Homeಮುಖಪುಟಕಲೆಯಲ್ಲಿ ಅನುರಣನಗೊಂಡ ರೈತ ಪ್ರತಿಭಟನೆ - ಅಪ್ರತಿಮ ಹೋರಾಟಕ್ಕೆ ಸೃಜನಶೀಲತೆಯ ಸ್ಪರ್ಶ

ಕಲೆಯಲ್ಲಿ ಅನುರಣನಗೊಂಡ ರೈತ ಪ್ರತಿಭಟನೆ – ಅಪ್ರತಿಮ ಹೋರಾಟಕ್ಕೆ ಸೃಜನಶೀಲತೆಯ ಸ್ಪರ್ಶ

ಪ್ರತಿಭಟನೆಯ ಕುರಿತಾದ ಸುದ್ದಿಗಳಿಗೆಂದೇ ಮೀಸಲಾದ ’ಟ್ರ್ಯಾಲಿ ನ್ಯೂಸ್’ ಸುದ್ದಿ-ಪತ್ರಿಕೆಯ (ಎರಡು ಭಾಷೆಗಳಲ್ಲಿ ಪ್ರಕಟವಾಗುತ್ತಿರುವ ಬೈ-ವೀಕ್ಲಿ) ಮೊದಲ ಸಂಚಿಕೆ ಪ್ರಕಟವಾಗಿತ್ತು. ಈ ಸಂಚಿಕೆಯ ಮಾಸ್ಟ್‌ಹೆಡ್‌ನಲ್ಲಿ ತಲೆಗೆ ಟರ್ಬಾನ್ ಸುತ್ತಿ, ಧ್ವಜ ಹಿಡಿದ ರೈತನ ಚಿತ್ರಣವಿತ್ತು...

- Advertisement -
- Advertisement -

ರೈತ ಹೋರಾಟದ ಸಾಗರಕ್ಕೆ ಈಗ ಎಲ್ಲ ವಲಯಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ. ಹಲವಾರು ಕಲಾವಿದರು ಈ ಹೋರಾಟಕ್ಕೆ ತಮ್ಮ ಕಲೆಯ ಮೂಲಕ ಚೈತನ್ಯ ತರುತ್ತಿದ್ದಾರೆ. ನಮ್ಮ ಶಿವಮೊಗ್ಗದ ಅರುಣ್‌ಕುಮಾರ್ ಕೂಡ ಇದರಲ್ಲಿ ಒಬ್ಬರು.

ಡಿಸೆಂಬರ್ 18 ರಂದು ದೆಹಲಿ ಗಡಿಗಳಲ್ಲಿ ಮೂರು ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಅಭೂತಪೂರ್ವ ಹೋರಾಟಕ್ಕೆ 23 ದಿನ ತುಂಬಿದಾಗ, ಪ್ರತಿಭಟನೆಯ ಕುರಿತಾದ ಸುದ್ದಿಗಳಿಗೆಂದೇ ಮೀಸಲಾದ ’ಟ್ರ್ಯಾಲಿ ನ್ಯೂಸ್’ ಸುದ್ದಿ-ಪತ್ರಿಕೆಯ (ಎರಡು ಭಾಷೆಗಳಲ್ಲಿ ಪ್ರಕಟವಾಗುತ್ತಿರುವ ಬೈ-ವೀಕ್ಲಿ) ಮೊದಲ ಸಂಚಿಕೆ ಪ್ರಕಟವಾಗಿತ್ತು. ಈ ಸಂಚಿಕೆಯ ಮಾಸ್ಟ್‌ಹೆಡ್‌ನಲ್ಲಿ ತಲೆಗೆ ಟರ್ಬಾನ್ ಸುತ್ತಿ, ಧ್ವಜ ಹಿಡಿದ ರೈತನ ಚಿತ್ರಣವಿತ್ತು.

ಮುಂದಿನ ಸಂಚಿಕೆಗಳಲ್ಲಿ ಹೋರಾಟದ ಸಾಗರಕ್ಕೆ ಸೇರಿದ ವಿವಿಧ ತೊರೆಗಳನ್ನು ಪ್ರತಿನಿಧಿಸುವ ವರ್ಗಗಳನ್ನು ಮಾಸ್ಟ್‌ಹೆಡ್‌ನಲ್ಲಿ ಪ್ರಕಟಿಸುತ್ತ ಬರಲಾಗಿದೆ. ಪ್ರತಿಭಟನೆಯಲ್ಲಿರುವ ಮಹಿಳೆಯರು, ಕೂಲಿಕಾರ್ಮಿಕರನ್ನು ಪ್ರತಿನಿಧಿಸುವ ಕೆಲವು ಕಲಾ ಅಭಿವ್ಯಕ್ತಿಗಳು ಮಾಸ್ಟ್‌ಹೆಡ್‌ಗಳಲ್ಲಿ ಕಾಣಿಸಿಕೊಂಡಿವೆ. ಇತ್ತೀಚಿನ ಸಂಚಿಕೆಯೊಂದರಲ್ಲಿ, ಪೊಲೀಸರ ಜಲಫಿರಂಗಿಯನ್ನು ’ಲಾಕ್’ ಮಾಡಲು ಯುವಕನೊಬ್ಬ ಮಾಡಿದ ಜಿಗಿತವೂ ಇದರಲ್ಲಿ ಕಾಣಿಸಿಕೊಂಡಿದೆ.

ಇದನ್ನೂ ಓದಿ: ರೈತರಿಗಾಗುತ್ತಿರುವ ಅನ್ಯಾಯವನ್ನು ಕೇಳೋರೇ ಇಲ್ಲ – ಡಿ.ಕೆ.ಶಿವಕುಮಾರ್

“ಈ ಕಿಸಾನ್ ಪ್ರತಿಭಟನೆಯ ಧ್ವನಿಯಾಗಿ ಇದನ್ನು ವಿಶ್ವ ದರ್ಜೆಯ ಪತ್ರಿಕೆಯನ್ನಾಗಿ ಪರಿವರ್ತಿಸುವ ಉದ್ದೇಶವಿದೆ. ಮೊದಲ ಸಂಚಿಕೆಯಿಂದಲೂ ಮೊದಲ ಪುಟವನ್ನು ಸೃಜನಶೀಲ ’ಕಲಾಕೃತಿ’ಗೆ ಮೀಸಲಿಡಲಾಗಿದೆ. ಈ ಕೆಚ್ಚೆದೆಯ ಪ್ರತಿಭಟನೆಯ ನೈಜ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಈ ಪ್ರತಿಭಟನೆ ಹೊರಡಿಸುವ ಸಂದೇಶ ಮತ್ತು ಅದರ ಪ್ರಭಾವವನ್ನು ನಾವು ಕಲಾವಿದರು ಅರಿತುಕೊಂಡಿದ್ದೇವೆ” ಎನ್ನುತ್ತಾರೆ ಸುದ್ದಿಪತ್ರದ ಹಿಂದಿನ ಪ್ರಮುಖ ತಂಡದೊಂದಿಗೆ ಕೆಲಸ ಮಾಡುವ ಕಲಾವಿದರಾದ ಸುಮಿರ್ ತಗ್ರಾ ಮತ್ತು ಜಿತನ್ ತುಕ್ರಲ್.

ಪಂಜಾಬ್‌ನ ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದ ಇವರಿಬ್ಬರು, ರೈತರೊಂದಿಗೆ ಕೆಲಸ ಮಾಡುವ ಹಿಮಾಚಲ ಪ್ರದೇಶದ ’ಅಕಾಲ್ ಅಕಾಡೆಮಿ ಬರು ಸಾಹಿಬ್’ನೊಂದಿಗೆ ಸಂಬಂಧ ಹೊಂದಿದ್ದಾರೆ. ಇವರು ಹರಿಯಾಣ ಮತ್ತು ಪಂಜಾಬ್‌ನಾದ್ಯಂತ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದಾರೆ ಮತ್ತು ವಿಶ್ವದಾದ್ಯಂತ ಕೃಷಿ ಬಿಕ್ಕಟ್ಟಿನ ತುರ್ತು ಸಮಸ್ಯೆಗಳನ್ನು ಪ್ರತಿಧ್ವನಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಚಳುವಳಿ ವಿವಿಧ ಹಂತಗಳಲ್ಲಿ ವಿಸ್ತರಿಸುವುದನ್ನು ನಾವು ನೋಡಿದ್ದೇವೆ. “ಚಳುವಳಿಯ ಕಾಳಜಿಗಳನ್ನು ಅರ್ಥ ಮಾಡಿಕೊಂಡು ಸಂಬಂಧಿತ ಪರಿಹಾರಗಳನ್ನು, ಅಂದರೆ ಸೃಜನಶೀಲತೆ ಮತ್ತು ಹೋರಾಟದ ಆಯಾಮಗಳನ್ನು ಬಿಂಬಿಸುವುದು ಮುಖ್ಯ” ಎಂದು ಅವರು ಹೇಳುತ್ತಾರೆ.

ಗುರುಗ್ರಾಮ್ ಮೂಲದ ಈ ಜೋಡಿ ಪ್ರಾರಂಭದಿಂದಲೂ ಸುದ್ದಿಪತ್ರವನ್ನು ವಿನ್ಯಾಸಗೊಳಿಸಿ ಪ್ಯಾಕೇಜಿಂಗ್ ಮಾಡುತ್ತಿದೆ. ಚಿತ್ರಗಳು, ವಿಡಿಯೊಗಳು, ಕವನಗಳು, ವಿವರಣೆಗಳು ಮತ್ತು ಇತರ ಸಂಬಂಧಿತ ವಸ್ತುಗಳನ್ನು ಹಂಚಿಕೊಳ್ಳಲು ಜನರಿಗೆ ಅವಕಾಶ ನೀಡುವ ಪ್ರತಿಭಟನೆಯ ಮುಕ್ತ ಮೂಲ ದಾಖಲೆಯಾದ ಕಿಸಾನ್‌ಏಕ್ತಾ.ಇನ್ ಹಿಂದೆ ಕೂಡ ಈ ಇಬ್ಬರಿದ್ದಾರೆ.

ಇದನ್ನೂ ಓದಿ: ಹಿಂದಿ ಹೇರಿಕೆಗೆ ತೀವ್ರ ವಿರೋಧ: ಹಿಂದಿಗುಲಾಮಗಿರಿಬೇಡ ನ್ಯಾಷನಲ್ ಟ್ರೆಂಡಿಂಗ್‌!

“ಈ ಪ್ರತಿಭಟನೆ ಇತರ ಪ್ರತಿಭಟನೆಗಳಿಗಿಂತ ಭಿನ್ನವಾಗಿದೆ. ಇದರಲ್ಲಿ ಆಳವಾದ ಸಹಾನುಭೂತಿ ಇದೆ. ವಿಭಿನ್ನ ಜಾಥಗಳು (ಗುಂಪುಗಳು) ಇವೆ, ಮತ್ತು ಸ್ತಂಭಗಳ (ಪಿಲ್ಲರ್‌ಗಳು) ಕೆಳಗಿನ ಜಾಗಗಳು ಈಗ ಸಣ್ಣ ಹಳ್ಳಿಗಳಾಗಿ ಹೊರಹೊಮ್ಮಿವೆ. ಭಾಗಿಯಾಗಿರುವ ವೃದ್ಧರ ಸಂಪೂರ್ಣ ಸಮರ್ಪಣಾ ಭಾವ ಮತ್ತು ಲಿಂಗ ಪಾತ್ರಗಳ ಬದಲಾಗುತ್ತಿರುವ ಸ್ವರೂಪಗಳನ್ನೂ ಇಲ್ಲಿ ಕಾಣಬಹುದು. ಕಾನೂನುಗಳು ಜಾರಿಗೆ ಬಂದ ನಂತರ ತಮ್ಮ ಜೀವನವು ಸಂಪೂರ್ಣವಾಗಿ ಬದಲಾಗುತ್ತದೆ ಎಂದು ಆತಂಕಿತರಾಗಿರುವ ಜನರು ಇವರು” ಎಂದು ಈ ಇಬ್ಬರು ಕಲಾವಿದರು ಹೇಳುತ್ತಾರೆ.

2003 ರಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದು, ದಕ್ಷಿಣ ಏಷ್ಯಾದ ಹೆಸರಾಂತ ಸಮಕಾಲೀನ ಕಲಾವಿದರಲ್ಲಿ ಗುರುತಿಸಲ್ಪಟ್ಟ ಈ ಜೋಡಿ ಪಾಪ್-ಕಿಟ್ಷ್ ಕೃತಿಗಳಿಗೆ ಹೆಸರುವಾಸಿಯಾಗಿದೆ. ಗ್ರಾಹಕೀಕರಣದಿಂದ ವಲಸೆಯವರೆಗಿನ ಸಮಸ್ಯೆಗಳ ಮೇಲೆ ಈ ಜೋಡಿ ತಮ್ಮ ಕಲೆಯನ್ನು ಅಭಿವ್ಯಕ್ತಿ ಮಾಡಿದೆ.

ಒಂದು ದಶಕದಿಂದ ಕೃಷಿ ಬಿಕ್ಕಟ್ಟನ್ನು ಹತ್ತಿರದಿಂದ ಗಮನಿಸುತ್ತ ಬಂದ ಇವರು, ಆಗಾಗ್ಗೆ ಪ್ರತಿಭಟನಾ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. “ಇದು ಅತ್ಯಂತ ಏಕಪಕ್ಷೀಯ ಕಾನೂನು. ಇದರಲ್ಲಿ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ, ಕಾರ್ಪೊರೇಟ್ ದಾಸ್ತಾನು, ಅಗತ್ಯ ಸರಕುಗಳಂತಹ ಗಂಭೀರ ವಿಷಯಗಳಿವೆ” ಎಂದು ಅವರು ಹೇಳುತ್ತಾರೆ. ಚಳುವಳಿಯ ಡಾಕ್ಯುಮೆಂಟೇಷನ್ ಮತ್ತು ರೈತರೊಂದಿಗಿನ ಸಂದರ್ಶನಗಳು 2018 ರ ಚಲನಚಿತ್ರ ’ಕಿಸಾನ್ ಮುಕ್ತಿ ಮಾರ್ಚ್’ನ ಎರಡನೇ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿವೆ. ಮೊದಲ ಆವೃತ್ತಿ ಕೂಡ ರೈತರ ಸಮಸ್ಯೆಗಳ ಮೇಲೆ ಕೇಂದ್ರೀಕೃತವಾಗಿತ್ತು. ಸಾಲ ಮನ್ನಾ ಮಾಡುವ ವಿಫಲ ಭರವಸೆಗಳಿಂದ ಹಿಡಿದು ಜಿಎಸ್‌ಟಿಯಿಂದಾಗಿ ಸರಕುಗಳ ಹೆಚ್ಚಿನ ವೆಚ್ಚದವರೆಗಿನ ಸಮಸ್ಯೆಗಳ ಮೇಲೆ ಇದು ಬೆಳಕು ಚೆಲ್ಲಿತ್ತು.

ಶಿವಮೊಗ್ಗದ ಅರುಣ್‌ಕುಮಾರ್…

ಕಲಾವಿದ ಎಚ್.ಜಿ ಅರುಣಕುಮಾರ್ ಸಮಾಜದಲ್ಲಿ ರೈತರು ವಹಿಸುವ ಪಾತ್ರವನ್ನು ಒತ್ತಿಹೇಳಲು ಪುರಾಣಗಳತ್ತ ಮುಖ ಮಾಡಿದ್ದಾರೆ. “ನಾವು ಅನ್ನಪೂರ್ಣಳನ್ನು ಆಹಾರ ಮತ್ತು ಪೋಷಣೆಯ ದೇವತೆಯಾಗಿ ಪೂಜಿಸುವಂತೆಯೇ, ರೈತರು ನಮ್ಮ ಅನ್ನದಾತರು, ಅವರನ್ನು ಆಹಾರ ಪೂರೈಕೆದಾರರು ಎಂದು ಗೌರವಿಸಬೇಕು. ಆಹಾರವು ಮತ್ತೊಂದು ಸರಕಾಗಿ ಮಾರ್ಪಟ್ಟಿದೆ. ನಾವು ಇನ್ನು ಮುಂದೆ ಪ್ರಕೃತಿ ಬಗ್ಗೆ ಕಾಳಜಿ ವಹಿಸುವುದಿಲ್ಲ” ಎಂದು ಸದ್ಯ ಗುರುಗ್ರಾಮ್‌ನಲ್ಲಿರುವ, ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಈ ಕಲಾವಿದ ಹೇಳುತ್ತಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ ಸ್ಪರ್ಧೆ: ಮಮತಾಗೆ ಮತ್ತೊಂದು ಆಘಾತ!

ಇತ್ತೀಚಿನ ವಾರಗಳಲ್ಲಿ, ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟಿಸುತ್ತಿರುವ ಹಲವಾರು ರೈತರೊಂದಿಗೆ ಅವರು ಸಂವಹನ ನಡೆಸಿದ್ದಾರೆ. ಅವರ ಡಿಜಿಟಲ್ ಪೋಸ್ಟರ್‌ನಲ್ಲಿ ಕೃಷಿ ಬಿಕ್ಕಟ್ಟಿನ ಅಂಶಗಳನ್ನು ಒಟ್ಟುಗೂಡಿಸಿ ಹೋರಾಟದ ಮಹತ್ವವನ್ನು ತಿಳಿಸಿದ್ದಾರೆ. “ರೈತರು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಈ ಕೃಷಿ ಸಮಸ್ಯೆಗಳ ಬಗ್ಗೆ ರಾಷ್ಟ್ರವು ಯೋಚಿಸುವ ಸಮಯ ಈಗ ಬಂದಿದೆ. ಈ ಮಸೂದೆ ವಿವಾದಾಸ್ಪದವಾಗಿದೆ” ಎಂದು ಅವರು ಹೇಳುತ್ತಾರೆ.

ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ರೈತರ ಕುಟುಂಬದಲ್ಲಿ ಬೆಳೆದ 52 ವರ್ಷದ ಅರುಣಕುಮಾರ್, ಮನುಷ್ಯ ಮತ್ತು ಪ್ರಕೃತಿಯ ನಡುವೆ ಒಂದು ಕಾಲದಲ್ಲಿ ಇದ್ದ ಸಾಮರಸ್ಯದ ಸಂಬಂಧವನ್ನು ಕುರಿತು ಮಾತನಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಆ ಸಾಮರಸ್ಯ ಹೇಗೆ ನಾಶವಾಗುತ್ತಿದೆ ಎಂಬುದನ್ನು ವಿವರಿಸುತ್ತಾರೆ. ತಳೀಯವಾಗಿ ಮಾರ್ಪಡಿಸಿದ ಬೀಜಗಳ ಪ್ರಭಾವದಿಂದ ಕೃಷಿ ಏಕಸ್ವಾಮ್ಯದವರೆಗೆ; ಅರುಣ್ ತಮ್ಮ ಕೃತಿಯಲ್ಲಿ ಸೆರೆ ಹಿಡಿದಿದ್ದಾರೆ.

“ಬಿಕ್ಕಟ್ಟಿನ ರಕ್ಷಕರು” ಎಂಬ ಭಾವಚಿತ್ರಗಳ ಮೂಲಕ ವೈಯಕ್ತಿಕ ಕಥೆಗಳನ್ನು ಅಭಿವ್ಯಕ್ತಿಗೊಳಿಸಿದ್ದಾರೆ. ಪ್ರಸ್ತುತ ಬಿಕ್ಕಟ್ಟಿನಿಂದ ತೊಂದರೆಗೊಳಗಾದ ಸಣ್ಣ-ಪ್ರಮಾಣದ ರೈತರು, ಅರುಣ್ ಅವರ ಕಲೆ-ಕೃತಿಗಳ ಮುಖ್ಯಪಾತ್ರಗಳಾಗಿದ್ದಾರೆ.

ಬಿಹಾರ್‌ನ ಉಮೇಶ್ ಸಿಂಗ್, ಮಹಾರಾಷ್ಟ್ರದ ಶ್ವೇತಾ ಭತ್ತದ- ಮುಂತಾದ ಕಲಾವಿದರು ತಮ್ಮ ಸೃಜನಶೀಲ ಅಭಿವ್ಯಕ್ತಿಗಳ ಮೂಲಕ ರೈತ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.


ಇದನ್ನೂ ಓದಿ: ಯಾವನಾದ್ರು *** ಮಗ ನನ್ನ ಕೇಳಿದ್ದೀರಾ: ರೈತರ ವಿರುದ್ಧ ನಾಲಿಗೆ ಹರಿಯಬಿಟ್ಟ ಮಾಧುಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...