Homeಸಿನಿಮಾಕ್ರೀಡೆಐಪಿಎಲ್ :ರಿಯಾನ್ ಪರಾಗ್ ಎಂಬ ತಾರೆಯ ಅದ್ಭುತ ಆಟ

ಐಪಿಎಲ್ :ರಿಯಾನ್ ಪರಾಗ್ ಎಂಬ ತಾರೆಯ ಅದ್ಭುತ ಆಟ

- Advertisement -
- Advertisement -

 

 

| ಅಂತಃಕರಣ |

ಅಸ್ಸಾಮ್‍ನ ಆಲ್‍ರೌಂಡರ್ ಆಗಿರುವ ರಿಯಾನ್ ಪರಾಗ್‍ರ ಹೆಸರು ಐಪಿಎಲ್‍ಗೂ ಮೊದಲು ಕ್ರಿಕೆಟ್ ಜಗತ್ತಿಗೆ ಒಂದು ರೀತಿ ಅಪರಿಚಿತವೇ ಆಗಿತ್ತು. 2018ರ ವಿಶ್ವಕಪ್ ಗೆದ್ದಿದ್ದ ತಂಡದ ಭಾಗವಾಗಿ ರಿಯಾನ್‍ರವರಿದ್ದರೂ ಸಹ ಗಾಯದ ಕಾರಣ ಬೆಂಚ್ ಬಿಸಿ ಮಾಡುತ್ತಲೇ ಕಾಲ ಕಳೆದರು. ಅಸ್ಸಾಂಪರ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ನೀಡಿದ ಉತ್ತಮ ಪ್ರದರ್ಶನದ ಕಾರಣ ರಾಜಸ್ಥಾನರಾಯಲ್ಸ್ ತಂಡ ಇವರನ್ನು ಈ ಬಾರಿಯ ಹರಾಜಿನಲ್ಲಿ ಅವರ ಮೂಲಬೆಲೆ 20ಲಕ್ಷ ನೀಡಿ ಖರೀದಿಸಿತು. ರಾಜಸ್ಥಾನ ತಂಡದ ಪರವೂ ಸಹ ಮೊದಲ ಕೆಲವು ಪಂದ್ಯಗಳಲ್ಲಿ ಅವರಿಗೆ ಆಡಲು ಅವಕಾಶ ಸಿಗಲಿಲ್ಲ.

ತಂಡದ ಆರನೇ ಪಂದ್ಯದಲ್ಲಿ ರಿಯಾನ್ ಪರಾಗ್ ಫಾರ್ಮ್ ಕಳೆದುಕೊಂಡಿದ್ದ ಕೃಷ್ಣಪ್ಪಗೌತಮ್‍ರವರ ಬದಲಿಗೆ ಆಡಲು ತಂಡದ ಪ್ಲೇಯಿಂಗ್ 11ನಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಚೆನ್ನೈಸೂಪರ್‍ಕಿಂಗ್ಸ್ ಎದುರಿನ ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ತಂಡದ ಪರ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಬಂದ ರಿಯಾನ್ ಪರಾಗ್ ಎರಡು ಬೌಂಡರಿಗಳ ಮೂಲಕ 16 ರನ್‍ಗಳಿಸಿ ಶಾರ್ದೂಲ್ ಠಾಕೂರ್‍ರ ಎಸೆತದಲ್ಲಿ ಧೋನಿಯವರಿಗೆ ಕ್ಯಾಚಿತ್ತು ಔಟಾದರು. ವಿಶೇಷವೇನೆಂದರೆ 19 ವರ್ಷಗಳ ಮುಂಚೆ ರಿಯಾನ್ ಪರಾಗ್‍ರ ತಂದೆ ಪರಾಗ್‍ದಾಸ್‍ಕೂಡ ರಣಜಿ ಪಂದ್ಯವೊಂದರಲ್ಲಿ ಧೋನಿಯವರಿಂದ ಸ್ಟಂಪ್ಡ್ ಆಗಿ ಔಟಾಗಿದ್ದರು! ಹೌದು ! 1999-2000ರ ರಣಜಿ ಸೀಸನ್‍ನ ಬಿಹಾರ್ ಹಾಗೂ ಅಸ್ಸಾಮ್ ನಡುವಿನ ಪಂದ್ಯದಲ್ಲಿ ಪರಾಗ್‍ದಾಸ್‍ರನ್ನು ಧೋನಿ ಸ್ಟಂಪ್ಡ್ ಮಾಡಿದ್ದರು. 19 ವರ್ಷಗಳ ನಂತರ ಅವರ ಮಗ ರಿಯಾನ್ ಪರಾಗ್ ಸಹ ಧೋನಿಗೆ ಕ್ಯಾಚಿತ್ತು ಔಟಾಗಿದ್ದು ಒಂದು ಅಚ್ಚರಿಯೇ ಸರಿ.

ಆ ಪಂದ್ಯದಲ್ಲಿ ಓವರ್ ಬೌಲ್ ಮಾಡಿ ಪರಾಗ್ ಕೇವಲ 24 ರನ್ ಬಿಟ್ಟುಕೊಟ್ಟರು. ನಂತರದ ಎರಡು ಪಂದ್ಯಗಳಲ್ಲಿ ಪರಾಗ್‍ರನ್ನು ರಾಜಸ್ಥಾನ ತಂಡ ಆಡಿಸಲಿಲ್ಲ. ಅವರ ಬದಲಿಗೆ ಕ್ರಮವಾಗಿ ಕರ್ನಾಟಕದ ಗೌತಮ್ ಹಾಗೂ ಬಿನ್ನಿ ಒಂದೊಂದು ಪಂದ್ಯದಲ್ಲಿ ಆಡಿದರು. ಎರಡು ಪಂದ್ಯಗಳ ನಂತರ ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದಲ್ಲಿ ಪರಾಗ್ ವಾಪಸಾತಿ ಮಾಡಿದರು. ಆ ಪಂದ್ಯದಲ್ಲಿ ಅವರು ಒಂದು ಅತ್ಯುತ್ತಮ ಇನ್ನಿಂಗ್ಸ್ ಆಡಿದರು. 162ರ ಮೊತ್ತವನ್ನು ಬೆನ್ನತ್ತಿದ್ದ ರಾಜಸ್ಥಾನ 77ಕ್ಕೆ ಮೂರು ಜನ ಟಾಪ್‍ಆರ್ಡರ್ ಬ್ಯಾಟ್ಸ್‍ಮನ್‍ಗಳನ್ನು ಕಳೆದುಕೊಂಡು ಚಿಂತಾಜನಕ ಸ್ಥಿತಿಯಲ್ಲಿತ್ತು. ಆಗ ಕ್ರೀಸ್‍ಗೆ ಬಂದ ಪರಾಗ್ ನಾಯಕ ಸ್ಮಿತ್‍ರೊಂದಿಗೆ ಒಂದು ಅತ್ಯುತ್ತಮ ಜೊತೆಯಾಟವಾಡಿದರು. ಸ್ಮಿತ್ ಹಾಗೂ ಪರಾಗ್ ಆಡಿದ 70 ರನ್‍ಗಳ ಜೊತೆಯಾಟದಲ್ಲಿ ಪರಾಗ್‍ರದ್ದೇ ಸಿಂಹಪಾಲು! ತಮ್ಮ ಎರಡನೇ ಐಪಿಎಲ್ ಇನ್ನಿಂಗ್ಸ್‍ನಲ್ಲಿಯೇ ಮುಂಬೈ ಬೌಲರ್‍ಗಳನ್ನು ಬೆಚ್ಚಿಬೀಳಿಸಿದರು. 29 ಎಸೆತಗಳಲ್ಲಿ 43ರನ್ ಗಳಿಸಿ ಪರಾಗ್ ತಂಡವನ್ನು ಗೆಲುವಿನ ಗಡಿಯವರೆಗೆ ತಂದು ಔಟಾದರು! ಅದರ ಮೂಲಕ ಐಪಿಎಲ್‍ನ ಅತ್ಯಂತ ಕಿರಿಯ ಅರ್ಧಶತಕಧಾರಿಯಾಗುವ ಅವಕಾಶ ತಪ್ಪಿಸಿಕೊಂಡರು. ಪರಾಗ್‍ರ ಸಾಮಥ್ರ್ಯಕ್ಕೆ ಈ ಇನ್ನಿಂಗ್ಸ್ ಒಂದು ಕನ್ನಡಿಯಾಗಿತ್ತು ಅಷ್ಟೇ !ಮುಂದಿನ ಪಂದ್ಯದಲ್ಲಿ ಕೊನೆಗೆ ಬ್ಯಾಟಿಂಗ್‍ಗೆ ಬಂದ ಪರಾಗ್ ಒಂದು ಬೌಂಡರಿ ಹೊಡೆದು ಒಂದು ಉತ್ತಮ ಅಂತ್ಯಕೊಟ್ಟರು.

ಇಲ್ಲಿಯವರೆಗಿನ ಅವರ ಅತ್ಯುತ್ತಮ ಇನ್ನಿಂಗ್ಸ್ ಬಂದಿದ್ದು ನಂತರದ ಪಂದ್ಯದಲ್ಲಿ. ಕೊಲ್ಕತ್ತಾ ನೈಟ್‍ರೈಡರ್ಸ್ ತಂಡ ಮೊದಲು ಬ್ಯಾಟ್ ನಾಯಕ ಕಾರ್ತಿಕ್‍ರ ಅತ್ಯುತ್ತಮ ಆಟದ ಬಲದಿಂದ 175 ರನ್ ಗಳಿಸಿತ್ತು. ಅದಕ್ಕೆ ಉತ್ತರವಾಗಿ ರಾಜಸ್ಥಾನ ಸಹ ಉತ್ತಮ ಆರಂಭ ಹೊಂದಿತು. ರಹಾನೆ ಹಾಗೂ ಸ್ಯಾಮ್ಸನ್ 53 ರನ್‍ಗಳ ಬುನಾದಿಯನ್ನು ರಾಜಸ್ಥಾನಕ್ಕೆ ಹಾಕಿಕೊಟ್ಟರು. ಆದರೆ ನಂತರದ 7ಓವರ್‍ಗಳಲ್ಲಿ ರನ್‍ರೇಟ್ ಕೂಡ ಕಡಿಮೆಯಾಗಿ ರಾಜಸ್ಥಾನ 5ವಿಕೆಟ್ ಕಳೆದುಕೊಂಡಿತು. ಒಂದು ಹಂತದಲ್ಲಿ ಕಷ್ಟವೆನಿಸುತ್ತಿದ್ದ ಚೇಸ್‍ಅನ್ನು ರಿಯಾನ್ ಪರಾಗ್ ಸುಲಭ ಮಾಡಿದರು. ಗೋಪಾಲ್ ಹಾಗೂ ಆರ್ಚರ್‍ರೊಂದಿಗೆ ಜೊತೆಯಾಟಗಳನ್ನು ಮಾಡಿ ಪರಾಗ್ 19ನೇ ಓವರ್‍ನ 5ನೇ ಎಸೆತದಲ್ಲಿ ಹಿಟ್ ವಿಕೆಟ್ ಆಗಿ ಔಟಾದರು. ಈ ಬಾರಿಯೂ ಸಹ ಕೇವಲ 3 ರನ್‍ಗಳಿಂದ ಅರ್ಧಶತಕ ತಪ್ಪಿಸಿಕೊಂಡರು. 31ಎಸೆತಗಳಲ್ಲಿ 47 ರನ್‍ಗಳಿಸಿದ ಪರಾಗ್ ರಾಜಸ್ಥಾನದ ಪಾಲಿಗೆ ಹೀರೋ ಆದರು. ಕೊನೆಯ ಓವರ್‍ನಲ್ಲಿ ಆರ್ಚರ್ ತಂಡವನ್ನು ಗೆಲ್ಲಿಸಿದರು.

ಸಾರಾಂಶದ ಮಾತೆಂದರೆ ರಿಯಾನ್ ಪರಾಗ್ ಭಾರತೀಯ ಕ್ರಿಕೆಟ್‍ನ ಸದ್ಯದ ಅತ್ಯುತ್ತಮ ಉದಯೋನ್ಮುಖ ಆಟಗಾರರಲ್ಲಿ ಒಬ್ಬರು ಎನ್ನುವುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...