Homeಮುಖಪುಟಠಕ್ಕರ್: ಎದುರಾಬದುರಾ! 'ಬಾಹರ್ ಕೆ ಕಪಡೆ ಚೋಡೋ, ಜರಾ ಅಂದರ್ ದೇಖೋ ಭಾಯ್'

ಠಕ್ಕರ್: ಎದುರಾಬದುರಾ! ‘ಬಾಹರ್ ಕೆ ಕಪಡೆ ಚೋಡೋ, ಜರಾ ಅಂದರ್ ದೇಖೋ ಭಾಯ್’

- Advertisement -

| ವಿಡಂಬನೆ: ಮಲ್ಲಿ |

- Advertisement -

ನೀವು ಸಂದರ್ಶಿಸಬೇಕಿದ್ದ ವ್ಯಕ್ತಿ ನಿಮಗೆ ಸುಲಭದಲ್ಲಿ ಸಿಗುತ್ತಾರೆ. ಆದರೆ, ಅವರ ಬಾಯಿಂದ ಸತ್ಯಗಳು ಸುಲಭದಲ್ಲಿ ಸಿಗುವುದಿಲ್ಲ. ಹಾಗಾಗಿ ಮನೋಲೋಕದಲ್ಲೇ ಇಬ್ಬರನ್ನೂ ಕೂರಿಸಿಕೊಂಡು ಸತ್ಯ ಹೊರತೆಗೆಯೋಣ ಎಂದು ಠಕ್ಕರ್ ನಿರ್ಧರಿಸಿದ್ದಾರೆ. ವಾರಕ್ಕೆರಡು ಸಂದರ್ಶನ ಗ್ಯಾರಂಟಿ.

ಮೋದಿಯೊಂದಿಗೆ ಒಂದು SUM-ದರ್ಶನ

ಅಕ್ಷಿ ಮತ್ತು ಇಂಡಿಯಾ ‘ಕಡೆ’ಯವರ ಸಂದರ್ಶನದ ನಂತರ ನಮ್ಮ ಠಕ್ಕ(ರ್) ಸ್ನೇಹಿತ ಒಂದು ಚಿಟ್‍ಚಾಟ್ ಮಾಡಿದ್ದಾನೆ….

ಠಕ್ಕರ್: ಅಕ್ಷಯ್ ನಿಮ್ಮ ಡ್ರೆಸ್ ಬಗ್ಗೆ ಕೇಳಿದಾಗ, ತಾವು ಒಳ್ಳೆ ಬಟ್ಟೆ ತೊಡುವ ತಮ್ಮ ಹಂಬಲ ಈಗ ಈಡೇರಿದೆ ಅಂದಿರಿ. ಮೂರ್ಖ ಅಕ್ಷಿ ಹಿಹಿಹಿ ಅಂದು ಬಿಟ್ಟ…

ಗುರೇಂದ್ರ ಕೌದಿ: ಅಚ್ಚಾ, ಅಕ್ಷಿ ಒಬ್ಬ ಸಿನಿಮಾ ನಟ ಅಷ್ಟೇ.. ಅವಂಗೆ ಎಲ್ಲ ಗೊತ್ತಾಗಲ್ಲ. ಬಟ್, ಇಂದಿಯಾ ‘ಕಡೆ’ ಸಂದರ್ಶನದಲ್ಲಿ ಪ್ರಶ್ನೆ ಕೇಳ್ತಾ ಇದ್ದ ಆ ಇಬ್ಬರು ಯುವತಿಯರಿಗೆ ದಿರಿಸುಗಳ ಬಗ್ಗೆ ಅದ್ಭುತ ಹೊಳವು ಇದ್ದವು. ಆದರೆ ಅಕ್ಷಿಯಂತೆ ಅವರೂ ನನ್ನ ದುಬಾರಿ ಡ್ರೆಸ್ ಬಗ್ಗೆ ಕೇಳಿಬಿಟ್ಟರು.

ಮೈ ನೆ ಇಸ್‍ಕೋ ಬೋಲಾ, ಬಾಹರ್ ಕೆ ಕಪಡೆ ಚೋಡೋ, ಅಂದರ್ ಕಿ ಬಾತ್ ಕರೋ…

ಠಕ್ಕರ್: ಸರ್ ಅವರಿಗೇನು ಗೊತ್ತು ಅಂತರಾಳದ ಮರ್ಮ, ಒಳಗಿನ ಬೇಗುದಿ… ಆದರೂ ಒಂದ್ ಪರ್ಸನಲ್ ಪ್ರಶ್ನೆ, ‘ಅಂದರ್ ಕಿ ಬಾತ್ ವೊ ಕ್ಯಾ ಹೌ ಡ್ರೆಸ್ ಕೆ ಬಾರೆ ಮೆಂ’

ಗುರೇಂದ್ರ ಕೌದಿ: ಅಂದರ್ ಕಿ ಬಾತ್ ಅಂದರ್ ಹಿ ಹೋನಾ ಭಯ್ಯಾ… ಭಯ್ಯಾ ಸಚ್‍ಮುಚ್ ಬೋಲ್ತಾ ಹೂ ಅಂದರ್ ಕುಚ್ ನಹಿ! (ಒಳಗಿನ ವಿಷ್ಯ ಒಳಗ ಇರ್ಬೇಕು ಮಾರಾಯ…ಖರೆ ಹೇಳ್ತೀನಿ, ಒಳಗ ಏನ್ ಅಂದ್ರ ಏನೂ ಇಲ್ಲ..|)

ಠಕ್ಕರ್: ಕ್ಯಾ ಸಚ್ ಬತಾಯಾ ಆಪನೆ ಸರ್! ಮಗರ್ ಏಕ್ ಬಾತ್ ಪರ್ಸನಲ್ ಸರ್, ಮೇರಾ ಅಂದರ್ ಕುಚ್ ಹೈ, ಬನಿಯನ್ ಔರ್ ಅಂಡರ್‍ವೇರ್….ಆಪ್ ಕೆ ಪಾಸ್ ವೊ ಭಿ ನಹಿಂ ಹೈ! ಸೊ ಸಿಂಪಲ್ ಸರ್ ಯು ಆರ್…( ಎಂತಹ ಸತ್ಯ ಹೇಳಿದ್ರಿ ನೀವು! ಆದ್ರ ಒಂದ್ ಪರ್ಸನಲ್ ಮಾತ್ ಐತ್ರಿ, ನಂಗ ಒಳಗ ಸಂಥಿಂಗ್ ಐತ್ರಿ, ಅಂಡರ್‍ವೇರು, ಬನಿಯನ್ನು….ನಿಮ್ಮತ್ರ ಅವೂ ಇಲ್ಲ ಅಂದ್ರ, ನೀವೆಷ್ಟು ಸಿಂಪಲ್ ಸರ್?)

ಗುರೇಂದ್ರ ಕೌದಿ: ಅಕ್ಷಿ, ಕುನ್ವಾಲ್ ಟೀಮ್‍ಗೆ ಅರ್ಥವಾಗದ್ದನ್ನು ನೀ ಕಂಡು ಹಿಡಿದೆ… ಒಳಗಿನ ಮಾತಲ್ಲವಾ? ಇಸಿ ಲಿಯೆ ಮೈ ಆಮ್ ಆದ್ಮಿಯೊ ಕಾ ಬಾತ್ ಕೊ ರಿಸ್ಪೆಕ್ಟ್ ಕರತಾ ಹೂಂ…

ಠಕ್ಕರ್: ಅಲ್ಲ ಸರ್, ಬ್ಯಾಗ್ ಚಿಕ್ಕದು ಅಂತಾ ನೀವು ಫುಲ್ ತೋಳಿನ ಶರ್ಟನ್ನೇ ಅರ್ಧ ತೋಳಿನ ಶರ್ಟಾಗಿ ಕಟ್ ಮಾಡತಾ ಇದ್ದಿರಂತೆ… ಎಂತಹ ಐಡಿಯಾ ಸರ್?

ಗುರೇಂದ್ರ ಮೋದಿ: ಹಾ ಹಾ….ಅಹಹಾ.. ಅದಕ್ಕೂ ತಲೆ ಬೇಕಲ್ವಾ?

ಠಕ್ಕರ್: ಬ್ಯಾಗ್ ಚಿಕ್ಕದು ಅನ್ನೋ ಫಾರ್ಮುಲಾ ಇಟ್‍ಕೊಂಡು ಕ್ಷಮಿತ್ ಶಾ ಅವರು, ದೇಶ ಚಿಕ್ಕದು, ಇಷ್ಟೆಲ್ಲ ಜನರಿಗೆ ಸಾಲಲ್ಲ ಅಂತ ಎನ್‍ಆರ್‍ಸಿ ಅನ್ನೋ ಕತ್ತರಿ ಬಳಸಿ ಜನರನ್ನೇ ಕಟ್ ಮಾಡೋಕೆ ಹೊಂಟಂಗಿದೆ?

ಗುರೇಂದ್ರ ಮೋದಿ: ಭಯ ಬೇಡ…ಅದೆಲ್ಲ ಆಗುತ್ತ? ಆಫ್ ದಿ ರೆಕಾರ್ಡ್ ಹೇಳ್ತೀನಿ: ರಾಮ ಮಂದಿರ ಮಾಡಿದ್ವಾ? 370 ಆರ್ಟಿಕಲ್? ಕಪ್ಪು ಹಣ? ಕಾಂಗ್ರೆಸ್ ಜೈಲು? ಇವೆಲ್ಲ ಸುಮ್ಮನೇ ಮಾರಾಯ….ಇಲೆಕ್ಷನ್‍ವರೆಗೆ ಇದೆಲ್ಲ ಆಫ್ ದಿ ರೆಕಾರ್ಡ್ ಆಗಿರಲಿ..

ಠಕ್ಕರ್: ಸರ್, ಮಾವಿನ ಹಣ್ಣಿನ ಜೊತೆ ಹಲಸಿನ ಹಣ್ಣು ಸಿಕ್ಕಿದ್ದರೆ ಏನ್ ಮಾಡ್ತಿದ್ರಿ? ಸುಮ್ಮನೆ ಕುತೂಹಲ ಅಷ್ಟೇ…

ಗುರೇಂದ್ರ ಕೌದಿ: ಯಾಕೆ ಭಯ? ಒಳ್ಳೆ ಪ್ರಶ್ನೆ. ಅಕ್ಷಯ್ ಕೂಡ ಹಿಂಗೇ ಫೇಮಸ್ ಆಗಲಿಲ್ವಾ? ಕರಡಿ ಅಂದ್ರ ಜಾಂಬುವಂತ ಅಲ್ವಾ? ಕರಡಿ ತರಹ ತಿನ್ನೋ ಶಕ್ತಿಯನ್ನ ಆ ಜಾಂಬುವಂತ ಕೊಡ್ತಿದ್ದ. ಬಟ್, ಆಗ ನೆಹರು ಕಾರಣದಿಂದಾಗಿ, ಕರಡಿ ದ್ವೇಷದಿಂದಾಗಿ ಹಲಸಿನ ಹಣ್ಣುಗಳನ್ನು ಬೆಳೆಯೋದನ್ನೇ ನಿಷೇಧಿಸಿಲಾಗಿತ್ತು.

ಠಕ್ಕರ್: ಕೊನೆ ಪ್ರಶ್ನೆ. ಅಕ್ಕೋರನ್ನ ನೀವ್ ಬಿಟ್ ಬರಬಾರದಿತ್ತು ಅಲ್ಲವಾ?

ಗುರೇಂದ್ರ ಕೌದಿ: ಅಕ್ಷಯ್, ಕುನ್ವಲ್, ಅರ್ನಾಬ್ ಈ ಪ್ರಶ್ನೆ ಕೇಳಲಿಲ್ಲ. ಅವರಿಗೆ ಸಂಘದ ‘ಸ್ವಯಂಸೇವಕ’ ಅಂದರೆ ಏನು ಅಂತಾ ಗೊತ್ತು. ನನಗೆ ಮದುವೆಯಾದ ಮೇಲೂ ಸ್ವಯಂಸೇವಕ ಆಗಿರುವುದೇ ತೃಪ್ತಿ ಕೊಡ್ತಾ ಇತ್ತು. ಮನೆಯಲ್ಲೇ ಇದ್ದುಕೊಂಡು ಸ್ವಯಂಸೇವೆಯ ಕಡೆ ಒತ್ತು ಕೊಡೋದು ತಪ್ಪಲ್ವಾ? ಅದಕ್ಕೇ ದೇಶಾಂತರ ಹೊರಟು ಬಿಟ್ಟೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...