Homeಮುಖಪುಟಸಂಘರ್ಷ ಮತ್ತು ಸಿನೆಮಾ, ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿ ಬರೆಯುತ್ತಾರೆ.

ಸಂಘರ್ಷ ಮತ್ತು ಸಿನೆಮಾ, ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿ ಬರೆಯುತ್ತಾರೆ.

- Advertisement -
- Advertisement -

| ರಾಜಶೇಖರ್ ಅಕ್ಕಿ |

ಎರಡು ವಾರಗಳ ಹಿಂದೆ ಸಿನೆಮಾ ಮತ್ತು ಸ್ಟ್ರಕ್ಚರ್ ಬಗ್ಗೆ ಬರೆದಿದ್ದೆ. ಇಂದು ಸಂಘರ್ಷದ ಬಗ್ಗೆ ಬರೆಯಲು ಪ್ರಯತ್ನಿಸುವೆ.
ಇತರ ಕಲಾ ಮಾಧ್ಯಮಗಳನ್ನು ಹೋಲಿಸಿದರೆ ಸಿನೆಮಾಗೆ ತನ್ನದೇ ಆದ ಸಾಧ್ಯತೆಗಳೊಂದಿಗೆ ಇತಿಮಿತಿಗಳೂ ಇವೆ. ಸಿನೆಮಾದಲ್ಲಿ ಒಂದು ನೇರ ಕಥೆ ಇರಲೇಬೇಕು. ಒಬ್ಬ ಮುಖ್ಯ ಪಾತ್ರವನ್ನು ಗುರುತಿಸಲೇಬೇಕು,(ಇದಕ್ಕೆ ಕೆಲವು ಶ್ರೇಷ್ಠ ಅಪವಾದಗಳು ಖಂಡಿತ ಇವೆ.) ಆ ಮುಖ್ಯ ಪಾತ್ರಕ್ಕೆ ಕೆಲವು ಗುರಿಗಳಿರಬೇಕು, ಆ ಗುರಿಗಳಿಗೆ ತದ್ವಿರುದ್ಧವಾಗಿ ಕೆಲವು ಶಕ್ತಿಗಳಿರಬೇಕು. ಆಗ ಉಂಟಾಗುವುದು ಸಂಘರ್ಷ.

ಸಂಘರ್ಷವೇ ಒಂದು ಸಿನೆಮಾದ ಜೀವಾಳ. ಸಂಘರ್ಷ ತಪ್ಪಿದ ತಕ್ಷಣ ಆ ಸಿನೆಮಾ ಬಿದ್ದುಹೋಗುತ್ತದೆ. ನಮ್ಮಲ್ಲಿ ಅನೇಕ ಬರಹಗಾರರು ‘ಒಳ್ಳೆಯ’ ಕಥೆಗಳನ್ನು, ‘ಒಳ್ಳೆಯ’ ಸೀನ್‍ಗಳನ್ನು ಬರೆದು ಒಳ್ಳೆಯ ಪಾತ್ರಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ. ಒಳ್ಳೆಯ ಹಾಸ್ಯ, ಭಾವನೆ, ಒಳ್ಳೆಯ ವಿಚಾರಗಳನ್ನೂ ಹೇಳಲು ಪ್ರಯತ್ನಿಸುತ್ತಾರೆ. ಆದರೆ ಆ ಎಲ್ಲ ‘ಒಳ್ಳೆಯ’ಗಳು ಸಂಘರ್ಷದ ವ್ಯಾಪ್ತಿಯಲ್ಲಿ ಬಂದಾಗ ಮಾತ್ರ ಕೆಲಸ ಮಾಡುತ್ತವೆ ಇಲ್ಲವಾದರೆ ಅವುಗಳು ಒಳ್ಳೆಯ ಸೀನ್‍ಗಳಾಗೇ ಉಳಿದು ಚಿತ್ರಕ್ಕೆ ಯಾವ ಸಹಾಯವನ್ನೂ ಮಾಡುವುದಿಲ್ಲ.

ಒಂದು ಕಾದಂಬರಿಯಲ್ಲಿ ಪಾತ್ರದ, ಆ ಪಾತ್ರಗಳು ಜೀವಿಸುತ್ತಿರುವ ಸಮಾಜದ ಬಗ್ಗೆ ನೂರಾರು ಪುಟಗಳನ್ನು ಬರೆಯಬಹುದು; ಆ ಪಾತ್ರದ ತಲೆಯೊಳಗೆ ಹೊಕ್ಕಿ ಅಲ್ಲಿ ಆಗುತ್ತಿರುವ ತಲ್ಲಣಗಳ ಬಗ್ಗೆ, ಕನಸು, ನಿರಾಶೆಗಳ ಬಗ್ಗೆಯೂ ಬರೆಯಬಹುದು. ಆದರೆ ಸಿನೆಮಾಗೆ ಆ ಸ್ವಾತಂತ್ರವಿಲ್ಲ. ಇದು ಸಿನೆಮಾದ ಒಂದು ಮಿತಿ. ಈ ಮಿತಿಗಳನ್ನು ಮೀರುತ್ತ, ಆ ತಲ್ಲಣಗಳನ್ನು ದೃಶ್ಯರೂಪಕ್ಕೆ ತರುವಲ್ಲಿ ಅನೇಕ ನಿರ್ದೇಶಕರು ಯಶಸ್ವಿಯಾಗಿದ್ದಾರೆ ಆದರೂ ಅಲ್ಲೊಂದು ಸಂಘರ್ಷ ಅತಿಗಿರುತ್ತದೆ.

ಇನ್ನು ಸಂಘರ್ಷಗಳ ಸ್ವರೂಪಗಳನ್ನು ನೋಡುವ. ಮೊದಲನೇಯದು, ನಮಗೆ ಹೆಚ್ಚಾಗಿ ಕಾಣಿಸುವ ಸಂಘರ್ಷವಾದ ಬಾಹ್ಯ ಕಾರಣಗಳಿಂದ ಉಂಟಾಗುವ ಸಂಘರ್ಷ. ಅಂದರೆ, ನಮ್ಮ ನಾಯಕ/ಕಿ ಏನೋ ಗುರಿಯಿಟ್ಟುಕೊಂಡು ಹೋಗುತ್ತಿರುವಾಗ ಆ ಗುರಿಗೆ ಅಡ್ಡಬರುವ ಅಡೆತಡೆಗಳು ಮೂಲತಃವಾಗಿ ಆ ನಾಯಕಿಯ ಪಾತ್ರದ ಹೊರಗಿರುತ್ತವೆ. ಉದಾಹರಣೆಗೆ, ಆ ಹುಡುಗ ತನಗಿಷ್ಟವಾದ ಹುಡುಗಿಯೊಂದಿಗೆ ಮದುವೆ ಮಾಡಿಕೊಳ್ಳುವ ಗುರಿಯನ್ನಿಟ್ಟುಕೊಂಡಿರುವಾಗ ಅದಕ್ಕೆ ಹುಡುಗಿಯ ಅಪ್ಪ ವಿರೋಧ ಒಡ್ಡುತ್ತಾನೆ; ಒಂದು ಹಳ್ಳಿಯಲ್ಲಿ ನಾಯಕಿ ಬಡ ಮಕ್ಕಳ ಸಲುವಾಗಿ ಒಂದು ಶಾಲೆಯನ್ನು ಪ್ರಾರಂಭಿಸುವ ಗುರಿಯನ್ನಿಟ್ಟುಕೊಂಡಿದ್ದಾಳೆ ಆದರೆ ಅಲ್ಲಿ ಖಾಸಗಿ ಶಾಲೆಯನ್ನು ನಡೆಸುವ ಪಟ್ಟಭದ್ರ ಹಿತಾಸಕ್ತಿಗಳು ಇವಳು ಶಾಲೆ ಪ್ರಾರಂಭಿಸಲು ಬಿಡುವುದಿಲ್ಲ.

ಈಗ ಈ ಪ್ರಮುಖ ಪಾತ್ರಧಾರಿಗಳು ತಮ್ಮ ಎದುರಿನ ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎನ್ನುವುದೇ ಸಂಘರ್ಷ. ಇಲ್ಲಿ ಜೀವನದಲ್ಲಿ ಪ್ರೀತಿ ಎನ್ನುವುದು ಎಷ್ಟು ಮುಖ್ಯ ಅಥವಾ ಬಡಮಕ್ಕಳಿಗಾಗಿ ಶಾಲೆಗಳನ್ನು ಪ್ರಾರಂಭಿಸುವುದು ಎಷ್ಟು ಒಳ್ಳೆಯ ಕೆಲಸ ಎನ್ನುವುದರ ಬಗ್ಗೆ ಲೆಕ್ಷರ್ ಕೊಡಲು ಅವಕಾಶವಿರುವುದಿಲ್ಲ. ಆಯಾ ಸಂಘರ್ಷಗಳ ವ್ಯಾಪ್ತಿಯಲ್ಲೇ ಈ ಸಂಗತಿಗಳು ಹೊರಬರಬೇಕು.

1998 ರಲ್ಲಿ ತೆರೆಕಂಡ ಸತ್ಯಾ ಚಿತ್ರದಲ್ಲಿ ಒಂದು ಪಾತ್ರ ಜೋಕ್ ಹೇಳುವ ಸನ್ನಿವೇಶವಿದೆ. ಒಂದು ಕನ್‍ಸ್ಟ್ರಕ್ಷನ್ ಆಗುತ್ತಿರುವ ಕಟ್ಟಡದಲ್ಲಿ ಕುಳಿತಾಗ ಸ್ನೇಹಲ್ ದಾಬಿಯ ಪಾತ್ರ ಒಂದು ತರಲೆ ಜೋಕ್ ಹೇಳಲಾರಂಭಿಸುತ್ತಾನೆ. ಆ ಜೋಕ್‍ಗೆ ಪ್ರೇಕ್ಷಕರು ನಗಬೇಕು ಎನ್ನುವಷ್ಟರಲ್ಲಿ ಗುಂಡಿನ ಸುರಿಮಳೆಯಾಗಿ ಅಲ್ಲಿಯ ಅನೇಕರು ಜೀವ ಕಳೆದುಕೊಳ್ಳುತ್ತಾರೆ. ಆ ಸೀನ್ ಜೋಕ್ ಹೇಳಲಂತೂ ಇದ್ದೇ ಇಲ್ಲ, ಜೋಕ್ ಮುಂದುವರೆಯುತ್ತಿದ್ದಾಗಲೂ ಏನೋ ಆಗುವುದು ಎನ್ನುವ ಭಾವನೆ ಗಟ್ಟಿಗೊಳ್ಳುತ್ತಲಿರುತ್ತದೆ. ಗಟ್ಟಿಯಾದ ಸ್ಟ್ರಕ್ಷರ್ ಮತ್ತು ಸಂಘರ್ಷವನ್ನಿಟ್ಟುಕೊಂಡೇ ಲಘು ಸನ್ನಿವೇಶಗಳನ್ನೂ ತೋರಿಸುವುದಕ್ಕೆ ಸತ್ಯಾ ಸಿನೆಮಾ ಒಳ್ಳೆಯ ಉದಾಹರಣೆ.

ಎರಡನೇಯದ್ದು ಆಂತರಿಕ ಸಂಘರ್ಷ. ಒಬ್ಬ ವ್ಯಕ್ತಿಗೆ ಬಾಕ್ಸಿಂಗ್ ಚಾಂಪಿಯನ್‍ಷಿಪ್ ಗೆಲ್ಲಬೇಕಿದೆ, ಒಬ್ಬನಿಗೆ ತಾನು ದುರ್ಬಲ ಎನ್ನುವ ಕೀಳರಿಮೆಯಿದೆ, ಇನ್ನೊಬ್ಬನಿಗೆ ತನ್ನನ್ನು ಯಾರೂ ಇಷ್ಟಪಡಲಾರರು ಎನ್ನುವ ಭಾವನೆಯಿದೆ, ಬಾಲ್ಯದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿದ ಒಬ್ಬ ಬಾಲಕಿಯು ಯಾವುದೇ ಸಂಬಂಧವನ್ನು ನಿಭಾಯಿಸಲು ಅಸಮರ್ಥಳಾಗಿದ್ದಾಳೆ. ಈಗ ಇವುಗಳನ್ನು ಎದುರಿಸಬೇಕಿದೆ. ಇಲ್ಲಿಯ ಆಯಾ ನಾಯಕ/ಕಿಗೆ ಇರುವ ಅಡೆತಡೆಗಳು ತನ್ನೊಳಗೇ ಹುದುಗಿವೆ. ತನ್ನೊಳಗೇ ಹುದುಗಿರುವ ಶತ್ರುವನ್ನು ಎದುರಿಸುವುದನ್ನು ದೃಶ್ಯ ಮಾಧ್ಯಮದಲ್ಲಿ ತೋರಿಸುವುದು ಕಷ್ಟ ಎನಿಸಬಹುದು. ಆದರೆ ಅನಿಸಿದಷ್ಟು ಕಷ್ಟವಲ್ಲ. ಅಲ್ಲಿಯೂ ಬಾಹ್ಯ ಸಂಗತಿಗಳಿವೆ.

ನಾಯಕ/ಕಿಯ ದೈನಂದಿನ ದೈಹಿಕ ಕ್ರಿಯೆಗಳಿಂದಲೇ ಆ ಸಂಘರ್ಷ ಪ್ರೇಕ್ಷಕರಿಗೆ ಸ್ಪಷ್ಟವಾಗುತ್ತದೆ. ತನ್ನ ಸಮಸ್ಯೆ ಮತ್ತು ಅದಕ್ಕಿರುವ ಉತ್ತರಗಳೂ ದೈನಂದಿನ ಕ್ರಿಯೆಗಳಿಂದ ಸ್ಪಷ್ಟವಾಗುವ ಹಾಗೆ ಚಿತ್ರಕಥೆಯನ್ನು ಹೆಣೆಯಬೇಕಾಗುತ್ತದೆ. ಗಮನಿಸಬೇಕಾದ ಅಂಶವೇನೆಂದರೆ, ಈ ಎರಡೂ ಬಗೆಯ ಸಂಘರ್ಷಗಳು ಎಲ್ಲಾ ಹಂತಗಳಲ್ಲಿ ಪ್ರತ್ಯೇಕವಾಗಿರಬೇಕಿಲ್ಲ. ಬಾಹ್ಯ ಸಂಘರ್ಷದಲ್ಲಿ ಆಂತರಿಕ ಸಂಘರ್ಷವಿದ್ದರೆ, ಆಂತರಿಕ ಸಂಘರ್ಷದ ಕಥೆಗಳಲ್ಲಿ ಬಾಹ್ಯ ಸಂಗತಿಗಳೂ ಪ್ರಮುಖ ಪಾತ್ರ ವಹಿಸುತ್ತವೆ.

ಚಿತ್ರಕಥೆ ಬರೆಯುವ ರೂಢಿಸಮ್ಮತ ಕಲಿಕೆಯಲ್ಲಿ ನಾಯಕಿ/ಕ ತನ್ನ ಗುರಿಯನ್ನು ತಲುಪಲು ಹರಸಾಹಸ ಪಡುತ್ತಾಳೆ/ನೆ; ಅವಳಿಗೆ ತನ್ನ ಗುರಿಯ ಬಗ್ಗೆ ಸ್ಪಷ್ಟತೆ ಇರುತ್ತದೆ; ಚಿತ್ರದಲ್ಲಿ ಆಗುವ ಹೆಚ್ಚಿನ ಘಟನೆಗಳನ್ನು ನಾಯಕಿಯೇ ಮೊದಲು ಮಾಡುತ್ತಾಳೆ ಅದರಿಂದ ಪ್ರೇಕ್ಷಕ ತನ್ನನ್ನು ಆ ನಾಯಕಿಯಲ್ಲಿ ಕಂಡುಕೊಳ್ಳುತ್ತಾನೆ ಎನ್ನುವ ನಂಬಿಕೆ. ಆದರೆ ಇವ್ಯಾವೂ ಅನಿವಾರ್ಯವಲ್ಲ. ಅನೇಕ ಕಥೆಗಳಲ್ಲಿ ನಾಯಕಿಗೆ ತನ್ನ ಗುರಿಯ ಅರಿವು ಇರುವುದಿಲ್ಲ. ಪರಿಸ್ಥಿತಿಯ ಕೂಸು ಆ ನಾಯಕಿ. ಅದರರ್ಥ ಅಲ್ಲಿ ಸಂಘರ್ಷ ತಪ್ಪಿಲ್ಲ.

ತನಗರಿವಿಲ್ಲದೇ ಆ ನಾಯಕಿ ಹೋರಾಟದ ಪಯಣವನ್ನು ಕ್ರಮಿಸುತ್ತಾಳೆ. ಕೆಲವು ಚಿತ್ರಗಳಲ್ಲಿ ನಾಯಕಿಯ ಹೋರಾಟ, ಸಂಘರ್ಷ ಸ್ಪಷ್ಟವಾಗಿ ಕಂಡುಬರುವುದಿಲ್ಲ. ಮತ್ತು ಆ ಸಂಘರ್ಷ ಅವಳದ್ದೇ ಆಗಿರಬೇಕೆನ್ನುವ ನಿಯಮವೂ ಇಲ್ಲ. ಅಲೆಕ್ಸಾಂಡರ್ ಪೇನ್‍ನ ಮೊದಲ ಚಿತ್ರ ಸಿಟಿಝನ್ ರೂತ್‍ನಲ್ಲಿ ನಾಯಕಿ ರೂತ್ ಗರ್ಭಿಣಿ. ರಸ್ತೆಯಲ್ಲಿ ಬದುಕುತ್ತಿರುವ ಅವಳಿಗೆ ಮಗುವನ್ನು ಉಳಿಸಿಕೊಳ್ಳಬೇಕೇ, ಗರ್ಭಪಾತ ಮಾಡಿಸಿಕೊಳ್ಳಬೇಕೇ ಎನ್ನುವುದರ ಬಗ್ಗೆ ಸ್ಪಷ್ಟತೆಯಿಲ್ಲ. ತನ್ನ ಹೊರಗಿನ ಪರಿಸ್ಥಿತಿ ಬದಲಾದಂತೆ ತನಗೆ ಸೂಕ್ತವೆನಿಸಿದ ಹಾಗೆ ಅವಳು ಪ್ರತಿಕ್ರಿಯಿಸುತ್ತಾಳೆ. ಅಬೌಟ್ ಶ್ಮಿತ್ ಚಿತ್ರದಲ್ಲಿ ನಾಯಕ ಶ್ಮಿತ್ ಈಗ ತಾನೆ ನಿವೃತ್ತಿ ಹೊಂದಿದ್ದಾನೆ. ಮುಂದೇನು ಮಾಡಬೇಕೆನ್ನುವುದು ತಿಳಿಯದು. ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸುತ್ತಲೇ ಅವನು ತನ್ನ ಬಗ್ಗೆ ಕಂಡುಕೊಳ್ಳುತ್ತಾನೆ. ಆದರೆ ಅದರಲ್ಲೂ ಸಂಘರ್ಷವಿದೆ.

ಯಾವುದೇ ಸಂಘರ್ಷದಲ್ಲಿ ನಾಯಕಿ ಸರಿ ಎನಿಸುವ ದಾರಿಯಲ್ಲಿದ್ದು, ಆ ನಾಯಕಿಯ ವಿರುದ್ಧದ ಶಕ್ತಿಗಳು ತಪ್ಪಾದ ದಾರಿಯಲ್ಲೇ ಇರಬೇಕು ಎನ್ನುವ ಅನಿವಾರ್ಯವೂ ಇಲ್ಲ. ನಾಯಕಿಯೊಂದಿಗೆ ಅವಳ ಶತ್ರುಗಳೂ ಪರಿಸ್ಥಿತಿಯ ಕೂಸುಗಳೇ. ಆ ಶಕ್ತಿಗಳಿಗೂ ತಮ್ಮದೇ ಆದ ಕಾರಣಗಳಿರುತ್ತವೆ. ಅದೇ ಕಾರಣಕ್ಕೆ ಅನೇಕ ಸಲ ಖಳನಾಯಕರ ಪಾತ್ರಗಳೂ ನಮಗೆ ಇಷ್ಟವಾಗುತ್ತವೆ.
ನಾಯಕಿಯ ಈ ಸಂಘರ್ಷದಲ್ಲಿ ಯಾರು ಗೆಲ್ಲಬೇಕು ಎನ್ನುವುದು ಅಷ್ಟು ಮುಖ್ಯವಲ್ಲ. ನಾಯಕಿ ತನ್ನ ಗುರಿ ಮುಟ್ಟುವಲ್ಲಿ ವಿಫಲವಾದರೂ ಸಂಘರ್ಷ ನಿರಂತರವಾಗಿರುವುದರಿಂದ ಚಿತ್ರ ಗೆಲ್ಲುತ್ತದೆ. ಆ ಚಿತ್ರದ ಆಶಯ ಮುಟ್ಟುತ್ತದೆ. ಆದರೆ ಆ ಸೋಲು ಗೆಲುವಿನ ದಡಕ್ಕೆ ಮುಟ್ಟಿಸುವುದು ಚಿತ್ರದ ಕರ್ತವ್ಯ. ಸಿನೆಮಾದ ಅಂತ್ಯದಲ್ಲಿ ಆ ಸಂಘರ್ಷ ಮುಕ್ತಾಯವಾಗುತ್ತದೆ ಅಥವಾ ಇನ್ನೊಂದು ಸ್ವರೂಪವನ್ನು ಪಡೆದುಕೊಳ್ಳುತ್ತದೆ. ನ್ಯೂಟನ್‍ನ ನಿಯಮದಂತೆ ಪ್ರತೀ ಕ್ರಿಯೆಗೂ ಸಮನಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ ಎಂದಾಗ ಸಂಘರ್ಷ ಎನ್ನುವುದು ನಿರಂತರವಲ್ಲದೇ?

ಇದನ್ನು ಓದಿ: ಸಿನಿಮಾ ಮತ್ತು ಸಂದೇಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...