RSS ಪ್ರೇರಿತ ಬ್ರಾಹ್ಮಣ್ಯ ಪಠ್ಯ ತಿರಸ್ಕರಿಸಿ, ಶಿಕ್ಷಣ ತಜ್ಞರಲ್ಲದ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಟ್ವಿಟರ್ನಲ್ಲಿ ಜೋರು ಸದ್ದು ಕೇಳಿಬಂದಿದೆ. #RejectRSSTextBooks #RejectBrahminTextBooks ಎಂಬ ಹ್ಯಾಷ್ಟ್ಯಾಗ್ಗಳು ಭಾರತ ಮಟ್ಟದಲ್ಲಿ ಟ್ರೆಂಡಿಂಗ್ ಆಗುತ್ತಿದೆ.
ಪಠ್ಯಪುಸ್ತಕ ಸಮಿತಿಯಲ್ಲಿ ಇರುವವರು ಎಲ್ಲರೂ ಬ್ರಾಹ್ಮಣರೇ ಆಗಿದ್ದಾರೆ. 09 ಜನ ಬ್ರಾಹ್ಮಣ ಲೇಖಕರ ಪಠ್ಯ ಸೇರಿಸಲಾಗಿದೆ. 06 ಜನ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗದ ಲೇಖಕರ ಪಠ್ಯ ಕೈಬಿಡಲಾಗಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಜೀವನದುದ್ದಕ್ಕೂ ಸುಳ್ಳನ್ನೇ ಹೇಳಿಕೊಂಡು ಬಂದ ಚಕ್ರವರ್ತಿ ಸೂಲಿಬೆಲೆ ಪಠ್ಯ ಸೇರಿಸುವ ಮೂಲಕ ಮಕ್ಕಳಿಗೆ ಯಾವ ಸಂದೇಶ ನೀಡುತ್ತಿದ್ದೀರಿ? ಟ್ರೋಲ್ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪಠ್ಯ ಪರಿಷ್ಕರಣ ಸಮಿತಿಗೆ ಅಧ್ಯಕ್ಷನನ್ನಾಗಿ ನೇಮಿಸಿದ್ದಾಗಲೇ ಕರ್ನಾಟಕ ಮರ್ಯಾದೆ ಹಾಳಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಟ್ವಿಟರ್ನಲ್ಲಿ #RejectRSSTextBooks #RejectBrahminTextBooks ಹ್ಯಾಷ್ಟ್ಯಾಗ್ಗಳು 13 ಸಾವಿರಕ್ಕೂ ಹೆಚ್ಚು ಟ್ವೀಟ್ ಆಗಿದ್ದು, ಭಾರತ ಮಟ್ಟದಲ್ಲಿ ಟ್ರೆಂಡ್ ಆಗುತ್ತಿವೆ.

ವಿದ್ಯಾರ್ಥಿಗಳು ಕಲಿಯುವ ಇತಿಹಾಸದ ಪಠ್ಯಪುಸ್ತಕಗಳು ನಾಡಿನ ಭವಿಷ್ಯತ್ತಿಗೆ ಮಾರಕವಾಗಬಾರದು, ಪೂರಕವಾಗಿರಬೇಕು. ಹಿಂಸೆ, ದ್ವೇಷ, ಅಸೂಯೆಗಳ ಪುಷ್ಠಿಕರಿಸುವ ವೈದೀಕರಣವನ್ನ ಖಂಡಿಸಿಬೇಕಿದೆ. ಕನ್ನಡದ ಅಸ್ಮಿತೆಗೆ ಧಕ್ಕೆ ತರುವ, ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿರುವ ಪಠ್ಯಪುಸ್ತಕ ಪರಿಷ್ಕರಣೆಗೆ ಸರ್ಕಾರ ತಡೆ ನೀಡಬೇಕು #RejectRSSTextBooks ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ.ಕೆ ಹರಿಪ್ರಸಾದ್ರವರು ಟ್ವೀಟ್ ಮಾಡಿದ್ದಾರೆ.
ವಿದ್ಯಾರ್ಥಿಗಳು ಕಲಿಯುವ ಇತಿಹಾಸದ ಪಠ್ಯಪುಸ್ತಕಗಳು ನಾಡಿನ ಭವಿಷ್ಯತ್ತಿಗೆ ಮಾರಕವಾಗಬಾರದು,ಪೂರಕವಾಗಿರಬೇಕು. ಹಿಂಸೆ,ದ್ವೇಷ,ಅಸೂಯೆಗಳ ಪುಷ್ಠಿಕರಿಸುವ ವೈದೀಕರಣವನ್ನ ಖಂಡಿಸಿಬೇಕಿದೆ.
ಕನ್ನಡದ ಅಸ್ಮಿತೆಗೆ ಧಕ್ಕೆ ತರುವ,ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿರುವ ಪಠ್ಯಪುಸ್ತಕ ಪರಿಷ್ಕರಣೆಗೆ ಸರ್ಕಾರ ತಡೆ ನೀಡಬೇಕು#RejectRSSTextBooks
— Hariprasad.B.K. (@HariprasadBK2) May 22, 2022
RSS ಮತ್ತು ನಕಲಿ ದೇಶಪ್ರೇಮಿಗಳನ್ನು ಪಠ್ಯದೊಳಗೆ ಸೇರಿಸಿ ಅವರ ವಿಷಕಾರಿ ನೀತಿಗಳನ್ನು ಮಕ್ಕಳ ತಲೆಗೆ ತುಂಬಲು ಹೊರಟಿರುವ ಸರ್ಕಾರಕ್ಕೆ ಯಾವುದರ ಬಗ್ಗೆಯೂ ಸ್ಪಷ್ಟತೆ ತಿಳುವಳಿಕೆ ಇಲ್ಲ. ಇಂತಹ ಅಪದ್ದಗಳಿಗೆ ಕಾರಣವಾಗಿರುವ ಸಚಿವ ಬಿ.ಸಿ ನಾಗೇಶ್ ಅಸಮರ್ಥರಾಗಿದ್ದು, ಸಮಾಜ ವಿರೋಧಿ ಶಕ್ತಿಗಳನ್ನು ಉತ್ತೇಜಿಸುತ್ತಿದ್ದಾರೆ #RejectRSSTextBooks ಎಂದು ಮಾಜಿ ಸಚಿವರಾದ ಡಾ.ಎಚ್.ಸಿ ಮಹಾದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
RSS ಮತ್ತು ನಕಲಿ ದೇಶಪ್ರೇಮಿಗಳನ್ನು ಪಠ್ಯದೊಳಗೆ ಸೇರಿಸಿ ಅವರ ವಿಷಕಾರಿ ನೀತಿಗಳನ್ನು ಮಕ್ಕಳ ತಲೆಗೆ ತುಂಬಲು ಹೊರಟಿರುವ ಸರ್ಕಾರಕ್ಕೆ ಯಾವುದರ ಬಗ್ಗೆಯೂ ಸ್ಪಷ್ಟತೆ ತಿಳುವಳಿಕೆ ಇಲ್ಲ.
ಇಂತಹ ಅಪದ್ದಗಳಿಗೆ ಕಾರಣವಾಗಿರುವ ಸಚಿವ @BCNagesh_bjp ಅಸಮರ್ಥರಾಗಿದ್ದು, ಸಮಾಜ ವಿರೋಧಿ ಶಕ್ತಿಗಳನ್ನು ಉತ್ತೇಜಿಸುತ್ತಿದ್ದಾರೆ#RejectRSSTextBooks
— Dr H.C.Mahadevappa (@CMahadevappa) May 22, 2022
ಕರ್ನಾಟಕಕ್ಕೆ ಆಧುನಿಕ ಶಿಕ್ಷಣವನ್ನು ತಂದುಕೊಟ್ಟವರು ಕ್ರಿಶ್ಚಿಯನ್ನರು. ಕರ್ನಾಟಕವನ್ನು ಜಾಗತಿಕ ಭೂಪಟಕ್ಕೆ ಸೇರಿಸಿದವರು ಮುಸ್ಲಿಮರು. ಕರ್ನಾಟಕದ ಮೂಲನಿವಾಸಿಗಳು ದಲಿತರು. ಪಠ್ಯಪುಸ್ತಕ ರಚನೆ ಮಾಡುವಾಗ ಸಮಿತಿಯಲ್ಲಿ ಇವರು ಇರಬೇಕಾದ್ದು ಅಗತ್ಯ. ಮಕ್ಕಳಿಗೆ ಜನಾಂಗ ದ್ವೇಷ ಕಲಿಸಬಾರದು #RejectRSSTextBooks #RejectBrahminTextBooks ಎಂದು ಹಿರಿಯ ಚಿಂತಕರು ಮತ್ತು ಜೆಎನ್ಯು ಕನ್ನಡ ಪೀಠದ ಅಧ್ಯಕ್ಷರಾಗಿದ್ದ ಪುರುಷೋತ್ತಮ ಬಿಳಿಮಲೆಯವರು ಬರೆದಿದ್ದಾರೆ.
ಕರ್ನಾಟಕಕ್ಕೆ ಆಧುನಿಕ ಶಿಕ್ಷಣವನ್ನು ತಂದುಕೊಟ್ಟವರು ಕ್ರಿಶ್ಚಿಯನ್ನರು. ಕರ್ನಾಟಕವನ್ನು ಜಾಗತಿಕ ಭೂಪಟಕ್ಕೆ ಸೇರಿಸಿದವರು ಮುಸ್ಲಿಮರು. ಕರ್ನಾಟಕದ ಮೂಲನಿವಾಸಿಗಳು ದಲಿತರು. ಪಠ್ಯಪುಸ್ತಕ ರಚನೆ ಮಾಡುವಾಗ ಸಮಿತಿಯಲ್ಲಿ ಇವರು ಇರಬೇಕಾದ್ದು ಅಗತ್ಯ. ಮಕ್ಕಳಿಗೆ ಜನಾಂಗ ದ್ವೇಷ ಕಲಿಸಬಾರದು#RejectRSSTextBooks#RejectBrahminTextBooks
— P. Bilimale (@PurushothamaBi1) May 22, 2022
ಕನ್ನಡ ಮಕ್ಕಳು ಓದಬೇಕಿರುವುದು ಸಿದ್ದಲಿಂಗಯ್ಯನವರ ಬಂಡಾಯದ ಹಾಡುಗಳನ್ನು. ಸಂಸ್ಕಾರದ ಹೆಸರಲ್ಲಿ ಬರೀ ವೈದಿಕ ಆಚರಣೆಗಳು, ನಂಬಿಕೆಗಳನ್ನೇ ಕನ್ನಡ ಮಕ್ಕಳಿಗೆ ಕಲಿಸಿದರೆ ಅದು ತಪ್ಪು. ಸಂಸ್ಕಾರ ಬರೀ ಬ್ರಾಹ್ಮಣರಿಗಶ್ಟೇ ಇದೆಯಾ? ಇದೊಂದು ಹೊಣೆಗೇಡಿ ಪುರೋಹಿತಶಾಹಿ ಸರಕಾರ ಎಂದು ಚೈತನ್ಯ ಗೌಡ ಎಂಬುವವರು ಬರೆದಿದ್ದಾರೆ.
ಕನ್ನಡ ಮಕ್ಕಳು ಓದಬೇಕಿರುವುದು ಸಿದ್ದಲಿಂಗಯ್ಯನವರ ಬಂಡಾಯದ ಹಾಡುಗಳನ್ನು.
ಸಂಸ್ಕಾರದ ಹೆಸರಲ್ಲಿ ಬರೀ ವಯ್ದಿಕ ಆಚರಣೆಗಳು, ನಂಬಿಕೆಗಳನ್ನೇ ಕನ್ನಡ ಮಕ್ಕಳಿಗೆ ಕಲಿಸಿದರೆ ಅದು ತಪ್ಪು.
ಸಂಸ್ಕಾರ ಬರೀ ಬ್ರಾಹ್ಮಣರಿಗಶ್ಟೇ ಇದೆಯಾ ?
ಇದೊಂದು ಹೊಣೆಗೇಡಿ ಪುರೋಹಿತಶಾಹಿ ಸರಕಾರ.#RejectRSSTextBooks #RejectBrahminTextBooks
— ಚಯ್ತನ್ಯ ಗವ್ಡ (@hosabaraha) May 22, 2022
ಅರವಿಂದ ಮಾಲಗತ್ತಿಯವರ ಪದ್ಯವನ್ನು ಕಿತ್ತುಹಾಕಲಾಗಿದೆ ಎಂಬುದಷ್ಟೇ ಮುಖ್ಯ ವಿಷಯವಲ್ಲ, ಕಿತ್ತು ಹಾಕಿರುವುದು ಬುದ್ಧನ ಕುರಿತ ಪದ್ಯ. ಕ್ರೂರ ಜನಾಂಗೀಯವಾದಿಗಳಷ್ಟೇ ಹೀಗೆ ಮಾಡಬಲ್ಲರು ಎಂದು ಹೋರಾಟಗಾರರಾದ ದಿನೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಸರ್ವಜನಾಂಗದ ಶಾಂತಿಯ ಬೀಡಾದ ಕರ್ನಾಟಕದ ಮಕ್ಕಳಿಗೆ ಒಳ್ಳೆಯ ಪಠ್ಯಪುಸ್ತಕ ಕೊಡುವಂಥ ಬಲಪಂಥೀಯ ವಿದ್ವಾಂಸರನ್ನು ಹುಡುಕಲು ಸರಕಾರಕ್ಕೆ ಅಸಾಧ್ಯವಾದುದು ಅವರ ಬೌದ್ಧಿಕ ದಾರಿದ್ರ್ಯವನ್ನು ಸೂಚಿಸುವುದೇ? ಚಕ್ರತೀರ್ಥ ಬಿಟ್ಟರೆ ಅವರಲ್ಲಿ ಯಾರೂ ಇಲ್ಲವೇ? ಎಂದು ಬಹುತ್ವ ಕರ್ನಾಟಕ ಸಂಘಟನೆ ಪ್ರಶ್ನಿಸಿದೆ.
ಸರ್ವಜನಾಂಗದ ಶಾಂತಿಯ ಬೀಡಾದ ಕರ್ನಾಟಕದ ಮಕ್ಕಳಿಗೆ ಒಳ್ಳೆಯ ಪಠ್ಯಪುಸ್ತಕ ಕೊಡುವಂಥ ಬಲಪಂಥೀಯ ವಿದ್ವಾಂಸರನ್ನು ಹುಡುಕಲು ಸರಕಾರಕ್ಕೆ ಅಸಾಧ್ಯವಾದುದು ಅವರ ಬೌದ್ಧಿಕ ದಾರಿದ್ರ್ಯವನ್ನು ಸೂಚಿಸುವುದೇ? ಚಕ್ರತೀರ್ಥ ಬಿಟ್ಟರೆ ಅವರಲ್ಲಿ ಯಾರೂ ಇಲ್ಲವೇ? #RejectBrahminTextBooks #RejectRSSTextBooks
— Bahutva Karnataka ಬಹುತ್ವ ಕರ್ನಾಟಕ (@BahutvaKtka) May 22, 2022
ಇದನ್ನೂ ಓದಿ: ಸ್ವಾಮಿ ವಿವೇಕಾನಂದರ ಚಿಂತನೆಗಳ ತಿರುಚುವಿಕೆ: ಪ್ರಗತಿಪರ ವಿಚಾರ ಕೈಬಿಟ್ಟು, ಶಾಸ್ತ್ರ, ವೇದಾಂತ ಹೇರಿದ ನೂತನ ಪಠ್ಯ ಸಮಿತಿ



Twitter system is not voice of public..
It’s RSS or any it sd be truth in calabash.. not appraisal of sm wrong history.
Be courageous to know the real fact instead of trying to divide Brahman,Muslim,dalit etc..
Don’t try to fill ur bank appraising anti communists.
Twitter Andolan is to have good dreams by blaming truth
Since 2014-15 this nation is witnessing intolerance . Brahminocracy , Brahmin egimony have ruined the 7 decade old Democracy.
Textbook committee is luring Brahminical lessons into the Academic curriculum is highly condemnable.
Karnataka education minister Mr. Nagesh must resign immediately for dropping some of the historical patriots lessons from kannada textbooks.
Reject out right RSS textbooks…….
What a shame! Although we call ourselves citizens of 21st century, we behave as if we never went through any civilization. We are to teach that love conquerors and hate destroys. Unfortunately, hate is become more sweeter than genuine love. People of goodwill please help each other to build a better society by electing sound minded people.