Homeಮುಖಪುಟಹಸಿವಿನ ಭಾಷೆ ಕಲಿಸುವ ರಮಝಾನ್

ಹಸಿವಿನ ಭಾಷೆ ಕಲಿಸುವ ರಮಝಾನ್

- Advertisement -
- Advertisement -

ಜಗತ್ತಿಗೆರಗಿದ ಕೊರೋನಾ ವಿಪತ್ತು, ಲಾಕ್ಡೌನ್ ಸಂಕಷ್ಟಗಳ ನಡುವೆ ಈ ಬಾರಿಯ ರಮಝಾನ್ ಆಗಮಿಸಿ, ಇದೀಗ ನಿರ್ಗಮನದ ಹೊಸ್ತಿಲಲ್ಲಿದೆ. ದಿನವಿಡೀ ತೊಟ್ಟು ಹನಿಯನ್ನೂ ಗಂಟಲಿಗಿಳಿಸದೇ ಉಪವಾಸವಿದ್ದು ಹಸಿವಿನ ಆಳ ಅಗಲಗಳನ್ನು ಪರಿಚಯಿಸಿಕೊಳ್ಳುವ ರಮಝಾನ್ ಈ ಬಾರಿ ತುಸು ಹೆಚ್ಚೇ ತೀಕ್ಷ್ಣವಾಗಿದೆ. ಜಗತ್ತಿನ ಮೂಲೆ ಮೂಲೆಯಲ್ಲಿನ ಮನಕಲಕುವ ಹಸಿವಿನ ಚಿತ್ರಣಗಳು ಪ್ರತಿನಿತ್ಯ ಕಣ್ಣ ಮುಂದೆ ಬಂದು ನಿಲ್ಲುತ್ತಲೇ ಇವೆ. ಲಾಕ್ಡೌನ್ ಪ್ರಾರಂಭವಾದ ಆರಂಭದ ದಿನಗಳಲ್ಲಿ ಪ್ರಧಾನಿ ಮೋದಿಯವರ ಸ್ವಕ್ಷೇತ್ರ ವಾರಣಾಸಿಯ ಬುಡಕಟ್ಟು ಜನಾಂಗವೊಂದರ ಪುಟ್ಟ ಮಕ್ಕಳು ಕುರುಚಲು ಹುಲ್ಲನ್ನು ಉಪ್ಪು ಬೆರೆಸಿ ತಿನ್ನುವ ಹೃದಯ ವಿದ್ರಾವಕ ದೃಶ್ಯವನ್ನು ಪತ್ರಕರ್ತರಾದ ಇಸ್ಮತ್ ಅರಾ The wire.inನಲ್ಲಿ ವರದಿ ಮಾಡಿದ್ದರು. ಕಿನ್ಯಾದ ಮೊಂಬಾಸ ಎಂಬಲ್ಲಿ ಹಸಿವು ತಾಳಲಾರದೇ ರಚ್ಚೆ ಹಿಡಿಯುತ್ತಿದ್ದ ತನ್ನ ಮಕ್ಕಳನ್ನು ಸಂತೈಸುವುದಕ್ಕಾಗಿ ವಿಧವೆ ತಾಯಿಯೊಬ್ಬಳು ಮಡಕೆಯೊಳಗೆ ಕಲ್ಲುಗಳನ್ನು ಹಾಕಿ ಬೇಯಿಸುವಂತೆ ನಟಿಸಿದ್ದಳೆಂದರೆ ಹಸಿವಿನ ಕಾಠಿಣ್ಯವೆಷ್ಟಿರಬೇಕು..? ವ್ರತಾಚರಿಸಿದವನಿಗೆ ದಿನದ ಕೊನೆಯಲ್ಲಿ ಏನನ್ನಾದರೂ ಹೊಟ್ಟೆಗಿಳಿಸಬಹುದೆಂಬ ಭರವಸೆಯಿದೆ. ಆದರೆ ಸಂಕಷ್ಟದಲ್ಲಿ ಸಿಲುಕಿ ಉಪವಾಸ ಬಿದ್ದವರ ಪಾಡು, ತುತ್ತು ಕೂಳಿಗೂ ತತ್ವಾರಪಡುವ ದಟ್ಟ ದರಿದ್ರರ ಪಾಡು ಊಹೆಗೂ ನಿಲುಕದ್ದು.

ಹಸಿವು ಮರಣಕ್ಕಿಂತಲೂ ಭಯಾನಕ ಎನ್ನುತ್ತಾರೆ. ಲಾಕ್ಡೌನಿನಿಂದ ಹಸಿವು ತಾಳಲಾರದೇ ಕಾಳಿಂಗ ಸರ್ಪವೊಂದನ್ನು ಬೇಟೆಯಾಡಿ ತಿಂದ ಘಟನೆಯು ಇದನ್ನು ಸಮರ್ಥಿಸುವಂತಿದೆ.

ಜಗತ್ತಿನಲ್ಲಿ ಹಸಿವಿಗಿಂತ ಮಿಗಿಲಾದ ಫಿಲಾಸಫಿ ಇನ್ನೊಂದಿಲ್ಲ. “ನೆರೆಮನೆಯವನು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ನನ್ನವನಲ್ಲ” ಎಂಬ ಪ್ರವಾದಿ ಮುಹಮ್ಮದ್ (ಸ) ರ ವಚನ ಅದೆಷ್ಟು ಸುಂದರ ಮತ್ತು ಅದರ ಹಿಂದಿನ ಕಾಳಜಿ ಅದೆಷ್ಟು ಶ್ರೇಷ್ಠ.. ಇಲ್ಲಿ ಪ್ರವಾದಿವರ್ಯರು ಹಸಿದ ಹೊಟ್ಟೆಯನ್ನಷ್ಟೇ ಉಲ್ಲೇಖಿಸಿದ್ದಾರೆಯೇ ಹೊರತು ಆ ಹೊಟ್ಟೆ ಹೊತ್ತ ಮನುಷ್ಯನ ಜಾತಿ, ಧರ್ಮವನ್ನಲ್ಲ. ಹಾಗಾಗಿ ಹಸಿದವನ ಹಸಿವು ತಣಿಸುವುದು ಮುಸಲ್ಮಾನನಿಗೆ ಧಾರ್ಮಿಕ ಬಾಧ್ಯತೆಯಾಗಿದೆ.

ಇಸ್ಲಾಂ ರಮಝಾನ್ ಉಪವಾಸವನ್ನು ಪ್ರತಿಯೊಬ್ಬರಿಗೂ ಕಡ್ಡಾಯಗೊಳಿಸಿರುವುದು ಹಸಿವಲ್ಲಿರಿಸಿ ದಂಡಿಸುವುದಕ್ಕಲ್ಲ. ಆತ್ಮ ಸಂಸ್ಕರಣೆಯೇ ಉಪವಾಸದ ಮೂಲ ಉದ್ದೇಶ. ಉಪವಾಸ ಕೇವಲ ಆರಾಧನೆಯಷ್ಟೇ ಅಲ್ಲ. ಅದರಾಚೆಗೆ ಕಲಿಯಬೇಕಾದ ಪಾಠಗಳು ಬಹಳಷ್ಟಿವೆ.

ಅನುಭವಕ್ಕಿಂತ ದೊಡ್ಡ ಪಾಠವಿಲ್ಲ. ಸ್ವಯಂ ಉಪವಾಸವಿದ್ದಾಗ ಮಾತ್ರ ಹಸಿವಿನ ಕಾಠಿಣ್ಯವನ್ನರಿಯಲು ಸಾಧ್ಯ. ಹೊಟ್ಟೆಗೆ ಹಿಟ್ಟಿಲ್ಲದ ಬಡವನ ಸಂಕಟವನ್ನು ಓರ್ವ ವ್ರತಧಾರಿ ಚೆನ್ನಾಗಿ ಅರ್ಥೈಸಬಲ್ಲನು. ಆದುದರಿಂದಲೇ ಇಂದು ನಮ್ಮ ದೇಶದಲ್ಲಿ ಹಸಿದವರ ಹಸಿವು ತಣಿಸುವ ಕೆಲಸದಲ್ಲಿ ಮುಸ್ಲಿಂ ಸಮುದಾಯ ದೊಡ್ಡ ಸಂಖ್ಯೆಯಲ್ಲಿ ತೊಡಗಿಸಿಕೊಂಡಿರುವುದು. ಕೈಗೆಟುಕದ ಆಹಾರವನ್ನು ದೂರದಿಂದ ಆಸೆಕಣ್ಣುಗಳಿಂದ ನೋಡುವ ಫಕೀರನ ಆ ಅನುಭವ ವ್ರತ ಅನುಷ್ಠಾನದ ಪ್ರತಿಯೊಬ್ಬನೊಳಗೂ ಉಂಟಾಗುತ್ತದೆ. ಕಣ್ಣ ಮುಂದೆ ಯಥೇಚ್ಛ ಆಹಾರ-ಪಾನೀಯಗಳಿದ್ದರೂ ಉಪವಾಸ ಪಾರಣೆಯ ಹೊತ್ತಾಗದೇ ಒಂದೇ ಒಂದು ಅಗುಳನ್ನೋ/ ಹನಿಯನ್ನೋ ಬಾಯಿಗಿಳಿಸುವಂತಿಲ್ಲ. ಖಾಲಿ ತಟ್ಟೆಯ ಹಸಿವಿನ ಕಾವು ತುಂಬು ಬಟ್ಟಲಿಗೆ ಮುಟ್ಟುವುದೇ ಇಲ್ಲಿ. ಜೊತೆಗೆ ಸಹನೆ ಎಂದರೆ ಏನೆಂಬುವುದನ್ನು ಉಪವಾಸವು ಕಲಿಸಿ ಕೊಡುತ್ತದೆ. ಹಸಿವಿನ ರುಚಿಯುಣ್ಣದ ಶ್ರೀಮಂತ ವರ್ಗವು ನಮ್ಮ ಸಮಾಜದಲ್ಲಿದೆ. ರಮಝಾನಿಗೆ ಬಡವ- ಶ್ರೀಮಂತ, ಗಂಡು- ಹೆಣ್ಣು, ಮಳೆ, ಚಳಿ, ಕರಟಿ ಹೋಗುವ ಬಿಸಿಲೆಂಬ ವ್ಯತ್ಯಾಸವಿಲ್ಲ. ರಮಝಾನ್ ಬಂತೆಂದರೆ ಬಡವನ ಹೊಟ್ಟೆಯಲ್ಲಿನ ಅದೇ ಸಂಕಟವನ್ನು ಶ್ರೀಮಂತನೂ ಆಸ್ವಾದಿಸಲೇಬೇಕಾಗುತ್ತದೆ, ಹಸಿವಿನ ಭಾಷೆಯನ್ನು ಕಲಿಯಬೇಕಾಗುತ್ತದೆ.

ದಿನವಿಡೀ ಉಪವಾಸವಿದ್ದು ಇಫ್ತಾರಿನ ಸಮಯದಲ್ಲಿ ಹೊಟ್ಟೆ ಬಿರಿಯುವಂತೆ ತಿನ್ನುವರೆಂಬ ತಪ್ಪು ಕಲ್ಪನೆ ಕೆಲವು ಮುಸ್ಲಿಮೇತರರಲ್ಲಿದೆ. ಇದು ಹೇಗೆಂದರೆ, ದಿನವಿಡೀ ಅನ್ನ ನೀರಿಲ್ಲದೆ ಬಳಲಿ ಬೆಂಡಾದವನ ಮುಂದೆ ವಿವಿಧ ಭೋಜನ ವಸ್ತುಗಳನ್ನಿಟ್ಟಂತೆ. ಆತ ಏನನ್ನೆಲ್ಲಾ ಹೊಟ್ಟೆಗಿಳಿಸಿಯಾನು? ದಿನವಿಡೀ ಹಸಿವಿನಲ್ಲಿದ್ದ ಕಾರಣಕ್ಕೆ ಬಡ್ಡಿ ಸೇರಿಸಿ ತಿನ್ನಲು ಆತನ ಬರಿ ಹೊಟ್ಟೆಗೆ ಸಾಧ್ಯವಾದೀತೇ? ಖಂಡಿತಾ ಇಲ್ಲ. ಬಡವನೊಡಲ ಈ ಅನುಭವವನ್ನು ವ್ರತಧಾರಿಯು ಇಫ್ತಾರಿನ ಸಮಯದಲ್ಲಿ ಅರಿತುಕೊಳ್ಳುತ್ತಾನೆ.

‘ತಿಬ್ಬುನ್ನಬಿ’ ಎಂಬ ಪ್ರವಾದಿ ಚಿಕಿತ್ಸೆಯಲ್ಲಿ ಈ ರೀತಿ ಉಲ್ಲೇಖಿಸಲಾಗಿದೆ, “ಮನುಷ್ಯರಿಗೆ ಆತನ ಹೊಟ್ಟೆಗಿಂತ ಕೆಟ್ಟ ಪಾತ್ರೆ ಬೇರೊಂದಿಲ್ಲ. ಹಾಗಾಗಿ ಹೊಟ್ಟೆಯನ್ನು ಮೂರು ಭಾಗಗಳನ್ನಾಗಿ ಮಾಡಿ, ಅದರಲ್ಲಿ ಒಂದಂಶ ನೀರಿಗೂ, ಒಂದಂಶ ವಾಯುವಿಗೂ, ಒಂದಂಶ ಆಹಾರಕ್ಕೂ ಮೀಸಲಿಡಬೇಕು.” ಆರೋಗ್ಯದ ದೃಷ್ಟಿಯಿಂದಲೂ ಮಿತಾಹಾರ ಒಳ್ಳೆಯದು ಎಂಬುವುದನ್ನು ಇಲ್ಲಿ ಮನಗಾಣಬಹುದು. ಒಟ್ಟಿನಲ್ಲಿ ಉಪವಾಸವೆಂಬುದು ಹೃದಯದ ಕಣ್ಣನ್ನು ತೆರೆಸುವ ಅಸ್ತ್ರ.

ಮನುಷ್ಯ ಸಂಬಂಧವನ್ನು ಗಟ್ಟಿಗೊಳಿಸುವುದು ರಮಝಾನ್‍ನ ಇನ್ನೊಂದು ಅತೀ ಮಹತ್ವದ ಸಂದೇಶವಾಗಿದೆ. ರಮಝಾನ್ ಎಂಬ ಅರಬೀ ಪದಕ್ಕೆ ಸುಟ್ಟು ಹಾಕು ಎಂಬ ಅರ್ಥವಿದೆ. ಕೆಡುಕುಗಳನ್ನು ಸುಟ್ಟು ಹಾಕುವುದು ರಮಝಾನ್‍ನ ಮೂಲಭೂತ ಉದ್ದೇಶಗಳಲ್ಲೊಂದಾಗಿದೆ.

ರಮಝಾನ್‍ನಲ್ಲಿ ಮನುಷ್ಯರು ಪರಸ್ಪರರ ಮೇಲೆ ಅರಿತೋ, ಅರಿಯದೆಯೋ ಮಾಡಿದ ಅಕ್ರಮಗಳನ್ನು ಮಾಫ್ ಮಾಡಿಸಬೇಕಾದುದು ಅತೀ ಅಗತ್ಯ. ಆ ಮೂಲಕ ದ್ವೇಷ, ಈಷ್ರ್ಯೆಗಳನ್ನು ಸುಟ್ಟು ಹಾಕಿ ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ಮಹೋನ್ನತ ಉದ್ದೇಶ ರಮಝಾನಿಗಿದೆ.

ಎಳವೆಯಲ್ಲಿ ರಮಝಾನ್ ಎಂದರೆ ನಮಗೆ ಎಲ್ಲಿಲ್ಲದ ಸಂಭ್ರಮ, ಸಡಗರ. ಆ ದಿನಗಳಿಗೆಂದೇ ವಿವಿಧ ಅಡುಗೆ ಸಾಮಗ್ರಿಗಳು, ಹಣ್ಣು ಹಂಪಲುಗಳು ಮನೆ ಸೇರುತ್ತಿದ್ದವು. ಆಗೆಲ್ಲಾ ನಾನು ಕಲ್ಲಂಗಡಿ ಹಣ್ಣನ್ನು, ಕಡ್ಲೆ ಬೇಳೆ ಮನ್ನಿಯನ್ನು ಉಪವಾಸ ಅಂದುಕೊಳ್ಳುತ್ತಿದ್ದೆ. ಹೊಟ್ಟೆಗಿಲ್ಲದ ಮಕ್ಕಳಿಗೆ ಉಪವಾಸವೆಂದರೆ ವಿಶೇಷ ಅನ್ನಿಸಲಾರದು. ‘ಹಸಿವು’ ಜಗತ್ತಿನಲ್ಲಿ ಹೊಸತಾಗಿ ಹುಟ್ಟಿಕೊಂಡದ್ದೇನೂ ಅಲ್ಲ. ನಮ್ಮ ದೇಶದಲ್ಲಿ ಕೊರೊನಾ ಇದನ್ನು ಮತ್ತೊಮ್ಮೆ ತೆರೆಯ ಮೇಲೆ ಎಳೆದು ತಂದಿದೆ ಅಷ್ಟೇ. ಹಸಿವಿನ ಕಾಠಿಣ್ಯವರಿತು ಸುತ್ತ ಮುತ್ತಲ ಸಹಮಾನವರ ಹಸಿವು ತಣಿಸುವ ಪ್ರಯತ್ನಗಳು ನಮ್ಮಿಂದಾಗದಿದ್ದರೆ ನಮ್ಮ ಉಪವಾಸದ ಉದ್ದೇಶ ಪ್ರಶ್ನಾರ್ಹವಾಗಿಯೇ ಉಳಿಯಬಲ್ಲುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...