Homeಮುಖಪುಟಕಲೆಯಲ್ಲಿ ಅನುರಣನಗೊಂಡ ರೈತ ಪ್ರತಿಭಟನೆ - ಅಪ್ರತಿಮ ಹೋರಾಟಕ್ಕೆ ಸೃಜನಶೀಲತೆಯ ಸ್ಪರ್ಶ

ಕಲೆಯಲ್ಲಿ ಅನುರಣನಗೊಂಡ ರೈತ ಪ್ರತಿಭಟನೆ – ಅಪ್ರತಿಮ ಹೋರಾಟಕ್ಕೆ ಸೃಜನಶೀಲತೆಯ ಸ್ಪರ್ಶ

ಪ್ರತಿಭಟನೆಯ ಕುರಿತಾದ ಸುದ್ದಿಗಳಿಗೆಂದೇ ಮೀಸಲಾದ ’ಟ್ರ್ಯಾಲಿ ನ್ಯೂಸ್’ ಸುದ್ದಿ-ಪತ್ರಿಕೆಯ (ಎರಡು ಭಾಷೆಗಳಲ್ಲಿ ಪ್ರಕಟವಾಗುತ್ತಿರುವ ಬೈ-ವೀಕ್ಲಿ) ಮೊದಲ ಸಂಚಿಕೆ ಪ್ರಕಟವಾಗಿತ್ತು. ಈ ಸಂಚಿಕೆಯ ಮಾಸ್ಟ್‌ಹೆಡ್‌ನಲ್ಲಿ ತಲೆಗೆ ಟರ್ಬಾನ್ ಸುತ್ತಿ, ಧ್ವಜ ಹಿಡಿದ ರೈತನ ಚಿತ್ರಣವಿತ್ತು...

- Advertisement -
- Advertisement -

ರೈತ ಹೋರಾಟದ ಸಾಗರಕ್ಕೆ ಈಗ ಎಲ್ಲ ವಲಯಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ. ಹಲವಾರು ಕಲಾವಿದರು ಈ ಹೋರಾಟಕ್ಕೆ ತಮ್ಮ ಕಲೆಯ ಮೂಲಕ ಚೈತನ್ಯ ತರುತ್ತಿದ್ದಾರೆ. ನಮ್ಮ ಶಿವಮೊಗ್ಗದ ಅರುಣ್‌ಕುಮಾರ್ ಕೂಡ ಇದರಲ್ಲಿ ಒಬ್ಬರು.

ಡಿಸೆಂಬರ್ 18 ರಂದು ದೆಹಲಿ ಗಡಿಗಳಲ್ಲಿ ಮೂರು ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಅಭೂತಪೂರ್ವ ಹೋರಾಟಕ್ಕೆ 23 ದಿನ ತುಂಬಿದಾಗ, ಪ್ರತಿಭಟನೆಯ ಕುರಿತಾದ ಸುದ್ದಿಗಳಿಗೆಂದೇ ಮೀಸಲಾದ ’ಟ್ರ್ಯಾಲಿ ನ್ಯೂಸ್’ ಸುದ್ದಿ-ಪತ್ರಿಕೆಯ (ಎರಡು ಭಾಷೆಗಳಲ್ಲಿ ಪ್ರಕಟವಾಗುತ್ತಿರುವ ಬೈ-ವೀಕ್ಲಿ) ಮೊದಲ ಸಂಚಿಕೆ ಪ್ರಕಟವಾಗಿತ್ತು. ಈ ಸಂಚಿಕೆಯ ಮಾಸ್ಟ್‌ಹೆಡ್‌ನಲ್ಲಿ ತಲೆಗೆ ಟರ್ಬಾನ್ ಸುತ್ತಿ, ಧ್ವಜ ಹಿಡಿದ ರೈತನ ಚಿತ್ರಣವಿತ್ತು.

ಮುಂದಿನ ಸಂಚಿಕೆಗಳಲ್ಲಿ ಹೋರಾಟದ ಸಾಗರಕ್ಕೆ ಸೇರಿದ ವಿವಿಧ ತೊರೆಗಳನ್ನು ಪ್ರತಿನಿಧಿಸುವ ವರ್ಗಗಳನ್ನು ಮಾಸ್ಟ್‌ಹೆಡ್‌ನಲ್ಲಿ ಪ್ರಕಟಿಸುತ್ತ ಬರಲಾಗಿದೆ. ಪ್ರತಿಭಟನೆಯಲ್ಲಿರುವ ಮಹಿಳೆಯರು, ಕೂಲಿಕಾರ್ಮಿಕರನ್ನು ಪ್ರತಿನಿಧಿಸುವ ಕೆಲವು ಕಲಾ ಅಭಿವ್ಯಕ್ತಿಗಳು ಮಾಸ್ಟ್‌ಹೆಡ್‌ಗಳಲ್ಲಿ ಕಾಣಿಸಿಕೊಂಡಿವೆ. ಇತ್ತೀಚಿನ ಸಂಚಿಕೆಯೊಂದರಲ್ಲಿ, ಪೊಲೀಸರ ಜಲಫಿರಂಗಿಯನ್ನು ’ಲಾಕ್’ ಮಾಡಲು ಯುವಕನೊಬ್ಬ ಮಾಡಿದ ಜಿಗಿತವೂ ಇದರಲ್ಲಿ ಕಾಣಿಸಿಕೊಂಡಿದೆ.

ಇದನ್ನೂ ಓದಿ: ರೈತರಿಗಾಗುತ್ತಿರುವ ಅನ್ಯಾಯವನ್ನು ಕೇಳೋರೇ ಇಲ್ಲ – ಡಿ.ಕೆ.ಶಿವಕುಮಾರ್

“ಈ ಕಿಸಾನ್ ಪ್ರತಿಭಟನೆಯ ಧ್ವನಿಯಾಗಿ ಇದನ್ನು ವಿಶ್ವ ದರ್ಜೆಯ ಪತ್ರಿಕೆಯನ್ನಾಗಿ ಪರಿವರ್ತಿಸುವ ಉದ್ದೇಶವಿದೆ. ಮೊದಲ ಸಂಚಿಕೆಯಿಂದಲೂ ಮೊದಲ ಪುಟವನ್ನು ಸೃಜನಶೀಲ ’ಕಲಾಕೃತಿ’ಗೆ ಮೀಸಲಿಡಲಾಗಿದೆ. ಈ ಕೆಚ್ಚೆದೆಯ ಪ್ರತಿಭಟನೆಯ ನೈಜ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಈ ಪ್ರತಿಭಟನೆ ಹೊರಡಿಸುವ ಸಂದೇಶ ಮತ್ತು ಅದರ ಪ್ರಭಾವವನ್ನು ನಾವು ಕಲಾವಿದರು ಅರಿತುಕೊಂಡಿದ್ದೇವೆ” ಎನ್ನುತ್ತಾರೆ ಸುದ್ದಿಪತ್ರದ ಹಿಂದಿನ ಪ್ರಮುಖ ತಂಡದೊಂದಿಗೆ ಕೆಲಸ ಮಾಡುವ ಕಲಾವಿದರಾದ ಸುಮಿರ್ ತಗ್ರಾ ಮತ್ತು ಜಿತನ್ ತುಕ್ರಲ್.

ಪಂಜಾಬ್‌ನ ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದ ಇವರಿಬ್ಬರು, ರೈತರೊಂದಿಗೆ ಕೆಲಸ ಮಾಡುವ ಹಿಮಾಚಲ ಪ್ರದೇಶದ ’ಅಕಾಲ್ ಅಕಾಡೆಮಿ ಬರು ಸಾಹಿಬ್’ನೊಂದಿಗೆ ಸಂಬಂಧ ಹೊಂದಿದ್ದಾರೆ. ಇವರು ಹರಿಯಾಣ ಮತ್ತು ಪಂಜಾಬ್‌ನಾದ್ಯಂತ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದಾರೆ ಮತ್ತು ವಿಶ್ವದಾದ್ಯಂತ ಕೃಷಿ ಬಿಕ್ಕಟ್ಟಿನ ತುರ್ತು ಸಮಸ್ಯೆಗಳನ್ನು ಪ್ರತಿಧ್ವನಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಚಳುವಳಿ ವಿವಿಧ ಹಂತಗಳಲ್ಲಿ ವಿಸ್ತರಿಸುವುದನ್ನು ನಾವು ನೋಡಿದ್ದೇವೆ. “ಚಳುವಳಿಯ ಕಾಳಜಿಗಳನ್ನು ಅರ್ಥ ಮಾಡಿಕೊಂಡು ಸಂಬಂಧಿತ ಪರಿಹಾರಗಳನ್ನು, ಅಂದರೆ ಸೃಜನಶೀಲತೆ ಮತ್ತು ಹೋರಾಟದ ಆಯಾಮಗಳನ್ನು ಬಿಂಬಿಸುವುದು ಮುಖ್ಯ” ಎಂದು ಅವರು ಹೇಳುತ್ತಾರೆ.

ಗುರುಗ್ರಾಮ್ ಮೂಲದ ಈ ಜೋಡಿ ಪ್ರಾರಂಭದಿಂದಲೂ ಸುದ್ದಿಪತ್ರವನ್ನು ವಿನ್ಯಾಸಗೊಳಿಸಿ ಪ್ಯಾಕೇಜಿಂಗ್ ಮಾಡುತ್ತಿದೆ. ಚಿತ್ರಗಳು, ವಿಡಿಯೊಗಳು, ಕವನಗಳು, ವಿವರಣೆಗಳು ಮತ್ತು ಇತರ ಸಂಬಂಧಿತ ವಸ್ತುಗಳನ್ನು ಹಂಚಿಕೊಳ್ಳಲು ಜನರಿಗೆ ಅವಕಾಶ ನೀಡುವ ಪ್ರತಿಭಟನೆಯ ಮುಕ್ತ ಮೂಲ ದಾಖಲೆಯಾದ ಕಿಸಾನ್‌ಏಕ್ತಾ.ಇನ್ ಹಿಂದೆ ಕೂಡ ಈ ಇಬ್ಬರಿದ್ದಾರೆ.

ಇದನ್ನೂ ಓದಿ: ಹಿಂದಿ ಹೇರಿಕೆಗೆ ತೀವ್ರ ವಿರೋಧ: ಹಿಂದಿಗುಲಾಮಗಿರಿಬೇಡ ನ್ಯಾಷನಲ್ ಟ್ರೆಂಡಿಂಗ್‌!

“ಈ ಪ್ರತಿಭಟನೆ ಇತರ ಪ್ರತಿಭಟನೆಗಳಿಗಿಂತ ಭಿನ್ನವಾಗಿದೆ. ಇದರಲ್ಲಿ ಆಳವಾದ ಸಹಾನುಭೂತಿ ಇದೆ. ವಿಭಿನ್ನ ಜಾಥಗಳು (ಗುಂಪುಗಳು) ಇವೆ, ಮತ್ತು ಸ್ತಂಭಗಳ (ಪಿಲ್ಲರ್‌ಗಳು) ಕೆಳಗಿನ ಜಾಗಗಳು ಈಗ ಸಣ್ಣ ಹಳ್ಳಿಗಳಾಗಿ ಹೊರಹೊಮ್ಮಿವೆ. ಭಾಗಿಯಾಗಿರುವ ವೃದ್ಧರ ಸಂಪೂರ್ಣ ಸಮರ್ಪಣಾ ಭಾವ ಮತ್ತು ಲಿಂಗ ಪಾತ್ರಗಳ ಬದಲಾಗುತ್ತಿರುವ ಸ್ವರೂಪಗಳನ್ನೂ ಇಲ್ಲಿ ಕಾಣಬಹುದು. ಕಾನೂನುಗಳು ಜಾರಿಗೆ ಬಂದ ನಂತರ ತಮ್ಮ ಜೀವನವು ಸಂಪೂರ್ಣವಾಗಿ ಬದಲಾಗುತ್ತದೆ ಎಂದು ಆತಂಕಿತರಾಗಿರುವ ಜನರು ಇವರು” ಎಂದು ಈ ಇಬ್ಬರು ಕಲಾವಿದರು ಹೇಳುತ್ತಾರೆ.

2003 ರಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದು, ದಕ್ಷಿಣ ಏಷ್ಯಾದ ಹೆಸರಾಂತ ಸಮಕಾಲೀನ ಕಲಾವಿದರಲ್ಲಿ ಗುರುತಿಸಲ್ಪಟ್ಟ ಈ ಜೋಡಿ ಪಾಪ್-ಕಿಟ್ಷ್ ಕೃತಿಗಳಿಗೆ ಹೆಸರುವಾಸಿಯಾಗಿದೆ. ಗ್ರಾಹಕೀಕರಣದಿಂದ ವಲಸೆಯವರೆಗಿನ ಸಮಸ್ಯೆಗಳ ಮೇಲೆ ಈ ಜೋಡಿ ತಮ್ಮ ಕಲೆಯನ್ನು ಅಭಿವ್ಯಕ್ತಿ ಮಾಡಿದೆ.

ಒಂದು ದಶಕದಿಂದ ಕೃಷಿ ಬಿಕ್ಕಟ್ಟನ್ನು ಹತ್ತಿರದಿಂದ ಗಮನಿಸುತ್ತ ಬಂದ ಇವರು, ಆಗಾಗ್ಗೆ ಪ್ರತಿಭಟನಾ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. “ಇದು ಅತ್ಯಂತ ಏಕಪಕ್ಷೀಯ ಕಾನೂನು. ಇದರಲ್ಲಿ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ, ಕಾರ್ಪೊರೇಟ್ ದಾಸ್ತಾನು, ಅಗತ್ಯ ಸರಕುಗಳಂತಹ ಗಂಭೀರ ವಿಷಯಗಳಿವೆ” ಎಂದು ಅವರು ಹೇಳುತ್ತಾರೆ. ಚಳುವಳಿಯ ಡಾಕ್ಯುಮೆಂಟೇಷನ್ ಮತ್ತು ರೈತರೊಂದಿಗಿನ ಸಂದರ್ಶನಗಳು 2018 ರ ಚಲನಚಿತ್ರ ’ಕಿಸಾನ್ ಮುಕ್ತಿ ಮಾರ್ಚ್’ನ ಎರಡನೇ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿವೆ. ಮೊದಲ ಆವೃತ್ತಿ ಕೂಡ ರೈತರ ಸಮಸ್ಯೆಗಳ ಮೇಲೆ ಕೇಂದ್ರೀಕೃತವಾಗಿತ್ತು. ಸಾಲ ಮನ್ನಾ ಮಾಡುವ ವಿಫಲ ಭರವಸೆಗಳಿಂದ ಹಿಡಿದು ಜಿಎಸ್‌ಟಿಯಿಂದಾಗಿ ಸರಕುಗಳ ಹೆಚ್ಚಿನ ವೆಚ್ಚದವರೆಗಿನ ಸಮಸ್ಯೆಗಳ ಮೇಲೆ ಇದು ಬೆಳಕು ಚೆಲ್ಲಿತ್ತು.

ಶಿವಮೊಗ್ಗದ ಅರುಣ್‌ಕುಮಾರ್…

ಕಲಾವಿದ ಎಚ್.ಜಿ ಅರುಣಕುಮಾರ್ ಸಮಾಜದಲ್ಲಿ ರೈತರು ವಹಿಸುವ ಪಾತ್ರವನ್ನು ಒತ್ತಿಹೇಳಲು ಪುರಾಣಗಳತ್ತ ಮುಖ ಮಾಡಿದ್ದಾರೆ. “ನಾವು ಅನ್ನಪೂರ್ಣಳನ್ನು ಆಹಾರ ಮತ್ತು ಪೋಷಣೆಯ ದೇವತೆಯಾಗಿ ಪೂಜಿಸುವಂತೆಯೇ, ರೈತರು ನಮ್ಮ ಅನ್ನದಾತರು, ಅವರನ್ನು ಆಹಾರ ಪೂರೈಕೆದಾರರು ಎಂದು ಗೌರವಿಸಬೇಕು. ಆಹಾರವು ಮತ್ತೊಂದು ಸರಕಾಗಿ ಮಾರ್ಪಟ್ಟಿದೆ. ನಾವು ಇನ್ನು ಮುಂದೆ ಪ್ರಕೃತಿ ಬಗ್ಗೆ ಕಾಳಜಿ ವಹಿಸುವುದಿಲ್ಲ” ಎಂದು ಸದ್ಯ ಗುರುಗ್ರಾಮ್‌ನಲ್ಲಿರುವ, ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಈ ಕಲಾವಿದ ಹೇಳುತ್ತಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ ಸ್ಪರ್ಧೆ: ಮಮತಾಗೆ ಮತ್ತೊಂದು ಆಘಾತ!

ಇತ್ತೀಚಿನ ವಾರಗಳಲ್ಲಿ, ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟಿಸುತ್ತಿರುವ ಹಲವಾರು ರೈತರೊಂದಿಗೆ ಅವರು ಸಂವಹನ ನಡೆಸಿದ್ದಾರೆ. ಅವರ ಡಿಜಿಟಲ್ ಪೋಸ್ಟರ್‌ನಲ್ಲಿ ಕೃಷಿ ಬಿಕ್ಕಟ್ಟಿನ ಅಂಶಗಳನ್ನು ಒಟ್ಟುಗೂಡಿಸಿ ಹೋರಾಟದ ಮಹತ್ವವನ್ನು ತಿಳಿಸಿದ್ದಾರೆ. “ರೈತರು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಈ ಕೃಷಿ ಸಮಸ್ಯೆಗಳ ಬಗ್ಗೆ ರಾಷ್ಟ್ರವು ಯೋಚಿಸುವ ಸಮಯ ಈಗ ಬಂದಿದೆ. ಈ ಮಸೂದೆ ವಿವಾದಾಸ್ಪದವಾಗಿದೆ” ಎಂದು ಅವರು ಹೇಳುತ್ತಾರೆ.

ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ರೈತರ ಕುಟುಂಬದಲ್ಲಿ ಬೆಳೆದ 52 ವರ್ಷದ ಅರುಣಕುಮಾರ್, ಮನುಷ್ಯ ಮತ್ತು ಪ್ರಕೃತಿಯ ನಡುವೆ ಒಂದು ಕಾಲದಲ್ಲಿ ಇದ್ದ ಸಾಮರಸ್ಯದ ಸಂಬಂಧವನ್ನು ಕುರಿತು ಮಾತನಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಆ ಸಾಮರಸ್ಯ ಹೇಗೆ ನಾಶವಾಗುತ್ತಿದೆ ಎಂಬುದನ್ನು ವಿವರಿಸುತ್ತಾರೆ. ತಳೀಯವಾಗಿ ಮಾರ್ಪಡಿಸಿದ ಬೀಜಗಳ ಪ್ರಭಾವದಿಂದ ಕೃಷಿ ಏಕಸ್ವಾಮ್ಯದವರೆಗೆ; ಅರುಣ್ ತಮ್ಮ ಕೃತಿಯಲ್ಲಿ ಸೆರೆ ಹಿಡಿದಿದ್ದಾರೆ.

“ಬಿಕ್ಕಟ್ಟಿನ ರಕ್ಷಕರು” ಎಂಬ ಭಾವಚಿತ್ರಗಳ ಮೂಲಕ ವೈಯಕ್ತಿಕ ಕಥೆಗಳನ್ನು ಅಭಿವ್ಯಕ್ತಿಗೊಳಿಸಿದ್ದಾರೆ. ಪ್ರಸ್ತುತ ಬಿಕ್ಕಟ್ಟಿನಿಂದ ತೊಂದರೆಗೊಳಗಾದ ಸಣ್ಣ-ಪ್ರಮಾಣದ ರೈತರು, ಅರುಣ್ ಅವರ ಕಲೆ-ಕೃತಿಗಳ ಮುಖ್ಯಪಾತ್ರಗಳಾಗಿದ್ದಾರೆ.

ಬಿಹಾರ್‌ನ ಉಮೇಶ್ ಸಿಂಗ್, ಮಹಾರಾಷ್ಟ್ರದ ಶ್ವೇತಾ ಭತ್ತದ- ಮುಂತಾದ ಕಲಾವಿದರು ತಮ್ಮ ಸೃಜನಶೀಲ ಅಭಿವ್ಯಕ್ತಿಗಳ ಮೂಲಕ ರೈತ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.


ಇದನ್ನೂ ಓದಿ: ಯಾವನಾದ್ರು *** ಮಗ ನನ್ನ ಕೇಳಿದ್ದೀರಾ: ರೈತರ ವಿರುದ್ಧ ನಾಲಿಗೆ ಹರಿಯಬಿಟ್ಟ ಮಾಧುಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...