Homeಮುಖಪುಟಆಮ್ ಆದ್ಮಿ ಪಕ್ಷ ಸೇರಲಿರುವ ಖ್ಯಾತ ವಕೀಲ ಜಗದೀಶ್‌ ಮಹಾದೇವ್‌

ಆಮ್ ಆದ್ಮಿ ಪಕ್ಷ ಸೇರಲಿರುವ ಖ್ಯಾತ ವಕೀಲ ಜಗದೀಶ್‌ ಮಹಾದೇವ್‌

- Advertisement -
- Advertisement -

ಪ್ರಚಲಿತ ಸಮಸ್ಯೆಗಳ ಬಗ್ಗೆ ಫೇಸ್‌ಬುಕ್ ಲೈವ್ ವಿಡಿಯೋಗಳ ಮೂಲಕ ಖ್ಯಾತರಾದ ಮತ್ತು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಂತ್ರಸ್ತ ಯುವತಿಯ ಪರ ನಿಂತ ವಕೀಲರಾದ ಜಗದೀಶ್‌ ಕೆ.ಎನ್‌. ಮಹಾದೇವ್‌ರವರು ಸೋಮವಾರ ಆಮ್‌ ಆದ್ಮಿ ಪಕ್ಷ ಸೇರಲಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಆಪ್ ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್ ವಿ. ಸದಂ, “ಅಸಂಖ್ಯಾತ ಯುವ ಅಭಿಮಾನಿಗಳಿಂದ “ವಕೀಲ್‌ ಸಾಬ್”‌ ಎಂದೇ ಕರೆಸಿಕೊಳ್ಳುತ್ತಿರುವ ಖ್ಯಾತ ವಕೀಲರಾದ ಜಗದೀಶ್‌ ಕೆ.ಎನ್‌. ಮಹಾದೇವ್‌ರವರು ಆಮ್‌ ಆದ್ಮಿ ಪಾರ್ಟಿಯನ್ನು ಸೇರಲಿದ್ದಾರೆ. ರಮೇಶ್‌ ಜಾರಕಿಹೊಳಿಯವರು ಯುವತಿಯನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಸಂತ್ರಸ್ತರ ಧ್ವನಿಯಾದ ಹೆಗ್ಗಳಿಕೆ ಇವರದ್ದು. ಆಮ್‌ ಆದ್ಮಿ ಪಾರ್ಟಿಯ ಮೂಲಕ ಇವರು ಸಕ್ರಿಯ ರಾಜಕೀಯ ಪ್ರವೇಶಿಸುತ್ತಿರುವುದು ಸಮಾಜದ ಹಿತದೃಷ್ಟಿಯಿಂದ ಆಶಾದಾಯಕ ಬೆಳವಣಿಗೆಯಾಗಿದೆ” ಎಂದು ತಿಳಿಸಿದ್ದಾರೆ.

ಅಕ್ಟೋಬರ್ 11ರ ಸೋಮವಾರ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಾನು ಆಮ್ ಆದ್ಮಿ ಪಕ್ಷ ಸೇರಲಿದ್ದೇನೆ ಎಂದು ಜಗದೀಶ್‌ ಮಹಾದೇವ್‌ರವರು ತಮ್ಮ ಫೇಸ್‌ಬುಕ್ ಮೂಲಕ ಘೋಷಿಸಿದ್ದಾರೆ.


ಇದನ್ನೂ ಓದಿ : ಈ ವಾರದ ಟಾಪ್ 10 ಸುದ್ದಿಗಳು; ಮಿಸ್‌ ಮಾಡದೆ ಓದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನಮಸ್ಕಾರ ಸರ್ ನಾನೊಬ್ಬ ರೈತ ಮಾತಾಡ್ತಿರೋದು ನಾನು ಆಂಧ್ರದಿಂದ ಮಾತಾಡುತ್ತಿದ್ದೇನೆ ನನಗೆ ಯಾವುದೋ ಒಂದು ಕೇಸ್ ವಿಚಾರ ಪೊಲೀಸರು ಎ ಫೈಯರ್ ಆಗಿದೆ ಆದರೂ ಸಮಿತ ನೀವು 60000 ಹಣವನ್ನು ಕೊಡಿ ನಿಮ್ಮ ಕೇಸನ್ನು ನಾವುತೆಗೆದ ಹಾಕ್ತಿವಿ ಅಂತ ಹೇಳಿದ್ರು ಇದು ಹೇಗೆ ಸುಲಭ ಆಗುತ್ತೆ ತಯಾರಾದ ಆದಮೇಲೆ ಇವರು ಹೇಗೆ ನನ್ನ ಮೇಲಿರೋ ಕೇಸನ್ನುತೆಗೆದುಹಾಕುತ್ತಾರೆ ಅಂತ ನನಗೆ ಅರ್ಥವಾಗಲಿಲ್ಲ ಆದರೂ ಸಮೇತ ಅವರು 60000 ಹಣವನ್ನು ನನ್ನತ್ರ ಲಂಚವಾಗಿ ತಗೊಂಡು ನನಗೆ ಏನು ಮಾಡಿಲ್ಲ ಸರ್ ದಯವಿಟ್ಟು ಜಗದೀಶ್ ಸರ್ ನಿಮ್ಮನ್ನು ನೋಡಿದೆ ನನಗೆ ನ್ಯಾಯವನ್ನು ಮಾಡಿಕೊಡಿ ಅಂತ ನಾನು ನಿಮ್ಮತ್ರ ಬೇಡಿಕೆ ಮಾಡುತ್ತಿದ್ದೇನೆ ಮಾತನ್ನು ಮುಗಿಸಿದ ನಿಮ್ಮ ಪ್ರೀತಿಯ ವಿನೋದ್ ಕುಮಾರ್

LEAVE A REPLY

Please enter your comment!
Please enter your name here

- Advertisment -

Must Read