Homeಮುಖಪುಟ220 ರೂ ಇದ್ದ ಕೇಬಲ್ ಬಿಲ್ 400 ರೂ ದಾಟುತ್ತಿರುವುದೇಕೆ? ಇದರ ಲಾಭ ಯಾರಿಗೆ?

220 ರೂ ಇದ್ದ ಕೇಬಲ್ ಬಿಲ್ 400 ರೂ ದಾಟುತ್ತಿರುವುದೇಕೆ? ಇದರ ಲಾಭ ಯಾರಿಗೆ?

- Advertisement -
- Advertisement -

220 ರೂ ಇದ್ದ ಕೇಬಲ್ ಬಿಲ್ 400 ರೂ ದಾಟುತ್ತಿರುವುದೇಕೆ? ಇದರ ಲಾಭ ಯಾರಿಗೆ? ಹಿಂದಿರುವವರು ಯಾರು?

ಚಾನೆಲ್‍ಗಳು ಮಾತ್ರ ಅಂಬಾನಿಯದ್ದಲ್ಲ; ಕೇಬಲ್ ಸಹಾ ರಿಲೆಯನ್ಸ್‍ ದೇ. ಅಪಾಯಕಾರಿ ಬೆಳವಣಿಗೆಗೆ ನಾಂದಿ

ಮಂಡ್ಯದಲ್ಲಿ ಸುಮಲತಾ ನಾಮಪತ್ರ ಸಲ್ಲಿಸಿದ ದಿನ ಸ್ಥಳೀಯವಾಗಿ ಜೆಡಿಎಸ್‍ನ ಪ್ರಭಾವದಿಂದಾಗಿ ಕೇಬಲ್ ಟಿವಿ ಕೆಲಸ ಮಾಡದಂತೆ ಮಾಡಲಾಯಿತು ಎಂಬ ಒಂದು ಆರೋಪವಿದೆ. ಆದರೆ, ಮುಖೇಶ್ ಅಂಬಾನಿಯ ಬೆಂಬಲಕ್ಕೆ ನಿಂತಿರುವ ಬಿಜೆಪಿ ಪಕ್ಷದ ವಿರುದ್ಧ ಯಾವುದಾದರೂ ಚಾನೆಲ್ ಸುದ್ದಿ ಮಾಡಿದರೆ, ಆ ಚಾನೆಲ್ಲೇ ಬರದಂತೆ ನೋಡಿಕೊಳ್ಳುವ ಸಂಭವ ತೆರೆದುಕೊಂಡಿದೆ. ಅದು ಹೇಗೆಂಬುದನ್ನು ನೋಡೋಣ.

200 ರೂ. ಆಸುಪಾಸಿನಷ್ಟು ಖರ್ಚು ಮಾಡಿ ನೂರಾರು ಚಾನೆಲ್‍ಗಳನ್ನು ಪಡೆದುಕೊಳ್ಳುತ್ತಿದ್ದ ದಿನಗಳು ಈಗ ಇಲ್ಲ. ಕೆಲವು ಕಾಲದ ನಂತರ ಇದು ಯಾವ ಸ್ವರೂಪ ತೆಗೆದುಕೊಳ್ಳಲಿದೆ ಎಂಬುದನ್ನೂ ಹೇಳಲಾಗದು. ಹಿಂದೆಯೂ ಉಚಿತ ಚಾನೆಲ್‍ಗಳು ಮತ್ತು ಹಣ ಕೊಟ್ಟು ಕೊಳ್ಳಬೇಕಾದ ಚಾನೆಲ್‍ಗಳಿದ್ದವು. ಆದರೆ, ಅವೆಲ್ಲಾ ಸಾಮಾನ್ಯ ಗ್ರಾಹಕರ ಗಮನಕ್ಕೆ ಬರುತ್ತಿರಲಿಲ್ಲ. ಏಕೆಂದರೆ, ಕೇಬಲ್ ಮೂಲಕ ಸೇವೆ ಒದಗಿಸುತ್ತಿದ್ದ ಆಪರೇಟರ್‍ಗಳು ಅವನ್ನೆಲ್ಲಾ ಮಾಡಿ, ಇಂತಿಷ್ಟು ಹಣಕ್ಕೆ ಇಷ್ಟು ಚಾನೆಲ್ ಎಂಬ ಪ್ಯಾಕೇಜ್‍ನೊಂದಿಗೆ ಒದಗಿಸುತ್ತಿದ್ದರು.
ಆದರೆ, ಈಗೆರಡು ತಿಂಗಳ ಹಿಂದೆ ಕೆಲವು ಉಚಿತ ಚಾನೆಲ್‍ಗಳನ್ನು ಬಿಟ್ಟರೆ ತಮಗೆ ಬೇಕಾದ ಮನರಂಜನೆ ಅಥವಾ ಸುದ್ದಿ ಚಾನೆಲ್‍ಗಳಿಗೆ ಪ್ರತ್ಯೇಕವಾಗಿ ಇಂತಿಷ್ಟು ಶುಲ್ಕವೆಂದು ಪಾವತಿಸಬೇಕೆಂದು ಸೂಚಿಸಲಾಗಿತ್ತು. ಇದರಿಂದ ಬಹುತೇಕ ಎಲ್ಲಾ ಚಾನೆಲ್‍ಗಳನ್ನು ನೋಡುತ್ತಿದ್ದ ಗ್ರಾಹಕರಿಗೆ ಗೊಂದಲವುಂಟಾಯಿತು. ಪ್ರತೀ ಮನೆಯಲ್ಲೂ ಬೇರೆ ಬೇರೆ ಆಸಕ್ತಿಗಳ ಸದಸ್ಯರಿರುತ್ತಾರಾದ್ದರಿಂದ, ಎಲ್ಲರಿಗೂ ಬೇಕಾದ ಸೀಮಿತ ಚಾನೆಲ್‍ಗಳಿಗೂ ಹಿಂದಿಗಿಂತ 150 ರೂ ಹೆಚ್ಚು ಕೊಡಬೇಕು. ಇದು ಇನ್ನೂ ಹೆಚ್ಚಾಗಬಹುದೇ ಹೊರತು ಕಡಿಮೆಯಾಗದು. ಇನ್ನು ಸ್ವಲ್ಪ ಹೆಚ್ಚು ಚಾನೆಲ್‍ಗಳು ಬೇಕೆಂದರೆ, ದುಪ್ಪಟ್ಟು ಬೆಲೆ ನೀಡಬೇಕಾದಂತಹ ಪರಿಸ್ಥಿತಿ ಏಕೆ ತಲೆದೋರಿತು? ಇದರ ಲಾಭ ಯಾರಿಗೆ ಆಗಬಹುದು ಎಂಬುದನ್ನು ನೋಡೋಣ.

ಎಲ್ಲರಿಗೂ ತಿಳಿದಿರುವಂತೆ ಬಹಳ ಹಿಂದೆ ಮನೆ ಮನೆಗೆ ಕೇಬಲ್ ಎಳೆದು ವಿವಿಧ ಚಾನೆಲ್‍ಗಳಲ್ಲದೇ, ಕೇಬಲ್‍ನವರೇ ಸಿನೆಮಾ ಸಹಾ ತೋರಿಸುತ್ತಿದ್ದರು. ಈ ರೀತಿ ಕೇಬಲ್ ಜಾಲ ವಿಸ್ತರಿಸಲು ಬಹಳ ದೊಡ್ಡ ಪೈಪೋಟಿಯೇ ನಡೆದಿದೆ. ಕೇಬಲ್ ಮಾಫಿಯಾ ಎಂದೆಲ್ಲಾ ಅದನ್ನು ಕರೆಯಲಾಗುತ್ತಿತ್ತು. ಆದರೆ, ಕಂಬ, ಮರಗಳು, ಮನೆಯ ಮೇಲಿನ ಕೊಕ್ಕೆಗಳು ಎಲ್ಲಕ್ಕೂ ಸಿಕ್ಕಿಸಿ ಮನೆಯಿಂದ ಮನೆಗೆ ತೆಗೆದುಕೊಂಡು ಹೋಗಿ ಎಲ್ಲಾ ಕಡೆ ಈ ಮಾರುಕಟ್ಟೆ ಸೃಷ್ಟಿ ಮಾಡಿದ್ದರಲ್ಲಿ ಸಣ್ಣ ಆಪರೇಟರ್‍ಗಳ ಪಾಲು ದೊಡ್ಡದು. ನಂತರ ಅವು ‘ಮಾಫಿಯಾ’ಗಳ ಹಿಡಿತಕ್ಕೆ, ರಾಜಕಾರಣಿಗಳ ಹಿಡಿತಕ್ಕೆ ಹೋಯಿತು.

ಆ ನಂತರ ಸಿಟಿ ಕೇಬಲ್, ಹಾಥ್‍ವೇ ಮತ್ತು ಡೆನ್‍ಗಳೆಂಬ ಎಂಎಸ್‍ಓ (ಮಲ್ಟಿ ಸರ್ವೀಸ್ ಆಪರೇಟರ್)ಗಳು ತಲೆಯೆತ್ತಿದವು. ಇವು ಸ್ಥಳೀಯ ಅಗತ್ಯಗಳೂ ಇದ್ದುದರಿಂದ ಲೋಕಲ್ ಆಪರೇಟರ್‍ಗಳನ್ನೂ ಸಣ್ಣ ಪಾಲುದಾರರನ್ನಾಗಿ ಉಳಿಸಿಕೊಂಡು, ಬೃಹತ್ತಾಗಿ ಬೆಳೆದವು. ಶೇ.10ರಿಂದ ಶೇ.50ರವರೆಗೆ ತಮ್ಮ ಷೇರುಗಳನ್ನು ಉಳಿಸಿಕೊಂಡ ಲಕ್ಷಾಂತರ ಸಣ್ಣ ಆಪರೇಟರ್‍ಗಳು ಒಂದಲ್ಲಾ ಒಂದು ಎಂಎಸ್‍ಓ ಜೊತೆಗೆ ಸೇರಲೇಬೇಕಾಯಿತು.

ಅಂದ ಹಾಗೆ ಈ ಡೆನ್ ಯಾರದ್ದು?
ಸಮೀರ್ ಮಂಚಂಡ ಮತ್ತು ರಾಘವ್ ಬೆಹ್ಲ್ ಇಬ್ಬರೂ ಪಾಲುದಾರರಾಗಿದ್ದ ಕಾಲದಿಂದಲೂ ಡೆನ್ ಬೆಳೆಯುತ್ತಾ, ಹಿಂದಿ ರಾಜ್ಯಗಳಲ್ಲೆಲ್ಲಾ ವ್ಯಾಪಿಸಿತು. ಸಿಎನ್‍ಎನ್ ಐಬಿಎನ್ ಹುಟ್ಟಿ ಹಾಕಿದ್ದ ರಾಘವ್ ಬೆಹ್ಲ್ ನಂತರ ಅದನ್ನು ಅಂಬಾನಿಗೆ ಮಾರಿದರು. ಅದರ ಜೊತೆಗೆ ಕೇಬಲ್ ಜಾಲದ ತಮ್ಮ ಷೇರುಗಳನ್ನೂ. ಇನ್ನು ಮಂಚಂಡ, ರಿಪಬ್ಲಿಕ್ ಟಿವಿಯಲ್ಲೂ ಪಾಲುದಾರಿಕೆ ಹೊಂದಿದ್ದ. ಅರ್ನಬ್ ಗೋಸ್ವಾಮಿ ರಿಪಬ್ಲಿಕ್ ಶುರು ಮಾಡಿದಾಗ ಕೇಬಲ್ ಜಾಲವನ್ನೂ ಹಿಡಿತಕ್ಕೆ ತೆಗೆದುಕೊಳ್ಳುವ ಯೋಜನೆಯೊಂದಿಗೇ ಹೊರಟಿದ್ದು.

ಆದರೆ, ಈಗಿನ ಪರಿಸ್ಥಿತಿ ಬೇರೆಯೇ ಆಗಿದೆ. ಡೆನ್ ಮತ್ತು ಹಾಥ್‍ವೇ ಎರಡರ ಮೇಲೂ ಸಂಪೂರ್ಣ ಹಿಡಿತ ಸಾಧಿಸಿರುವುದು ಆರ್‍ಐಜಿ – ಅಂದರೆ ರಿಲೆಯನ್ಸ್ ಇಂಡಸ್ಟ್ರೀಸ್ ಗ್ರೂಪ್.
ಟಿವಿ – 18 ಕೊಂಡ ನಂತರ, ಈ ಟಿವಿ ಸಮೂಹದ ಬಹುತೇಕ ಚಾನೆಲ್‍ಗಳನ್ನು ಮುಖೇಶ್ ಅಂಬಾನಿ ಒಡೆತನದ ರಿಲೆಯನ್ಸ್ ಕಂಪೆನಿಯೇ ಕೊಂಡಿತ್ತು. ಇಷ್ಟಲ್ಲದೇ ನಷ್ಟದಲ್ಲಿರುವ ಝೀ ಟಿವಿ ಸಮೂಹವನ್ನು ಕೊಳ್ಳಲೂ ಸಹಾ ಅಂಬಾನಿ ಹಾಗೂ ಭಾರ್ತಿ ಮಿತ್ತಲ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಟಿವಿ ಚಾನೆಲ್ಲೂ ಅಂಬಾನಿಯದ್ದೇ, ಕೇಬಲ್ ನೆಟ್‍ವರ್ಕ್ ಸಹಾ ಅವರದ್ದೇ ಆದರೆ ಏನಾಗಬಹುದು?

ಮೋದಿ ಸರ್ಕಾರದ ತಪ್ಪುಗಳು/ಹಗರಣಗಳನ್ನು ಬಯಲಿಗೆಳೆಯುತ್ತಿದ್ದ ಎಬಿಪಿ ಚಾನೆಲ್‍ಅನ್ನು ಮಣಿಸಲು ಸರ್ಕಾರ ಏನು ಮಾಡಿತೆಂಬುದನ್ನು ನಾವು ನೋಡಿದ್ದೇವೆ. ಸರ್ಕಾರೀ ಜಾಹೀರಾತುಗಳನ್ನು ನಿಲ್ಲಿಸುವುದು, ಸಿಗ್ನಲ್ ಸಹಾ ಇಲ್ಲದಂತೆ ಮಾಡುವುದು ಇತ್ಯಾದಿಗಳ ಮೂಲಕ ಎಬಿಪಿ ನ್ಯೂಸ್ ಶರಣಾಗಿ ಬಿಜೆಪಿಯ ಮುಂದೆ ಮಂಡಿಯೂರಬೇಕಾಯಿತು. ಅದರ ಪ್ರಸಿದ್ಧ ಸಂಪಾದಕ ಪುಣ್ಯಪ್ರಸೂನ್ ವಾಜಪೇಯಿ ಅವರನ್ನು ಕಿತ್ತೊಗೆಯಬೇಕಾಯಿತು. ಕಿತ್ತೊಗೆದ ಮರುದಿನದಿಂದಲೇ ‘ಎಲ್ಲವೂ ಸರಿಹೋಯಿತು’.

ಹೀಗಿದ್ದ ಮೇಲೆ ಮುಂದೆ ಸರ್ಕಾರಗಳು ಅಂಬಾನಿಯ ಮುಂದೆ ಮಂಡಿಯೂರಬೇಕಾಗಬಹುದು. ಏಕೆಂದರೆ, ತಮ್ಮ ವಿರುದ್ಧ ಸುದ್ದಿ ಪ್ರಸರಣ ಮಾಡುವ ಇತರ ಮಾಧ್ಯಮಗಳ ಮೇಲೂ ಹಿಡಿತ ಹೊಂದುವ ಅಂಬಾನಿ, ಸರ್ಕಾರಕ್ಕೇ ಸವಾಲು ಹಾಕಬಹುದು. ಇವೆಲ್ಲದರ ಕುರಿತು ಟ್ರಾಯ್ 2008ರಲ್ಲೇ ಎಚ್ಚರಿಸಿತ್ತು. ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ ಮತ್ತು ಕೇಬಲ್ ನಿರ್ವಹಣೆಯಲ್ಲಿ ದೊಡ್ಡ ಕಾರ್ಪೋರೇಟ್ ಏಕಸ್ವಾಮ್ಯಕ್ಕೆ ದಾರಿ ಮಾಡಿಕೊಟ್ಟರೆ ಆಗುವ ದುಷ್ಟರಿಣಾಮಗಳು ಗಂಭೀರವಾಗಿರುತ್ತದೆ. ಜನರ ಮನೋಲೋಕವನ್ನು ಹಿಡಿದಿಡುವ, ನಿರ್ಬಂಧಿಸುವ ಕೆಲಸವನ್ನು ಈಗಾಗಲೇ ಮಾಡುತ್ತಿರುವ ದೃಶ್ಯ ಮಾಧ್ಯಮಗಳು ಈ ಚಾಲದ ಮಾಲೀಕರ ಹಿತಾಸಕ್ತಿಗೆ ತಕ್ಕಂತೆ ದುಡಿಯಲಾರಂಭಿಸುತ್ತದೆ.

ಏಕಸ್ವಾಮ್ಯ ಸಾಧಿಸಿದ ಮೇಲೆ ಜನರಿಗೆ ಉಚಿತವಾಗಿ ಚಾನೆಲ್ ನೀಡುವ ಅಗತ್ಯವಿಲ್ಲ. ಎಲ್ಲಕ್ಕೂ ಹಣ ನಿಗದಿ ಮಾಡಿ ಹೆಚ್ಚಿಸುತ್ತಾ ಹೋದರೆ ಸಾಕು. ಮನರಂಜನೆ ಮತ್ತು ಸುದ್ದಿಯೂ ಮಾರುವ ಸರಕಾಗಿರುವಾಗ ಇದೇನು ಮಹಾ ಅಲ್ಲವೇ? ಆ ಧೈರ್ಯದಿಂದಲೇ ಚುನಾವಣೆ 4-5 ತಿಂಗಳಿರುವಾಗಲೇ ಸರ್ಕಾರದ ಕುಮ್ಮಕ್ಕಿನೊಂದಿಗೆ ಕೇಬಲ್ ಚಾನೆಲ್‍ಗಳ ಬೆಲೆಯನ್ನು ವಿಪರೀತವಾಗಿ ಹೆಚ್ಚಿಸಲಾಯಿತು.
ಇದು ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿಯಾದುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....