Homeನಾನು ಗೌರಿಓದುಗರ ಪ್ರತಿಕ್ರಿಯೆ-ಸ್ಪಷ್ಟೀಕರಣ; ಸೂಕ್ತ ಉಲ್ಲೇಖಗಳನ್ನು ಕೊಟ್ಟಿದ್ದರೆ ಸ್ಪಷ್ಟವಾಗುತ್ತಿತ್ತು

ಓದುಗರ ಪ್ರತಿಕ್ರಿಯೆ-ಸ್ಪಷ್ಟೀಕರಣ; ಸೂಕ್ತ ಉಲ್ಲೇಖಗಳನ್ನು ಕೊಟ್ಟಿದ್ದರೆ ಸ್ಪಷ್ಟವಾಗುತ್ತಿತ್ತು

- Advertisement -
- Advertisement -

ಸೂಕ್ತ ಉಲ್ಲೇಖಗಳನ್ನು ಕೊಟ್ಟಿದ್ದರೆ ಸ್ಪಷ್ಟವಾಗುತ್ತಿತ್ತು..: ಪ್ರತಿಭಾ ನಂದಕುಮಾರ್

ಕಳೆದ ಸಂಚಿಕೆಯಲ್ಲಿ ಪ್ರಕಟವಾದ ಮಾತು ಮರೆತ ಭಾರತದ ಅಂಕಣದ ’ಕರ್ನಾಟಕದಲ್ಲಿ ಅಸ್ಪೃಶ್ಯತೆ’ (ಇಲ್ಲಿ ಕ್ಲಿಕ್ ಮಾಡಿ) ಬರಹಕ್ಕೆ ಸಂಬಂಧಿಸಿದಂತೆ ಕವಿ-ಬರಹಗಾರ್ತಿ ಪ್ರತಿಭಾ ನಂದಕುಮಾರ್ ಹೀಗೆ ಪ್ರತಿಕ್ರಿಯಿಸಿದ್ದರು: “ಹಲವು ಹೇಳಿಕೆಗಳಿಗೆ ಸೂಕ್ತ ಉಲ್ಲೇಖಗಳನ್ನು (ರೆಫೆರೆನ್ಸ್) ಕೊಟ್ಟಿದ್ದರೆ ಸ್ಪಷ್ಟವಾಗುತ್ತಿತ್ತು. ಉದಾಹರಣೆಗೆ ’ಮಾದಿಗರ ಗಲ್ಲೇಬಾನಿ (ಚಪ್ಪಲಿ ತೊಳೆದ ನೀರು) ನೀರಿಲ್ಲದೆ ಬ್ರಾಹ್ಮಣರ ಹೆಣ್ಣು ಮಕ್ಕಳ ಮದುವೆಯಾಗುತ್ತಿರಲಿಲ್ಲ’ ಇದು ಎಲ್ಲಿ ಹೇಳಿದೆ?

ಪ್ರತಿಭಾ ನಂದಕುಮಾರ್

ಮಹಾಭಾರತದಲ್ಲಿ ಕರ್ಣನು ಶಲ್ಯನನ್ನು ಹೀಯಾಳಿಸುವಾಗ ಮಾದ್ರಕರ ಹೆಂಗಸರ ಬಗ್ಗೆ ಕೀಳಾಗಿ ವರ್ಣಿಸುತ್ತಾನೆ. ಆದರೆ ಅಲ್ಲಿ ಅಸ್ಪೃಶ್ಯತೆಯ ಪ್ರಸ್ತಾಪವಿಲ್ಲ. ಮಾದ್ರಕ-ಮಾದ್ರ ರಾಜ್ಯ-ಮಾದ್ರಿ-ಅವಳ ಅಣ್ಣ ಶಲ್ಯ. ಭೀಷ್ಮ ಮಾದ್ರ ರಾಜ್ಯಕ್ಕೆ ಹೋಗಿ ಮಾದ್ರಿಯನ್ನು ಪಾಂಡುವಿಗೆ ವಧುವಾಗಲು ಕೋರಿದಾಗ ಶಲ್ಯ ’ಪಾಣಿಗ್ರಹಣ ತಮ್ಮಲ್ಲಿಲ್ಲ ’ತೆರ’ ಕೊಟ್ಟು ಕರೆದುಕೊಂಡು ಹೋಗು’ ಎಂದಾಗ ಭೀಷ್ಮ ಹಣ, ಚಿನ್ನ, ಆನೆ, ಕುದುರೆ ಇತ್ಯಾದಿ ಕೊಟ್ಟು ಅವಳನ್ನು ಕರೆದುಕೊಂಡು ಹೋಗುತ್ತಾನೆ. ಮಾದ್ರಕರು ಮಾದರುಗಳಾದರೆ (ಕರ್ಣನ ಹೀಯಾಳಿಕೆ ಅರ್ಥೈಸಿ) ಭೀಷ್ಮ ಪಾಂಡುವಿಗೆ ಮಾದ್ರಿಯನ್ನು ಮದುವೆಯಾಗಿಸಿದ ಅಂದರೆ ಅಲ್ಲಿ ವರ್ಣ ಸಂಕರ ಇರಲಿಲ್ಲ ಎಂದರ್ಥವೇ? ಉತ್ತರದಲ್ಲಿ ಮಹಾಭಾರತದ ಕಾಲಕ್ಕೆ (ಆಗಿನ ಆರ್ಯರ ಪದ್ಧತಿಯಂತೆ) ಅಸ್ಪೃಶ್ಯತೆ ಇರಲಿಲ್ಲ ಅಂದರೆ ಅಲ್ಲಿಂದ ದಕ್ಷಿಣಕ್ಕೆ ಬಂದ ’ಬ್ರಾಹ್ಮಣ ಪುರೋಹಿತರು ತಮ್ಮೊಂದಿಗೆ ಚಾತುರ್ವರ್ಣ ಧರ್ಮವನ್ನು ಹೊತ್ತುಕೊಂಡು ಹೋದರು ಹಾಗೂ ವಿಸ್ತರಿಸಿದರು. ಈ ಭಾಗವಾಗಿಯೇ ಕರ್ನಾಟಕಕ್ಕೂ ವರ್ಣವ್ಯವಸ್ಥೆ ಕಾಲಿಟ್ಟಿತು. ಅದರೊಂದಿಗೆ ಜಾತಿಪದ್ಧತಿ, ಅಸ್ಪೃಶ್ಯತೆಯೂ ಕಾಲಿಟ್ಟಿತು’ ಎನ್ನುವುದನ್ನು ಅರ್ಥೈಸುವಲ್ಲಿ ಸ್ವಲ್ಪ ಗೊಂದಲ ಇದೆ.

ಚಾತುರ್ವರ್ಣ ಪರಿಪಾಲಿಸದ ಶಲ್ಯ ವಂಶಸ್ಥರನ್ನು ಅಸ್ಪೃಶ್ಯರು ಎನ್ನಲಾಗುವುದಿಲ್ಲ: ಸಾಕ್ಯ ಸಮಗಾರ

ಪ್ರಶ್ನೆ 1. ’ಮಾದಿಗರ ಗಲ್ಲೇಬಾನಿ ನೀರಿಲ್ಲದೆ ಬ್ರಾಹ್ಮಣರ ಮಕ್ಕಳ ಮದುವೆಯಾಗುತ್ತಿರಲಿಲ್ಲ’ ಇದು ಎಲ್ಲಿ ಹೇಳಿದೆ?
ಸ್ಪಷ್ಟೀಕರಣ: ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಪ್ರಖ್ಯಾತ ಸಂಸ್ಕೃತಿ ಚಿಂತಕ ಹಾಗೂ ಕವಿ ಕೆ. ಬಿ. ಸಿದ್ದಯ್ಯನವರು ತಮ್ಮ ಗಲ್ಲೇಬಾನಿ ಖಂಡಕಾವ್ಯಕ್ಕೆ ಮುನ್ನುಡಿ ಬರೆಯುತ್ತಾ ಹೀಗೆ ಉಲ್ಲೇಖಿಸುತ್ತಾರೆ. ’ಈ (ಗಲ್ಲೇಬಾನಿ) ನೀರನ್ನು ಶಾಸ್ತ್ರದ ನೀರು ಎಂದು ಕರೆಯುತ್ತಾರೆ. ವಿಪ್ರ ಬಂಧುಗಳು ಅವರಲ್ಲಿ ನಡೆಯುವ ವಿವಾಹ ಸಂದರ್ಭದಲ್ಲಿ ನವವಧುವರರ ನೆತ್ತಿಯ ಮೇಲೆ ’ಶಾಸ್ತ್ರದ ನೀರ’ನ್ನು ಚುಮುಕಿಸಿ, ಅರುಂಧತಿ ನಕ್ಷತ್ರ ದರ್ಶನ ಮಾಡಿಸಿದರೆ ಶುಭವಾಗುತ್ತದೆ ಎಂದು ಕಲ್ಲುನೀರು ಕರಗೋ ಹೊತ್ತಿನಲ್ಲಿ ಕಾಡಿಬೇಡಿ ’ಗಲ್ಲೇಬಾನಿ’ ನೀರನ್ನು ಚಮ್ಮಾರನ ಅನುಗ್ರಹದಿಂದ ಪಡೆದುಕೊಳ್ಳುತ್ತಾರೆಂಬುದು ಜನಪದರ ನಾಲಿಗೆ ಮೇಲಿನ ಸೋಜಿಗದ ಸಂಗತಿಯಾಗಿದೆ’ ಎನ್ನುತ್ತಾರೆ.

ಡಾ. ಎಂ. ಚಿದಾನಂದ ಮೂರ್ತಿಯವರು ಬರೆದಿರುವ ’ಮಧ್ಯಕಾಲೀನ ಕರ್ನಾಟಕ ಮತ್ತು ಅಸ್ಪೃಶ್ಯತೆ’ ಕೃತಿಯಲ್ಲಿ ’ಚಪ್ಪಲಿ ಹೊಲಿಯಲು ಅದ್ದುವ ನೀರನ್ನು ಪವಿತ್ರವೆಂದು ಭಾವಿಸುವ ಹೊಲೆಯರು ಅದು ಬ್ರಾಹ್ಮಣರ ಕೈಗೆ ಹೋಗದಂತೆ ಎಚ್ಚರ ವಹಿಸುತ್ತಾರೆ’ ಎಂದು ಬರೆಯುತ್ತಾ ಮುಂದುವರೆದು ’ಕೆಲವೆಡೆ ಬ್ರಾಹ್ಮಣರು ತಮ್ಮ ಮದುವೆಯ ದಿನ ರಾತ್ರಿ ಗುಟ್ಟಾಗಿ ಹೊಲೆಗೇರಿಗೆ ಬಂದು ’ಸುರೆಬಾನಿ’ ನೀರನ್ನು (ಚಪ್ಪಲಿ ಅದ್ದಿದ ನೀರನ್ನು) ತೆಗೆದುಕೊಂಡು ಹೋಗುತ್ತಾರೆ ಎಂಬ ವದಂತಿಗಳಿವೆ’ ಎನ್ನುತ್ತಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಕೆಲವು ಬ್ರಾಹ್ಮಣರನ್ನು ’ಮಧ್ಯಾಹ್ನದ ಮಾದಿಗ’ರೆಂದು ಹಾಗೂ ಮೈಸೂರು ಜಿಲ್ಲೆಯ ಕೆಲವು ಬ್ರಾಹ್ಮಣರನ್ನು ’ಮಧ್ಯಾಹ್ನದ ಹೊಲೆಯ’ರೆಂದು ಕರೆಯುವ ವಾಡಿಕೆ ಇದೆ. ಇದಕ್ಕೂ ಮೂಲಕಾರಣ ಗಲ್ಲೇಬಾನಿಯ ನೀರನ್ನು ಬ್ರಾಹ್ಮಣರು ಕೊಂಡೊಯ್ಯುವುದಾಗಿದೆ.

ಕೆ. ಬಿ. ಸಿದ್ದಯ್ಯ

ಈ ಜನಪದ ಸ್ಮೃತಿಯ ಮೂಲ ಹಿಡಿದು ಹೊರಟಾಗ ಅದು ವಚನ ಚಳವಳಿಯ ಹರಳಯ್ಯ ದಂಪತಿ ಮತ್ತು ಬ್ರಾಹ್ಮಣ ಮಧುವರಸ ಪ್ರಸಂಗಕ್ಕೆ ಹೋಗಿ ನಿಲ್ಲುತ್ತದೆ. ಬಸವಣ್ಣನವರು ಹರಳಯ್ಯರಿಗೆ ಶರಣುಶರಣಾರ್ಥಿ ಎಂದುದನ್ನು ಋಣವೆಂದು ತಿಳಿದ ಹರಳಯ್ಯನ ತನ್ನ ಮಡದಿಗೆ ಹೋಗಿ ಈ ವಿಚಾರ ತಿಳಿಸಿದಾಗ ಇಬ್ಬರ ತೊಡೆ ಚರ್ಮದಿಂದ ಬಸವಣ್ಣನಿಗೆ ಚಪ್ಪಲಿ ಮಾಡಿಕೊಡಬೇಕೆಂಬ ತೀರ್ಮಾನಕ್ಕೆ ಬರುತ್ತಾರೆ ಹಾಗೂ ಹಾಗೆಯೇ ಮಾಡುತ್ತಾರೆ. ಹರಳಯ್ಯ ದಂಪತಿಗಳು ಅದನ್ನು ಹೊತ್ತು ಬಸವಣ್ಣನ ಬಳಿಗೆ ತೆರಳುವಾಗ ದಾರಿಯಲ್ಲಿ ಕಂಡ ಮಧುವರಸ ಆ ಚಪ್ಪಲಿಗಳನ್ನು ಬಲವಂತದಿಂದ ಕಸಿದು ಮೆಟ್ಟಿಕೊಳ್ಳುತ್ತಾನೆ. ತಕ್ಷಣವೇ ಆ ಚಪ್ಪಲಿಗಳು ಬೆಂಕಿಯಂತೆ ಉರಿಯಲಾರಂಭಿಸುತ್ತವೆ. ಉರಿಚಮ್ಮಾಳಿಗೆ ಆಗುತ್ತವೆ. ಚಪ್ಪಲಿಗಳನ್ನು ತೆಗೆದರೂ ಆ ಮೈ ಉರಿ ಕಾಣೆಯಾಗದೆ ತೀವ್ರವಾಗುತ್ತದೆ. ಅದೆಷ್ಟೇ ಔಷಧೋಪಚಾರ, ಪೂಜೆಗಳನ್ನು ಮಾಡಿದರೂ ಉರಿ ಕಡಿಮೆಯೇ ಆಗುವುದಿಲ್ಲ. ಕಡೆಗೆ ಹರಳಯ್ಯನ ಮನೆಯ ಮಗಳು ಗಲ್ಲೇಬಾನಿಯ ನೀರನ್ನು ಮಧುವರಸ ಮೈಮೇಲೆ ಸುರಿದಾಗ ಉರಿ ಕಡಿಮೆಯಾಗುತ್ತದೆ. ಅಂದಿನಿಂದ ಬ್ರಾಹ್ಮಣರಿಗೆ ಗಲ್ಲೇಬಾನಿಯ ನೀರು ಪವಿತ್ರ ಎಂಬ ಜಾನಪದ ಕತೆ ಜನಮಾನಸದಲ್ಲಿ ಬೆರೆತುಹೋಗಿದೆ. ಇದಕ್ಕೆ ಮಂಟೆಸ್ವಾಮಿ ಹಾಗೂ ಮಲೆ ಮಹದೇಶ್ವರ ಕಾವ್ಯಗಳೇ ಸಾಕ್ಷಿ.

ಇನ್ನು ಪುರಾಣಗಳನ್ನು ಶೋಧಿಸಿದಾಗ ವಸಿಷ್ಠ ತಾನು ಮದುವೆಯಾಗುವ ಹುಡುಗಿಯನ್ನು ಹುಡುಕಿಕೊಂಡು ಬರುವುದು ಮಾದಿಗರ ಕೇರಿಗೆಯೇ. ಅವನು ಮಾದಿಗ ಅರುಂಧತಿಯ ಮನೆಗೆ ಬರುತ್ತಾನೆ. ಅವಳ ಮೂಲ ಹೆಸರು ಆರಂಜ್ಯೋತಿ. ಅವಳು ಗಲ್ಲೇಬಾನಿಯ ನೀರಿನಿಂದ ಆತನನ್ನು ಪರಿಶುದ್ಧಗೊಳಿಸುತ್ತಾಳೆ ಹಾಗೂ ವಿವಾಹವಾಗುತ್ತಾಳೆ. ಇದರ ಬಗ್ಗೆ ಸಂಸ್ಕೃತಿ ಚಿಂತಕ ವಡ್ಡಗೆರೆ ನಾಗರಾಜರವರು ಸಂಪೂರ್ಣ ಅಧ್ಯಯನ ಮಾಡಿದ್ದಾರೆ.

ಕುತೂಹಲಕಾರಿ ಎಂದರೆ 1891ರ ಬ್ರಿಟಿಷ್ ಭಾರತದ ಮೊದಲ ಜನಗಣತಿಯಲ್ಲಿ ಮೈಸೂರಿನ ಮಾದಿಗರು ತಮ್ಮನ್ನು ’ಮಾತಂಗ ಬ್ರಾಹ್ಮಣರು’ ಎಂದು ಘೋಷಿಸಿಕೊಂಡಿರುವುದು ಸಹ ಇಲ್ಲಿ ಉಲ್ಲೇಖಾರ್ಹ (ದಕ್ಷಿಣ ಭಾರತದ ಜಾತಿ ಬುಡಕಟ್ಟುಗಳು – ಸಂಪುಟ 4 – ಎಡ್ಗರ್ ಥರ್ಸ್ಟನ್/ಕೆ. ರಂಗಾಚಾರಿ)

ಡಾ. ಎಂ. ಚಿದಾನಂದ ಮೂರ್ತಿ

ಒಟ್ಟಾರೆ ಚರ್ಮವನ್ನು ಹದಮಾಡಿ ಚಪ್ಪಲಿಯನ್ನು ಅದ್ದುವ ನೀರು ಪವಿತ್ರ. ಇದರಿಂದ ಬ್ರಾಹ್ಮಣರೂ ಪವಿತ್ರವಾಗುತ್ತಾರೆ ಎಂಬುದು ಐತಿಹ್ಯ. ಯಾವ ಕಾಯಕವೂ ಉಚ್ಚವಲ್ಲ, ನೀಚವಲ್ಲ ಎಂಬ ಸತ್ಯವನ್ನು ಸಾರುತ್ತದೆ ಈ ಆಚರಣೆ.

ಪ್ರಶ್ನೆ 2. ಮಹಾಭಾರತದ ಶಲ್ಯ ಮಾದಿಗನಲ್ಲವೇ?

ಸ್ಪಷ್ಟೀಕರಣ: ಅಲ್ಲ. ಮಹಾಭಾರತವು ರಾಮಾಯಣಕ್ಕಿಂತಲೂ ಹಿಂದಿನ ಮಹಾಕಾವ್ಯವಾಗಿದೆ. ರಾಮಾಯಣ ಬರೆದ ಕಾಲಘಟ್ಟದಲ್ಲಿಯೇ ಅಸ್ಪೃಶ್ಯತೆ ಕಂಡುಬರದೇ ಇರುವಾಗ ಮಹಾಭಾರತದಲ್ಲಿ ಅಸ್ಪೃಶ್ಯತೆಯ ಇರುವಿಕೆ ಸಾಧ್ಯವಿಲ್ಲ. ಮುಂದುವರೆದು, ಕರ್ಣನನ್ನೇ ಕ್ಷತ್ರಿಯನೆಂದು ಒಪ್ಪಿಕೊಳ್ಳದ ಪಾಂಡವರು ಶಲ್ಯನ ಸೋದರಿ ಮಾದ್ರಿಯನ್ನು ಪಾಂಡುರಾಜನಿಗೆ ವಿವಾಹವಾಗಿಸಲು ಸಾಧ್ಯವಿಲ್ಲ. ಮಾದ್ರಿಯ ಮಕ್ಕಳಾದ ನಕುಲ ಮತ್ತು ಸಹದೇವರಿಂದ ಯಾಗಗಳನ್ನು ನೆರವೇರಿಸಲೂ ಸಾಧ್ಯವಿಲ್ಲ. ಶಲ್ಯ ಕುರುಕ್ಷೇತ್ರದ ಕಡೆಯ ದಿನದ ಯುದ್ಧದಲ್ಲಿ ದಂಡನಾಯಕನಾಗಲೂ ಸಾಧ್ಯವಿಲ್ಲ. ಮಾದ್ರ ರಾಜ್ಯದ ಶಲ್ಯನ ವಂಶಸ್ಥರು ಚಾತುರ್ವರ್ಣ ಪರಿಪಾಲಕರಲ್ಲ ಎಂಬ ಕಾರಣದಿಂದ ಅವರನ್ನು ಅಸ್ಪೃಶ್ಯರೆಂದು ಬಗೆಯುವುದು ಐತಿಹಾಸಿಕವಾಗಿ ತಪ್ಪಾಗುತ್ತದೆ. ಏಕೆಂದರೆ ಅಂತಹ ಚಾತುರ್ವರ್ಣ ಪರಿಪಾಲಿಸದ ನೂರಾರು ರಾಜ್ಯಗಳು ಹಸ್ತಿನಾಪುರದ ಸುತ್ತಲೂ ಇರುತ್ತವೆ. ಇದರಷ್ಟೇ ಸತ್ಯ ಆರ್ಯವರ್ತವನ್ನು ಬಿಟ್ಟು ಮಿಕ್ಕ ಇನ್ನಾವ ಪ್ರಾಚೀನ ಭಾರತದಲ್ಲಿಯೂ ಚಾತುರ್ವರ್ಣ ವ್ಯವಸ್ಥೆ ಇಲ್ಲದಿದ್ದದ್ದು. ಘಟೋತ್ಗಜನದ್ದೂ ಅಂತಹದ್ದೇ ಬುಡಕಟ್ಟಿನ ಪ್ರಾಂತ್ಯ. ಹಾಗಾಗಿ ಕರ್ಣ ಹಾಗೂ ಶಲ್ಯರಿಬ್ಬರ ನಡುವೆ ನಡೆಯುವ ಸಂಭಾಷಣೆ ಒಬ್ಬರನ್ನೊಬ್ಬರೂ ಹೀಗಳೆಯಲಷ್ಟೇ ಆಗಿರುತ್ತದೆ. ಅದಕ್ಕೂ ಅಸ್ಪೃಶ್ಯತೆಗೂ ಸಂಬಂಧವಿಲ್ಲ. ಏಕೆಂದರೆ ಅಸ್ಪೃಶ್ಯತೆ ಕಾಣಿಸಿಕೊಂಡದ್ದು ಕ್ರಿ.ಶ 4ನೇ ಶತಮಾನದಲ್ಲಿ. ಇದರ ಬಗ್ಗೆ ಹೆಚ್ಚು ತಿಳಿಯಲು ದಯಮಾಡಿ ಈ ಅಂಕಣದ ’ಪ್ರಾಚೀನ ಭಾರತದಲ್ಲಿ ಅಸ್ಪೃಶ್ಯತೆ; ಹಾಗೂ ’ಮಧ್ಯಕಾಲೀನ ಭಾರತದಲ್ಲಿ ಅಸ್ಪೃಶ್ಯತೆ’ ಲೇಖನಗಳನ್ನು ಓದಿ.


ಇದನ್ನೂ ಓದಿ: ಮಾತು ಮರೆತ ಭಾರತ; ಅಸ್ಪೃಶ್ಯರು ಪರಿಶಿಷ್ಟ ಜಾತಿಗಳಾಗಿದ್ದು ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ನಾನೂ ಹಲವಾರು ಬ್ರಾಹ್ಮಣರನ್ನು ಕೇಳಿದೆ. ಯಾರಿಗೂ ಗಲ್ಲೇಬಾನಿಯ ನೀರನ್ನು ಬ್ರಾಹ್ಮಣರ ಮದುವೆಯಲ್ಲಿ ಬಳಸುವ ಬಗ್ಗೆ ಗೊತ್ತಿಲ್ಲ. ಪ್ರಚಲಿತದಲ್ಲಿ ಇಲ್ಲ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...