Homeಮುಖಪುಟಇಂಡಿಯಾ ಟುಡೇಗೆ ಮೋದಿ ಸಂದರ್ಶನ: ರವೀಶ್ ಕುಮಾರ್‍ರವರಿಗೆ ಯಾಕಿಲ್ಲ?

ಇಂಡಿಯಾ ಟುಡೇಗೆ ಮೋದಿ ಸಂದರ್ಶನ: ರವೀಶ್ ಕುಮಾರ್‍ರವರಿಗೆ ಯಾಕಿಲ್ಲ?

- Advertisement -
- Advertisement -

| ಪಿ.ಕೆ. ಮಲ್ಲನಗೌಡರ್ |

ಈಗ ಮೂರು ಹಂತದ ಚುನಾವಣೆ ಮುಗಿದಿದೆ. ಸದ್ಯ ಇಂಟರವಲ್ ಎನ್ನುವುದಾದರೆ, ಫಸ್ಟ್ ಹಾಫ್‍ನಲ್ಲಿ ದೇಶದ ಸಮಸ್ಯೆಗಳ ಕುರಿತು ಚಕಾರ ಎತ್ತದ, ತಾವು ಕೊಟ್ಟ ಭರವಸೆ ಕುರಿತು ಮಾತೇ ಆಡದ ಪ್ರಧಾನಿ ನರೇಂದ್ರ ಮೋದಿ ಬಾಲಾಕೋಟ್ ದಾಳಿ, ಪಾಕ್ ದ್ವೇಷ, ರಾಷ್ಟ್ರದ ಸುರಕ್ಷತೆ ಎಂದೆಲ್ಲ ಭಾಷಣ ಬಿಗಿದರಷ್ಟೆ. ಸೆಕೆಂಡ್ ಹಾಫ್‍ನಲ್ಲಿ ಹಿಂದೆಲ್ಲ ಅಡಿಯಾಳಿಗಿದ್ದ ಮಾಧ್ಯಮಗಳನ್ನೆಲ್ಲಾ ಸಾರಾಸಗಟಾಗಿ ಖರೀದಿಸಿದಂತೆ ಕಾಣುತ್ತಿದೆ.

ಮೂರು ಹಂತದ ಚುನಾವಣೆ ಮುಗಿದ ನಂತರ ಭಯ ಬಿದ್ದಂತಿರುವ ಬಿಜೆಪಿಯವರು ಬೇರೆ ಹಾದಿ ಹಿಡಿದಿದ್ದಾರೆ. ಅಲ್ಲಿ ಭಾವನಾತ್ಮಕ ಸಂಗತಿಗಳನ್ನು ಮುನ್ನೆಲೆಗೆ ತರಲು ಒದ್ದಾಡಿದ್ದಾರೆ. ಅಕ್ಷಯಕುಮಾರ್ ಸಂದರ್ಶನ ಅದರ ಭಾಗ. ಅದು ಯಾವಾಗ ಲೇವಡಿಗೆ ಒಳಗಾಯಿತೋ, ಆಗ ಅವರು ಕಾಶಿ ವಿಶ್ವನಾಥನ ಹೆಸರಲ್ಲಿ ಧಾರ್ಮಿಕವಾಗಿ ಹಿಂದೂಗಳ ಒಲವು ಪಡೆಯಲು ಎರಡು ದಿನ ‘ಹರ’ಸಾಹಸ ಮಾಡಿದ್ದಾರೆ!
ಇದೇ ವೇಳೆ, ತಾವು ಈವರೆಗೂ ಪತ್ರಿಕಾಗೋಷ್ಠಿ ನಡೆಸಿಲ್ಲ ಎಂಬ ಅಪವಾದವನ್ನು ತೊಡೆದು ಹಾಕಲು ಇಂಡಿಯಾ ಟುಡೇಯೊಂದಿಗೆ ಗಂಗಾ ನದಿಯ ತಟದಲ್ಲಿ ಒಂದೂವರೆ ತಾಸುಗಳ ಸಂದರ್ಶನ ನೀಡಿದ್ದಾರೆ. ಪ್ರಧಾನಿಯ ನಾಮಿನೇಶನ್ ನಂತರ ಅದನ್ನು ಪ್ರಮೋಟ್ ಮಾಡುತ್ತಲೇ ಇರುವ ಇಂಡಿಯಾ ಟುದೇ ಚಾನೆಲ್,‘unforgettable interview for Modi’ ಎಂದೆಲ್ಲ ಪೋಸು ಕೊಡುತ್ತಿದೆ. ಇವತ್ತು ಸಂಜೆ 7ಕ್ಕೆ ಆ ಸಂದರ್ಶನ ಪ್ರಸಾರವಾಗಲಿದ್ದು, ಅದರ ತುಣುಕುಗಳನ್ನು ಈಗ ಪ್ರದರ್ಶಿಸಲಾಗಿತ್ತಿದೆ.

‘ಇಂಡಿಯಾ ಟುಡೇ’ದ ಸಂಪಾದಕನೇ ಆಗಿರುವ ರಾಹುಲ ಕನ್ವಾಲ್ ತನ್ನ ಸಹಚರರೊಂದಿಗೆ ಈ ಸಂದರ್ಶನ ಮಾಡಿದ್ದು, ‘ಮೋದಿ ಪ್ರಶ್ನೆಗೆ ಉತ್ತರಿಸಲ್ಲ, ಪ್ರೆಸ್ ಅನ್ನು ಅವಾಯ್ಡ್ ಮಾಡ್ತಾರೆ ಎಂಬುದೆಲ್ಲ ಸುಳ್ಳು, ಅವರು ನಮ್ಮ ಪ್ರಶ್ನೆ ಮತ್ತು ಕೌಂಟರ್ ಪ್ರಶ್ನೆಗೆಲ್ಲ ಉತ್ತರಿಸಿದರು’ ಎಂದೆಲ್ಲ ಹೇಳುತ್ತಾರೆ. ನ್ಯೂಸ್ ಆ್ಯಂಕರ್ ಅಂಜನಾ ಕಶ್ಯಪ್ ಸ್ಟುಡಿಯೋದಲ್ಲಿ ಪ್ರಸಾರವಾಗಲಿರುವ ಈ ಸಂದರ್ಶನದ ಬಗ್ಗೆ ಬಿಲ್ಡ್‍ಅಪ್ ಕೊಡುತ್ತಲೇ, ಗಂಗಾ ತಟದಲ್ಲಿರುವ ರಾಹುಲ್ ಕನ್ವಲ್‍ರನ್ನು ಮಾತಾಡಸಿ, ಮೋದಿ ಮನಬಿಚ್ಚಿ ಮಾತಾಡಿದರೇ ಎಂದು ನಾಟಕೀಯ ಶೈಲಿಯಲ್ಲಿ ಪ್ರಶ್ನೆ ಮಾಡುತ್ತಾರೆ! ಅದಕ್ಕೆ ಗಂಗಾ ತಟದಿಂದ ಉತ್ತರಿಸುವ ರಾಹುಲ್ ಕನ್ವಲ್, ಮೋದಿ ಬಗ್ಗೆ ತಪ್ಪು ಅಭಿಪ್ರಾಯ ಇವೆಯಲ್ಲ, ಈ ಸಂದರ್ಶನದಿಂದ ಅವೆಲ್ಲ ದೂರವಾಗಲಿವೆ, ಮೋದಿ ಪ್ರಬುದ್ಧ ನಾಯಕ ಎಂಬಂತೆ ಹೊಗಳತೊಡಗುತ್ತಾರೆ!

7ಕ್ಕೆ ಸಂದರ್ಶನ ನೋಡೋಣ!

ಅರ್ನಾಬ್ ಕೂಗಾಡಿದ್ದು ಆಯ್ತು ಕೆಲಸ ಆಗಲಿಲ್ಲ… ಅಕ್ಷಯ್ ಬಂದ, ವರ್ಕ್‍ಔಟ್ ಆಗಲಿಲ್ಲ… ಈಗ ಇದ್ದುದರಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಂಡಿದ್ದ ‘ಇಂಡಿಯಾ ಟುಡೆ’ ಯನ್ನು ಕೂಡ ಬಲೆಗೆ ಹಾಕಲಾಗಿದೆ! ಈ ಸಂದರ್ಶನವನ್ನೂ ಎಲ್ಲ ಭಾಷೆಗಳ ಪೇಯ್ಡ್ ಚಾನೆಲ್‍ಗಳೂ ಅನುವಾದಿಸಿ (ಸಬ್ ಟೈಟಲ್ ಹಾಕಿ) ಪ್ರಸಾರ ಮಾಡುವುದಂತೂ ಗ್ಯಾರಂಟಿ! ಈಗಾಗಲೇ ಅವಕ್ಕೆ ಸಂದರ್ಶನದ ಸ್ಕ್ರಿಪ್ಟ್ ಸಿಕ್ಕಿರಬಹುದು ಅಲ್ಲವೇ?

ಮೋದಿಯವರು ಅಕ್ಷಯ್ ಕುಮಾರ್‍ಗೆ ಸಂದರ್ಶನ ಕೊಟ್ಟ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ರವೀಶ್‍ಕುಮಾರ್‍ಗೂ ಸಂದರ್ಶನ ಕೊಡುತ್ತೀರಾ ಎಂಬ ಪ್ರಶ್ನೆ ವೈರಲ್ ಆಗಿದೆ. ಚೇಂಜ್.ಆರ್ಗ್‍ನಲ್ಲಿ ಸಾವಿರಾರು ಜನ ಪಿಟಿಷನ್‍ಗೆ ಸಹಿ ಮಾಡಿ ಮೋದಿಗೆ ಒತ್ತಡ ಹೇರುತ್ತಿದ್ದಾರೆ. ಆದರೆ ಅದಕ್ಕೆ ಪ್ರತಿಕ್ರಿಯಿಸದ ಮೋದಿ ಇಂಡಿಯಾ ಟುಡೇಗೆ ಸಂದರ್ಶನ ನೀಡಿ ಪಲಾಯನ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈಗಷ್ಟೇ ಸೆಕೆಂಡ್ ಹಾಫ್ ಶುರು. ಈ ಭಾಗದ ನಾಟಕದಲ್ಲಿ ಮಾಧ್ಯಮಗಳೇ ದೊಡ್ಡ ಪೇಯ್ಡ್ ಅಭಿನಯಕಾರರು ಎಂಬುದು ನಾಚಿಕೆಗೇಡಿನ ವಿಷಯ! ಆದರೂ ಪೂರ್ತಿ ಸಂದರ್ಶನ ಪ್ರಸಾರವಾಗುವವರೆಗೂ ಕಾಯೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...