Homeಮುಖಪುಟಹಸಿವಿನ ಭಾಷೆ ಕಲಿಸುವ ರಮಝಾನ್

ಹಸಿವಿನ ಭಾಷೆ ಕಲಿಸುವ ರಮಝಾನ್

- Advertisement -
- Advertisement -

ಜಗತ್ತಿಗೆರಗಿದ ಕೊರೋನಾ ವಿಪತ್ತು, ಲಾಕ್ಡೌನ್ ಸಂಕಷ್ಟಗಳ ನಡುವೆ ಈ ಬಾರಿಯ ರಮಝಾನ್ ಆಗಮಿಸಿ, ಇದೀಗ ನಿರ್ಗಮನದ ಹೊಸ್ತಿಲಲ್ಲಿದೆ. ದಿನವಿಡೀ ತೊಟ್ಟು ಹನಿಯನ್ನೂ ಗಂಟಲಿಗಿಳಿಸದೇ ಉಪವಾಸವಿದ್ದು ಹಸಿವಿನ ಆಳ ಅಗಲಗಳನ್ನು ಪರಿಚಯಿಸಿಕೊಳ್ಳುವ ರಮಝಾನ್ ಈ ಬಾರಿ ತುಸು ಹೆಚ್ಚೇ ತೀಕ್ಷ್ಣವಾಗಿದೆ. ಜಗತ್ತಿನ ಮೂಲೆ ಮೂಲೆಯಲ್ಲಿನ ಮನಕಲಕುವ ಹಸಿವಿನ ಚಿತ್ರಣಗಳು ಪ್ರತಿನಿತ್ಯ ಕಣ್ಣ ಮುಂದೆ ಬಂದು ನಿಲ್ಲುತ್ತಲೇ ಇವೆ. ಲಾಕ್ಡೌನ್ ಪ್ರಾರಂಭವಾದ ಆರಂಭದ ದಿನಗಳಲ್ಲಿ ಪ್ರಧಾನಿ ಮೋದಿಯವರ ಸ್ವಕ್ಷೇತ್ರ ವಾರಣಾಸಿಯ ಬುಡಕಟ್ಟು ಜನಾಂಗವೊಂದರ ಪುಟ್ಟ ಮಕ್ಕಳು ಕುರುಚಲು ಹುಲ್ಲನ್ನು ಉಪ್ಪು ಬೆರೆಸಿ ತಿನ್ನುವ ಹೃದಯ ವಿದ್ರಾವಕ ದೃಶ್ಯವನ್ನು ಪತ್ರಕರ್ತರಾದ ಇಸ್ಮತ್ ಅರಾ The wire.inನಲ್ಲಿ ವರದಿ ಮಾಡಿದ್ದರು. ಕಿನ್ಯಾದ ಮೊಂಬಾಸ ಎಂಬಲ್ಲಿ ಹಸಿವು ತಾಳಲಾರದೇ ರಚ್ಚೆ ಹಿಡಿಯುತ್ತಿದ್ದ ತನ್ನ ಮಕ್ಕಳನ್ನು ಸಂತೈಸುವುದಕ್ಕಾಗಿ ವಿಧವೆ ತಾಯಿಯೊಬ್ಬಳು ಮಡಕೆಯೊಳಗೆ ಕಲ್ಲುಗಳನ್ನು ಹಾಕಿ ಬೇಯಿಸುವಂತೆ ನಟಿಸಿದ್ದಳೆಂದರೆ ಹಸಿವಿನ ಕಾಠಿಣ್ಯವೆಷ್ಟಿರಬೇಕು..? ವ್ರತಾಚರಿಸಿದವನಿಗೆ ದಿನದ ಕೊನೆಯಲ್ಲಿ ಏನನ್ನಾದರೂ ಹೊಟ್ಟೆಗಿಳಿಸಬಹುದೆಂಬ ಭರವಸೆಯಿದೆ. ಆದರೆ ಸಂಕಷ್ಟದಲ್ಲಿ ಸಿಲುಕಿ ಉಪವಾಸ ಬಿದ್ದವರ ಪಾಡು, ತುತ್ತು ಕೂಳಿಗೂ ತತ್ವಾರಪಡುವ ದಟ್ಟ ದರಿದ್ರರ ಪಾಡು ಊಹೆಗೂ ನಿಲುಕದ್ದು.

ಹಸಿವು ಮರಣಕ್ಕಿಂತಲೂ ಭಯಾನಕ ಎನ್ನುತ್ತಾರೆ. ಲಾಕ್ಡೌನಿನಿಂದ ಹಸಿವು ತಾಳಲಾರದೇ ಕಾಳಿಂಗ ಸರ್ಪವೊಂದನ್ನು ಬೇಟೆಯಾಡಿ ತಿಂದ ಘಟನೆಯು ಇದನ್ನು ಸಮರ್ಥಿಸುವಂತಿದೆ.

ಜಗತ್ತಿನಲ್ಲಿ ಹಸಿವಿಗಿಂತ ಮಿಗಿಲಾದ ಫಿಲಾಸಫಿ ಇನ್ನೊಂದಿಲ್ಲ. “ನೆರೆಮನೆಯವನು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ನನ್ನವನಲ್ಲ” ಎಂಬ ಪ್ರವಾದಿ ಮುಹಮ್ಮದ್ (ಸ) ರ ವಚನ ಅದೆಷ್ಟು ಸುಂದರ ಮತ್ತು ಅದರ ಹಿಂದಿನ ಕಾಳಜಿ ಅದೆಷ್ಟು ಶ್ರೇಷ್ಠ.. ಇಲ್ಲಿ ಪ್ರವಾದಿವರ್ಯರು ಹಸಿದ ಹೊಟ್ಟೆಯನ್ನಷ್ಟೇ ಉಲ್ಲೇಖಿಸಿದ್ದಾರೆಯೇ ಹೊರತು ಆ ಹೊಟ್ಟೆ ಹೊತ್ತ ಮನುಷ್ಯನ ಜಾತಿ, ಧರ್ಮವನ್ನಲ್ಲ. ಹಾಗಾಗಿ ಹಸಿದವನ ಹಸಿವು ತಣಿಸುವುದು ಮುಸಲ್ಮಾನನಿಗೆ ಧಾರ್ಮಿಕ ಬಾಧ್ಯತೆಯಾಗಿದೆ.

ಇಸ್ಲಾಂ ರಮಝಾನ್ ಉಪವಾಸವನ್ನು ಪ್ರತಿಯೊಬ್ಬರಿಗೂ ಕಡ್ಡಾಯಗೊಳಿಸಿರುವುದು ಹಸಿವಲ್ಲಿರಿಸಿ ದಂಡಿಸುವುದಕ್ಕಲ್ಲ. ಆತ್ಮ ಸಂಸ್ಕರಣೆಯೇ ಉಪವಾಸದ ಮೂಲ ಉದ್ದೇಶ. ಉಪವಾಸ ಕೇವಲ ಆರಾಧನೆಯಷ್ಟೇ ಅಲ್ಲ. ಅದರಾಚೆಗೆ ಕಲಿಯಬೇಕಾದ ಪಾಠಗಳು ಬಹಳಷ್ಟಿವೆ.

ಅನುಭವಕ್ಕಿಂತ ದೊಡ್ಡ ಪಾಠವಿಲ್ಲ. ಸ್ವಯಂ ಉಪವಾಸವಿದ್ದಾಗ ಮಾತ್ರ ಹಸಿವಿನ ಕಾಠಿಣ್ಯವನ್ನರಿಯಲು ಸಾಧ್ಯ. ಹೊಟ್ಟೆಗೆ ಹಿಟ್ಟಿಲ್ಲದ ಬಡವನ ಸಂಕಟವನ್ನು ಓರ್ವ ವ್ರತಧಾರಿ ಚೆನ್ನಾಗಿ ಅರ್ಥೈಸಬಲ್ಲನು. ಆದುದರಿಂದಲೇ ಇಂದು ನಮ್ಮ ದೇಶದಲ್ಲಿ ಹಸಿದವರ ಹಸಿವು ತಣಿಸುವ ಕೆಲಸದಲ್ಲಿ ಮುಸ್ಲಿಂ ಸಮುದಾಯ ದೊಡ್ಡ ಸಂಖ್ಯೆಯಲ್ಲಿ ತೊಡಗಿಸಿಕೊಂಡಿರುವುದು. ಕೈಗೆಟುಕದ ಆಹಾರವನ್ನು ದೂರದಿಂದ ಆಸೆಕಣ್ಣುಗಳಿಂದ ನೋಡುವ ಫಕೀರನ ಆ ಅನುಭವ ವ್ರತ ಅನುಷ್ಠಾನದ ಪ್ರತಿಯೊಬ್ಬನೊಳಗೂ ಉಂಟಾಗುತ್ತದೆ. ಕಣ್ಣ ಮುಂದೆ ಯಥೇಚ್ಛ ಆಹಾರ-ಪಾನೀಯಗಳಿದ್ದರೂ ಉಪವಾಸ ಪಾರಣೆಯ ಹೊತ್ತಾಗದೇ ಒಂದೇ ಒಂದು ಅಗುಳನ್ನೋ/ ಹನಿಯನ್ನೋ ಬಾಯಿಗಿಳಿಸುವಂತಿಲ್ಲ. ಖಾಲಿ ತಟ್ಟೆಯ ಹಸಿವಿನ ಕಾವು ತುಂಬು ಬಟ್ಟಲಿಗೆ ಮುಟ್ಟುವುದೇ ಇಲ್ಲಿ. ಜೊತೆಗೆ ಸಹನೆ ಎಂದರೆ ಏನೆಂಬುವುದನ್ನು ಉಪವಾಸವು ಕಲಿಸಿ ಕೊಡುತ್ತದೆ. ಹಸಿವಿನ ರುಚಿಯುಣ್ಣದ ಶ್ರೀಮಂತ ವರ್ಗವು ನಮ್ಮ ಸಮಾಜದಲ್ಲಿದೆ. ರಮಝಾನಿಗೆ ಬಡವ- ಶ್ರೀಮಂತ, ಗಂಡು- ಹೆಣ್ಣು, ಮಳೆ, ಚಳಿ, ಕರಟಿ ಹೋಗುವ ಬಿಸಿಲೆಂಬ ವ್ಯತ್ಯಾಸವಿಲ್ಲ. ರಮಝಾನ್ ಬಂತೆಂದರೆ ಬಡವನ ಹೊಟ್ಟೆಯಲ್ಲಿನ ಅದೇ ಸಂಕಟವನ್ನು ಶ್ರೀಮಂತನೂ ಆಸ್ವಾದಿಸಲೇಬೇಕಾಗುತ್ತದೆ, ಹಸಿವಿನ ಭಾಷೆಯನ್ನು ಕಲಿಯಬೇಕಾಗುತ್ತದೆ.

ದಿನವಿಡೀ ಉಪವಾಸವಿದ್ದು ಇಫ್ತಾರಿನ ಸಮಯದಲ್ಲಿ ಹೊಟ್ಟೆ ಬಿರಿಯುವಂತೆ ತಿನ್ನುವರೆಂಬ ತಪ್ಪು ಕಲ್ಪನೆ ಕೆಲವು ಮುಸ್ಲಿಮೇತರರಲ್ಲಿದೆ. ಇದು ಹೇಗೆಂದರೆ, ದಿನವಿಡೀ ಅನ್ನ ನೀರಿಲ್ಲದೆ ಬಳಲಿ ಬೆಂಡಾದವನ ಮುಂದೆ ವಿವಿಧ ಭೋಜನ ವಸ್ತುಗಳನ್ನಿಟ್ಟಂತೆ. ಆತ ಏನನ್ನೆಲ್ಲಾ ಹೊಟ್ಟೆಗಿಳಿಸಿಯಾನು? ದಿನವಿಡೀ ಹಸಿವಿನಲ್ಲಿದ್ದ ಕಾರಣಕ್ಕೆ ಬಡ್ಡಿ ಸೇರಿಸಿ ತಿನ್ನಲು ಆತನ ಬರಿ ಹೊಟ್ಟೆಗೆ ಸಾಧ್ಯವಾದೀತೇ? ಖಂಡಿತಾ ಇಲ್ಲ. ಬಡವನೊಡಲ ಈ ಅನುಭವವನ್ನು ವ್ರತಧಾರಿಯು ಇಫ್ತಾರಿನ ಸಮಯದಲ್ಲಿ ಅರಿತುಕೊಳ್ಳುತ್ತಾನೆ.

‘ತಿಬ್ಬುನ್ನಬಿ’ ಎಂಬ ಪ್ರವಾದಿ ಚಿಕಿತ್ಸೆಯಲ್ಲಿ ಈ ರೀತಿ ಉಲ್ಲೇಖಿಸಲಾಗಿದೆ, “ಮನುಷ್ಯರಿಗೆ ಆತನ ಹೊಟ್ಟೆಗಿಂತ ಕೆಟ್ಟ ಪಾತ್ರೆ ಬೇರೊಂದಿಲ್ಲ. ಹಾಗಾಗಿ ಹೊಟ್ಟೆಯನ್ನು ಮೂರು ಭಾಗಗಳನ್ನಾಗಿ ಮಾಡಿ, ಅದರಲ್ಲಿ ಒಂದಂಶ ನೀರಿಗೂ, ಒಂದಂಶ ವಾಯುವಿಗೂ, ಒಂದಂಶ ಆಹಾರಕ್ಕೂ ಮೀಸಲಿಡಬೇಕು.” ಆರೋಗ್ಯದ ದೃಷ್ಟಿಯಿಂದಲೂ ಮಿತಾಹಾರ ಒಳ್ಳೆಯದು ಎಂಬುವುದನ್ನು ಇಲ್ಲಿ ಮನಗಾಣಬಹುದು. ಒಟ್ಟಿನಲ್ಲಿ ಉಪವಾಸವೆಂಬುದು ಹೃದಯದ ಕಣ್ಣನ್ನು ತೆರೆಸುವ ಅಸ್ತ್ರ.

ಮನುಷ್ಯ ಸಂಬಂಧವನ್ನು ಗಟ್ಟಿಗೊಳಿಸುವುದು ರಮಝಾನ್‍ನ ಇನ್ನೊಂದು ಅತೀ ಮಹತ್ವದ ಸಂದೇಶವಾಗಿದೆ. ರಮಝಾನ್ ಎಂಬ ಅರಬೀ ಪದಕ್ಕೆ ಸುಟ್ಟು ಹಾಕು ಎಂಬ ಅರ್ಥವಿದೆ. ಕೆಡುಕುಗಳನ್ನು ಸುಟ್ಟು ಹಾಕುವುದು ರಮಝಾನ್‍ನ ಮೂಲಭೂತ ಉದ್ದೇಶಗಳಲ್ಲೊಂದಾಗಿದೆ.

ರಮಝಾನ್‍ನಲ್ಲಿ ಮನುಷ್ಯರು ಪರಸ್ಪರರ ಮೇಲೆ ಅರಿತೋ, ಅರಿಯದೆಯೋ ಮಾಡಿದ ಅಕ್ರಮಗಳನ್ನು ಮಾಫ್ ಮಾಡಿಸಬೇಕಾದುದು ಅತೀ ಅಗತ್ಯ. ಆ ಮೂಲಕ ದ್ವೇಷ, ಈಷ್ರ್ಯೆಗಳನ್ನು ಸುಟ್ಟು ಹಾಕಿ ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ಮಹೋನ್ನತ ಉದ್ದೇಶ ರಮಝಾನಿಗಿದೆ.

ಎಳವೆಯಲ್ಲಿ ರಮಝಾನ್ ಎಂದರೆ ನಮಗೆ ಎಲ್ಲಿಲ್ಲದ ಸಂಭ್ರಮ, ಸಡಗರ. ಆ ದಿನಗಳಿಗೆಂದೇ ವಿವಿಧ ಅಡುಗೆ ಸಾಮಗ್ರಿಗಳು, ಹಣ್ಣು ಹಂಪಲುಗಳು ಮನೆ ಸೇರುತ್ತಿದ್ದವು. ಆಗೆಲ್ಲಾ ನಾನು ಕಲ್ಲಂಗಡಿ ಹಣ್ಣನ್ನು, ಕಡ್ಲೆ ಬೇಳೆ ಮನ್ನಿಯನ್ನು ಉಪವಾಸ ಅಂದುಕೊಳ್ಳುತ್ತಿದ್ದೆ. ಹೊಟ್ಟೆಗಿಲ್ಲದ ಮಕ್ಕಳಿಗೆ ಉಪವಾಸವೆಂದರೆ ವಿಶೇಷ ಅನ್ನಿಸಲಾರದು. ‘ಹಸಿವು’ ಜಗತ್ತಿನಲ್ಲಿ ಹೊಸತಾಗಿ ಹುಟ್ಟಿಕೊಂಡದ್ದೇನೂ ಅಲ್ಲ. ನಮ್ಮ ದೇಶದಲ್ಲಿ ಕೊರೊನಾ ಇದನ್ನು ಮತ್ತೊಮ್ಮೆ ತೆರೆಯ ಮೇಲೆ ಎಳೆದು ತಂದಿದೆ ಅಷ್ಟೇ. ಹಸಿವಿನ ಕಾಠಿಣ್ಯವರಿತು ಸುತ್ತ ಮುತ್ತಲ ಸಹಮಾನವರ ಹಸಿವು ತಣಿಸುವ ಪ್ರಯತ್ನಗಳು ನಮ್ಮಿಂದಾಗದಿದ್ದರೆ ನಮ್ಮ ಉಪವಾಸದ ಉದ್ದೇಶ ಪ್ರಶ್ನಾರ್ಹವಾಗಿಯೇ ಉಳಿಯಬಲ್ಲುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...