Homeಅಂಕಣಗಳುಹವ್ಯಕ ತರುಣರ ಸಮಸ್ಯೆ ಹಾಗೇ ಉಳಿಯಿತಲ್ಲಾ!

ಹವ್ಯಕ ತರುಣರ ಸಮಸ್ಯೆ ಹಾಗೇ ಉಳಿಯಿತಲ್ಲಾ!

- Advertisement -
- Advertisement -

ಈ ವರ್ಷದ ಅಂತ್ಯಭಾಗದಲ್ಲಿ ನಡೆದ ಮಹತ್ವದ ಘಟನೆಗಳಲ್ಲಿ ಮೊದಲನೆಯದಾವುದೆಂದರೆ, ಅದು ಅಖಿಲ ಹವ್ಯಕ ಮಹಾಸಭಾದ ಅಮೃತ ಮಹೋತ್ಸವವಂತಲ್ಲಾ. ಹವ್ಯಕ ಸಮಾಜ ನಮ್ಮ ನಡುವೆ ತುಂಬಾ ಪ್ರಭಾವಿಯಾದ ಸಮಾಜ ಎಂಬುದರಲ್ಲಿ ಎರಡನೇ ಮಾತಿಲ್ಲ, ಮೂರನೇ ಸದ್ದಿಲ್ಲ! ಈ ಜನಾಂಗದ ಜಗದ್ಗುರು ಮಠದ ಭಕ್ತೆಗೆ ನಾನೇ ರಾಮ, ನೀನೇ ನನಗಾಗಿ ಜನ್ಮವೆತ್ತಿ ಹುಡುಕುತ್ತಾ ಬಂದ ಸೀತೆ ಎಂದು ನಂಬಿಸಿದ ಪುರುಷೋತ್ತಮ. ಸದರಿ ರಾಘವನ ರಾಸಲೀಲೆ ಅತಿಯಾದ ಕಾರಣಕ್ಕೆ ನೊಂದ ಸೀತೆ ಕೋರ್ಟ್ ಮೆಟ್ಟಿಲೇರಿದಳು. ಆದರೇನು ರಾಘವೇಶ್ವರನ ಪ್ರಭಾವಕ್ಕೆ ಅಂಜಿದ ಜಡ್ಜ್‍ಗಳು ಈ ಕೇಸನ್ನು ನಾವು ಮುಟ್ಟುವುದಿಲ್ಲ ಎಂದು ಹಿಂದೆ ಸರಿದರು. ಧೈರ್ಯ ಮಾಡಿದ ಜಡ್ಜ್ ಒಬ್ಬರು `ಈ ರಾಮನ ಅಪರಾವತಾರಿ, ಪೊಲೀಸರ ಸ್ಥಳ ತನಿಖಾ ವರದಿ ಪ್ರಕಾರ 159 ಬಾರಿ ರತಿಸುಖ ರಾಸಲೀಲೆ ನಡೆಸಿರುವುದರಿಂದ ಒಪ್ಪಿತ ವಿಲಾಸ ಕ್ರೀಡೆಯಾಗುತ್ತದೆ. ಆದ್ದರಿಂದ ಇದು ಅತ್ಯಾಚಾರಕ್ಕೆ ದೂರ’ ಎನ್ನಲಾಗಿ ಇಡೀ ಹವ್ಯಕರಲ್ಲಿನ ರಾಘು ಅಭಿಮಾನಿಗಳು ಅಂದೇ ಅಮೃತ ಮಹೋತ್ಸವ ಮಾಡಿ ರಾಘು ಮೆರೆಸುವ ತೀರ್ಮಾನ ಕೈಗೊಂಡರಂತಲ್ಲಾ ಥೂತ್ತೇರಿ.

******

 

ರಾಘವೇಶ್ವರ ನೆಲೆಸಿರುವ ಪ್ರದೇಶದ ಶಾಸಕ ಹರತಾಳ ಹಾಲಪ್ಪ ರಾಘವನ ಪರಮ ಭಕ್ತ. ಆದ್ದರಿಂದ ಸಾಗರದ ಹವ್ಯಕರು ಆತನನ್ನು ಗೆಲ್ಲಿಸಿದರಂತಲ್ಲಾ. ಯಾಕೆಂದರೆ ಆ ಹಾಳು ತಿಮ್ಮಪ್ಪ ದಿನ ಬೆಳಗಾಯ್ತೆಂದರೆ ಜನಗಳ ಕೆಲಸ ಕುರಿತು ಯೋಚಿಸುತ್ತಾನೆ. ಕಾರ್ಯಕರ್ತರ ಖಾಸಗಿ ವಿಷಯವನೆಂದೂ ಕೇಳಿಲ್ಲ. ಅದೇ ಹಾಲಪ್ಪ ಜನರ ಖಾಸಗಿ ವಿಷಯ ಕೇಳುತ್ತಾನೆ. ಸಾಧ್ಯವಾದರೆ ಮನೆಗೂ ಬಂದುಬಿಡುತ್ತಾನೆ. ನಮ್ಮ ಮಡದಿಯ ಕೈಯಿಂದ ಕಾಫಿ ಮಾಡಿಸಿಕೊಂಡು ಕುಡಿಯುತ್ತಾನೆ. ನಮ್ಮ ಕೈಯಿಂದಲೇ ಬೀಡಿ ಸಿಗರೇಟು ಮಾತ್ರೆ ತರಿಸುತ್ತಾನೆ. ಇಂತಹ ಜನಾನುರಾಗಿ ಹಾಲಪ್ಪನೆಲ್ಲಿ ಆ ತಿಮ್ಮಪ್ಪನೆಲ್ಲಿ ಎಂದು ಚಿಂತಿಸಿ ಹಾಲಪ್ಪನನ್ನೇ ಆರಿಸಿದರಂತಲ್ಲಾ. ಅಂಥಾ ರಾಘವನಿಗೆ ಇಂತ ಹಾಲಪ್ಪನೇ ಸರಿ ಎಂದು ಹವ್ಯಕರು ಚಿಂತಿಸಿದ್ದಾಗ ರಾಘವನ ರಾಡಿ ತೆಗೆಯದೆ ಮೌನವಾಗಿದ್ದ ತಿಮ್ಮಪ್ಪನಿಗೆ ಹವ್ಯಕರು ಸರಿಯಾದ ಶಾಸ್ತಿ ಮಾಡಿದರಲ್ಲಾ. ಸದರಿ ಹಾಲಪ್ಪ ಯಾರಾದರೂ ಹವ್ಯಕರನ್ನ ಬೈದರೆ ನಾನು ಸುಮ್ಮನಿರುವುದಿಲ್ಲ, ರಾತ್ರಿ ನಿಮ್ಮ ಮನೆಗೇ ಬಂದು ಬಿಡುತ್ತೇನೆಂದು ಹೆದರಿಸಿದ್ದಾನಂತಲ್ಲಾ ಥೂತ್ತೇರಿ.

******

 

ಹವ್ಯಕರು ಹೆಚ್ಚು ನೆಲೆಸಿರುವ ಸಾಗರ ಪ್ರಾಂತ್ಯದಲ್ಲಿನ ಪ್ರತಿ ಹಳ್ಳಿಗಳಿಲ್ಲಿ 20ರಿಂದ 30 ಹುಡುಗರು ಅವಿವಾಹಿತರಾಗಿಯೇ ಇದ್ದಾರಂತಲ್ಲಾ. ಈ ಸಮಸ್ಯೆ ರಾಮಚಂದ್ರಾಪುರ ಮಠದ ಗುರುಗಳನ್ನ ತೀವ್ರವಾಗಿ ಕಾಡಬೇಕಿತ್ತು. ಆದರೆ ತರುಣರ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಿಕೊಂಡ ಗುರುಗಳ ಅನೈತಿಕ ಬದುಕನ್ನೇ ಮನ್ನಿಸಿದ ಜನ, ಅವರಿಗೆ ಪೂರ್ಣ ಬೆಂಬಲ ಕೊಡುವ ನಿರ್ಣಯವನ್ನೇ ಕೈಗೊಂಡರಂತಲ್ಲಾ. ಕಾರಣ ಈ ರಾಮಚಂದ್ರಾಪುರ ಮಠ ಜಗತ್ತಿನ ಏಕೈಕ ಮಠ ಅಂತಹ ಮಠದಲ್ಲಿ ಈ ತರಹ ಇರುವ ಏಕೈಕ ಜಗದ್ಗುರು ರಾಘವೇಶ್ವರ ಅವರ ಅಜನ್ಮ ಬ್ರಹ್ಮಚಾರಿ ಬದುಕನ್ನ ಕೊಂಡಾಡುತ್ತ ತರುಣರು, ಕನ್ಯೆ ಇಲ್ಲದ ತಮ್ಮ ಬದುಕನ್ನು ಪೂರ್ಣಗೊಳಿಸಬೇಕು ಎಂಬ ಗುಪ್ತ ಚರ್ಚೆ ಬೆಂಗಳೂರಲ್ಲಿ ಆಯ್ತಂತಲ್ಲಾ. ಅದೇನಾದರಾಗಲಿ ಅಖಿಲ ಭಾರತ ಹವ್ಯಕ ಮಹಾಸಭೆಯಲ್ಲಿ ಹವ್ಯಕ ತರುಣರ ಲೈಂಗಿಕ ಸಮಸ್ಯೆ ಚರ್ಚೆಗೇ ಬರದಿರುವುದಕ್ಕೆ ಕಾರಣ `ಎಲ್ಲರೂ ಅವರ ಜಗದ್ಗುರು ದಾರಿಯಲ್ಲಿ ನಡೆಯುತ್ತಾರೆ, ಇಲ್ಲವಾದಲ್ಲಿ ಅವರ ಬದುಕು ಅವರ ಕೈಯಲ್ಲಿ’ ಎಂಬ ತಾತ್ಸಾರದ ಮನೋಭಾವವೇ ಕಾರಣವಂತಲ್ಲಾ ಥೂತ್ತೇರಿ.

 

******

 

ಸಮ್ಮಿಶ್ರ ಸರಕಾರದ ವರಸೆ ನೋಡಿದ ರೈತರು ಈ ಸರಕಾರದಿಂದ ನಮ್ಮ ಸಾಲಮನ್ನಾ ಸಾಧ್ಯವೇ ಎಂದು ಚಿಂತಿಸುತ್ತಿರುವಾಗ, ಭಾವುಕರಾದ ಕುಮಾರಣ್ಣ `ರೈತ ಬಾಂಧವರೇ ಮತ್ತು ಅಣ್ಣತಮ್ಮಂದಿರೆ ಮತ್ತು ಅಕ್ಕಭಾವಂದಿರೆ ಹಾಗೂ ನಮ್ಮ ತಂದೆಯ ಅಭಿಮಾನಿಗಳೇ, ಏನು ನೀವು ಒಂದು ಅನುಮಾನ ಪಡ್ತಾ ಇರತಕ್ಕಂತ ವಿಷಯ ಏನಿದೆ ಅದು ನನಿಗೆ ಅರ್ಥ ಆಗ್ತಕ್ಕಂತದ್ದು. ಆ ದಿಸೆಲಿ ಯಾರು ಅನುಮಾನ ಪಡಬೇಡಿ. ಈಗಾಗಲೇ ರಾಜ್ಯೋತ್ಸವ ಪಡೆದಿರತಕ್ಕಂತ ಪ್ರಶಸ್ತಿ ವಿಜೇತರಿಗೆ ಕೊಡತಕ್ಕಂತ 63 ಲಕ್ಷ ರೂಪಾಯಿ ಹಣವನ್ನ ಒದಗಿಸಿ ಕೊಟ್ಟ ನಂತರ ನಮ್ಮ ರೈತ ಬಾಂಧವರ ಸಾಲವನ್ನ ಮನ್ನಾ ಮಾಡ್ತಕ್ಕಂತದ್ದರ ಬಗ್ಗೆ ಚಿಂತನೆ ಮಾಡ್ತಿನಿ. ನನ್ನ ಜೀವಿತಾವಧಿಯಲ್ಲೇ ನಿಮ್ಮ ಸಾಲ ಏನಿದೆ ಅದು ಯಾವುದೇ ಬ್ಯಾಂಕಿನಲ್ಲಿರಲಿ ಅಥವಾ ಬಡ್ಡಿ ದಂಧೆಯವರದ್ದೇ ಇರಲಿ, ಅದನ್ನ ಮನ್ನಾ ಮಾಡ್ತಕ್ಕಂತದಕ್ಕೆ ಬೇಗ ತೀರ್ಮಾನಕ್ಕೆ ಬರ್ತಕ್ಕಂತ ಕ್ಯೆಲುಸ ಮಾಡ್ತಿನಿ. ಈ ವಿಷಯದಲ್ಲಿ ನೀವು ಯಾವುದೇ ಚಾಡಿ ಮಾತನ್ನ ಕೇಳದೆ ನನ್ನನ್ನ ನಂಬಿದರೆ ನನ್ನ ಏಕೈಕ ಪುತ್ರ ನಿಖಿಲ್‍ಗೌಡನ ಮೇಲೆ ಆಣೆ ಮಾಡಿ ಹೇಳ್ತೀನಿ, ನಿಮ್ಮ ರುಣ ಇಟ್ಟಗಳಲ್ಲ’ ಎಂದರಂತಲ್ಲಾ ಥೂತ್ತೇರಿ.

******

 

ಹಳೇ ಕಾಯಿಲೆಯ ಹೊಸ ಮನುಷ್ಯ ದಾಬಸ್‍ಪೇಟೆಯ ಡಿಶ್‍ನಾಗ್ ಮುಂದಿನ ಚುನಾವಣೆಯಲ್ಲಿ ದೇಶದ ಜನ ಮುಂದೆ ಮತ್ತೆ ಮೋದಿಯವರೇ ಇರಲಿ ಎಂದು ತೀರ್ಮಾನಿಸಿದರೆ ಆಶ್ಚರ್ಯವಿಲ್ಲ ಎಂಬ ಬೆದರಿಕೆ ಹುಟ್ಟಿಸಿದ್ದಾರಲ್ಲಾ. ಈ ರಾಜಕೀಯ ಪಂಡಿತರ ಪ್ರಕಾರ ಉತ್ತರ ಭಾರತದಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿಯಲ್ಲಿ ಜನ ಗುರುತಿಸಿರುವ ಸಮಸ್ಯೆ ಇದೆ ಎಂದು ವ್ಯಾಖ್ಯಾನಿಸಿದ್ದಾರೆ. ಬಿಜೆಪಿಯಲ್ಲಿ ಇರಬಹುದಾದ ಆ ನಿಗೂಢ ಸಮಸ್ಯೆ ಯಾವುದೆಂಬುದನ್ನ ಪ್ರಖರ ಸಮಾಜವಾದಿಗಳು ವಿವರಿಸುವ ಗೋಜಿಗೆ ಹೋಗಿಲ್ಲ. ಕಾಂಗೈನ ಅಣುಅಣುವನ್ನ ವಿಶ್ಲೇಷಿಸಿ ಅವರ ಟೀಕೆಯಲ್ಲೇ ಖುಷಿಕಾಣುವ ಈ ರಾಜಕೀಯ ಪಂಡಿತರು ಬಿ.ಜೆ.ಪಿ ಸಮಸ್ಯೆಯನ್ನ ಅನಾವರಣ ಮಾಡಬೇಕಿತ್ತು. ಅದು ಬಿಟ್ಟು ಪಬ್ಲಿಕ್ ಟಿವಿಯ ಕಡ್ಡಿ ರಂಗನಂತೆ ಕಾಂಗೈ ಸೋತ ಕ್ಷೇತ್ರಗಳ ಬಗ್ಗೆ ಟೀಕೆಗೆ ತಮ್ಮ ವಿದ್ವತ್ತನ್ನ ಬಳಸಬಾರದಿತ್ತು. ಉತ್ತರ ಭಾರತದ ರಾಜ್ಯಗಳು ಬಿಜೆಪಿಯ ದೈತ್ಯ ಶಕ್ತಿ ಎದುರು ಬರಿಗೈಲಿ ಚುನಾವಣೆ ಎದುರಿಸಿ ಕಾಂಗೈ ಗೆಲ್ಲಿಸಿವೆ. ಇದು ಗುಪ್ತ ಬಿಜೆಪಿ ಅಭಿಮಾನಿ ವಿದ್ವಾಂಸರಿಗೆ ನಿದ್ದೆಗೆಡಿಸುವ ಸಂಗತಿಯಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ವಾಯುಮಾಲಿನ್ಯ : ಏರ್ ಪ್ಯೂರಿಫೈಯರ್‌ ಜಿಎಸ್‌ಟಿ ಕಡಿತಕ್ಕೆ ಕೇಂದ್ರ ಆಕ್ಷೇಪ

ಏರ್‌ಪ್ಯೂರಿಫೈಯರ್‌ ಸಾಧನಗಳ ಮೇಲಿನ ಜಿಎಸ್‌ಟಿ ಕಡಿತಗೊಳಿಸುವಂತೆ ಜಿಎಸ್‌ಟಿ ಮಂಡಳಿಗೆ ಆದೇಶಿಸಿದರೆ ಅದು ಅಂತಹ ಇನ್ನಷ್ಟು ಪ್ರಕರಣಗಳು ಹೆಚ್ಚಳವಾಗಲು ಕಾರಣವಾಗುತ್ತದೆ (Pandora Box)ಎಂದು ಕೇಂದ್ರ ಸರ್ಕಾರ ಶುಕ್ರವಾರ (ಡಿ.26) ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ದೆಹಲಿ ಎನ್‌ಸಿಆರ್‌...

ಬಳ್ಳಾರಿ | ಪ್ರಭಾವ, ಗೂಂಡಾಗಿರಿ ಮೂಲಕ ಬಡ ಜನರ ಭೂ ಕಬಳಿಕೆ : ಬುಡಾ ಮಾಜಿ ಅಧ್ಯಕ್ಷನ ವಿರುದ್ಧ ಗಂಭೀರ ಆರೋಪ

ಬಳ್ಳಾರಿ ನಗರಕ್ಕೆ ಹೊಂದಿಕೊಂಡಿರುವ ಕೌಲ್‌ ಬಜಾರಿನ ದಾನಪ್ಪಬೀದಿ ಮತ್ತು ಬಂಡಿಹಟ್ಟಿ ಏರಿಯಾಗಳ ಬಡ ಜನರಿಗೆ ಇನಾಂ ರದ್ದತಿಯ ಬಳಿಕ ನೀಡಲಾಗಿದ್ದ ಭೂಮಿಯನ್ನು ಬಳ್ಳಾರಿ ನಗರಾಭಿವೃದ್ದಿ ಪ್ರಾಧಿಕಾರ (ಬುಡಾ) ದ ಮಾಜಿ ಅಧ್ಯಕ್ಷ ಎನ್‌....

ಕ್ರಿಸ್‌ಮಸ್‌ ದಿನ ದೇಶದ ಹಲವು ನಗರಗಳಲ್ಲಿ ಗಿಗ್‌ ಕಾರ್ಮಿಕರಿಂದ ಪ್ರತಿಭಟನೆ : ಹೊಸ ವರ್ಷದಂದು ಮತ್ತೊಂದು ಹೋರಾಟಕ್ಕೆ ಸಿದ್ದತೆ

ವರ್ಷಾಂತ್ಯದ ಎರಡು ಪ್ರಮುಖ ದಿನಗಳಾದ ಡಿಸೆಂಬರ್ 25ರ ಕ್ರಿಸ್‌ಮಸ್‌ ಮತ್ತು ಡಿಸೆಂಬರ್ 31ರ ಹೊಸ ವರ್ಷದ ಸಂಜೆ (ಮುನ್ನಾದಿನ) ದೇಶದಾದ್ಯಂತ ಪ್ರತಿಭಟನೆ ನಡೆಸಲು ಗಿಗ್ ಕಾರ್ಮಿಕರು ನಿರ್ಧರಿಸಿದ್ದಾರೆ. ಈಗಾಗಲೇ ಡಿಸೆಂಬರ್ 25ರ ಕ್ರಿಸ್‌ಮಸ್‌ ದಿನದಂದು...

ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಗುಂಪು ಹತ್ಯೆ : ಘಟನೆಗೆ ಕೋಮು ಆಯಾಮವಿಲ್ಲ ಎಂದ ಮಧ್ಯಂತರ ಸರ್ಕಾರ

ಬಾಂಗ್ಲಾದೇಶದ ರಾಜ್‌ಬರಿ ಜಿಲ್ಲೆಯಲ್ಲಿ ಸುಲಿಗೆ ಯತ್ನದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಗುಂಪೊಂದು ಥಳಿಸಿ ಕೊಂದಿದೆ. ಇದು ಇತ್ತೀಚೆಗೆ ಹಿಂದೂ ವ್ಯಕ್ತಿಯನ್ನು ಗುಂಪು ಹತ್ಯೆ ನಡೆಸಿರುವ ಎರಡನೇ ಘಟನೆಯಾಗಿದೆ. ಆದರೆ, ಅಲ್ಲಿನ ಮಧ್ಯಂತರ ಸರ್ಕಾರ...

ದೆಹಲಿ ವಾಯು ಮಾಲಿನ್ಯದಿಂದ ಸಾಂತಾ ಕ್ಲಾಸ್ ಮೂರ್ಛೆ ಹೋದ ವಿಡಿಯೋ ಹಂಚಿಕೆ : ಎಎಪಿಯ ಸೌರಭ್ ಭಾರದ್ವಾಜ್ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಪರೀತ ವಾಯುಮಾಲಿನ್ಯದಿಂದ ಸಾಂತಾಕ್ಲಾಸ್ ವೇಷ ಧರಿಸಿದ ಪುರುಷರು ಮೂರ್ಛೆ ಹೋಗುತ್ತಿರುವುದನ್ನು ತೋರಿಸುವ ವಿಡಿಯೋ ಸ್ಕಿಟ್ (ಅಭಿನಯ) ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರಾದ...

ಕ್ರಿಸ್‌ಮಸ್‌ ವೇಳೆ ಶಾಲೆಗೆ ನುಗ್ಗಿ ದಾಂಧಲೆ : ವಿಹೆಚ್‌ಪಿ-ಬಜರಂಗದಳದ ನಾಲ್ವರ ಬಂಧನ

ನಲ್ಬರಿ ಜಿಲ್ಲೆಯ ಶಾಲೆಯೊಂದಕ್ಕೆ ನುಗ್ಗಿ ಕ್ರಿಸ್‌ಮಸ್ ಅಲಂಕಾರವನ್ನು ಧ್ವಂಸ ಮಾಡಿದ, ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಮತ್ತು ಬಜರಂಗದಳದ ನಾಲ್ವರನ್ನು ಅಸ್ಸಾಂ ಪೊಲೀಸರು ಗುರುವಾರ (ಡಿ.25) ಬಂಧಿಸಿದ್ದಾರೆ. ಬಂಧಿತರನ್ನು ವಿಹೆಚ್‌ಪಿ ಜಿಲ್ಲಾ ಕಾರ್ಯದರ್ಶಿ ಭಾಸ್ಕರ್...

ಅಲಿಗಢ ಮುಸ್ಲಿಂ ವಿವಿ ಆವರಣದಲ್ಲಿ ಗುಂಡಿಕ್ಕಿ ಶಿಕ್ಷಕನ ಹತ್ಯೆ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು)ದ ಶಿಕ್ಷಕರೊಬ್ಬರನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ (ಡಿ.24) ರಾತ್ರಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ಭೀತಿ ಮೂಡಿಸಿದೆ. ಮೃತರನ್ನು ಎಎಂಯುನ ಎಬಿಕೆ ಯೂನಿಯನ್ ಹೈಸ್ಕೂಲ್‌ನ ಶಿಕ್ಷಕ...

ಮತ್ತೊಬ್ಬ ವಲಸೆ ಕಾರ್ಮಿಕನ ಗುಂಪು ಹತ್ಯೆ : ಆರು ಜನರ ಬಂಧನ

ಬುಧವಾರ (ಡಿ.24) ಒಡಿಶಾದ ಸಂಬಾಲ್‌ಪುರದಲ್ಲಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ 30 ವರ್ಷದ ವಲಸೆ ಕಾರ್ಮಿಕರೊಬ್ಬರನ್ನು ಗುಂಪು ಹತ್ಯೆ ಮಾಡಲಾಗಿದೆ. ಈ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್...

ಉನ್ನಾವೋ ಅತ್ಯಾಚಾರ ಪ್ರಕರಣ : ಕುಲದೀಪ್ ಸೆಂಗಾರ್ ಶಿಕ್ಷೆ ಅಮಾನತು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಉನ್ನಾವೋ ಅತ್ಯಾಚಾರ ಪ್ರಕರಣದ ಅಪರಾಧಿ ಕುಲದೀಪ್ ಸಿಂಗ್ ಸೆಂಗಾರ್‌ನ ಜೀವಾವಧಿ ಶಿಕ್ಷೆ ಅಮಾನತುಗೊಳಿಸಿರುವುದನ್ನು ಪ್ರಶ್ನಿಸಿ ಇಬ್ಬರು ಮಹಿಳಾ ವಕೀಲರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಕುಲದೀಪ್ ಸಿಂಗ್ ಸೆಂಗಾರ್‌ಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು...

ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಅಪಹಾಸ್ಯ : ಮಾಧ್ಯಮಗಳ ಮುಂದೆ ವ್ಯಂಗ್ಯವಾಗಿ ನಕ್ಕ ಯುಪಿ ಸಚಿವ

ದೆಹಲಿಯ ಇಂಡಿಯಾ ಗೇಟ್ ಬಳಿ ಪ್ರತಿಭಟಿಸಿದ ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಸಚಿವ ಓಂ ಪ್ರಕಾಶ್ ರಾಜ್‌ಭರ್ ಅಪಹಾಸ್ಯ ಮಾಡಿದ್ದು, "ಆಕೆಯ ಮನೆ ಉನ್ನಾವೋದಲ್ಲಿರುವಾಗ ದೆಹಲಿಯಲ್ಲಿ ಏಕಿದ್ದಾಳೆ?"...