Homeಮುಖಪುಟಇದು ಅಸಲಿ ಮತ್ತು ನಕಲಿ ಚೌಕಿದಾರರ ನಡುವಿನ ಕದನ: ಸಂದರ್ಶನದಲ್ಲಿ ತೇಜ್ ಬಹದ್ದೂರ್ ಯಾದವ್

ಇದು ಅಸಲಿ ಮತ್ತು ನಕಲಿ ಚೌಕಿದಾರರ ನಡುವಿನ ಕದನ: ಸಂದರ್ಶನದಲ್ಲಿ ತೇಜ್ ಬಹದ್ದೂರ್ ಯಾದವ್

- Advertisement -
- Advertisement -

ಸೇನೆಯಲ್ಲಿದ್ದುಕೊಂಡು ಬಂಡಾಯದ ಕಹಳೆ ಊದಿದವರು ಸೀಮಾ ಸುರಕ್ಷ ಪಡೆಯ ತೇಜ್ ಬಹಾದ್ದೂರ್ ಯಾದವ್. ಒಂದು ವರ್ಷದ ಹಿಂದೆ ಬಿಎಸ್‍ಎಫ್ ನಲ್ಲಿ ಜವಾನರೊಂದಿಗೆ ಹೇಗೆ ವರ್ತಿಸಲಾಗುತ್ತಿದೆ, ಅವರಿಗೆ ಮೂಲಸೌಕರ್ಯಗಳ ಬಗ್ಗೆ, ಅವರಿಗೆ ನೀಡುವ ಊಟ ವಸತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಪ್ರಶ್ನೆ ಎತ್ತಿದ ನಂತರ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಇಂದು ತೇಜ್ ಬಹಾದ್ದೂರ್ ವಾರಣಾಸಿಯ ಲೋಕಸಭೆ ಕ್ಷೇತ್ರದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ದ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಬಿಸಿ ಹಿಂದಿ ಮಾಡಿದ ಸಂದರ್ಶನದ ಕನ್ನಡ ಅನುವಾದವನ್ನು ಇಲ್ಲಿದೆ.

ಪ್ರಶ್ನೆ – ಚುನಾವಣೆಗೆ ಏಕೆ ನಿಲ್ಲುತಿದ್ದೀರಿ? ನಿಮ್ಮ ಊರು ಹರಿಯಾಣದಲ್ಲಿದೆ, ವಾರಣಾಸಿಯಿಂದ ಏಕೆ ಸ್ಪರ್ಧಿಸುತ್ತಿದ್ದೀರಿ?
ಉತ್ತರ – ಮೊದಲನೇದಾಗಿ, ನಾನೊಬ್ಬ ಭಾರತೀಯ, ಯಾವ ಕ್ಷೇತ್ರದಿಂದಲೂ ಸ್ಪರ್ಧಿಸಬಹುದು. ಹಾಗೂ ವಾರಣಾಸಿ ಒಂದು ಪವಿತ್ರ ಕ್ಷೇತ್ರವಾಗಿದೆ. ಇದಕ್ಕೆ ಒಂದು ದೊಡ್ಡ ಇತಿಹಾಸವಿದೆ. ನಾನು ಕಾಶಿ ವಿಶ್ವನಾಥನ ಆಶಿರ್ವಾದದೊಂದಿಗೆ ಚೌಕಿದಾರ ಎಂದು ಹೇಳಿಕೊಳ್ಳುತ್ತಿರುವ ನಕಲಿ ಚೌಕಿದಾರನನ್ನು ಇಲ್ಲಿಂದ ಓಡಿಸಲು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಈ ನಕಲಿ ಚೌಕಿದಾರರು ಸೇನೆಯನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಸೇನೆಯ ಹೆಸರನ್ನು ಮಣ್ಣುಪಾಲು ಮಾಡಿದ್ದಾರೆ ಈ ನಕಲಿ ಚೌಕಿದಾರರು. ಇಂದು ವಿದೇಶಗಳಲ್ಲೂ ನಮ್ಮ ಸೇನೆಯ ಹೆಸರು ಕೆಡುತ್ತಿದೆ ಇವರಿಂದಾಗಿ. ಎಲ್ಲಾ ಸೈನಿಕರ ನೈತಿಕ ಶಕ್ತಿ ಕುಸಿದುಹೋಗಿದೆ. ದೇಶದ ಎಲ್ಲಾ ಸೈನಿಕರು ಸಿಟ್ಟಿಗೆದ್ದಿದ್ದಾರೆ ಏಕೆಂದರೆ, ಈ ಸರ್ಜಿಕಲ್ ಸ್ಟ್ರೈಕ್, ಏರ್ಸ್ಟ್ರೈಕ್, ಇದೇನು ಮೊದಲ ಬಾರಿ ಮಾಡಿಲ್ಲ. ಇವುಗಳನ್ನು ಸೈನ್ಯ ಮುಂಚೆಯಿಂದಲೂ ಮಾಡುತ್ತಲೇ ಬಂದಿದೆ. ಆದರೆ ಇವುಗಳ ಮೇಲೆ ರಾಜಕಾರಣ ಮಾಡುತ್ತಿರುವುದು ಮೊದಲಬಾರಿ. ಹಾಗಾಗಿ ನಾವು ನಿರ್ಧರಿಸಿದ್ದೇನೆಂದರೆ, ನಮ್ಮ ದೇಶವನ್ನು ಉಳಿಸಬೇಕೆಂದರೆ, ಇಲ್ಲಿಯವರೆಗೆ ಗಡಿಗಳಲ್ಲಿ ನಿಂತು ದೇಶದ ರಕ್ಷಣೆ ಮಾಡುತ್ತ ಬಂದಿದ್ದೇವೆ, ಈಗ ಸಂಸತ್ತಿಗೆ ಹೋಗಿ ನಮ್ಮ ಮಾತುಗಳನ್ನು ಮಂಡಿಸಬೇಕಿದೆ, ಹಾಗಾಗದಿದ್ದರೆ ದೇಶ ಉಳಿಯುವುದಿಲ್ಲ.

ವರದಿಗಾರ- ಗಡಿ ರಕ್ಷಣಾ ಪಡೆಯ ತೇಜ್ ಬಹಾದ್ದೂರ್ ಯಾದವ್ ಅವರಿಗೆ ಇನ್ನಿತರ ಸೈನಿಕರ ಬೆಂಬಲ ದೊರಕಿದೆ. ಅವರೆಲ್ಲ ತೇಜ್ ಬಹಾದ್ದೂರ ಅವರ ಈ ಮಿಷನ್‍ನಲ್ಲಿ ಜೊತೆಯಾಗಿದ್ದಾರೆ; ಅವರ ಪ್ರಚಾರದಲ್ಲಿ ಸಹಕರಿಸುತ್ತಿದ್ದಾರೆ. ಈಗ ಬೆಜೆಪಿ ಮತ್ತು ಪ್ರಧಾನಮಂತ್ರಿ ಹೇಳುತ್ತಿರುವುದೇನೆಂದರೆ, ಇಂದು ಭಾರತದ ಪ್ರಧಾನಿ ಮೋದಿಯವರಿಂದಾಗಿ, ಇತರ ದೇಶಗಳು, ಶತ್ರುದೇಶಗಳು ಹೆದರುತ್ತಿವೆ, ಪ್ರಧಾನಿ ಮೋದಿಯವರಿಂದಾಗಿ ವೈರಿ ದೇಶಗಳ ಕಣ್ಣಲ್ಲಿ ಕಣ್ಣಿಟ್ಟು ನೋಡುವಂತಾಗಿದೆ. ಇದರ ಬಗ್ಗೆ ನೀವೇನು ಹೇಳುತ್ತೀರ?
ತೇಜ್ ಬಹಾದ್ದೂರ್ ಯಾದವ್- ಇಂತಹದ್ದೇನೂ ಆಗಿಲ್ಲ, ಅವರು ಹೇಳಿದ ಹಾಗಿದ್ದರೆ ಫುಲ್ವಾಮಾ ದಾಳಿ ಯಾಕೆ ಆಯಿತು? ಅವರು ಹೇಳಿದ್ದು ನಿಜವಿದ್ದರೆ ಆ ದಾಳಿ ಆಗಬಾರದಿತ್ತು. ಇಂತಹ ದೊಡ್ಡ ಹಲ್ಲೆ ಇದಕ್ಕೂ ಮುಂಚೆ ಆಗಿರಲಿಲ್ಲ. ಇವರದ್ದು ಅಷ್ಟೇ ಭಯ ಇತ್ತಾದರೆ ಫುಲ್ವಾಮಾ ದಾಳಿಯನ್ನೇಕೆ ತಡೆಯಲಿಲ್ಲ? ಒಂದು ವೇಳೆ ಇವರು ಹೇಳಿದ ಹಾಗೆಯೇ ಇದ್ದರೆ ಈ ದಾಳಿ ಒಂದು ಪಿತೂರಿ ಆಗಿರಬಹುದಲ್ಲವೇ? ಇದನ್ನೇನು ಇವರೇ ಮಾಡಿಸಿದ್ದಾ, ಹಾಗೇನಾದರೂ ಇದೆಯಾ?

ವರದಿಗಾರ- ಅಲ್ಲ, ಇಂತಹ ಆರೋಪಗಳು ಬಂದಿವೆ ಆದರೆ ಇವಕ್ಕೆ ಯಾವುದೇ ಸಾಕ್ಷಿಗಳು ಕಂಡಿಲ್ಲ.
ತೇಜ್ ಬಹಾದ್ದೂರ್ ಯಾದವ್ – ಹೌದು ಸಾಕ್ಷಾಧಾರಗಳು ಇಲ್ಲ, ಆದರೆ ಅದರ ತನಿಖೆ ಏಕೆ ಮಾಡಿಸುತ್ತಿಲ್ಲ ಇವರು? ಅಲ್ಲಿಯ ರಾಜ್ಯಪಾಲರೇ ಸ್ವತಃ ಹೇಳುತ್ತಿದ್ದಾರೆ ತಮ್ಮಿಂದ ಲೋಪವಾಗಿದೆ ಎಂದು, ಲೋಪವಾಗಿದ್ದಲ್ಲಿ ದಾಳಿಯ ಮಾಹಿತಿ ಮೊದಲೇ ಸಿಕ್ಕಿತ್ತು ಎಂದು ಹೇಳುತ್ತಾರೆ, ಮಾಹಿತಿ ಸಿಕ್ಕ ಮೇಲೂ ಏನು ಮಾಡಿದರು? ಇದಕ್ಕೆ ಜವಾಬ್ದಾರರಾದ, ಇವರಿಗೆ ತುಂಬಾ ಹತ್ತಿರದವರಾದ ಅಜಿತ್ ದೋವಾಲ್ ಅವರಗೆ ಏಕೆ
ಪ್ರಶ್ನೆ ಕೇಳುತ್ತಿಲ್ಲ? ಮಾಹಿತಿ ಸಿಕ್ಕ ಮೇಲೂ ಇಷ್ಟು ದೊಡ್ಡ ದಾಳಿ ಏಕಾಯಿತು?

ವರದಿಗಾರ- ನಿಮ್ಮ ಪ್ರಚಾರದ ಕರಪತ್ರಗಳಲ್ಲಿ ಚೌಕಿದಾರರ ಬಗ್ಗೆ ಬರೆಯಲಾಗಿದೆ; ಅಸಲಿ ಚೌಕಿದಾರ ಯಾರು, ನಕಲಿ ಚೌಕಿದಾರ್ ಯಾರು ಎನ್ನುವ ಪ್ರಶ್ನೆ ಇದೆ. ಹಾಗಾದರೆ ಅಸಲಿ ಚೌಕಿದಾರ ಯಾರು ಮತ್ತು ನಕಲಿ ಯಾರು?
ತೇಜ್ ಬಹಾದ್ದೂರ್ ಯಾದವ್ – ನೋಡಿ ಇಷ್ಟು ವರ್ಷಗಳ ತನಕ ಗಡಿಗಳ ರಕ್ಷಣೆ ಮಾಡುತ್ತ ಬಂದಿದ್ದೇವೆ, ನಾವು ನಿಜವಾದ ಚೌಕಿದಾರರು. ಅವರು ತಮ್ಮನ್ನು ತಾವು ಚೌಕಿದಾರ ಎಂದು ಕರೆದುಕೊಳ್ಳುತ್ತಿದ್ದಾರೆ ಆದರೆ, ರಾಫೇಲ್‍ನ ಕಡತಗಳ ಕಳ್ಳತನ ಆಯಿತು, ನೀರವ್ ಮೋದಿ ಓಡಿಹೋದರು, ಮತ್ತು ಅನೇಕ ಜನ ಓಡಿ ಹೋದರು. ಇವರೆಂಥ ಚೌಕಿದಾರರು, ಯಾರ ಚೌಕಿದಾರಿಕೆ ಮಾಡುತ್ತಿದ್ದಾರೆ?

ವರದಿಗಾರ- ಆದರೆ ನೀವು ಚುನಾವಣೆಯ ದಾರಿಯನ್ನೇ ಏಕೆ ಆಯ್ಕೆ ಮಾಡಿದಿರಿ?
ತೇಜ್ ಬಹಾದ್ದೂರ್ ಯಾದವ್ – ಬೇರೆ ಯಾವುದೇ ದಾರಿ ಇದ್ದೇ ಇಲ್ಲ

ವರದಿಗಾರ – ನ್ಯಾಯಾಲಯದ ದಾರಿ ಏಕೆ ಆಯ್ಕೆ ಮಾಡಲಿಲ್ಲ
ತೇಜ್ ಬಹಾದ್ದೂರ್ ಯಾದವ್ – ನ್ಯಾಯಾಂಗದ ದಾರಿಯಲ್ಲಿ ನಮಗೆ ನ್ಯಾಯ ಸಿಗಲೇ ಇಲ್ಲ. ನ್ಯಾಯಾಂಗದ ದುರ್ಭಾಗ್ಯ ನೋಡಿ, ಸುಪ್ರೀಮ್ ಕೋರ್ಟಿನ ನಾಲ್ಕು ನ್ಯಾಯಾಧೀಶರು ಪತ್ರಿಕಾಗೋಷ್ಠಿ ನಡೆಸುತ್ತಾರೆ. ಮುಂಚೆ ಯಾವಾಗಾದರೂ ಆಗಿತ್ತಾ ಹೀಗೆ? ಇವರು(ಪ್ರಧಾನಿ) ಯಾರ ಮಾತನ್ನು ಕೇಳುತ್ತಾರೆ? ಇದು ಹಿಟ್ಲರ್‍ಶಾಹಿ ಆಳ್ವಿಕೆ ಆಗಿದೆ. ಈಗ ನೋಡಿ ರಾಫೇಲ್ ವಿಷಯ ಕೋರ್ಟಿಗೆ ಬಂದೋಡನೇ ಉಚ್ಚ ನ್ಯಾಯಾಧೀಶರನ್ನು ಯಾವುದೋ ಹಗರಣದಲ್ಲಿ ಸಿಲುಕಿಸುತ್ತಿದ್ದಾರೆ.

ಇದನ್ನೂ ಓದಿ: ಮೋದಿ ವಿರುದ್ಧ ಸ್ಪರ್ಧಿಸಲು ಮಾಜಿ ಯೋಧ ತೇಜ್ ಬಹದ್ದೂರ್ ಯಾದವ್‍ಗೆ ಟಿಕೆಟ್ ನೀಡಿದ ಸಮಾಜವಾದಿ ಪಕ್ಷ.

ವರದಿಗಾರ – ಹೌದು ಈ ಆರೋಪ ಇದೆ, ಅದರ ತನಿಖೆ ಆಗುತ್ತಿದೆ, ಈಗ ಅದರ ಬಗ್ಗೆ ಹೇಳಲಾಗುವುದಿಲ್ಲ. ಆದರೆ, ಒಂದು ಪ್ರಶ್ನೆ. ಲೋಕಸಭೆಗೆ ಸ್ಪರ್ಧಿಸುವುದೆಂದರೆ, ಅಲ್ಲಿ ಸ್ಥಳೀಯ ವಿಷಯಗಳೂ ಇರುತ್ತವೆ. ನೀವು ಎತ್ತುತ್ತಿರುವ ಇಷ್ಯೂಗಳು ಯಾವು? ಬನಾರಸ್‍ನ ಜನರು ನಿಮಗೆ ಏಕೆ ಮತ ನೀಡಬೇಕು?
ತೇಜ್ ಬಹಾದ್ದೂರ್ ಯಾದವ್- ನೋಡಿ ಒಬ್ಬ ಎಮ್‍ಪಿಯ ಕರ್ತವ್ಯಗಳಲ್ಲಿ ತನ್ನ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯಗಳಿವೆಯೇ ಇಲ್ಲವೇ ಎನ್ನುವುದನ್ನು ನೋಡಿಕೊಳ್ಳುವುದು. ಆದರೆ ಇಂದಿನ ದಿನಗಳಲ್ಲಿ ಹಾಗಾಗುತ್ತಿಲ್ಲ. ಆಶ್ವಾಸನೆಗಳನ್ನು ನೀಡುತ್ತಾರೆ ಆದರೆ ನಂತರ ಮರೆತುಬಿಡುತ್ತಾರೆ. ಆದರೆ ನಾನು ಒಬ್ಬ ಎಮ್‍ಪಿ ಆಗಿ ಈ ಕ್ಷೇತ್ರದ ಸಮಸ್ಯೆಗಳೇನು ಎನ್ನುವುದರ ಬಗ್ಗೆ ಸರ್ವೇ ಮಾಡಿಸುವೆ. ನೀರು, ಶಿಕ್ಷಣ, ನಿರುದ್ಯೋಗ, ರಸ್ತೆಗಳು, ಆರೋಗ್ಯ, ಈ ಎಲ್ಲ ವಿಷಯಗಳ ಬಗ್ಗೆ ಕೆಲಸ ಮಾಡುವೆ.

ವರದಿಗಾರ- ನೀವು ಜನರಿಂದ ಹಣವನ್ನೂ ಕೇಳುತ್ತಿದ್ದೀರಿ, ನಿಮ್ಮ ಚುನಾವಣೆಯ ಪ್ರಚಾರದಲ್ಲಿ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತಿದ್ದೀರಿ. ಇದಕ್ಕೆ ಜನರ ಪ್ರತಿಕ್ರಿಯೆ ಹೇಗಿದೆ?
ತೇಜ್ ಬಹಾದ್ದೂರ್ ಯಾದವ್ – ನೋಡಿ, ನಿನ್ನೆ ನಾವೆಲ್ಲಾ ಹೋದಾಗ, ಎಲ್ಲಾ ಕಾರ್ಮಿಕಜನರು, ಬಡವರು ನಮ್ಮನ್ನು ನೋಡಿ ಸಂತೋಷಪಟ್ಟು, ಅಪ್ಪಿಕೊಂಡರು, ನಮಗೆ ಅಲ್ಲಲ್ಲಿ ಚಹಾತಿಂಡಿ ಮಾಡಿಸಿದರು, ಕೊನೆಗೂ ನಿಜವಾದ ಚೌಕಿದಾರರು ಬಂದರು ಎಂದು ಸಂತಸಪಟ್ಟರು. ಆದರೆ ದುಃಖದ ಸಂಗತಿಯೆಂದರೆ, ಏರ್‍ಕಂಡಿಷನ್ ಗಾಡಿಗಳಲ್ಲಿ ಇದ್ದವರೆಲ್ಲ ಹೇಳಿದ್ದು, ‘ಇಲ್ಲ, ನಾವು ನಿಮ್ಮ ಜೊತೆಗಿಲ್ಲ’ ಎಂದು. ದೇಶದ ಎಲ್ಲಾ ಕಾರ್ಪೋರೇಟ್ ಕುಟುಂಬಗಳು ಬಿಜೆಪಿ ಜೊತೆಗೆ ನಿಂತುಕೊಂಡಿವೆ. ಆದರೆ ದೇಶದ ರೈತರು, ಕಾರ್ಮಿಕರು ಮತ್ತು ಬಡವರೆಲ್ಲಾ ನಮ್ಮ ಜೊತೆಗಿದ್ದಾರೆ.

ವರದಿಗಾರ- ಆದರೆ ನಿಮ್ಮ ಹೋರಾಟ ಕೇವಲ ಬಿಜೆಪಿ ಜೊತೆಗಷ್ಟೇ ಇಲ್ಲ, ಒಂದು ಕಡೆ ಬಿಜೆಪಿ ಇದ್ದರೆ ಮತ್ತೊಂದು ಕಡೆ ಕಾಂಗ್ರೆಸ್ ಇದೆ, ಇನ್ನೊಂದು ಕಡೆ ಮಹಾಘಬಂಧನ್ ಇದೆ, ಅನೇಕ ಪಕ್ಷೇತರರು ಇದ್ದಾರೆ.
ತೇಜ್ ಬಹಾದ್ದೂರ್ ಯಾದವ್ – ನೋಡಿ, ಮಂಗಲ್ ಪಾಂಡೆ ಎನ್ನುವರ ಹೆಸರನ್ನು ನೀವು ಕೇಳಿರಬಹುದು. ಆಗ ಆ ಒಬ್ಬ ಸೈನಿಕ ಪ್ರಾರಂಭಿಸಿದ್ದರಿಂದ ಏನೇನಾಯಿತು ನೋಡಿ. ಅದೇ ಸ್ವಾತಂತ್ರ ಸಂಗ್ರಾಮದಿಂದ ನಮಗೆ ಸ್ವತಂತ್ರ ಸಿಕ್ಕಿತು. ಈಗ ಇಲ್ಲಿಯೂ ಒಬ್ಬ ಸೈನಿಕ ನಿಂತಿದ್ದಾನೆ, ಅದೂ ಪ್ರಧಾನಮಂತ್ರಿಯ ವಿರುದ್ದ, ಈಗ ಹತ್ತಿದ ಈ ಒಂದು ಕಿಡಿ ಹೇಗೆ ಬಿರುಗಾಳಿ ಬೀಸಲು ಕಾರಣವಾಗುವುದೆಂದು ನೀವು
ನೋಡುವಿರ. ಎಷ್ಟೇ ಜನ ವಿರುದ್ಧ ಇರಲಿ, ಆದರೆ ಮುಂದೆ ಬರುವ ಸಮಯಕ್ಕೆ ಒಂದು ರಾಜಕೀಯ ಭವಿಷ್ಯವನ್ನು ರಚಿಸುತ್ತಿದ್ದೇವೆ.

ವರದಿಗಾರ- ತೇಜ್ ಬಹಾದ್ದೂರ್ ಅವರು ಮಂಗಲ್ ಪಾಂಡೆಯನ್ನು ಆದರ್ಶವಾಗಿಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ. ಯುದ್ಧಭೂಮಿಯಾಗಿರಲಿ ಚುನಾವಣಾ ಕಣವಾಗಿರಲಿ ಗೆಲವು ಸಾಧಿಸುವ ವಿಶ್ವಾಸ ಅವರಿಗಿದೆ.

ಕೃಪೆ: ಬಿಬಿಸಿ ಹಿಂದಿ

ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...