Homeಕರ್ನಾಟಕ'ಮನೆ ಕೊಡಿ ಇಲ್ಲಾ ಜೈಲಿಗಾದರೂ ಬಿಡಿ' : ಬೀದಿಗೆ ಬಿದ್ದ ಕೋಗಿಲು ನಿರಾಶ್ರಿತರ ಅಳಲು

‘ಮನೆ ಕೊಡಿ ಇಲ್ಲಾ ಜೈಲಿಗಾದರೂ ಬಿಡಿ’ : ಬೀದಿಗೆ ಬಿದ್ದ ಕೋಗಿಲು ನಿರಾಶ್ರಿತರ ಅಳಲು

- Advertisement -
- Advertisement -

“ನಮಗೊಂದು ಸೂರು ಕೊಟ್ಟರೆ ಅದಕ್ಕೆ ಕಾರಣರಾದ ಎಲ್ಲರನ್ನೂ ಹರಸಿ ನೆಮ್ಮದಿಯಾಗಿ ಬದುಕುತ್ತೇವೆ. ಇಲ್ಲವಾದರೆ ನಮ್ಮನ್ನು ಜೈಲಿಗಾದರೂ ಹಾಕಿಬಿಡಿ. ಒಂದು ನೆಲೆ ಮತ್ತು ಮೂರು ಹೊತ್ತಿನ ಊಟವಾದರೂ ಸಿಗುತ್ತದೆ”. ಇದು ಸರ್ಕಾರ ಮನೆ ಧ್ವಂಸ ಮಾಡಿದ್ದರಿಂದ ನಿರಾಶ್ರಿತರಾದ ಕೋಗಿಲು ಲೇಔಟ್ ಸ್ಲಂ ನಿವಾಸಿಗಳ ಅಳಲು.

2025ರ ಡಿಸೆಂಬರ್ 20ರಂದು ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಪ್ರದೇಶದ ಕೋಗಿಲು ಲೇಔಟ್‌ನಲ್ಲಿ ಇನ್ನೂರಕ್ಕೂ ಹೆಚ್ಚು ಬಡ ಕುಟುಂಬಗಳ ಮನೆಗಳನ್ನು ಅಕ್ರಮ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಧ್ವಂಸಗೊಳಿಸಿತ್ತು.

ಜನರು ನಿದ್ದೆಯಿಂದ ಎದ್ದೇಳುವ ಮೊದಲೇ ಮುಂಜಾನೆ ವೇಳೆಗೆ ಅಧಿಕಾರಿಗಳು ಕೈಗೊಂಡ ಕಾರ್ಯಾಚರಣೆಯಿಂದ ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ಅಸಂಘಟಿತ ಕಾರ್ಮಿಕರು ಮತ್ತು ಗೃಹ ಕಾರ್ಮಿಕರು ಸೇರಿದಂತೆ ವಿವಿಧ ತಳ ಸಮುದಾಯಗಳ ಬಡ ಜನರು ಬೀದಿಗೆ ಬಿದ್ದಿದ್ದಾರೆ.

“ಮನೆಗಳ ಧ್ವಂಸ ನಡೆದು 8 ದಿಗಳ ನಂತರ ಸರ್ಕಾರ ಪುನರ್ವಸತಿ ಒದಗಿಸುವುದಾಗಿ ಭರವಸೆ ನೀಡಿತು. ರಾಜೀವ್ ಗಾಂಧಿ ವಸತಿ ನಿಗಮವು ತುರ್ತಾಗಿ ಸಮೀಕ್ಷೆ ಪೂರ್ಣಗೊಳಿಸಿತು. ದಾಖಲೆ ಪರಿಶೀಲನೆ ಪ್ರಕ್ರಿಯೆಯೂ ಹಲವು ಸುತ್ತುಗಳಲ್ಲಿ ನಡೆಯಿತು. ಸಚಿವರು, ಶಾಸಕರು ಮತ್ತು ಮುಖ್ಯಮಂತ್ರಿಗಳು ಕೂಡ ಪುನರ್ವಸತಿ ಕುರಿತು ಸಾರ್ವಜನಿಕ ಭರವಸೆಗಳನ್ನು ನೀಡಿದರು. ಅದಾಗ್ಯೂ 148 ದಿನಗಳಿಂದ ಇನ್ನೂ ನಾವು ಬೀದಿಯಲ್ಲೇ ಬದುಕುತ್ತಿದ್ದೇವೆ. ತೀವ್ರ ಬಿಸಿಲು, ಮಳೆ ಮತ್ತು ಅನಾರೋಗ್ಯದ ನಡುವೆಯೂ ಮಕ್ಕಳು, ಮಹಿಳೆಯರು ಮತ್ತು ವೃದ್ದರನ್ನೊಳಗೊಂಡಂತೆ ಅತ್ಯಂತ ಅಮಾನವೀಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ” ಎಂದು ನಿರಾಶ್ರಿತರಾದ ಜನರು ನೋವು ತೋಡಿಕೊಂಡಿದ್ದಾರೆ.

“ಬಡವರ ಪರವೆಂದು ಕರೆಸಿಕೊಳ್ಳುವ ಕಾಂಗ್ರೆಸ್ ಸರ್ಕಾರ ನಮ್ಮ ಬದುಕನ್ನು ಮರು ಕಟ್ಟಿಕೊಳ್ಳಲು ನೆರವಾಗುವುದೆಂಬುವುದು ನಮ್ಮ ನಿರೀಕ್ಷೆಯಾಗಿತ್ತು. ಆದರೆ, ಅದು ಇಂದು ಹುಸಿಯಾಗಿದೆ. ಜನರಿಗೆ ಪುನರ್ವಸತಿ ಭರವಸೆ ನೀಡಿ 138 ದಿನಗಳು ಕಳೆದಿವೆ. ಹಲವಾರು ಸುತ್ತಿನ ದಾಖಲೆ ಪರಿಶೀಲನೆ ನಡೆದಿದ್ದರೂ, ಮನೆ ಕಳೆದುಕೊಂಡು ನಿರಾಶ್ರಿತರಾದ ನಮಗೆ ಮನೆ ಸಿಕ್ಕಿಲ್ಲ. ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತ, ಹಿಂದುಳಿದ ಪಂಗಡ ಹಾಗೂ ಅಸಂಘಟಿತ ಕಾರ್ಮಿಕರಾದ ನಮಗೆ ಸರ್ಕಾರ ವಿಧಿಸಿರುವ ನಿಯಮಗಳ ಅನುಸಾರ ಅಗತ್ಯವಾದ ದಾಖಲೆಗಳನ್ನು ಪಡೆದುಕೊಳ್ಳುವಲ್ಲಿ ಇರುವ ತೊಡಕುಗಳು ಎಷ್ಟೆಂದು ಸರ್ಕಾರಕ್ಕೆ ತಿಳಿದಿದೆ” ಎಂದು ಹೇಳಿದ್ದಾರೆ.

ನಿರಾಶ್ರಿತ ಜನರ ಪ್ರಕಾರ, ಅವರು ಮನೆ ಪಡೆಯಬೇಕಾದರೆ ಜಾತಿ ಮತ್ತು ಆದಾಯ ಪ್ರಮಾಣಪತ್ರ, ವಾಸ ದೃಢೀಕರಣ ಪತ್ರ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಅನ್ನು ಕಡ್ಡಾಯ ದಾಖಲೆಯಾಗಿ ಸರ್ಕಾರ ಕೇಳುತ್ತಿದೆಯಂತೆ.

“ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗಳು ಬಹುತೇಕರ ಬಳಿ ಇದೆ. ಆದರೆ, ಮನೆ ಕಳೆದುಕೊಂಡವರು ಅಂಚಿಗೆ ತಳ್ಳಲ್ಪಟ್ಟ ಜನರಾದ್ದರಿಂದ ಇತರೆ ಮೂರು ದಾಖಲೆಗಳು ಬಹುತೇಕ ಜನರ ಬಳಿ ಇಲ್ಲ. ಶೇಕಡ 10ಕ್ಕಿಂತ ಕಡಿಮೆ ಜನರ ಬಳಿ ಜಾತಿ ಮತು ಆದಾಯ ಪ್ರಮಾಣ ಪತ್ರವಿದೆ. ಈ ಪತ್ರವನ್ನು ಪಡೆದುಕೊಳ್ಳಲು ಟಿಸಿಯನ್ನು ಕಡ್ಡಾಯ ಮಾಡಿದ್ದಾರೆ. ನಮ್ಮ ಮಕ್ಕಳೇ ಶಿಕ್ಷಣ ಪಡೆಯುತ್ತಿರುವ ಮೊದಲ ತಲೆಮಾರಿನವರಾಗಿದ್ದಾರೆ. ನಮ್ಮ ಬಳಿ ಟಿಸಿ ಇಲ್ಲ. ಹಾಗಾಗಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ವಾಸ ದೃಢೀಕರಣ ಪತ್ರವನ್ನು ಮಾಡಿಸಿಕೊಳ್ಳಬೇಕೆಂಬ ಅರಿವು ಇಲ್ಲದ ಕಾರಣ ಬಹುತೇಕ ಜನರ ಬಳಿ ಈ ದಾಖಲೆಯೂ ಇಲ್ಲ. ಶೇಕಡ 36ರಕ್ಕೂ ಹೆಚ್ಚು ಜನರ ಬಳಿ ರೇಷನ್ ಕಾರ್ಡ್ ಇದೆ. ಪಡಿತರ ಚೀಟಿ ಪಡೆದುಕೊಳ್ಳುವಲ್ಲಿ ಹಲವಾರು ತಾಂತ್ರಿಕ ಅಡೆತಡೆಗಳು, ದಾಖಲಾತಿಯ ಕೊರತೆ ಮತ್ತು 2017ರಿಂದ ಈಚೆಗೆ ಹೊಸ ಕಾರ್ಡ್‌ಗಳನ್ನು ಪಡೆಯುವಲ್ಲಿ ಅರ್ಜಿ ಹಾಕಲು, ದಿನದಲ್ಲಿ ಕೆಲವು ಗಂಟೆಗಳ ಅವಕಾಶ ನೀಡಿದ್ದರಿಂದ ಪಡಿತರ ಚೀಟಿ ಪಡೆಯಲು ಸಾಧ್ಯವಾಗಿಲ್ಲ” ಎಂದು ನಿರಾಶ್ರಿತರು ಹೇಳಿದ್ದಾರೆ.

ನಾವು ಮನೆ ಪಡೆದುಕೊಳ್ಳಲು ಅಡ್ಡ ಗೋಡೆಯಾಗಿರುವ ದಾಖಲಾತಿಗಳ ತೊಡಕನ್ನು ತಾವು ಬಗೆಹರಿಸದೇ ಇದ್ದರೆ, ನಾವು ಶಾಶ್ವತವಾಗಿ ಬೀದಿಯಲ್ಲೇ ಬುದುಕುವಂತಹ ಸ್ಥಿತಿಗೆ ‘ಸರ್ಕಾರವೇ ನಮ್ಮನ್ನು ತಳ್ಳಿದಂತಾಗುತ್ತದೆ” ಎಂದಿದ್ದಾರೆ.

ಸರ್ಕಾರ ನೀಡಿದ್ದ ಭರವಸೆಗಳು ಈಡೇರಿಸಿದ ಕಾರಣ ಮನೆ ಕಳೆದುಕೊಂಡವರು ಈ ಕೆಳಗಿನ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ಮೇ 18ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟ ಹಗಲು-ರಾತ್ರಿ ಹೋರಾಟ ಆರಂಭಿಸಿದ್ದಾರೆ.

1. ಜಿಬಿಎ ನಡೆಸಿದ ಕಾರ್ಯಾಚರಣೆಯಿಂದ ಮನೆ ಕಳೆದುಕೊಂಡ ಎಲ್ಲಾ ಕುಟುಂಬಗಳಿಗೂ ತಕ್ಷಣ ಸಂಪೂರ್ಣ ಪುನರ್ವಸತಿ ಒದಗಿಸಲೇಬೇಕು.

2. ನಮಗೆ ಮನೆಯನ್ನು ನೀಡಲು ಇರುವ ದಾಖಲೆಗಳ ಕೊರತೆಯನ್ನು ನೀಗಿಸಲು ಸರ್ಕಾರ ವಿಶೇಷ ಕ್ಯಾಂಪ್‌ಗಳನ್ನು ಮಾಡಿ ಅಗತ್ಯವಾದ ದಾಖಲೆಗಳನ್ನು ಪಡೆದುಕೊಳ್ಳಲು ವಿಶೇಷ ಪ್ರಕ್ರಿಯೆ ನಡೆಸಲೇಬೇಕು. ಯಾವುದೇ ಕಾರಣಕ್ಕೂ ದಾಖಲೆಗಳ ಕೊರತೆ ನಮಗೆ ಮನೆ ನೀಡಲು ಅಡ್ಡಿಯಾಗದಂತೆ ಸರ್ಕಾರ ನಿಗಾವಹಿಸಬೇಕು.

3. ಶಾಶ್ವತ ಹಾಗೂ ಗೌರವಯುತ ಮನೆಗಳೊಂದಿಗೆ ಭೂ ಹಕ್ಕನ್ನು ಮತ್ತು ಎಲ್ಲಾ ಮೂಲಭೂತ ನಾಗರಿಕ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಬೇಕು.

“ಕಾದು ಕಾದು ಕಾದು ಕೊನೆಗೆ ನಾವು ಫ್ರೀಡಂ ಪಾರ್ಕಿಗೆ ಬಂದು ಬಿಡಾರ ಹೂಡುವ ತೀರ್ಮಾನ ಮಾಡಿದ್ದೇವೆ. ಜಿಬಿಎ ಅಧಿಕಾರಿಗಳು ನಮ್ಮ ಮನೆಗಳನ್ನು ಕೆಡವಿ (20 ಡಿಸೆಂಬರ್ 2025 ) ಐದು ತಿಂಗಳಾಗುತ್ತಿವೆ. ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳಿಗೆ ಸೇರಿದ, ಅಸಂಘಟಿತ ದಿನಗೂಲಿಗಳಾಗಿ ದುಡಿದು ಹೊಟ್ಟೆ ಹೊರೆಯುತ್ತಿರುವ ನಾವು ಕಳೆದ 148 ದಿನಗಳಿಂದ ಬೀದಿಯಲ್ಲೇ ಇದ್ದೇವೆ. ತೀವ್ರ ಚಳಿಯಲ್ಲಿ ಮಕ್ಕಳು, ಮರಿಗಳನ್ನು ಕಟ್ಟಿಕೊಂಡು ಬದುಕಿದೆವು, ಈಗ ಉರಿ ಬಿಸಿಲಿನಲ್ಲಿ ಬೆವರಿಳಿಸುತ್ತಾ ಬದುಕಿದ್ದೇವೆ. ಅಲ್ಲಿಲ್ಲಿ ಸಿಗುವ ಅಷ್ಟಿಷ್ಟು ಕೂಲಿ, ಅವರಿವರು ದಾನಿಗಳು ತಂದು ಹಂಚುವ ಅನ್ನ ನಂಬಿ ಬದುಕು ದೂಡಿದ್ದೇವೆ. ನಿತ್ಯದ ಶೌಚಾಲಯ, ಸ್ನಾನ ಒಂದು ಸವಾಲು. ಅವರಿವರ ಮನೆಗೆ ಹೋಗಿ ಅಂಗಲಾಚಬೇಕು.”

“ಕಾಯಿಲೆ ಬಿದ್ದರಂತೂ ನರಕ. ಎಷ್ಟು ದಿನ ನಾವು ಹೀಗೆ ಬದುಕಬೇಕು ನೀವೇ ಹೇಳಿ, ಸರ್ಕಾರ ಎಲ್ಲರಿಗೂ ಮನೆ ಗಿಫ್ಟ್ ಕೊಡುತ್ತೆ ಎಂಬ ಮಾತು ಕೇಳಿ ಅನಾಥರಾದವರಿಗೆ ಅಮೃತ ಸಿಕ್ಕಂತೆ ಆಗಿತ್ತು. ಆದರೆ ರಾಜಕೀಯ ದುರುದ್ದೇಶ ಹೊಂದಿದ ಕೆಲವರು ಇವರು ಹೊರಗಿನವರು, ಬಾಂಗ್ಲಾದೇಶಿಗಳಿದ್ದಾರೆ. ಇವರಿಗೇಕೆ ಕೊಡಬೇಕು ಎಂದು ಹಸಿ ಹಸಿ ಸುಳ್ಳು ತುಂಬಿದ ಅಪಪ್ರಚಾರ ಮಾಡತೊಡಗಿದರು. ಎಲ್ಲಾ ಗೊಂದಲದ ಗೂಡು. ಸರ್ಕಾರ ಹೆದರಿತೋ ಏನೋ ಗೊತ್ತಿಲ್ಲ ಹಿಂಜರಿದಿದ್ದಂತೂ ವಾಸ್ತವ, ಅಂದಿನಿಂದ ಬರಿ ಆಶ್ವಾಸನೆ ಮಾತ್ರ ನೆಲೆಯಂತೂ ನಮಗೆ ಸಿಗಲಿ ಸಿಗಲಿಲ್ಲ. ಕನಿಷ್ಠ ತಾತ್ಕಾಲಿಕ ನೆರವೂ ಸಹ ಕೊಡಲಿಲ್ಲ.”

“ಅಳದಿದ್ದರೆ ತಾಯಿ ಹಾಲೂ ಕೊಡಲ್ಲ” ಎಂಬ ಗಾದೆ ಇದೆ. ನಾವು ಇಲ್ಲೇ ಕೂತರೆ ನಮ್ಮನ್ನು ಸರ್ಕಾರ, ಸಮಾಜ, ಮಾಧ್ಯಮ ಎಲ್ಲರೂ ಮರೆತು ಬಿಡುತ್ತಾರೆ ಅನಿಸುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಅತಂತ್ರದ ಅನಾಥ ಬೀದಿ ಬದುಕು ಸಾಕಾಗಿದೆ. ಹಾಗಾಗಿ ಮಕ್ಕಳು, ಮರಿ ಸಮೇತ ಕಟ್ಟಿಕೊಂಡು ಟೆಂಟು, ಪಾತ್ರೆ ಪಗಡೆಗಳ ಸಮೇತ ಫ್ರೀಡಂ ಪಾರ್ಕಿಗೆ ಹೊರಟದ್ದೇವೆ. ನಮಗೊಂದು ಸೂರು ಕೊಟ್ಟರೆ ಕಾರಣರಾದ ಎಲ್ಲರನ್ನೂ ಹರಸಿ ನೆಮ್ಮದಿಯಾಗಿ ಬದುಕುತ್ತೇವೆ. ಇಲ್ಲವಾದರೆ ನಮ್ಮನ್ನು ಜೈಲಿಗಾದರೂ ಹಾಕಿಬಿಡಿ ಒಂದು ನೆಲೆ ಮತ್ತು ಮೂರು ಹೊತ್ತಿನ ಊಟವಾದರೂ ಸಿಗುತ್ತದೆ” ಎಂದು ನಿರಾಶ್ರಿತರು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೃಷ್ಣಬೈರೇಗೌಡ ಮತ್ತು ಝಮೀರ್ ಅಹ್ಮದ್ ಅವರಲ್ಲಿ ಪತ್ರಿಕಾ ಹೇಳಿಕೆಯ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...