Homeಕರ್ನಾಟಕಚಾನೆಲ್ ಚಿತ್ರಾನ್ನ ಕಾಶಿಯ ಕೊತ್ವಾಲ, ಪ್ರತ್ಯಕ್ಷರಾದ ಸಾಧುಗಳು, ಖಬರ್ ದಾರ್ ಮೆಸೇಜ್

ಚಾನೆಲ್ ಚಿತ್ರಾನ್ನ ಕಾಶಿಯ ಕೊತ್ವಾಲ, ಪ್ರತ್ಯಕ್ಷರಾದ ಸಾಧುಗಳು, ಖಬರ್ ದಾರ್ ಮೆಸೇಜ್

- Advertisement -
- Advertisement -

4ನೇ ಹಂತದ ಮತದಾನದ ಹಿಂದಿನ ದಿನ ರಿಪ್ಲಬಿಕ್ ಟಿವಿಯಲ್ಲಿ, ‘ಸಂಡೇ ಡಿಬೇಟ್ ವಿತ್ ಅರ್ನಾಬ್ ಗೋಸ್ವಾಮಿ’ ಕಾರ್ಯಕ್ರಮದ ಟೈಟಲ್ಲೇ #ModiWaveElection…

ಚರ್ಚೆಯ ಸಂದೇಶ ಏನಾಗಿರಬೇಕು ಎಂಬುದನ್ನು ಮೊದಲೇ ನಿರ್ಧರಿಸಿಯೇ ಗೋಸ್ವಾಮಿ ಕಾರ್ಯಕ್ರಮ ರೂಪಿಸಿರುತ್ತಾರಲ್ಲವಾ? ಚರ್ಚೆ ಶುರುವಾಗುತ್ತಲೇ ಮರಿ ಗೋಸ್ವಾಮಿಗಳಾಗಿರುವ ಅವರ ಅಭಿಮಾನಿಗಳು ತಮ್ಮ ಮನದಿಂಗಿತವನ್ನು ಟ್ವೀಟ್ ಮಾಡಲು ಶುರು ಮಾಡಿಬಿಡುತ್ತಾರೆ.

ಚರ್ಚೆಯಲ್ಲಿ ಬಿಜೆಪಿ ವಿರೋಧಿ ಪ್ಯಾನಲಿಸ್ಟ್ ಅರ್ಥಪೂರ್ಣವಾಗಿ ವಾದ ಮಂಡಿಸತೊಡಗಿದರೆ, ಗೋಸ್ವಾಮಿ ಚೀರಾಡಿ, ಹಾರಾಡಿ ವಿಷಯವನ್ನು ಎತ್ತೆತ್ತಲೋ ಒಯ್ದು ಬಿಡುತ್ತಾರೆ. ಮೊನ್ನೆ ರವಿವಾರವೂ ಅವರೂ ಅದನ್ನೇ ಮಾಡಿದರು. ಇದು ‘ಮೋದಿ ಅಲೆ ಚುನಾವಣೆ’ ಎಂಬ ಅವರ ನಿಲುವನ್ನು ಮುನ್ನೆಲೆಗೆ ತರಲು ಹರಸಾಹಸ ಮಾಡಿದರು….

ಮಂಡ್ಯದ ನಂತರ ನಮ್ಮ ಚಾನೆಲಗಳಿಗೆ ಆಕರ್ಷಕವಾಗಿ ಕಂಡಿದ್ದು ವಾರಣಾಸಿ. ಮೋದಿಯವರ ನಾಮಿನೇಶನ್ ಅವುಗಳ ಪಾಲಿಗೆ ‘ಸ್ವಾಮಿ-ನೇಷನ್’ ಅನಿಸಿರಬೇಕು. ಇಂಗ್ಲಿಷ್, ಹಿಂದಿ ಮತ್ತು ಪ್ರಾದೇಶಿಕ ಚಾನೆಲ್ಲುಗಳಲ್ಲಿ ಎರಡು ದಿನ ವಾರಣಾಸಿಯ ಜಪ. ಪ್ರಧಾನಿಯ ನಾಮಪತ್ರ ಸಲ್ಲಿಕೆ ಓಕೆ, ಜನರಿಗೆ ಅಲ್ಲಿನ ವಾತಾವರಣ ತೋರಿಸಬೇಕು, ಅದೂ ಸರಿ. ಆದರೆ, ರಾಜಕೀಯದೊಂದಿಗೆ ಧಾರ್ಮಿಕತೆಯನ್ನು ಬೆರೆಸಿ, ವೀಕ್ಷಕರಲ್ಲಿ ಕಾಶಿ ವಿಶ್ವನಾಥನ ಬಗ್ಗೆ ಇರಬಹುದಾದ ಭಕ್ತಿಯನ್ನು ಮೋದಿಗೆ ‘ಟ್ರಾನ್ಸ್‍ಫರ್’ ಮಾಡಲು ಹೆಣಗಲಾಯಿತು.

ರಾಜ್ಯದಲ್ಲಿ ಮತದಾನ ಮುಗಿದಿದ್ದರೂ ಕನ್ನಡದ ಚಾನೆಲ್‍ಗಳೂ ಹಿಂದಿಯವರಂತೆ ಉತ್ಸುಕವಾಗಿಯೇ ನಾಮಪತ್ರ ಸಲ್ಲಿಕೆಯನ್ನು ಪ್ರಸಾರ ಮಾಡಿದರು. ಬಹುಷ: ಇದು ಪ್ಯಾಕೇಜ್‍ನ ಭಾಗವಾಗಿರಬಹುದು.

ದಿಗ್ವಿಜಯಕ್ಕೆ ಯುದ್ಧ ಗೆದ್ದ ಸಂಭ್ರಮ. ನೇರ ಪ್ರಸಾರದ ಜೊತೆಗೆ ವಿಶೇಷ ಕಾರ್ಯಕ್ರಮ ಬೇರೆ! ‘ವೈರಿಪಡೆಗೆ ನಮೋ ಖಬರ್‍ದಾರ್ ಮೆಸೇಜ್!’ – ಮೋದಿ ನಾಮಿನೇಶನ್ ಭಾಷಣ ಮಾಡುವ ಮೊದಲೇ ಈ ತರಹದ ಹೆಡ್ಡಿಂಗ್! ಗಂಗಾ ಆರತಿ ಮೂಲಕ ವಿಪಕ್ಷಗಳಿಗೆ ವಾರ್ನಿಂಗ್ ಕೊಟ್ಟರೆಂದೇ? ಅಲ್ಲಿ ಸೇರಿಸಿದ ಜನರನ್ನು ಇಟ್ಟುಕೊಂಡು ದಿಗ್ವಿಜಯ ಹೀಗೆ ಹೇಳಿತೋ ಗೊತ್ತಾಗಲಿಲ್ಲ!

ಟಿವಿ9 ಪಾಲಿಗೆ ಮೋದಿ ‘ಕಾಶಿಯ ಕೊತ್ವಾಲ’… ವಿಶ್ವನಾಥನೇ ಬಲ್ಲ ಇದರ ಮರ್ಮ! ನ್ಯೂಸ್18ನಲ್ಲಿ ವಿಶೇಷ ಕಾರ್ಯಕ್ರಮ- ‘ದಶಾಶ್ವಮೇಧ ರಹಸ್ಯ, ಗಂಗಾ ಆರತಿ (ಅವರ ಪರದೆ ಮೇಲೆ ಗಂಗಾರತಿ ಎಂದಿತ್ತು!) ವಿಸ್ಮಯ, ಪ್ರತ್ಯಕ್ಷರಾದ ಸಾಧುಗಳು’….ಸೂಪರ್ ಮಾಮ! ಪ್ರತ್ಯಕ್ಷವಾಗುವವರೆಗೆ ಸಾಧುಗಳು ಎಲ್ಲಿದ್ದರು? ಅಥವಾ ಮೇಲಿಂದ ಉದುರಿ ಬಿದ್ದರಾ?

ಬಿಟಿವಿಯವರಂತೂ ರಾಧಿಕಾ ಹಿರೇಗೌಡರ್ ಅವರನ್ನೇ ವಾರಣಾಸಿಯಲ್ಲಿ ಲ್ಯಾಂಡ್ ಮಾಡಿಸಿದ್ದರು. ರಾಧಮ್ಮರಂತೂ ‘ಏನ್ ವೈಭವ, ಹಬ್ಬದ ಸಂಭ್ರಮ, ಎಲ್ಲೆಲ್ಲೂ ಎಲ್ಲೆಲ್ಲೂ ಎಲ್ಲೆಲ್ಲೂ…ಎಲ್ಲೆಲ್ಲೂ (ನಾಲ್ಕು ದಿಕ್ಕುಗಳ ಹೊರಳಿದ್ದರಿಂದ 4 ಸಲ ಹೇಳಿದರೋ?)…ಜನ ಸ್ವ-ಇಚ್ಛೆಯಿಂದ ಪಾಲ್ಗೊಂಡು ತಾವೇ ನಗರವನ್ನು ಸಿಂಗರಿಸಿದ್ದಾರೆ…’ -ನಾನ್‍ಸ್ಟಾಪ್ ಹೊಗಳಿಕೆಯಲ್ಲೇ ಕಾಲ ಕಳೆದರು.

ಮುಂದಿನ ಹಂತದ ಚುನಾವಣೆಗಳು ಹಿಂದಿ ಬೆಲ್ಟ್‍ನಲ್ಲೇ ಜಾಸ್ತಿ. ಹೀಗಾಗಿ ಹಿಂದಿ ಚಾನೆಲ್‍ಗಳಿಗೆ ವಿಶೇಷ ಪ್ಯಾಕೇಜ್ ಇದ್ದಂತಿತ್ತು. ಝೀ ಚಾನೆಲ್ ಪಾಲಿಗೆ ಶಿವನೇ ನಾಮಿನೇಶನ್‍ಗೆ ಬಂದಂತಿತ್ತು. ಆಜ್‍ತಕ್‍ನಲ್ಲಿ ನಿರೂಪಕಿ ಮತ್ತು ವಾರಣಾಸಿಯಲ್ಲಿ ಓಡಾಡುತ್ತಿದ್ದ ವರದಿಗಾರ್ತಿಯ ನಡುವಿನ ಮಾತು ಹೇಗಿದ್ದವು ಎಂದರೆ,

-ಯಾ ಪರಿ ಮಂದಿ…ಸಂದಿಗೊಂದಿಯಲ್ಲೆಲ್ಲ ಮಂದಿ…ಅಬಬಾ….ನಾ ನೋಡೆ ಇಲ್‍ಬಿಡು ಇಂತಹ ಸಂಭ್ರಮ…

-ಹೌದು ಹೌದು ನಾವು ನೋಡ್ತಾ ಇದ್ದೇವಲ್ಲ. ನೀನೇ ಲಕ್ಕಿ ಕಣೆ…ವಾರಣಾಸಿಯಲ್ಲೇ ನಿಂತು ಇದನ್ನ ಕಣ್ತುಂಬಿಕೊಳ್ಳೋ ಭಾಗ್ಯ…

-ಧೂಮ್‍ಧಾಮ್ ಸೆ ಆಯೇಗಿ ಸರ್ಕಾರ್

ಈ ಲೈವ್ ವರದಿಯ ಪ್ರಾಯೋಜಕರು: ಬಿಗ್‍ಬಾಸ್ ಡಾಲರ್ ಬನಿಯನ್ ಮತ್ತು ಅಂಡರ್‍ವೇರ್ ಕಂಪನಿ!

‘ವೀಕೆಂಡ್ ವಿಥ್ ರಮೇಶ್’ ನೋಡಿದ ಮೇಲೆ ಅನಿಸಿದ್ದು: ಮೋದಿಯವರನ್ನು ಅತಿಥಿಯಾಗಿ ಕರೆದರೆ ಹೇಗೆ? ಓದಿದ ಸ್ಕೂಲ್, ಚಾ ಮಾರಿದ ಸ್ಟೇಷನ್, ಅವರ ಬಾಲ್ಯದ ಸಹಪಾಠಿಗಳನ್ನು ಕರೆಸಲು ಸಾಧ್ಯವಾ? ಅವರ ತಾಯಿ ಕರೆಸಬಹುದು, ಪತ್ನಿ ಬರುವುದು ಡೌಟು… ಸರ್, ಮಾವಿನ ಹಣ್ಣು ತಿಂದು ತೋರಿಸಿ ಅನ್ನೋದು…..ಇವೆಲ್ಲ ಕಷ್ಟ ಅಲ್ಲವಾ ರಮೇಶ್ ಅರವಿಂದ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...