Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌ ಚೆಕ್‌: ‘ಊದುಪಾವೈ’ ಔಷಧೀಯ ಸಸ್ಯದ ಕಥೆ ಓದಿ ನಕ್ಕುಬಿಡಿ!

ಫ್ಯಾಕ್ಟ್‌ ಚೆಕ್‌: ‘ಊದುಪಾವೈ’ ಔಷಧೀಯ ಸಸ್ಯದ ಕಥೆ ಓದಿ ನಕ್ಕುಬಿಡಿ!

ಐಎಫ್‌ಎಸ್‌ ಅಧಿಕಾರಿಯೊಬ್ಬರೂ ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಂಡು, ಆನಂತರದಲ್ಲಿ ಡಿಲೀಟ್‌ ಮಾಡಿರುವ ಪ್ರಹಸನವೂ ನಡೆದಿದೆ...

- Advertisement -
- Advertisement -

“ಈ ವಿಡಿಯೊದಲ್ಲಿರುವ ಸಸ್ಯವು ಪ್ರಕೃತಿಯ ವಿಸ್ಮಯವಾಗಿದ್ದು, ಶಬ್ದದೊಂದಿಗೆ ಪರಾಗವನ್ನು ಹೊರಗೆ ಸೂಸಿಸುತ್ತಿದೆ. ಇದು ಊದು ಪಾವೈ ಎಂಬ ಔಷಧೀಯ ಸಸಿಯಾಗಿದ್ದು, ದಟ್ಟವಾದ ಮಳೆ ಕಾಡುಗಳಲ್ಲಿ ಬೆಳೆಯುತ್ತದೆ, ಶಬ್ದವನ್ನು ಮಾಡುತ್ತಾ ಪರಾಗವನ್ನು ಹೊರಸೂಸುತ್ತದೆ” ಎಂಬ ಪ್ರತಿಪಾದನೆಯೊಂದಿಗೆ ಒಂದು ಪೋಸ್ಟ್‌ ವೈರಲ್‌ ಆಗಿದೆ. ಈ ವಿಡಿಯೋವನ್ನು ಇದೇ ಪ್ರತಿಪಾದನೆಯೊಂದಿಗೆ ಐಎಫ್‌ಎಸ್‌ ಅಧಿಕಾರಿಯೊಬ್ಬರೂ ಟ್ವಿಟರ್‌ನಲ್ಲಿ ಹಂಚಿಕೊಂಡು, ಆನಂತರದಲ್ಲಿ ಡಿಲೀಟ್‌ ಮಾಡಿರುವ ಪ್ರಹಸನವೂ ನಡೆದಿದೆ.

ನಾವು ಸೂಕ್ಷ್ಮವಾಗಿ ನೋಡಿದರೆ ಈ ವಿಡಿಯೋದಲ್ಲಿ ‘LUKE PENRY EXR’ ಎಂದು ವಾಟರ್‌ ಮಾರ್ಕ್‌ ಇರುವುದು ಕಂಡು ಬರುತ್ತದೆ. ಈ ಸಾಕ್ಷಿಯ ಆಧಾರದಲ್ಲಿ ಗೂಗಲ್‌ನಲ್ಲಿ ಇದಕ್ಕೆ ಸಂಬಂಧಿಸಿದಂತೆ ಸರ್ಚ್ ಮಾಡಿದಾಗ ಲ್ಯೂಕ್‌ ಪೆನ್ರಿ ಎಂಬವರ ಟ್ವಿಟ್ಟರ್‌ ಖಾತೆ ಕಂಡುಬಂದಿದೆ. ಈಗ ಹರಿದಾಡಿರುವ ವಿಡಿಯೋ ರೀತಿಯಲ್ಲೇ ಇರುವ ವಿಡಿಯೋ 2021ರ ಸೆಪ್ಟೆಂಬರ್‌ 17ರಂದು ‘ನ್ಯೂ ಸೌಂಡ್‌ ಆನ್‌’ ಶೀರ್ಷಿಕೆಯೊಂದಿದೆ ಅವರ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿರಿ: ಫ್ಯಾಕ್ಟ್‌ ಚೆಕ್‌: ಭಾರತೀಯ ರೈತರು ರಾಷ್ಟ್ರಧ್ವಜ ಅಪಮಾನಿಸಿಲ್ಲ

ಈ ವಿಡಿಯೋವು 3ಡಿ ಕಲಾವಿದ ಲ್ಯೂಕ್‌ ಪೆನ್ರಿ ಎಂಬವರು ಸೃಷ್ಟಿಸಿದ್ದು, ವಾಸ್ತವವಾಗಿ ಇದು ಡಿಜಿಟಲ್‌ ಶಬ್ದ ಕಲೆಯಾಗಿದೆ. Foundation.appನಲ್ಲಿ ಲ್ಯೂಕ್‌ ಅವರು ಈ ಕಲೆಯನ್ನು ಹರಾಜಿಗೂ ಇರಿಸಿದ್ದರು. ಆದುದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ ಎಂದು ಫ್ಯಾಕ್ಟ್‌ಲಿ.ಕಾಮ್‌ ವರದಿ ಮಾಡಿದೆ.

ಲ್ಯೂಕ್‌‌ ಹೆನ್ರಿಯವರ ಟ್ವಿಟ್ಟರ್‌ ಖಾತೆಯ ವಿವರಣೆಯಲ್ಲಿ ಇವರು 3ಡಿ ಕಲಾವಿದ ಎಂದಿದೆ. ಸಾಕಷ್ಟು ಡಿಜಿಟಲ್ ಶಬ್ದಕಲೆಯ ವಿಡಿಯೋಗಳನ್ನು ಇವರ ಟೈಮ್‌ಲೈನ್‌‌ನಲ್ಲಿ ನೋಡಬಹುದು. ಡಿಜಿಟಲ್‌ ಕಲೆಗಳ ನೇರ ಹರಾಜು ವೇದಿಕೆಯಲ್ಲಿ ಒಂದಾದ Foundation.appನಲ್ಲಿ ಇದನ್ನು ಲ್ಯೂಕ್‌ ಹರಾಜಿಗೂ ಇರಿಸಿದ್ದರು. ಕಲಾಕೃತಿಯ ಮಾಹಿತಿ ವಿಭಾಗವು ಅದನ್ನು ಲೂಪಿಂಗ್ ಅನಿಮೇಷನ್ ಎಂದು ಗುರುತಿಸಲಾಗಿದೆ. ‘ಜಂಗಲ್ ಪೈಪ್ಸ್’ ಎಂಬ ಶೀರ್ಷಿಕೆ ನೀಡಲಾಗಿದೆ. ಇದಲ್ಲದೆ, ಮಾಹಿತಿ ವಿಭಾಗದಲ್ಲಿ ಲ್ಯೂಕ್‌ ಹೀಗೆ ಬರೆದಿದ್ದಾರೆ: “ವಿಡಿಯೋವು ಭಾರತದಲ್ಲಿ ಹೆಚ್ಚು ಗೊಂದಲಕ್ಕೆ ಕಾರಣವಾಯಿತು. ಶಬ್ದದೊಂದಿಗೆ ಹೊಗೆಯನ್ನು ಹೊರಗೆ ಸೂಸುವ ಊದು ಪಾವೈ ಎಂಬ ಔಷಧೀಯ ಸಸ್ಯ ಇದಾಗಿದ್ದು, ದಟ್ಟವಾದ ಮಳೆ ಕಾಡುಗಳಲ್ಲಿ ಬೆಳೆಯುತ್ತದೆ. ಶಬ್ದವನ್ನು ಮಾಡುತ್ತಾ ಪರಾಗವನ್ನು ಹೊರ ಬಿಡುತ್ತದೆ ಎಂದು ಹಲವು ಚಾನೆಲ್‌ಗಳು ವರದಿ ಮಾಡಿವೆ.”

ಮುಂದುವರಿದು, “ಐಎಫ್‌ಎಸ್ ಅಧಿಕಾರಿಯು ಅದೇ ವೀಡಿಯೊವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ, ಹೀಗಾಗಿ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಯಿತು” ಎಂದು ಕಲಾವಿದ ತಮ್ಮ ಮಾಹಿತಿಯನ್ನು ಸೇರಿಸಿದ್ದಾರೆ.

 ಇದನ್ನೂ ಓದಿರಿ: ರಾಕೇಶ್ ಟಿಕಾಯತ್‌ ‘ಅಲ್ಲಾಹು ಅಕ್ಬರ್ ಎಂದರೆ.. ರೈತರು ಕೋಪದಿಂದ ‘ಹರಹರ ಮಹಾದೇವ’ ಎಂದು ಕೂಗಿದ್ದು…

ಹೆಚ್ಚಿನ ಹುಡುಕಾಟ ನಡೆಸಿದಾಗ ವೈರಲ್‌ ಪ್ರತಿಪಾದನೆಯೊಂದಿಗೆಯೇ ಐಎಫ್‌ಎಸ್‌‌ ಅಧಿಕಾರಿಯ ಟ್ವೀಟ್‌ ಕಂಡು ಬಂದಿದೆ. ಅವರು ಕೂಡ ಇದೇ ಪ್ರತಿಪಾದನೆಯೊಂದಿಗೆ ವಿಡಿಯೋವನ್ನು ಶೇರ್‌ ಮಾಡಿದ್ದು, “ಊದು ಪಾವೈ ಎಂಬ ಔಷಧೀಯ ಸಸಿ ಇದಾಗಿದ್ದು, ದಟ್ಟವಾದ ಮಳೆ ಕಾಡುಗಳಲ್ಲಿ ಬೆಳೆಯುತ್ತದೆ. ಶಬ್ದವನ್ನು ಮಾಡುತ್ತಾ ಪರಾಗವನ್ನು ಹೊರ ಬಿಡುತ್ತದೆ” ಎಂದಿದ್ದಾರೆ. ಆದರೆ ಈ ಟ್ವೀಟ್ ಅನ್ನು ಆನಂತರದಲ್ಲಿ ಡಿಲೀಟ್‌ ಮಾಡಿದ್ದಾರೆ.

ಆದಾಗ್ಯೂ, ವೀಡಿಯೊ ಡಿಜಿಟಲ್ ಕಲೆ ಮತ್ತು ಶಬ್ದಗಳನ್ನು ಉತ್ಪಾದಿಸುವ ನಿಜವಾದ ಸಸ್ಯವಲ್ಲ. ತನ್ನ ಟ್ವಿಟ್ಟರ್ ಟೈಮ್‌ಲೈನ್‌ನಲ್ಲಿ ಲ್ಯೂಕ್ ಪೆನ್ರಿ ಅವರು ತಮಿಳು ವ್ಯಕ್ತಿಯೊಬ್ಬರು ಸತ್ಯಾಂಶವನ್ನು ವಿವರಿಸಿರುವ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

“ಮುಂದುವರಿದು ಹೇಳುವುದಾದರೆ ಇಲ್ಲಿ ಪ್ರತಿಪಾದಿಸಿರುವಂತೆ ಊದು ಪಾವೈ ಎಂಬ ಔಷಧೀಯ ಸಸಿಯ ಕುರಿತು ನಮಗೆ ಮಾಹಿತಿ ಲಭ್ಯವಾಗಿಲ್ಲ. ಈ ವಿಡಿಯೋದಲ್ಲಿರುವುದು ಡಿಜಿಟಲ್ ಶಬ್ದ ಕಲೆ ಎಂಬುದು ಖಚಿತವಾಗಿದೆ, ಇದು ನಿಜವಾದ ಸಸಿಯಲ್ಲ ಎಂದು ತಿಳಿಯುತ್ತದೆ” ಎಂದು ಫ್ಯಾಕ್ಟ್‌ಲಿ ಹೇಳಿದೆ.

ಇದನ್ನೂ ಓದಿರಿ: ಗಾಂಧಿ ಕುಟುಂಬ ಸಿಂಗ್‌ ಅವರಿಗೆ ಅಗೌರವ ತೋರಿಸಿತ್ತೆ? ಹಳೆಯ ಪೋಟೋಗಳ ಅಸಲಿ ಕಥೆಯೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...