ಬಗೆಯ ಚಟುವಟಿಕೆಗಳ ನಿಯಂತ್ರಣಕ್ಕೆ ಜಾರಿ ಮಾಡಲಾದ ‘ಶಿಕ್ಷಾರ್ಹ ಅಪರಾಧ’ಗಳ ಕಠಿಣ ಕಾನೂನುಗಳು ಹಾಗು ಅದೇ ನಮೂನೆಯ ಹೊಸ ಶಿಕ್ಷೆ ಸಂಹಿತೆಗಳೂ, ಸ್ವಾತಂತ್ರೋತ್ತರ ಯುಗದಲ್ಲಿ ಈ ನಮೂನೆಯ ಬೌದ್ಧಿಕ ಅಭಿವ್ಯಕ್ತಿಗೆ ಕಡಿವಾಣಕ್ಕೆ ಜಾರಿಯಾಗಿವೆ!

* ಎರಡನೇ ಮಹಾಯುದ್ಧೋತ್ತರ ಕಾಲದಲ್ಲಿ, ಅಂದಿನ ಸಂಪತ್ತು ಉತ್ಪಾದನೆಯ ಆಧುನಿಕ ಉತ್ಪಾದನಾ ವ್ಯವಸ್ಥೆ ಧ್ವಂಸವಾಗಿ ಹೋಗಿತ್ತು. ಸಮಾಜದ ಸಕಲ ಸಂಪನ್ಮೂಲಗಳನ್ನು ಬಳಸಿಕೊಂಡು ದೇಶಗಳು ತಮ್ಮ ಸ್ವಾಯತ್ತತೆ ಕಾಪಾಡಿಕೊಳ್ಳಬೇಕಾಗಿದ್ದ ಆ ಹೊತ್ತಲ್ಲಿ ಆಚರಣೆಗೆ ಬಂದ ‘ಕಲ್ಯಾಣ ರಾಜ್ಯ ಪ್ರಜಾಪ್ರಭುತ್ವ’ಕ್ಕೆ ಬೆನ್ನೆಲುಬಾಗಿದ್ದವರೂ ವಿಜ್ಞಾನ-ತಂತ್ರಜ್ಞಾನ-ಸಮಾಜಶಾಸ್ತ್ರ-ಮಾನವೀಕ ಶಾಸ್ತ್ರಗಳ ಬೌದ್ಧಿಕ ಮಧ್ಯಮ ವರ್ಗದವರು. ಈ ನಮೂನೆಯ ಪ್ರಭುತ್ವದ ಟೀಕಾಕಾರರಾಗಿದ್ದು, ಇದು ಉಳ್ಳವರಿಗೆ ಅನುಕೂಲವಾದ ಪ್ರಭುತ್ವ ವ್ಯವಸ್ಥೆಯಾಗಿದೆ ಎಂದು ಭಿನ್ನಮತ ಪ್ರಕಟಿಸಿದವರೂ, ಅದನ್ನು ಜನಜಾಗೃತಿ ಚಳವಳಿಯಾಗಿ ರೂಪಿಸುವಲ್ಲಿ ಬೌದ್ಧಿಕ ಪಾತ್ರ ವಹಿಸಿದವರೂ ಕಲ್ಯಾಣ ಪ್ರಭುತ್ವದ ಭಿನ್ನಮತೀಯ ಮಧ್ಯಮ ವರ್ಗದವರೇ ಆಗಿದ್ದಾರೆ.

* ಕಲ್ಯಾಣ ರಾಜ್ಯ ಪ್ರಜಾಪ್ರಭುತ್ವದ ಮಾದರಿಯ ಗುರಾಣಿಯನ್ನು ಇಟ್ಟುಕೊಂಡೇ, 1980-90ರ ಆರ್ಥಿಕ ಉದಾರೀಕರಣ ಹಾಗು ಬಂಡವಾಳಶಾಹಿಯ ಜಾಗತಿಕ ವಿಸ್ತರಣೆಯ ಯೋಜನೆ ಜಾರಿಗೆ ಬಂದಿತು. ಅದಕ್ಕೆ ತಕ್ಷಣಕ್ಕೆ ಬರಬಹುದಾದ ತೀಕ್ಷ್ಣ ಪ್ರತಿರೋಧಗಳನ್ನು ನಿರೀಕ್ಷಿಸಿಯೇ ಮಾಹಿತಿ ತಂತ್ರಜ್ಞಾನದ ಮೂಲಕ ಸಹಮತಿ ಉತ್ಪಾದನೆಯ ಉದ್ಯಮವೂ ಜಾರಿಗೆ ಬಂದಿತು. ಈ ಯುಗದಲ್ಲಿ ಹಳೆಯ ಭಿನ್ನಮತೀಯ ಬೌದ್ಧಿಕ ಮಧ್ಯಮ ವರ್ಗ ಹಾಗು ಜನಸಾಮಾನ್ಯರ ನಡುವೆ ಮಾಹಿತಿ ತಂತ್ರಜ್ಞಾನವು ಒಂದು ಜ್ಞಾನ ಸಂವಹನೆಯ ಕಂದರವನ್ನು ನಿರ್ಮಿಸಿ ಹಾಕಿತು. ಇದೀಗ, 1980ರ ಪೂರ್ವದ ಭಿನ್ನಮತೀಯ ಬೌದ್ಧಿಕ ಮಧ್ಯಮವರ್ಗವು ತನ್ನ ಬೌದ್ಧಿಕ ಜವಾಬ್ದಾರಿಯನ್ನು ನಿರ್ವಹಿಸುವುದಕ್ಕೆ ಉಳಿದ ಎರಡೇ ದಾರಿ: ಸಮಾಜಾಧಿಕಾರ. ಪ್ರಭುತ್ವ ವಿರೋಧಿ ಜನ ಚಳವಳಿಗಳಿಗೆ ಅಧಿಕಾರದ ಕಪಟ ತೋರುವ ಬೌದ್ಧಿಕ ಜ್ಞಾನವಾಹಿನಿಯಾಗುವುದು ಹಾಗು ಮಾಹಿತಿ ತಂತ್ರಜ್ಞಾನ ಉದ್ಯಮದೊಳಗಿಂದ ಎದ್ದು ಬಂದು ಹೆಚ್ಚೆಚ್ಚು ಜನಸಾಮಾನ್ಯರನ್ನು ತಲುಪುವ ದೇಶಭಾಷಾ ಮಾಹಿತಿ ಪ್ರಸಾರದ ನವ ಭಿನ್ನಮತೀಯ ಬೌದ್ಧಿಕ ವರ್ಗವಾಗುವುದು. ದಾಬೋಲ್ಕರ್, ಪನ್ಸಾರೆ, ಕಲಬುರ್ಗಿ ಮೊದಲ ಮಾದರಿಯಾದರೆ, ಗೌರಿ ಎರಡನೇ ಮಾದರಿಯಾಗಿದ್ದಳು. ಗೌರಿಯ ಬಗೆಯಲ್ಲೆ ಜನಸಾಮಾನ್ಯರನ್ನು ತಲುಪುವ ಸಾಮರ್ಥ್ಯವುಳ್ಳ ಇನ್ನೂ 27 ದೇಶಭಾಷೆಯ ಪತ್ರಕರ್ತರು ಹತ್ಯೆಯಾಗಿದ್ದಾರೆ- ಇದು ಆಕಸ್ಮಿಕವಲ್ಲ. ಇದೀಗ, ಮಾಹಿತಿ ತಂತ್ರಜ್ಞಾನದ ಮೂಲಕ, ಅಧಿಕಾರದ ವರಸೆಗಳನ್ನು ಅರಿಯಬಲ್ಲ ಸಂಪನ್ಮೂಲ ಉಳ್ಳ ಬೌದ್ಧಿಕ ಮಧ್ಯಮ ವರ್ಗವು ವಾಸ್ತವಿಕ ಸತ್ಯವನ್ನು ಮಾಹಿತಿ ಮಾಧ್ಯಮಗಳು ಹಾಗು ವಿರೋಧಿ ಚಳವಳಿಗಳ ಮೂಲಕ ಸಾಮಾನ್ಯರಿಗೆ ತಲುಪಿಸುವ ಯುಗ. ಅಪಾಯಗಳು ಹಳೆಯವು- ಬೌದ್ಧಿಕ ಜವಾಬ್ದಾರಿ ವಿಧಾನ ಹೊಸತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಕಲಿ ಆಪಲ್ ಪರಿಕರಗಳ ದಂಧೆ ಭೇದಿಸಿದ ಮುಂಬೈ ಪೊಲೀಸರು; ₹16.33 ಲಕ್ಷ ಮೌಲ್ಯದ ಸರಕುಗಳ ವಶ; ಆರು ಜನರ ವಿರುದ್ಧ ಪ್ರಕರಣ 

ಮುಂಬೈ: ನಕಲಿ ಬ್ರಾಂಡ್ ಸರಕುಗಳ ಮಾರಾಟದ ಮೇಲೆ ಪ್ರಮುಖ ದಾಳಿ ನಡೆಸಿರುವ ಮುಂಬೈ ಪೊಲೀಸರು, ಘಾಟ್ಕೋಪರ್ ಪೂರ್ವದಲ್ಲಿ ನಕಲಿ ಆಪಲ್ ಪರಿಕರಗಳನ್ನು ಮಾರಾಟ ಮಾಡುತ್ತಿದ್ದ ಸಂಘಟಿತ ದಂಧೆಯನ್ನು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ 16.33...

ಇರಾನ್ ನಮ್ಮ ದೀರ್ಘಕಾಲೀನ ಮಿತ್ರ ರಾಷ್ಟ್ರ; ವಿಶ್ವಾಸಾರ್ಹ ಪಾಲುದಾರರೊಂದಿಗೆ ನಿಲ್ಲಲು ವಿಫಲವಾದರೆ ಭಾರತಕ್ಕೆ ಭಾರಿ ನಷ್ಟ: ರಾಜ್ ಠಾಕ್ರೆ

ಸೂಕ್ತ ಸಮಯದಲ್ಲಿ ಕೇಂದ್ರ ಸರ್ಕಾರ ಇರಾನ್‌ಗೆ ಬೆಂಬಲ ನೀಡದಿರುವುದನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಪ್ರಶ್ನಿಸಿದ್ದಾರೆ.​ ಈ ಕುರಿತು ಗುರುವಾರ (ಮಾ.19) ಮಾತನಾಡಿರುವ ಅವರು, "ಇರಾನ್ ಭಾರತದ ದೀರ್ಘಕಾಲೀನ ಮಿತ್ರ...

ಕೇರಳ: 2026 ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧ; ಹಾಲಿ ಸಂಸದರು, ಲೈಂಗಿಕ ಪ್ರಕರಣದ ಆರೋಪಿಗಳಿಗಿಲ್ಲ ಸ್ಥಾನ

ತಿರುವನಂತಪುರಂ: ಬಹಳ ದಿನಗಳ ನಂತರ, ಏಪ್ರಿಲ್ 9 ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಕೇರಳದ ಉಳಿದ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.  ಕಣ್ಣೂರು ಕಾರ್ಪೊರೇಷನ್‌ನ ಮಾಜಿ ಮೇಯರ್ ಟಿ.ಒ. ಮೋಹನನ್ ಅವರನ್ನು ಕಣ್ಣೂರಿನಲ್ಲಿ...

‘ನೀವು ಶಂಕಿತ’ : ಮುಹಮ್ಮದ್ ದೀಪಕ್‌ಗೆ ಉತ್ತರಾಖಂಡ ಹೈಕೋರ್ಟ್ ತರಾಟೆ!

ಇತ್ತೀಚೆಗೆ ಹಿಂದುತ್ವವಾದಿಗಳ ದಾಳಿಯಿಂದ ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸಿ ಶ್ಲಾಘನೆಗೆ ಪಾತ್ರರಾದ ಮುಹಮ್ಮದ್ ದೀಪಕ್ (ದೀಪಕ್ ಕುಮಾರ್) ಅವರನ್ನು ಉತ್ತರಾಖಂಡ ಹೈಕೋರ್ಟ್ ಗುರುವಾರ (ಮಾ.19) ತೀವ್ರ ತರಾಟೆಗೆ ತೆಗೆದುಕೊಂಡಿದೆ ಎಂದು barandbench.com ವರದಿ...

ಎಂಟು ವರ್ಷ ಜೈಲಿನಲ್ಲಿ ಕಳೆದ ಬಳಿಕ ಯುಎಪಿಎ ಅಡಿ ಬಂಧಿತ ಇಬ್ಬರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

ಏಳು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದ ನಂತರ, ದೆಹಲಿ ನ್ಯಾಯಾಲಯವು ಗುರುವಾರ (ಮಾರ್ಚ್ 19, 2026) ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲ್ಪಟ್ಟ ಇಬ್ಬರು ವ್ಯಕ್ತಿಗಳನ್ನು ಖುಲಾಸೆಗೊಳಿಸಿದೆ...

ಹಾವಿನ ವಿಷ ಪ್ರಕರಣ : ಎಲ್ವಿಶ್ ಯಾದವ್ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧದ ಹಾವಿನ ವಿಷ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ಮತ್ತು ಕ್ರಿಮಿನಲ್ ಪ್ರಕ್ರಿಯೆಗಳನ್ನು ಸುಪ್ರೀಂ ಕೋರ್ಟ್ ಗುರುವಾರ (ಮಾ.19) ರದ್ದುಗೊಳಿಸಿದೆ.  ವನ್ಯಜೀವಿ (ರಕ್ಷಣೆ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲು ಅಧಿಕೃತ ವ್ಯಕ್ತಿಯಿಂದ ದೂರು...

ದೆಹಲಿಯ ಉತ್ತಮ್ ನಗರದಲ್ಲಿ ಮುಸ್ಲಿಮರಿಗೆ ಬೆದರಿಕೆ; ಅಮಿತ್ ಶಾಗೆ ಪತ್ರ ಬರೆದ ವಿಪಕ್ಷ ಸಂಸದರು

ರಾಷ್ಟ್ರ ರಾಜಧಾನಿಯ ಉತ್ತಮ್ ನಗರದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹಿಂದುತ್ವ ಗುಂಪುಗಳು ಮಾಡುತ್ತಿರುವ ಬೆದರಿಕೆಗಳ ಬಗ್ಗೆ ತುರ್ತು ಹಸ್ತಕ್ಷೇಪವನ್ನು ಕೋರಿ ಹಲವಾರು ವಿರೋಧ ಪಕ್ಷದ ಸದಸ್ಯರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ...

‘ಇರಾನ್ ಕತಾರ್ ಮೇಲೆ ಮತ್ತೊಮ್ಮೆ ದಾಳಿ ಮಾಡಿದರೆ, ಸೌತ್ ಪಾರ್ಸ್ ಅನಿಲ ಕ್ಷೇತ್ರವನ್ನು ಸ್ಪೋಟಿಸುತ್ತೇವೆ’; ಟ್ರಂಪ್ ಬೆದರಿಕೆ

ಇರಾನ್ ಕತಾರ್‌ನ ಇಂಧನ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡರೆ, ಅಮೆರಿಕ ”ಸೌತ್ ಪಾರ್ಸ್ ಅನಿಲ ಕ್ಷೇತ್ರವನ್ನು ಬೃಹತ್ ಪ್ರಮಾಣದಲ್ಲಿ ಸ್ಫೋಟಿಸುತ್ತದೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ರಾಜ್ಯಸಭೆಯಲ್ಲಿ ಎಚ್ಚರಿಸಿದ್ದಾರೆ. ಇರಾನ್‌ನ ಸೌತ್ ಪಾರ್ಸ್ ಗ್ಯಾಸ್...

ಮುಸ್ಲಿಂ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದಾಗಿ ಹೇಳಿಕೊಂಡ ಓಲಾ ಚಾಲಕ; ‘ಇಸ್ಲಾಮೋಫೋಬಿಕ್’ ಕುರಿತು ಆತಂಕ ವ್ಯಕ್ತಪಡಿಸಿದ ವಕೀಲ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಓಲಾ ಕ್ಯಾಬ್ ಪ್ರಯಾಣದ ಸಂದರ್ಭದಲ್ಲಿ ಚಾಲಕನಿಂದ ನನಗೆ ಬೆದರಿಕೆ ಮತ್ತು ಇಸ್ಲಾಮೋಫೋಬಿಕ್ ಹೇಳಿಕೆಗಳು ಬಂದಿವೆ ಎಂದು ಸುಪ್ರೀಂ ಕೋರ್ಟ್ ವಕೀಲರೊಬ್ಬರು ಆರೋಪಿಸಿದ್ದಾರೆ. ಈ ಘಟನೆಯು, ಪ್ರಯಾಣಿಕರ ಸುರಕ್ಷತೆ ಮತ್ತು...

ಬೆಳ್ತಂಗಡಿ | ಮುಸ್ಲಿಂ ಬಾಲಕನ ಮೇಲೆ ಗುಂಪು ಹಲ್ಲೆ ಆರೋಪ; ಬಜರಂಗದಳದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಸ್ನೇಹಿತರೊಂದಿಗೆ ತೆರಳಿದ್ದ ಮುಸ್ಲಿಂ ಬಾಲಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ಅಪಹರಿಸಿ, ಬೆದರಿಕೆ ಹಾಕಿ ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪದಡಿ...