Homeಕರ್ನಾಟಕವಿಮರ್ಶೆ ಸಾಧ್ಯವಿಲ್ಲದೇ ನಿಂದನೆಗೆ ಮೊರೆ ಹೋದವರದ್ದು ವಿದ್ವತ್ತು ಒಳನೋಟ ಹೇಗಾದೀತು?

ವಿಮರ್ಶೆ ಸಾಧ್ಯವಿಲ್ಲದೇ ನಿಂದನೆಗೆ ಮೊರೆ ಹೋದವರದ್ದು ವಿದ್ವತ್ತು ಒಳನೋಟ ಹೇಗಾದೀತು?

ಮೋದಿ ಅವರು ಮರು ಆಯ್ಕೆಗೊಂಡ ಮಾತ್ರಕ್ಕೆ ಎಲ್ಲವೂ ಇಲ್ಲಿಗೆ ಮುಗಿದು ಹೋಯಿತು, ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕು ಎಂದು ತಾಕೀತು ಮಾಡ ಹೊರಟಿರುವ ನೀವು ದೇಶದ ಧರ್ಮಗ್ರಂಥ ‘ಸಂವಿಧಾನ’ಕ್ಕೆ ನೆತ್ತಿಯೂರಿ ನಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಡಬಹುದಾದ ಸಲಹೆಯಾದರೂ ಏನು

- Advertisement -
- Advertisement -

| ಟೆಲೆಕ್ಸ್ ರವಿಕುಮಾರ್ |

ರೋಹಿತ್ ಚಕ್ರತೀರ್ಥ ಅವರಿಗೆ ನಮಸ್ಕಾರಗಳು
ನಿಮ್ಮ ಲೇಖನ ‘ಮೋದಿ ಬಿರುಗಾಳಿಗೆ ಬೆತ್ತಲಾಗಿದ್ದಾರೆ ಬುದ್ದಿಜೀವಿಗಳು’ ಓದಿದೆ. ಸ್ವಲ್ಪ ನಿರಾಶೆಯಾಯಿತು. ನರೇಂದ್ರ ಮೋದಿ ಅವರ ‘ಮರುವಿಕ್ರಮ’ವನ್ನು ವಿಶ್ಲೇಷಿಸುವಾಗ ಇದಕ್ಕೆ ಕಾರಣವಾದ ಜನಪರ ಯೋಜನೆಗಳು, ರಾಜಕೀಯ ಧೋರಣೆ, ಆಡಳಿತಾತ್ಮಕ ಅಂಶಗಳು ಮತ್ತು ರಾಜಕೀಯ ವಿರೋಧಿಗಳ ಎಲ್ಲಾ ತಂತ್ರ, ಕುತಂತ್ರಗಳನ್ನು ಮೋದಿ ಹೇಗೆಲ್ಲಾ ಹಿಮ್ಮೆಟಿಸಿ ‘ವಿಜಯದ ಪರಾಕ್ರಮ’ ಮೆರೆದರು ಎಂಬುದನ್ನು ವಿಶ್ಲೇಷಣಾತ್ಮಕವಾಗಿ ಬರೆಯಬಹುದೆಂದು ನಿರೀಕ್ಷಿಸಿದ್ದ ನನಗೆ ಖಂಡಿತ ನಿರಾಶೆಯಾಯಿತು.

ನಿಮ್ಮ ‘ವಿದ್ವತ್ತು ಮತ್ತು ಒಳನೋಟ’ ಭಾರತದ ವರ್ತಮಾನದ ರಾಜಕೀಯ ನಾಗಾಲೋಟವನ್ನು ಸೈದ್ಧಾಂತಿಕ ಎದುರಾಳಿಗಳನ್ನು ಹೀಯಾಳಿಸುವಲ್ಲಿ ವ್ಯರ್ಥವಾಗಿ ಹೋಯಿತೇನೋ ಎಂದೆನಿಸುತ್ತಿದೆ. ಈ ಕಾರಣಕ್ಕಾಗಿಯೇ ನನಗೆ ನಿರಾಶೆಯಾಯಿತು ಎಂದು ಮೊದಲೆ ಹೇಳಿದ್ದು. ಮೋದಿ ಅವರ ವಿಜಯಯಾತ್ರೆಯನ್ನು ಜನಾಭಿಪ್ರಾಯಗಳಿಂದ ಕಟ್ಟಿಹಾಕುವಲ್ಲಿ ಅವರ ಸೈದ್ಧಾಂತಿಕ ಮತ್ತು ರಾಜಕೀಯ ಎದುರಾಳಿಗಳು ವಿಫಲರಾಗಿದ್ದಾರೆ ಎಂಬುದನ್ನು ನೀವು ಹೇಳುವುದಕ್ಕಿಂತಲೂ ಮಗತಟ್ಟೆಗಳಲ್ಲಿ ಕಂಡು ಕರಗಿದೆ.

ಆಡಳಿತ ವಿರೋಧಿ ಅಲೆಯನ್ನು ಹುಟ್ಟುಹಾಕುವಲ್ಲಿ ಪ್ರತಿಪಕ್ಷಗಳಾಗಲಿ, ಜನಾಭಿಪ್ರಾಯವನ್ನು ರೂಪಿಸುವಲ್ಲಿ ನೀವು ಗುರುತಿಸಲ್ಪಟ್ಟ ಬುದ್ದಿಜೀವಿಗಳಾಗಲಿ ವಿಫಲರಾಗಿದ್ದಾರೆ ನಿಜ. ಬಹುಶಃ ನಾನು ತಿಳಿದಂತೆ ಸುಳ್ಳು ಕಲೆ ಇವರಿಗೆ ಗೊತ್ತಿಲ್ಲದ ಕಾರಣ ಈ ಹಿನ್ನಡೆ ಅನುಭವಿಸಬೇಕಾಗಿ ನಿಮ್ಮ ನುಡಿ ನಾಲಿಗೆಗೆ ಈಡಾಗಬೇಕಾಗಿ ಬಂದಿದೆ. ನನ್ನ ಪ್ರಕಾರ ನರೇಂದ್ರ ಮೋದಿ ಅವರನ್ನು ಬೆತ್ತಲು (ವಿಷಯಾಧಾರಿತವಾಗಿ) ಮಾಡುವಲ್ಲಿ ಈ ನಾಡಿನ ಬುದ್ದಿಜೀವಿಗಳಿಗೆ ಸಾಧ್ಯವೆ ಆಗಲಿಲ್ಲ. ಇದೆಲ್ಲವನ್ನೂ ಮೆಟ್ಟಿ ಮೋದಿ ವಿಜಯಸಾಮ್ರಾಟರಾಗಿದ್ದು ಹೇಗೆ ಎಂಬುದನ್ನು ತಿಳಿಯಲು ನನಗಿನ್ನೂ ಕುತೂಹಲವಿದೆ.

ಮೋದಿ ಅವರನ್ನು ಸೈದ್ದಾಂತಿಕ ಕಾರಣಕ್ಕೆ, ಆಡಳಿತ ಧೋರಣೆ ಕಾರಣಕ್ಕೆ ವಿರೋಧಿಸಿದವರನ್ನು ಗುರಿಯಾಗಿಸಿಕೊಂಡ ನಿಮ್ಮ ಬರಹ ಒಂದು ಸೀಮಿತ ಚೌಕಟ್ಟಿನಲ್ಲಿ ನರಳುವಂತಿದೆ. ಮೋದಿ ಅವರು ಗೆದ್ದಾಗಿದೆ ನಿಜ, ಜನಮತವನ್ನು ಪ್ರಜಾಪ್ರಭುತ್ವ ಒಪ್ಪುವ ಎಲ್ಲರೂ ಗೌರವಿಸಲೇಬೇಕು. ಆದರೆ ಅವರ ಗೆಲುವನ್ನು ಇತರರ ಸೋಲಿಗೆ ಹೋಲಿಸುವಾಗ ಒಂದು ಘನತೆಯ ಸಂವೇದನೆ ಇಲ್ಲದೇ ಹೋದರೆ ಅದೊಂದು ‘ಅಸಾದಿಯ ಮಾರಿ ಬೈಗುಳ’ವಾಗಿ ರಂಜಿಸಬಹುದಷ್ಟೇ. ನಿಮ್ಮ ಈ ಲೇಖನ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಅವುಗಳಿಗೆ ತಾವು ಉತ್ತರಿಸಿದಲ್ಲಿ ನಾನು ಸೇರಿದಂತೆ ಈ ನಾಡಿನ ಬಹುತೇಕರು ಗೌರವಿಸುವ ಬುದ್ದಿಜೀವಿಗಳ, ಸಾಹಿತ್ಯ-ಸಾಂಸ್ಕೃತಿಕ ವಲಯದ ಪ್ರತಿನಿಧಿಗಳ ಕುರಿತಾದ ನನ್ನ ಅಭಿಪ್ರಾಯವನ್ನು ಮರು ವಿಮರ್ಶೆ ಮಾಡಿಕೊಳ್ಳಲು ಸಹಕಾರಿಯಾಗಬಹುದು.

ಹೆಚ್.ಎಸ್ ದೊರೆಸ್ವಾಮಿ ಅವರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು, ಗಾಂಧಿವಾದದ ಕೊಂಡಿಯಂತೆ ಗೌರವಿಸುತ್ತಾ ಬರಲಾಗಿದೆ. ಇದು ನಿಜವೂ ಹೌದು. ಅವರನ್ನು ‘ಗಾಂಧಿವಾದಿ’ ಎಂಬ ಕಾರಣಕ್ಕೆ ನೀವು ಹಿರಿಯಜೀವದ ಹೋರಾಟವನ್ನು ಲೇವಡಿ ಮಾಡಿವಷ್ಟು ಅಸಹನೆಗೆ ನಿಮ್ಮನ್ನು ಒಡ್ಡಿಕೊಳ್ಳಲು ಹೇಗೆ ಸಾಧ್ಯವಾಯಿತು? ಗಿರೀಶ್ ಕಾರ್ನಾಡ್, ಚಂಪಾ, ಮಹಮ್ಮದ್ ಕುಂಞ, ಕುಂ.ವಿ, ಎಸ್.ಜಿ.ಸಿದ್ದರಾಮಯ್ಯ, ಕೆ.ಮರುಳಸಿದ್ದಪ್ಪ. ಹೆಚ್.ಎಸ್.ಶಿವಪ್ರಕಾಶ್, ರಾಜೇಂದ್ರ ಚೆನ್ನಿ, ವಿವೇಕ್ ಶಾನುಭಾಗ ಅವರನ್ನೆಲ್ಲಾ ನೀವೆ ನಿಮ್ಮ ಲೇಖನದಲ್ಲಿ ‘ಪ್ರಗತಿಪರಜೀವಪರ ಸಾಕ್ಷಿ ಪ್ರಜ್ಞೆ’ಗಳು ಎಂದು ಗುರುತಿಸಿದ್ದೀರ. ಹೀಗಿರುವಾಗ ಅವರೆಲ್ಲಾ ಸೈದ್ಧಾಂತಿಕ ನೆಲಗಟ್ಟಿನಲ್ಲಿ ಮೋದಿ ಅವರನ್ನು ವಿರೋಧಿಸಿದ ಮಾತ್ರಕ್ಕೆ ನಿಮ್ಮ ಲೇವಡಿ ಸ್ತುತಿಗೆ ಈಡಾಗಿದ್ದು ಮಾತ್ರ ಸೋಜಿಗದ ಸಂಗತಿ.

‘ಒಂದಾನೊಂದು ಕಾಲವಿತ್ತು. ವಿದ್ಯಾರ್ಥಿಗಳಾಗಿದ್ದ ನಾವೆಲ್ಲ ಶಾಲೆ-ಕಾಲೇಜುಗಳ ಭಾಷಾಪಠ್ಯದಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಪ್ರಶಸ್ತಿ ಸಿಕ್ಕಿದೆ ಎಂಬ ಲೆಕ್ಕದ ಮೇಲೆ ಸಾಹಿತಿಗಳ ಮೌಲ್ಯವನ್ನು ಮುಗ್ಧರಾಗಿ ಅಳೆಯುತ್ತಿದ್ದೆವು. ಕುಂವೀ, ಚಂಪಾ, ಬರಗೂರು, ಕಾರ್ನಾಡ ಎಂಬೆಲ್ಲ ಪ್ರಭೃತಿಗಳನ್ನು ನೋಡಿದರೆ ಆಹಾ ಅವರದದೆಂಥ ಉನ್ನತ ವ್ಯಕ್ತಿತ್ವ ಎಂದು ಮನಸ್ಸು ತಲೆಬಾಗುತ್ತಿತ್ತು. ಅವರು ಬರೆದದ್ದೆಲ್ಲ ಘನವಾದದ್ದೇ ಇರಬೇಕು, ಅವರ ಕತೆ-ಕವಿತೆ-ಕಾದಂಬರಿ-ನಾಟಕಗಳಲ್ಲಿ ಜೀವನದ ಪರಮ ರಹಸ್ಯಗಳೆಲ್ಲ ಅಡಗಿರಬೇಕು ಎಂದು ನಾವು ಭಾವಿಸಿದ್ದೆವು.’
ಎಂದು ಬರೆಯುವ ನಿಮ್ಮ ಗತ ನಂಬಿಕೆ ನಿಮ್ಮ ಹೊರತಾದ ಜನಸಮುದಾಯದಲ್ಲಿ ಈಗಲೂ ಸತ್ತಿಲ್ಲ. ಬಹುಶಃ ನಿಮ್ಮ ಜ್ಞಾನದ ಪರಿಧಿಯಲ್ಲಿ ಈ ಎಲ್ಲರನ್ನೂ ವಿಮರ್ಶೆಗೊಳಿಸಿದರೆ ತಪ್ಪೇನಿಲ್ಲ. ಇಲ್ಲಿ ಯಾರು ಪ್ರಶ್ನಾತೀತರಲ್ಲ. ಎಲ್ಲರೂ ವಿಮರ್ಶೆಗೆ ಒಳಪಟ್ಟು ಸೋಸಿ ಶುದ್ದರಾಗಬೇಕಾಗಿದೆ. ಆ ನಿಟ್ಟಿನಲ್ಲಿ ತಮ್ಮ ವಾದ, ವಿಚಾರಮಂಡನೆಯನ್ನು ಸ್ವಾಗತಿಸುತ್ತೇನೆ. ಆದರೆ ನೀವು ಇಲ್ಲಿ ಅವರ ವಿದ್ವತ್ತು, ಸಿದ್ಧಾಂತ ಪ್ರತಿಪಾದನೆಯಲ್ಲಿರಬಹುದಾದ ಲೋಪಗಳನ್ನು ಬಯಲು ಮಾಡದೆ ಕೇವಲ ನಿಂದನಾ ರೂಪದಲ್ಲಿ ಬೆತ್ತಲಾಗಿದ್ದಾರೆ ಎಂದು ಲೇವಡಿ ಮಾಡ ಹೊರಟಿರುವುದು ಕ್ಷುಲ್ಲಕ ತಿವಿತವಾಗಬಹುದು ಅಷ್ಟೆ. ಅದೊಂದು ಮೋದಿ ಗೆಲುವಿನ ವಿಶ್ಲೇಷಣೆ ಆಗಲಾರದು.

“ಪ್ರತಿಭಾ ನಂದಕುಮಾರ್, ಬಿ.ಟಿ. ಲಲಿತಾ ನಾಯಕ್, ಮೊಗಳ್ಳಿ ಗಣೇಶ, ಪುರುಷೋತ್ತಮ ಬಿಳಿಮಲೆ, ಜಿ. ರಾಜಶೇಖರ ಮೊದಲಾದವರೆಲ್ಲ ಆಗಿನ ಕಾಲಕ್ಕೆ ಪ್ರಶ್ನಾತೀತ ಸಾಹಿತಿಗಳು! ಇವರು ಬರೆದದ್ದನ್ನು ಕಣ್ಣಿಗೊತ್ತಿಕೊಂಡು ದೇವರ ಮನೆಯಲ್ಲಿಟ್ಟು ಪೂಜಿಸುವ ದೊಡ್ಡ ಓದುಗ ವರ್ಗವೇ ಇತ್ತು. ಇಷ್ಟಕ್ಕೂ ಇವರೆಲ್ಲ ಬರೆಯುತ್ತಿದ್ದದ್ದು ಏನಂತೀರಿ? ಕರುಳು ಕಿವುಚುವಂಥ ಬಡತನ, ಅನಕ್ಷರತೆ, ಅಸಮಾನತೆಯ ಕಣ್ಣೀರ ಕತೆಗಳು. ಹೆಣ್ಣಿನ ಮೇಲೆ ಪುರೋಹಿತಶಾಹಿಗಳು, ಬಡವರ ಮೇಲೆ ಬಂಡವಾಳಶಾಹಿಗಳು ಮಾಡುತ್ತಿದ್ದ ಕರ್ಣಕಠೋರ ಅತ್ಯಾಚಾರದ ಹಸಿಬಿಸಿ ವಿವರಗಳಿದ್ದ ಕಾವ್ಯಗಳು. ಈ ಬುದ್ಧಿವಂತರು ಬರೆದದ್ದನ್ನಷ್ಟೇ ಓದಿ ಬೆಳೆದ ನಮ್ಮಂಥ ತಿಳಿಮಿದುಳುಗಳಿಗೆ ಜಗತ್ತೆಲ್ಲ ಹೀಗೇ ಇದೆ; ಜಗತ್ತಲ್ಲಿ ಅನ್ಯಾಯ-ಅಸಮಾನತೆ ತಾಂಡವವಾಡುತ್ತಿದೆ; ಸಮಾಜದಲ್ಲಿ ಒಂದು ವರ್ಗ ಇನ್ನೊಂದು ವರ್ಗವನ್ನು ನಿತ್ಯನಿರಂತರವಾಗಿ ತುಳಿಯುತ್ತಲೇ ಇದೆ; ಹಿಂದೂ ಧರ್ಮದಲ್ಲಿರುವಷ್ಟು ಕಂದಾಚಾರ ಕಟ್ಟುಪಾಡು ಶೋಷಣೆ ಜಗತ್ತಿನ ಬೇರಾವ ಧರ್ಮ-ಜಾತಿಗಳಲ್ಲಿಲ್ಲ; ಸಮಾಜದ ಗಂಡಸರೆಲ್ಲರೂ ಸ್ತ್ರೀಯನ್ನು ಕಾಮದ ಕಣ್ಣಿಂದ ನೋಡುವುದಕ್ಕೆಂದೇ ಹುಟ್ಟಿಬಂದ ರಾಕ್ಷಸರು – ಮುಂತಾದ ಭ್ರಮೆಗಳಿದ್ದವು.

ನಾವು ಓದುತ್ತಿದ್ದ ಪ್ರಜಾವಾಣಿಯಂಥ ಪತ್ರಿಕೆಗಳು ಕೂಡ ಅದೇ ಅಭಿಪ್ರಾಯವನ್ನು ಗಟ್ಟಿ ಮಾಡುವಂತಿದ್ದವು. ಅಲ್ಲಿನ ಭಾನುವಾರದ ಪುರವಣಿಗಳಲ್ಲಿ ಕೂಡ ಮತ್ತೆ ಇದೇ ಸಾಕ್ಷಿಪ್ರಜ್ಞೆಗಳೇ ಬರೆಯುತ್ತಿದ್ದುದರಿಂದ ಜಗತ್ತಿಗಿನ್ನೊಂದು ಆಯಾಮವಿದೆ ಎಂಬುದನ್ನು ಯೋಚಿಸಲು ಅವಕಾಶವೇ ಇರಲಿಲ್ಲ’ ಇದು ನೀವೇ ಬರೆದ ನಿಮ್ಮ ಅಭಿಪ್ರಾಯ. ಇದರಲ್ಲಿ ಯಾವುದು ಬದಲಾಗಿದೆ ನೋಡಿ. ಇಂದಿಗೂ ಹೆಣ್ಣಿನ ಮೇಲೆ ಗಂಡು ಜೀವಿಯ ಅಟ್ಟಹಾಸ ನಿಂತಿಲ್ಲ. ಕಂದಾಚಾರ- ದಲಿತರ ಮೇಲಿನ ದೌರ್ಜನ್ಯ ಕೊನೆಗೊಂಡಿಲ್ಲ. ಜಾತಿ, ಧರ್ಮದ ಹೆಸರಿನಲ್ಲಿ ಮನುಷ್ಯರ ನಡುವೆ ಗೋಡೆ ಕಟ್ಟಿ ರಕ್ತಪಾತ ನಡೆಸುವುದು ಇನ್ನಷ್ಟು ಮುಂದುವರೆದಿದೆ ಹೀಗಿರುವಾಗ ಯಾವುದು ಬದಲಾಗಿದೆ, ಸುಖೀ ಸಮಾಜವೊಂದು ನಿರ್ಮಾಣವಾಗಿದ್ದಾದರು ಎಲ್ಲಿ ಎಂಬುದನ್ನು ವಿವರಿಸಿದರೆ ತಿಳುವಳಿಕೆಯನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗಬಹುದು.

“ಸಂಕ್ರಾಂತಿ ನಾಟಕದಲ್ಲಿ ಕೆಳಜಾತಿಯ ಹುಡುಗನಿಗೆ ಬ್ರಾಹ್ಮಣರ ಹುಡುಗಿಯಿಂದ ಮೋಸವಾಗುವ ಸಾಧ್ಯತೆ ಇರುತ್ತದೆಯೇ ಹೊರತು ಬ್ರಾಹ್ಮಣರ ಹುಡುಗಿಗೆ ಕೆಳಜಾತಿಯ ಹುಡುಗ ಮೋಸ ಮಾಡುವ ಸಂದರ್ಭ ಕಾಣಿಸಿಕೊಳ್ಳಲು ಸಾಧ್ಯವೇ ಇಲ್ಲ! ಯಾಕೆಂದರೆ ಈ ಸಾಹಿತ್ಯ ಕೃತಿಗಳೆಲ್ಲವೂ ಒಂದು ಅಜೆಂಡಾ ಇಟ್ಟುಕೊಂಡೇ ಹೊರಡುತ್ತವೆ.” ಎಂದು ಅದರೊಳಗಿನ ‘ತಾಕಲಾಟ’, ‘ಅಜೆಂಡಾ’ ವನ್ನು ಗುರುತಿಸುವ ನೀವು ಸಮಾಜದಲ್ಲಿನ ಶತ ಶತಮಾನಗಳ ಕಾಲದಿಂದಲೂ ಈ ಜಾತಿ ತರಮದ ಸೃಷ್ಟಿಕರ್ತರು ಹೊಣೆಗಾರರು ಯಾರು ಎಂಬುದನ್ನು ಯಾಕೆ ಜಗತ್ತಿಗೆ ಸಾರಬಾರದು? ಸಾಮಾಜಿಕ ಜಾಲತಾಣದ ಪರಿಣಾಮ ಸುಳ್ಳುಗಳು ದೇಶವನ್ನು ಆಳುತ್ತಿವೆ. ಸತ್ಯ ಮತ್ತು ಸುಳ್ಳಿನ ನಡುವಿನ ವ್ಯತ್ಯಾಸ ತಿಳಿದುಕೊಳ್ಳುವ ಹೊತ್ತಿಗೆ ಸುಳ್ಳು ಮೇಲುಗೈ ಸಾಧಿಸಿ ಹೊರಟಿರುತ್ತದೆ. ಈಗ ಆಗಿರುವುದು ಇದೆ. ಈಗ ಸಾಹಿತಿಗಳು, ಪತ್ರಕರ್ತರು, ಬುದ್ದಿಜೀವಿಗಳು ಈಗ ನಿಜವಾದ ಮೋದಿ ವಿರೋಧಿಗಳು ಎಂಬ ಷರಾ ಬರೆದಿಟ್ಟು ನಿಂದನಾ ತಿರುಗಣಿಯಲ್ಲಿ ತಿರುವಿದ್ದೀರ.

ಇದನ್ನು ಓದಿ: ಎಮರ್ಜೆನ್ಸಿ ಭಟ್ಟನ ದುಷ್ಟಾಯಣ

ಮೋದಿ ಅವರು ಮರು ಆಯ್ಕೆಗೊಂಡ ಮಾತ್ರಕ್ಕೆ ಎಲ್ಲವೂ ಇಲ್ಲಿಗೆ ಮುಗಿದು ಹೋಯಿತು, ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕು ಎಂದು ತಾಕೀತು ಮಾಡ ಹೊರಟಿರುವ ನೀವು ದೇಶದ ಧರ್ಮಗ್ರಂಥ ‘ಸಂವಿಧಾನ’ಕ್ಕೆ ನೆತ್ತಿಯೂರಿ ನಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಡಬಹುದಾದ ಸಲಹೆಯಾದರೂ ಏನು ಎಂಬುದನ್ನು ಬರೆದಿದ್ದರೆ ಚೆನ್ನಾಗಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...