Homeಮುಖಪುಟಹಸಿವಿನ ಭಾಷೆ ಕಲಿಸುವ ರಮಝಾನ್

ಹಸಿವಿನ ಭಾಷೆ ಕಲಿಸುವ ರಮಝಾನ್

- Advertisement -
- Advertisement -

ಜಗತ್ತಿಗೆರಗಿದ ಕೊರೋನಾ ವಿಪತ್ತು, ಲಾಕ್ಡೌನ್ ಸಂಕಷ್ಟಗಳ ನಡುವೆ ಈ ಬಾರಿಯ ರಮಝಾನ್ ಆಗಮಿಸಿ, ಇದೀಗ ನಿರ್ಗಮನದ ಹೊಸ್ತಿಲಲ್ಲಿದೆ. ದಿನವಿಡೀ ತೊಟ್ಟು ಹನಿಯನ್ನೂ ಗಂಟಲಿಗಿಳಿಸದೇ ಉಪವಾಸವಿದ್ದು ಹಸಿವಿನ ಆಳ ಅಗಲಗಳನ್ನು ಪರಿಚಯಿಸಿಕೊಳ್ಳುವ ರಮಝಾನ್ ಈ ಬಾರಿ ತುಸು ಹೆಚ್ಚೇ ತೀಕ್ಷ್ಣವಾಗಿದೆ. ಜಗತ್ತಿನ ಮೂಲೆ ಮೂಲೆಯಲ್ಲಿನ ಮನಕಲಕುವ ಹಸಿವಿನ ಚಿತ್ರಣಗಳು ಪ್ರತಿನಿತ್ಯ ಕಣ್ಣ ಮುಂದೆ ಬಂದು ನಿಲ್ಲುತ್ತಲೇ ಇವೆ. ಲಾಕ್ಡೌನ್ ಪ್ರಾರಂಭವಾದ ಆರಂಭದ ದಿನಗಳಲ್ಲಿ ಪ್ರಧಾನಿ ಮೋದಿಯವರ ಸ್ವಕ್ಷೇತ್ರ ವಾರಣಾಸಿಯ ಬುಡಕಟ್ಟು ಜನಾಂಗವೊಂದರ ಪುಟ್ಟ ಮಕ್ಕಳು ಕುರುಚಲು ಹುಲ್ಲನ್ನು ಉಪ್ಪು ಬೆರೆಸಿ ತಿನ್ನುವ ಹೃದಯ ವಿದ್ರಾವಕ ದೃಶ್ಯವನ್ನು ಪತ್ರಕರ್ತರಾದ ಇಸ್ಮತ್ ಅರಾ The wire.inನಲ್ಲಿ ವರದಿ ಮಾಡಿದ್ದರು. ಕಿನ್ಯಾದ ಮೊಂಬಾಸ ಎಂಬಲ್ಲಿ ಹಸಿವು ತಾಳಲಾರದೇ ರಚ್ಚೆ ಹಿಡಿಯುತ್ತಿದ್ದ ತನ್ನ ಮಕ್ಕಳನ್ನು ಸಂತೈಸುವುದಕ್ಕಾಗಿ ವಿಧವೆ ತಾಯಿಯೊಬ್ಬಳು ಮಡಕೆಯೊಳಗೆ ಕಲ್ಲುಗಳನ್ನು ಹಾಕಿ ಬೇಯಿಸುವಂತೆ ನಟಿಸಿದ್ದಳೆಂದರೆ ಹಸಿವಿನ ಕಾಠಿಣ್ಯವೆಷ್ಟಿರಬೇಕು..? ವ್ರತಾಚರಿಸಿದವನಿಗೆ ದಿನದ ಕೊನೆಯಲ್ಲಿ ಏನನ್ನಾದರೂ ಹೊಟ್ಟೆಗಿಳಿಸಬಹುದೆಂಬ ಭರವಸೆಯಿದೆ. ಆದರೆ ಸಂಕಷ್ಟದಲ್ಲಿ ಸಿಲುಕಿ ಉಪವಾಸ ಬಿದ್ದವರ ಪಾಡು, ತುತ್ತು ಕೂಳಿಗೂ ತತ್ವಾರಪಡುವ ದಟ್ಟ ದರಿದ್ರರ ಪಾಡು ಊಹೆಗೂ ನಿಲುಕದ್ದು.

ಹಸಿವು ಮರಣಕ್ಕಿಂತಲೂ ಭಯಾನಕ ಎನ್ನುತ್ತಾರೆ. ಲಾಕ್ಡೌನಿನಿಂದ ಹಸಿವು ತಾಳಲಾರದೇ ಕಾಳಿಂಗ ಸರ್ಪವೊಂದನ್ನು ಬೇಟೆಯಾಡಿ ತಿಂದ ಘಟನೆಯು ಇದನ್ನು ಸಮರ್ಥಿಸುವಂತಿದೆ.

ಜಗತ್ತಿನಲ್ಲಿ ಹಸಿವಿಗಿಂತ ಮಿಗಿಲಾದ ಫಿಲಾಸಫಿ ಇನ್ನೊಂದಿಲ್ಲ. “ನೆರೆಮನೆಯವನು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ನನ್ನವನಲ್ಲ” ಎಂಬ ಪ್ರವಾದಿ ಮುಹಮ್ಮದ್ (ಸ) ರ ವಚನ ಅದೆಷ್ಟು ಸುಂದರ ಮತ್ತು ಅದರ ಹಿಂದಿನ ಕಾಳಜಿ ಅದೆಷ್ಟು ಶ್ರೇಷ್ಠ.. ಇಲ್ಲಿ ಪ್ರವಾದಿವರ್ಯರು ಹಸಿದ ಹೊಟ್ಟೆಯನ್ನಷ್ಟೇ ಉಲ್ಲೇಖಿಸಿದ್ದಾರೆಯೇ ಹೊರತು ಆ ಹೊಟ್ಟೆ ಹೊತ್ತ ಮನುಷ್ಯನ ಜಾತಿ, ಧರ್ಮವನ್ನಲ್ಲ. ಹಾಗಾಗಿ ಹಸಿದವನ ಹಸಿವು ತಣಿಸುವುದು ಮುಸಲ್ಮಾನನಿಗೆ ಧಾರ್ಮಿಕ ಬಾಧ್ಯತೆಯಾಗಿದೆ.

ಇಸ್ಲಾಂ ರಮಝಾನ್ ಉಪವಾಸವನ್ನು ಪ್ರತಿಯೊಬ್ಬರಿಗೂ ಕಡ್ಡಾಯಗೊಳಿಸಿರುವುದು ಹಸಿವಲ್ಲಿರಿಸಿ ದಂಡಿಸುವುದಕ್ಕಲ್ಲ. ಆತ್ಮ ಸಂಸ್ಕರಣೆಯೇ ಉಪವಾಸದ ಮೂಲ ಉದ್ದೇಶ. ಉಪವಾಸ ಕೇವಲ ಆರಾಧನೆಯಷ್ಟೇ ಅಲ್ಲ. ಅದರಾಚೆಗೆ ಕಲಿಯಬೇಕಾದ ಪಾಠಗಳು ಬಹಳಷ್ಟಿವೆ.

ಅನುಭವಕ್ಕಿಂತ ದೊಡ್ಡ ಪಾಠವಿಲ್ಲ. ಸ್ವಯಂ ಉಪವಾಸವಿದ್ದಾಗ ಮಾತ್ರ ಹಸಿವಿನ ಕಾಠಿಣ್ಯವನ್ನರಿಯಲು ಸಾಧ್ಯ. ಹೊಟ್ಟೆಗೆ ಹಿಟ್ಟಿಲ್ಲದ ಬಡವನ ಸಂಕಟವನ್ನು ಓರ್ವ ವ್ರತಧಾರಿ ಚೆನ್ನಾಗಿ ಅರ್ಥೈಸಬಲ್ಲನು. ಆದುದರಿಂದಲೇ ಇಂದು ನಮ್ಮ ದೇಶದಲ್ಲಿ ಹಸಿದವರ ಹಸಿವು ತಣಿಸುವ ಕೆಲಸದಲ್ಲಿ ಮುಸ್ಲಿಂ ಸಮುದಾಯ ದೊಡ್ಡ ಸಂಖ್ಯೆಯಲ್ಲಿ ತೊಡಗಿಸಿಕೊಂಡಿರುವುದು. ಕೈಗೆಟುಕದ ಆಹಾರವನ್ನು ದೂರದಿಂದ ಆಸೆಕಣ್ಣುಗಳಿಂದ ನೋಡುವ ಫಕೀರನ ಆ ಅನುಭವ ವ್ರತ ಅನುಷ್ಠಾನದ ಪ್ರತಿಯೊಬ್ಬನೊಳಗೂ ಉಂಟಾಗುತ್ತದೆ. ಕಣ್ಣ ಮುಂದೆ ಯಥೇಚ್ಛ ಆಹಾರ-ಪಾನೀಯಗಳಿದ್ದರೂ ಉಪವಾಸ ಪಾರಣೆಯ ಹೊತ್ತಾಗದೇ ಒಂದೇ ಒಂದು ಅಗುಳನ್ನೋ/ ಹನಿಯನ್ನೋ ಬಾಯಿಗಿಳಿಸುವಂತಿಲ್ಲ. ಖಾಲಿ ತಟ್ಟೆಯ ಹಸಿವಿನ ಕಾವು ತುಂಬು ಬಟ್ಟಲಿಗೆ ಮುಟ್ಟುವುದೇ ಇಲ್ಲಿ. ಜೊತೆಗೆ ಸಹನೆ ಎಂದರೆ ಏನೆಂಬುವುದನ್ನು ಉಪವಾಸವು ಕಲಿಸಿ ಕೊಡುತ್ತದೆ. ಹಸಿವಿನ ರುಚಿಯುಣ್ಣದ ಶ್ರೀಮಂತ ವರ್ಗವು ನಮ್ಮ ಸಮಾಜದಲ್ಲಿದೆ. ರಮಝಾನಿಗೆ ಬಡವ- ಶ್ರೀಮಂತ, ಗಂಡು- ಹೆಣ್ಣು, ಮಳೆ, ಚಳಿ, ಕರಟಿ ಹೋಗುವ ಬಿಸಿಲೆಂಬ ವ್ಯತ್ಯಾಸವಿಲ್ಲ. ರಮಝಾನ್ ಬಂತೆಂದರೆ ಬಡವನ ಹೊಟ್ಟೆಯಲ್ಲಿನ ಅದೇ ಸಂಕಟವನ್ನು ಶ್ರೀಮಂತನೂ ಆಸ್ವಾದಿಸಲೇಬೇಕಾಗುತ್ತದೆ, ಹಸಿವಿನ ಭಾಷೆಯನ್ನು ಕಲಿಯಬೇಕಾಗುತ್ತದೆ.

ದಿನವಿಡೀ ಉಪವಾಸವಿದ್ದು ಇಫ್ತಾರಿನ ಸಮಯದಲ್ಲಿ ಹೊಟ್ಟೆ ಬಿರಿಯುವಂತೆ ತಿನ್ನುವರೆಂಬ ತಪ್ಪು ಕಲ್ಪನೆ ಕೆಲವು ಮುಸ್ಲಿಮೇತರರಲ್ಲಿದೆ. ಇದು ಹೇಗೆಂದರೆ, ದಿನವಿಡೀ ಅನ್ನ ನೀರಿಲ್ಲದೆ ಬಳಲಿ ಬೆಂಡಾದವನ ಮುಂದೆ ವಿವಿಧ ಭೋಜನ ವಸ್ತುಗಳನ್ನಿಟ್ಟಂತೆ. ಆತ ಏನನ್ನೆಲ್ಲಾ ಹೊಟ್ಟೆಗಿಳಿಸಿಯಾನು? ದಿನವಿಡೀ ಹಸಿವಿನಲ್ಲಿದ್ದ ಕಾರಣಕ್ಕೆ ಬಡ್ಡಿ ಸೇರಿಸಿ ತಿನ್ನಲು ಆತನ ಬರಿ ಹೊಟ್ಟೆಗೆ ಸಾಧ್ಯವಾದೀತೇ? ಖಂಡಿತಾ ಇಲ್ಲ. ಬಡವನೊಡಲ ಈ ಅನುಭವವನ್ನು ವ್ರತಧಾರಿಯು ಇಫ್ತಾರಿನ ಸಮಯದಲ್ಲಿ ಅರಿತುಕೊಳ್ಳುತ್ತಾನೆ.

‘ತಿಬ್ಬುನ್ನಬಿ’ ಎಂಬ ಪ್ರವಾದಿ ಚಿಕಿತ್ಸೆಯಲ್ಲಿ ಈ ರೀತಿ ಉಲ್ಲೇಖಿಸಲಾಗಿದೆ, “ಮನುಷ್ಯರಿಗೆ ಆತನ ಹೊಟ್ಟೆಗಿಂತ ಕೆಟ್ಟ ಪಾತ್ರೆ ಬೇರೊಂದಿಲ್ಲ. ಹಾಗಾಗಿ ಹೊಟ್ಟೆಯನ್ನು ಮೂರು ಭಾಗಗಳನ್ನಾಗಿ ಮಾಡಿ, ಅದರಲ್ಲಿ ಒಂದಂಶ ನೀರಿಗೂ, ಒಂದಂಶ ವಾಯುವಿಗೂ, ಒಂದಂಶ ಆಹಾರಕ್ಕೂ ಮೀಸಲಿಡಬೇಕು.” ಆರೋಗ್ಯದ ದೃಷ್ಟಿಯಿಂದಲೂ ಮಿತಾಹಾರ ಒಳ್ಳೆಯದು ಎಂಬುವುದನ್ನು ಇಲ್ಲಿ ಮನಗಾಣಬಹುದು. ಒಟ್ಟಿನಲ್ಲಿ ಉಪವಾಸವೆಂಬುದು ಹೃದಯದ ಕಣ್ಣನ್ನು ತೆರೆಸುವ ಅಸ್ತ್ರ.

ಮನುಷ್ಯ ಸಂಬಂಧವನ್ನು ಗಟ್ಟಿಗೊಳಿಸುವುದು ರಮಝಾನ್‍ನ ಇನ್ನೊಂದು ಅತೀ ಮಹತ್ವದ ಸಂದೇಶವಾಗಿದೆ. ರಮಝಾನ್ ಎಂಬ ಅರಬೀ ಪದಕ್ಕೆ ಸುಟ್ಟು ಹಾಕು ಎಂಬ ಅರ್ಥವಿದೆ. ಕೆಡುಕುಗಳನ್ನು ಸುಟ್ಟು ಹಾಕುವುದು ರಮಝಾನ್‍ನ ಮೂಲಭೂತ ಉದ್ದೇಶಗಳಲ್ಲೊಂದಾಗಿದೆ.

ರಮಝಾನ್‍ನಲ್ಲಿ ಮನುಷ್ಯರು ಪರಸ್ಪರರ ಮೇಲೆ ಅರಿತೋ, ಅರಿಯದೆಯೋ ಮಾಡಿದ ಅಕ್ರಮಗಳನ್ನು ಮಾಫ್ ಮಾಡಿಸಬೇಕಾದುದು ಅತೀ ಅಗತ್ಯ. ಆ ಮೂಲಕ ದ್ವೇಷ, ಈಷ್ರ್ಯೆಗಳನ್ನು ಸುಟ್ಟು ಹಾಕಿ ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ಮಹೋನ್ನತ ಉದ್ದೇಶ ರಮಝಾನಿಗಿದೆ.

ಎಳವೆಯಲ್ಲಿ ರಮಝಾನ್ ಎಂದರೆ ನಮಗೆ ಎಲ್ಲಿಲ್ಲದ ಸಂಭ್ರಮ, ಸಡಗರ. ಆ ದಿನಗಳಿಗೆಂದೇ ವಿವಿಧ ಅಡುಗೆ ಸಾಮಗ್ರಿಗಳು, ಹಣ್ಣು ಹಂಪಲುಗಳು ಮನೆ ಸೇರುತ್ತಿದ್ದವು. ಆಗೆಲ್ಲಾ ನಾನು ಕಲ್ಲಂಗಡಿ ಹಣ್ಣನ್ನು, ಕಡ್ಲೆ ಬೇಳೆ ಮನ್ನಿಯನ್ನು ಉಪವಾಸ ಅಂದುಕೊಳ್ಳುತ್ತಿದ್ದೆ. ಹೊಟ್ಟೆಗಿಲ್ಲದ ಮಕ್ಕಳಿಗೆ ಉಪವಾಸವೆಂದರೆ ವಿಶೇಷ ಅನ್ನಿಸಲಾರದು. ‘ಹಸಿವು’ ಜಗತ್ತಿನಲ್ಲಿ ಹೊಸತಾಗಿ ಹುಟ್ಟಿಕೊಂಡದ್ದೇನೂ ಅಲ್ಲ. ನಮ್ಮ ದೇಶದಲ್ಲಿ ಕೊರೊನಾ ಇದನ್ನು ಮತ್ತೊಮ್ಮೆ ತೆರೆಯ ಮೇಲೆ ಎಳೆದು ತಂದಿದೆ ಅಷ್ಟೇ. ಹಸಿವಿನ ಕಾಠಿಣ್ಯವರಿತು ಸುತ್ತ ಮುತ್ತಲ ಸಹಮಾನವರ ಹಸಿವು ತಣಿಸುವ ಪ್ರಯತ್ನಗಳು ನಮ್ಮಿಂದಾಗದಿದ್ದರೆ ನಮ್ಮ ಉಪವಾಸದ ಉದ್ದೇಶ ಪ್ರಶ್ನಾರ್ಹವಾಗಿಯೇ ಉಳಿಯಬಲ್ಲುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....