Homeಸಾಮಾಜಿಕ‘ಅಂಧಾ ಬೀಸಾ,  ಕುತ್ತಾ ಖಾಯಾ...’

‘ಅಂಧಾ ಬೀಸಾ,  ಕುತ್ತಾ ಖಾಯಾ…’

- Advertisement -
- Advertisement -
 ಹೈ-ಕ ಹಿಂದುಳಿದಿರುವಿಕೆಯ ಮೂಲ ಕಾರಣಗಳೇನು?
ಕುಷ್ಟಗಿ: ಇಲ್ಲಿನ ಸಾಮಾಜಿಕ ಸ್ಥಿತಿಯೂ ಇದಕ್ಕೆ ಮೂಲ ಕಾರಣವಾಗಿದೆ. ಹಿಂದೆಲ್ಲ ಇಲ್ಲಿ ನೂರಾರು, ಸಾವಿರಾರು ಎಕರೆ ಕೃಷಿಭೂಮಿ ದೇಸಾಯಿಗಳು, ಶಾನುಭೋಗರು, ಗೌಡರ ಬಳಿಯೇ ಇತ್ತು. ಈ ಕೃಷಿಭೂಮಿಯಲ್ಲಿ ದುಡಿಯುತ್ತಿದ್ದ ಭೂರಹಿತರು ಸಾಮಾಜಿಕವಾಗಿ, ಆರ್ಥಿಕವಾಗಿ ತೀರಾ ದುರ್ಬಲರಾಗುತ್ತಲೇ ಬಂದರು. ಕಾಲಕ್ರಮೇಣ ಇದು ಬದಲಾಗುತ್ತ ಬಂದರೂ, ಅಷ್ಟಿಷ್ಟು ಭೂಸುಧಾರಣೆ ಯಶಸ್ವಿಯಾದರೂ ಕೂಡ ಇಂದಿಗೂ ಇಲ್ಲಿ ಭೂರಹಿತರ ಸಂಖ್ಯೆಯೇ ಜಾಸ್ತಿ. ಭೂಮಿಯ ಹಂಚಿಕೆ ಸರಿಯಾಗಿ ಆಗದೇ ಇರುವುದೂ ಇಲ್ಲಿನ ಹಿಂದುಳಿದಿರುವಿಕೆಗೆ ಕಾರಣ.
ಸ್ವಾತಂತ್ರ್ಯಾ ನಂತರ ಎಲ್ಲಿ ದಾರಿ ತಪ್ಪಿತು?
ಕುಷ್ಟಗಿ: ನಿಜಾಮನ ಆಡಳಿತದಲ್ಲಿದ್ದ ನಮಗೆ ಒಂದು ವರ್ಷ ತಡವಾಗಿ ಸ್ವಾತಂತ್ರ್ಯ ಸಿಕ್ಕಿತು. ಸಂವಿಧಾನದ 371ನೇ ವಿಧಿ ಅನುಷ್ಠಾನದಲ್ಲೂ ನಮಗೆ ಆಗಲೇ ಅನ್ಯಾಯವಾಗಿತ್ತು. ಮರಾಠವಾಡ, ವಿದರ್ಭ, ತೆಲಂಗಾಣಗಳಿಗೆ ನೀಡಿದ ಸವಲತ್ತನ್ನು ಹೈ-ಕ ಭಾಗಕ್ಕೆ ನೀಡಲು ನೆಹರೂ ನಿರಾಕರಿಸಿದರು. ಆಗಲೇ ಈ ಸವಲತ್ತು ಸಿಕ್ಕಿದ್ದರೆ ಇವತ್ತು ಇಂತಹ ಪರಿಸ್ಥಿ ಇರುತ್ತಿರಲಿಲ್ಲವೇನೋ?
 ನಂಜುಂಡಪ್ಪ ಸಮಿತಿಯ ವರದಿಯ ನಂತರವಷ್ಟೇ ಸರ್ಕಾರದ ಮಟ್ಟದಲ್ಲಿ ಇಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆ ಶುರುವಾಯಿತೇ?
ಕುಷ್ಟಗಿ: ಅನೇಕ ಸರ್ಕಾರಿ ವರದಿಗಳು ಇಲ್ಲಿನ ಹಿಂದುಳಿದಿರುವಿಕೆಯ ಬಗ್ಗೆ ಮೊದಲಿಂದ ಅಂಕಿಅಂಶಗಳ ಸಮೇತ ದಾಖಲೆ ನೀಡುತ್ತ ಬಂದಿವೆ. ಆದರೆ ಇಲ್ಲಿನ ಜನಪ್ರತಿನಿಧಿಗಳಾಗಲಿ, ಸರ್ಕಾರಗಳಾಗಲಿ ಎಂದೂ ಅವನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.
ಹಿಂದೆ ರಾಮಕೃಷ್ಣ ಹೆಗಡೆ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದಾಗ, ಧರ್ಮಸಿಂಗ್ ನೇತೃತ್ವದ ಸಮಿತಿ ರಚಿಸಲಾಗಿತ್ತು. ಸಮಿತಿಯ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣ್ಯ ಒಂದೂವರೆ ವರ್ಷ ಅಧ್ಯಯನ ಮಾಡಿ, ಇಲ್ಲಿನ ಸಮಸ್ಯೆಗಳ ಮೂಲ, ಪರಿಹಾರಗಳ ಕುರಿತು ವಿವರ ನೀಡಿದ್ದರು. ಜೆ.ಎಚ್. ಪಟೇಲ್ ಮುಖ್ಯಮಂತ್ರಿ, ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದಾಗಲೂ ಇಲ್ಲಿನ ಹಿಂದುಳಿದಿರುವಿಕೆ ಕುರಿತು ಅಧ್ಯಯನ ಮಾಡಲು ಸಮಿತಿಯೊಂದನ್ನು ರಚಿಸಿದ್ದರು. ಕೊಡಗು, ಚಿಕ್ಕಮಗಳೂರು ಜಿಲ್ಲೆಗಳು ಚೀನಾಮಟ್ಟದಲ್ಲಿ ಅಭಿವೃದ್ಧಿ ಹೊಂದುತ್ತಿದ್ದರೆ, ರಾಯಚೂರಿನ ಅಭಿವೃದ್ಧಿ ವಿಶ್ವದಲ್ಲೇ ಅತಿ ಕೊನೆಯ ದರ್ಜೆಯಲ್ಲಿದೆ ಎಂದು ಈ ಸಮಿತಿ ನೀಡಿದ್ದ ವರದಿಯಿಂದ ಸರ್ಕಾರಗಳು ಎಚ್ಚೆತ್ತುಗೊಳ್ಳಲಿಲ್ಲ. ಇಂದಿರಾ ಗಾಂಧಿ ಅವಧಿಯಲ್ಲಿ ದೇಶದ ಅತಿ ಹಿಂದುಳಿದ 25 ಜಿಲ್ಲೆಗಳ ಪಟ್ಟಿ ಮಾಡಿದಾಗ ಅದರಲ್ಲಿ ರಾಯಚೂರು ಇತ್ತು. ಆದರೂ ಯಾವ ಸರ್ಕಾರಗಳೂ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.
 ನಂಜುಂಡಪ್ಪ ಸಮಿತಿ ವರದಿ ಪ್ರಕಾರ ಇಲ್ಲಿ ಅಧಿಕಾರ ಹಂಚಿಕೆಯೂ ಆಗುತ್ತಿಲ್ಲ ಅಲ್ಲವೇ?
ಕುಷ್ಟಗಿ: ಹೌದು, ಅದು ಇಲ್ಲಿವರೆಗೂ ಆಗಲೇ ಇಲ್ಲ. ಕೇವಲ ಅನುದಾನ ನೀಡಿದ್ದೇವೆ ಎಂಬುದನ್ನು ಹೈಲೈಟ್ ಮಾಡುವ ಸರ್ಕಾರಗಳು, ರಾಜಕೀಯ ಮತ್ತು ಸಾಂಸ್ಕøತಿಕ ಅಧಿಕಾರ ನೀಡುವಲ್ಲಿ ಮೋಸ ಮಾಡುತ್ತ ಬಂದಿವೆ. ನಂಜುಂಡಪ್ಪ ಸಮಿತಿ ವರದಿಯ ಶಿಫಾರಸಿನ ಪ್ರಕಾರ, ಕ್ಯಾಬಿನೆಟ್‍ನಲ್ಲಿ ಕಲಬುರ್ಗಿ ವಿಭಾಗಕ್ಕೆ ಶೇ.25ರಷ್ಟು ಸಚಿವ ಸ್ಥಾನಗಳಿರಬೇಕು. ನಿಗಮ, ಮಂಡಳಿ, ಅಕಾಡೆಮಿಗಳ ಅಧ್ಯಕ್ಷ, ಸದಸ್ಯ ಸ್ಥಾನಗಳಲ್ಲೂ ಇದೇ ಪ್ರಮಾಣದ ಪ್ರಾತಿನಿಧ್ಯ ಇರಬೇಕು. ಇವತ್ತಿಗೂ ಅದೂ ಆಗಲೇ ಇಲ್ಲ. ಸದನದಲ್ಲಿ ಈ ಬಗ್ಗೆ ಧ್ವನಿ ಎತ್ತದಷ್ಟು ಅವಿವೇಕಿ ಜನಪ್ರತಿನಿಧಿಗಳನ್ನು ನಾವು ಹೊಂದಿದ್ದೇವೆ.
 ಒಟ್ಟಾರೆ ಉತ್ತರ ಕರ್ನಾಟಕ ಹಿಂದುಳಿದಿದೆ. ಮುಂಬೈ ಕರ್ನಾಟಕಕ್ಕೆ ಅಷ್ಟೋ ಇಷ್ಟೋ ಸೌಲಭ್ಯ ಸಿಗುತ್ತಿವೆಯಲ್ಲ?
ಕುಷ್ಟಗಿ: ಇದಕ್ಕೂ ನಮ್ಮ ಬೇಜವಾಬ್ದಾರಿ ರಾಜಕಾರಣಿಗಳು ಮತ್ತು ಮುಂಬೈ ಕರ್ನಾಟಕದ ಕೆಲವು ನಾಯಕರೂ ಕಾರಣ. ನಂಜುಂಡಪ್ಪ ಸಮಿತಿ ವರದಿ ಪ್ರಕಾರ, ಐಐಟಿ ರಾಯಚೂರಿಗೆ ಸಿಗಬೇಕಿತ್ತು. ಆದರೆ ಜಗದೀಶ ಶೆಟ್ಟರ್, ಪ್ರಹ್ಲಾದ್ ಜೋಶಿ ಕುತಂತ್ರ ಮಾಡಿ, ಧಾರವಾಡಕ್ಕೆ ಮಂಜೂರು ಮಾಡಿಸಿಕೊಂಡರು. ಮುಂಬೈ ಕರ್ನಾಟಕದಲ್ಲಿ ಹಲವಾರು ವಿವಿಗಳಿವೆ. ತಾಂತ್ರಿಕ ವಿವಿ, ಮಹಿಳಾ ವಿವಿ, ತೋಟಗಾರಿಕಾ ವಿವಿಗಳಲ್ಲಿ ಕನಿಷ್ಟ ಎರಡನ್ನಾದರೂ ಹೈ-ಕ ಭಾಗಕ್ಕೆ ನೀಡಬೇಕಿತ್ತು.
 371ನೇ ವಿಧಿ ಲಾಗೂ ಆಯ್ತು. ಅದರ ಜಾರಿ ಹೇಗೆ ನಡೆಯುತ್ತಿದೆ?
ಕುಷ್ಟಗಿ: ನಮ್ಮ ಮತ್ತು ಹಲವು ಸಂಘಟನೆಗಳ 20 ವರ್ಷಗಳ ಹೋರಾಟಕ್ಕೆ ಮಣಿದ ಮಲ್ಲಿಕಾರ್ಜುನ ಖರ್ಗೆ ಈ ಸೌಲಭ್ಯವನ್ನು ತಂದರು. ಇದರಿಂದ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಈ ಭಾಗದ ಜನರಿಗೆ ವಿಶೇಷ ಮೀಸಲಾತಿ ಸಿಗುತ್ತಿದೆ. ಆದರೆ ಅನುಷ್ಟಾನದಲ್ಲಿ ಸಮಸ್ಯೆಗಳೂ ಹಾಗೆಯೇ ಇವೆ.
 ಹೈ-ಕ ಅಭಿವೃದ್ಧಿ ಮಂಡಳಿ ಜಾಗದಲ್ಲಿ ಈಗ ಹೈ-ಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಬಂದಿದೆ. ಇದರ ಕಾರ್ಯವೈಖರಿ ಹೇಗಿದೆ?
ಕುಷ್ಟಗಿ: ಇದು ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ರಾಜ್ಯಪಾಲರೇ ಇದರ ಮುಖ್ಯಸ್ಥರು. ಆದರೆ ವಜುಭಾಯಿ ಇವತ್ತಿಗೂ ಒಂದು ಸಭೆಗೆ ಹಾಜರಿಲ್ಲ. ಸಿದ್ದರಾಮಯ್ಯ ಸರ್ಕಾರವಿದ್ದಾಗ ಒಂದು ಬಜೆಟ್‍ನಲ್ಲಿ ಈ ಮಂಡಳಿಗೆ 6 ಸಾವಿರ ಕೋಟಿ ಕೊಟ್ಟರು. ಅದರಲ್ಲಿ ಎರಡೂವರೆ ಸಾವಿರ ಕೋಟಿ ಬಳಕೆಯೇ ಆಗಲಿಲ್ಲ. ತಮ್ಮ ಕ್ಷೇತ್ರಕ್ಕೆ ರಸ್ತೆ, ಕಟ್ಟಡಕ್ಕೆ ಅನುದಾನ ಪಡೆದ ಶಾಸಕರು ಲಾಭ ಮಾಡಿಕೊಂಡರೆ ವಿನಃ ಸಾಮಾಜಿಕ ಬದಲಾವಣೆ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಲೇ ಇಲ್ಲ. ಈ ಮಂಡಳಿಗೆ ಬರುವ ಅನುದಾನದಲ್ಲಿ ಶೇ.65ರಷ್ಟು ಕಲಬುರ್ಗಿ ಜಿಲ್ಲೆಗೇ ದಕ್ಕುವಂತೆ ಮಲ್ಲಿಕಾರ್ಜುನ ಖರ್ಗೆ ಕೈಚಳಕ ತೋರಿಸುತ್ತಾರೆ. ಉಳಿದ ಜಿಲ್ಲೆಗಳಿಗೆ ಶೇ. 35ರಷ್ಟು ಮಾತ್ರ ಸಿಗುತ್ತಿದ್ದರೂ, ಕೆಲಸಗೇಡಿ ಜನಪ್ರತಿನಿಧಿಗಳು ಸುಮ್ಮನೇ ಇದ್ದಾರೆ.
ಈ ಅನುದಾನದ ಬಳಕೆಯಾದರೂ ಸರಿಯಾಗಿ ಆಗುತ್ತಿದೆಯಾ?
ಕುಷ್ಟಗಿ: ಊಹೂಂ.. ತಮಗೆ ಲಾಭವಿರುವ ಕೆಲಸಗಳಿಗೆ ಮಾತ್ರ ಇದನ್ನು ವಿನಿಯೋಗಿಸುತ್ತಿದ್ದಾರೆಯೇ ಹೊರತು, ಮಾನವ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಈ ಹಣವನ್ನು ಹೂಡುತ್ತಿಲ್ಲ. ಸಿಕ್ಕಾಪಟ್ಟೆ ಬಸ್, ಡ್ರೋಣ್ ಖರೀದಿಗೂ ಈ ಅನುದಾನವನ್ನೇ ಬಳಕೆ ಮಾಡಿಕೊಂಡಿದ್ದಾರೆ ಇಲ್ಲಿನ ಸ್ವಾರ್ಥಿ ಜನಪ್ರತಿನಿಧಿಗಳು. ಹೀಗಾಗಿ ಈ ಮಂಡಳಿಯ ಮೂಲ ಉದ್ದೇಶವೇ ಮಾಯವಾಗಿ, ಅನುದಾನ ದುರುಪಯೋಗ ಆಗುತ್ತಿದೆ.
 ಒಟ್ಟಿನಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಒಂದು ಸಮಸ್ಯೆಯಾದಂತಿದೆ…
ಕುಷ್ಟಗಿ: ರಾಜಕೀಯ ಇಚ್ಛಾಶಕ್ತಿ ಬಿಡಿ, ಇಲ್ಲಿ ಖರ್ಗೆ ಬಿಟ್ಟರೆ ಯಾವ ರಾಜಕೀಯ ನಾಯಕತ್ವವೇ ಇಲ್ಲದಂತಾಗಿದೆ. ಇವರೆಲ್ಲ ಬೆಂಗಳೂರಿನ ಮೋಹಕ್ಕೆ ಸಿಕ್ಕು ಈ ಭಾಗವನ್ನೇ ಮರೆಯುತ್ತಿದ್ದಾರೆ. ಇವರೆಲ್ಲ ಕೇವಲ ರಾಜಕೀಯ ಫಲಾನುಭವಿಗಳು ಮಾತ್ರ.
ಆಗಾಗ ಉ-ಕ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಲ್ಲ?
ಕುಷ್ಟಗಿ: ಇದಕ್ಕೆ ಜನಸಾಮಾನ್ಯರ ಬೆಂಬಲ ಇಲ್ಲವೇ ಇಲ್ಲ. ಉಮೇಶ ಕತ್ತಿ, ಶ್ರೀರಾಮುಲುಗಳಂತಹ ಅವಿವೇಕಿಗಳು ಮಾಡುವ ಕೆಲಸವಿದು.ಇದು ಪಕ್ಕಾ ಅಧಿಕಾರ ಕಬಳಿಕೆ ಮತ್ತು ಜಾತಿ ಹುನ್ನಾರದಿಂದ ಎಬ್ಬಿಸುವ ಕೂಗು. ದಕ್ಷಿಣ ಭಾಗವನ್ನು ಒಕ್ಕಲಿಗ  ನಾಯಕರು, ಉತ್ತರವನ್ನು ಲಿಂಗಾಯತ ನಾಯಕರು ಆಳಬೇಕೆಂಬ ಭ್ರಮೆಯಲ್ಲಿ ಹುಚ್ಚುಚ್ಚಾಗಿ ಮಾತಾಡುತ್ತಾರೆ. ಉತ್ತರದ ಅನೇಕ ಮಹನೀಯರ ಶ್ರಮದಿಂದ ಏಕೀಕರಣವಾಯಿತು. ಮೈಸೂರು ಭಾಗದ ರಾಜಕಾರಣಿಗಳಿಗೆ ಇದು ಇಷ್ಟವಿರಲಿಲ್ಲ. ಪರಿಶ್ರಮದಿಂದ ಏಕೀಕರಣವಾಗಿದೆ, ಈಗ ಪ್ರತ್ಯೇಕತೆಯ ಕೂಗು ಎತ್ತುವುದು ಮೂರ್ಖತನ. ಇದಕ್ಕೆ ಜನರು ಎಂದೂ ಸ್ಪಂದಿಸಿಲ್ಲ.
‘ಕೊಟ್ಟಂತೆ ಮಾಡಿ ಕಿತ್ತುಕೊಳ್ಳುವ ಸರ್ಕಾರಗಳು’
ಹೈ-ಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷರಾಗಿರುವ ಡಾ. ರಜಾಕ್ ಉಸ್ತಾದ್ 371 ವಿಧಿಯ ಅನುಷ್ಠಾನದಲ್ಲಿ ಲೋಪಗಳಾದಾಗ ಧ್ವನಿ ಎತ್ತಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಸದ್ಯ ಹೈ-ಕ ಭಾಗಕ್ಕೆ ಯಾವ ಬಗೆಯ ಅಭಿವೃದ್ಧಿ ಕೆಲಸಗಳಾಗಬೇಕು ಎಂಬುದನ್ನು ಅವರು ಇಲ್ಲಿ ವಿವರಿಸಿದ್ದಾರೆ.
 371ನೇ ವಿಧಿ ಜಾರಿಯಾದ ಮೇಲೆ ಹೈ-ಕ ಅಭಿವೃದ್ಧಿ ಕೆಲಸಗಳು ನಿರೀಕ್ಷಿತ ಮಟ್ಟದಲ್ಲಿವೆಯೇ?
ರಜಾಕ್: ಉದ್ಯೋಗ, ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಲಭಿಸುತ್ತಿದೆ. ಆದರೆ ಕೆಲವು ವಿಶ್ವವಿದ್ಯಾಲಂiÀiಗಳು ಮತ್ತು ಇಲಾಖೆಗಳು ಈ ಮೀಸಲಾತಿಯನ್ನು ನಿರಾಕರಿಸುವ ಯತ್ನ ಮಾಡುತ್ತಿವೆ. ಮೈಸೂರು, ಬೆಂಗಳೂರು, ಶಿವಮೊಗ್ಗ ವಿವಿಗಳಲ್ಲಿ ಹೈ-ಕ ಮೀಸಲು ನೀಡುವಲ್ಲಿ ಅನ್ಯಾಯ ಮಾಡಲಾಗುತ್ತಿದೆ. 2018ರಲ್ಲಿ 100 ಸಿವಿಲ್ ನ್ಯಾಯಾಧೀಶರ ನೇಮಕಾತಿಯಲ್ಲಿ ಹೈ-ಕ ಮೀಸಲಾತಿಯನ್ನು ಪಾಲಿಸಲೇ ಇಲ್ಲ. ಸರ್ಕಾರ ಈ ಬಗ್ಗೆ ಕುರುಡಾಗಿಯೇ ಇತ್ತು. ಬೆಂಗಳೂರಿನ ಸಾರಿಗೆ ನಿಗಮದ ಒಬ್ಬ ಎಂ.ಡಿ., ಮೀಸಲಾತಿ ನೀಡಲು ಆಗುವುದಿಲ್ಲ ಎಂದು ಸುತ್ತೋಲೆ ಹೊರಡಿಸುತ್ತಾನೆ. ಅಂದರೆ ಪ್ರತಿ ಸಲವೂ ಮತ್ತೆ ಹೋರಾಡಿಯೇ ಈ ಸೌಲಭ್ಯ ಪಡೆಯುವಂತಹ ಸಂದರ್ಭಗಳು ಎದುರಾಗುತ್ತಿವೆ. ಸರ್ಕಾರ ಈ ಕುರಿತು ಒಂದು ಸ್ಪಷ್ಟ ನೀತಿಯನ್ನು ಜಾರಿ ಮಾಡಬೇಕಾಗಿದೆ.
 ಬಿಡುಗಡೆಗೊಂಡ ಅನುದಾನದ ಬಳಕೆ ಹೇಗಿದೆ?
ರಜಾಕ್: ರಸ್ತೆ, ಕಟ್ಟಡಗಳ ನಿರ್ಮಾಣಕ್ಕೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ ಹೊರತು, ಪ್ರಾಥಮಿಕ ಶಿಕ್ಷಣ, ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಹೈ-ಕ ಪ್ರಾದೇಶಿಕ ಅಭಿವೃದ್ಧ ಮಂಡಳಿಗೆ ಒದಗುವ ಅನುದಾನವನ್ನು ಸಮರ್ಪಕವಾಗಿ ಬಳಸುತ್ತಿಲ್ಲ. ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಸೇರುವ ಪದವೀಧರರ ಪ್ರಮಾಣ ಶೇ. 27ರಷ್ಟಿದ್ದರೆ, ಈ ಭಾಗದಲ್ಲಿ ಅದು ಕೇವಲ ಶೇ.9.9 ಮಾತ್ರ ಇದೆ. ಈ ಭಾಗದ ಎಲ್ಲ ವಿವಿಗಳಲ್ಲೂ ಉಚಿತ ವಸತಿ ವ್ಯಸ್ಥೆಯನ್ನು ಮಾಡುವುದು, ಎಲ್ಲ ವಿದ್ಯಾರ್ಥಿಗಳ ಶುಲ್ಕವನ್ನು ಮಂಡಳಿಯೇ ತುಂಬುವ ಕೆಲಸವನ್ನು ಮಂಡಳಿಯೇ ಮಾಡಬೇಕು. ಆಗ ಮಾತ್ರ ಸುಧಾರಣೆ ಸಾಧ್ಯ.
razak ustad

 ಉದ್ಯೋಗ ಸೃಷ್ಟಿಯ ಕುರಿತಂತೆ ಏನಾದರೂ ಬೆಳವಣಿಗೆ ಆಗಿವೆಯೇ?

ರಜಾಕ್: ಕೊಪ್ಪಳ, ಬಳ್ಳಾರಿ ಭಾಗದಲ್ಲಿ ಹಲವಾರು ಉದ್ಯಮಗಳು ತಲೆ ಎತ್ತಿದ್ದರೂ ಇಲ್ಲಿನ ಯುವಕರಿಗೆ ಉದ್ಯೋಗ ಲಭಿಸುತ್ತಿಲ್ಲ. ಹೊರಗಿನ ರಾಜ್ಯಗಳ ಕಾರ್ಮಿಕರಿಗೇ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ, ಸಿ ಮತ್ತು ಡಿ ದರ್ಜೇಯ ಕೆಲಸಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವಂತೆ ನಿಯಮ ರೂಪಿಸಬೇಕು.
 ಆರೋಗ್ಯಕ್ಕೆ ಸಂಬಂಧಿಸಿದಂತೆ ಮಂಡಳಿ ಏನು ಮಾಡಬಹುದು?
ರಜಾಕ್: ರಾಜ್ಯದಲ್ಲಿ ಪ್ರತಿ 5 ಕಿ.ಮೀಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೆ, ಇಲ್ಲಿ ಪ್ರತಿ 15 ಕಿಮೀಗೆ ಒಂದು ಆರೋಗ್ಯ ಕೇಂದ್ರವಿದೆ. ಪ್ರತಿ 20 ಕಿಮೀಗೆ ಒಂದೇ ಒಂದು ಹೆರಿಗೆ ಆಸ್ಪತ್ರೆಯಿದೆ. ಈ ನಿಟ್ಟಿನಲ್ಲಿ ಮಂಡಳಿ ಗಮನ ಹರಿಸಬೇಕು. ಹೈ-ಕದ 31 ತಾಲೂಕುಗಳಿಗೆ ನಈಗ 300 ವೈದ್ಯರ ಅಗತ್ಯವಿದೆ. ಮಂಡಳಿ ವಿಶೇಷ ಸವಲತ್ತುಗಳನ್ನು ನೀಡಿ, ವೈದ್ಯರು ಇಲ್ಲಿ ಕೆಲಸ ಮಾಡುವಂತೆ ಮಾಡಬಹುದು. ಮಂಡಳಿಗೆ ಬರುವ ಅನುದಾನದಲ್ಲಿ ಇದೇನೂ ದೊಡ್ಡ ಕೆಲಸವಲ್ಲ.
 ಬಜೆಟ್‍ನಲ್ಲಿ ಘೋಷಣೆಯಾಗುವ ಅನುದಾನ ಮಂಡಳಿಗೆ ಸರಿಯಾಗಿ ತಲುಪುತ್ತಿದೆಯೇ?
ರಜಾಕ್: ಬಜೆಟ್‍ನಲ್ಲಿ 1500 ಕೋಟಿ ಘೋಷಣೆ ಮಾಡುತ್ತಾರೆ. ಆದರೆ ಬಜೆಟ್ ಅನುಮೋದನೆ ಪಡೆಯುವಾಗ ಕೇವಲ ಸಾವಿರ ಕೋಟಿಗೆ ಅನುಮೋದನೆ ನೀಡುತ್ತಿದ್ದಾರೆ. ಇಲ್ಲಿನ ಜನಪ್ರತಿನಿಧಿಗಳು ಈ ಕುರಿತು ಪ್ರಶ್ನೆ ಮಾಡುವ ಛಾತಿಯನ್ನೇ ಬೆಳೆಸಿಕೊಂಡಿಲ್ಲ..
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...