Homeಮುಖಪುಟರಾಷ್ಟ್ರೀಯತೆಯ ಹೆಸರಿನಲ್ಲಿ ಅನ್ಯಧರ್ಮಗಳ ಜನರ ಮೇಲೆ ಸವಾರಿ

ರಾಷ್ಟ್ರೀಯತೆಯ ಹೆಸರಿನಲ್ಲಿ ಅನ್ಯಧರ್ಮಗಳ ಜನರ ಮೇಲೆ ಸವಾರಿ

ರಾಮಾಯಣ ಮಹಾಭಾರತ ಕಾಲದಲ್ಲಿಯೇ ಅನುಲೋಮ ಪ್ರತಿಲೋಮ ವಿವಾಹ ಪದ್ಧತಿಗಳು, ಸ್ವಯಂವರ ಗಾಂಧರ್ವವಿವಾಹ ನಾನಾ ನಮೂನೆ ವಿವಾಹಗಳು ಹಿಂದೂ ಧರ್ಮಗಳಲ್ಲಿದ್ದವೆಂಬುದನ್ನು ಭಕ್ತರು ಅರಿಯುವ ಅಗತ್ಯವಿದೆ.

- Advertisement -
- Advertisement -

ಜನರಿಂದ ಆರಿಸಿ ಬಂದ ಸರ್ಕಾರವು ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ದೇಶದ ಭದ್ರತೆ, ಪ್ರಜೆಗಳ ಸೌಖ್ಯವನ್ನು ಮೆರೆತು ಏನೇನೋ ತರ್ಕ, ಕುತರ್ಕ, ಚಿಂತನೆಗಳ ಕರ್ಫ್ಯೂವನ್ನು ಪ್ರಜೆಗಳ ಮೇಲೆ ಹೇರಲು ಹವಣಿಸುತ್ತಿದೆ. ದೇಶದ ಆರ್ಥಿಕತೆಯ ಕುಸಿತ ಆಡಳಿತ ವೈಫಲ್ಯ ಮರೆಮಾಚಲು ದಿಢೀರನೆ ಒಂದು ದೇಶ ಒಂದು ಚುನಾವಣೆ ಅನ್ನೋದು. ಒಂದು ದೇಶ ಒಂದೇ ಧರ್ಮ ಒಂದೇ ಭಾಷೆ ಒಂದೇ ತೆರಿಗೆ ಅಂತ ಹೆದರಿಸೋದು ಅವ್ಯಾಹತವಾಗಿ ನಡೆದಿದೆ.

ಇದೆಲ್ಲಾ ದೇಶದ ಐಕ್ಯತೆಯನ್ನು ವಿಘಟನೆಯತ್ತ ಕೊಂಡೊಯುತ್ತದಲ್ಲದೆ ಆಯಾ ಭಾಷಿಕರ ಅಸ್ಮಿತೆಯ ಆತ್ಮಹತ್ಯೆಯಾದಿತೆಂಬುದರ ಬಗ್ಗೆ ಚಿಂತಿಸುತ್ತಿಲ್ಲ. ನಿರ್ದಿಷ್ಟ ಚುನಾವಣೆಯಲ್ಲಿ ಗೆಲ್ಲಲು ಆಯಾ ಸಮುದಾಯಗಳಿಗೆ ನಿಗಮಮಂಡಳಿ ಪ್ರಾಧಿಕಾರಗಳನ್ನು ಮಾಡ ಹೊರಡುವುದೂ ನಡೆಯುತ್ತಿದೆ.

ಸಾಲದ್ದಕ್ಕೆ ಇಲ್ಲದ ’ಲವ್ ಜಿಹಾದ್ ಬಗ್ಗೆ ಪ್ರಸ್ತಾಪಿಸಿ ಅಂತರಧರ್ಮೀಯ ಮದುವೆಗಳನ್ನು ನಿಷೇಧಿಸಲು ಪ್ರಯತ್ನಿಸಲಾಗುತ್ತಿದೆ. ’ಗೋಹತ್ಯೆ ನಿಷೇಧ’ ಜಾರಿಗೆ ತರುತ್ತೇವೆಂದು ಫರಮಾನು ಹೊರಡಿಸುತ್ತಾ ರಾಷ್ಟ್ರೀಯತೆಯ ಹೆಸರಿನಲ್ಲಿ ಅನ್ಯಧರ್ಮಗಳವರ ಮೇಲೆ ಸವಾರಿ ಮಾಡುವ ಚೋದ್ಯವೂ ನಡೆದಿದೆ. ಉತ್ತರ ಪ್ರದೇಶದಲ್ಲಿ ಜಾರಿಯಾಯಿತೆಂದು ’ಲವ್ ಜಿಹಾದ್ ಕಾಯ್ದೆ ತರಲು ಹೊರಟಿರುವ ಸರ್ಕಾರವೂ ಇದು ಅಸಂವಿಧಾನಿಕವೆಂದರಿಯದ್ದೇನಲ್ಲ. ನಿಗದಿಗೊಳಿಸಿದ ವಯೋಮಾನ ದಾಟಿದ ಪ್ರತಿ ಗಂಡು ಹೆಣ್ಣು ಇಷ್ಟಪಟ್ಟವರನ್ನು ವರಿಸುವ ಸ್ವಾತಂತ್ರ್ಯವಿದೆಯೆಂಬ ಕಾನೂನೇ ಇರುವಾಗ ನಿಯಮ ಹೇಗೆ ತರುತ್ತಾರಂತೆ! ಹಿಂದೂ ಹುಡುಗರು ಮುಸ್ಲಿಂ ಹುಡುಗಿಯರನ್ನು, ಮುಸ್ಲಿಂ ಹುಡುಗರು ಹಿಂದೂ ಹುಡುಗಿಯರನ್ನು ಪ್ರೇಮಿಸಿ ವರಿಸಬಾರದೆಂಬ ಯಾವ ಕಾಯ್ದೆ ಇದೆ? ಬಲವಂತ ಮತಾಂತರ ತಪ್ಪಿರಬಹುದು. ಇಷ್ಟಪಟ್ಟ ಧರ್ಮಕ್ಕೆ ಮತಾಂತರವಾಗುವುದು ತಪ್ಪಲ್ಲವೆಂದು ಸಂವಿಧಾನವೇ ಸಾರಿರುವಾಗ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕೇಕೆ? ಮನುಷ್ಯರನ್ನು ಮನುಷ್ಯ ಮಟ್ಟಿಸಿಕೊಳ್ಳದ, ಮಮತೆ ತೋರದ ಧರ್ಮ ಒಂದಿದ್ದರೆ ಅದರಲ್ಲೆ ಉಳಿಯಲು ಜಿಗುಪ್ಸೆಗೊಂಡು ಪ್ರೀತಿ ಸಾಮರಸ್ಯ ಸಮಾನತೆ ತೋರುವ ಯಾವ ಧರ್ಮವಾದರೇನು ಹೋಗುವುದು ಸಹಜವಲ್ಲವೆ. ಕನಿಷ್ಟ ಜೊತೆಗೆ ಕೂತು ಉಣ್ಣದವರ ನಡುವೆ ವಿವಾಹಗಳಾದವೆ? ಹೀಗಾಗಿಯೇ ಕಾಲಕಾಲಕ್ಕೆ ರೂಪಾಂತರಗಳಾಗಿವೆ. ಅಪಾರ ಬುದ್ಧಿಮತ್ತೆ ಇರುವ ಮಾನವತಾವಾದಿ ಅಂಬೇಡ್ಕರ್ ಅಂಥವರೇ ನೋವುಂಡು ಬೌದ್ಧಧರ್ಮಕ್ಕೆ ಮತಾಂತರಗೊಂಡರೆಂದಾಗ ಜಾತಿಯ ಅಟ್ಟಹಾಸ ಅಳೆವ ಮಾಪನವೆಲ್ಲಿಂದ ತರೋದು ಹೇಳಿ.

ಹಿಂದೆಂದಿಗಿಂತಲೂ ಇಂದು ಭಾರತದಲ್ಲಿ ರಾಷ್ಟ್ರೀಯತೆಯನ್ನು ಪ್ರಚೋದಿಸುವ ಕಾರ್ಯ ಹೆಚ್ಚುತ್ತಿದೆ. ಧರ್ಮದ ಹೆಸರಿನಲ್ಲಿ ಮುಸ್ಲಿಂ ದ್ವೇಷವನ್ನು ವ್ಯವಸ್ಥಿತವಾಗಿ ಬಿತ್ತುವುದೂ ಸಹ ’ಜಿಹಾದಿ’ ಅಲ್ಲವೆ? ಜಿಹಾದಿಗೂ ಲವ್‌ಗೂ ಏಕೆ ಸಂಬಂಧ ಕಲ್ಪಿಸುತ್ತಿದ್ದಾರೊ! ’ಜಿಹಾ’ ಅಂದರೆ ಇಷ್ಟೆ ಅನ್ಯಾಯದ ವಿರುದ್ಧ ಹೋರಾಟ, ಮುಸ್ಲಿಂ ಬಾಂಧವರನ್ನು ಎರಡನೇ ದರ್ಜೆ ಪ್ರಜೆಗಳಂತೆ ಕಾಣುತ್ತಾ ಅವರ ಸಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸುವ, ಅವರನ್ನು ಭಯದ ವಾತಾವರಣದಲ್ಲಿ ಬದುಕುವಂತೆ ಮಾಡುವ ಪ್ರಯತ್ನಗಳಾಗುತ್ತಿರುವುದು ಜನಸಮಾನ್ಯರಿಂದಲ್ಲ. ಆಳುವ ಪ್ರಭುತ್ವದಿಂದಲೇ ಎಂದಾಗ ಯಾರ ಬಳಿ ದೂರುವುದು? ಮುಸ್ಲಿಂ ಹುಡುಗರು ಮಾತ್ರವೇ ಪ್ರೀತಿಸಿ ಮದುವೆಯಾಗಿಯೋ, ಆಗದೆಯೋ ಮೋಸ ಮಾಡುತ್ತಿದ್ದಾರೆಯೆ? ಹಿಂದೂಗಳಲ್ಲಿಯೂ ಅದೆಷ್ಟು ಅಂತರ್ಜಾತಿ ವಿವಾಹಗಳು ವಿಫಲವಾಗಿಲ್ಲ ಹೇಳಿ. ಸನಾತನವ್ಯಾಧಿಗಳಿಂದಾಗಿ ಮರ್ಯಾದಾ ಹತ್ಯೆಗಳು ನಡೆಯುತ್ತಿಲ್ಲವೆ.

ಯಾವನೋ ಮುಸಲ್ಮಾನನೊಬ್ಬ ಹಿಂದೂ ಹೆಣ್ಣೊಬ್ಬಳಿಗೆ ಮೋಸ ಮಾಡಿದನೆಂದಾದರೆ ಅವನನ್ನು ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸದೆ, ಲವ್ ಜಿಹಾದಿ ನಿಷೇಧ ಕಾಯ್ದೆಗೆ ಮುಂದಾಗೋದು ನೆಗಡಿಯಾಯಿತೆಂದು ಮೂಗು ಕತ್ತರಿಸಿಕೊಂಡಂತೆ. ಇದನ್ನು ಕಾನೂನಿಂದ ಮಾನ್ಯ ಮಾಡಲು ಸಾಧ್ಯವೇ? ಜಾತಿ ಧರ್ಮದ ಹೊರತಾಗಿಯೂ ಇಬ್ಬರ ನಡುವಿನ ವೈಯಕ್ತಿಕ ಸಂಬಂಧವನ್ನು ಅತಿಕ್ರಮಿಸುವ ಸ್ವಾತಂತ್ರ್ಯ ಯಾರಿಗೂ ಇಲ್ಲವೆಂದು ಅಲಹಾಬಾದ್ ಹೈಕೋರ್ಟ್ ಹೇಳಿದ್ದಾಗಿದೆ. ಇತ್ತೀಚಿಗೆ ಇಂತದ್ದೇ ಪ್ರೇಮ ಪ್ರಕರಣದಲ್ಲಿ ರಮ್ಯ ಮತ್ತು ವಾಜಿದಾಖಾನ್‌ರ ಅಂತರ್ಧರ್ಮಿಯ ವಿವಾದ ವಿಚಾರದಲ್ಲಿ ನ್ಯಾಯಾಮೂರ್ತಿ ಎಸ್. ಸುಜಾತ ಹಾಗೂ ಸಚಿನ್ ಶಂಕರ್ ಮಗದಮ್ ಅವರುಗಳಿದ್ದ ಪೀಠ ಇಂತದ್ದೇ ಅಭಿಪ್ರಾಯ ವ್ಯಕ್ತಪಡಿಸಿದೆ. ಆದರೂ ಸರ್ಕಾರ ಕಾಯ್ದೆ ತರಲು ಹೊರಟಿದೆ. ಇದು ಸ್ವಂತ ಆಲೋಚನೆಯೂ ಅಲ್ಲ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರ ನಕಲು.

ಇನ್ನು ಗೋಹತ್ಯೆ ನಿಷೇಧದ ಮಾತು ಬೇರೆ. ಈ ವಿಷಯದಲ್ಲಾಗಲೇ ಧರ್ಮಧರ್ಮಗಳ ನಡುವೆ, ಜಾತಿಜಾತಿಗಳ ಮಧ್ಯೆ ಕೊಲೆಗಳೇ ಆಗಿವೆಯಾದರೂ ಹಗ್ಗಜಗ್ಗಾಟ ನಿಲ್ಲುವಂತಿಲ್ಲ. ಅನಾದಿಕಾಲದಲ್ಲಿ ಎಲ್ಲರೂ ಒಂದೇ ಜಾತಿಯವರೆ – ಬೇಟೆಯಾಡುವ ಬೇಡರು, ಎಲ್ಲಾ ಮಾಂಸಾಹಾರಿಗಳೇ. ಒಂದು ಕಾಲದಲ್ಲಿ ವೈದಿಕರೂ ಮಾಂಸಾಹಾರಿಗಳೇ ಎಂಬ ವಾದವೂ ಈಗ ಹಳೆಯದು. ನಾವು ಏನನ್ನು ಇಷ್ಟಪಟ್ಟು ಉಣ್ಣುತ್ತೇವೋ ಉಡುತ್ತೇವೋ ಹಾಗೆ ಮತಾಂತರವೋ ವೈಯಕ್ತಿಕ ಹಕ್ಕೆಂದು ಸಂವಿಧಾನದಲ್ಲಿ ಹೇಳಿದ್ದರೂ ಸರ್ಕಾರ ಜನರ ನೆಮ್ಮದಿಗೆ ಮತ್ತೆ ಮತ್ತೆ ಕೊಳ್ಳಿ ಇಡುವ ಯತ್ನ ಮಾಡುತ್ತಲೇ ಇದೆಯೇಕೆ? ಮುಸ್ಲಿಮರಲ್ಲಿ ಮಾತ್ರವೆ ಉಗ್ರರಿದ್ದಾರೆಯೇ? ಹಿಂದೂಗಳಲ್ಲಿ ಉಗ್ರರು, ಮೂಲಭೂತವಾದಿಗಳಿಲ್ಲವೇ? ಭಯೋತ್ಪಾದಕರು ಜಿಹಾದಿಗಳೂ ಮುಸ್ಲಿಮರಲ್ಲಿ ಮಾತ್ರವಿದ್ದಾರೆಂಬುದು ಪೂರ್ವಾಗ್ರಹಪೀಡಿತ ಅರ್ಧ ಸತ್ಯವಷ್ಟೆ.

ಇನ್ನು ಕ್ರಾಸ್ ಮದುವೆಗಳಾಗಿವೆ ಎಂದು ವಿರೋಧ ಪಕ್ಷದ ನಾಯಕರ ಮಾತಿಗೆ ಆಳುವ ರಾಜಕಾರಣಿಗಳು ಮುನಿದು ಹೊಗೆ ಹಾಕಿದ್ದಾರೆ. ಇಂತಹ ಮದುವೆಗಳು 600 ವರ್ಷ ಆಳಿದ ಮೊಘಲರ ಕಾಲದಲ್ಲೂ ನಂತರ 200 ವರ್ಷ ಆಳಿದ ಬ್ರಿಟಿಷರ ಕಾಲದಲ್ಲೂ ನಡೆದಿದೆ. ಇಲ್ಲಿರುವ ಬಹುತೇಕ ಮುಸ್ಲಿಮರು ಕ್ರಿಶ್ಚಿಯನ್ನರೂ ಕನ್ವರ್ಟೆಡ್ ಹಿಂದೂಗಳು. ಇಂತಹ ಕೇಸ್‌ಗಳು ವೇದಗಳ ಕಾಲದಲ್ಲೇ ನಡೆದಿವೆ, ವಸಿಷ್ಠ ಅರುಂಧತಿ, ಜಮದಗ್ನಿ ರೇಣುಕಾರ ವಿವಾಹಗಳಿಗೇನಂತೀರಿ?

ರಾಮಾಯಣ ಮಹಾಭಾರತ ಕಾಲದಲ್ಲಿಯೇ ಅನುಲೋಮ ಪ್ರತಿಲೋಮ ವಿವಾಹ ಪದ್ಧತಿಗಳು, ಸ್ವಯಂವರ ಗಾಂಧರ್ವವಿವಾಹ ನಾನಾ ನಮೂನೆ ವಿವಾಹಗಳು ಹಿಂದೂ ಧರ್ಮಗಳಲ್ಲಿದ್ದವೆಂಬುದನ್ನು ಭಕ್ತರು ಅರಿಯುವ ಅಗತ್ಯವಿದೆ.

ಹೀಗಂದರೆ ತಟ್ಟನೆ ಧರ್ಮದ್ರೋಹಿ, ದೇಶದ್ರೋಹಿಗಳ ಪಟ್ಟ ಕಟ್ಟಲಾಗುತ್ತದೆ. ಅಂಬೇಡ್ಕರ್ ಕೊಟ್ಟ ಪ್ರಶ್ನಿಸುವ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರವೀಗ ನಡೆದಿದೆ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಎಲ್ಲವೂ ಆಳುವವರ ಮುಖವಾಣಿಯಾಗಿದೆ. ವಿರೋಧ ಪಕ್ಷದಂತೆ ಧ್ವನಿ ಎತ್ತಬೇಕಾದ ದವರು ಆಳುವವರಿಗೆ ಮಾರಿಕೊಂಡು ಬಕೆಟ್ ಹಿಡಿದು ವಾಚಾಮಗೋಚರವಾಗಿ ಹೊಗಳಿ ಆಟ್ಟಕ್ಕೇರಿಸುತ್ತಾ ಅಸಹ್ಯ ಹುಟ್ಟಿಸುತ್ತಿದೆ. ಸರ್ಕಾರವಾಗಲಿ ಯಾರೇ ಅಗಲಿ ಕಾನೂನಿಗಿಂತ ಅತೀ ಅಲ್ಲವೆಂದು ತಿಳಿದೂ ಇಂತಹ ಕೆಲಸಕ್ಕೆ ಸರ್ಕಾರ ಕೈ ಹಾಕುವಲ್ಲಿ ಸದುದ್ದೇಶವಂತೂ ಕಾಣುತ್ತಿಲ್ಲ. ಎದೆ ಎಷ್ಟು ಇಂಚಿದೆ ಅನ್ನೋದು ದೊಡ್ಡ ವಿಷಯವಾಗದೆ ಮಿದುಳು ಎಷ್ಟಿದೆ ಎಂಬುದೀಗ ಸಾಬೀತಾಗಬೇಕಿದೆಯಲ್ಲವೆ.

  • ಡಾ. ಬಿ. ಎಲ್ ವೇಣು

ಐತಿಹಾಸಿಕ ಕಾದಂಬರಿಗಳ ಮೂಲಕ ಜನಪ್ರಿಯರಾಗಿರುವ ಲೇಖಕ ಬಿ.ಎಲ್. ವೇಣು. ರಂಗಭೂಮಿ ಹಿನ್ನೆಲೆಯ ಅವರು ಇತಿಹಾಸ ಮತ್ತು ಸಂಶೋಧನೆಗಳಲ್ಲಿ ಪ್ರೀತಿ ಹೊಂದಿದ್ದಾರೆ. 26 ಕಾದಂಬರಿಗಳನ್ನು ಪ್ರಕಟಿಸಿದ್ದು ಈ ಪೈಕಿ 9 ಚಲನಚಿತ್ರಗಳಾಗಿವೆ. ಕುವೆಂಪು ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.


ಇದನ್ನೂ ಓದಿ: ಅಂಬೇಡ್ಕರ್ ಚಿಂತನೆಗಳನ್ನು ತಿರುಚುವ ಕುತ್ಸಿತ ಶಕ್ತಿಗಳು ಮತ್ತು ಅವರ ಆಶಯಗಳನ್ನು ಮಣ್ಣುಗೂಡಿಸುವ ಕಾನೂನುಗಳು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...