Homeನಾನು ಗೌರಿಓದುಗರ ಪ್ರತಿಕ್ರಿಯೆ-ಸ್ಪಷ್ಟೀಕರಣ; ಸೂಕ್ತ ಉಲ್ಲೇಖಗಳನ್ನು ಕೊಟ್ಟಿದ್ದರೆ ಸ್ಪಷ್ಟವಾಗುತ್ತಿತ್ತು

ಓದುಗರ ಪ್ರತಿಕ್ರಿಯೆ-ಸ್ಪಷ್ಟೀಕರಣ; ಸೂಕ್ತ ಉಲ್ಲೇಖಗಳನ್ನು ಕೊಟ್ಟಿದ್ದರೆ ಸ್ಪಷ್ಟವಾಗುತ್ತಿತ್ತು

- Advertisement -
- Advertisement -

ಸೂಕ್ತ ಉಲ್ಲೇಖಗಳನ್ನು ಕೊಟ್ಟಿದ್ದರೆ ಸ್ಪಷ್ಟವಾಗುತ್ತಿತ್ತು..: ಪ್ರತಿಭಾ ನಂದಕುಮಾರ್

ಕಳೆದ ಸಂಚಿಕೆಯಲ್ಲಿ ಪ್ರಕಟವಾದ ಮಾತು ಮರೆತ ಭಾರತದ ಅಂಕಣದ ’ಕರ್ನಾಟಕದಲ್ಲಿ ಅಸ್ಪೃಶ್ಯತೆ’ (ಇಲ್ಲಿ ಕ್ಲಿಕ್ ಮಾಡಿ) ಬರಹಕ್ಕೆ ಸಂಬಂಧಿಸಿದಂತೆ ಕವಿ-ಬರಹಗಾರ್ತಿ ಪ್ರತಿಭಾ ನಂದಕುಮಾರ್ ಹೀಗೆ ಪ್ರತಿಕ್ರಿಯಿಸಿದ್ದರು: “ಹಲವು ಹೇಳಿಕೆಗಳಿಗೆ ಸೂಕ್ತ ಉಲ್ಲೇಖಗಳನ್ನು (ರೆಫೆರೆನ್ಸ್) ಕೊಟ್ಟಿದ್ದರೆ ಸ್ಪಷ್ಟವಾಗುತ್ತಿತ್ತು. ಉದಾಹರಣೆಗೆ ’ಮಾದಿಗರ ಗಲ್ಲೇಬಾನಿ (ಚಪ್ಪಲಿ ತೊಳೆದ ನೀರು) ನೀರಿಲ್ಲದೆ ಬ್ರಾಹ್ಮಣರ ಹೆಣ್ಣು ಮಕ್ಕಳ ಮದುವೆಯಾಗುತ್ತಿರಲಿಲ್ಲ’ ಇದು ಎಲ್ಲಿ ಹೇಳಿದೆ?

ಪ್ರತಿಭಾ ನಂದಕುಮಾರ್

ಮಹಾಭಾರತದಲ್ಲಿ ಕರ್ಣನು ಶಲ್ಯನನ್ನು ಹೀಯಾಳಿಸುವಾಗ ಮಾದ್ರಕರ ಹೆಂಗಸರ ಬಗ್ಗೆ ಕೀಳಾಗಿ ವರ್ಣಿಸುತ್ತಾನೆ. ಆದರೆ ಅಲ್ಲಿ ಅಸ್ಪೃಶ್ಯತೆಯ ಪ್ರಸ್ತಾಪವಿಲ್ಲ. ಮಾದ್ರಕ-ಮಾದ್ರ ರಾಜ್ಯ-ಮಾದ್ರಿ-ಅವಳ ಅಣ್ಣ ಶಲ್ಯ. ಭೀಷ್ಮ ಮಾದ್ರ ರಾಜ್ಯಕ್ಕೆ ಹೋಗಿ ಮಾದ್ರಿಯನ್ನು ಪಾಂಡುವಿಗೆ ವಧುವಾಗಲು ಕೋರಿದಾಗ ಶಲ್ಯ ’ಪಾಣಿಗ್ರಹಣ ತಮ್ಮಲ್ಲಿಲ್ಲ ’ತೆರ’ ಕೊಟ್ಟು ಕರೆದುಕೊಂಡು ಹೋಗು’ ಎಂದಾಗ ಭೀಷ್ಮ ಹಣ, ಚಿನ್ನ, ಆನೆ, ಕುದುರೆ ಇತ್ಯಾದಿ ಕೊಟ್ಟು ಅವಳನ್ನು ಕರೆದುಕೊಂಡು ಹೋಗುತ್ತಾನೆ. ಮಾದ್ರಕರು ಮಾದರುಗಳಾದರೆ (ಕರ್ಣನ ಹೀಯಾಳಿಕೆ ಅರ್ಥೈಸಿ) ಭೀಷ್ಮ ಪಾಂಡುವಿಗೆ ಮಾದ್ರಿಯನ್ನು ಮದುವೆಯಾಗಿಸಿದ ಅಂದರೆ ಅಲ್ಲಿ ವರ್ಣ ಸಂಕರ ಇರಲಿಲ್ಲ ಎಂದರ್ಥವೇ? ಉತ್ತರದಲ್ಲಿ ಮಹಾಭಾರತದ ಕಾಲಕ್ಕೆ (ಆಗಿನ ಆರ್ಯರ ಪದ್ಧತಿಯಂತೆ) ಅಸ್ಪೃಶ್ಯತೆ ಇರಲಿಲ್ಲ ಅಂದರೆ ಅಲ್ಲಿಂದ ದಕ್ಷಿಣಕ್ಕೆ ಬಂದ ’ಬ್ರಾಹ್ಮಣ ಪುರೋಹಿತರು ತಮ್ಮೊಂದಿಗೆ ಚಾತುರ್ವರ್ಣ ಧರ್ಮವನ್ನು ಹೊತ್ತುಕೊಂಡು ಹೋದರು ಹಾಗೂ ವಿಸ್ತರಿಸಿದರು. ಈ ಭಾಗವಾಗಿಯೇ ಕರ್ನಾಟಕಕ್ಕೂ ವರ್ಣವ್ಯವಸ್ಥೆ ಕಾಲಿಟ್ಟಿತು. ಅದರೊಂದಿಗೆ ಜಾತಿಪದ್ಧತಿ, ಅಸ್ಪೃಶ್ಯತೆಯೂ ಕಾಲಿಟ್ಟಿತು’ ಎನ್ನುವುದನ್ನು ಅರ್ಥೈಸುವಲ್ಲಿ ಸ್ವಲ್ಪ ಗೊಂದಲ ಇದೆ.

ಚಾತುರ್ವರ್ಣ ಪರಿಪಾಲಿಸದ ಶಲ್ಯ ವಂಶಸ್ಥರನ್ನು ಅಸ್ಪೃಶ್ಯರು ಎನ್ನಲಾಗುವುದಿಲ್ಲ: ಸಾಕ್ಯ ಸಮಗಾರ

ಪ್ರಶ್ನೆ 1. ’ಮಾದಿಗರ ಗಲ್ಲೇಬಾನಿ ನೀರಿಲ್ಲದೆ ಬ್ರಾಹ್ಮಣರ ಮಕ್ಕಳ ಮದುವೆಯಾಗುತ್ತಿರಲಿಲ್ಲ’ ಇದು ಎಲ್ಲಿ ಹೇಳಿದೆ?
ಸ್ಪಷ್ಟೀಕರಣ: ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಪ್ರಖ್ಯಾತ ಸಂಸ್ಕೃತಿ ಚಿಂತಕ ಹಾಗೂ ಕವಿ ಕೆ. ಬಿ. ಸಿದ್ದಯ್ಯನವರು ತಮ್ಮ ಗಲ್ಲೇಬಾನಿ ಖಂಡಕಾವ್ಯಕ್ಕೆ ಮುನ್ನುಡಿ ಬರೆಯುತ್ತಾ ಹೀಗೆ ಉಲ್ಲೇಖಿಸುತ್ತಾರೆ. ’ಈ (ಗಲ್ಲೇಬಾನಿ) ನೀರನ್ನು ಶಾಸ್ತ್ರದ ನೀರು ಎಂದು ಕರೆಯುತ್ತಾರೆ. ವಿಪ್ರ ಬಂಧುಗಳು ಅವರಲ್ಲಿ ನಡೆಯುವ ವಿವಾಹ ಸಂದರ್ಭದಲ್ಲಿ ನವವಧುವರರ ನೆತ್ತಿಯ ಮೇಲೆ ’ಶಾಸ್ತ್ರದ ನೀರ’ನ್ನು ಚುಮುಕಿಸಿ, ಅರುಂಧತಿ ನಕ್ಷತ್ರ ದರ್ಶನ ಮಾಡಿಸಿದರೆ ಶುಭವಾಗುತ್ತದೆ ಎಂದು ಕಲ್ಲುನೀರು ಕರಗೋ ಹೊತ್ತಿನಲ್ಲಿ ಕಾಡಿಬೇಡಿ ’ಗಲ್ಲೇಬಾನಿ’ ನೀರನ್ನು ಚಮ್ಮಾರನ ಅನುಗ್ರಹದಿಂದ ಪಡೆದುಕೊಳ್ಳುತ್ತಾರೆಂಬುದು ಜನಪದರ ನಾಲಿಗೆ ಮೇಲಿನ ಸೋಜಿಗದ ಸಂಗತಿಯಾಗಿದೆ’ ಎನ್ನುತ್ತಾರೆ.

ಡಾ. ಎಂ. ಚಿದಾನಂದ ಮೂರ್ತಿಯವರು ಬರೆದಿರುವ ’ಮಧ್ಯಕಾಲೀನ ಕರ್ನಾಟಕ ಮತ್ತು ಅಸ್ಪೃಶ್ಯತೆ’ ಕೃತಿಯಲ್ಲಿ ’ಚಪ್ಪಲಿ ಹೊಲಿಯಲು ಅದ್ದುವ ನೀರನ್ನು ಪವಿತ್ರವೆಂದು ಭಾವಿಸುವ ಹೊಲೆಯರು ಅದು ಬ್ರಾಹ್ಮಣರ ಕೈಗೆ ಹೋಗದಂತೆ ಎಚ್ಚರ ವಹಿಸುತ್ತಾರೆ’ ಎಂದು ಬರೆಯುತ್ತಾ ಮುಂದುವರೆದು ’ಕೆಲವೆಡೆ ಬ್ರಾಹ್ಮಣರು ತಮ್ಮ ಮದುವೆಯ ದಿನ ರಾತ್ರಿ ಗುಟ್ಟಾಗಿ ಹೊಲೆಗೇರಿಗೆ ಬಂದು ’ಸುರೆಬಾನಿ’ ನೀರನ್ನು (ಚಪ್ಪಲಿ ಅದ್ದಿದ ನೀರನ್ನು) ತೆಗೆದುಕೊಂಡು ಹೋಗುತ್ತಾರೆ ಎಂಬ ವದಂತಿಗಳಿವೆ’ ಎನ್ನುತ್ತಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಕೆಲವು ಬ್ರಾಹ್ಮಣರನ್ನು ’ಮಧ್ಯಾಹ್ನದ ಮಾದಿಗ’ರೆಂದು ಹಾಗೂ ಮೈಸೂರು ಜಿಲ್ಲೆಯ ಕೆಲವು ಬ್ರಾಹ್ಮಣರನ್ನು ’ಮಧ್ಯಾಹ್ನದ ಹೊಲೆಯ’ರೆಂದು ಕರೆಯುವ ವಾಡಿಕೆ ಇದೆ. ಇದಕ್ಕೂ ಮೂಲಕಾರಣ ಗಲ್ಲೇಬಾನಿಯ ನೀರನ್ನು ಬ್ರಾಹ್ಮಣರು ಕೊಂಡೊಯ್ಯುವುದಾಗಿದೆ.

ಕೆ. ಬಿ. ಸಿದ್ದಯ್ಯ

ಈ ಜನಪದ ಸ್ಮೃತಿಯ ಮೂಲ ಹಿಡಿದು ಹೊರಟಾಗ ಅದು ವಚನ ಚಳವಳಿಯ ಹರಳಯ್ಯ ದಂಪತಿ ಮತ್ತು ಬ್ರಾಹ್ಮಣ ಮಧುವರಸ ಪ್ರಸಂಗಕ್ಕೆ ಹೋಗಿ ನಿಲ್ಲುತ್ತದೆ. ಬಸವಣ್ಣನವರು ಹರಳಯ್ಯರಿಗೆ ಶರಣುಶರಣಾರ್ಥಿ ಎಂದುದನ್ನು ಋಣವೆಂದು ತಿಳಿದ ಹರಳಯ್ಯನ ತನ್ನ ಮಡದಿಗೆ ಹೋಗಿ ಈ ವಿಚಾರ ತಿಳಿಸಿದಾಗ ಇಬ್ಬರ ತೊಡೆ ಚರ್ಮದಿಂದ ಬಸವಣ್ಣನಿಗೆ ಚಪ್ಪಲಿ ಮಾಡಿಕೊಡಬೇಕೆಂಬ ತೀರ್ಮಾನಕ್ಕೆ ಬರುತ್ತಾರೆ ಹಾಗೂ ಹಾಗೆಯೇ ಮಾಡುತ್ತಾರೆ. ಹರಳಯ್ಯ ದಂಪತಿಗಳು ಅದನ್ನು ಹೊತ್ತು ಬಸವಣ್ಣನ ಬಳಿಗೆ ತೆರಳುವಾಗ ದಾರಿಯಲ್ಲಿ ಕಂಡ ಮಧುವರಸ ಆ ಚಪ್ಪಲಿಗಳನ್ನು ಬಲವಂತದಿಂದ ಕಸಿದು ಮೆಟ್ಟಿಕೊಳ್ಳುತ್ತಾನೆ. ತಕ್ಷಣವೇ ಆ ಚಪ್ಪಲಿಗಳು ಬೆಂಕಿಯಂತೆ ಉರಿಯಲಾರಂಭಿಸುತ್ತವೆ. ಉರಿಚಮ್ಮಾಳಿಗೆ ಆಗುತ್ತವೆ. ಚಪ್ಪಲಿಗಳನ್ನು ತೆಗೆದರೂ ಆ ಮೈ ಉರಿ ಕಾಣೆಯಾಗದೆ ತೀವ್ರವಾಗುತ್ತದೆ. ಅದೆಷ್ಟೇ ಔಷಧೋಪಚಾರ, ಪೂಜೆಗಳನ್ನು ಮಾಡಿದರೂ ಉರಿ ಕಡಿಮೆಯೇ ಆಗುವುದಿಲ್ಲ. ಕಡೆಗೆ ಹರಳಯ್ಯನ ಮನೆಯ ಮಗಳು ಗಲ್ಲೇಬಾನಿಯ ನೀರನ್ನು ಮಧುವರಸ ಮೈಮೇಲೆ ಸುರಿದಾಗ ಉರಿ ಕಡಿಮೆಯಾಗುತ್ತದೆ. ಅಂದಿನಿಂದ ಬ್ರಾಹ್ಮಣರಿಗೆ ಗಲ್ಲೇಬಾನಿಯ ನೀರು ಪವಿತ್ರ ಎಂಬ ಜಾನಪದ ಕತೆ ಜನಮಾನಸದಲ್ಲಿ ಬೆರೆತುಹೋಗಿದೆ. ಇದಕ್ಕೆ ಮಂಟೆಸ್ವಾಮಿ ಹಾಗೂ ಮಲೆ ಮಹದೇಶ್ವರ ಕಾವ್ಯಗಳೇ ಸಾಕ್ಷಿ.

ಇನ್ನು ಪುರಾಣಗಳನ್ನು ಶೋಧಿಸಿದಾಗ ವಸಿಷ್ಠ ತಾನು ಮದುವೆಯಾಗುವ ಹುಡುಗಿಯನ್ನು ಹುಡುಕಿಕೊಂಡು ಬರುವುದು ಮಾದಿಗರ ಕೇರಿಗೆಯೇ. ಅವನು ಮಾದಿಗ ಅರುಂಧತಿಯ ಮನೆಗೆ ಬರುತ್ತಾನೆ. ಅವಳ ಮೂಲ ಹೆಸರು ಆರಂಜ್ಯೋತಿ. ಅವಳು ಗಲ್ಲೇಬಾನಿಯ ನೀರಿನಿಂದ ಆತನನ್ನು ಪರಿಶುದ್ಧಗೊಳಿಸುತ್ತಾಳೆ ಹಾಗೂ ವಿವಾಹವಾಗುತ್ತಾಳೆ. ಇದರ ಬಗ್ಗೆ ಸಂಸ್ಕೃತಿ ಚಿಂತಕ ವಡ್ಡಗೆರೆ ನಾಗರಾಜರವರು ಸಂಪೂರ್ಣ ಅಧ್ಯಯನ ಮಾಡಿದ್ದಾರೆ.

ಕುತೂಹಲಕಾರಿ ಎಂದರೆ 1891ರ ಬ್ರಿಟಿಷ್ ಭಾರತದ ಮೊದಲ ಜನಗಣತಿಯಲ್ಲಿ ಮೈಸೂರಿನ ಮಾದಿಗರು ತಮ್ಮನ್ನು ’ಮಾತಂಗ ಬ್ರಾಹ್ಮಣರು’ ಎಂದು ಘೋಷಿಸಿಕೊಂಡಿರುವುದು ಸಹ ಇಲ್ಲಿ ಉಲ್ಲೇಖಾರ್ಹ (ದಕ್ಷಿಣ ಭಾರತದ ಜಾತಿ ಬುಡಕಟ್ಟುಗಳು – ಸಂಪುಟ 4 – ಎಡ್ಗರ್ ಥರ್ಸ್ಟನ್/ಕೆ. ರಂಗಾಚಾರಿ)

ಡಾ. ಎಂ. ಚಿದಾನಂದ ಮೂರ್ತಿ

ಒಟ್ಟಾರೆ ಚರ್ಮವನ್ನು ಹದಮಾಡಿ ಚಪ್ಪಲಿಯನ್ನು ಅದ್ದುವ ನೀರು ಪವಿತ್ರ. ಇದರಿಂದ ಬ್ರಾಹ್ಮಣರೂ ಪವಿತ್ರವಾಗುತ್ತಾರೆ ಎಂಬುದು ಐತಿಹ್ಯ. ಯಾವ ಕಾಯಕವೂ ಉಚ್ಚವಲ್ಲ, ನೀಚವಲ್ಲ ಎಂಬ ಸತ್ಯವನ್ನು ಸಾರುತ್ತದೆ ಈ ಆಚರಣೆ.

ಪ್ರಶ್ನೆ 2. ಮಹಾಭಾರತದ ಶಲ್ಯ ಮಾದಿಗನಲ್ಲವೇ?

ಸ್ಪಷ್ಟೀಕರಣ: ಅಲ್ಲ. ಮಹಾಭಾರತವು ರಾಮಾಯಣಕ್ಕಿಂತಲೂ ಹಿಂದಿನ ಮಹಾಕಾವ್ಯವಾಗಿದೆ. ರಾಮಾಯಣ ಬರೆದ ಕಾಲಘಟ್ಟದಲ್ಲಿಯೇ ಅಸ್ಪೃಶ್ಯತೆ ಕಂಡುಬರದೇ ಇರುವಾಗ ಮಹಾಭಾರತದಲ್ಲಿ ಅಸ್ಪೃಶ್ಯತೆಯ ಇರುವಿಕೆ ಸಾಧ್ಯವಿಲ್ಲ. ಮುಂದುವರೆದು, ಕರ್ಣನನ್ನೇ ಕ್ಷತ್ರಿಯನೆಂದು ಒಪ್ಪಿಕೊಳ್ಳದ ಪಾಂಡವರು ಶಲ್ಯನ ಸೋದರಿ ಮಾದ್ರಿಯನ್ನು ಪಾಂಡುರಾಜನಿಗೆ ವಿವಾಹವಾಗಿಸಲು ಸಾಧ್ಯವಿಲ್ಲ. ಮಾದ್ರಿಯ ಮಕ್ಕಳಾದ ನಕುಲ ಮತ್ತು ಸಹದೇವರಿಂದ ಯಾಗಗಳನ್ನು ನೆರವೇರಿಸಲೂ ಸಾಧ್ಯವಿಲ್ಲ. ಶಲ್ಯ ಕುರುಕ್ಷೇತ್ರದ ಕಡೆಯ ದಿನದ ಯುದ್ಧದಲ್ಲಿ ದಂಡನಾಯಕನಾಗಲೂ ಸಾಧ್ಯವಿಲ್ಲ. ಮಾದ್ರ ರಾಜ್ಯದ ಶಲ್ಯನ ವಂಶಸ್ಥರು ಚಾತುರ್ವರ್ಣ ಪರಿಪಾಲಕರಲ್ಲ ಎಂಬ ಕಾರಣದಿಂದ ಅವರನ್ನು ಅಸ್ಪೃಶ್ಯರೆಂದು ಬಗೆಯುವುದು ಐತಿಹಾಸಿಕವಾಗಿ ತಪ್ಪಾಗುತ್ತದೆ. ಏಕೆಂದರೆ ಅಂತಹ ಚಾತುರ್ವರ್ಣ ಪರಿಪಾಲಿಸದ ನೂರಾರು ರಾಜ್ಯಗಳು ಹಸ್ತಿನಾಪುರದ ಸುತ್ತಲೂ ಇರುತ್ತವೆ. ಇದರಷ್ಟೇ ಸತ್ಯ ಆರ್ಯವರ್ತವನ್ನು ಬಿಟ್ಟು ಮಿಕ್ಕ ಇನ್ನಾವ ಪ್ರಾಚೀನ ಭಾರತದಲ್ಲಿಯೂ ಚಾತುರ್ವರ್ಣ ವ್ಯವಸ್ಥೆ ಇಲ್ಲದಿದ್ದದ್ದು. ಘಟೋತ್ಗಜನದ್ದೂ ಅಂತಹದ್ದೇ ಬುಡಕಟ್ಟಿನ ಪ್ರಾಂತ್ಯ. ಹಾಗಾಗಿ ಕರ್ಣ ಹಾಗೂ ಶಲ್ಯರಿಬ್ಬರ ನಡುವೆ ನಡೆಯುವ ಸಂಭಾಷಣೆ ಒಬ್ಬರನ್ನೊಬ್ಬರೂ ಹೀಗಳೆಯಲಷ್ಟೇ ಆಗಿರುತ್ತದೆ. ಅದಕ್ಕೂ ಅಸ್ಪೃಶ್ಯತೆಗೂ ಸಂಬಂಧವಿಲ್ಲ. ಏಕೆಂದರೆ ಅಸ್ಪೃಶ್ಯತೆ ಕಾಣಿಸಿಕೊಂಡದ್ದು ಕ್ರಿ.ಶ 4ನೇ ಶತಮಾನದಲ್ಲಿ. ಇದರ ಬಗ್ಗೆ ಹೆಚ್ಚು ತಿಳಿಯಲು ದಯಮಾಡಿ ಈ ಅಂಕಣದ ’ಪ್ರಾಚೀನ ಭಾರತದಲ್ಲಿ ಅಸ್ಪೃಶ್ಯತೆ; ಹಾಗೂ ’ಮಧ್ಯಕಾಲೀನ ಭಾರತದಲ್ಲಿ ಅಸ್ಪೃಶ್ಯತೆ’ ಲೇಖನಗಳನ್ನು ಓದಿ.


ಇದನ್ನೂ ಓದಿ: ಮಾತು ಮರೆತ ಭಾರತ; ಅಸ್ಪೃಶ್ಯರು ಪರಿಶಿಷ್ಟ ಜಾತಿಗಳಾಗಿದ್ದು ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ನಾನೂ ಹಲವಾರು ಬ್ರಾಹ್ಮಣರನ್ನು ಕೇಳಿದೆ. ಯಾರಿಗೂ ಗಲ್ಲೇಬಾನಿಯ ನೀರನ್ನು ಬ್ರಾಹ್ಮಣರ ಮದುವೆಯಲ್ಲಿ ಬಳಸುವ ಬಗ್ಗೆ ಗೊತ್ತಿಲ್ಲ. ಪ್ರಚಲಿತದಲ್ಲಿ ಇಲ್ಲ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...