Homeಮುಖಪುಟಕಲೆಯಲ್ಲಿ ಅನುರಣನಗೊಂಡ ರೈತ ಪ್ರತಿಭಟನೆ - ಅಪ್ರತಿಮ ಹೋರಾಟಕ್ಕೆ ಸೃಜನಶೀಲತೆಯ ಸ್ಪರ್ಶ

ಕಲೆಯಲ್ಲಿ ಅನುರಣನಗೊಂಡ ರೈತ ಪ್ರತಿಭಟನೆ – ಅಪ್ರತಿಮ ಹೋರಾಟಕ್ಕೆ ಸೃಜನಶೀಲತೆಯ ಸ್ಪರ್ಶ

ಪ್ರತಿಭಟನೆಯ ಕುರಿತಾದ ಸುದ್ದಿಗಳಿಗೆಂದೇ ಮೀಸಲಾದ ’ಟ್ರ್ಯಾಲಿ ನ್ಯೂಸ್’ ಸುದ್ದಿ-ಪತ್ರಿಕೆಯ (ಎರಡು ಭಾಷೆಗಳಲ್ಲಿ ಪ್ರಕಟವಾಗುತ್ತಿರುವ ಬೈ-ವೀಕ್ಲಿ) ಮೊದಲ ಸಂಚಿಕೆ ಪ್ರಕಟವಾಗಿತ್ತು. ಈ ಸಂಚಿಕೆಯ ಮಾಸ್ಟ್‌ಹೆಡ್‌ನಲ್ಲಿ ತಲೆಗೆ ಟರ್ಬಾನ್ ಸುತ್ತಿ, ಧ್ವಜ ಹಿಡಿದ ರೈತನ ಚಿತ್ರಣವಿತ್ತು...

- Advertisement -
- Advertisement -

ರೈತ ಹೋರಾಟದ ಸಾಗರಕ್ಕೆ ಈಗ ಎಲ್ಲ ವಲಯಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ. ಹಲವಾರು ಕಲಾವಿದರು ಈ ಹೋರಾಟಕ್ಕೆ ತಮ್ಮ ಕಲೆಯ ಮೂಲಕ ಚೈತನ್ಯ ತರುತ್ತಿದ್ದಾರೆ. ನಮ್ಮ ಶಿವಮೊಗ್ಗದ ಅರುಣ್‌ಕುಮಾರ್ ಕೂಡ ಇದರಲ್ಲಿ ಒಬ್ಬರು.

ಡಿಸೆಂಬರ್ 18 ರಂದು ದೆಹಲಿ ಗಡಿಗಳಲ್ಲಿ ಮೂರು ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಅಭೂತಪೂರ್ವ ಹೋರಾಟಕ್ಕೆ 23 ದಿನ ತುಂಬಿದಾಗ, ಪ್ರತಿಭಟನೆಯ ಕುರಿತಾದ ಸುದ್ದಿಗಳಿಗೆಂದೇ ಮೀಸಲಾದ ’ಟ್ರ್ಯಾಲಿ ನ್ಯೂಸ್’ ಸುದ್ದಿ-ಪತ್ರಿಕೆಯ (ಎರಡು ಭಾಷೆಗಳಲ್ಲಿ ಪ್ರಕಟವಾಗುತ್ತಿರುವ ಬೈ-ವೀಕ್ಲಿ) ಮೊದಲ ಸಂಚಿಕೆ ಪ್ರಕಟವಾಗಿತ್ತು. ಈ ಸಂಚಿಕೆಯ ಮಾಸ್ಟ್‌ಹೆಡ್‌ನಲ್ಲಿ ತಲೆಗೆ ಟರ್ಬಾನ್ ಸುತ್ತಿ, ಧ್ವಜ ಹಿಡಿದ ರೈತನ ಚಿತ್ರಣವಿತ್ತು.

ಮುಂದಿನ ಸಂಚಿಕೆಗಳಲ್ಲಿ ಹೋರಾಟದ ಸಾಗರಕ್ಕೆ ಸೇರಿದ ವಿವಿಧ ತೊರೆಗಳನ್ನು ಪ್ರತಿನಿಧಿಸುವ ವರ್ಗಗಳನ್ನು ಮಾಸ್ಟ್‌ಹೆಡ್‌ನಲ್ಲಿ ಪ್ರಕಟಿಸುತ್ತ ಬರಲಾಗಿದೆ. ಪ್ರತಿಭಟನೆಯಲ್ಲಿರುವ ಮಹಿಳೆಯರು, ಕೂಲಿಕಾರ್ಮಿಕರನ್ನು ಪ್ರತಿನಿಧಿಸುವ ಕೆಲವು ಕಲಾ ಅಭಿವ್ಯಕ್ತಿಗಳು ಮಾಸ್ಟ್‌ಹೆಡ್‌ಗಳಲ್ಲಿ ಕಾಣಿಸಿಕೊಂಡಿವೆ. ಇತ್ತೀಚಿನ ಸಂಚಿಕೆಯೊಂದರಲ್ಲಿ, ಪೊಲೀಸರ ಜಲಫಿರಂಗಿಯನ್ನು ’ಲಾಕ್’ ಮಾಡಲು ಯುವಕನೊಬ್ಬ ಮಾಡಿದ ಜಿಗಿತವೂ ಇದರಲ್ಲಿ ಕಾಣಿಸಿಕೊಂಡಿದೆ.

ಇದನ್ನೂ ಓದಿ: ರೈತರಿಗಾಗುತ್ತಿರುವ ಅನ್ಯಾಯವನ್ನು ಕೇಳೋರೇ ಇಲ್ಲ – ಡಿ.ಕೆ.ಶಿವಕುಮಾರ್

“ಈ ಕಿಸಾನ್ ಪ್ರತಿಭಟನೆಯ ಧ್ವನಿಯಾಗಿ ಇದನ್ನು ವಿಶ್ವ ದರ್ಜೆಯ ಪತ್ರಿಕೆಯನ್ನಾಗಿ ಪರಿವರ್ತಿಸುವ ಉದ್ದೇಶವಿದೆ. ಮೊದಲ ಸಂಚಿಕೆಯಿಂದಲೂ ಮೊದಲ ಪುಟವನ್ನು ಸೃಜನಶೀಲ ’ಕಲಾಕೃತಿ’ಗೆ ಮೀಸಲಿಡಲಾಗಿದೆ. ಈ ಕೆಚ್ಚೆದೆಯ ಪ್ರತಿಭಟನೆಯ ನೈಜ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಈ ಪ್ರತಿಭಟನೆ ಹೊರಡಿಸುವ ಸಂದೇಶ ಮತ್ತು ಅದರ ಪ್ರಭಾವವನ್ನು ನಾವು ಕಲಾವಿದರು ಅರಿತುಕೊಂಡಿದ್ದೇವೆ” ಎನ್ನುತ್ತಾರೆ ಸುದ್ದಿಪತ್ರದ ಹಿಂದಿನ ಪ್ರಮುಖ ತಂಡದೊಂದಿಗೆ ಕೆಲಸ ಮಾಡುವ ಕಲಾವಿದರಾದ ಸುಮಿರ್ ತಗ್ರಾ ಮತ್ತು ಜಿತನ್ ತುಕ್ರಲ್.

ಪಂಜಾಬ್‌ನ ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದ ಇವರಿಬ್ಬರು, ರೈತರೊಂದಿಗೆ ಕೆಲಸ ಮಾಡುವ ಹಿಮಾಚಲ ಪ್ರದೇಶದ ’ಅಕಾಲ್ ಅಕಾಡೆಮಿ ಬರು ಸಾಹಿಬ್’ನೊಂದಿಗೆ ಸಂಬಂಧ ಹೊಂದಿದ್ದಾರೆ. ಇವರು ಹರಿಯಾಣ ಮತ್ತು ಪಂಜಾಬ್‌ನಾದ್ಯಂತ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದಾರೆ ಮತ್ತು ವಿಶ್ವದಾದ್ಯಂತ ಕೃಷಿ ಬಿಕ್ಕಟ್ಟಿನ ತುರ್ತು ಸಮಸ್ಯೆಗಳನ್ನು ಪ್ರತಿಧ್ವನಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಚಳುವಳಿ ವಿವಿಧ ಹಂತಗಳಲ್ಲಿ ವಿಸ್ತರಿಸುವುದನ್ನು ನಾವು ನೋಡಿದ್ದೇವೆ. “ಚಳುವಳಿಯ ಕಾಳಜಿಗಳನ್ನು ಅರ್ಥ ಮಾಡಿಕೊಂಡು ಸಂಬಂಧಿತ ಪರಿಹಾರಗಳನ್ನು, ಅಂದರೆ ಸೃಜನಶೀಲತೆ ಮತ್ತು ಹೋರಾಟದ ಆಯಾಮಗಳನ್ನು ಬಿಂಬಿಸುವುದು ಮುಖ್ಯ” ಎಂದು ಅವರು ಹೇಳುತ್ತಾರೆ.

ಗುರುಗ್ರಾಮ್ ಮೂಲದ ಈ ಜೋಡಿ ಪ್ರಾರಂಭದಿಂದಲೂ ಸುದ್ದಿಪತ್ರವನ್ನು ವಿನ್ಯಾಸಗೊಳಿಸಿ ಪ್ಯಾಕೇಜಿಂಗ್ ಮಾಡುತ್ತಿದೆ. ಚಿತ್ರಗಳು, ವಿಡಿಯೊಗಳು, ಕವನಗಳು, ವಿವರಣೆಗಳು ಮತ್ತು ಇತರ ಸಂಬಂಧಿತ ವಸ್ತುಗಳನ್ನು ಹಂಚಿಕೊಳ್ಳಲು ಜನರಿಗೆ ಅವಕಾಶ ನೀಡುವ ಪ್ರತಿಭಟನೆಯ ಮುಕ್ತ ಮೂಲ ದಾಖಲೆಯಾದ ಕಿಸಾನ್‌ಏಕ್ತಾ.ಇನ್ ಹಿಂದೆ ಕೂಡ ಈ ಇಬ್ಬರಿದ್ದಾರೆ.

ಇದನ್ನೂ ಓದಿ: ಹಿಂದಿ ಹೇರಿಕೆಗೆ ತೀವ್ರ ವಿರೋಧ: ಹಿಂದಿಗುಲಾಮಗಿರಿಬೇಡ ನ್ಯಾಷನಲ್ ಟ್ರೆಂಡಿಂಗ್‌!

“ಈ ಪ್ರತಿಭಟನೆ ಇತರ ಪ್ರತಿಭಟನೆಗಳಿಗಿಂತ ಭಿನ್ನವಾಗಿದೆ. ಇದರಲ್ಲಿ ಆಳವಾದ ಸಹಾನುಭೂತಿ ಇದೆ. ವಿಭಿನ್ನ ಜಾಥಗಳು (ಗುಂಪುಗಳು) ಇವೆ, ಮತ್ತು ಸ್ತಂಭಗಳ (ಪಿಲ್ಲರ್‌ಗಳು) ಕೆಳಗಿನ ಜಾಗಗಳು ಈಗ ಸಣ್ಣ ಹಳ್ಳಿಗಳಾಗಿ ಹೊರಹೊಮ್ಮಿವೆ. ಭಾಗಿಯಾಗಿರುವ ವೃದ್ಧರ ಸಂಪೂರ್ಣ ಸಮರ್ಪಣಾ ಭಾವ ಮತ್ತು ಲಿಂಗ ಪಾತ್ರಗಳ ಬದಲಾಗುತ್ತಿರುವ ಸ್ವರೂಪಗಳನ್ನೂ ಇಲ್ಲಿ ಕಾಣಬಹುದು. ಕಾನೂನುಗಳು ಜಾರಿಗೆ ಬಂದ ನಂತರ ತಮ್ಮ ಜೀವನವು ಸಂಪೂರ್ಣವಾಗಿ ಬದಲಾಗುತ್ತದೆ ಎಂದು ಆತಂಕಿತರಾಗಿರುವ ಜನರು ಇವರು” ಎಂದು ಈ ಇಬ್ಬರು ಕಲಾವಿದರು ಹೇಳುತ್ತಾರೆ.

2003 ರಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದು, ದಕ್ಷಿಣ ಏಷ್ಯಾದ ಹೆಸರಾಂತ ಸಮಕಾಲೀನ ಕಲಾವಿದರಲ್ಲಿ ಗುರುತಿಸಲ್ಪಟ್ಟ ಈ ಜೋಡಿ ಪಾಪ್-ಕಿಟ್ಷ್ ಕೃತಿಗಳಿಗೆ ಹೆಸರುವಾಸಿಯಾಗಿದೆ. ಗ್ರಾಹಕೀಕರಣದಿಂದ ವಲಸೆಯವರೆಗಿನ ಸಮಸ್ಯೆಗಳ ಮೇಲೆ ಈ ಜೋಡಿ ತಮ್ಮ ಕಲೆಯನ್ನು ಅಭಿವ್ಯಕ್ತಿ ಮಾಡಿದೆ.

ಒಂದು ದಶಕದಿಂದ ಕೃಷಿ ಬಿಕ್ಕಟ್ಟನ್ನು ಹತ್ತಿರದಿಂದ ಗಮನಿಸುತ್ತ ಬಂದ ಇವರು, ಆಗಾಗ್ಗೆ ಪ್ರತಿಭಟನಾ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. “ಇದು ಅತ್ಯಂತ ಏಕಪಕ್ಷೀಯ ಕಾನೂನು. ಇದರಲ್ಲಿ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ, ಕಾರ್ಪೊರೇಟ್ ದಾಸ್ತಾನು, ಅಗತ್ಯ ಸರಕುಗಳಂತಹ ಗಂಭೀರ ವಿಷಯಗಳಿವೆ” ಎಂದು ಅವರು ಹೇಳುತ್ತಾರೆ. ಚಳುವಳಿಯ ಡಾಕ್ಯುಮೆಂಟೇಷನ್ ಮತ್ತು ರೈತರೊಂದಿಗಿನ ಸಂದರ್ಶನಗಳು 2018 ರ ಚಲನಚಿತ್ರ ’ಕಿಸಾನ್ ಮುಕ್ತಿ ಮಾರ್ಚ್’ನ ಎರಡನೇ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿವೆ. ಮೊದಲ ಆವೃತ್ತಿ ಕೂಡ ರೈತರ ಸಮಸ್ಯೆಗಳ ಮೇಲೆ ಕೇಂದ್ರೀಕೃತವಾಗಿತ್ತು. ಸಾಲ ಮನ್ನಾ ಮಾಡುವ ವಿಫಲ ಭರವಸೆಗಳಿಂದ ಹಿಡಿದು ಜಿಎಸ್‌ಟಿಯಿಂದಾಗಿ ಸರಕುಗಳ ಹೆಚ್ಚಿನ ವೆಚ್ಚದವರೆಗಿನ ಸಮಸ್ಯೆಗಳ ಮೇಲೆ ಇದು ಬೆಳಕು ಚೆಲ್ಲಿತ್ತು.

ಶಿವಮೊಗ್ಗದ ಅರುಣ್‌ಕುಮಾರ್…

ಕಲಾವಿದ ಎಚ್.ಜಿ ಅರುಣಕುಮಾರ್ ಸಮಾಜದಲ್ಲಿ ರೈತರು ವಹಿಸುವ ಪಾತ್ರವನ್ನು ಒತ್ತಿಹೇಳಲು ಪುರಾಣಗಳತ್ತ ಮುಖ ಮಾಡಿದ್ದಾರೆ. “ನಾವು ಅನ್ನಪೂರ್ಣಳನ್ನು ಆಹಾರ ಮತ್ತು ಪೋಷಣೆಯ ದೇವತೆಯಾಗಿ ಪೂಜಿಸುವಂತೆಯೇ, ರೈತರು ನಮ್ಮ ಅನ್ನದಾತರು, ಅವರನ್ನು ಆಹಾರ ಪೂರೈಕೆದಾರರು ಎಂದು ಗೌರವಿಸಬೇಕು. ಆಹಾರವು ಮತ್ತೊಂದು ಸರಕಾಗಿ ಮಾರ್ಪಟ್ಟಿದೆ. ನಾವು ಇನ್ನು ಮುಂದೆ ಪ್ರಕೃತಿ ಬಗ್ಗೆ ಕಾಳಜಿ ವಹಿಸುವುದಿಲ್ಲ” ಎಂದು ಸದ್ಯ ಗುರುಗ್ರಾಮ್‌ನಲ್ಲಿರುವ, ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಈ ಕಲಾವಿದ ಹೇಳುತ್ತಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ ಸ್ಪರ್ಧೆ: ಮಮತಾಗೆ ಮತ್ತೊಂದು ಆಘಾತ!

ಇತ್ತೀಚಿನ ವಾರಗಳಲ್ಲಿ, ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟಿಸುತ್ತಿರುವ ಹಲವಾರು ರೈತರೊಂದಿಗೆ ಅವರು ಸಂವಹನ ನಡೆಸಿದ್ದಾರೆ. ಅವರ ಡಿಜಿಟಲ್ ಪೋಸ್ಟರ್‌ನಲ್ಲಿ ಕೃಷಿ ಬಿಕ್ಕಟ್ಟಿನ ಅಂಶಗಳನ್ನು ಒಟ್ಟುಗೂಡಿಸಿ ಹೋರಾಟದ ಮಹತ್ವವನ್ನು ತಿಳಿಸಿದ್ದಾರೆ. “ರೈತರು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಈ ಕೃಷಿ ಸಮಸ್ಯೆಗಳ ಬಗ್ಗೆ ರಾಷ್ಟ್ರವು ಯೋಚಿಸುವ ಸಮಯ ಈಗ ಬಂದಿದೆ. ಈ ಮಸೂದೆ ವಿವಾದಾಸ್ಪದವಾಗಿದೆ” ಎಂದು ಅವರು ಹೇಳುತ್ತಾರೆ.

ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ರೈತರ ಕುಟುಂಬದಲ್ಲಿ ಬೆಳೆದ 52 ವರ್ಷದ ಅರುಣಕುಮಾರ್, ಮನುಷ್ಯ ಮತ್ತು ಪ್ರಕೃತಿಯ ನಡುವೆ ಒಂದು ಕಾಲದಲ್ಲಿ ಇದ್ದ ಸಾಮರಸ್ಯದ ಸಂಬಂಧವನ್ನು ಕುರಿತು ಮಾತನಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಆ ಸಾಮರಸ್ಯ ಹೇಗೆ ನಾಶವಾಗುತ್ತಿದೆ ಎಂಬುದನ್ನು ವಿವರಿಸುತ್ತಾರೆ. ತಳೀಯವಾಗಿ ಮಾರ್ಪಡಿಸಿದ ಬೀಜಗಳ ಪ್ರಭಾವದಿಂದ ಕೃಷಿ ಏಕಸ್ವಾಮ್ಯದವರೆಗೆ; ಅರುಣ್ ತಮ್ಮ ಕೃತಿಯಲ್ಲಿ ಸೆರೆ ಹಿಡಿದಿದ್ದಾರೆ.

“ಬಿಕ್ಕಟ್ಟಿನ ರಕ್ಷಕರು” ಎಂಬ ಭಾವಚಿತ್ರಗಳ ಮೂಲಕ ವೈಯಕ್ತಿಕ ಕಥೆಗಳನ್ನು ಅಭಿವ್ಯಕ್ತಿಗೊಳಿಸಿದ್ದಾರೆ. ಪ್ರಸ್ತುತ ಬಿಕ್ಕಟ್ಟಿನಿಂದ ತೊಂದರೆಗೊಳಗಾದ ಸಣ್ಣ-ಪ್ರಮಾಣದ ರೈತರು, ಅರುಣ್ ಅವರ ಕಲೆ-ಕೃತಿಗಳ ಮುಖ್ಯಪಾತ್ರಗಳಾಗಿದ್ದಾರೆ.

ಬಿಹಾರ್‌ನ ಉಮೇಶ್ ಸಿಂಗ್, ಮಹಾರಾಷ್ಟ್ರದ ಶ್ವೇತಾ ಭತ್ತದ- ಮುಂತಾದ ಕಲಾವಿದರು ತಮ್ಮ ಸೃಜನಶೀಲ ಅಭಿವ್ಯಕ್ತಿಗಳ ಮೂಲಕ ರೈತ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.


ಇದನ್ನೂ ಓದಿ: ಯಾವನಾದ್ರು *** ಮಗ ನನ್ನ ಕೇಳಿದ್ದೀರಾ: ರೈತರ ವಿರುದ್ಧ ನಾಲಿಗೆ ಹರಿಯಬಿಟ್ಟ ಮಾಧುಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...