Homeನ್ಯಾಯ ಪಥನೂರರ ನೋಟ: ಇತ್ತೀಚಿನ ಚುನಾವಣಾ ಫಲಿತಾಂಶಗಳು ಮೋದಿ ಆಡಳಿತದ ವೈಫಲ್ಯಗಳನ್ನು ದೇಶಕ್ಕೆ ತೋರಿಸಿವೆ

ನೂರರ ನೋಟ: ಇತ್ತೀಚಿನ ಚುನಾವಣಾ ಫಲಿತಾಂಶಗಳು ಮೋದಿ ಆಡಳಿತದ ವೈಫಲ್ಯಗಳನ್ನು ದೇಶಕ್ಕೆ ತೋರಿಸಿವೆ

- Advertisement -
- Advertisement -

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಮತದಾರರು ನಾನಾ ಕಾರಣಗಳಿಗಾಗಿ ಬಿಜೆಪಿಯನ್ನು ಮಣಿಸಿದ್ದಾರೆ.

ಅನೇಕ ವರ್ಷಗಳಿಂದ ತಮಿಳುನಾಡಿನ ಸ್ವಾಭಿಮಾನಿ ಮತದಾರರು ಹೊರಗಿನ ರಾಜಕೀಯ ಪಕ್ಷಗಳು ರಾಜ್ಯವನ್ನು ಕಬ್ಜಾ ಮಾಡದಂತೆ ಎಚ್ಚರಿಕೆ ವಹಿಸಿದ್ದರು. ಅಧಿಕಾರ ಬದಲಾದರೂ ಅದು ತಮಿಳರ ಕೈಯಲ್ಲೇ ಇರಬೇಕು ಎಂಬ ಛಲವಿತ್ತು. ಹೀಗಾಗಿ ಅಧಿಕಾರ ಎಐಡಿಎಂಕೆ ಅಥವಾ ಡಿಎಂಕೆ ಕೈಯಲ್ಲಿ ಇರುತ್ತಿತ್ತು. ಈ ಸ್ವಾಭಿಮಾನಕ್ಕೆ ಈ ಸಾರಿಯ ಚುನಾವಣೆಯ ವೇಳೆಯಲ್ಲಿ ಕುತ್ತು ಬಂತು. ಎಐಡಿಎಂಕೆ ತಾನು ಅಧಿಕಾರದಲ್ಲಿ ಉಳಿಯಬೇಕೆಂಬ ಏಕೈಕ ದುರುದ್ದೇಶದಿಂದ ಹೊರಗಿನ ಬಿಜೆಪಿ ಜೊತೆಗೆ ಕೈಜೋಡಿಸಿತು. ತನ್ನ ಸ್ವಾರ್ಥಕ್ಕೆ ತಮಿಳರ ಸ್ವಾಭಿಮಾನವನ್ನೇ ಒತ್ತೆ ಇಟ್ಟಿತು. ಮೋದಿ ಷಾ ಅವರ ಪಾದ ಹಿಡಿಯಿತು. ಎಐಡಿಎಂಕೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಅದಕ್ಕಿಂತ ಹೆಚ್ಚಾಗಿ ತಮಿಳುನಾಡಿನ ಆಡಳಿತದ ಚುಕ್ಕಾಣಿ ಹಿಡಿಯುವ ಏಕೈಕ ಲಾಲಸೆಯಿಂದ ಬಹುದೊಡ್ಡ ತಪ್ಪೆಸಗಿತು. ಅನೇಕ ಕಾಲದಿಂದ ಒಂದು ಸೀಟಿಗೆ ತೃಪ್ತಿಪಟ್ಟುಕೊಂಡಿದ್ದ ಮತ್ತು ತಮಿಳುನಾಡಿನಲ್ಲಿ ಹೇಳ ಹೆಸರಿಲ್ಲದೆ ಇದ್ದ ಬಿಜೆಪಿಗೆ ಸ್ಪರ್ಧಿಸಲು ಎಐಡಿಎಂಕೆ ಹತ್ತಾರು ಸೀಟು ಬಿಟ್ಟುಕೊಟ್ಟು ತನ್ನ ಆತ್ಮ ಗೌರವವನ್ನೇ ಬಿಜೆಪಿಗೆ ಹರಾಜು ಹಾಕಿಕೊಂಡಿತು.

ಈ ಸಾರಿಯ ಚುನಾವಣೆಯಲ್ಲಿ ತಮಿಳುನಾಡಿನ ಮತದಾರರು ತಮ್ಮ ತಮಿಳು ನಿಷ್ಠೆಯನ್ನು ಎತ್ತಿ ಹಿಡಿದು ಡಿಎಂಕೆಗೆ ಬಹುಮತ ದೊರೆಯುವಂತೆ ಮಾಡಿದ್ದಾರೆ. ಎಐಡಿಎಂಕೆಗೆ ಛೀಮಾರಿ ಹಾಕಿ ಅವರನ್ನು ತಮಿಳು(ನಾಡಿನ) ದ್ರೋಹಿಗಳು ಎಂದು ಸಾರಿ ಹೇಳಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿಯಾಗಿ ಎಂ.ಕೆ. ಸ್ಟಾಲಿನ್ ಪ್ರಮಾಣ ವಚನ | Naanu gauri

ಮೋದಿ ಮತ್ತು ಷಾ ಇಡೀ ಭಾರತವನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ತೆಗೆದುಕೊಳ್ಳಬೇಕೆಂದು ಸಂಕಲ್ಪ ಮಾಡಿದ್ದಾರೆ. ಕೇರಳ, ತಮಿಳುನಾಡು ಎರಡನ್ನು ವಶಪಡಿಸಿಕೊಳ್ಳುವುದು ಪ್ರಯಾಸದ ಕೆಲಸ, ಆಗದ ಕೆಲಸ ಎಂಬುದನ್ನು ತಿಳಿದಿದ್ದರೂ ಆ ರಾಜ್ಯಗಳಿಗೆ ಹೇಗಾದರೂ ಮಾಡಿ ನುಸುಳಬೇಕೆಂಬ ಆಕಾಂಕ್ಷೆ ಅವರದ್ದು. ಆ ಎರಡು ರಾಜ್ಯಗಳಿಗೆ ಶತಾಯಗತಾಯು ನುಗ್ಗಿ ತಮಿಳುನಾಡಿನಲ್ಲಿ ಒಂದು ಸೀಟಿಗೆ ಬದಲು ಹತ್ತಾರು ಸೀಟುಗಳನ್ನಾದರೂ ವಶಪಡಿಸಿಕೊಳ್ಳಲು ಸಂಕಲ್ಪ ಮಾಡಿದ್ದರು. ತಮಿಳುನಾಡಿನಲ್ಲಿ ಬಿಜೆಪಿ ನಾಲ್ಕು ಸ್ಥಾನಗಳನ್ನು ಪಡೆದಿದ್ದರೂ, ಅವರಿಗ ತಳ ಊರಲು ತಮಿಳು ಮತದಾರರು ಅವಕಾಶ ಕೊಟ್ಟಿಲ್ಲ. ಕೇರಳದಲ್ಲಿ ಇದ್ದ ಒಂದು ಸ್ಥಾನವನ್ನೂ ಕಳೆದುಕೊಂಡಿದ್ದಾರೆ. ಅವರಿಗೆಲ್ಲ ಅಭಿನಂದನೆಗಳು. ಕನ್ನಡ ನಾಡಿನ ಕನ್ನಡಿಗ ಮತದಾರರು ತಮಿಳುರು ಬಿಜೆಪಿಗೆ ಕಲಿಸಿದ ಪಾಠವನ್ನು ಗಂಭೀರವಾಗಿ ಪರಿಗಣಿಸಬೇಕು. ಕನ್ನಡ ನಾಡಿನ ಜನ ತಮಿಳರಿಂದ ಆ ಪಾಠ ಕಲಿಯಬೇಕು.

ಕನ್ನಡ ನಾಡಿನ ಜನ ತನ್ನತನವನ್ನು ಮರೆತು ಎಷ್ಟೋ ವರ್ಷಗಳಾಗಿವೆ. ಎಲ್ಲರಿಗೂ ಮಣೆ ಹಾಕಿ ಬರಮಾಡಿಕೊಳ್ಳುವ ಬುದ್ಧಿಯನ್ನು ಕನ್ನಡಿಗರು ಬೆಳೆಸಿಕೊಳಡಿದ್ದಾರೆ. ತಮಿಳರಿಗಿರುವ ನಾಡಿನ ಪ್ರೇಮ, ಭಾಷೆಯ ಪ್ರೇಮವನ್ನು ಕನ್ನಡಿಗರು ರಾಜ್ಯೋತ್ಸವ ದಿನ ಮಾತ್ರ ನೆನಪಿಸಿಕೊಳ್ಳುತ್ತಾರೆ. ಕನ್ನಡ ನಾಡಿನ ಪ್ರತಿಷ್ಠೆ, ಗೌರವಗಳನ್ನು ತಮ್ಮ ಜೀವ ಒತ್ತೆ ಇಟ್ಟಾದರೂ ಕಾಪಾಡಿಕೊಳ್ಳಬೇಕೆಂಬ ಸಂಕಲ್ಪ ಶಕ್ತಿಯನ್ನು ಕಳೆದುಕೊಂಡುಬಿಟ್ಟಿದ್ದಾರೆ. ’ಅಂದರಿಕೀ ಜೈ’ ಅವರ ಸಮರ ಘೋಷಣೆ. ತಮಿಳು ರಾಜಕೀಯ ವ್ಯಕ್ತಿಗಳ ತಮಿಳು ಭಾಷಣದ ಶೈಲಿ ತಮಿಳರನ್ನು ಬಡಿದ್ದೆಬ್ಬಿಸುತ್ತದೆ. ತಮಿಳರಲ್ಲಿ ಆತ್ಮಗೌರವ, ತಮಿಳುನಾಡಿನ ಗೌರವ ಉಳಿಸಿಕೊಳ್ಳುವ ಸಂಕಲ್ಪ ಶಕ್ತಿಯನ್ನು ಈ ಸಾರಿಯ ಚುನಾವಣೆ ವೃದ್ಧಿಗೊಳಿಸಿದೆ. ಪುಟ್ಟಪ್ಪನವರು ಹೇಳುವ ಹಾಗೆ ’ಸತ್ತಂತಿಹರನ್ನು ಬಡಿದೆಬ್ಬಿಸುವ’ ಕಾರ್ಯ ಕನ್ನಡ ನಾಡಿನಲ್ಲಿ ಆರಂಭವಾಗಬೇಕಾಗಿದೆ. ಕನ್ನಡ ಕೆಲಸಕ್ಕೆ ಕಂಕಣ ತೊಟ್ಟಿರುವುದಾಗಿ ಹೇಳುವ ನಾಯಕರನ್ನೂ ಮೊದಲು ಬಡಿದೆಬ್ಬಿಸಬೇಕಾಗಿದೆ. ಪ್ರಾದೇಶಿಕ ಪಕ್ಷ ಕಟ್ಟುವುದರಲ್ಲಿ ವಿಫಲರಾಗಿರುವ ಕನ್ನಡ ನಾಯಕರು ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಇದನ್ನು ಇಲ್ಲಿಗೆ ಬಿಡೋಣ.

ಪ್ರಾಂತೀಯ ಪಕ್ಷವಾದ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಏಕಾಂಗಿಯಾಗಿ ಹೇಗೆ ಚುನಾವಣಾ ಸಮರ ಎದುರಿಸಿದರು ಎಂಬುದು ಪ್ರಾದೇಶಿಕ ಪಕ್ಷ ಕಟ್ಟಬಯಸುವವರಿಗೆ ಮಾದರಿಯಾಗಿದೆ. ಆಕೆ ನಿಜವಾದ ಬಂಗಾಳದ ಹುಲಿ. ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳೂ ಮೋದಿಷಾಗಳ ಆಕಾಂಕ್ಷೆಯನ್ನು ನೆರೆವೇರಿಸುವರಂತೆಯೇ ವರ್ತಿಸಿದರು. ತೃಣಮೂಲ ಕಾಂಗ್ರೆಸ್ಸನ್ನು ಮೂಲೆಗುಂಪು ಮಾಡುವುದೇ ಈ ಮೂರು ಪಕ್ಷಗಳ ಏಕೈಕ ಗುರಿಯಾಗಿತ್ತು. ಬಿಜೆಪಿ ನಮ್ಮ ವಿರೋಧಿ. ಅದನ್ನು ಗುಡಿಸಿ ಹಾಕಲು ತಾವು ಶ್ರಮಿಸಬೇಕೆಂದು ಅವೆರಡಕ್ಕೂ ಅನಿಸಲೇ ಇಲ್ಲ. ಭಾಜಪ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷವನ್ನು ಮೊದಲು ನಾಶ ಮಾಡಬೇಕೆಂದು ಸಂಕಲ್ಪ ಮಾಡಿರುವುದು ಆ ಎರಡೂ ಪಕ್ಷಗಳ ನಾಯಕರಿಗೆ ಗೊತ್ತಿಲ್ಲದ ವಿಷಯವೇನೂ ಅಲ್ಲ. ಹಾಗೆ ಪಿತೂರಿ ಮಾಡುತ್ತಿರುವ ಏಕೈಕ ಪಕ್ಷವಾದ ಬಿಜೆಪಿಯನ್ನು ಮೊದಲು ನಾಮಾವಶೇಷ ಮಾಡಬೇಕು ಎಂಬ ಆಲೋಚನೆ ಅವರಿಗೆ ಬರಲಿಲ್ಲ. ಈ ತಪ್ಪಿಗೆ ಬಂಗಾಳ ಮತದಾರರೂ ಸೂಕ್ತ ರೀತಿಯ ಸೇಡನ್ನು ಈ ಎರಡೂ ಪಕ್ಷಗಳ ಮೇಲೆ ತೀರಿಸಿಕೊಳ್ಳಬೇಕೆಂದು ಸಂಕಲ್ಪ ಮಾಡಿದರು. ಅವೆರಡು ಪಕ್ಷಗಳಿಗೂ ಒಂದೊಂದು ಸೀಟು ಕೂಡ ಸಿಗದಂತೆ ಮಾಡಿಬಿಟ್ಟರು.

ಬಂಗಾಳದಲ್ಲಿ 8 ಹಂತದ ಚುನಾವಣೆ: ಮೋದಿ, ಶಾ ತಂತ್ರ ಎಂದು ಮಮತಾ ಬ್ಯಾನರ್ಜಿ ಆಕ್ರೋಶ
PC: NH

ದೀದಿಯ ನೆರವಿಗೆ ಬಂಗಾಳೇತರರು ಯಾರೂ ಬರಲಿಲ್ಲ. ಸಾಲದ್ದಕ್ಕೆ ತೃಣಮೂಲ ಕಾಂಗ್ರೆಸ್ಸಿನ ಶಾಸಕರೇ ಒಬ್ಬೊಬ್ಬರಾಗಿ ಅಧಿಕಾರ ಲಾಲಸೆಯಿಂದ ಮೋದಿಷಾಗಳ ತೆಕ್ಕೆಗೆ ಬೀಳಲಾರಂಭಿಸಿದರು. ಇವರೆಲ್ಲರ ಹಗೆತನವನ್ನು ದೀದಿ ಏಕಾಂಗಿಯಾಗಿ ಎದುರಿಸಬೇಕಾಯಿತು.

ಈ ಎಲ್ಲರ ವಿರೋಧದ ಮಧ್ಯೆಯೂ ದೀದಿ ಧೈರ್ಯವಾಗಿ ನಿಂತು ಹೋರಾಡಿದರು. ರಾಜ್ಯದ ಚುಕ್ಕಾಣಿಯನ್ನು ಮೂರನೆ ಬಾರಿಗೆ ಹಿಡಿಯುವುದರಲ್ಲಿ ವಿಜಯಶಾಲಿಯಾದರು. ಆಕೆಯ ಧೈರ್ಯ, ಸಾಹಸ, ಸಂಘಟನಾ ಚಾತುರ್ಯ ಎಲ್ಲವೂ ಮೆಚ್ಚತಕ್ಕದ್ದೇ.

ನಂದಿಗ್ರಾಮದಿಂದ ಸ್ಪರ್ಧಿಸಿದ್ದ ದೀದಿ ಅಲ್ಪ ಮತಗಳಿಂದ ಸೋತರು ಎಂಬ ಸುದ್ದಿ ಮೊದಲು ಬಂತು. ಆನಂತರ ಬಂದ ಸುದ್ದಿಯಂತೆ ಅವರಿಗೆ ಜಯ ಲಭಿಸಿದೆ ಎಂದು ಬಿತ್ತರಿಸಲಾಯಿತು. ಈಗ ದೀದಿ ಸೋತಿದ್ದಾರೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ಈ ತೀರ್ಪಿನ ವಿರುದ್ಧವಾಗಿ ದೀದಿ ನ್ಯಾಯಾಲಯದ ಬಾಗಿಲು ತಟ್ಟಲಿದ್ದಾರೆ.

ಇನ್ನು ಕೇರಳವನ್ನು ಕಬಳಿಸುವ ವ್ಯವಸ್ಥಿತ ಸಂಚನ್ನೇ ಮೋದಿಷಾಗಳು ಮಾಡಿದರು. ಸಭೆ ಸಮ್ಮೇಳನ, ರ್‍ಯಾಲಿಗಳನ್ನು ಎರಡು ವರ್ಷಗಳ ಹಿಂದೆಯೇ ಆರಂಭಿಸಿದರು. ಕಮ್ಯುನಿಸ್ಟ್ ಶಾಸನಸಭೆ ಸದಸ್ಯರನ್ನು ಒಡೆದು ಆಳುವ ಯಾವ ಪ್ರಯತ್ನಕ್ಕೂ ಯಶಸ್ಸು ಸಿಗಲಿಲ್ಲ. ಪಕ್ಷ ನಿಷ್ಠರಾದ ಆ ಶಾಸಕರು ಮೋದಿಷಾಗೆ ತಕ್ಕ ಪಾಠವನ್ನು ಕಲಿಸಿದರು. ಬಿಜೆಪಿ ಹಿಂದಿನ ಸಾರಿ ಒಂದು ಸೀಟು ಗೆದ್ದಿತ್ತು. ಈ ಸಾರಿ ಒಂದೂ ಸೀಟು ಬಿಜೆಪಿಗೆ ದಕ್ಕಿಲ್ಲ. ಮುಖ್ಯಮಂತ್ರಿ ವಿಜಯನ್ ಫಲಿತಾಂಶ ಪ್ರಕಟವಾಗುವ ಎರಡು ದಿನಗಳ ಮೊದಲೇ ಅಧಿಕಾರಿಗಳಿಗೆ ಮಂತ್ರಿಗಳ ಪ್ರತಿಜ್ಞಾನಿಧಿ ತೆಗೆದುಕೊಳ್ಳುವ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚನೆ ಕೊಟ್ಟರು.
ಇನ್ನು ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರಿಗೂ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರಿಗೂ ಜಿದ್ದಾಜಿದ್ದಿನ ಸ್ಪರ್ಧೆ ನಡೆದುಹೋಯಿತು. ಮೊದಲ ೨೦ ಸುತ್ತಿನ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಜಾರಕಿಹೊಳಿ ಅವರಿಗಿಂತ ಸುಮಾರು ೧೦ ಸಾವಿರ ಮತಗಳಿಂದ ಮುಂದಿದ್ದರೆ ಜಾರಕಿಹೊಳಿ ೮೦ನೇ ಸುತ್ತಿನವರೆಗೆ ಸುಮಾರು ೨ ಸಾವಿರದಿಂದ ಹತ್ತು ಸಾವಿರ ಹೆಚ್ಚಿನ ಮತಗಳಿಸಿ ಮುಂದಿದ್ದರು. ಆದರೆ, ಕೊನೆಯ ೫-೬ ಸುತ್ತಿನ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮತಿ ಅಂಗಡಿಯವರು ಹೆಚ್ಚಿನ ಮತಗಳಿಸಿ ಜಯಶಾಲಿಗಳಾದರು.

ಮಮತಾ ಬ್ಯಾನರ್ಜಿಯವರಂತೆಯೇ ಜಾರಕಿಹೊಳಿಯವರೂ ಕೊನೆಯ ಸುತ್ತುಗಳ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿಯಿಂದ ಪರಾಭವಗೊಂಡರು.

ಪ್ರಜಾಪ್ರಭುತ್ವ ಎಂದರೆ ಚುನಾವಣೆಗಳಲ್ಲಿ ಗೆಲ್ಲುವುದು ಮಾತ್ರವಲ್ಲ, ಸಮಾಜ ಎದುರಿಸುತ್ತಿರುವ ಸವಾಲುಗಳಿಗೆ ಸೂಕ್ತ ಪರಿಹಾರ ಮಾರ್ಗ ಕಂಡುಹಿಡಿಯುವುದು ಅದಕ್ಕಿಂತ ಮುಖ್ಯ. ಪ್ರಚಾರಪ್ರಿಯ ಮೋದಿ ಅವರು ಹೊಗಳಿಕೆಗಷ್ಟೇ ನಿಗಾ ಕೊಡುತ್ತಾರೆ. ಕೊರೊನಾವನ್ನು ಎದುರಿಸುವುದರಲ್ಲಿ ಮೋದಿ ಹೆಜ್ಜೆ ಹೆಜ್ಜೆಗೂ ಸೋತಿದ್ದರೂ ಬಿಜೆಪಿ ವಂದಿ ಮಾಗಧರು ಮತ್ತು ಮೋದಿ ಕೊಂಡುಕೊಂಡಿರುವ ದೃಶ್ಯಮಾಧ್ಯಮಗಳು ಮೋದಿಯವರ ಕಾರ್ಯ ವೈಖರಿಯನ್ನು ಹೊಗಳಿ ಹೊಗಳಿ ಅತನನ್ನು ಹೊನ್ನ ಶೂಲಕ್ಕೆ ಗುರಿಮಾಡಿದರು. ಕೊರೊನಾ ಎರಡನೆ ಅಲೆ ಇಡೀ ಭಾರತವನ್ನೇ ಅಪ್ಪಳಿಸಿದಾಗ ಮೋದಿ ಬೆಪ್ಪಾದರು. ಲಸಿಕೆಗಳ ಅಭಾವ, ವೈದ್ಯಕೀಯ ಬಳಕೆಯ ಶುದ್ಧ ಆಕ್ಸಿಜನ್ ಕೊರತೆ ಮೋದಿಯವರ ನಿಜ ಸ್ವರೂಪವನ್ನು ಬೆತ್ತಲೆ ಮಾಡಿತು. ಕೋವಿಡ್ ಸೋಂಕನ್ನು ತಡೆಹಿಡಿಯುವ ಸಂದರ್ಭದಲ್ಲಿಯೂ ಮೋದಿ ತನ್ನ ಏಕಪಾತ್ರ ಅಭಿನಯವನ್ನು ಮುಂದುವರೆಸಿದರು. ಕೇಂದ್ರ ಮಂತ್ರಿ ಮಂಡಲದ ಇತರ ಸಚಿವರ ಸಲಹೆ ಸೂಚನೆ ಪಡೆಯಲೂ ನಿರಾಕರಿಸಿದರು. ಭಾರತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಕ್ಕೂಟ ಸಂಸ್ಥೆ, ಆದರೆ ಮೋದಿ ಮನ್‌ಕಿಬಾತ್ ಮುಖಾಂತರ ತನ್ನ ತೀರ್ಮಾನಗಳನ್ನು ರಾಜ್ಯಗಳ ಮೇಲೆ ಹೇರಿದರೇ ಹೊರತು ರಾಜ್ಯಗಳನ್ನು ಈ ಹೋರಾಟದ ಪಾಲುದಾರರಾಗಿ ಪರಿಗಣಿಸಲಿಲ್ಲ.

ಲಸಿಕಾ ನೀತಿಯಲ್ಲಿ ನ್ಯಾಯಾಂಗದ ಹಸ್ತಕ್ಷೇಪ ವಿರೋಧಿಸಿದ ಕೇಂದ್ರ ಸರ್ಕಾರ

ಕಾಂಗ್ರೆಸ್ ಕೇರಳ ಸೋತು, ತಮಿಳುನಾಡು ಮತ್ತು ಬಂಗಾಳಗಳಲ್ಲಿ ಹೇಳಹೆಸರಿಲ್ಲದಂತಾಯಿತಾದರೂ ತಮಿಳುನಾಡಿನ ಕನ್ಯಾಕುಮಾರಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಪರಾಭವಗೊಳಿಸಿ ಕ್ಷೇತ್ರವನ್ನು ಉಳಿಸಿಕೊಂಡಿತು. ಬೆಳಾಗಾಂನಲ್ಲಿ ಅತ್ಯಲ್ಪ ಮತಗಳಿಂದ ಸೋಲನ್ನು ಅನುಭವಿಸಿತು.
ಈ ಎಲ್ಲ ಚುನಾವಣೆಗಳೂ, ಮೋದಿ ಸರ್ಕಾರದ ವೈಫಲ್ಯಗಳು ಒಂದಾದ ಮೇಲೆ ಒಂದು ಬಹಿರಂಗಗೊಂಡ ಸಮಯದಲ್ಲಿ ನಡೆದವು. ಭಾರತೀಯ ಮತದಾರರಿಗೆ ಮೋದಿಷಾಗಳ ಬಗೆಗೆ ಅಸಮಾಧಾನ ಹುಟ್ಟಿಕೊಂಡ ತರುಣದಲ್ಲಿ ಈ ಚುನಾವಣೆಗಳು ನಡೆದವು. ಹೀಗಾಗಿ ಈ ಚುನಾವಣೆಗಳಲ್ಲಿ ಮೋದಿಯವರ ವಿರೋಧ ಪೂರ್ಣಮಟ್ಟದಲ್ಲಿ ಅನಾವರಣಗೊಳ್ಳಲಿಲ್ಲ.

ಈ ಚುನಾವಣೆಗಳು ಕೋವಿಡ್ ಎರಡನೇ ಅಲೆ ಆರಂಭವಾದ ಮೇಲೆ ನಡೆದಿದ್ದರೆ ಕೋವಿಡ್ ಪೀಡಿತರು, ಆಕ್ಸಿಜನ್, ಕೋವಿಡ್ ಲಸಿಕೆ ಚುಚ್ಚುಮದ್ದು ಮತ್ತು ಬೆಡ್‌ಗಾಗಿ, ಆಕ್ಸಿಜನ್‌ಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಪ್ರಾಣಬಿಟ್ಟ ಸಂದರ್ಭದಲ್ಲಿ ಆಗಿದ್ದರೆ ಮೋದಿಯವರಿಗೆ ಮಣ್ಣು ಮುಕ್ಕಿಸುತ್ತಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಧ್ಯಪ್ರದೇಶ: ಬುಡಕಟ್ಟು ವಿಶ್ವವಿದ್ಯಾಲಯ ಹಾಸ್ಟೆಲ್ ಒಳಗೆ ಅಸ್ಸಾಮಿ ವಿದ್ಯಾರ್ಥಿ ಮೇಲೆ ಗುಂಪು ಹಲ್ಲೆ

ಮಧ್ಯಪ್ರದೇಶದ ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಹಾಸ್ಟೆಲ್ ಕೋಣೆಯೊಳಗೆ ಐದು ಜನ ವಿದ್ಯಾರ್ಥಿಗಳ ತಂಡವು ಅಸ್ಸಾಮಿ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಗುಂಪು ಆತನಿಗೆ ಇಲ್ಲಿಯೇ ಸಾಯಬೇಕು ಎಂದು...

ಮಹಿಳೆಯರ ಜೊತೆ ಪುರುಷರಿಗೂ ಉಚಿತ ಬಸ್‌ ಪ್ರಯಾಣ, ಗ್ರಾಮೀಣರಿಗೆ 150 ಕೂಲಿ ದಿನ : ಎಐಎಡಿಎಂಕೆ ಚುನಾವಣಾ ಭರವಸೆ

ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಶನಿವಾರ (ಜ.17) ಪಕ್ಷದ ಮೊದಲ ಹಂತದ ಪ್ರಣಾಳಿಕೆ (ಚುನಾವಣಾ ಭರವಸೆ) ಬಿಡುಗಡೆ ಮಾಡಿದ್ದಾರೆ. ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯಂತೆ ಎಲ್ಲಾ ಪಡಿತರ...

ಛತ್ತೀಸ್‌ಗಢ| ಬಿಜಾಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲರು ಸಾವು

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಶನಿವಾರ ಭದ್ರತಾ ಪಡೆಗಳೊಂದಿಗಿನ ಎನ್‌ಕೌಂಟರ್‌ನಲ್ಲಿ ಕನಿಷ್ಠ ಇಬ್ಬರು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ವಾಯುವ್ಯ ಪ್ರದೇಶದ ಅರಣ್ಯ ಬೆಟ್ಟಗಳಲ್ಲಿ ಶನಿವಾರ ಬೆಳಿಗ್ಗೆ ಗುಂಡಿನ ಚಕಮಕಿ ನಡೆಯಿತು. ಹಿರಿಯ...

ಮಮತಾ ಬ್ಯಾನರ್ಜಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಸುವೇಂದು ಅಧಿಕಾರಿ

ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಶುಕ್ರವಾರ (ಜ.16) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ 100 ಕೋಟಿ ರೂ.ಗಳ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಮಮತಾ...

ಕೋಮುವಾದ ಕಾರಣಕ್ಕೆ ಬಾಲಿವುಡ್‌ನಲ್ಲಿ ಅವಕಾಶ ಕಡಿಮೆ; ರೆಹಮಾನ್ ಹೇಳಿಕೆ ತಳ್ಳಿಹಾಕಿದ ಜಾವೇದ್ ಅಖ್ತರ್

ಯಶಸ್ವೀ ಸಂಗೀತಗಾರನಾಗಿ ಹಲವು ಕೊಡುಗೆ ನೀಡಿದ್ದರೂ ಕೆಲವರಿಗೆ ಹೊರಗಿನವನು ಎಂಬ ಭಾವನೆ ಹೋಗಿಲ್ಲ. ಕಳೆದ ಎಂಟು ವರ್ಷಗಳಲ್ಲಿ ಬಾಲಿವುಡ್‌ನ ಕದ ಮುಚ್ಚಿದೆ ಎಂಬ ಬಗ್ಗೆ ಎ.ಆರ್. ರೆಹಮಾನ್ ಹೇಳಿಕೆಯನ್ನು ಹಿರಿಯ ಗೀತೆ ರಚನೆಕಾರ...

14 ವರ್ಷದ ದಲಿತ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ : 16 ವರ್ಷದ ಬಾಲಕನನ್ನು ವಶಕ್ಕೆ ಪಡೆದ ಪೊಲೀಸರು

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ 14 ವರ್ಷದ ದಲಿತ ಬಾಲಕಿಯ ಭೀಕರ ಅತ್ಯಾಚಾರ, ಕೊಲೆ ನಡೆದಿದ್ದು, ಈ ಸಂಬಂಧ 16 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುರುವಾರ (ಜ.15) ಬೆಳಿಗ್ಗೆ ಶಾಲೆಗೆ ಹೋದ...

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುತ್ತದೆ: ಪಿಣರಾಯಿ ವಿಜಯನ್

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಿಜೆಪಿ ಆಡಳಿತದ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿ ನಡೆಸಿದ್ದಾರೆ. ಪೌರತ್ವ ಕಾಯ್ದೆ ಮತ್ತು ಹೊಸ ವಕ್ಫ್ ಕಾಯ್ದೆಯಂತಹ ಅದರ ವಿವಿಧ ಕಾನೂನುಗಳು ಮತ್ತು ನೀತಿಗಳು...

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ: 114 ಸ್ಥಾನಗಳೊಂದಿಗೆ ಪ್ರಮುಖ ಪಕ್ಷವಾಗಿ ಹೊರಹೊಮ್ಮಿದ ಎಐಎಂಐಎಂ

ಮಹಾರಾಷ್ಟ್ರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಖಿಲ ಭಾರತ ಮಜ್ಲಿಸ್ ಇ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷವು (ಎಐಎಂಐಎಂ) 114 ಸ್ಥಾನಗಳನ್ನು ಗೆದ್ದು, 2017 ರ ಸ್ಥಳೀಯ ಸಂಸ್ಥೆ ಚುನಾವಣೆಗಳಿಗಿಂತ ತನ್ನ ಸಂಖ್ಯೆಯನ್ನು ತೀವ್ರವಾಗಿ ಹೆಚ್ಚಿಸಿಕೊಂಡಿದೆ....

ವಲಸೆ ಕಾರ್ಮಿಕರ ಶೆಡ್‌ಗಳಿಗೆ ತೆರಳಿ ಅನೈತಿಕ ಪೊಲೀಸ್‌ಗಿರಿ : ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಬಂಧನ

ವಲಸೆ ಕಾರ್ಮಿಕರ ಶೆಡ್‌ಗಳಿಗೆ ತೆರಳಿ ಅವರ ಗೌಪ್ಯ ದಾಖಲೆಗಳನ್ನು ಪಡೆದು ಪೌರತ್ವ ಪರಿಶೀಲಿಸುವ ಮೂಲಕ ಅನೈತಿಕ ಪೊಲೀಸ್‌ಗಿರಿ ಮಾಡುತ್ತಿದ್ದ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿಯನ್ನು ಬನ್ನೇರುಘಟ್ಟ ಪೊಲೀಸರು ಶುಕ್ರವಾರ (ಜ.16) ತಡರಾತ್ರಿ ಬಂಧಿಸಿದ್ದಾರೆ...

ಬಳ್ಳಾರಿ| ಬಂಡಿಹಟ್ಟಿ-ದಾನಪ್ಪ ಬೀದಿ ಬಡರೈತರ ಮೇಲೆ ದೌರ್ಜನ್ಯ; ಪ್ರತಾಪರೆಡ್ಡಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಬಳ್ಳಾರಿ ಜಿಲ್ಲೆಯ ಬಂಡಿಹಟ್ಟಿ-ದಾನಪ್ಪ ಬೀದಿಯ ಬಡರೈತರ ಮೇಲೆ ದೌರ್ಜನ್ಯ ಎಸಗುತ್ತಿರುವ ಎನ್‌.ಪ್ರತಾಪ ರೆಡ್ಡಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು 'ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ' ಮುಖಂಡರು ಆಗ್ರಹಿಸಿದರು....