Homeಅಂಕಣಗಳುಹವ್ಯಕ ತರುಣರ ಸಮಸ್ಯೆ ಹಾಗೇ ಉಳಿಯಿತಲ್ಲಾ!

ಹವ್ಯಕ ತರುಣರ ಸಮಸ್ಯೆ ಹಾಗೇ ಉಳಿಯಿತಲ್ಲಾ!

- Advertisement -
- Advertisement -

ಈ ವರ್ಷದ ಅಂತ್ಯಭಾಗದಲ್ಲಿ ನಡೆದ ಮಹತ್ವದ ಘಟನೆಗಳಲ್ಲಿ ಮೊದಲನೆಯದಾವುದೆಂದರೆ, ಅದು ಅಖಿಲ ಹವ್ಯಕ ಮಹಾಸಭಾದ ಅಮೃತ ಮಹೋತ್ಸವವಂತಲ್ಲಾ. ಹವ್ಯಕ ಸಮಾಜ ನಮ್ಮ ನಡುವೆ ತುಂಬಾ ಪ್ರಭಾವಿಯಾದ ಸಮಾಜ ಎಂಬುದರಲ್ಲಿ ಎರಡನೇ ಮಾತಿಲ್ಲ, ಮೂರನೇ ಸದ್ದಿಲ್ಲ! ಈ ಜನಾಂಗದ ಜಗದ್ಗುರು ಮಠದ ಭಕ್ತೆಗೆ ನಾನೇ ರಾಮ, ನೀನೇ ನನಗಾಗಿ ಜನ್ಮವೆತ್ತಿ ಹುಡುಕುತ್ತಾ ಬಂದ ಸೀತೆ ಎಂದು ನಂಬಿಸಿದ ಪುರುಷೋತ್ತಮ. ಸದರಿ ರಾಘವನ ರಾಸಲೀಲೆ ಅತಿಯಾದ ಕಾರಣಕ್ಕೆ ನೊಂದ ಸೀತೆ ಕೋರ್ಟ್ ಮೆಟ್ಟಿಲೇರಿದಳು. ಆದರೇನು ರಾಘವೇಶ್ವರನ ಪ್ರಭಾವಕ್ಕೆ ಅಂಜಿದ ಜಡ್ಜ್‍ಗಳು ಈ ಕೇಸನ್ನು ನಾವು ಮುಟ್ಟುವುದಿಲ್ಲ ಎಂದು ಹಿಂದೆ ಸರಿದರು. ಧೈರ್ಯ ಮಾಡಿದ ಜಡ್ಜ್ ಒಬ್ಬರು `ಈ ರಾಮನ ಅಪರಾವತಾರಿ, ಪೊಲೀಸರ ಸ್ಥಳ ತನಿಖಾ ವರದಿ ಪ್ರಕಾರ 159 ಬಾರಿ ರತಿಸುಖ ರಾಸಲೀಲೆ ನಡೆಸಿರುವುದರಿಂದ ಒಪ್ಪಿತ ವಿಲಾಸ ಕ್ರೀಡೆಯಾಗುತ್ತದೆ. ಆದ್ದರಿಂದ ಇದು ಅತ್ಯಾಚಾರಕ್ಕೆ ದೂರ’ ಎನ್ನಲಾಗಿ ಇಡೀ ಹವ್ಯಕರಲ್ಲಿನ ರಾಘು ಅಭಿಮಾನಿಗಳು ಅಂದೇ ಅಮೃತ ಮಹೋತ್ಸವ ಮಾಡಿ ರಾಘು ಮೆರೆಸುವ ತೀರ್ಮಾನ ಕೈಗೊಂಡರಂತಲ್ಲಾ ಥೂತ್ತೇರಿ.

******

 

ರಾಘವೇಶ್ವರ ನೆಲೆಸಿರುವ ಪ್ರದೇಶದ ಶಾಸಕ ಹರತಾಳ ಹಾಲಪ್ಪ ರಾಘವನ ಪರಮ ಭಕ್ತ. ಆದ್ದರಿಂದ ಸಾಗರದ ಹವ್ಯಕರು ಆತನನ್ನು ಗೆಲ್ಲಿಸಿದರಂತಲ್ಲಾ. ಯಾಕೆಂದರೆ ಆ ಹಾಳು ತಿಮ್ಮಪ್ಪ ದಿನ ಬೆಳಗಾಯ್ತೆಂದರೆ ಜನಗಳ ಕೆಲಸ ಕುರಿತು ಯೋಚಿಸುತ್ತಾನೆ. ಕಾರ್ಯಕರ್ತರ ಖಾಸಗಿ ವಿಷಯವನೆಂದೂ ಕೇಳಿಲ್ಲ. ಅದೇ ಹಾಲಪ್ಪ ಜನರ ಖಾಸಗಿ ವಿಷಯ ಕೇಳುತ್ತಾನೆ. ಸಾಧ್ಯವಾದರೆ ಮನೆಗೂ ಬಂದುಬಿಡುತ್ತಾನೆ. ನಮ್ಮ ಮಡದಿಯ ಕೈಯಿಂದ ಕಾಫಿ ಮಾಡಿಸಿಕೊಂಡು ಕುಡಿಯುತ್ತಾನೆ. ನಮ್ಮ ಕೈಯಿಂದಲೇ ಬೀಡಿ ಸಿಗರೇಟು ಮಾತ್ರೆ ತರಿಸುತ್ತಾನೆ. ಇಂತಹ ಜನಾನುರಾಗಿ ಹಾಲಪ್ಪನೆಲ್ಲಿ ಆ ತಿಮ್ಮಪ್ಪನೆಲ್ಲಿ ಎಂದು ಚಿಂತಿಸಿ ಹಾಲಪ್ಪನನ್ನೇ ಆರಿಸಿದರಂತಲ್ಲಾ. ಅಂಥಾ ರಾಘವನಿಗೆ ಇಂತ ಹಾಲಪ್ಪನೇ ಸರಿ ಎಂದು ಹವ್ಯಕರು ಚಿಂತಿಸಿದ್ದಾಗ ರಾಘವನ ರಾಡಿ ತೆಗೆಯದೆ ಮೌನವಾಗಿದ್ದ ತಿಮ್ಮಪ್ಪನಿಗೆ ಹವ್ಯಕರು ಸರಿಯಾದ ಶಾಸ್ತಿ ಮಾಡಿದರಲ್ಲಾ. ಸದರಿ ಹಾಲಪ್ಪ ಯಾರಾದರೂ ಹವ್ಯಕರನ್ನ ಬೈದರೆ ನಾನು ಸುಮ್ಮನಿರುವುದಿಲ್ಲ, ರಾತ್ರಿ ನಿಮ್ಮ ಮನೆಗೇ ಬಂದು ಬಿಡುತ್ತೇನೆಂದು ಹೆದರಿಸಿದ್ದಾನಂತಲ್ಲಾ ಥೂತ್ತೇರಿ.

******

 

ಹವ್ಯಕರು ಹೆಚ್ಚು ನೆಲೆಸಿರುವ ಸಾಗರ ಪ್ರಾಂತ್ಯದಲ್ಲಿನ ಪ್ರತಿ ಹಳ್ಳಿಗಳಿಲ್ಲಿ 20ರಿಂದ 30 ಹುಡುಗರು ಅವಿವಾಹಿತರಾಗಿಯೇ ಇದ್ದಾರಂತಲ್ಲಾ. ಈ ಸಮಸ್ಯೆ ರಾಮಚಂದ್ರಾಪುರ ಮಠದ ಗುರುಗಳನ್ನ ತೀವ್ರವಾಗಿ ಕಾಡಬೇಕಿತ್ತು. ಆದರೆ ತರುಣರ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಿಕೊಂಡ ಗುರುಗಳ ಅನೈತಿಕ ಬದುಕನ್ನೇ ಮನ್ನಿಸಿದ ಜನ, ಅವರಿಗೆ ಪೂರ್ಣ ಬೆಂಬಲ ಕೊಡುವ ನಿರ್ಣಯವನ್ನೇ ಕೈಗೊಂಡರಂತಲ್ಲಾ. ಕಾರಣ ಈ ರಾಮಚಂದ್ರಾಪುರ ಮಠ ಜಗತ್ತಿನ ಏಕೈಕ ಮಠ ಅಂತಹ ಮಠದಲ್ಲಿ ಈ ತರಹ ಇರುವ ಏಕೈಕ ಜಗದ್ಗುರು ರಾಘವೇಶ್ವರ ಅವರ ಅಜನ್ಮ ಬ್ರಹ್ಮಚಾರಿ ಬದುಕನ್ನ ಕೊಂಡಾಡುತ್ತ ತರುಣರು, ಕನ್ಯೆ ಇಲ್ಲದ ತಮ್ಮ ಬದುಕನ್ನು ಪೂರ್ಣಗೊಳಿಸಬೇಕು ಎಂಬ ಗುಪ್ತ ಚರ್ಚೆ ಬೆಂಗಳೂರಲ್ಲಿ ಆಯ್ತಂತಲ್ಲಾ. ಅದೇನಾದರಾಗಲಿ ಅಖಿಲ ಭಾರತ ಹವ್ಯಕ ಮಹಾಸಭೆಯಲ್ಲಿ ಹವ್ಯಕ ತರುಣರ ಲೈಂಗಿಕ ಸಮಸ್ಯೆ ಚರ್ಚೆಗೇ ಬರದಿರುವುದಕ್ಕೆ ಕಾರಣ `ಎಲ್ಲರೂ ಅವರ ಜಗದ್ಗುರು ದಾರಿಯಲ್ಲಿ ನಡೆಯುತ್ತಾರೆ, ಇಲ್ಲವಾದಲ್ಲಿ ಅವರ ಬದುಕು ಅವರ ಕೈಯಲ್ಲಿ’ ಎಂಬ ತಾತ್ಸಾರದ ಮನೋಭಾವವೇ ಕಾರಣವಂತಲ್ಲಾ ಥೂತ್ತೇರಿ.

 

******

 

ಸಮ್ಮಿಶ್ರ ಸರಕಾರದ ವರಸೆ ನೋಡಿದ ರೈತರು ಈ ಸರಕಾರದಿಂದ ನಮ್ಮ ಸಾಲಮನ್ನಾ ಸಾಧ್ಯವೇ ಎಂದು ಚಿಂತಿಸುತ್ತಿರುವಾಗ, ಭಾವುಕರಾದ ಕುಮಾರಣ್ಣ `ರೈತ ಬಾಂಧವರೇ ಮತ್ತು ಅಣ್ಣತಮ್ಮಂದಿರೆ ಮತ್ತು ಅಕ್ಕಭಾವಂದಿರೆ ಹಾಗೂ ನಮ್ಮ ತಂದೆಯ ಅಭಿಮಾನಿಗಳೇ, ಏನು ನೀವು ಒಂದು ಅನುಮಾನ ಪಡ್ತಾ ಇರತಕ್ಕಂತ ವಿಷಯ ಏನಿದೆ ಅದು ನನಿಗೆ ಅರ್ಥ ಆಗ್ತಕ್ಕಂತದ್ದು. ಆ ದಿಸೆಲಿ ಯಾರು ಅನುಮಾನ ಪಡಬೇಡಿ. ಈಗಾಗಲೇ ರಾಜ್ಯೋತ್ಸವ ಪಡೆದಿರತಕ್ಕಂತ ಪ್ರಶಸ್ತಿ ವಿಜೇತರಿಗೆ ಕೊಡತಕ್ಕಂತ 63 ಲಕ್ಷ ರೂಪಾಯಿ ಹಣವನ್ನ ಒದಗಿಸಿ ಕೊಟ್ಟ ನಂತರ ನಮ್ಮ ರೈತ ಬಾಂಧವರ ಸಾಲವನ್ನ ಮನ್ನಾ ಮಾಡ್ತಕ್ಕಂತದ್ದರ ಬಗ್ಗೆ ಚಿಂತನೆ ಮಾಡ್ತಿನಿ. ನನ್ನ ಜೀವಿತಾವಧಿಯಲ್ಲೇ ನಿಮ್ಮ ಸಾಲ ಏನಿದೆ ಅದು ಯಾವುದೇ ಬ್ಯಾಂಕಿನಲ್ಲಿರಲಿ ಅಥವಾ ಬಡ್ಡಿ ದಂಧೆಯವರದ್ದೇ ಇರಲಿ, ಅದನ್ನ ಮನ್ನಾ ಮಾಡ್ತಕ್ಕಂತದಕ್ಕೆ ಬೇಗ ತೀರ್ಮಾನಕ್ಕೆ ಬರ್ತಕ್ಕಂತ ಕ್ಯೆಲುಸ ಮಾಡ್ತಿನಿ. ಈ ವಿಷಯದಲ್ಲಿ ನೀವು ಯಾವುದೇ ಚಾಡಿ ಮಾತನ್ನ ಕೇಳದೆ ನನ್ನನ್ನ ನಂಬಿದರೆ ನನ್ನ ಏಕೈಕ ಪುತ್ರ ನಿಖಿಲ್‍ಗೌಡನ ಮೇಲೆ ಆಣೆ ಮಾಡಿ ಹೇಳ್ತೀನಿ, ನಿಮ್ಮ ರುಣ ಇಟ್ಟಗಳಲ್ಲ’ ಎಂದರಂತಲ್ಲಾ ಥೂತ್ತೇರಿ.

******

 

ಹಳೇ ಕಾಯಿಲೆಯ ಹೊಸ ಮನುಷ್ಯ ದಾಬಸ್‍ಪೇಟೆಯ ಡಿಶ್‍ನಾಗ್ ಮುಂದಿನ ಚುನಾವಣೆಯಲ್ಲಿ ದೇಶದ ಜನ ಮುಂದೆ ಮತ್ತೆ ಮೋದಿಯವರೇ ಇರಲಿ ಎಂದು ತೀರ್ಮಾನಿಸಿದರೆ ಆಶ್ಚರ್ಯವಿಲ್ಲ ಎಂಬ ಬೆದರಿಕೆ ಹುಟ್ಟಿಸಿದ್ದಾರಲ್ಲಾ. ಈ ರಾಜಕೀಯ ಪಂಡಿತರ ಪ್ರಕಾರ ಉತ್ತರ ಭಾರತದಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿಯಲ್ಲಿ ಜನ ಗುರುತಿಸಿರುವ ಸಮಸ್ಯೆ ಇದೆ ಎಂದು ವ್ಯಾಖ್ಯಾನಿಸಿದ್ದಾರೆ. ಬಿಜೆಪಿಯಲ್ಲಿ ಇರಬಹುದಾದ ಆ ನಿಗೂಢ ಸಮಸ್ಯೆ ಯಾವುದೆಂಬುದನ್ನ ಪ್ರಖರ ಸಮಾಜವಾದಿಗಳು ವಿವರಿಸುವ ಗೋಜಿಗೆ ಹೋಗಿಲ್ಲ. ಕಾಂಗೈನ ಅಣುಅಣುವನ್ನ ವಿಶ್ಲೇಷಿಸಿ ಅವರ ಟೀಕೆಯಲ್ಲೇ ಖುಷಿಕಾಣುವ ಈ ರಾಜಕೀಯ ಪಂಡಿತರು ಬಿ.ಜೆ.ಪಿ ಸಮಸ್ಯೆಯನ್ನ ಅನಾವರಣ ಮಾಡಬೇಕಿತ್ತು. ಅದು ಬಿಟ್ಟು ಪಬ್ಲಿಕ್ ಟಿವಿಯ ಕಡ್ಡಿ ರಂಗನಂತೆ ಕಾಂಗೈ ಸೋತ ಕ್ಷೇತ್ರಗಳ ಬಗ್ಗೆ ಟೀಕೆಗೆ ತಮ್ಮ ವಿದ್ವತ್ತನ್ನ ಬಳಸಬಾರದಿತ್ತು. ಉತ್ತರ ಭಾರತದ ರಾಜ್ಯಗಳು ಬಿಜೆಪಿಯ ದೈತ್ಯ ಶಕ್ತಿ ಎದುರು ಬರಿಗೈಲಿ ಚುನಾವಣೆ ಎದುರಿಸಿ ಕಾಂಗೈ ಗೆಲ್ಲಿಸಿವೆ. ಇದು ಗುಪ್ತ ಬಿಜೆಪಿ ಅಭಿಮಾನಿ ವಿದ್ವಾಂಸರಿಗೆ ನಿದ್ದೆಗೆಡಿಸುವ ಸಂಗತಿಯಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳದ ಸೋಲಿನ ಬಳಿಕ ‘ಇಂಡಿಯಾದ ಆಸರೆ’ ಬಯಸಿದ ಮಮತಾ

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಲಿನ ನಂತರ ಮಮತಾ ಬ್ಯಾನರ್ಜಿ ಅವರು ಇದ್ದಕ್ಕಿದ್ದಂತೆ ‘ಇಂಡಿಯಾ’ (INDIA) ಒಕ್ಕೂಟ ಮತ್ತು ರಾಷ್ಟ್ರೀಯ ಮಟ್ಟದ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಇಷ್ಟೊಂದು ಪ್ರಾಮುಖ್ಯತೆ ನೀಡುತ್ತಿರುವುದು ಏಕೆ? ದೀರ್ಘಕಾಲದವರೆಗೆ...

ಪಶ್ಚಿಮ ಬಂಗಾಳ| ಮತದಾರರ ಪಟ್ಟಿಯಿಂದ ಡಿಲೀಟ್‌ ಆದವರಿಗೆ ಪಡಿತರ ಪ್ರಯೋಜನಗಳಿಲ್ಲ

ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಯಿಂದಾಗಿ ಪಶ್ಚಿಮ ಬಂಗಾಳದ ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿದವರಿಗೆ ಈಗ ಎರಡು ಹೊಡೆತ ಎದುರಾಗಿದೆ. ರಾಜ್ಯ ಸರ್ಕಾರವು ಈಗ ಅವರ ಪಡಿತರ ಚೀಟಿಗಳನ್ನು ಸಹ ನಿಷ್ಕ್ರಿಯಗೊಳಿಸಲು...

ಇಂಡಿಯಾ ಮೈತ್ರಿಕೂಟದ ಸಭೆ: ಎಸ್‌ಐಆರ್, ಬೆಲೆ ಏರಿಕೆ, ನಿರುದ್ಯೋಗದ ಕುರಿತು ಖರ್ಗೆ ಕಳವಳ; ಒಗ್ಗಟ್ಟಿನ ಹೋರಾಟಕ್ಕೆ ಕರೆ

ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ವಿದೇಶಾಂಗ ನೀತಿ ರಂಗಗಳಲ್ಲಿ ಮೋದಿ ಸರ್ಕಾರದ ವೈಫಲ್ಯಗಳನ್ನು ಎದುರಿಸಲು ತನ್ನ ಒಗ್ಗಟ್ಟನ್ನು ಬಲಪಡಿಸಿಕೊಳ್ಳುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ (ಜೂ.8) ಇಂಡಿಯಾ ಮೈತ್ರಿಕೂಟಕ್ಕೆ ಕರೆ...

ಟೆಹ್ರಾನ್ ಮೇಲಿನ ದಾಳಿಗೆ ಪ್ರತೀಕಾರ: ಇಸ್ರೇಲ್ ಮೇಲೆ ಕ್ಷಿಪಣಿ ಹಾರಿಸಿದ ಇರಾನ್

ಟೆಹ್ರಾನ್, ತಬ್ರಿಜ್ ಮತ್ತು ಇಸ್ಫಹಾನ್‌ ಮೇಲಿನ ದಾಲಿಗಳಿಗೆ ಪ್ರತೀಕಾರವಾಗಿ, ಇರಾನ್ ಸೇನೆಯು ಇಸ್ರೇಲ್‌ ಮೇಲೆ ಎರಡನೇ ತರಂಗದ ಕ್ಷಿಪಣಿಗಳನ್ನು ಹಾರಿಸಿದೆ. ದೇಶಾದ್ಯಂತ ಸೈರನ್‌ಗಳು ಮೊಳಗುತ್ತಿವೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ ಎಂದು ಅಂತರಾಷ್ಟ್ರೀಯ...

ಭಾರತದಲ್ಲಿ ಬೆಂಕಿ ದುರಂತ ‘ದಿನವೊಂದಕ್ಕೆ ಬಲಿಯಾಗುತ್ತಿವೆ 16 ಜೀವಗಳು’ NCRB ವರದಿ

ಇತ್ತೀಚೆಗೆ ದೆಹಲಿಯ ಮಾಳವೀಯ ನಗರದ ಹೋಟೆಲ್‌ ಒಂದರಲ್ಲಿ ನಡೆದ ಭೀಕರ ಬೆಂಕಿ ದುರಂತ (ಇದರಲ್ಲಿ 22 ಜನರು ಸಜೀವ ದಹನವಾಗಿದ್ದರು) ಇಡೀ ದೇಶವನ್ನೇ ನಡುಗಿಸಿದೆ. ಈ ದುರಂತದ ಬೆನ್ನಲ್ಲೇ ಕರ್ನಾಟಕದಲ್ಲೂ ವಾಣಿಜ್ಯ ಮತ್ತು...

ಈದ್ ಹಬ್ಬದ ವೇಳೆ ಮುಸ್ಲೀಮರನ್ನು ಗುರಿಯಾಗಿಸಿ 46 ದ್ವೇಷ ಅಪರಾಧಗಳು, ಮೂವರ ಹತ್ಯೆ: APCR ಆತಂಕಕಾರಿ ವರದಿ

ಇತ್ತೀಚಿನ ಬಕ್ರೀದ್ (ಈದ್ ಉಲ್-ಅಧಾ) ಹಬ್ಬದ ಆಚರಣೆಯ ಸಂದರ್ಭದಲ್ಲಿ ದೇಶದ ವಿವಿಧೆಡೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆದ ಕೋಮು ಕಿರುಕುಳ, ದ್ವೇಷ ಭಾಷಣ ಹಾಗೂ ಹಿಂಸಾಚಾರದ ಘಟನೆಗಳ ಕುರಿತು 'ನಾಗರಿಕ ಹಕ್ಕುಗಳ ರಕ್ಷಣಾ ಸಂಘ'...

ಗ್ರೇಟ್ ನಿಕೋಬಾರ್ : ಕಾರ್ಪೊರೇಟ್ ಹಿತಾಸಕ್ತಿಗೆ ಬಲಿಯಾಗುತ್ತಿರುವ ಪರಿಸರ, ಆದಿವಾಸಿಗಳ ಅಸ್ತಿತ್ವ

ಬಂಗಾಳಕೊಲ್ಲಿಯಲ್ಲಿರುವ ಭಾರತದ ದಕ್ಷಿಣ ತುದಿಯ ದ್ವೀಪದ ಸಮಗ್ರ ಅಭಿವೃದ್ಧಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ಬರೋಬ್ಬರಿ 72 ಸಾವಿರದಿಂದ 81 ಸಾವಿರ ಕೋಟಿ ರೂಪಾಯಿ ವೆಚ್ಚದ ’ಗ್ರೇಟ್ ನಿಕೋಬಾರ್ ದ್ವೀಪ ಅಭಿವೃದ್ಧಿ ಯೋಜನೆ’ಯನ್ನು ರೂಪಿಸಿದೆ.ಈ...

ಅಸ್ಸಾಂನ ನಾಲ್ವರು ಮುಸ್ಲಿಂ ಮಹಿಳೆಯರ ಗಡೀಪಾರು ಪ್ರಕ್ರಿಯೆಗೆ ಸುಪ್ರೀಂ ತಡೆ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌

ಅಸ್ಸಾಂನಲ್ಲಿ 'ವಿದೇಶಿಯರು' ಎಂದು ಘೋಷಿತರಾಗಿ ಗಡೀಪಾರು ಭೀತಿ ಎದುರಿಸುತ್ತಿದ್ದ ನಾಲ್ವರು ಮುಸ್ಲಿಂ ಮಹಿಳೆಯರ ವಿಚಾರದಲ್ಲಿ ಭಾರತದ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಪ್ರವೇಶ ಮಾಡಿದೆ. ಈ ಮಹಿಳೆಯರನ್ನು ದೇಶದಿಂದ ಹೊರಹಾಕುವ (ಗಡೀಪಾರು ಮಾಡುವ) ಪ್ರಕ್ರಿಯೆಗೆ...

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...