Homeಕರ್ನಾಟಕ'ಮನೆ ಕೊಡಿ ಇಲ್ಲಾ ಜೈಲಿಗಾದರೂ ಬಿಡಿ' : ಬೀದಿಗೆ ಬಿದ್ದ ಕೋಗಿಲು ನಿರಾಶ್ರಿತರ ಅಳಲು

‘ಮನೆ ಕೊಡಿ ಇಲ್ಲಾ ಜೈಲಿಗಾದರೂ ಬಿಡಿ’ : ಬೀದಿಗೆ ಬಿದ್ದ ಕೋಗಿಲು ನಿರಾಶ್ರಿತರ ಅಳಲು

- Advertisement -
- Advertisement -

“ನಮಗೊಂದು ಸೂರು ಕೊಟ್ಟರೆ ಅದಕ್ಕೆ ಕಾರಣರಾದ ಎಲ್ಲರನ್ನೂ ಹರಸಿ ನೆಮ್ಮದಿಯಾಗಿ ಬದುಕುತ್ತೇವೆ. ಇಲ್ಲವಾದರೆ ನಮ್ಮನ್ನು ಜೈಲಿಗಾದರೂ ಹಾಕಿಬಿಡಿ. ಒಂದು ನೆಲೆ ಮತ್ತು ಮೂರು ಹೊತ್ತಿನ ಊಟವಾದರೂ ಸಿಗುತ್ತದೆ”. ಇದು ಸರ್ಕಾರ ಮನೆ ಧ್ವಂಸ ಮಾಡಿದ್ದರಿಂದ ನಿರಾಶ್ರಿತರಾದ ಕೋಗಿಲು ಲೇಔಟ್ ಸ್ಲಂ ನಿವಾಸಿಗಳ ಅಳಲು.

2025ರ ಡಿಸೆಂಬರ್ 20ರಂದು ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಪ್ರದೇಶದ ಕೋಗಿಲು ಲೇಔಟ್‌ನಲ್ಲಿ ಇನ್ನೂರಕ್ಕೂ ಹೆಚ್ಚು ಬಡ ಕುಟುಂಬಗಳ ಮನೆಗಳನ್ನು ಅಕ್ರಮ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಧ್ವಂಸಗೊಳಿಸಿತ್ತು.

ಜನರು ನಿದ್ದೆಯಿಂದ ಎದ್ದೇಳುವ ಮೊದಲೇ ಮುಂಜಾನೆ ವೇಳೆಗೆ ಅಧಿಕಾರಿಗಳು ಕೈಗೊಂಡ ಕಾರ್ಯಾಚರಣೆಯಿಂದ ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ಅಸಂಘಟಿತ ಕಾರ್ಮಿಕರು ಮತ್ತು ಗೃಹ ಕಾರ್ಮಿಕರು ಸೇರಿದಂತೆ ವಿವಿಧ ತಳ ಸಮುದಾಯಗಳ ಬಡ ಜನರು ಬೀದಿಗೆ ಬಿದ್ದಿದ್ದಾರೆ.

“ಮನೆಗಳ ಧ್ವಂಸ ನಡೆದು 8 ದಿಗಳ ನಂತರ ಸರ್ಕಾರ ಪುನರ್ವಸತಿ ಒದಗಿಸುವುದಾಗಿ ಭರವಸೆ ನೀಡಿತು. ರಾಜೀವ್ ಗಾಂಧಿ ವಸತಿ ನಿಗಮವು ತುರ್ತಾಗಿ ಸಮೀಕ್ಷೆ ಪೂರ್ಣಗೊಳಿಸಿತು. ದಾಖಲೆ ಪರಿಶೀಲನೆ ಪ್ರಕ್ರಿಯೆಯೂ ಹಲವು ಸುತ್ತುಗಳಲ್ಲಿ ನಡೆಯಿತು. ಸಚಿವರು, ಶಾಸಕರು ಮತ್ತು ಮುಖ್ಯಮಂತ್ರಿಗಳು ಕೂಡ ಪುನರ್ವಸತಿ ಕುರಿತು ಸಾರ್ವಜನಿಕ ಭರವಸೆಗಳನ್ನು ನೀಡಿದರು. ಅದಾಗ್ಯೂ 148 ದಿನಗಳಿಂದ ಇನ್ನೂ ನಾವು ಬೀದಿಯಲ್ಲೇ ಬದುಕುತ್ತಿದ್ದೇವೆ. ತೀವ್ರ ಬಿಸಿಲು, ಮಳೆ ಮತ್ತು ಅನಾರೋಗ್ಯದ ನಡುವೆಯೂ ಮಕ್ಕಳು, ಮಹಿಳೆಯರು ಮತ್ತು ವೃದ್ದರನ್ನೊಳಗೊಂಡಂತೆ ಅತ್ಯಂತ ಅಮಾನವೀಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ” ಎಂದು ನಿರಾಶ್ರಿತರಾದ ಜನರು ನೋವು ತೋಡಿಕೊಂಡಿದ್ದಾರೆ.

“ಬಡವರ ಪರವೆಂದು ಕರೆಸಿಕೊಳ್ಳುವ ಕಾಂಗ್ರೆಸ್ ಸರ್ಕಾರ ನಮ್ಮ ಬದುಕನ್ನು ಮರು ಕಟ್ಟಿಕೊಳ್ಳಲು ನೆರವಾಗುವುದೆಂಬುವುದು ನಮ್ಮ ನಿರೀಕ್ಷೆಯಾಗಿತ್ತು. ಆದರೆ, ಅದು ಇಂದು ಹುಸಿಯಾಗಿದೆ. ಜನರಿಗೆ ಪುನರ್ವಸತಿ ಭರವಸೆ ನೀಡಿ 138 ದಿನಗಳು ಕಳೆದಿವೆ. ಹಲವಾರು ಸುತ್ತಿನ ದಾಖಲೆ ಪರಿಶೀಲನೆ ನಡೆದಿದ್ದರೂ, ಮನೆ ಕಳೆದುಕೊಂಡು ನಿರಾಶ್ರಿತರಾದ ನಮಗೆ ಮನೆ ಸಿಕ್ಕಿಲ್ಲ. ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತ, ಹಿಂದುಳಿದ ಪಂಗಡ ಹಾಗೂ ಅಸಂಘಟಿತ ಕಾರ್ಮಿಕರಾದ ನಮಗೆ ಸರ್ಕಾರ ವಿಧಿಸಿರುವ ನಿಯಮಗಳ ಅನುಸಾರ ಅಗತ್ಯವಾದ ದಾಖಲೆಗಳನ್ನು ಪಡೆದುಕೊಳ್ಳುವಲ್ಲಿ ಇರುವ ತೊಡಕುಗಳು ಎಷ್ಟೆಂದು ಸರ್ಕಾರಕ್ಕೆ ತಿಳಿದಿದೆ” ಎಂದು ಹೇಳಿದ್ದಾರೆ.

ನಿರಾಶ್ರಿತ ಜನರ ಪ್ರಕಾರ, ಅವರು ಮನೆ ಪಡೆಯಬೇಕಾದರೆ ಜಾತಿ ಮತ್ತು ಆದಾಯ ಪ್ರಮಾಣಪತ್ರ, ವಾಸ ದೃಢೀಕರಣ ಪತ್ರ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಅನ್ನು ಕಡ್ಡಾಯ ದಾಖಲೆಯಾಗಿ ಸರ್ಕಾರ ಕೇಳುತ್ತಿದೆಯಂತೆ.

“ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗಳು ಬಹುತೇಕರ ಬಳಿ ಇದೆ. ಆದರೆ, ಮನೆ ಕಳೆದುಕೊಂಡವರು ಅಂಚಿಗೆ ತಳ್ಳಲ್ಪಟ್ಟ ಜನರಾದ್ದರಿಂದ ಇತರೆ ಮೂರು ದಾಖಲೆಗಳು ಬಹುತೇಕ ಜನರ ಬಳಿ ಇಲ್ಲ. ಶೇಕಡ 10ಕ್ಕಿಂತ ಕಡಿಮೆ ಜನರ ಬಳಿ ಜಾತಿ ಮತು ಆದಾಯ ಪ್ರಮಾಣ ಪತ್ರವಿದೆ. ಈ ಪತ್ರವನ್ನು ಪಡೆದುಕೊಳ್ಳಲು ಟಿಸಿಯನ್ನು ಕಡ್ಡಾಯ ಮಾಡಿದ್ದಾರೆ. ನಮ್ಮ ಮಕ್ಕಳೇ ಶಿಕ್ಷಣ ಪಡೆಯುತ್ತಿರುವ ಮೊದಲ ತಲೆಮಾರಿನವರಾಗಿದ್ದಾರೆ. ನಮ್ಮ ಬಳಿ ಟಿಸಿ ಇಲ್ಲ. ಹಾಗಾಗಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ವಾಸ ದೃಢೀಕರಣ ಪತ್ರವನ್ನು ಮಾಡಿಸಿಕೊಳ್ಳಬೇಕೆಂಬ ಅರಿವು ಇಲ್ಲದ ಕಾರಣ ಬಹುತೇಕ ಜನರ ಬಳಿ ಈ ದಾಖಲೆಯೂ ಇಲ್ಲ. ಶೇಕಡ 36ರಕ್ಕೂ ಹೆಚ್ಚು ಜನರ ಬಳಿ ರೇಷನ್ ಕಾರ್ಡ್ ಇದೆ. ಪಡಿತರ ಚೀಟಿ ಪಡೆದುಕೊಳ್ಳುವಲ್ಲಿ ಹಲವಾರು ತಾಂತ್ರಿಕ ಅಡೆತಡೆಗಳು, ದಾಖಲಾತಿಯ ಕೊರತೆ ಮತ್ತು 2017ರಿಂದ ಈಚೆಗೆ ಹೊಸ ಕಾರ್ಡ್‌ಗಳನ್ನು ಪಡೆಯುವಲ್ಲಿ ಅರ್ಜಿ ಹಾಕಲು, ದಿನದಲ್ಲಿ ಕೆಲವು ಗಂಟೆಗಳ ಅವಕಾಶ ನೀಡಿದ್ದರಿಂದ ಪಡಿತರ ಚೀಟಿ ಪಡೆಯಲು ಸಾಧ್ಯವಾಗಿಲ್ಲ” ಎಂದು ನಿರಾಶ್ರಿತರು ಹೇಳಿದ್ದಾರೆ.

ನಾವು ಮನೆ ಪಡೆದುಕೊಳ್ಳಲು ಅಡ್ಡ ಗೋಡೆಯಾಗಿರುವ ದಾಖಲಾತಿಗಳ ತೊಡಕನ್ನು ತಾವು ಬಗೆಹರಿಸದೇ ಇದ್ದರೆ, ನಾವು ಶಾಶ್ವತವಾಗಿ ಬೀದಿಯಲ್ಲೇ ಬುದುಕುವಂತಹ ಸ್ಥಿತಿಗೆ ‘ಸರ್ಕಾರವೇ ನಮ್ಮನ್ನು ತಳ್ಳಿದಂತಾಗುತ್ತದೆ” ಎಂದಿದ್ದಾರೆ.

ಸರ್ಕಾರ ನೀಡಿದ್ದ ಭರವಸೆಗಳು ಈಡೇರಿಸಿದ ಕಾರಣ ಮನೆ ಕಳೆದುಕೊಂಡವರು ಈ ಕೆಳಗಿನ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ಮೇ 18ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟ ಹಗಲು-ರಾತ್ರಿ ಹೋರಾಟ ಆರಂಭಿಸಿದ್ದಾರೆ.

1. ಜಿಬಿಎ ನಡೆಸಿದ ಕಾರ್ಯಾಚರಣೆಯಿಂದ ಮನೆ ಕಳೆದುಕೊಂಡ ಎಲ್ಲಾ ಕುಟುಂಬಗಳಿಗೂ ತಕ್ಷಣ ಸಂಪೂರ್ಣ ಪುನರ್ವಸತಿ ಒದಗಿಸಲೇಬೇಕು.

2. ನಮಗೆ ಮನೆಯನ್ನು ನೀಡಲು ಇರುವ ದಾಖಲೆಗಳ ಕೊರತೆಯನ್ನು ನೀಗಿಸಲು ಸರ್ಕಾರ ವಿಶೇಷ ಕ್ಯಾಂಪ್‌ಗಳನ್ನು ಮಾಡಿ ಅಗತ್ಯವಾದ ದಾಖಲೆಗಳನ್ನು ಪಡೆದುಕೊಳ್ಳಲು ವಿಶೇಷ ಪ್ರಕ್ರಿಯೆ ನಡೆಸಲೇಬೇಕು. ಯಾವುದೇ ಕಾರಣಕ್ಕೂ ದಾಖಲೆಗಳ ಕೊರತೆ ನಮಗೆ ಮನೆ ನೀಡಲು ಅಡ್ಡಿಯಾಗದಂತೆ ಸರ್ಕಾರ ನಿಗಾವಹಿಸಬೇಕು.

3. ಶಾಶ್ವತ ಹಾಗೂ ಗೌರವಯುತ ಮನೆಗಳೊಂದಿಗೆ ಭೂ ಹಕ್ಕನ್ನು ಮತ್ತು ಎಲ್ಲಾ ಮೂಲಭೂತ ನಾಗರಿಕ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಬೇಕು.

“ಕಾದು ಕಾದು ಕಾದು ಕೊನೆಗೆ ನಾವು ಫ್ರೀಡಂ ಪಾರ್ಕಿಗೆ ಬಂದು ಬಿಡಾರ ಹೂಡುವ ತೀರ್ಮಾನ ಮಾಡಿದ್ದೇವೆ. ಜಿಬಿಎ ಅಧಿಕಾರಿಗಳು ನಮ್ಮ ಮನೆಗಳನ್ನು ಕೆಡವಿ (20 ಡಿಸೆಂಬರ್ 2025 ) ಐದು ತಿಂಗಳಾಗುತ್ತಿವೆ. ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳಿಗೆ ಸೇರಿದ, ಅಸಂಘಟಿತ ದಿನಗೂಲಿಗಳಾಗಿ ದುಡಿದು ಹೊಟ್ಟೆ ಹೊರೆಯುತ್ತಿರುವ ನಾವು ಕಳೆದ 148 ದಿನಗಳಿಂದ ಬೀದಿಯಲ್ಲೇ ಇದ್ದೇವೆ. ತೀವ್ರ ಚಳಿಯಲ್ಲಿ ಮಕ್ಕಳು, ಮರಿಗಳನ್ನು ಕಟ್ಟಿಕೊಂಡು ಬದುಕಿದೆವು, ಈಗ ಉರಿ ಬಿಸಿಲಿನಲ್ಲಿ ಬೆವರಿಳಿಸುತ್ತಾ ಬದುಕಿದ್ದೇವೆ. ಅಲ್ಲಿಲ್ಲಿ ಸಿಗುವ ಅಷ್ಟಿಷ್ಟು ಕೂಲಿ, ಅವರಿವರು ದಾನಿಗಳು ತಂದು ಹಂಚುವ ಅನ್ನ ನಂಬಿ ಬದುಕು ದೂಡಿದ್ದೇವೆ. ನಿತ್ಯದ ಶೌಚಾಲಯ, ಸ್ನಾನ ಒಂದು ಸವಾಲು. ಅವರಿವರ ಮನೆಗೆ ಹೋಗಿ ಅಂಗಲಾಚಬೇಕು.”

“ಕಾಯಿಲೆ ಬಿದ್ದರಂತೂ ನರಕ. ಎಷ್ಟು ದಿನ ನಾವು ಹೀಗೆ ಬದುಕಬೇಕು ನೀವೇ ಹೇಳಿ, ಸರ್ಕಾರ ಎಲ್ಲರಿಗೂ ಮನೆ ಗಿಫ್ಟ್ ಕೊಡುತ್ತೆ ಎಂಬ ಮಾತು ಕೇಳಿ ಅನಾಥರಾದವರಿಗೆ ಅಮೃತ ಸಿಕ್ಕಂತೆ ಆಗಿತ್ತು. ಆದರೆ ರಾಜಕೀಯ ದುರುದ್ದೇಶ ಹೊಂದಿದ ಕೆಲವರು ಇವರು ಹೊರಗಿನವರು, ಬಾಂಗ್ಲಾದೇಶಿಗಳಿದ್ದಾರೆ. ಇವರಿಗೇಕೆ ಕೊಡಬೇಕು ಎಂದು ಹಸಿ ಹಸಿ ಸುಳ್ಳು ತುಂಬಿದ ಅಪಪ್ರಚಾರ ಮಾಡತೊಡಗಿದರು. ಎಲ್ಲಾ ಗೊಂದಲದ ಗೂಡು. ಸರ್ಕಾರ ಹೆದರಿತೋ ಏನೋ ಗೊತ್ತಿಲ್ಲ ಹಿಂಜರಿದಿದ್ದಂತೂ ವಾಸ್ತವ, ಅಂದಿನಿಂದ ಬರಿ ಆಶ್ವಾಸನೆ ಮಾತ್ರ ನೆಲೆಯಂತೂ ನಮಗೆ ಸಿಗಲಿ ಸಿಗಲಿಲ್ಲ. ಕನಿಷ್ಠ ತಾತ್ಕಾಲಿಕ ನೆರವೂ ಸಹ ಕೊಡಲಿಲ್ಲ.”

“ಅಳದಿದ್ದರೆ ತಾಯಿ ಹಾಲೂ ಕೊಡಲ್ಲ” ಎಂಬ ಗಾದೆ ಇದೆ. ನಾವು ಇಲ್ಲೇ ಕೂತರೆ ನಮ್ಮನ್ನು ಸರ್ಕಾರ, ಸಮಾಜ, ಮಾಧ್ಯಮ ಎಲ್ಲರೂ ಮರೆತು ಬಿಡುತ್ತಾರೆ ಅನಿಸುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಅತಂತ್ರದ ಅನಾಥ ಬೀದಿ ಬದುಕು ಸಾಕಾಗಿದೆ. ಹಾಗಾಗಿ ಮಕ್ಕಳು, ಮರಿ ಸಮೇತ ಕಟ್ಟಿಕೊಂಡು ಟೆಂಟು, ಪಾತ್ರೆ ಪಗಡೆಗಳ ಸಮೇತ ಫ್ರೀಡಂ ಪಾರ್ಕಿಗೆ ಹೊರಟದ್ದೇವೆ. ನಮಗೊಂದು ಸೂರು ಕೊಟ್ಟರೆ ಕಾರಣರಾದ ಎಲ್ಲರನ್ನೂ ಹರಸಿ ನೆಮ್ಮದಿಯಾಗಿ ಬದುಕುತ್ತೇವೆ. ಇಲ್ಲವಾದರೆ ನಮ್ಮನ್ನು ಜೈಲಿಗಾದರೂ ಹಾಕಿಬಿಡಿ ಒಂದು ನೆಲೆ ಮತ್ತು ಮೂರು ಹೊತ್ತಿನ ಊಟವಾದರೂ ಸಿಗುತ್ತದೆ” ಎಂದು ನಿರಾಶ್ರಿತರು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೃಷ್ಣಬೈರೇಗೌಡ ಮತ್ತು ಝಮೀರ್ ಅಹ್ಮದ್ ಅವರಲ್ಲಿ ಪತ್ರಿಕಾ ಹೇಳಿಕೆಯ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಖ್ಯಾತ ಪತ್ರಕರ್ತ ಪಿ. ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

ಕನ್ನಡ ಪತ್ರಿಕೋದ್ಯಮದ ಧ್ರುವತಾರೆ, ದಿವಂಗತ ಪಿ. ಲಂಕೇಶ್ ಅವರ ಧರ್ಮಪತ್ನಿ ಹಾಗೂ ದಿವಂಗತ ಪತ್ರಕರ್ತೆ ಗೌರಿ ಲಂಕೇಶ್ ಅವರ ತಾಯಿಯಾದ ಇಂದಿರಾ ಲಂಕೇಶ್ (84) ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ...

ಬಾಗಲಕೋಟೆಯ ವಿವಿಧ ಪ್ರದೇಶಗಳಲ್ಲಿ ಎಸ್‌ಐಆರ್‌ ವಿರುದ್ಧ ಜನಜಾಗೃತಿ ಜಾಥಾ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಬಾಗಲಕೋಟೆ ನಗರದ ವಿವಿಧ ಭಾಗಗಳಲ್ಲಿ ಭಾನುವಾರ (ಜೂ.14) ಜಾಗೃತಿ ಜಾಥಾ ನಡೆಯಿತು. ನವನಗರದ ವಿದ್ಯಾಗಿರಿ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಸರ್ಕಲ್‌ನಿಂದ ಪ್ರಾರಂಭವಾದ ಜಾಥಾ...

SIR ವಿರೋಧಿ ಜನಜಾಗೃತಿ ಜಾಥಾ: ಕಾಫಿ ನಾಡು ಚಿಕ್ಕಮಗಳೂರಲ್ಲಿ ಅದ್ದೂರಿ ಸ್ವಾಗತ

ಚಿಕ್ಕಮಗಳೂರು: ರಾಜ್ಯಾದ್ಯಂತ ಐದು ವಿಭಾಗಗಳಲ್ಲಿ ಸಂಚರಿಸುತ್ತಿರುವ 'SIR ವಿರೋಧಿ ಜನಜಾಗೃತಿ ಜಾಥಾ'ದ 3ನೇ ಮಾರ್ಗದ ತಂಡಕ್ಕೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಭಾನುವಾರ ಬೆಳಗ್ಗೆ ಜಿಲ್ಲೆಯ ಕೊಪ್ಪ ತಾಲ್ಲೂಕಿಗೆ ಆಗಮಿಸಿದ ಜಾಥಾ...

ಚಿಕ್ಕಮಗಳೂರಿನಲ್ಲಿ ಎಸ್‌ಐಆರ್ (SIR) ವಿರೋಧಿ ಜಾಥಾ: ಮತದಾರರ ಹಕ್ಕು ಕಸಿಯುವ ಹುನ್ನಾರದ ವಿರುದ್ಧ ಆಕ್ರೋಶ

ಭಾರತ ಚುನಾವಣಾ ಆಯೋಗವು ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆ (SIR - Special Intensive Revision) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ....

ಮಂಗಳೂರು: ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ: ವಿ.ಎಸ್. ಶ್ರೀಧರ್ 

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ...

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...