Homeಮುಖಪುಟಸಿನೆಮಾ ಮತ್ತು ಸಂದೇಶ: ‘ಒಂದೊಳ್ಳೇ ಮೆಸೇಜ್ ಇರೋ ಸಿನೆಮಾ ಮಾಡಬೇಕು' ಎಂದರೇನು?

ಸಿನೆಮಾ ಮತ್ತು ಸಂದೇಶ: ‘ಒಂದೊಳ್ಳೇ ಮೆಸೇಜ್ ಇರೋ ಸಿನೆಮಾ ಮಾಡಬೇಕು’ ಎಂದರೇನು?

50ರ, 60ರ ಅಥವಾ 70ರ ದಶಕದಲ್ಲಿ ಒಂದು ಸಂದೇಶವನ್ನಿಟ್ಟುಕೊಂಡ ಚಿತ್ರಗಳನ್ನು ಇಂದು ವಾಟ್ಸ್ಯಾಪ್, ಇನ್‍ಸ್ಟಾಗ್ರಾಮ್‍ಗಳ ಯುಗದಲ್ಲಿ ಅನುಕರಿಸಲಾಗುವುದಿಲ್ಲ.

- Advertisement -
- Advertisement -

‘ಒಂದೊಳ್ಳೇ ಮೆಸೇಜ್ ಇರೋ ಸಿನೆಮಾ ಮಾಡಬೇಕು ಸರ್’

ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ ನಂತರ ಅನೇಕ ಸಲ ಕೇಳಿದ್ದು. ಅಲ್ಲೀತನಕ ಇಂಥ ಮಾತನ್ನು ನಾನು ಕೇಳಿಯೇ ಇರಲಿಲ್ಲ.

‘ಸಮಾಜವನ್ನು ಬದಲಿಸಲಿಚ್ಛಿಸುವವರು ರಾಜಕೀಯಕ್ಕೆ ಹೋಗಲಿ, ಸಮಾಜ ಸೇವೆ ಮಾಡಲಿ, ಅವರಿಗೆ ಇಲ್ಲೇನೂ ಕೆಲಸವಿಲ್ಲ’ ಎನ್ನುವ ಅರ್ಥದಲ್ಲಿ ಡೇವಿಡ್ ಮ್ಯಾಮೆಟ್ ತಮ್ಮ ಸಿನೆಮಾ ನಿರ್ದೇಶನದ ಪುಸ್ತಕದಲ್ಲಿ ಬರೆದಿದ್ದರು. ಅಮೇರಿಕದ ಇತಿಹಾಸವನ್ನು ಹಾಲಿವುಡ್ ಪೂರ್ವ ಮತ್ತು ಹಾಲಿವುಡ್ ನಂತರ ಎಂದು ವಿಂಗಡಿಸಬಹುದು, ಅಷ್ಟು ಪರಿಣಾಮ ಬೀರಿದೆ ಹಾಲಿವುಡ್ ಸಮಾಜದ ಮೇಲೆ ಎಂದು ಕೆಲವರು ಡೇವಿಡ್ ಮ್ಯಾಮೆಟ್ ಅವರ ಈ ಮೇಲಿನ ವಾದವನ್ನು ತಿರಸ್ಕರಿಸುತ್ತಾರೆ.

ಕನ್ನಡದ ಮೇರುನಟ ಡಾ. ರಾಜ್‍ಕುಮಾರ್ ಅಭಿನಯದ ಬಂಗಾರದ ಮನುಷ್ಯ ಚಿತ್ರವನ್ನು ನೋಡಿ ಅನೇಕರು ತಮ್ಮ ಕೆಲಸ ಬಿಟ್ಟು ಹಳ್ಳಿಗೆ ಹೋದರಂತೆ. ಏನಿದು ಮೆಸೇಜ್? ಸಿನೆಮಾ ಒಂದು ಸಂದೇಶವನ್ನು ಕೊಡಬಲ್ಲದೇ? ಮನರಂಜನೆಯೇ ಅದರ ಪ್ರಮುಖ ಕರ್ತವ್ಯವಲ್ಲವೇ? ಸಮಾಜಕ್ಕೆ ಮೆಸೇಜ್ ಕೊಡಲು ನಾವ್ಯಾರು? ಏನಕ್ಕೆ ಕೊಡಬೇಕು ಮೆಸೇಜ್?

ರಾಜ್‍ಕುಮಾರ್ ಹಿರಾನಿ, ತಮ್ಮ ಚಿತ್ರದ ಥೀಮ್‍ಗಳ ಬಗ್ಗೆ ತುಂಬಾ ಗಮನ ಕೊಡುತ್ತಾರೆ. ಅವರ ಮೊದಲ ಚಿತ್ರ ಮುನ್ನಾಭಾಯಿ ಎಮ್.ಬಿ.ಬಿ.ಎಸ್ ಮಾಡುವ ಮುನ್ನ ಅವರ ಮನಸ್ಸಿನಲ್ಲಿದ್ದದ್ದು ಒಂದೇ ವಿಷಯ; ವೈದ್ಯಕೀಯ ಕ್ಷೇತ್ರದ ಬಗ್ಗೆ ಒಂದು ಸಿನೆಮಾ ಮಾಡಬೇಕು ಎನ್ನುವುದು. ಈ ಕಾಲದ ವೈದ್ಯಕೀಯ ಕ್ಷೇತ್ರದ ಬಗ್ಗೆ ಅವರಿಗೆ ತುಂಬಾ ಸಿಟ್ಟೂ ಇತ್ತು. ಹಲವಾರು ವರ್ಷಗಳ ಕಾಲ ಚಿತ್ರಕತೆಯ ಮೇಲೆ ಕೆಲಸ ಮಾಡಿದಾಗ ಮೂಡಿಬಂದಿದ್ದು ಮುನ್ನಾಭಾಯಿ ಎಮ್.ಬಿ.ಬಿ.ಎಸ್. ಧರ್ಮದ ಬಗ್ಗೆ ಸಿನೆಮಾ ಮಾಡಲು ಹೊರಟಾಗ ಮೂಡಿಬಂದಿದ್ದು ಪೀಕೆ. ಹಿರಾನಿಯವರ ಲಗೇ ರಹೋ ಮುನ್ನಾಭಾಯಿ ಸಿನೆಮಾ ನೋಡಿದ ನಂತರ ಅನೇಕರು ಗಾಂಧಿಗಿರಿ ಮಾಡಲು ಶುರು ಮಾಡಿದರು.

Photo Courtesy: The Indian express

2016 ರಲ್ಲಿ ಅತ್ಯುತ್ತಮ ಚಿತ್ರವೆಂದು ಆಸ್ಕರ್ ಪ್ರಶಸ್ತಿ ಪಡೆದ ಸಿನೆಮಾ ‘ಸ್ಪಾಟ್‍ಲೈಟ್’. ಅಮೇರಿಕದ ಬೋಸ್ಟನ್ ಪ್ರದೇಶದಲ್ಲಿ ಹಲವಾರು ರೋಮನ್ ಕ್ಯಾಥಲಿಕ್ ಪಾದ್ರಿಗಳಿಂದ ಆಗಿತ್ತು ಎನ್ನಲಾದ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಮತ್ತು ಈ ಘಟನೆಗಳನ್ನು ಬಯಲಿಗೆಳೆದ ತನಿಖಾ ಪತ್ರಿಕೋದ್ಯಮದ ಕಥೆಯನ್ನು ಸ್ಪಾಟ್‍ಲೈಟ್ ಚಿತ್ರ ಹೇಳಿತು. ಈ ಚಿತ್ರದಿಂದ ಕ್ಯಾಥೋಲಿಕ್ ಚರ್ಚ್ ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಿತು.  ಆದರೆ ಸ್ಪಾಟ್‍ಲೈಟ್ ಚಿತ್ರ ಮಕ್ಕಳ ಮೇಲೆ ದೌರ್ಜನ್ಯ ಮಾಡಬಾರದು ಎನ್ನುವ ಸಂದೇಶ ನೀಡಲು ಈ ಚಿತ್ರವನ್ನು ಮಾಡಿದರೇ? ಅಥವಾ ಪತ್ರಕರ್ತರಿಗೆ ಸಂದೇಶ ನೀಡಲು ಈ ಚಿತ್ರವನ್ನು ಮಾಡಿದರೇ? ಉತ್ತರ ನಾವೆಂದುಕೊಂಡ ಹಾಗೆ. ಆದರೆ ಒಂದು ಮಾತ್ರ ಸತ್ಯ. ಈ ಕಥನಕಾರರು ಮಾಡಲು ಪ್ರಯತ್ನಿಸಿದ್ದು ಆಯಾ ಸಮಸ್ಯೆಯ ಆಳವನ್ನು ಜಾಲಾಡುವುದು. ಹೀಗೇಕೆ ಆಯಿತು ಎನ್ನುವುದಕ್ಕೆ ಉತ್ತರಗಳನ್ನು ಹುಡುಕುವುದು, ಲೈಂಗಿಕ ಕಿರುಕುಳ ಮಾಡಿದ ಪಾದ್ರಿಗಳು ಮಾತ್ರ ತಪ್ಪಿತಸ್ಥರಾ ಅಥವಾ ಇತರರೂ ಇದಕ್ಕೆ ಕಾರಣೀಭೂತರಾ ಎನ್ನುವುದಕ್ಕೆ ಉತ್ತರ ಹುಡುಕುವುದು ಇವರ ಉದ್ದೇಶವಾಗಿತ್ತು. ಕೊನೆಯ ಪ್ರಶ್ನೆಗೆ ಎಷ್ಟು ಆಳವಾಗಿ ಉತ್ತರ ಹುಡುಕುತ್ತಾರೆಂದರೆ, ತಾವೂ, ಈ ಹಗರಣವನ್ನು ಅಂದು ಬಯಲಿಗೆಳಯಲು ಪ್ರಯತ್ನಿಸುತ್ತಿದ್ದ ಪತ್ರಕರ್ತರೂ ಇದಕ್ಕೆ ಒಂದು ರೀತಿಯಲ್ಲಿ ಕಾರಣವಾಗಿದ್ದರು ಎನ್ನುವ ಉತ್ತರವೂ ಸಿಗುತ್ತದೆ.

ಸಮಾಜವನ್ನು ಪ್ರಭಾವಿಸಿದ ಇನ್ನೂ ಕೆಲವು ಚಿತ್ರಗಳ ಬಗ್ಗೆ ನೋಡುವ.

  • ವಾಟರ್‌ಗೇಟ್ ಹಗರಣವನ್ನು ಬಯಲಿಗೆಳೆದ ಘಟನೆಯ ಬಗ್ಗೆ ಆಲ್ ದಿ ಪ್ರೆಸಿಡೆಂಟ್’ಸ್ ಮೆನ್ ಎನ್ನುವ ಚಿತ್ರ ಬಂದ ಮೇಲೆ ಅನೇಕ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕೆ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡರಂತೆ.
  • ಜಾಸ್ (Jaws) ಎನ್ನುವ ಚಿತ್ರ (ಸಮುದ್ರ ತೀರದಲ್ಲಿ ತಿಮಿಂಗಿಲಗಳ ದಾಳಿಯ ಬಗ್ಗೆಯ ಚಿತ್ರ) ಬಂದ ಮೇಲೆ ಸಮುದ್ರತೀರಕ್ಕೆ ಹೋಗುವ ಪ್ರವಾಸಿಗಳ ಸಂಖ್ಯೆಯಲ್ಲಿ ಇಳಿಮುಖವಾಯಿತಂತೆ.
  • ದಿ ಫೈಟ್ ಕ್ಲಬ್ ಚಿತ್ರ ಬಂದ ನಂತರ ಅಮೇರಿಕದಲ್ಲಿ (ಇತರೆಡೆಯಲ್ಲೂ) ನಿಜವಾದ ಫೈಟ್ ಕ್ಲಬ್‍ಗಳು ಶುರುವಾದವಂತೆ.
  • 2004ರ ದಿ ಡೇ ಆಫ್ಟರ್ ಟುಮಾರೋ ಚಿತ್ರ ಬಂದ ನಂತರ ಜನರಲ್ಲಿ ಗ್ಲೋಬಲ್ ವಾರ್ಮಿಂಗ್ ಬಗ್ಗೆ ಹೆಚ್ಚಿನ ಜಾಗರೂಕತೆ ಮೂಡಿಸಿತಂತೆ.

ಹೀಗೆ ಹಲವಾರು ಉದಾಹರಣೆಗಳು ನಮ್ಮ ಮುಂದೆ ಇವೆ. ಈ ಎಲ್ಲಾ ಚಿತ್ರಗಳ ಕರ್ತೃರು ಆಯಾ ಸಮಸ್ಯೆಯನ್ನು ಆಳವಾಗಿ ಅರ್ಥೈಸಿಕೊಳ್ಳಲು ಮತ್ತು ಆಯಾ ವಿಷಯಗಳ ಬಗ್ಗೆ ಹುಡುಕಾಟ ಮಾಡಲು ಪ್ರಯತ್ನಿಸುತ್ತಾರೆ. ಅಲೆಕ್ಸಾಂಡರ್ ಪೇನ್‍ನಂತಹ ನಿರ್ದೇಶಕರು ಮನುಷ್ಯನ ಸೋಲು, ಸಾರ್ಥಕತೆಯನ್ನು ಅರ್ಥೈಸಿಕೊಳ್ಳುವ ಹುಡುಕಾಟ ಮಾಡಿದರೆ, ಇನ್ನೂ ಕೆಲವರು ಸಮಾಜಕ್ಕೆ ಕಾಡುವ ಸಮಸ್ಯೆಗಳನ್ನು ತಮ್ಮ ಚಿತ್ರಗಳ ಮೂಲಕ ಕೂಲಂಕಷವಾಗಿ ಪರಿಶೀಲಿಸುವ ಪ್ರಯತ್ನ ಮಾಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇವರೆಲ್ಲರಿಗೂ ಒಂದು ಕಥೆಯನ್ನು ಹೇಳುವುದು ಮೂಲ ಉದ್ದೇಶವಾಗಿರುತ್ತದೆ.

ಇನ್ನು ಅನೇಕ ಚಿತ್ರಗಳನ್ನು ನೋಡಿದ ನಂತರ, ಹಲವರಿಗೆ ತಮ್ಮ ವ್ಯಕ್ತಿತ್ವಗಳನ್ನು ಪರದೆಯ ಮೇಲೆ ನೋಡಿದಾಗ, ತಮ್ಮ ವ್ಯಕ್ತಿತ್ವ ದೋಷಗಳ ಬಗ್ಗೆ ಸಹಾನುಭೂತಿ ಹೊಂದಿರುವ ಕಥೆಗಳನ್ನು ನೋಡಿದಾ, ಆ ಕಥೆಗಳನ್ನು ಇತರರೂ ನೋಡುತ್ತಾರೆ ಎನ್ನುವ ಭಾವನೆಯಿಂದ ಆ ವ್ಯಕ್ತಿಗಳ ಮೇಲೆ ಎಂತಹ ಗಂಭೀರವಾದ ಸಕಾರಾತ್ಮಕ ಪರಿಣಾಮಗಳಾಗಬಹುದು ಎನ್ನುವುದನ್ನೂ ಪರಿಗಣಿಸಬೇಕು. ನನಗೆ ವೈಯಕ್ತಿಕವಾಗಿ ಇದು ಯಾವುದೇ ಕಥನಕಲೆಯ ಬಹುಮುಖ್ಯ ಉದ್ದೇಶ ಅನಿಸುತ್ತದೆ.

ಸಿನೆಮಾಗಳಿಂದ ಸಮಾಜದಲ್ಲಿ ಬದಲಾಗಿದ್ದು ಏನು ಎನ್ನುವ ಪ್ರಶ್ನೆಗೆ ಉತ್ತರ ಹುಡುಕಿದರೆ, ಪ್ರಮುಖವಾಗಿ ಸಮಾಜದ ಟ್ರೆಂಡ್‍ಗಳಲ್ಲಿ ಬದಲಾವಣೆ ಆಗಿದ್ದು ಕಾಣಿಸುತ್ತದೆ. ಹಲವಾರು ಸಿನೆಮಾಗಳು ಹಿಟ್ ಆದ ನಂತರ ನಮ್ಮ ಜನರ ಉಡುಪುಗಳಲ್ಲಿ ಬದಲಾವಣೆ ಬಂದಿತ್ತು; ಸೀರೆಯ ಪ್ಯಾಟರ್ನ್‍ಗಳು, ಮೇಕ್‍ಅಪ್ ಮಾಡಿಕೊಳ್ಳುವುದು, ಗಂಡಸರ ಪ್ಯಾಂಟು ಶರ್ಟುಗಳ ವಿನ್ಯಾಸದಲ್ಲಿ ಬದಲಾವಣೆಗಳು (ಹಿಪ್ಪಿ-ಕಟ್ ನೆನಪಿಸಿಕೊಳ್ಳಿ) ಕಂಡುಬಂದಿದ್ದಂತೂ ನಾವು ನೋಡಿದ್ದೇವೆ.

ಇದರೊಂದಿಗೆ ಇನ್ನೆರಡು ಅಂಶಗಳಿವೆ, ಮೊದಲನೆಯದು ನಮ್ಮ ಸಮಾಜದ ಮೇಲೆ ಪರಿಣಾಮ ಬೀರಿದ ಚಿತ್ರಗಳ ಬಂದ ಕಾಲಘಟ್ಟ. ಸುಮಾರು ಒಂದು ಶತಕದ ಹಿಂದೆ ಹುಟ್ಟಿಕೊಂಡ ಸಿನೆಮಾ ಕಲೆ, ಎಲ್ಲಕ್ಕಿಂತ ಪ್ರಭಾವಶಾಲಿಯಾದ ಮನರಂಜನೆಯ ಮಾಧ್ಯಮವಾಗಿದೆ. ನಮ್ಮ ದೇಶದಲ್ಲಿ ಸಾಕ್ಷರತೆಯ ದರ 50ರ ದಶಕದಲ್ಲಿ ಶೇ.20ಕ್ಕಿಂತಲೂ ಕಡಿಮೆಯಿತ್ತು ಎಂದರೆ ಆ ಕಾಲಘಟ್ಟ ಹೇಗಿತ್ತು ಎನ್ನುವುದನ್ನು ಊಹಿಸಲೂ ಅಸಾಧ್ಯ. ಅದರೊಂದಿಗೆ ಮನರಂಜನೆಯ ಮಾಧ್ಯಮಗಳೂ ವಿರಳವಾಗಿದ್ದವು. ಹಾಗಾಗಿ 50ರ, 60ರ ಅಥವಾ 70ರ ದಶಕದಲ್ಲಿ ಒಂದು ಸಂದೇಶವನ್ನಿಟ್ಟುಕೊಂಡ ಚಿತ್ರಗಳನ್ನು ಇಂದು ವಾಟ್ಸ್ಯಾಪ್, ಇನ್‍ಸ್ಟಾಗ್ರಾಮ್‍ಗಳ ಯುಗದಲ್ಲಿ ಅನುಕರಿಸಲಾಗುವುದಿಲ್ಲ.

ಆದರೂ ನಾವು ಮಾಡುವ ಚಿತ್ರಗಳು ಪರಿಣಾಮ ಬೀರಬಹುದು ಎನ್ನುವ ಆಶಾಭಾವನೆಯನ್ನು ಖಂಡಿತ ಹೊಂದಬಹುದು; ಅದಕ್ಕೆ ಅನುಕರಿಸಬೇಕಾದದ್ದು ಆ ಕರ್ತೃರ ಪರಿಶ್ರಮ, ಆಯಾ ಸಮಸ್ಯೆಗಳ ಆಳವಾದ ಅಧ್ಯಯನ ಅದರೊಂದಿಗೆ ಚಿತ್ರಕಥೆ ಮತ್ತು ಸಿನೆಮಾ ಮಾಡುವ ಕಲೆಯನ್ನು ಆಳವಾಗಿ ಅಭ್ಯಸಿಸಿ ಕರಗತ ಮಾಡಿಕೊಳ್ಳುವುದು. ನೀವು ನೀಡಬೇಕೆನ್ನುವ ಸಂದೇಶದ ಹಿಂದಿನ ಸಮಸ್ಯೆಯನ್ನು ಆಳವಾಗಿ ಅಭ್ಯಸಿಸಿದ ತರುವಾಯ ಆ ಸಂದೇಶವೇ ಬದಲಾಗಬಹುದು. ಅಧ್ಯಯನದ ಆಳವೇ ಒಂದು ಸಂದೇಶವಾಗಬಹುದು. ಇಲ್ಲವಾದರೆ, ಹೋಗುವ ಸಂದೇಶ ಒಂದೇ- ‘ನನಗೆ ಸಿನೆಮಾ ಮಾಡಲು ಬರುವುದಿಲ್ಲ ಆದರೂ ಹೇಗೋ ಮಾಡಿದ್ದೀನಿ, ಈಗ ಅನುಭವಿಸಿ’.

  • ರಾಜಶೇಖರ್ ಅಕ್ಕಿ (ರಂಗನಿರ್ದೇಶಕರು ಹಾಗೂ ಸಾಮಾಜಿಕ ಕಾರ್ಯಕರ್ತರು)

ಇದನ್ನೂ ಓದಿ: ಸಂಘರ್ಷ ಮತ್ತು ಸಿನೆಮಾ, ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿ ಬರೆಯುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...