Homeಮುಖಪುಟ'ಪಬ್ಲಿಕ್ ಟಾಯ್ಲೆಟ್' ಕಿರುಚಿತ್ರ ವಿಮರ್ಶೆ: ರಾಜಶೇಖರ್ ಅಕ್ಕಿ

‘ಪಬ್ಲಿಕ್ ಟಾಯ್ಲೆಟ್’ ಕಿರುಚಿತ್ರ ವಿಮರ್ಶೆ: ರಾಜಶೇಖರ್ ಅಕ್ಕಿ

ವಿಷಯದ ಆಳಕ್ಕೆ ಇಳಿಯದೇ ನೋಡುಗರಿಗೆ ‘ಮನುಷ್ಯರ ಆಳ ಸಂವೇದನೆಗಳು ಮನುಷ್ಯತ್ವದ ಕಡೆಗೇ ಚಲಿಸುತ್ತಿರುಬೇಕು’ ಎಂಬ ಮಹತ್ತರ ಸಂದೇಶ ನೀಡುವ ಉದ್ದೇಶದಿಂದ ಚಿತ್ರವನ್ನು ಮಾಡಿದ್ದಾರೆ.

- Advertisement -
- Advertisement -

ಯಾವುದೇ ಅಪರಾಧ ಆಗಿರಲಿ, ಅದೊಂದು ಅತ್ಯಂತ ನೋವು ತರಿಸುವ ಸಂಗತಿ. ಅದರಲ್ಲಿ ಕೆಲವು ಸಂಗತಿಗಳು ನಮ್ಮನ್ನು ಸುಮ್ಮನೇ ಇರಲು ಬಿಡುವುದಿಲ್ಲ. ಅಪರಾಧ ಎಷ್ಟು ಘೋರವಾಗಿ ತಟ್ಟಿರುತ್ತೆ ಎಂದರೆ, ಅದರಲ್ಲಿ ನಾವೂ ಭಾಗಿ ಎಂದೆನಿಸುತ್ತದೆ ಹಾಗೂ ಅದು ಸತ್ಯವೂ ಕೂಡ. ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಆಗುವ ಎಲ್ಲಾ ಅಪರಾಧಗಳಲ್ಲಿ ಅಪರೋಕ್ಷವಾಗಿ ಭಾಗಿಯೇ.

ಇಂತಹ ಒಂದು ಅಪರಾಧ ನಡೆದಾಗ, ಅದಕ್ಕೆ ಕೇವಲ ಆ ಅಪರಾಧಿ ಮಾತ್ರ ಭಾಗಿಯಾಗದೇ, ಸಮಾಜವೇ ಭಾಗಿಯಾಗಿ ಅದನ್ನು ಸಂಭ್ರಮಿಸಿ, ಅಪರಾಧಕ್ಕೆ ತುತ್ತಾದವರನ್ನು ಇನ್ನಷ್ಟು ಕ್ಷೋಭೆಗೆ ಸಿಲುಕುವ ಕೆಲಸ ಮಾಡಿದಾಗ, ಅದಕ್ಕಾಗಿ ಏನಾದರೂ ಮಾಡಬೇಕು ಎಂದು ಎಲ್ಲರಿಗೂ ಅನಿಸುವುದು ಸಹಜ. ಆ ಅಪರಾಧಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು, ಅಂತಹ ಅಪರಾಧಗಳು ಮತ್ತೊಮ್ಮೆ ಆಗಬಾರದು ಎಂದು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು, ಕೆಲವು ಸಲ ಆ ವಿಷಯಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಎನ್ನುವ ಅನೇಕ ಕೆಲಸಗಳನ್ನು ಸಮಾಜದ ಕೆಲವು ಅಂಗಗಳು ಮಾಡುತ್ತವೆ.

ಅಂತಹದ್ದೇ ಒಂದು ಘೋರ ಅಪರಾಧದ ಬಗ್ಗೆ ನೊಂದಿರುವ ಯುವ ನಿರ್ದೇಶಕ ನಾಗೇಶ್ ಹೆಬ್ಬೂರು ಅವರು ‘ಪಬ್ಲಿಕ್ ಟಾಯ್ಲೆಟ್’ ಎಂಬ ಕಿರುಚಿತ್ರವನ್ನು ಮಾಡಿದ್ದಾರೆ. ಒಂದು ಸಾರ್ವಜನಿಕ ಶೌಚಾಲಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ, ಆ ಕ್ರಿಯೆಯನ್ನು ಒಬ್ಬ ಕ್ಯಾಮೆರದಲ್ಲಿ ಸೆರೆ ಹಿಡಿದು, ಎಲ್ಲೆಡೆ ಹಂಚಲಾಗಿತ್ತು, ತದನಂತರ ಆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಳು ಎನ್ನಲಾದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು ಸುದ್ದಿಯಾಗಿತ್ತು. ಇದೇ ವಿಷಯವನ್ನು ಇಟ್ಟುಕೊಂಡು ಈ ಕಿರುಚಿತ್ರವನ್ನು ಮಾಡಲಾಗಿದೆ.

ಇಂತಹ ವಿಷಯಗಳಲ್ಲಿ ಯಾರನ್ನು ಚಿತ್ರದ ಮುಖ್ಯಪಾತ್ರವನ್ನಾಗಿ ಮಾಡಬೇಕು ಎಂಬದು ಯಾವಾಗಲೂ ಒಂದು ಪ್ರಶ್ನೆ ಇರುತ್ತದೆ. ಈ ಚಿತ್ರದಲ್ಲಿ ತನ್ನ ಕ್ಯಾಮೆರದಲ್ಲಿ ಆ ದೃಶ್ಯವನ್ನು ಸೆರೆಹಿಡಿದ ವ್ಯಕ್ತಿಯನ್ನೇ ಪ್ರಮುಖಪಾತ್ರ ಮಾಡಲಾಗಿದೆ. ಅದು ಸರಿ ಕೂಡ. ಇಂತಹ ಘೋರ ಕೃತ್ಯಗಳನ್ನು ಎಸಗುತ್ತಾದರೂ ಏಕೆ ಎಂದು ತಿಳಿದು, ಅದರ ಬಗ್ಗೆ ಪರಿಹಾರ ಕಂಡುಕೊಳ್ಳಬೇಕಾದರೆ ಅಪರಾಧಿಯ ಮನೋಸ್ಥಿತಿಯನ್ನು ಪ್ರಮಾಣಿಕ ಪ್ರಯತ್ನ ಆಗಲೇಬೇಕು.

ಹೌದು ಈ ಚಿತ್ರದ ಉದ್ದೇಶವೂ ಪ್ರಾಮಾಣಿಕವಾಗಿಯೇ ಇದೆ. ಆದರೆ,

ಆ ಅಪರಾಧಿಯ ಮನೋಸ್ಥಿತಿಯನ್ನು ಅರಿಯುವ ಪ್ರಾಮಾಣಿಕ ಪ್ರಯತ್ನ ಕಾಣುವುದಿಲ್ಲ. ಅಂತಹ ಒಂದು ದೃಶ್ಯವನ್ನು ತನ್ನ ಫೋನಿನಲ್ಲಿ ಸೆರೆಹಿಡಿದು, ಎಲ್ಲೆಡೆ ವೈರಲ್ ಮಾಡಬೇಕಾದರೆ ಆ ವ್ಯಕ್ತಿ ಎಂಥವನಿರಬಹುದು, ಆ ಕ್ರೌರ್ಯ ಹೇಗೆ ಬಂದಿರಬಹುದು, ಆ ಮಟ್ಟದ ಅಸೂಕ್ಷ್ಮತೆಯನ್ನೆ ಹೇಗೆ ಅಳವಡಿಸಿಕೊಂಡಿರಬಹುದು, ಅದನ್ನು ವೈರಲ್ ಮಾಡಿ, ವಿಕೃತ ಖುಷಿಯನ್ನು ಅನುಭವಿಸಲು ಒಬ್ಬ ವ್ಯಕ್ತಿಗೆ ಹೇಗೆ ಸಾಧ್ಯ ಎಂಬ ಯಾವ ಪ್ರಶ್ನೆಗೂ ಉತ್ತರ ಸಿಗುವುದಿಲ್ಲ, ವಾಸ್ತವದಲ್ಲಿ ಆ ಪ್ರಶ್ನೆಗಳಿಗೆ ಉತ್ತರ ಹುಡುಕುವ ಗೋಜಿಗೇ ಹೋಗಿಲ್ಲ. ಆ ವಿಡಿಯೋ ವೈರಲ್ ಮಾಡಿ, ಬರುವ ಲೈಕ್‌ಗಳು, ವೀವ್ಸ್‌ಗಳಿಂದ ಅನುಂದತುಲಿತನಾಗುತ್ತದ್ದ ವ್ಯಕ್ತಿ, ಯಾರೋ ಒಬ್ಬ ಅದನ್ನು ಟೀಕಿಸಿದೊಡನೇ, ಈತನ ತಪ್ಪಿತಸ್ಥ ಭಾವನೆ ಜಾಗೃತವಾಗುತ್ತದೆ. ಅಲ್ಲಿಯವರೆಗೆ ಕಥೆಯನ್ನು ‘ಕಾಮೆಡಿ’ಯಾಗಿ ಚಿತ್ರಿಸಲು ಪ್ರಯತ್ನಿಸಿ, ತದನಂತರ ಚಿತ್ರದ ಟ್ರೀಟ್‌ಮೆಂಟ್‌ಅನ್ನು ಗಂಭೀರತೆಗೆ ಬದಲಾಯಿಸುತ್ತಾರೆ. ಆ ನಂತರ ಆ ತಪ್ಪಿತಸ್ಥ ಭಾವನೆಯೊಂದಿಗೆ ಅವನು ಹೇಗೆ ಒದ್ದಾಡುತ್ತಾನೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಅಲ್ಲಿಯೂ, ಯಾವುದೇ ಅಧ್ಯಯನ ಮಾಡದೇ, ವಿಷಯದ ಆಳಕ್ಕೆ ಇಳಿಯದೇ ನೋಡುಗರಿಗೆ ‘ಮನುಷ್ಯರ ಆಳ ಸಂವೇದನೆಗಳು ಮನುಷ್ಯತ್ವದ ಕಡೆಗೇ ಚಲಿಸುತ್ತಿರುಬೇಕು’ ಎಂಬ ಮಹತ್ತರ ಸಂದೇಶ ನೀಡುವ ಉದ್ದೇಶದಿಂದ ಚಿತ್ರವನ್ನು ಮಾಡಿದ್ದಾರೆ.

ಯಾವುದೇ ಒಂದು ಘಟನೆಯನ್ನು ಆಧಾರಿಸಿ ಸಿನೆಮಾ ಮಾಡಬೇಕಾದರೆ, ಅದನ್ನು ಸಿನೆಮಾದ ಚೌಕಟ್ಟಿನಲ್ಲಿ ಇಳಿಸಬೇಕಾಗುತ್ತದೆ. ಸಿನೆಮಾ ಎಂಬ ಮಾಧ್ಯಮದ ಇತಿಮಿತಿ ಮತ್ತು ಸಾಮರ್ಥ್ಯಗಳನ್ನು ಅರಿತು ಅದರನುಗುಣವಾಗಿ ಮಾಡಬೇಕಾಗುತ್ತದೆ. ಅದನ್ನೂ ಮಾಡದೆ, ವಿಷಯವಸ್ತುವಿನ ಆಳ ಅಧ್ಯವನ್ನೂ ಮಾಡದೇ, ಕೇವಲ ‘ಒಂದೊಳ್ಳೆ’ ಸಂದೇಶ ನೀಡಲೆಂದು ಸಿನೆಮಾ ಮಾಡುವುದೆಂದರೆ?


ಇದನ್ನೂ ಓದಿ; ಸಿನೆಮಾ ಮತ್ತು ಸಂದೇಶ: ‘ಒಂದೊಳ್ಳೇ ಮೆಸೇಜ್ ಇರೋ ಸಿನೆಮಾ ಮಾಡಬೇಕು’ ಎಂದರೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...