Homeಕರ್ನಾಟಕರಂಗೀಲಾ ರಾಘುಸ್ವಾಮಿ ಚೇಲಾಗಳ ಕಿತಾಪತಿ, ಗಿರಿನಗರ ಪೊಲೀಸರ ಹುಚ್ಚಾಟದಿಂದ ಸತ್ತವರ ಮೇಲೆ ದಾಖಲಾಯ್ತು ಎಫ್‌ಐಆರ್‌

ರಂಗೀಲಾ ರಾಘುಸ್ವಾಮಿ ಚೇಲಾಗಳ ಕಿತಾಪತಿ, ಗಿರಿನಗರ ಪೊಲೀಸರ ಹುಚ್ಚಾಟದಿಂದ ಸತ್ತವರ ಮೇಲೆ ದಾಖಲಾಯ್ತು ಎಫ್‌ಐಆರ್‌

- Advertisement -
- Advertisement -

“ಅತ್ಯಾಚಾರ ಆರೋಪದ ವಿಷಯಕ್ಕೆ ಲೋಕಪ್ರಸಿದ್ಧನಾಗಿರುವ ರಾಮಚಂದ್ರಪುರ ಮಠದ ಸ್ವಾಮಿ ರಾಘು ಯಾನೆ ರಾಘವೇಶ್ವರ ಭಾರತಿ ಬುರ್ನಾಸ್ ಭಾನ್ಗಡಿಗಳಿಂದು ಸುದ್ದಿಯಾಗುತ್ತಲೇ ಇದ್ದಾನೆ. ಅದೆಂದೋ ಜೈಲುಪಾಲಾಗಬೇಕಿದ್ದ ಈ ಧರ್ಮಭ್ರಷ್ಟ ನ್ಯಾಯ ಆಡಳಿತ ವ್ಯವಸ್ಥೆಗಳನ್ನೇ ದಿಕ್ಕುತಪ್ಪಿಸಿ ತಿಂದುಂಡು ಬೋಗಸ್ ಪ್ರವಚನ ಬಿಗಿಯುತ್ತ ಲೌಕಿಕಾನಂದ ಅನುಭವಿಸುತ್ತಿದ್ದಾನೆ ಎಂಬ ಆರೋಪಗಳಿವೆ. ಕನ್ಯಾದೀಕ್ಷೆ, ಏಕಾಂತ ಸಂದರ್ಶನ, ಹೆಂಗಸರ ಹಣೆಗೆ ಕುಂಕುಮವಿಟ್ಟು ಮೈಸವರಿ ಆಶೀರ್ವಾದ ಮಾಡುವುದೇ ಮುಂತಾದ ಲೈಂಗಿಕ ಕುಚೇಷ್ಟೆಗಳಿಂದ ಹವ್ಯಕರ ಮಠವನ್ನು ತನ್ನ ಕಾಮಕಾಂಡದ ಅಡ್ಡೆ ಮಾಡಿಕೊಂಡಿದ್ದಾನೆ” ಎಂದು ಮೊಟ್ಟಮೊದಲು ಆರೋಪ ಮಾಡಿದ್ದು ಕುಮಟಾದ ಪ್ರಸಿದ್ಧ ವೈದ್ಯರೂ, ಸಾಮಾಜಿಕ ಮುಖಂಡರೂ ಹವ್ಯಕ ಹೀರೇಮಾಣಿಗಳೂ ಆಗಿದ್ದ ಡಾ.ಟಿ.ಟಿ.ಹೆಗಡೆ!

ಡಾ.ಹೆಗಡೆಯನ್ನು ರಾಘವ ಮಠ ಮಾಫಿಯಾ ಒಂದೆರಡು ರೀತಿಯಲ್ಲಿ ಕಾಡಲಿಲ್ಲ. ಹಲವು ಬಾರಿ ಅವರ ಮೇಲೆ ಭೀಭತ್ಸ ಹಲ್ಲೆಯಾಗಿತ್ತು. ಪೊಲೀಸರನ್ನು ಛೂ ಬಿಟ್ಟು ಕಾಡಿದ್ದರು. ಕೇಸುಗಳನ್ನು ಹಾಕಿಸಿದ್ದರು. ರಾಘುನ ಪೂರ್ವಾಶ್ರಮದ ಸಹೋದರಿ ಗ್ಯಾಂಗು ಕಟ್ಟಿಕೊಂಡು ಪೊರಕೆಯಿಂದ ಹೊಡೆಯಲು ಹೋಗಿ ತಮ್ಮನ ಕಲ್ಯಾಣ ಗುಣಗಳ ಅನಾವರಣವೂ ಮಾಡಿದ್ದಳು. ಎಂಬತ್ತರ ಗಡಿದಾಟಿದ್ದ ಡಾ.ಹೆಗಡೆ ಹಲ್ಲೆಯಿಂದ ಆಸ್ಪತ್ರೆಯಲ್ಲಿ ಕಳೆಯುವಂತಾಗಿತ್ತು. ಇಷ್ಟಾದರೂ ಹೆಗಡೆ ಹೆದರಲಿಲ್ಲ. ತ್ರಿಕಾಲ ಪೂಜೆ ಮಾಡದೆ ಹಣ-ಹೆಣ್ಣಿನ ವಾಸನೆಗೆ ಬಿದ್ದಿರುವ ರಾಘು ಗುರು ಪೀಠದಲ್ಲಿರಲು ಅನರ್ಹನೆಂದು ತನ್ನ ಕೊನೆಗಾಲದತನಕ ಹೇಳುತ್ತಲೇ ಇದ್ದರು. ರಾಘುನ ಪೀಠೋಚ್ಛಾಟನೆ ಮಾಡಲು ನ್ಯಾಯಾಲಯಕ್ಕೂ ಹೋಗಿದ್ದರು.

ಡಾ.ಹೆಗಡೆಯವರು ಸಾಮಾಜಿಕ ಕಳಕಳಿ, ಧಾರ್ಮಿಕ ಪಾಂಡಿತ್ಯ, ನೈತಿಕ ನಡವಳಿಕೆಯಿಂದ ಹವ್ಯಕ ಸಮುದಾಯದಲ್ಲಿ ಪ್ರೀತಿ-ಗೌರವ ಸಂಪಾದಿಸಿದ್ದರು. ಸ್ತ್ರೀ ಸಖ್ಯಾ ಸುಖ ಸಂತೃಪ್ತ “ಸನ್ಯಾಸಿ” ರಾಘುನ ಕಂಡರೆ ಹವ್ಯಕರು ಮೂಗು ಮುರಿಯುತ್ತಿದ್ದರೆ ಟಿ.ಟಿ.ಹೆಗಡೆಯನ್ನು ನೋಡಿದಾಕ್ಷಣ ತಲೆಬಾಗಿ ನಮಿಸುತ್ತಿದ್ದರು. ಆದರೆ ಹವ್ಯಕರು ರಾಘು ಗ್ಯಾಂಗಿನ ಬಹಿಷ್ಕಾರ, ಹಲ್ಲೆ, ಜೀವನೋಪಾಯ ವ್ಯವಹಾರಕ್ಕೆ ಕಲ್ಲುಹಾಕುವ ಕ್ರೌರ್ಯಕ್ಕೆ ಹೆದರಿ ಟಿ.ಟಿ.ಹೆಗಡೆಯ ಹೋರಾಟಕ್ಕೆ ಬೆಂಬಲ ನೀಡಲಿಲ್ಲ. ಇದಕ್ಕೆಲ್ಲಾ ಬೇಸರಿಸದೆ ಟಿ.ಟಿ.ಹೆಗಡೆ “ಜಾಣ” ಹವ್ಯಕರ ಕಣ್ಣಿನ ಪೊರೆ ತೆರೆಯಲು ಪ್ರಯತ್ನ ಮಾಡುತ್ತಲೇ ಇದ್ದರು ಎಂಬುದು‌ ಅವರನ್ನು ಬಲ್ಲವರೆಲ್ಲರೂ ಹೇಳುವ ಮಾತು.

ಮಠಬಾನಿಗಳನ್ನು ಎದುರುಹಾಕಿಕೊಂಡಿದ್ದ ಟಿ.ಟಿ.ಹೆಗಡೆಯವರು ಸುಮಾರು ಎರಡು ತಿಂಗಳ ಹಿಂದೆ ವಯೋಸಹಜ ಸಾವು ಕಂಡಿದ್ದಾರೆ. ಲಗಾಯ್ತಿನಿಂದಲೂ ಅನಾಚಾರಿ ರಾಘುನ ಚೇಲಾಗಿರಿ ಮಾಡುತ್ತಲೇ ಬಂದಿರುವ ಬೆಂಗಳೂರಿನ ಗಿರಿನಗರ ಪೊಲೀಸ್‌ ಅಧಿಕಾರಿಗಳು ದಿವಂಗತ ಟಿ.ಟಿ.ಹೆಗಡೆ ಮೇಲೆ ಕೇಸು ಜಡಿದಿದ್ದಾರೆ. ರಾಘುನ ವಿರುದ್ಧ ಅವಹೇಳನಕಾರಿ ಬರಹವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚುರಪಡಿಸುತ್ತಿದ್ದಾರೆಂಬ ಆರೋಪ ಹೊರಿಸಿದ್ದಾರೆ. ಪಾಪಾ ಟಿ.ಟಿ ಹೆಗಡೆಯವರು ಮರಣಹೊಂದಿ ಎರಡು ತಿಂಗಳಾದರೂ ಸಹ ಅವರನ್ನು ಬಿಡುತ್ತಿಲ್ಲ ಮಠಬಾನಿಗಳು. ಮಠದ ಸಿಇಓ ಕೆ.ಜಿ.ಭಟ್ಟ ಕೊಟ್ಟ ಕಂಪ್ಲೇಂಟಿನ ಮೇಲೆ ಎಫ್‌ಐಆರ್‌ ಕೂಡ ಹಾಕಿರುವ ಪೆದ್ದು ಪೊಲೀಸರು ಅದನ್ನು ನ್ಯಾಯಾಲಯಕ್ಕೂ ಸಲ್ಲಿಸಿದ್ದಾರೆ. ಎನ್‌ಸಿಆರ್‌ 207/19 ನಂಬರಿನ ಎಫ್‌ಐಆರ್ ಅನ್ನು 25-09-2019 ರಂದು ಕೋರ್ಟಿಗೆ ಸಲ್ಲಿಸಿರುವ ಪೊಲೀಸ್ ಅಧಿಕಾರಿಗಳು ಮತ್ತು ಮಠಬಾನಿಗಳ ಹುಚ್ಚಾಟಕ್ಕೆ ಜನ ಬಿದ್ದು ಬಿದ್ದು ನಗುತ್ತಿದ್ದಾರೆ!!

ಈ ಗಿರಿನಗರ ಪೊಲೀಸರು ಹಿಂದೆ ರಾಘುನ ವಿರುದ್ಧ ಅತ್ಯಾಚಾರ ಸಂತ್ರಸ್ತೆಯು ದೂರು ಕೊಡಲು ಹೋದಾಗಲೂ ಸತಾಯಿಸಿದ್ದರು. ರಾಘುನ ರಗಳೆ-ರಾದ್ಧಾಂತದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸಿದ್ದವರಿಗೆ, ಅಲ್ಲಲ್ಲಿ ಮಾತಾಡಿದವರಿಗೆಲ್ಲಾ ಈ ಗಿರಿನಗರ ಪೊಲೀಸರು ಹಿಂಸೆ ನೀಡಿದ್ದ ದೊಡ್ಡ ಪಟ್ಟಿಯೇ ಇದೆ. ಸತ್ತವರನ್ನು ಬಿಡದೇ ಕಾಡಿ ತೆವಲು ತೀರಿಸಿಕೊಳ್ಳುವ ಸ್ಯಾಡಿಸ್ಟ್ ರಾಘುನ ಪೀಠಕ್ಕೆ ಬಲಿಯಾದ ಪುತ್ತೂರಿನ ಶ್ಯಾಮಶಾಸ್ತ್ರಿಯ ಕುಟುಂಬ ಪಟ್ಟ ಕಷ್ಟ ಹೇಳತೀರದು. ಈಗ ದಿವಂಗತ ಟಿ.ಟಿ.ಹೆಗಡೆ ಮೇಲೆ ಮಸಲತ್ತಿನ ಎಫ್‌ಐಆರ್‌ ಆಗಿದೆ. ಹವ್ಯಕರಿಗೇಕೆ ನೈತಿಕ ಸಾತ್ವಿಕ ಸಿಟ್ಟು ಬರುತ್ತಿಲ್ಲ? ಹವ್ಯಕ ಕುಲಘಾತುಕ ರಾಘುನನ್ನ ಆ ಸಮುದಾಯ ಇನ್ನೆಷ್ಟು ದಿನ ಸಹಿಸಿಕೊಳ್ಳುತ್ತದೋ ಎಂಬ ಪ್ರಶ್ನೆ ಅವರನ್ನು ವಿರೋಧಿಸುತ್ತಿರುವ ಹವ್ಯಕರದ್ದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...