Homeನ್ಯಾಯ ಪಥನೂರರ ನೋಟ: ಇತ್ತೀಚಿನ ಚುನಾವಣಾ ಫಲಿತಾಂಶಗಳು ಮೋದಿ ಆಡಳಿತದ ವೈಫಲ್ಯಗಳನ್ನು ದೇಶಕ್ಕೆ ತೋರಿಸಿವೆ

ನೂರರ ನೋಟ: ಇತ್ತೀಚಿನ ಚುನಾವಣಾ ಫಲಿತಾಂಶಗಳು ಮೋದಿ ಆಡಳಿತದ ವೈಫಲ್ಯಗಳನ್ನು ದೇಶಕ್ಕೆ ತೋರಿಸಿವೆ

- Advertisement -
- Advertisement -

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಮತದಾರರು ನಾನಾ ಕಾರಣಗಳಿಗಾಗಿ ಬಿಜೆಪಿಯನ್ನು ಮಣಿಸಿದ್ದಾರೆ.

ಅನೇಕ ವರ್ಷಗಳಿಂದ ತಮಿಳುನಾಡಿನ ಸ್ವಾಭಿಮಾನಿ ಮತದಾರರು ಹೊರಗಿನ ರಾಜಕೀಯ ಪಕ್ಷಗಳು ರಾಜ್ಯವನ್ನು ಕಬ್ಜಾ ಮಾಡದಂತೆ ಎಚ್ಚರಿಕೆ ವಹಿಸಿದ್ದರು. ಅಧಿಕಾರ ಬದಲಾದರೂ ಅದು ತಮಿಳರ ಕೈಯಲ್ಲೇ ಇರಬೇಕು ಎಂಬ ಛಲವಿತ್ತು. ಹೀಗಾಗಿ ಅಧಿಕಾರ ಎಐಡಿಎಂಕೆ ಅಥವಾ ಡಿಎಂಕೆ ಕೈಯಲ್ಲಿ ಇರುತ್ತಿತ್ತು. ಈ ಸ್ವಾಭಿಮಾನಕ್ಕೆ ಈ ಸಾರಿಯ ಚುನಾವಣೆಯ ವೇಳೆಯಲ್ಲಿ ಕುತ್ತು ಬಂತು. ಎಐಡಿಎಂಕೆ ತಾನು ಅಧಿಕಾರದಲ್ಲಿ ಉಳಿಯಬೇಕೆಂಬ ಏಕೈಕ ದುರುದ್ದೇಶದಿಂದ ಹೊರಗಿನ ಬಿಜೆಪಿ ಜೊತೆಗೆ ಕೈಜೋಡಿಸಿತು. ತನ್ನ ಸ್ವಾರ್ಥಕ್ಕೆ ತಮಿಳರ ಸ್ವಾಭಿಮಾನವನ್ನೇ ಒತ್ತೆ ಇಟ್ಟಿತು. ಮೋದಿ ಷಾ ಅವರ ಪಾದ ಹಿಡಿಯಿತು. ಎಐಡಿಎಂಕೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಅದಕ್ಕಿಂತ ಹೆಚ್ಚಾಗಿ ತಮಿಳುನಾಡಿನ ಆಡಳಿತದ ಚುಕ್ಕಾಣಿ ಹಿಡಿಯುವ ಏಕೈಕ ಲಾಲಸೆಯಿಂದ ಬಹುದೊಡ್ಡ ತಪ್ಪೆಸಗಿತು. ಅನೇಕ ಕಾಲದಿಂದ ಒಂದು ಸೀಟಿಗೆ ತೃಪ್ತಿಪಟ್ಟುಕೊಂಡಿದ್ದ ಮತ್ತು ತಮಿಳುನಾಡಿನಲ್ಲಿ ಹೇಳ ಹೆಸರಿಲ್ಲದೆ ಇದ್ದ ಬಿಜೆಪಿಗೆ ಸ್ಪರ್ಧಿಸಲು ಎಐಡಿಎಂಕೆ ಹತ್ತಾರು ಸೀಟು ಬಿಟ್ಟುಕೊಟ್ಟು ತನ್ನ ಆತ್ಮ ಗೌರವವನ್ನೇ ಬಿಜೆಪಿಗೆ ಹರಾಜು ಹಾಕಿಕೊಂಡಿತು.

ಈ ಸಾರಿಯ ಚುನಾವಣೆಯಲ್ಲಿ ತಮಿಳುನಾಡಿನ ಮತದಾರರು ತಮ್ಮ ತಮಿಳು ನಿಷ್ಠೆಯನ್ನು ಎತ್ತಿ ಹಿಡಿದು ಡಿಎಂಕೆಗೆ ಬಹುಮತ ದೊರೆಯುವಂತೆ ಮಾಡಿದ್ದಾರೆ. ಎಐಡಿಎಂಕೆಗೆ ಛೀಮಾರಿ ಹಾಕಿ ಅವರನ್ನು ತಮಿಳು(ನಾಡಿನ) ದ್ರೋಹಿಗಳು ಎಂದು ಸಾರಿ ಹೇಳಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿಯಾಗಿ ಎಂ.ಕೆ. ಸ್ಟಾಲಿನ್ ಪ್ರಮಾಣ ವಚನ | Naanu gauri

ಮೋದಿ ಮತ್ತು ಷಾ ಇಡೀ ಭಾರತವನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ತೆಗೆದುಕೊಳ್ಳಬೇಕೆಂದು ಸಂಕಲ್ಪ ಮಾಡಿದ್ದಾರೆ. ಕೇರಳ, ತಮಿಳುನಾಡು ಎರಡನ್ನು ವಶಪಡಿಸಿಕೊಳ್ಳುವುದು ಪ್ರಯಾಸದ ಕೆಲಸ, ಆಗದ ಕೆಲಸ ಎಂಬುದನ್ನು ತಿಳಿದಿದ್ದರೂ ಆ ರಾಜ್ಯಗಳಿಗೆ ಹೇಗಾದರೂ ಮಾಡಿ ನುಸುಳಬೇಕೆಂಬ ಆಕಾಂಕ್ಷೆ ಅವರದ್ದು. ಆ ಎರಡು ರಾಜ್ಯಗಳಿಗೆ ಶತಾಯಗತಾಯು ನುಗ್ಗಿ ತಮಿಳುನಾಡಿನಲ್ಲಿ ಒಂದು ಸೀಟಿಗೆ ಬದಲು ಹತ್ತಾರು ಸೀಟುಗಳನ್ನಾದರೂ ವಶಪಡಿಸಿಕೊಳ್ಳಲು ಸಂಕಲ್ಪ ಮಾಡಿದ್ದರು. ತಮಿಳುನಾಡಿನಲ್ಲಿ ಬಿಜೆಪಿ ನಾಲ್ಕು ಸ್ಥಾನಗಳನ್ನು ಪಡೆದಿದ್ದರೂ, ಅವರಿಗ ತಳ ಊರಲು ತಮಿಳು ಮತದಾರರು ಅವಕಾಶ ಕೊಟ್ಟಿಲ್ಲ. ಕೇರಳದಲ್ಲಿ ಇದ್ದ ಒಂದು ಸ್ಥಾನವನ್ನೂ ಕಳೆದುಕೊಂಡಿದ್ದಾರೆ. ಅವರಿಗೆಲ್ಲ ಅಭಿನಂದನೆಗಳು. ಕನ್ನಡ ನಾಡಿನ ಕನ್ನಡಿಗ ಮತದಾರರು ತಮಿಳುರು ಬಿಜೆಪಿಗೆ ಕಲಿಸಿದ ಪಾಠವನ್ನು ಗಂಭೀರವಾಗಿ ಪರಿಗಣಿಸಬೇಕು. ಕನ್ನಡ ನಾಡಿನ ಜನ ತಮಿಳರಿಂದ ಆ ಪಾಠ ಕಲಿಯಬೇಕು.

ಕನ್ನಡ ನಾಡಿನ ಜನ ತನ್ನತನವನ್ನು ಮರೆತು ಎಷ್ಟೋ ವರ್ಷಗಳಾಗಿವೆ. ಎಲ್ಲರಿಗೂ ಮಣೆ ಹಾಕಿ ಬರಮಾಡಿಕೊಳ್ಳುವ ಬುದ್ಧಿಯನ್ನು ಕನ್ನಡಿಗರು ಬೆಳೆಸಿಕೊಳಡಿದ್ದಾರೆ. ತಮಿಳರಿಗಿರುವ ನಾಡಿನ ಪ್ರೇಮ, ಭಾಷೆಯ ಪ್ರೇಮವನ್ನು ಕನ್ನಡಿಗರು ರಾಜ್ಯೋತ್ಸವ ದಿನ ಮಾತ್ರ ನೆನಪಿಸಿಕೊಳ್ಳುತ್ತಾರೆ. ಕನ್ನಡ ನಾಡಿನ ಪ್ರತಿಷ್ಠೆ, ಗೌರವಗಳನ್ನು ತಮ್ಮ ಜೀವ ಒತ್ತೆ ಇಟ್ಟಾದರೂ ಕಾಪಾಡಿಕೊಳ್ಳಬೇಕೆಂಬ ಸಂಕಲ್ಪ ಶಕ್ತಿಯನ್ನು ಕಳೆದುಕೊಂಡುಬಿಟ್ಟಿದ್ದಾರೆ. ’ಅಂದರಿಕೀ ಜೈ’ ಅವರ ಸಮರ ಘೋಷಣೆ. ತಮಿಳು ರಾಜಕೀಯ ವ್ಯಕ್ತಿಗಳ ತಮಿಳು ಭಾಷಣದ ಶೈಲಿ ತಮಿಳರನ್ನು ಬಡಿದ್ದೆಬ್ಬಿಸುತ್ತದೆ. ತಮಿಳರಲ್ಲಿ ಆತ್ಮಗೌರವ, ತಮಿಳುನಾಡಿನ ಗೌರವ ಉಳಿಸಿಕೊಳ್ಳುವ ಸಂಕಲ್ಪ ಶಕ್ತಿಯನ್ನು ಈ ಸಾರಿಯ ಚುನಾವಣೆ ವೃದ್ಧಿಗೊಳಿಸಿದೆ. ಪುಟ್ಟಪ್ಪನವರು ಹೇಳುವ ಹಾಗೆ ’ಸತ್ತಂತಿಹರನ್ನು ಬಡಿದೆಬ್ಬಿಸುವ’ ಕಾರ್ಯ ಕನ್ನಡ ನಾಡಿನಲ್ಲಿ ಆರಂಭವಾಗಬೇಕಾಗಿದೆ. ಕನ್ನಡ ಕೆಲಸಕ್ಕೆ ಕಂಕಣ ತೊಟ್ಟಿರುವುದಾಗಿ ಹೇಳುವ ನಾಯಕರನ್ನೂ ಮೊದಲು ಬಡಿದೆಬ್ಬಿಸಬೇಕಾಗಿದೆ. ಪ್ರಾದೇಶಿಕ ಪಕ್ಷ ಕಟ್ಟುವುದರಲ್ಲಿ ವಿಫಲರಾಗಿರುವ ಕನ್ನಡ ನಾಯಕರು ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಇದನ್ನು ಇಲ್ಲಿಗೆ ಬಿಡೋಣ.

ಪ್ರಾಂತೀಯ ಪಕ್ಷವಾದ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಏಕಾಂಗಿಯಾಗಿ ಹೇಗೆ ಚುನಾವಣಾ ಸಮರ ಎದುರಿಸಿದರು ಎಂಬುದು ಪ್ರಾದೇಶಿಕ ಪಕ್ಷ ಕಟ್ಟಬಯಸುವವರಿಗೆ ಮಾದರಿಯಾಗಿದೆ. ಆಕೆ ನಿಜವಾದ ಬಂಗಾಳದ ಹುಲಿ. ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳೂ ಮೋದಿಷಾಗಳ ಆಕಾಂಕ್ಷೆಯನ್ನು ನೆರೆವೇರಿಸುವರಂತೆಯೇ ವರ್ತಿಸಿದರು. ತೃಣಮೂಲ ಕಾಂಗ್ರೆಸ್ಸನ್ನು ಮೂಲೆಗುಂಪು ಮಾಡುವುದೇ ಈ ಮೂರು ಪಕ್ಷಗಳ ಏಕೈಕ ಗುರಿಯಾಗಿತ್ತು. ಬಿಜೆಪಿ ನಮ್ಮ ವಿರೋಧಿ. ಅದನ್ನು ಗುಡಿಸಿ ಹಾಕಲು ತಾವು ಶ್ರಮಿಸಬೇಕೆಂದು ಅವೆರಡಕ್ಕೂ ಅನಿಸಲೇ ಇಲ್ಲ. ಭಾಜಪ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷವನ್ನು ಮೊದಲು ನಾಶ ಮಾಡಬೇಕೆಂದು ಸಂಕಲ್ಪ ಮಾಡಿರುವುದು ಆ ಎರಡೂ ಪಕ್ಷಗಳ ನಾಯಕರಿಗೆ ಗೊತ್ತಿಲ್ಲದ ವಿಷಯವೇನೂ ಅಲ್ಲ. ಹಾಗೆ ಪಿತೂರಿ ಮಾಡುತ್ತಿರುವ ಏಕೈಕ ಪಕ್ಷವಾದ ಬಿಜೆಪಿಯನ್ನು ಮೊದಲು ನಾಮಾವಶೇಷ ಮಾಡಬೇಕು ಎಂಬ ಆಲೋಚನೆ ಅವರಿಗೆ ಬರಲಿಲ್ಲ. ಈ ತಪ್ಪಿಗೆ ಬಂಗಾಳ ಮತದಾರರೂ ಸೂಕ್ತ ರೀತಿಯ ಸೇಡನ್ನು ಈ ಎರಡೂ ಪಕ್ಷಗಳ ಮೇಲೆ ತೀರಿಸಿಕೊಳ್ಳಬೇಕೆಂದು ಸಂಕಲ್ಪ ಮಾಡಿದರು. ಅವೆರಡು ಪಕ್ಷಗಳಿಗೂ ಒಂದೊಂದು ಸೀಟು ಕೂಡ ಸಿಗದಂತೆ ಮಾಡಿಬಿಟ್ಟರು.

ಬಂಗಾಳದಲ್ಲಿ 8 ಹಂತದ ಚುನಾವಣೆ: ಮೋದಿ, ಶಾ ತಂತ್ರ ಎಂದು ಮಮತಾ ಬ್ಯಾನರ್ಜಿ ಆಕ್ರೋಶ
PC: NH

ದೀದಿಯ ನೆರವಿಗೆ ಬಂಗಾಳೇತರರು ಯಾರೂ ಬರಲಿಲ್ಲ. ಸಾಲದ್ದಕ್ಕೆ ತೃಣಮೂಲ ಕಾಂಗ್ರೆಸ್ಸಿನ ಶಾಸಕರೇ ಒಬ್ಬೊಬ್ಬರಾಗಿ ಅಧಿಕಾರ ಲಾಲಸೆಯಿಂದ ಮೋದಿಷಾಗಳ ತೆಕ್ಕೆಗೆ ಬೀಳಲಾರಂಭಿಸಿದರು. ಇವರೆಲ್ಲರ ಹಗೆತನವನ್ನು ದೀದಿ ಏಕಾಂಗಿಯಾಗಿ ಎದುರಿಸಬೇಕಾಯಿತು.

ಈ ಎಲ್ಲರ ವಿರೋಧದ ಮಧ್ಯೆಯೂ ದೀದಿ ಧೈರ್ಯವಾಗಿ ನಿಂತು ಹೋರಾಡಿದರು. ರಾಜ್ಯದ ಚುಕ್ಕಾಣಿಯನ್ನು ಮೂರನೆ ಬಾರಿಗೆ ಹಿಡಿಯುವುದರಲ್ಲಿ ವಿಜಯಶಾಲಿಯಾದರು. ಆಕೆಯ ಧೈರ್ಯ, ಸಾಹಸ, ಸಂಘಟನಾ ಚಾತುರ್ಯ ಎಲ್ಲವೂ ಮೆಚ್ಚತಕ್ಕದ್ದೇ.

ನಂದಿಗ್ರಾಮದಿಂದ ಸ್ಪರ್ಧಿಸಿದ್ದ ದೀದಿ ಅಲ್ಪ ಮತಗಳಿಂದ ಸೋತರು ಎಂಬ ಸುದ್ದಿ ಮೊದಲು ಬಂತು. ಆನಂತರ ಬಂದ ಸುದ್ದಿಯಂತೆ ಅವರಿಗೆ ಜಯ ಲಭಿಸಿದೆ ಎಂದು ಬಿತ್ತರಿಸಲಾಯಿತು. ಈಗ ದೀದಿ ಸೋತಿದ್ದಾರೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ಈ ತೀರ್ಪಿನ ವಿರುದ್ಧವಾಗಿ ದೀದಿ ನ್ಯಾಯಾಲಯದ ಬಾಗಿಲು ತಟ್ಟಲಿದ್ದಾರೆ.

ಇನ್ನು ಕೇರಳವನ್ನು ಕಬಳಿಸುವ ವ್ಯವಸ್ಥಿತ ಸಂಚನ್ನೇ ಮೋದಿಷಾಗಳು ಮಾಡಿದರು. ಸಭೆ ಸಮ್ಮೇಳನ, ರ್‍ಯಾಲಿಗಳನ್ನು ಎರಡು ವರ್ಷಗಳ ಹಿಂದೆಯೇ ಆರಂಭಿಸಿದರು. ಕಮ್ಯುನಿಸ್ಟ್ ಶಾಸನಸಭೆ ಸದಸ್ಯರನ್ನು ಒಡೆದು ಆಳುವ ಯಾವ ಪ್ರಯತ್ನಕ್ಕೂ ಯಶಸ್ಸು ಸಿಗಲಿಲ್ಲ. ಪಕ್ಷ ನಿಷ್ಠರಾದ ಆ ಶಾಸಕರು ಮೋದಿಷಾಗೆ ತಕ್ಕ ಪಾಠವನ್ನು ಕಲಿಸಿದರು. ಬಿಜೆಪಿ ಹಿಂದಿನ ಸಾರಿ ಒಂದು ಸೀಟು ಗೆದ್ದಿತ್ತು. ಈ ಸಾರಿ ಒಂದೂ ಸೀಟು ಬಿಜೆಪಿಗೆ ದಕ್ಕಿಲ್ಲ. ಮುಖ್ಯಮಂತ್ರಿ ವಿಜಯನ್ ಫಲಿತಾಂಶ ಪ್ರಕಟವಾಗುವ ಎರಡು ದಿನಗಳ ಮೊದಲೇ ಅಧಿಕಾರಿಗಳಿಗೆ ಮಂತ್ರಿಗಳ ಪ್ರತಿಜ್ಞಾನಿಧಿ ತೆಗೆದುಕೊಳ್ಳುವ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚನೆ ಕೊಟ್ಟರು.
ಇನ್ನು ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರಿಗೂ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರಿಗೂ ಜಿದ್ದಾಜಿದ್ದಿನ ಸ್ಪರ್ಧೆ ನಡೆದುಹೋಯಿತು. ಮೊದಲ ೨೦ ಸುತ್ತಿನ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಜಾರಕಿಹೊಳಿ ಅವರಿಗಿಂತ ಸುಮಾರು ೧೦ ಸಾವಿರ ಮತಗಳಿಂದ ಮುಂದಿದ್ದರೆ ಜಾರಕಿಹೊಳಿ ೮೦ನೇ ಸುತ್ತಿನವರೆಗೆ ಸುಮಾರು ೨ ಸಾವಿರದಿಂದ ಹತ್ತು ಸಾವಿರ ಹೆಚ್ಚಿನ ಮತಗಳಿಸಿ ಮುಂದಿದ್ದರು. ಆದರೆ, ಕೊನೆಯ ೫-೬ ಸುತ್ತಿನ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮತಿ ಅಂಗಡಿಯವರು ಹೆಚ್ಚಿನ ಮತಗಳಿಸಿ ಜಯಶಾಲಿಗಳಾದರು.

ಮಮತಾ ಬ್ಯಾನರ್ಜಿಯವರಂತೆಯೇ ಜಾರಕಿಹೊಳಿಯವರೂ ಕೊನೆಯ ಸುತ್ತುಗಳ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿಯಿಂದ ಪರಾಭವಗೊಂಡರು.

ಪ್ರಜಾಪ್ರಭುತ್ವ ಎಂದರೆ ಚುನಾವಣೆಗಳಲ್ಲಿ ಗೆಲ್ಲುವುದು ಮಾತ್ರವಲ್ಲ, ಸಮಾಜ ಎದುರಿಸುತ್ತಿರುವ ಸವಾಲುಗಳಿಗೆ ಸೂಕ್ತ ಪರಿಹಾರ ಮಾರ್ಗ ಕಂಡುಹಿಡಿಯುವುದು ಅದಕ್ಕಿಂತ ಮುಖ್ಯ. ಪ್ರಚಾರಪ್ರಿಯ ಮೋದಿ ಅವರು ಹೊಗಳಿಕೆಗಷ್ಟೇ ನಿಗಾ ಕೊಡುತ್ತಾರೆ. ಕೊರೊನಾವನ್ನು ಎದುರಿಸುವುದರಲ್ಲಿ ಮೋದಿ ಹೆಜ್ಜೆ ಹೆಜ್ಜೆಗೂ ಸೋತಿದ್ದರೂ ಬಿಜೆಪಿ ವಂದಿ ಮಾಗಧರು ಮತ್ತು ಮೋದಿ ಕೊಂಡುಕೊಂಡಿರುವ ದೃಶ್ಯಮಾಧ್ಯಮಗಳು ಮೋದಿಯವರ ಕಾರ್ಯ ವೈಖರಿಯನ್ನು ಹೊಗಳಿ ಹೊಗಳಿ ಅತನನ್ನು ಹೊನ್ನ ಶೂಲಕ್ಕೆ ಗುರಿಮಾಡಿದರು. ಕೊರೊನಾ ಎರಡನೆ ಅಲೆ ಇಡೀ ಭಾರತವನ್ನೇ ಅಪ್ಪಳಿಸಿದಾಗ ಮೋದಿ ಬೆಪ್ಪಾದರು. ಲಸಿಕೆಗಳ ಅಭಾವ, ವೈದ್ಯಕೀಯ ಬಳಕೆಯ ಶುದ್ಧ ಆಕ್ಸಿಜನ್ ಕೊರತೆ ಮೋದಿಯವರ ನಿಜ ಸ್ವರೂಪವನ್ನು ಬೆತ್ತಲೆ ಮಾಡಿತು. ಕೋವಿಡ್ ಸೋಂಕನ್ನು ತಡೆಹಿಡಿಯುವ ಸಂದರ್ಭದಲ್ಲಿಯೂ ಮೋದಿ ತನ್ನ ಏಕಪಾತ್ರ ಅಭಿನಯವನ್ನು ಮುಂದುವರೆಸಿದರು. ಕೇಂದ್ರ ಮಂತ್ರಿ ಮಂಡಲದ ಇತರ ಸಚಿವರ ಸಲಹೆ ಸೂಚನೆ ಪಡೆಯಲೂ ನಿರಾಕರಿಸಿದರು. ಭಾರತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಕ್ಕೂಟ ಸಂಸ್ಥೆ, ಆದರೆ ಮೋದಿ ಮನ್‌ಕಿಬಾತ್ ಮುಖಾಂತರ ತನ್ನ ತೀರ್ಮಾನಗಳನ್ನು ರಾಜ್ಯಗಳ ಮೇಲೆ ಹೇರಿದರೇ ಹೊರತು ರಾಜ್ಯಗಳನ್ನು ಈ ಹೋರಾಟದ ಪಾಲುದಾರರಾಗಿ ಪರಿಗಣಿಸಲಿಲ್ಲ.

ಲಸಿಕಾ ನೀತಿಯಲ್ಲಿ ನ್ಯಾಯಾಂಗದ ಹಸ್ತಕ್ಷೇಪ ವಿರೋಧಿಸಿದ ಕೇಂದ್ರ ಸರ್ಕಾರ

ಕಾಂಗ್ರೆಸ್ ಕೇರಳ ಸೋತು, ತಮಿಳುನಾಡು ಮತ್ತು ಬಂಗಾಳಗಳಲ್ಲಿ ಹೇಳಹೆಸರಿಲ್ಲದಂತಾಯಿತಾದರೂ ತಮಿಳುನಾಡಿನ ಕನ್ಯಾಕುಮಾರಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಪರಾಭವಗೊಳಿಸಿ ಕ್ಷೇತ್ರವನ್ನು ಉಳಿಸಿಕೊಂಡಿತು. ಬೆಳಾಗಾಂನಲ್ಲಿ ಅತ್ಯಲ್ಪ ಮತಗಳಿಂದ ಸೋಲನ್ನು ಅನುಭವಿಸಿತು.
ಈ ಎಲ್ಲ ಚುನಾವಣೆಗಳೂ, ಮೋದಿ ಸರ್ಕಾರದ ವೈಫಲ್ಯಗಳು ಒಂದಾದ ಮೇಲೆ ಒಂದು ಬಹಿರಂಗಗೊಂಡ ಸಮಯದಲ್ಲಿ ನಡೆದವು. ಭಾರತೀಯ ಮತದಾರರಿಗೆ ಮೋದಿಷಾಗಳ ಬಗೆಗೆ ಅಸಮಾಧಾನ ಹುಟ್ಟಿಕೊಂಡ ತರುಣದಲ್ಲಿ ಈ ಚುನಾವಣೆಗಳು ನಡೆದವು. ಹೀಗಾಗಿ ಈ ಚುನಾವಣೆಗಳಲ್ಲಿ ಮೋದಿಯವರ ವಿರೋಧ ಪೂರ್ಣಮಟ್ಟದಲ್ಲಿ ಅನಾವರಣಗೊಳ್ಳಲಿಲ್ಲ.

ಈ ಚುನಾವಣೆಗಳು ಕೋವಿಡ್ ಎರಡನೇ ಅಲೆ ಆರಂಭವಾದ ಮೇಲೆ ನಡೆದಿದ್ದರೆ ಕೋವಿಡ್ ಪೀಡಿತರು, ಆಕ್ಸಿಜನ್, ಕೋವಿಡ್ ಲಸಿಕೆ ಚುಚ್ಚುಮದ್ದು ಮತ್ತು ಬೆಡ್‌ಗಾಗಿ, ಆಕ್ಸಿಜನ್‌ಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಪ್ರಾಣಬಿಟ್ಟ ಸಂದರ್ಭದಲ್ಲಿ ಆಗಿದ್ದರೆ ಮೋದಿಯವರಿಗೆ ಮಣ್ಣು ಮುಕ್ಕಿಸುತ್ತಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...