Homeನಾನು ಗೌರಿಓದುಗರ ಪ್ರತಿಕ್ರಿಯೆ-ಸ್ಪಷ್ಟೀಕರಣ; ಸೂಕ್ತ ಉಲ್ಲೇಖಗಳನ್ನು ಕೊಟ್ಟಿದ್ದರೆ ಸ್ಪಷ್ಟವಾಗುತ್ತಿತ್ತು

ಓದುಗರ ಪ್ರತಿಕ್ರಿಯೆ-ಸ್ಪಷ್ಟೀಕರಣ; ಸೂಕ್ತ ಉಲ್ಲೇಖಗಳನ್ನು ಕೊಟ್ಟಿದ್ದರೆ ಸ್ಪಷ್ಟವಾಗುತ್ತಿತ್ತು

- Advertisement -
- Advertisement -

ಸೂಕ್ತ ಉಲ್ಲೇಖಗಳನ್ನು ಕೊಟ್ಟಿದ್ದರೆ ಸ್ಪಷ್ಟವಾಗುತ್ತಿತ್ತು..: ಪ್ರತಿಭಾ ನಂದಕುಮಾರ್

ಕಳೆದ ಸಂಚಿಕೆಯಲ್ಲಿ ಪ್ರಕಟವಾದ ಮಾತು ಮರೆತ ಭಾರತದ ಅಂಕಣದ ’ಕರ್ನಾಟಕದಲ್ಲಿ ಅಸ್ಪೃಶ್ಯತೆ’ (ಇಲ್ಲಿ ಕ್ಲಿಕ್ ಮಾಡಿ) ಬರಹಕ್ಕೆ ಸಂಬಂಧಿಸಿದಂತೆ ಕವಿ-ಬರಹಗಾರ್ತಿ ಪ್ರತಿಭಾ ನಂದಕುಮಾರ್ ಹೀಗೆ ಪ್ರತಿಕ್ರಿಯಿಸಿದ್ದರು: “ಹಲವು ಹೇಳಿಕೆಗಳಿಗೆ ಸೂಕ್ತ ಉಲ್ಲೇಖಗಳನ್ನು (ರೆಫೆರೆನ್ಸ್) ಕೊಟ್ಟಿದ್ದರೆ ಸ್ಪಷ್ಟವಾಗುತ್ತಿತ್ತು. ಉದಾಹರಣೆಗೆ ’ಮಾದಿಗರ ಗಲ್ಲೇಬಾನಿ (ಚಪ್ಪಲಿ ತೊಳೆದ ನೀರು) ನೀರಿಲ್ಲದೆ ಬ್ರಾಹ್ಮಣರ ಹೆಣ್ಣು ಮಕ್ಕಳ ಮದುವೆಯಾಗುತ್ತಿರಲಿಲ್ಲ’ ಇದು ಎಲ್ಲಿ ಹೇಳಿದೆ?

ಪ್ರತಿಭಾ ನಂದಕುಮಾರ್

ಮಹಾಭಾರತದಲ್ಲಿ ಕರ್ಣನು ಶಲ್ಯನನ್ನು ಹೀಯಾಳಿಸುವಾಗ ಮಾದ್ರಕರ ಹೆಂಗಸರ ಬಗ್ಗೆ ಕೀಳಾಗಿ ವರ್ಣಿಸುತ್ತಾನೆ. ಆದರೆ ಅಲ್ಲಿ ಅಸ್ಪೃಶ್ಯತೆಯ ಪ್ರಸ್ತಾಪವಿಲ್ಲ. ಮಾದ್ರಕ-ಮಾದ್ರ ರಾಜ್ಯ-ಮಾದ್ರಿ-ಅವಳ ಅಣ್ಣ ಶಲ್ಯ. ಭೀಷ್ಮ ಮಾದ್ರ ರಾಜ್ಯಕ್ಕೆ ಹೋಗಿ ಮಾದ್ರಿಯನ್ನು ಪಾಂಡುವಿಗೆ ವಧುವಾಗಲು ಕೋರಿದಾಗ ಶಲ್ಯ ’ಪಾಣಿಗ್ರಹಣ ತಮ್ಮಲ್ಲಿಲ್ಲ ’ತೆರ’ ಕೊಟ್ಟು ಕರೆದುಕೊಂಡು ಹೋಗು’ ಎಂದಾಗ ಭೀಷ್ಮ ಹಣ, ಚಿನ್ನ, ಆನೆ, ಕುದುರೆ ಇತ್ಯಾದಿ ಕೊಟ್ಟು ಅವಳನ್ನು ಕರೆದುಕೊಂಡು ಹೋಗುತ್ತಾನೆ. ಮಾದ್ರಕರು ಮಾದರುಗಳಾದರೆ (ಕರ್ಣನ ಹೀಯಾಳಿಕೆ ಅರ್ಥೈಸಿ) ಭೀಷ್ಮ ಪಾಂಡುವಿಗೆ ಮಾದ್ರಿಯನ್ನು ಮದುವೆಯಾಗಿಸಿದ ಅಂದರೆ ಅಲ್ಲಿ ವರ್ಣ ಸಂಕರ ಇರಲಿಲ್ಲ ಎಂದರ್ಥವೇ? ಉತ್ತರದಲ್ಲಿ ಮಹಾಭಾರತದ ಕಾಲಕ್ಕೆ (ಆಗಿನ ಆರ್ಯರ ಪದ್ಧತಿಯಂತೆ) ಅಸ್ಪೃಶ್ಯತೆ ಇರಲಿಲ್ಲ ಅಂದರೆ ಅಲ್ಲಿಂದ ದಕ್ಷಿಣಕ್ಕೆ ಬಂದ ’ಬ್ರಾಹ್ಮಣ ಪುರೋಹಿತರು ತಮ್ಮೊಂದಿಗೆ ಚಾತುರ್ವರ್ಣ ಧರ್ಮವನ್ನು ಹೊತ್ತುಕೊಂಡು ಹೋದರು ಹಾಗೂ ವಿಸ್ತರಿಸಿದರು. ಈ ಭಾಗವಾಗಿಯೇ ಕರ್ನಾಟಕಕ್ಕೂ ವರ್ಣವ್ಯವಸ್ಥೆ ಕಾಲಿಟ್ಟಿತು. ಅದರೊಂದಿಗೆ ಜಾತಿಪದ್ಧತಿ, ಅಸ್ಪೃಶ್ಯತೆಯೂ ಕಾಲಿಟ್ಟಿತು’ ಎನ್ನುವುದನ್ನು ಅರ್ಥೈಸುವಲ್ಲಿ ಸ್ವಲ್ಪ ಗೊಂದಲ ಇದೆ.

ಚಾತುರ್ವರ್ಣ ಪರಿಪಾಲಿಸದ ಶಲ್ಯ ವಂಶಸ್ಥರನ್ನು ಅಸ್ಪೃಶ್ಯರು ಎನ್ನಲಾಗುವುದಿಲ್ಲ: ಸಾಕ್ಯ ಸಮಗಾರ

ಪ್ರಶ್ನೆ 1. ’ಮಾದಿಗರ ಗಲ್ಲೇಬಾನಿ ನೀರಿಲ್ಲದೆ ಬ್ರಾಹ್ಮಣರ ಮಕ್ಕಳ ಮದುವೆಯಾಗುತ್ತಿರಲಿಲ್ಲ’ ಇದು ಎಲ್ಲಿ ಹೇಳಿದೆ?
ಸ್ಪಷ್ಟೀಕರಣ: ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಪ್ರಖ್ಯಾತ ಸಂಸ್ಕೃತಿ ಚಿಂತಕ ಹಾಗೂ ಕವಿ ಕೆ. ಬಿ. ಸಿದ್ದಯ್ಯನವರು ತಮ್ಮ ಗಲ್ಲೇಬಾನಿ ಖಂಡಕಾವ್ಯಕ್ಕೆ ಮುನ್ನುಡಿ ಬರೆಯುತ್ತಾ ಹೀಗೆ ಉಲ್ಲೇಖಿಸುತ್ತಾರೆ. ’ಈ (ಗಲ್ಲೇಬಾನಿ) ನೀರನ್ನು ಶಾಸ್ತ್ರದ ನೀರು ಎಂದು ಕರೆಯುತ್ತಾರೆ. ವಿಪ್ರ ಬಂಧುಗಳು ಅವರಲ್ಲಿ ನಡೆಯುವ ವಿವಾಹ ಸಂದರ್ಭದಲ್ಲಿ ನವವಧುವರರ ನೆತ್ತಿಯ ಮೇಲೆ ’ಶಾಸ್ತ್ರದ ನೀರ’ನ್ನು ಚುಮುಕಿಸಿ, ಅರುಂಧತಿ ನಕ್ಷತ್ರ ದರ್ಶನ ಮಾಡಿಸಿದರೆ ಶುಭವಾಗುತ್ತದೆ ಎಂದು ಕಲ್ಲುನೀರು ಕರಗೋ ಹೊತ್ತಿನಲ್ಲಿ ಕಾಡಿಬೇಡಿ ’ಗಲ್ಲೇಬಾನಿ’ ನೀರನ್ನು ಚಮ್ಮಾರನ ಅನುಗ್ರಹದಿಂದ ಪಡೆದುಕೊಳ್ಳುತ್ತಾರೆಂಬುದು ಜನಪದರ ನಾಲಿಗೆ ಮೇಲಿನ ಸೋಜಿಗದ ಸಂಗತಿಯಾಗಿದೆ’ ಎನ್ನುತ್ತಾರೆ.

ಡಾ. ಎಂ. ಚಿದಾನಂದ ಮೂರ್ತಿಯವರು ಬರೆದಿರುವ ’ಮಧ್ಯಕಾಲೀನ ಕರ್ನಾಟಕ ಮತ್ತು ಅಸ್ಪೃಶ್ಯತೆ’ ಕೃತಿಯಲ್ಲಿ ’ಚಪ್ಪಲಿ ಹೊಲಿಯಲು ಅದ್ದುವ ನೀರನ್ನು ಪವಿತ್ರವೆಂದು ಭಾವಿಸುವ ಹೊಲೆಯರು ಅದು ಬ್ರಾಹ್ಮಣರ ಕೈಗೆ ಹೋಗದಂತೆ ಎಚ್ಚರ ವಹಿಸುತ್ತಾರೆ’ ಎಂದು ಬರೆಯುತ್ತಾ ಮುಂದುವರೆದು ’ಕೆಲವೆಡೆ ಬ್ರಾಹ್ಮಣರು ತಮ್ಮ ಮದುವೆಯ ದಿನ ರಾತ್ರಿ ಗುಟ್ಟಾಗಿ ಹೊಲೆಗೇರಿಗೆ ಬಂದು ’ಸುರೆಬಾನಿ’ ನೀರನ್ನು (ಚಪ್ಪಲಿ ಅದ್ದಿದ ನೀರನ್ನು) ತೆಗೆದುಕೊಂಡು ಹೋಗುತ್ತಾರೆ ಎಂಬ ವದಂತಿಗಳಿವೆ’ ಎನ್ನುತ್ತಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಕೆಲವು ಬ್ರಾಹ್ಮಣರನ್ನು ’ಮಧ್ಯಾಹ್ನದ ಮಾದಿಗ’ರೆಂದು ಹಾಗೂ ಮೈಸೂರು ಜಿಲ್ಲೆಯ ಕೆಲವು ಬ್ರಾಹ್ಮಣರನ್ನು ’ಮಧ್ಯಾಹ್ನದ ಹೊಲೆಯ’ರೆಂದು ಕರೆಯುವ ವಾಡಿಕೆ ಇದೆ. ಇದಕ್ಕೂ ಮೂಲಕಾರಣ ಗಲ್ಲೇಬಾನಿಯ ನೀರನ್ನು ಬ್ರಾಹ್ಮಣರು ಕೊಂಡೊಯ್ಯುವುದಾಗಿದೆ.

ಕೆ. ಬಿ. ಸಿದ್ದಯ್ಯ

ಈ ಜನಪದ ಸ್ಮೃತಿಯ ಮೂಲ ಹಿಡಿದು ಹೊರಟಾಗ ಅದು ವಚನ ಚಳವಳಿಯ ಹರಳಯ್ಯ ದಂಪತಿ ಮತ್ತು ಬ್ರಾಹ್ಮಣ ಮಧುವರಸ ಪ್ರಸಂಗಕ್ಕೆ ಹೋಗಿ ನಿಲ್ಲುತ್ತದೆ. ಬಸವಣ್ಣನವರು ಹರಳಯ್ಯರಿಗೆ ಶರಣುಶರಣಾರ್ಥಿ ಎಂದುದನ್ನು ಋಣವೆಂದು ತಿಳಿದ ಹರಳಯ್ಯನ ತನ್ನ ಮಡದಿಗೆ ಹೋಗಿ ಈ ವಿಚಾರ ತಿಳಿಸಿದಾಗ ಇಬ್ಬರ ತೊಡೆ ಚರ್ಮದಿಂದ ಬಸವಣ್ಣನಿಗೆ ಚಪ್ಪಲಿ ಮಾಡಿಕೊಡಬೇಕೆಂಬ ತೀರ್ಮಾನಕ್ಕೆ ಬರುತ್ತಾರೆ ಹಾಗೂ ಹಾಗೆಯೇ ಮಾಡುತ್ತಾರೆ. ಹರಳಯ್ಯ ದಂಪತಿಗಳು ಅದನ್ನು ಹೊತ್ತು ಬಸವಣ್ಣನ ಬಳಿಗೆ ತೆರಳುವಾಗ ದಾರಿಯಲ್ಲಿ ಕಂಡ ಮಧುವರಸ ಆ ಚಪ್ಪಲಿಗಳನ್ನು ಬಲವಂತದಿಂದ ಕಸಿದು ಮೆಟ್ಟಿಕೊಳ್ಳುತ್ತಾನೆ. ತಕ್ಷಣವೇ ಆ ಚಪ್ಪಲಿಗಳು ಬೆಂಕಿಯಂತೆ ಉರಿಯಲಾರಂಭಿಸುತ್ತವೆ. ಉರಿಚಮ್ಮಾಳಿಗೆ ಆಗುತ್ತವೆ. ಚಪ್ಪಲಿಗಳನ್ನು ತೆಗೆದರೂ ಆ ಮೈ ಉರಿ ಕಾಣೆಯಾಗದೆ ತೀವ್ರವಾಗುತ್ತದೆ. ಅದೆಷ್ಟೇ ಔಷಧೋಪಚಾರ, ಪೂಜೆಗಳನ್ನು ಮಾಡಿದರೂ ಉರಿ ಕಡಿಮೆಯೇ ಆಗುವುದಿಲ್ಲ. ಕಡೆಗೆ ಹರಳಯ್ಯನ ಮನೆಯ ಮಗಳು ಗಲ್ಲೇಬಾನಿಯ ನೀರನ್ನು ಮಧುವರಸ ಮೈಮೇಲೆ ಸುರಿದಾಗ ಉರಿ ಕಡಿಮೆಯಾಗುತ್ತದೆ. ಅಂದಿನಿಂದ ಬ್ರಾಹ್ಮಣರಿಗೆ ಗಲ್ಲೇಬಾನಿಯ ನೀರು ಪವಿತ್ರ ಎಂಬ ಜಾನಪದ ಕತೆ ಜನಮಾನಸದಲ್ಲಿ ಬೆರೆತುಹೋಗಿದೆ. ಇದಕ್ಕೆ ಮಂಟೆಸ್ವಾಮಿ ಹಾಗೂ ಮಲೆ ಮಹದೇಶ್ವರ ಕಾವ್ಯಗಳೇ ಸಾಕ್ಷಿ.

ಇನ್ನು ಪುರಾಣಗಳನ್ನು ಶೋಧಿಸಿದಾಗ ವಸಿಷ್ಠ ತಾನು ಮದುವೆಯಾಗುವ ಹುಡುಗಿಯನ್ನು ಹುಡುಕಿಕೊಂಡು ಬರುವುದು ಮಾದಿಗರ ಕೇರಿಗೆಯೇ. ಅವನು ಮಾದಿಗ ಅರುಂಧತಿಯ ಮನೆಗೆ ಬರುತ್ತಾನೆ. ಅವಳ ಮೂಲ ಹೆಸರು ಆರಂಜ್ಯೋತಿ. ಅವಳು ಗಲ್ಲೇಬಾನಿಯ ನೀರಿನಿಂದ ಆತನನ್ನು ಪರಿಶುದ್ಧಗೊಳಿಸುತ್ತಾಳೆ ಹಾಗೂ ವಿವಾಹವಾಗುತ್ತಾಳೆ. ಇದರ ಬಗ್ಗೆ ಸಂಸ್ಕೃತಿ ಚಿಂತಕ ವಡ್ಡಗೆರೆ ನಾಗರಾಜರವರು ಸಂಪೂರ್ಣ ಅಧ್ಯಯನ ಮಾಡಿದ್ದಾರೆ.

ಕುತೂಹಲಕಾರಿ ಎಂದರೆ 1891ರ ಬ್ರಿಟಿಷ್ ಭಾರತದ ಮೊದಲ ಜನಗಣತಿಯಲ್ಲಿ ಮೈಸೂರಿನ ಮಾದಿಗರು ತಮ್ಮನ್ನು ’ಮಾತಂಗ ಬ್ರಾಹ್ಮಣರು’ ಎಂದು ಘೋಷಿಸಿಕೊಂಡಿರುವುದು ಸಹ ಇಲ್ಲಿ ಉಲ್ಲೇಖಾರ್ಹ (ದಕ್ಷಿಣ ಭಾರತದ ಜಾತಿ ಬುಡಕಟ್ಟುಗಳು – ಸಂಪುಟ 4 – ಎಡ್ಗರ್ ಥರ್ಸ್ಟನ್/ಕೆ. ರಂಗಾಚಾರಿ)

ಡಾ. ಎಂ. ಚಿದಾನಂದ ಮೂರ್ತಿ

ಒಟ್ಟಾರೆ ಚರ್ಮವನ್ನು ಹದಮಾಡಿ ಚಪ್ಪಲಿಯನ್ನು ಅದ್ದುವ ನೀರು ಪವಿತ್ರ. ಇದರಿಂದ ಬ್ರಾಹ್ಮಣರೂ ಪವಿತ್ರವಾಗುತ್ತಾರೆ ಎಂಬುದು ಐತಿಹ್ಯ. ಯಾವ ಕಾಯಕವೂ ಉಚ್ಚವಲ್ಲ, ನೀಚವಲ್ಲ ಎಂಬ ಸತ್ಯವನ್ನು ಸಾರುತ್ತದೆ ಈ ಆಚರಣೆ.

ಪ್ರಶ್ನೆ 2. ಮಹಾಭಾರತದ ಶಲ್ಯ ಮಾದಿಗನಲ್ಲವೇ?

ಸ್ಪಷ್ಟೀಕರಣ: ಅಲ್ಲ. ಮಹಾಭಾರತವು ರಾಮಾಯಣಕ್ಕಿಂತಲೂ ಹಿಂದಿನ ಮಹಾಕಾವ್ಯವಾಗಿದೆ. ರಾಮಾಯಣ ಬರೆದ ಕಾಲಘಟ್ಟದಲ್ಲಿಯೇ ಅಸ್ಪೃಶ್ಯತೆ ಕಂಡುಬರದೇ ಇರುವಾಗ ಮಹಾಭಾರತದಲ್ಲಿ ಅಸ್ಪೃಶ್ಯತೆಯ ಇರುವಿಕೆ ಸಾಧ್ಯವಿಲ್ಲ. ಮುಂದುವರೆದು, ಕರ್ಣನನ್ನೇ ಕ್ಷತ್ರಿಯನೆಂದು ಒಪ್ಪಿಕೊಳ್ಳದ ಪಾಂಡವರು ಶಲ್ಯನ ಸೋದರಿ ಮಾದ್ರಿಯನ್ನು ಪಾಂಡುರಾಜನಿಗೆ ವಿವಾಹವಾಗಿಸಲು ಸಾಧ್ಯವಿಲ್ಲ. ಮಾದ್ರಿಯ ಮಕ್ಕಳಾದ ನಕುಲ ಮತ್ತು ಸಹದೇವರಿಂದ ಯಾಗಗಳನ್ನು ನೆರವೇರಿಸಲೂ ಸಾಧ್ಯವಿಲ್ಲ. ಶಲ್ಯ ಕುರುಕ್ಷೇತ್ರದ ಕಡೆಯ ದಿನದ ಯುದ್ಧದಲ್ಲಿ ದಂಡನಾಯಕನಾಗಲೂ ಸಾಧ್ಯವಿಲ್ಲ. ಮಾದ್ರ ರಾಜ್ಯದ ಶಲ್ಯನ ವಂಶಸ್ಥರು ಚಾತುರ್ವರ್ಣ ಪರಿಪಾಲಕರಲ್ಲ ಎಂಬ ಕಾರಣದಿಂದ ಅವರನ್ನು ಅಸ್ಪೃಶ್ಯರೆಂದು ಬಗೆಯುವುದು ಐತಿಹಾಸಿಕವಾಗಿ ತಪ್ಪಾಗುತ್ತದೆ. ಏಕೆಂದರೆ ಅಂತಹ ಚಾತುರ್ವರ್ಣ ಪರಿಪಾಲಿಸದ ನೂರಾರು ರಾಜ್ಯಗಳು ಹಸ್ತಿನಾಪುರದ ಸುತ್ತಲೂ ಇರುತ್ತವೆ. ಇದರಷ್ಟೇ ಸತ್ಯ ಆರ್ಯವರ್ತವನ್ನು ಬಿಟ್ಟು ಮಿಕ್ಕ ಇನ್ನಾವ ಪ್ರಾಚೀನ ಭಾರತದಲ್ಲಿಯೂ ಚಾತುರ್ವರ್ಣ ವ್ಯವಸ್ಥೆ ಇಲ್ಲದಿದ್ದದ್ದು. ಘಟೋತ್ಗಜನದ್ದೂ ಅಂತಹದ್ದೇ ಬುಡಕಟ್ಟಿನ ಪ್ರಾಂತ್ಯ. ಹಾಗಾಗಿ ಕರ್ಣ ಹಾಗೂ ಶಲ್ಯರಿಬ್ಬರ ನಡುವೆ ನಡೆಯುವ ಸಂಭಾಷಣೆ ಒಬ್ಬರನ್ನೊಬ್ಬರೂ ಹೀಗಳೆಯಲಷ್ಟೇ ಆಗಿರುತ್ತದೆ. ಅದಕ್ಕೂ ಅಸ್ಪೃಶ್ಯತೆಗೂ ಸಂಬಂಧವಿಲ್ಲ. ಏಕೆಂದರೆ ಅಸ್ಪೃಶ್ಯತೆ ಕಾಣಿಸಿಕೊಂಡದ್ದು ಕ್ರಿ.ಶ 4ನೇ ಶತಮಾನದಲ್ಲಿ. ಇದರ ಬಗ್ಗೆ ಹೆಚ್ಚು ತಿಳಿಯಲು ದಯಮಾಡಿ ಈ ಅಂಕಣದ ’ಪ್ರಾಚೀನ ಭಾರತದಲ್ಲಿ ಅಸ್ಪೃಶ್ಯತೆ; ಹಾಗೂ ’ಮಧ್ಯಕಾಲೀನ ಭಾರತದಲ್ಲಿ ಅಸ್ಪೃಶ್ಯತೆ’ ಲೇಖನಗಳನ್ನು ಓದಿ.


ಇದನ್ನೂ ಓದಿ: ಮಾತು ಮರೆತ ಭಾರತ; ಅಸ್ಪೃಶ್ಯರು ಪರಿಶಿಷ್ಟ ಜಾತಿಗಳಾಗಿದ್ದು ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ನಾನೂ ಹಲವಾರು ಬ್ರಾಹ್ಮಣರನ್ನು ಕೇಳಿದೆ. ಯಾರಿಗೂ ಗಲ್ಲೇಬಾನಿಯ ನೀರನ್ನು ಬ್ರಾಹ್ಮಣರ ಮದುವೆಯಲ್ಲಿ ಬಳಸುವ ಬಗ್ಗೆ ಗೊತ್ತಿಲ್ಲ. ಪ್ರಚಲಿತದಲ್ಲಿ ಇಲ್ಲ

LEAVE A REPLY

Please enter your comment!
Please enter your name here

- Advertisment -

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...