ಆರ್ಥಿಕತೆಯ ಮೇಲೆ ದೀರ್ಘಕಾಲದ ಲಾಕ್ಡೌನ್ನ ಪರಿಣಾಮ ತೀವ್ರವಾಗಿದೆ ಮತ್ತು 15 ಲಕ್ಷ ಕೋಟಿ ರೂ.ಗಳ ಉದ್ದೀಪನ ಪ್ಯಾಕೇಜ್ ಅಗತ್ಯವಿದೆ ಎಂದು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಶುಕ್ರವಾರ ತಿಳಿಸಿದೆ. ಇದು ಹಿಂದೆ ಅದು 4.5 ಲಕ್ಷ ಕೋಟಿ ರೂಗಳ ಪ್ಯಾಕೇಜ್ ಅಂದಾಜಿಸಿತ್ತು.
ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮವು ಉದ್ಯಮವು ಈ ಹಿಂದೆ ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಾಗಿದೆ. ಹಾಗಾಗಿ ದೊಡ್ಡ ಹಣಕಾಸಿನ ಉತ್ತೇಜನದಿಂದ ಅದನ್ನು ಸರಿದೂಗಿಸಬೇಕಾಗಿದೆ ಎಂದು ಸಿಐಐ ಅಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ತಿಳಿಸಿದ್ದಾರೆ.
ಲಾಕ್ಡೌನ್ನ ಮೂರನೇ ಹಂತವು ಮುಗಿಯುವ ಹೊತ್ತಿಗೆ, ಆರ್ಥಿಕತೆಯು ಸುಮಾರು ಎರಡು ತಿಂಗಳ ಉತ್ಪಾದನೆಯನ್ನು ಕಳೆದುಕೊಳ್ಳುತ್ತದೆ. ಹಾಗಗಿ “ಸಿಐಐ 15 ಲಕ್ಷ ಕೋಟಿ ರೂ.ಗಳ ತಕ್ಷಣದ ಪ್ರಚೋದಕ ಪ್ಯಾಕೇಜ್ ಅನ್ನು ಘೋಷಿಸಲು ಸರ್ಕಾರವನ್ನು ಒತ್ತಾಯಿಸುತ್ತದೆ. ಇದು ಜಿಡಿಪಿಯ 7.5% (ಒಟ್ಟು ದೇಶೀಯ ಉತ್ಪನ್ನ) ಆಗಿದೆ” ಎಂದು ಅವರು ಹೇಳಿದ್ದಾರೆ.
ಇತರ ಉದ್ಯಮ ಸಂಘಗಳು ಸಹ ಆರ್ಥಿಕತೆಯನ್ನು ಮತ್ತೆ ಹಳಿಗೆ ತರಲು ದೊಡ್ಡ ಉದ್ದೀಪನ ಪ್ಯಾಕೇಜ್ ಕೇಳಿವೆ. ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಫಿಕ್ಕಿ) 10 ಲಕ್ಷ ಕೋಟಿ ರೂಗಳ ಪ್ಯಾಕೇಜ್ ಕೇಳಿದ್ದರೆ, ಪಿಎಚ್ಡಿ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ 16 ಲಕ್ಷ ಕೋಟಿ ರೂಗಳ ನೆರವು ನೀರಿಕ್ಷಿಸಿದೆ.
ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ (ಅಸ್ಸೋಚಾಮ್) ಅಧ್ಯಕ್ಷ ನಿರಂಜನ್ ಹಿರಾನಂದಾನಿ ಅವರು ಪ್ರಚೋದಕ ಪ್ಯಾಕೇಜ್ನ ತುರ್ತು ಅಗತ್ಯವನ್ನು ಒತ್ತಿ ಹೇಳಿದ್ದಾರೆ. “ನೀತಿ ಆಯೋಗವು 10 ಲಕ್ಷ ಕೋಟಿ ರೂ.ಗಳ ಉದ್ದೀಪನ ಪ್ಯಾಕೇಜ್ ಅನ್ನು ಪ್ರಸ್ತಾಪಿಸಿದೆ ಮತ್ತು ನಾವು 14 ಲಕ್ಷ ಕೋಟಿ ರೂ.ಗೆ ಪ್ಯಾಕೇಜ್ ಅನ್ನು ಸೂಚಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.
ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ (ಪಿಎಂಜಿಕೆವೈ) ಅಡಿಯಲ್ಲಿ ಸರ್ಕಾರದ ಆರಂಭಿಕ ಪ್ರತಿಕ್ರಿಯೆಯನ್ನು ಉದ್ಯಮ ಸಂಸ್ಥೆಗಳು ಅನುಮೋದಿಸಿದ್ದು, ಜೀವ ಮತ್ತು ಜೀವನೋಪಾಯ ಎರಡನ್ನೂ ಉಳಿಸುವ ದೊಡ್ಡ ಪ್ರಚೋದಕ ಪ್ಯಾಕೇಜ್ ಬಗ್ಗೆ ಅವರು ಸರ್ವಾನುಮತದಿಂದ ಒತ್ತಾಯಿಸಿದ್ದಾರೆ. ಮಾರ್ಚ್ 26 ರಂದು ಪಿಎಂಜಿಕೆವೈ ಅಡಿಯಲ್ಲಿ 1.7 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿತು, ಇದು ಜಿಡಿಪಿಯ ಸುಮಾರು 0.8%. ಬಡವರಿಗೆ ಮೂರು ತಿಂಗಳ ಪಡಿತರ ಮತ್ತು ಅಡುಗೆ ಅನಿಲವನ್ನು ಉಚಿತ ಮತ್ತು ನೇರ ನಗದು ವರ್ಗಾವಣೆಗೆ ದೀನದಲಿತ ಮಹಿಳೆಯರು, ವೃದ್ಧರು ಮತ್ತು ಅಂಗವಿಕಲರಿಗೆ ಒದಗಿಸುವ ಮೂಲಕ ಕಲ್ಯಾಣ ಪ್ಯಾಕೇಜ್ ಉದ್ದೇಶಿಸಲಾಗಿದೆ. ಅಂದಿನಿಂದ, ಉದ್ಯಮಕ್ಕಾಗಿ ಶೀಘ್ರದಲ್ಲೇ ಹಣಕಾಸಿನ ಪ್ಯಾಕೇಜ್ ಘೋಷಿಸಲಾಗುತ್ತದೆ ಎಂಬ ವರದಿಗಳು ಬಂದವು, ಆದರೆ ಇದುವರೆಗೆ ಯಾವುದೂ ಆಗಿಲ್ಲ.
ಬಡವರು ಮತ್ತು ಉದ್ಯಮ ಇಬ್ಬರಿಗೂ ವಿಶೇಷವಾಗಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್ಎಂಇ) ಸರ್ಕಾರದಿಂದ ತಕ್ಷಣದ ಸಬ್ಸ್ಟಾಂಟಿವ್ ಪ್ರಚೋದನೆ ಅಗತ್ಯವಾಗಿದೆ ಎಂದು ಸಿಐಐ ತಿಳಿಸಿದೆ.
“ಸ್ಪಷ್ಟವಾಗಿ, ಆರ್ಥಿಕತೆಯನ್ನು ರಕ್ಷಿಸಲು ಹಣಕಾಸಿನ ಪ್ರಚೋದಕ ಪ್ಯಾಕೇಜ್ ಘೋಷಿಸುವ ಸಮಯ ಮೀರಿದೆ. ಲಾಕ್ಡೌನ್ ಅಡಿಯಲ್ಲಿ ಕುಸಿತದಲ್ಲಿರುವ ಉದ್ಯಮಗಳಿಗೆ ಹಣಕಾಸಿನ ಪರಿಹಾರ ವಿಳಂಬವಾಗುವುದು ಅವರಿಗೆ ಚೇತರಿಸಿಕೊಳ್ಳಲು ಕಷ್ಟವಾಗುತ್ತದೆ ”ಎಂದು ಸಿಐಐ ಮಹಾನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ ಹೇಳಿದ್ದಾರೆ.
1.7 ಲಕ್ಷ ರೂ.ಗಳ ಪಿಎಂಜಿಕೆವೈ ಪ್ಯಾಕೇಜ್ ಜೊತೆಗೆ ಜಾಮ್ ಟ್ರಿನಿಟಿ (ಜನ-ಧನ್, ಆಧಾರ್ ಮತ್ತು ಮೊಬೈಲ್) ಮೂಲಕ ಬ್ಯಾಂಕ್ ಖಾತೆಗಳನ್ನು ಹೊಂದಿರುವ ಬಡವರಿಗೆ 2 ಲಕ್ಷ ಕೋಟಿ ರೂ.ಗಳ ನೇರ ನಗದು ವರ್ಗಾವಣೆಯನ್ನು ಅದು ಪ್ರಸ್ತಾಪಿಸಿದೆ. ವಲಸೆ ಕಾರ್ಮಿಕರನ್ನು ಉದ್ದೇಶಿತ ನಗದು ವರ್ಗಾವಣೆಯ ವ್ಯಾಪ್ತಿಯಲ್ಲಿ ಇರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಬ್ಯಾನರ್ಜಿ ಹೇಳಿದರು.
ಇದನ್ನೂ ಓದಿ: ದಿನಕ್ಕೆ ಕೇವಲ ಒಂದೇ ಹೊತ್ತು ಊಟ : ಅಹಮದಾಬಾದ್ನ ಹಲವರ ಪರಿಸ್ಥಿತಿ
Also read: Canada: Indian man loses his job over Islamophobic Tweet