Homeಅಂಕಣಗಳುಹವ್ಯಕ ತರುಣರ ಸಮಸ್ಯೆ ಹಾಗೇ ಉಳಿಯಿತಲ್ಲಾ!

ಹವ್ಯಕ ತರುಣರ ಸಮಸ್ಯೆ ಹಾಗೇ ಉಳಿಯಿತಲ್ಲಾ!

- Advertisement -
- Advertisement -

ಈ ವರ್ಷದ ಅಂತ್ಯಭಾಗದಲ್ಲಿ ನಡೆದ ಮಹತ್ವದ ಘಟನೆಗಳಲ್ಲಿ ಮೊದಲನೆಯದಾವುದೆಂದರೆ, ಅದು ಅಖಿಲ ಹವ್ಯಕ ಮಹಾಸಭಾದ ಅಮೃತ ಮಹೋತ್ಸವವಂತಲ್ಲಾ. ಹವ್ಯಕ ಸಮಾಜ ನಮ್ಮ ನಡುವೆ ತುಂಬಾ ಪ್ರಭಾವಿಯಾದ ಸಮಾಜ ಎಂಬುದರಲ್ಲಿ ಎರಡನೇ ಮಾತಿಲ್ಲ, ಮೂರನೇ ಸದ್ದಿಲ್ಲ! ಈ ಜನಾಂಗದ ಜಗದ್ಗುರು ಮಠದ ಭಕ್ತೆಗೆ ನಾನೇ ರಾಮ, ನೀನೇ ನನಗಾಗಿ ಜನ್ಮವೆತ್ತಿ ಹುಡುಕುತ್ತಾ ಬಂದ ಸೀತೆ ಎಂದು ನಂಬಿಸಿದ ಪುರುಷೋತ್ತಮ. ಸದರಿ ರಾಘವನ ರಾಸಲೀಲೆ ಅತಿಯಾದ ಕಾರಣಕ್ಕೆ ನೊಂದ ಸೀತೆ ಕೋರ್ಟ್ ಮೆಟ್ಟಿಲೇರಿದಳು. ಆದರೇನು ರಾಘವೇಶ್ವರನ ಪ್ರಭಾವಕ್ಕೆ ಅಂಜಿದ ಜಡ್ಜ್‍ಗಳು ಈ ಕೇಸನ್ನು ನಾವು ಮುಟ್ಟುವುದಿಲ್ಲ ಎಂದು ಹಿಂದೆ ಸರಿದರು. ಧೈರ್ಯ ಮಾಡಿದ ಜಡ್ಜ್ ಒಬ್ಬರು `ಈ ರಾಮನ ಅಪರಾವತಾರಿ, ಪೊಲೀಸರ ಸ್ಥಳ ತನಿಖಾ ವರದಿ ಪ್ರಕಾರ 159 ಬಾರಿ ರತಿಸುಖ ರಾಸಲೀಲೆ ನಡೆಸಿರುವುದರಿಂದ ಒಪ್ಪಿತ ವಿಲಾಸ ಕ್ರೀಡೆಯಾಗುತ್ತದೆ. ಆದ್ದರಿಂದ ಇದು ಅತ್ಯಾಚಾರಕ್ಕೆ ದೂರ’ ಎನ್ನಲಾಗಿ ಇಡೀ ಹವ್ಯಕರಲ್ಲಿನ ರಾಘು ಅಭಿಮಾನಿಗಳು ಅಂದೇ ಅಮೃತ ಮಹೋತ್ಸವ ಮಾಡಿ ರಾಘು ಮೆರೆಸುವ ತೀರ್ಮಾನ ಕೈಗೊಂಡರಂತಲ್ಲಾ ಥೂತ್ತೇರಿ.

******

 

ರಾಘವೇಶ್ವರ ನೆಲೆಸಿರುವ ಪ್ರದೇಶದ ಶಾಸಕ ಹರತಾಳ ಹಾಲಪ್ಪ ರಾಘವನ ಪರಮ ಭಕ್ತ. ಆದ್ದರಿಂದ ಸಾಗರದ ಹವ್ಯಕರು ಆತನನ್ನು ಗೆಲ್ಲಿಸಿದರಂತಲ್ಲಾ. ಯಾಕೆಂದರೆ ಆ ಹಾಳು ತಿಮ್ಮಪ್ಪ ದಿನ ಬೆಳಗಾಯ್ತೆಂದರೆ ಜನಗಳ ಕೆಲಸ ಕುರಿತು ಯೋಚಿಸುತ್ತಾನೆ. ಕಾರ್ಯಕರ್ತರ ಖಾಸಗಿ ವಿಷಯವನೆಂದೂ ಕೇಳಿಲ್ಲ. ಅದೇ ಹಾಲಪ್ಪ ಜನರ ಖಾಸಗಿ ವಿಷಯ ಕೇಳುತ್ತಾನೆ. ಸಾಧ್ಯವಾದರೆ ಮನೆಗೂ ಬಂದುಬಿಡುತ್ತಾನೆ. ನಮ್ಮ ಮಡದಿಯ ಕೈಯಿಂದ ಕಾಫಿ ಮಾಡಿಸಿಕೊಂಡು ಕುಡಿಯುತ್ತಾನೆ. ನಮ್ಮ ಕೈಯಿಂದಲೇ ಬೀಡಿ ಸಿಗರೇಟು ಮಾತ್ರೆ ತರಿಸುತ್ತಾನೆ. ಇಂತಹ ಜನಾನುರಾಗಿ ಹಾಲಪ್ಪನೆಲ್ಲಿ ಆ ತಿಮ್ಮಪ್ಪನೆಲ್ಲಿ ಎಂದು ಚಿಂತಿಸಿ ಹಾಲಪ್ಪನನ್ನೇ ಆರಿಸಿದರಂತಲ್ಲಾ. ಅಂಥಾ ರಾಘವನಿಗೆ ಇಂತ ಹಾಲಪ್ಪನೇ ಸರಿ ಎಂದು ಹವ್ಯಕರು ಚಿಂತಿಸಿದ್ದಾಗ ರಾಘವನ ರಾಡಿ ತೆಗೆಯದೆ ಮೌನವಾಗಿದ್ದ ತಿಮ್ಮಪ್ಪನಿಗೆ ಹವ್ಯಕರು ಸರಿಯಾದ ಶಾಸ್ತಿ ಮಾಡಿದರಲ್ಲಾ. ಸದರಿ ಹಾಲಪ್ಪ ಯಾರಾದರೂ ಹವ್ಯಕರನ್ನ ಬೈದರೆ ನಾನು ಸುಮ್ಮನಿರುವುದಿಲ್ಲ, ರಾತ್ರಿ ನಿಮ್ಮ ಮನೆಗೇ ಬಂದು ಬಿಡುತ್ತೇನೆಂದು ಹೆದರಿಸಿದ್ದಾನಂತಲ್ಲಾ ಥೂತ್ತೇರಿ.

******

 

ಹವ್ಯಕರು ಹೆಚ್ಚು ನೆಲೆಸಿರುವ ಸಾಗರ ಪ್ರಾಂತ್ಯದಲ್ಲಿನ ಪ್ರತಿ ಹಳ್ಳಿಗಳಿಲ್ಲಿ 20ರಿಂದ 30 ಹುಡುಗರು ಅವಿವಾಹಿತರಾಗಿಯೇ ಇದ್ದಾರಂತಲ್ಲಾ. ಈ ಸಮಸ್ಯೆ ರಾಮಚಂದ್ರಾಪುರ ಮಠದ ಗುರುಗಳನ್ನ ತೀವ್ರವಾಗಿ ಕಾಡಬೇಕಿತ್ತು. ಆದರೆ ತರುಣರ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಿಕೊಂಡ ಗುರುಗಳ ಅನೈತಿಕ ಬದುಕನ್ನೇ ಮನ್ನಿಸಿದ ಜನ, ಅವರಿಗೆ ಪೂರ್ಣ ಬೆಂಬಲ ಕೊಡುವ ನಿರ್ಣಯವನ್ನೇ ಕೈಗೊಂಡರಂತಲ್ಲಾ. ಕಾರಣ ಈ ರಾಮಚಂದ್ರಾಪುರ ಮಠ ಜಗತ್ತಿನ ಏಕೈಕ ಮಠ ಅಂತಹ ಮಠದಲ್ಲಿ ಈ ತರಹ ಇರುವ ಏಕೈಕ ಜಗದ್ಗುರು ರಾಘವೇಶ್ವರ ಅವರ ಅಜನ್ಮ ಬ್ರಹ್ಮಚಾರಿ ಬದುಕನ್ನ ಕೊಂಡಾಡುತ್ತ ತರುಣರು, ಕನ್ಯೆ ಇಲ್ಲದ ತಮ್ಮ ಬದುಕನ್ನು ಪೂರ್ಣಗೊಳಿಸಬೇಕು ಎಂಬ ಗುಪ್ತ ಚರ್ಚೆ ಬೆಂಗಳೂರಲ್ಲಿ ಆಯ್ತಂತಲ್ಲಾ. ಅದೇನಾದರಾಗಲಿ ಅಖಿಲ ಭಾರತ ಹವ್ಯಕ ಮಹಾಸಭೆಯಲ್ಲಿ ಹವ್ಯಕ ತರುಣರ ಲೈಂಗಿಕ ಸಮಸ್ಯೆ ಚರ್ಚೆಗೇ ಬರದಿರುವುದಕ್ಕೆ ಕಾರಣ `ಎಲ್ಲರೂ ಅವರ ಜಗದ್ಗುರು ದಾರಿಯಲ್ಲಿ ನಡೆಯುತ್ತಾರೆ, ಇಲ್ಲವಾದಲ್ಲಿ ಅವರ ಬದುಕು ಅವರ ಕೈಯಲ್ಲಿ’ ಎಂಬ ತಾತ್ಸಾರದ ಮನೋಭಾವವೇ ಕಾರಣವಂತಲ್ಲಾ ಥೂತ್ತೇರಿ.

 

******

 

ಸಮ್ಮಿಶ್ರ ಸರಕಾರದ ವರಸೆ ನೋಡಿದ ರೈತರು ಈ ಸರಕಾರದಿಂದ ನಮ್ಮ ಸಾಲಮನ್ನಾ ಸಾಧ್ಯವೇ ಎಂದು ಚಿಂತಿಸುತ್ತಿರುವಾಗ, ಭಾವುಕರಾದ ಕುಮಾರಣ್ಣ `ರೈತ ಬಾಂಧವರೇ ಮತ್ತು ಅಣ್ಣತಮ್ಮಂದಿರೆ ಮತ್ತು ಅಕ್ಕಭಾವಂದಿರೆ ಹಾಗೂ ನಮ್ಮ ತಂದೆಯ ಅಭಿಮಾನಿಗಳೇ, ಏನು ನೀವು ಒಂದು ಅನುಮಾನ ಪಡ್ತಾ ಇರತಕ್ಕಂತ ವಿಷಯ ಏನಿದೆ ಅದು ನನಿಗೆ ಅರ್ಥ ಆಗ್ತಕ್ಕಂತದ್ದು. ಆ ದಿಸೆಲಿ ಯಾರು ಅನುಮಾನ ಪಡಬೇಡಿ. ಈಗಾಗಲೇ ರಾಜ್ಯೋತ್ಸವ ಪಡೆದಿರತಕ್ಕಂತ ಪ್ರಶಸ್ತಿ ವಿಜೇತರಿಗೆ ಕೊಡತಕ್ಕಂತ 63 ಲಕ್ಷ ರೂಪಾಯಿ ಹಣವನ್ನ ಒದಗಿಸಿ ಕೊಟ್ಟ ನಂತರ ನಮ್ಮ ರೈತ ಬಾಂಧವರ ಸಾಲವನ್ನ ಮನ್ನಾ ಮಾಡ್ತಕ್ಕಂತದ್ದರ ಬಗ್ಗೆ ಚಿಂತನೆ ಮಾಡ್ತಿನಿ. ನನ್ನ ಜೀವಿತಾವಧಿಯಲ್ಲೇ ನಿಮ್ಮ ಸಾಲ ಏನಿದೆ ಅದು ಯಾವುದೇ ಬ್ಯಾಂಕಿನಲ್ಲಿರಲಿ ಅಥವಾ ಬಡ್ಡಿ ದಂಧೆಯವರದ್ದೇ ಇರಲಿ, ಅದನ್ನ ಮನ್ನಾ ಮಾಡ್ತಕ್ಕಂತದಕ್ಕೆ ಬೇಗ ತೀರ್ಮಾನಕ್ಕೆ ಬರ್ತಕ್ಕಂತ ಕ್ಯೆಲುಸ ಮಾಡ್ತಿನಿ. ಈ ವಿಷಯದಲ್ಲಿ ನೀವು ಯಾವುದೇ ಚಾಡಿ ಮಾತನ್ನ ಕೇಳದೆ ನನ್ನನ್ನ ನಂಬಿದರೆ ನನ್ನ ಏಕೈಕ ಪುತ್ರ ನಿಖಿಲ್‍ಗೌಡನ ಮೇಲೆ ಆಣೆ ಮಾಡಿ ಹೇಳ್ತೀನಿ, ನಿಮ್ಮ ರುಣ ಇಟ್ಟಗಳಲ್ಲ’ ಎಂದರಂತಲ್ಲಾ ಥೂತ್ತೇರಿ.

******

 

ಹಳೇ ಕಾಯಿಲೆಯ ಹೊಸ ಮನುಷ್ಯ ದಾಬಸ್‍ಪೇಟೆಯ ಡಿಶ್‍ನಾಗ್ ಮುಂದಿನ ಚುನಾವಣೆಯಲ್ಲಿ ದೇಶದ ಜನ ಮುಂದೆ ಮತ್ತೆ ಮೋದಿಯವರೇ ಇರಲಿ ಎಂದು ತೀರ್ಮಾನಿಸಿದರೆ ಆಶ್ಚರ್ಯವಿಲ್ಲ ಎಂಬ ಬೆದರಿಕೆ ಹುಟ್ಟಿಸಿದ್ದಾರಲ್ಲಾ. ಈ ರಾಜಕೀಯ ಪಂಡಿತರ ಪ್ರಕಾರ ಉತ್ತರ ಭಾರತದಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿಯಲ್ಲಿ ಜನ ಗುರುತಿಸಿರುವ ಸಮಸ್ಯೆ ಇದೆ ಎಂದು ವ್ಯಾಖ್ಯಾನಿಸಿದ್ದಾರೆ. ಬಿಜೆಪಿಯಲ್ಲಿ ಇರಬಹುದಾದ ಆ ನಿಗೂಢ ಸಮಸ್ಯೆ ಯಾವುದೆಂಬುದನ್ನ ಪ್ರಖರ ಸಮಾಜವಾದಿಗಳು ವಿವರಿಸುವ ಗೋಜಿಗೆ ಹೋಗಿಲ್ಲ. ಕಾಂಗೈನ ಅಣುಅಣುವನ್ನ ವಿಶ್ಲೇಷಿಸಿ ಅವರ ಟೀಕೆಯಲ್ಲೇ ಖುಷಿಕಾಣುವ ಈ ರಾಜಕೀಯ ಪಂಡಿತರು ಬಿ.ಜೆ.ಪಿ ಸಮಸ್ಯೆಯನ್ನ ಅನಾವರಣ ಮಾಡಬೇಕಿತ್ತು. ಅದು ಬಿಟ್ಟು ಪಬ್ಲಿಕ್ ಟಿವಿಯ ಕಡ್ಡಿ ರಂಗನಂತೆ ಕಾಂಗೈ ಸೋತ ಕ್ಷೇತ್ರಗಳ ಬಗ್ಗೆ ಟೀಕೆಗೆ ತಮ್ಮ ವಿದ್ವತ್ತನ್ನ ಬಳಸಬಾರದಿತ್ತು. ಉತ್ತರ ಭಾರತದ ರಾಜ್ಯಗಳು ಬಿಜೆಪಿಯ ದೈತ್ಯ ಶಕ್ತಿ ಎದುರು ಬರಿಗೈಲಿ ಚುನಾವಣೆ ಎದುರಿಸಿ ಕಾಂಗೈ ಗೆಲ್ಲಿಸಿವೆ. ಇದು ಗುಪ್ತ ಬಿಜೆಪಿ ಅಭಿಮಾನಿ ವಿದ್ವಾಂಸರಿಗೆ ನಿದ್ದೆಗೆಡಿಸುವ ಸಂಗತಿಯಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾವೇರಿ: ರೈತರ ಹಿತ ಕಾಯುವುದು ನನ್ನ ಮೊದಲ ಕರ್ತವ್ಯ ಡಿ.ಕೆ.ಶಿವಕುಮಾರ್

ರಾಜ್ಯದ ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆಯಿರುವಾಗ ನಮ್ಮ ರೈತರನ್ನು ಬದುಕಿಸುವ ಸವಾಲಿನ ಜೊತೆಗೆ ಕಾನೂನನ್ನೂ ಕಾಪಾಡಬೇಕಾದ ಹೊಣೆಗಾರಿಕೆ ಇದೆ. ಕಾವೇರಿ ವಿಚಾರದಲ್ಲಿ ನಮ್ಮ ರೈತರ ಹಿತ ಕಾಯುವುದು ನನ್ನ ಮೊದಲ ಕರ್ತವ್ಯ ಎಂದು...

‘ಅಸ್ತಿತ್ವದ ಸಮಸ್ಯೆಯಲ್ಲ, ಹೊಣೆಗಾರಿಕೆಯೇ ಮುಖ್ಯ’: ಆರ್‌ಎಸ್‌ಎಸ್ ನೋಂದಣಿ ಕುರಿತು ಬಿ.ಎಲ್. ಸಂತೋಷ್ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನೋಂದಣಿ ಹಾಗೂ ಅದರ ಕಾನೂನಾತ್ಮಕ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಹಾಗೂ ಕರ್ನಾಟಕದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್...

ನಾನು ‘ದಿಮಾಗಿ ನಕ್ಸಲ್’ ಆಗಿದ್ದರೆ ಅದಕ್ಕೆ ಹೆಮ್ಮೆ ಇದೆ: ಮೋದಿ-ರಿಜಿಜು ವಿರುದ್ಧ ಚಿದಂಬರಂ ತಿರುಗೇಟು

ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಳಸಿದ್ದ ‘ದಿಮಾಗಿ ನಕ್ಸಲರು’ (ವೈಚಾರಿಕ ನಕ್ಸಲರು) ಎಂಬ ಪದ ಬಳಕೆ ದೇಶದ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಪ್ರಧಾನಿಯವರ ಈ...

CAA ವಿರೋಧಿ ಪ್ರತಿಭಟನೆಗೆ ಕಾರಣವಾಗಿದ್ದ ಪ್ರಶ್ನೆಗಳು ಮತ್ತೆ ಜನಗಣತಿಯಲ್ಲಿ-ವರದಿ

ಶೀಘ್ರದಲ್ಲೇ ಪ್ರಾರಂಭವಾಗಲಿರುವ ಜನಗಣತಿಯ ಜನಸಂಖ್ಯಾ ಎಣಿಕೆ ಹಂತವು, 2011ರ ಜನಗಣತಿಗೆ ಹೋಲಿಸಿದರೆ 14 ಹೊಸ ಅಥವಾ ಮಾರ್ಪಡಿಸಿದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈ ಪೈಕಿ ಹಲವು ಪ್ರಶ್ನೆಗಳು 2020ರಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ...

ಹಿಂಗೋಲಿ ಶಾಲೆಯಲ್ಲಿ ಪ್ರಾಂಶುಪಾಲರ ಮದ್ಯಪಾನ, ಶಿಕ್ಷಕರ ಅಭಾವ: ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ಅಭಿಜೀತ್ ದೀಪ್ಕೆ

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಲಿಂಬಾಲಾ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಶೈಕ್ಷಣಿಕ ವಾತಾವರಣ ಸಂಪೂರ್ಣವಾಗಿ ಕುಸಿದಿದ್ದು, ಶಾಲಾ ಪ್ರಾಂಶುಪಾಲರ ಹೊಣೆಗೇಡಿತನ ಮತ್ತು ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರ ಆಕ್ರೋಶ ಮುಗಿಲುಮುಟ್ಟಿದೆ. ಶಾಲೆಯ ಪ್ರಾಂಶುಪಾಲರು...

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ? CAG ವರದಿ

ದೇಶಾದ್ಯಂತ ನೆರೆ, ಬರ, ಭೂಕುಸಿತದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ ಭಾರಿ ಪ್ರಮಾಣದ ಕಡಿತವಾಗುತ್ತಿರುವುದು ಈಗ ನಿರೂಪಿತವಾಗಿದೆ. ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ...

EFLU ವಿದ್ಯಾರ್ಥಿ ಸಂಘದ ಮುಖಂಡರು, NSUI ಸದಸ್ಯರ ಮೇಲೆ ರಾಡ್ ಮತ್ತು ಬಿಯರ್ ಬಾಟಲಿಗಳಿಂದ ಹಲ್ಲೆ; ABVP ಸದಸ್ಯರ ವಿರುದ್ಧ ಪ್ರಕರಣ ದಾಖಲು

ಹೈದರಾಬಾದ್‌ನ ಪ್ರತಿಷ್ಠಿತ ಇಂಗ್ಲಿಷ್ ಮತ್ತು ವಿದೇಶಿ ಭಾಷಾ ವಿಶ್ವವಿದ್ಯಾಲಯ (ಇಎಫ್‌ಎಲ್‌ಯು - EFLU) ಕ್ಯಾಂಪಸ್‌ನಲ್ಲಿ ಭೀಕರ ಹಿಂಸಾಚಾರ ಸಂಭವಿಸಿದ್ದು, ವಿದ್ಯಾರ್ಥಿ ಸಂಘದ ಮುಖಂಡರು ಹಾಗೂ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (NSUI) ಸದಸ್ಯರ ಮೇಲೆ...

NALSAR ವಿವಾದ : ಕಾನೂನು ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಿದ ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ

ನಲ್ಸಾರ್ (NALSAR) ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿರುದ್ಧ ಹೊರಡಿಸಿದ್ದ ನಿರ್ದೇಶನಗಳ ಕುರಿತು ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಥ) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಕ್ಷಮೆಯಾಚಿಸಿದ್ದಾರೆ. ಹೈದರಾಬಾದ್‌ನ ನಲ್ಸಾರ್...

ವಿಮಲ್ ‘ಏಲೈಚಿ’ ಜಾಹೀರಾತು ವಿವಾದ: ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್‌ಗೆ ಮಹಾರಾಷ್ಟ್ರ ಎಫ್‌ಡಿಎ ಶೋಕಾಸ್ ನೋಟಿಸ್

ಬಾಲಿವುಡ್‌ನ ಖ್ಯಾತ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರುಗಳು ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. 'ವಿಮಲ್ ಏಲೈಚಿ' ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ...

ಹನೂರು ಶೂಟೌಟ್ ಪ್ರಕರಣ: ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲು

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಶಾಗ್ಯ ಗ್ರಾಮ ಪಂಚಾಯತ್ ವಾಪ್ತಿಯ ಅರಣ್ಯ ಪ್ರದೇಶದಲ್ಲಿ ಮೂವರು ಗುಂಡೇಟಿಗೆ ಬಲಿಯಾದ ಪ್ರಕರಣ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಎಫ್​​​​ಐಆರ್ ದಾಖಲಾಗಿದೆ. ಅರಣ್ಯ ಸಿಬ್ಬಂದಿಯ ಗುಂಡೇಟಿಗೆ ಹನೂರು...