Homeಚಳವಳಿಪ್ರತಿರೋಧದ ಗತಿ-ಇಂದಿನ ಸ್ಥಿತಿ ಐದು ಅಂಶಗಳು : ಕೆ.ಫಣಿರಾಜ್

ಪ್ರತಿರೋಧದ ಗತಿ-ಇಂದಿನ ಸ್ಥಿತಿ ಐದು ಅಂಶಗಳು : ಕೆ.ಫಣಿರಾಜ್

- Advertisement -
- Advertisement -

ಬಳ್ಳಾರಿಯ ಫಣಿರಾಜ್ ಅವರ ಕರ್ಮಭೂಮಿ ಉಡುಪಿ. ಇಂಜಿನಿಯರಿಂಗ್ ಪ್ರಾಧ್ಯಾಪಕರಾಗಿದ್ದು, ಕನ್ನಡದ ಮುಖ್ಯ ಚಿಂತಕರಲ್ಲೊಬ್ಬರಾದ ಅವರು ಮೂಲತಃ ಒಬ್ಬ ಆಕ್ಟಿವಿಸ್ಟ್. ಪ್ರತಿನಿತ್ಯ ಅವರು ಚಿಂತಿಸುವುದು ಸಮಾಜ ಬದಲಾವಣೆ, ಸಿನೆಮಾ ಮತ್ತು ಕರಾವಳಿಯ ನಿತ್ಯದ ಸಮಸ್ಯೆಗಳ ಕುರಿತು. ಎಡಪಂಥೀಯರಾಗಿದ್ದೂ ಭಿನ್ನಮತ ಕಾಪಾಡಿಕೊಂಡು, ಅಂಬೇಡ್ಕರ್, ಗಾಂಧಿ, ಗ್ರಾಮ್ಶಿ ಎಲ್ಲರ ಜೊತೆ ಸಾವಯವ ಸಹವಾಸ ಇಟ್ಟುಕೊಂಡಿದ್ದಾರೆ.

* ಸ್ವತಃ ಪ್ರಖ್ಯಾತ ಭಾಷಾ ಶಾಸ್ತ್ರಜ್ಞರಾಗಿದ್ದೂ, ತನ್ನ ಶಾಸ್ತ್ರೀಯ ವೃತ್ತಿಯಾಚೆಗಿನ ಪ್ರಾಪಂಚಿಕ ಆಗುಹೋಗುಗಳಿಗೆ ತೆರೆದುಕೊಂಡು, ತಾನು ವಾಸಿಸುತ್ತಿರುವ ದೇಶದ ಪ್ರಭುತ್ವ ನೀತಿಗಳನ್ನು ಕಟುವಾಗಿ ವಿಮರ್ಶಿಸುತ್ತಿರುವವರು ನೋಮ್ ಚಾಮ್‍ಸ್ಕಿ. ಅವರು, ಎಲ್ಲ ಮನುಷ್ಯರಿಗೂ ಬೌದ್ಧಿಕ ಜ್ಞಾನವಿರುತ್ತದೆ ಎಂಬ ಸಹಜ ನೆಲೆಯಲ್ಲಿ, ‘ಬುದ್ಧಿಜೀವಿ’ಗಳು ಎಂದರೆ, ಇಂದಿನ ಅಸಮಾನ ಜ್ಞಾನ ಸಮಾಜದಲ್ಲಿ, ಅಧಿಕಾರದ ಆಗುಹೋಗುಗಳ ಬಗ್ಗೆ ಖಚಿತವಾದ ಮಾಹಿತಿ ಸಂಪನ್ಮೂಲವನ್ನು ಪಡೆಯುವ ಸವಲತ್ತು ಇರುವ ಒಂದು ಸಾಮಾಜಿಕ ವರ್ಗವೆಂದು ವಿವರಿಸುತ್ತಾರೆ. ಮತ್ತೂ, ಬುದ್ಧಿಜೀವಿ ವರ್ಗದ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಹೀಗೆ ಹೇಳುತ್ತಾರೆ: ಅಧಿಕಾರ ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ಖಚಿತವಾದ ವಿವರಗಳನ್ನು, ಪ್ರತಿರೋಧಿಸಲು ಸಾಧ್ಯವಿರುವ (ಹಾಗು ವಿವರಗಳನ್ನು ಪಡೆಯಲಾರದ ಸ್ಥಿತಿಯಲ್ಲಿರುವ) ಸಾಮಾನ್ಯ ಜನರಿಗೆ ತಲುಪಿಸುವುದು.

* ದೇಶದ ಸಮಚಿತ್ತದ ಬೌದ್ಧಿಕರಲ್ಲಿ ಒಬ್ಬರಾಗಿರುವ ಅಶೋಕ್ ವಾಜಪೇಯಿಯವರು, 2017ರಲ್ಲಿ, ‘ಇಂಡಿಯ ಡಿಸೆಂಟ್ಸ್: ಥ್ರೀ ಥೌಸೆಂಡ್ ಯಿಯರ್ಸ ಆಫ್ ಡಿಫೆರೆನ್ಸ್, ಡೌಟ್ ಅಂಡ್ ಅರ್ಗ್ಯುಮೆಂಟ್ಸ್’ (ಭಾರತದಲ್ಲಿ ಭಿನ್ನಮತ: ಮೂರು ಸಾವಿರ ವರ್ಷಗಳ ವಿರೋಧ, ಅನುಮಾನ ಹಾಗು ವಾಗ್ವಾದ) ಎಂಬ ಪುಸ್ತಕವನ್ನು ಸಂಪಾದಿಸಿದ್ದಾರೆ. ಅದರಲ್ಲಿ ಅವರು, ಅತಿ ಪ್ರಾಚೀನ ಗ್ರಂಥವಾದ ಋಗ್ವೇದದ ಅನುಮಾನಸಹಿತವಾದ ಸೂತ್ರಗಳಿಂದ ಹಿಡಿದು, ಬುದ್ಧ, ಸುಭಾಷಿತ, ಸಾಂಖ್ಯ ದರ್ಶನ, ಚಾರ್ವಾಕ ದರ್ಶನ, ವಚನ, ಸೂಫಿ ಚಿಂತನೆ, ಭಕ್ತಿ ಸಾಹಿತ್ಯಗಳಿಂದ ಹಿಡಿದು ಫುಲೆ ದಂಪತಿಗಳು, ಗಾಂಧಿ, ಅಂಬೇಡ್ಕರ್, ನಾರಾಯಣ ಗುರು, ಪೆರಿಯಾರ್, ಲೋಹಿಯ, ಜೇಪಿ, ದಲಿತ ಸಾಹಿತ್ಯ, ನಕ್ಸಲ್ ಚಳವಳಿಯಿಂದ ಪ್ರೇರಿತವಾದ ಸಾಹಿತ್ಯ ಹಾಗು ರವೀಶ್‍ಕುಮಾರರ ಚಿಂತನೆಗಳವರೆಗಿನ ಸುದೀರ್ಘವಾದ ಭಿನ್ನಮತ ಪರಂಪರೆ ಭಾರತಕ್ಕಿದೆ ಎಂದು ತಿಳಿಸಬಯಸುತ್ತಾರೆ. ಭಿನ್ನಮತವೆಂದರೆ ‘ದೇಶದ್ರೋಹ’ವೆನ್ನುವಂತೆ ಜನಜನಿತಗೊಳಿಸುವ ಕಾಲದಲ್ಲಿ ಅಶೋಕ್ ವಾಜಪೇಯಿಯವರು ಸಕಾಲಿಕವಾಗಿ ಈ ಗ್ರಂಥ ಪ್ರಕಟಿಸಿರುವರು- ಆ ಮೂಲಕ ಭಿನ್ನಮತದ ಮಹತ್ವವನ್ನು ಗಟ್ಟಿಯಾಗಿ ಹೇಳಲು ಬಯಸಿರುವರು.

* ಬ್ರಿಟಿಷ್ ವಸಾಹತುಶಾಹಿಯ ಕಾಲದಲ್ಲಿ, ಬೌದ್ಧಿಕ ಕೆಲಸಗಳನ್ನು ಮಾತ್ರ ನಿರ್ವಹಿಸುವ ಉದ್ಯೋಗಗಳಲ್ಲಿ ನಿರತವಾದ ‘ಮಧ್ಯಮ ವರ್ಗ’ವು ರೂಪ ತಾಳಿತು. ಬ್ರಿಟಿಷರು ತಮ್ಮ ಆಡಳಿತ ವ್ಯವಸ್ಥೆಯ ಸಕ್ಷಮತೆಗೆ ಪೂರಕವಾದ ಮಾನವ ಸಂಪನ್ಮೂಲ ಸೃಷ್ಟಿಗೆ ಸಹಕಾರಿಯಾಗುವಂತೆ, ಆಧುನಿಕ ಶಿಕ್ಷಣ-ಉದ್ಯೋಗ ವ್ಯವಸ್ಥೆಯನ್ನು ನಿರ್ಮಿಸಿದರು; ಆದರೂ ಈ ಮಧ್ಯಮ ವರ್ಗದ ನಡುವಿಂದಲೇ, ವಸಾಹತುಶಾಹಿ ಆಡಳಿತವನ್ನು ಪ್ರತಿರೋಧಿಸುವ ಬೌದ್ಧಿಕತೆ ಹುಟ್ಟಿಕೊಂಡಿತು. ಬೌದ್ಧಿಕ ಸಂಪನ್ಮೂಲ ಉಳ್ಳ ವಕೀಲರು, ಶಿಕ್ಷಕರು, ವಿಜ್ಞಾನಿಗಳು, ವೈದ್ಯರು ಹಾಗು ಭೂಮಾಲಿಕರು-ವ್ಯಾಪಾರಸ್ಥ ವರ್ಗಗಳ ಮಂದಿ ಹೀಗೆ ವಿದ್ಯೆ ಪಡೆದುಕೊಂಡರು. ಈ ಮಧ್ಯಮ ವರ್ಗಗಳಿಂದ ಹುಟ್ಟಿಬಂದ ಚಿಂತಕರು ವಸಾಹತುಶಾಹಿ ವಿರೋಧಿ ಹೋರಾಟದ ಚಿಂತನೆಗಳ ಬೆನ್ನೆಲುಬಾಗಿತ್ತು. ಈ ಬಗೆಯ ಚಟುವಟಿಕೆಗಳ ನಿಯಂತ್ರಣಕ್ಕೆ ಜಾರಿ ಮಾಡಲಾದ ‘ಶಿಕ್ಷಾರ್ಹ ಅಪರಾಧ’ಗಳ ಕಠಿಣ ಕಾನೂನುಗಳು ಹಾಗು ಅದೇ ನಮೂನೆಯ ಹೊಸ ಶಿಕ್ಷೆ ಸಂಹಿತೆಗಳೂ, ಸ್ವಾತಂತ್ರೋತ್ತರ ಯುಗದಲ್ಲಿ ಈ ನಮೂನೆಯ ಬೌದ್ಧಿಕ ಅಭಿವ್ಯಕ್ತಿಗೆ ಕಡಿವಾಣಕ್ಕೆ ಜಾರಿಯಾಗಿವೆ!

* ಎರಡನೇ ಮಹಾಯುದ್ಧೋತ್ತರ ಕಾಲದಲ್ಲಿ, ಅಂದಿನ ಸಂಪತ್ತು ಉತ್ಪಾದನೆಯ ಆಧುನಿಕ ಉತ್ಪಾದನಾ ವ್ಯವಸ್ಥೆ ಧ್ವಂಸವಾಗಿ ಹೋಗಿತ್ತು. ಸಮಾಜದ ಸಕಲ ಸಂಪನ್ಮೂಲಗಳನ್ನು ಬಳಸಿಕೊಂಡು ದೇಶಗಳು ತಮ್ಮ ಸ್ವಾಯತ್ತತೆ ಕಾಪಾಡಿಕೊಳ್ಳಬೇಕಾಗಿದ್ದ ಆ ಹೊತ್ತಲ್ಲಿ ಆಚರಣೆಗೆ ಬಂದ ‘ಕಲ್ಯಾಣ ರಾಜ್ಯ ಪ್ರಜಾಪ್ರಭುತ್ವ’ಕ್ಕೆ ಬೆನ್ನೆಲುಬಾಗಿದ್ದವರೂ ವಿಜ್ಞಾನ-ತಂತ್ರಜ್ಞಾನ-ಸಮಾಜಶಾಸ್ತ್ರ-ಮಾನವೀಕ ಶಾಸ್ತ್ರಗಳ ಬೌದ್ಧಿಕ ಮಧ್ಯಮ ವರ್ಗದವರು. ಈ ನಮೂನೆಯ ಪ್ರಭುತ್ವದ ಟೀಕಾಕಾರರಾಗಿದ್ದು, ಇದು ಉಳ್ಳವರಿಗೆ ಅನುಕೂಲವಾದ ಪ್ರಭುತ್ವ ವ್ಯವಸ್ಥೆಯಾಗಿದೆ ಎಂದು ಭಿನ್ನಮತ ಪ್ರಕಟಿಸಿದವರೂ, ಅದನ್ನು ಜನಜಾಗೃತಿ ಚಳವಳಿಯಾಗಿ ರೂಪಿಸುವಲ್ಲಿ ಬೌದ್ಧಿಕ ಪಾತ್ರ ವಹಿಸಿದವರೂ ಕಲ್ಯಾಣ ಪ್ರಭುತ್ವದ ಭಿನ್ನಮತೀಯ ಮಧ್ಯಮ ವರ್ಗದವರೇ ಆಗಿದ್ದಾರೆ.

* ಕಲ್ಯಾಣ ರಾಜ್ಯ ಪ್ರಜಾಪ್ರಭುತ್ವದ ಮಾದರಿಯ ಗುರಾಣಿಯನ್ನು ಇಟ್ಟುಕೊಂಡೇ, 1980-90ರ ಆರ್ಥಿಕ ಉದಾರೀಕರಣ ಹಾಗು ಬಂಡವಾಳಶಾಹಿಯ ಜಾಗತಿಕ ವಿಸ್ತರಣೆಯ ಯೋಜನೆ ಜಾರಿಗೆ ಬಂದಿತು. ಅದಕ್ಕೆ ತಕ್ಷಣಕ್ಕೆ ಬರಬಹುದಾದ ತೀಕ್ಷ್ಣ ಪ್ರತಿರೋಧಗಳನ್ನು ನಿರೀಕ್ಷಿಸಿಯೇ ಮಾಹಿತಿ ತಂತ್ರಜ್ಞಾನದ ಮೂಲಕ ಸಹಮತಿ ಉತ್ಪಾದನೆಯ ಉದ್ಯಮವೂ ಜಾರಿಗೆ ಬಂದಿತು. ಈ ಯುಗದಲ್ಲಿ ಹಳೆಯ ಭಿನ್ನಮತೀಯ ಬೌದ್ಧಿಕ ಮಧ್ಯಮ ವರ್ಗ ಹಾಗು ಜನಸಾಮಾನ್ಯರ ನಡುವೆ ಮಾಹಿತಿ ತಂತ್ರಜ್ಞಾನವು ಒಂದು ಜ್ಞಾನ ಸಂವಹನೆಯ ಕಂದರವನ್ನು ನಿರ್ಮಿಸಿ ಹಾಕಿತು. ಇದೀಗ, 1980ರ ಪೂರ್ವದ ಭಿನ್ನಮತೀಯ ಬೌದ್ಧಿಕ ಮಧ್ಯಮವರ್ಗವು ತನ್ನ ಬೌದ್ಧಿಕ ಜವಾಬ್ದಾರಿಯನ್ನು ನಿರ್ವಹಿಸುವುದಕ್ಕೆ ಉಳಿದ ಎರಡೇ ದಾರಿ: ಸಮಾಜಾಧಿಕಾರ. ಪ್ರಭುತ್ವ ವಿರೋಧಿ ಜನ ಚಳವಳಿಗಳಿಗೆ ಅಧಿಕಾರದ ಕಪಟ ತೋರುವ ಬೌದ್ಧಿಕ ಜ್ಞಾನವಾಹಿನಿಯಾಗುವುದು ಹಾಗು ಮಾಹಿತಿ ತಂತ್ರಜ್ಞಾನ ಉದ್ಯಮದೊಳಗಿಂದ ಎದ್ದು ಬಂದು ಹೆಚ್ಚೆಚ್ಚು ಜನಸಾಮಾನ್ಯರನ್ನು ತಲುಪುವ ದೇಶಭಾಷಾ ಮಾಹಿತಿ ಪ್ರಸಾರದ ನವ ಭಿನ್ನಮತೀಯ ಬೌದ್ಧಿಕ ವರ್ಗವಾಗುವುದು. ದಾಬೋಲ್ಕರ್, ಪನ್ಸಾರೆ, ಕಲಬುರ್ಗಿ ಮೊದಲ ಮಾದರಿಯಾದರೆ, ಗೌರಿ ಎರಡನೇ ಮಾದರಿಯಾಗಿದ್ದಳು. ಗೌರಿಯ ಬಗೆಯಲ್ಲೆ ಜನಸಾಮಾನ್ಯರನ್ನು ತಲುಪುವ ಸಾಮರ್ಥ್ಯವುಳ್ಳ ಇನ್ನೂ 27 ದೇಶಭಾಷೆಯ ಪತ್ರಕರ್ತರು ಹತ್ಯೆಯಾಗಿದ್ದಾರೆ- ಇದು ಆಕಸ್ಮಿಕವಲ್ಲ. ಇದೀಗ, ಮಾಹಿತಿ ತಂತ್ರಜ್ಞಾನದ ಮೂಲಕ, ಅಧಿಕಾರದ ವರಸೆಗಳನ್ನು ಅರಿಯಬಲ್ಲ ಸಂಪನ್ಮೂಲ ಉಳ್ಳ ಬೌದ್ಧಿಕ ಮಧ್ಯಮ ವರ್ಗವು ವಾಸ್ತವಿಕ ಸತ್ಯವನ್ನು ಮಾಹಿತಿ ಮಾಧ್ಯಮಗಳು ಹಾಗು ವಿರೋಧಿ ಚಳವಳಿಗಳ ಮೂಲಕ ಸಾಮಾನ್ಯರಿಗೆ ತಲುಪಿಸುವ ಯುಗ. ಅಪಾಯಗಳು ಹಳೆಯವು- ಬೌದ್ಧಿಕ ಜವಾಬ್ದಾರಿ ವಿಧಾನ ಹೊಸತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಶರ್ಮಿಳಾ ಧನ್ಖರ್

ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ...

ಬಿಹಾರ: ವಿದ್ಯಾರ್ಥಿಗಳ ವಿರುದ್ಧ ಎಕೆ-47 ರೈಫಲ್ ಬಳಕೆ: ಗುಂಡು ಹಾರಿಸಲು ಆದೇಶಿಸಿದವರ ವಿರುದ್ಧ ತನಿಖೆಗೆ ಮನೋಜ್ ಝಾ ಆಗ್ರಹ; ಸುಪ್ರೀಂ ಮೆಟ್ಟಿಲೇರಿದ ಪ್ರಕರಣ

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಪ್ರಸ್ತಾವನೆ ತಿರಸ್ಕರಿಸಿದ್ದ ಸಿಜೆಪಿ: ವರದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)...

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...