Homeಮುಖಪುಟ'ಪಬ್ಲಿಕ್ ಟಾಯ್ಲೆಟ್' ಕಿರುಚಿತ್ರ ವಿಮರ್ಶೆ: ರಾಜಶೇಖರ್ ಅಕ್ಕಿ

‘ಪಬ್ಲಿಕ್ ಟಾಯ್ಲೆಟ್’ ಕಿರುಚಿತ್ರ ವಿಮರ್ಶೆ: ರಾಜಶೇಖರ್ ಅಕ್ಕಿ

ವಿಷಯದ ಆಳಕ್ಕೆ ಇಳಿಯದೇ ನೋಡುಗರಿಗೆ ‘ಮನುಷ್ಯರ ಆಳ ಸಂವೇದನೆಗಳು ಮನುಷ್ಯತ್ವದ ಕಡೆಗೇ ಚಲಿಸುತ್ತಿರುಬೇಕು’ ಎಂಬ ಮಹತ್ತರ ಸಂದೇಶ ನೀಡುವ ಉದ್ದೇಶದಿಂದ ಚಿತ್ರವನ್ನು ಮಾಡಿದ್ದಾರೆ.

- Advertisement -
- Advertisement -

ಯಾವುದೇ ಅಪರಾಧ ಆಗಿರಲಿ, ಅದೊಂದು ಅತ್ಯಂತ ನೋವು ತರಿಸುವ ಸಂಗತಿ. ಅದರಲ್ಲಿ ಕೆಲವು ಸಂಗತಿಗಳು ನಮ್ಮನ್ನು ಸುಮ್ಮನೇ ಇರಲು ಬಿಡುವುದಿಲ್ಲ. ಅಪರಾಧ ಎಷ್ಟು ಘೋರವಾಗಿ ತಟ್ಟಿರುತ್ತೆ ಎಂದರೆ, ಅದರಲ್ಲಿ ನಾವೂ ಭಾಗಿ ಎಂದೆನಿಸುತ್ತದೆ ಹಾಗೂ ಅದು ಸತ್ಯವೂ ಕೂಡ. ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಆಗುವ ಎಲ್ಲಾ ಅಪರಾಧಗಳಲ್ಲಿ ಅಪರೋಕ್ಷವಾಗಿ ಭಾಗಿಯೇ.

ಇಂತಹ ಒಂದು ಅಪರಾಧ ನಡೆದಾಗ, ಅದಕ್ಕೆ ಕೇವಲ ಆ ಅಪರಾಧಿ ಮಾತ್ರ ಭಾಗಿಯಾಗದೇ, ಸಮಾಜವೇ ಭಾಗಿಯಾಗಿ ಅದನ್ನು ಸಂಭ್ರಮಿಸಿ, ಅಪರಾಧಕ್ಕೆ ತುತ್ತಾದವರನ್ನು ಇನ್ನಷ್ಟು ಕ್ಷೋಭೆಗೆ ಸಿಲುಕುವ ಕೆಲಸ ಮಾಡಿದಾಗ, ಅದಕ್ಕಾಗಿ ಏನಾದರೂ ಮಾಡಬೇಕು ಎಂದು ಎಲ್ಲರಿಗೂ ಅನಿಸುವುದು ಸಹಜ. ಆ ಅಪರಾಧಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು, ಅಂತಹ ಅಪರಾಧಗಳು ಮತ್ತೊಮ್ಮೆ ಆಗಬಾರದು ಎಂದು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು, ಕೆಲವು ಸಲ ಆ ವಿಷಯಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಎನ್ನುವ ಅನೇಕ ಕೆಲಸಗಳನ್ನು ಸಮಾಜದ ಕೆಲವು ಅಂಗಗಳು ಮಾಡುತ್ತವೆ.

ಅಂತಹದ್ದೇ ಒಂದು ಘೋರ ಅಪರಾಧದ ಬಗ್ಗೆ ನೊಂದಿರುವ ಯುವ ನಿರ್ದೇಶಕ ನಾಗೇಶ್ ಹೆಬ್ಬೂರು ಅವರು ‘ಪಬ್ಲಿಕ್ ಟಾಯ್ಲೆಟ್’ ಎಂಬ ಕಿರುಚಿತ್ರವನ್ನು ಮಾಡಿದ್ದಾರೆ. ಒಂದು ಸಾರ್ವಜನಿಕ ಶೌಚಾಲಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ, ಆ ಕ್ರಿಯೆಯನ್ನು ಒಬ್ಬ ಕ್ಯಾಮೆರದಲ್ಲಿ ಸೆರೆ ಹಿಡಿದು, ಎಲ್ಲೆಡೆ ಹಂಚಲಾಗಿತ್ತು, ತದನಂತರ ಆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಳು ಎನ್ನಲಾದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು ಸುದ್ದಿಯಾಗಿತ್ತು. ಇದೇ ವಿಷಯವನ್ನು ಇಟ್ಟುಕೊಂಡು ಈ ಕಿರುಚಿತ್ರವನ್ನು ಮಾಡಲಾಗಿದೆ.

ಇಂತಹ ವಿಷಯಗಳಲ್ಲಿ ಯಾರನ್ನು ಚಿತ್ರದ ಮುಖ್ಯಪಾತ್ರವನ್ನಾಗಿ ಮಾಡಬೇಕು ಎಂಬದು ಯಾವಾಗಲೂ ಒಂದು ಪ್ರಶ್ನೆ ಇರುತ್ತದೆ. ಈ ಚಿತ್ರದಲ್ಲಿ ತನ್ನ ಕ್ಯಾಮೆರದಲ್ಲಿ ಆ ದೃಶ್ಯವನ್ನು ಸೆರೆಹಿಡಿದ ವ್ಯಕ್ತಿಯನ್ನೇ ಪ್ರಮುಖಪಾತ್ರ ಮಾಡಲಾಗಿದೆ. ಅದು ಸರಿ ಕೂಡ. ಇಂತಹ ಘೋರ ಕೃತ್ಯಗಳನ್ನು ಎಸಗುತ್ತಾದರೂ ಏಕೆ ಎಂದು ತಿಳಿದು, ಅದರ ಬಗ್ಗೆ ಪರಿಹಾರ ಕಂಡುಕೊಳ್ಳಬೇಕಾದರೆ ಅಪರಾಧಿಯ ಮನೋಸ್ಥಿತಿಯನ್ನು ಪ್ರಮಾಣಿಕ ಪ್ರಯತ್ನ ಆಗಲೇಬೇಕು.

ಹೌದು ಈ ಚಿತ್ರದ ಉದ್ದೇಶವೂ ಪ್ರಾಮಾಣಿಕವಾಗಿಯೇ ಇದೆ. ಆದರೆ,

ಆ ಅಪರಾಧಿಯ ಮನೋಸ್ಥಿತಿಯನ್ನು ಅರಿಯುವ ಪ್ರಾಮಾಣಿಕ ಪ್ರಯತ್ನ ಕಾಣುವುದಿಲ್ಲ. ಅಂತಹ ಒಂದು ದೃಶ್ಯವನ್ನು ತನ್ನ ಫೋನಿನಲ್ಲಿ ಸೆರೆಹಿಡಿದು, ಎಲ್ಲೆಡೆ ವೈರಲ್ ಮಾಡಬೇಕಾದರೆ ಆ ವ್ಯಕ್ತಿ ಎಂಥವನಿರಬಹುದು, ಆ ಕ್ರೌರ್ಯ ಹೇಗೆ ಬಂದಿರಬಹುದು, ಆ ಮಟ್ಟದ ಅಸೂಕ್ಷ್ಮತೆಯನ್ನೆ ಹೇಗೆ ಅಳವಡಿಸಿಕೊಂಡಿರಬಹುದು, ಅದನ್ನು ವೈರಲ್ ಮಾಡಿ, ವಿಕೃತ ಖುಷಿಯನ್ನು ಅನುಭವಿಸಲು ಒಬ್ಬ ವ್ಯಕ್ತಿಗೆ ಹೇಗೆ ಸಾಧ್ಯ ಎಂಬ ಯಾವ ಪ್ರಶ್ನೆಗೂ ಉತ್ತರ ಸಿಗುವುದಿಲ್ಲ, ವಾಸ್ತವದಲ್ಲಿ ಆ ಪ್ರಶ್ನೆಗಳಿಗೆ ಉತ್ತರ ಹುಡುಕುವ ಗೋಜಿಗೇ ಹೋಗಿಲ್ಲ. ಆ ವಿಡಿಯೋ ವೈರಲ್ ಮಾಡಿ, ಬರುವ ಲೈಕ್‌ಗಳು, ವೀವ್ಸ್‌ಗಳಿಂದ ಅನುಂದತುಲಿತನಾಗುತ್ತದ್ದ ವ್ಯಕ್ತಿ, ಯಾರೋ ಒಬ್ಬ ಅದನ್ನು ಟೀಕಿಸಿದೊಡನೇ, ಈತನ ತಪ್ಪಿತಸ್ಥ ಭಾವನೆ ಜಾಗೃತವಾಗುತ್ತದೆ. ಅಲ್ಲಿಯವರೆಗೆ ಕಥೆಯನ್ನು ‘ಕಾಮೆಡಿ’ಯಾಗಿ ಚಿತ್ರಿಸಲು ಪ್ರಯತ್ನಿಸಿ, ತದನಂತರ ಚಿತ್ರದ ಟ್ರೀಟ್‌ಮೆಂಟ್‌ಅನ್ನು ಗಂಭೀರತೆಗೆ ಬದಲಾಯಿಸುತ್ತಾರೆ. ಆ ನಂತರ ಆ ತಪ್ಪಿತಸ್ಥ ಭಾವನೆಯೊಂದಿಗೆ ಅವನು ಹೇಗೆ ಒದ್ದಾಡುತ್ತಾನೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಅಲ್ಲಿಯೂ, ಯಾವುದೇ ಅಧ್ಯಯನ ಮಾಡದೇ, ವಿಷಯದ ಆಳಕ್ಕೆ ಇಳಿಯದೇ ನೋಡುಗರಿಗೆ ‘ಮನುಷ್ಯರ ಆಳ ಸಂವೇದನೆಗಳು ಮನುಷ್ಯತ್ವದ ಕಡೆಗೇ ಚಲಿಸುತ್ತಿರುಬೇಕು’ ಎಂಬ ಮಹತ್ತರ ಸಂದೇಶ ನೀಡುವ ಉದ್ದೇಶದಿಂದ ಚಿತ್ರವನ್ನು ಮಾಡಿದ್ದಾರೆ.

ಯಾವುದೇ ಒಂದು ಘಟನೆಯನ್ನು ಆಧಾರಿಸಿ ಸಿನೆಮಾ ಮಾಡಬೇಕಾದರೆ, ಅದನ್ನು ಸಿನೆಮಾದ ಚೌಕಟ್ಟಿನಲ್ಲಿ ಇಳಿಸಬೇಕಾಗುತ್ತದೆ. ಸಿನೆಮಾ ಎಂಬ ಮಾಧ್ಯಮದ ಇತಿಮಿತಿ ಮತ್ತು ಸಾಮರ್ಥ್ಯಗಳನ್ನು ಅರಿತು ಅದರನುಗುಣವಾಗಿ ಮಾಡಬೇಕಾಗುತ್ತದೆ. ಅದನ್ನೂ ಮಾಡದೆ, ವಿಷಯವಸ್ತುವಿನ ಆಳ ಅಧ್ಯವನ್ನೂ ಮಾಡದೇ, ಕೇವಲ ‘ಒಂದೊಳ್ಳೆ’ ಸಂದೇಶ ನೀಡಲೆಂದು ಸಿನೆಮಾ ಮಾಡುವುದೆಂದರೆ?


ಇದನ್ನೂ ಓದಿ; ಸಿನೆಮಾ ಮತ್ತು ಸಂದೇಶ: ‘ಒಂದೊಳ್ಳೇ ಮೆಸೇಜ್ ಇರೋ ಸಿನೆಮಾ ಮಾಡಬೇಕು’ ಎಂದರೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...