Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆಮನುಕುಲಕ್ಕೆ ವೇದ್ಯ, ಬದುಕಿಗೆ ನೈವೇದ್ಯ ಠಾಗೋರ್‍ ಅವರ ಗೀತಾಂಜಲಿ

ಮನುಕುಲಕ್ಕೆ ವೇದ್ಯ, ಬದುಕಿಗೆ ನೈವೇದ್ಯ ಠಾಗೋರ್‍ ಅವರ ಗೀತಾಂಜಲಿ

- Advertisement -
- Advertisement -

ಸಂಕಟದಲಿ ಸಂರಕ್ಷಿಸು ಎಂಬ ಪ್ರಾರ್ಥನೆ ಇಲ್ಲ
ಸಂಕಟದಲಿ ಭಯವಿರದಿರೆ ಸಾಕು, ಹೆಚ್ಚಿನದೇನೂ ಬೇಕಿಲ್ಲ

ಜನರ ಭಯ ಮತ್ತು ಆಸೆಗಳೆಂಬ ಮೂಲ ಪ್ರವೃತ್ತಿಯೇ ಪುರೋಹಿತಶಾಹಿಯ ಬಂಡವಾಳ. ದೈವಿಕ ಪ್ರತಿಮೆಯನ್ನು ಮುಂದಿಟ್ಟುಕೊಂಡು ಭಕ್ತ ಮತ್ತು ಭಗವಂತರಿಬ್ಬರೂ ಸಂಧಿಸದ ಹಾಗೆ ನೋಡಿಕೊಳ್ಳುವ ಪುರೋಹಿತವರ್ಗವನ್ನು ದಾಟಿ ತಮ್ಮ ಅಂತರಂಗದಲ್ಲಿಯೇ ಭಗವಂತನೆಂಬ ಪೂರ್ಣಾಸ್ತಿತ್ವದ ಚೈತನ್ಯವನ್ನು ಬಿಂಬ ಪ್ರತಿಬಿಂಬದಂತೆ ನೋಡುವ ಭಕ್ತಿಯೇ ರವೀಂದ್ರನಾಥ ಠಾಗೋರರ ಗೀತಾಂಜಲಿ.

ಇದರಲ್ಲಿನ 103 ಕವನಗಳಲ್ಲಿ ಪ್ರಧಾನವಾಗಿ ಕಾಣುವುದು ಭಾವುಕತೆಯೇ. ಸಾಮಾನ್ಯವಾಗಿ ಕಾವ್ಯವೆಂದ ಕೂಡಲೇ ರೂಪಕಗಳು ಮುನ್ನೆಲೆಗೆ ಬರುವುದಾದರೂ ಗೀತಾಂಜಲಿಯಲ್ಲಿ ಅವು ಸರಳಗೊಳ್ಳುವವು. ಪ್ರಕೃತಿಯ ರೂಪಕಗಳನ್ನೇ ಬಳಸಿದರೂ ಅವು ಕಠಿಣವಾಗಿ ಸಾಂಕೇತಿಕವಾಗಿರುವ ಬದಲು ನೇರವಾಗಿ ಎದೆಗೆ ತಟ್ಟುವವು. ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿರುವ ಡಬ್ಲ್ಯು ಬಿ ಯೀಟ್ಸ್ “ಠಾಗೂರರು ಭಾರತೀಯ ಸಂಸ್ಕೃತಿಯಂತೆ ಅಂತರಾತ್ಮವನ್ನು ಶೋಧಿಸಿಕೊಳ್ಳುವುದರಲ್ಲಿ ತೃಪ್ತಿಪಡುತ್ತಾರೆ. ಅಂತರಂಗದ ಅಧಿನಾಯಕನ ಪ್ರೇರಣೆಗೆ ತಮ್ಮನ್ನು ಸಮರ್ಪಿಸಿಕೊಂಡುಬಿಡುತ್ತಾರೆ. ಸರಳ, ಸುಂದರ ಮತ್ತು ಮುಗ್ಧತೆ ಇದರಲ್ಲಿದೆ” ಎನ್ನುತ್ತಾರೆ. ಠಾಗೋರರು ಬಾಲ್ಯದಿಂದಲೂ ಕಾವ್ಯಕ್ಕೊಲಿದು ಪ್ರಕೃತಿಯಲ್ಲಿ ಭಾವುಕತೆಯಿಂದ ತನ್ಮಯರಾಗುತ್ತಿದ್ದವರು. ಸಾಂಪ್ರದಾಯಿಕವಾಗಿ ಮನೆಯಲ್ಲಿ ಧಾರ್ಮಿಕತೆಯು ಜೀವಂತವಾಗಿದ್ದರೂ ತಂದೆ ಮತ್ತು ಅಣ್ಣ ಹಾಗೂ ಇತರರಿಗಿದ್ದ ಇಂಗ್ಲೀಷ್ ಸಾಹಿತ್ಯ ಮತ್ತು ವಿಶ್ವ ಸಾಹಿತ್ಯದ ಸಂಗವಿತ್ತು. ಅದರಿಂದಾಗಿ ಅವರ ಧಾರ್ಮಿಕತೆಯು ಸಾಂಪ್ರದಾಯಿಕವಾಗಿ ಸಂಕುಚಿತವಾಗಿರದೇ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಯತ್ನಿಸುತ್ತಿತ್ತು. ಅಷ್ಟೇ ಅಲ್ಲದೇ ನಾಮ, ರೂಪಗಳನ್ನು ಮೀರಿದ ಮತ್ತು ಪುರೋಹಿತಶಾಹಿಯ ಕಂದಾಚಾರಗಳನ್ನು ಧಿಕ್ಕರಿಸಿದ್ದ ಬ್ರಹ್ಮಸಮಾಜದ ಪ್ರಭಾವವೂ ಅವರಿಗಿತ್ತು.

ಮಕ್ಕಳಿಗೆ ಸಾಂಪ್ರದಾಯಿಕ ಶಿಕ್ಷಣವನ್ನೇ ವಿರೋಧಿಸಿ ಕೋಣೆಗಳ ಗೋಡೆಗಳ ನಡುವೆ ಶಿಕ್ಷೆ ಮತ್ತು ಶಿಕ್ಷಣ ಎಂಬ ಕಟ್ಟುಪಾಡಿನ ಕಲಿಕೆಯನ್ನು ಬಯಲಿಗೆ, ಮರ ಬಳ್ಳಿಗಳ ಕೆಳಗೆ, ಗಿಡ ಹೂಗಳ ನಡುವೆ, ಮಣ್ಣು ಹುಲ್ಲು ಕಲ್ಲುಗಳ ಮೇಲೆ ತಂದವರು. ಕಂಠಪಾಠದ ಕಠಿಣ ಶಿಕ್ಷಣದ ಶೃಂಖಲೆಗಳಿಂದ ಮಕ್ಕಳನ್ನು ಬಿಡಿಸಿ, ಹಾಡು, ಕತೆ, ಕುಣಿತ, ಚಿತ್ರ ಬಿಡಿಸುವುದಕ್ಕೆ ಅನುವು ಮಾಡಿದವರು. ಅದೇ ಮುಕ್ತ ಮನೋಭಾವ ಮತ್ತು ವೈಶಾಲ್ಯದ ಧೋರಣೆ ಅವರು ಪಡೆದ ಧಾರ್ಮಿಕ ತಿಳುವಳಿಕೆಗೂ ಅನ್ವಯವಾಗುತ್ತದೆ. ತಮ್ಮ ಧಾರ್ಮಿಕತೆಯನ್ನು ಮುಕ್ತ ಆಧ್ಯಾತ್ಮಿಕತೆಯನ್ನಾಗಿ ಪ್ರಕಟಿಸಿದ ಠಾಗೋರ್ ಸಂಪ್ರದಾಯವಾಗಿ ಮೂರ್ತಿಪೂಜಕನಾಗಿ ವರ್ತಿಸದೇ ಹಾಡುಗಳಿಂದ ನಮಿಸಿದ್ದೇ ಈ ಗೀತಾಂಜಲಿ.

ಮೂರ್ತಿಭಂಜನವು ಭಾರತೀಯ ಧಾರ್ಮಿಕತೆಗೇನೂ ಹೊಸತಲ್ಲ. ಉಪನಿಷತ್ತುಗಳಲ್ಲಿಯೇ ಸಾಂಪ್ರದಾಯಕ ಭಕ್ತಿ ಮತ್ತು ನಿವೇದನೆಯನ್ನು ನಿರಾಕರಿಸಿಯಾಗಿತ್ತು. ದೈವತ್ವವನ್ನು ತನ್ನಲ್ಲೇ ಕಾಣುವ ಅಥವಾ ತನ್ನನ್ನು ದೈವತ್ವದಲ್ಲಿ ಕಾಣುವ ಅದ್ವೈತ ತತ್ವವು ಗಟ್ಟಿಗೊಳ್ಳತೊಡಗಿತ್ತು.

ತಾನು ಎಂಬುದು ವ್ಯಕ್ತಿಗತವಾದ ಅಸ್ತಿತ್ವ ಮತ್ತು ‘ಅದು’ ಎನ್ನುವುದು ಮಹಾ ಅಸ್ತಿತ್ವವೆಂಬ ಪರಿಕಲ್ಪನೆಯಲ್ಲಿ ತನ್ನನ್ನೂ ಮತ್ತು ‘ಅದನ್ನೂ’ ಸಂಧಿಸುವ ‘ಸೋಹಂ’ ಎನ್ನುವ ಭಾವಪ್ರಯೋಗಗಳು ನಡೆದಿದ್ದವು. ಆದರೆ ಗೀತಾಂಜಲಿಯಲ್ಲಿ ಠಾಗೂರರು ಎರಡು ಹೆಜ್ಜೆ ಹಿಂದೆ ಸರಿಯುತ್ತಾರೆ. ನಾನೇ ಅದು, ಅದೇ ನಾನು ಎಂಬ ಭಾವದಲ್ಲಿ ತೋಡಿಕೊಳ್ಳಲಾಗದು. ಮಾನುಷವಾದ ದುಃಖ, ಸಂಕಟ, ನೋವುಗಳನ್ನು ನಿವೇದಿಸಿಕೊಳ್ಳಲಾಗದು. ಅಹಂಬ್ರಹ್ಮಾಸ್ಮಿ ಎಂದು ನಾನೇ ಭಗವಂತನಾಗಿ ನನಗೆ ದುಃಖವಾಗುವುದಿಲ್ಲ, ನೋವಾಗುವುದಿಲ್ಲ ಎಂದು ಆತ್ಮವಂಚನೆ ಮಾಡಿಕೊಳ್ಳಲಾಗದು. ಗೊಂದಲಗಳಾಗುತ್ತವೆ, ತಳಮಳಗಳಾಗುತ್ತವೆ, ಭಯವಾಗುತ್ತದೆ, ಬಯಕೆಯುಂಟಾಗುತ್ತದೆ, ದಿಕ್ಕೆಡುವಂತಾಗುತ್ತದೆ; ಈ ಬಗೆಯ ಹಲವು ಮಾನುಷ ಭಾವಗಳು ಹುಟ್ಟಿದ್ದನ್ನು ಒಪ್ಪದೇ ಇದ್ದರೆ ಹೇಗೆ? ತಾನೊಬ್ಬ ಮೂರ್ಖನೆಂದು ಅರಿವಾಗದಿದ್ದರೆ ಹೇಗೆ? ಅದಕ್ಕೆ ತಮ್ಮ ಅಂತರಂಗದಲ್ಲಿನ ಮಹಾಚೈತನ್ಯಕ್ಕೆ ಅಥವಾ ಮಹಾಅಸ್ತಿತ್ವದ ಬಲಕ್ಕೆ ಅಧಿನಾಯಕನೆಂದು ಕರೆದು, ತಮ್ಮ ಮಾನುಷ ಸಹಜ ಮನೋಭಾವವನ್ನು ವಿನಯಗೊಳಿಸಿಕೊಂಡು ತಮ್ಮ ದೈನೇಸಿಯನ್ನು, ದೌರ್ಬಲ್ಯಗಳನ್ನು, ಆಶಯಗಳನ್ನು ಪ್ರದರ್ಶಿಸಿಕೊಳ್ಳುತ್ತಾ ನಿವೇದಿಸಿಕೊಳ್ಳುತ್ತಾರೆ. ಯಾವ ಪೌರಾಣಿಕ ದೇವರ ಪ್ರತಿಮೆಗಳು ಇಲ್ಲಿಲ್ಲ. ಆದರೆ ಗೀತಾಂಜಲಿ ಸಂಪೂರ್ಣ ಆಸ್ತಿಕ ಭಾವ ಮಂಜರಿಯೇ. ಹಾಗಾಗಿ ವಿಶ್ವದ ಯಾವುದೇ ದೇಶ ಮತ್ತು ಕಾಲದವರು ಗೀತಾಂಜಲಿಯಲ್ಲಿ ವಿಶ್ವಸ್ಥವಾಗಿರುವ ದೈವೀ ಪ್ರತಿಮೆಯಲ್ಲಿ ತಮ್ಮ ದೇವರನ್ನು ಕಂಡುಕೊಳ್ಳಬಹುದು. ಯೆಹೂದಿಗಳಾಗಲಿ, ಮುಸಲ್ಮಾನರು, ಕ್ರೈಸ್ತರು, ಹಿಂದೂಗಳೂ; ದೇವರನ್ನು ಒಪ್ಪುವ ಯಾವುದೇ ಧರ್ಮೀಯರು ತಮ್ಮ ತಮ್ಮ ದೇವರನ್ನು ಅಲ್ಲಿ ಕಾಣಬಹುದು. ಗೀತಾಂಜಲಿ ದೇವರ ಸ್ತುತಿಯಲ್ಲ. ಭಕ್ತನ ನಿವೇದನೆ. ಭಕ್ತನು ಮನುಷ್ಯನಾಗಿರುವ ಕಾರಣದಿಂದ, ಮಾನುಷಾನುಭವಗಳು ದೇಶ ಕಾಲ ಮೀರಿ ಸಹಜ ಮತ್ತು ಸಾಮಾನ್ಯವಾಗಿರುವುದರಿಂದ ಗೀತಾಂಜಲಿಯ ಹಾಡಿನ ನಮಸ್ಕಾರಗಳು ಯಾರ ಭಕ್ತಿಯಾಗಿಯೂ ಪ್ರಕಟಗೊಳ್ಳಬಹುದು.

ನಾಸ್ತಿಕನೊಬ್ಬನಿಗೆ ಒಬ್ಬ ವ್ಯಕ್ತಿಯ ಮನಸ್ಸು ತನ್ನದೇ ಮನಸ್ಸನ್ನು ಮುಖಾಮುಖಿಯಾದಂತೆ ತೋರಬಹುದು. ವ್ಯಕ್ತಿಯೊಬ್ಬನ ಸೀಮಿತ ಮನೋಬಲವು ಅವನದೇ ಆದಂತಹ ಮಹಾಮನೋಬಲಕ್ಕೆ ನಿವೇದಿಸಿಕೊಳ್ಳುವಂತೆಯೂ ತೋರಬಹುದು.

ಒಟ್ಟಾರೆ ಗೀತಾಂಜಲಿಯು ಹಾಡುವುದೇನು? ಆತ್ಮಾವಲೋಕನದ, ಸರಳ ಬಾಳ್ವೆಯ, ದೌರ್ಬಲ್ಯವನ್ನು ಒಪ್ಪುವ, ವಿನಯವಂತಿಕೆಯನ್ನು ಅಪ್ಪುವ, ಹೃದಯವನ್ನು ಅರಳಿಸಿಕೊಳ್ಳುವ, ಮನವನ್ನು ವಿಸ್ತಾರಗೊಳಿಸಿಕೊಳ್ಳುವ, ಪ್ರೇಮ, ಶಾಂತಿ, ಮಮತೆಯ ಹನಿಗಳನ್ನು ಸೇವಿಸುವ ಮತ್ತು ಹಂಚುವ ಆಶಯವನ್ನು. ಅಷ್ಟಾದರೆ ವ್ಯಕ್ತಿಯು ಆಸ್ತಿಕನಾದರೇನು, ನಾಸ್ತಿಕನಾದರೇನು? ಭಕ್ತಿಯಾದರೇನು, ಪ್ರೀತಿಯಾದರೇನು? ಬರಗೆಟ್ಟಿರುವ ಮನುಷ್ಯನ ಬದುಕಿಗೆ ಪ್ರೇಮ, ಶಾಂತಿ, ನೆಮ್ಮದಿ ಮತ್ತು ಮಮತೆಯ ಅನುಭವವಾದರೆ ಸಾಲದೇ!

ಅಧಮರಲ್ಲಿ ಅಧಮರಾದವರ ಅಡಿಯಲ್ಲಿ ಕಳೆದು

ಕಂಗೆಟ್ಟವರ ಕಟ್ಟ ಕಡೆಯಲ್ಲಿ ನಿನ್ನಡಿಯು ತೋರುವುದು.

ಬಡವರಲ್ಲಿ ಬಡವರಾದವರ ಬುಡದಲ್ಲಿ

ದೀನರಲಿ ದೀನರಾದವರ ದಡದಲ್ಲಿ ನಿನ್ನಡಿಯು ರಾಜಿಪುದು.

ಗೀತಾಂಜಲಿಯಲ್ಲಿ ನೀನು ಎನ್ನುವ ಕರೆಯು ದೇವನಿಗಾದರೂ, ದೇವರೆಂಬುವ ಪರಿಕಲ್ಪನೆಯು ತನ್ನ ವಿವಿಧ ಪಾತ್ರಗಳನ್ನು ಧರಿಸುವುದು.

ಚೈತನ್ಯ, ಅನಂತತೆ, ಪ್ರೀತಿ, ಜೀವನ, ಪ್ರಕೃತಿ; ಇತ್ಯಾದಿಗಳೇ ಆ ಪಾತ್ರಗಳು.

ಓ ನನ್ನ ಜೀವನದ ಜೀವನವೇ, ಈ ದೇಹವನು ಸತತ ಪಾವನವಾಗಿರಿಸಿಕೊಳ್ಳುವೆ,

ನಗರಿವಿದೆ ನಿನ್ನ ಜೀವಂತಿಕೆಯ ಸ್ಪರ್ಶ ನನ್ನೆಲ್ಲಾ ಅಂಗಾಂಗಗಳ ಮೇಲಿದೆ.

1912 ರಲ್ಲಿ ಗೀತಾಂಜಲಿಯ ಇಂಗ್ಲೀಷ್ ಆವೃತ್ತಿ ಪ್ರಕಟವಾಯಿತು. 1913ರಲ್ಲಿ ಅದಕ್ಕೆ ನೊಬೆಲ್ ಪಾರಿತೋಷಕವೂ ದೊರೆಯಿತು. ಆದರೆ, ಭಾರತವೂ ಒಳಗೊಂಡಂತೆ ಅನೇಕ ಐರೋಪ್ಯದೇಶಗಳಲ್ಲಿ ಈ ಗೀತ ಸಂಗ್ರಹದಲ್ಲಿರುವ ಅನೇಕಾನೇಕ ಗೀತೆಗಳು ಎಷ್ಟೆಷ್ಟೋ ಜನರ ಅಂತರಂಗದ ನಿವೇದನೆಯನ್ನು ಧ್ವನಿಸುವ ಕವನಗಳಾದವು. ರೋಗದಿಂದ ನರಳುತ್ತಿದ್ದವರು, ಮಾನಸಿಕವಾಗಿ ಬಳಲಿದ್ದವರು, ಜೀವನದಲ್ಲಿ ಚೈತನ್ಯಹೀನರಾದವರು ತಮ್ಮ ದಿಂಬಿನಡಿಯಲ್ಲಿರಿಸಿಕೊಂಡು ಓದಿಕೊಳ್ಳುತ್ತಿದ್ದ ಸಂಗತಿಗಳಿವೆ. ಅಲ್ಲಿ ಗೀತಾಂಜಲಿ ಮನುಕುಲಕ್ಕೆ ವೇದ್ಯವಾಯಿತು. ಬದುಕಿಗೆ ನೈವೇದ್ಯವಾಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...