Homeಮುಖಪುಟಎಸ್.ಎಲ್ ಭೈರಪ್ಪನವರು ಬ್ರಾಹ್ಮಣರಿಗೆ ಅಧಿಕಾರ ಬೇಕು ಎಂದು ನೇರವಾಗಿ ಹೇಳುವ ಧೈರ್ಯ ಇಲ್ಲದೇ ಇವೆಲ್ಲಾ ಹೇಳುತ್ತಿದ್ದಾರೆ

ಎಸ್.ಎಲ್ ಭೈರಪ್ಪನವರು ಬ್ರಾಹ್ಮಣರಿಗೆ ಅಧಿಕಾರ ಬೇಕು ಎಂದು ನೇರವಾಗಿ ಹೇಳುವ ಧೈರ್ಯ ಇಲ್ಲದೇ ಇವೆಲ್ಲಾ ಹೇಳುತ್ತಿದ್ದಾರೆ

- Advertisement -
- Advertisement -

| ಡಾ.ಅನುಸೂಯ ಕಾಂಬಳೆ |

ಸಂವಿಧಾನದಲ್ಲಿ ಧರ್ಮಶಾಸ್ತ್ರವಿಲ್ಲ, ಇನ್ನು ಮುಂದೆ ಹೆಂಡತಿಯಿಂದ ಸಹಿ ಪಡೆದುಕೊಂಡು ಮುಟ್ಟಬೇಕಾಗುತ್ತದೆ ಎಂಬ ಎಸ್.ಎಲ್.ಭೈರಪ್ಪನವರ ಮಾತುಗಳಿಗೆ ಹಲವು ಬರಹಗಾರ್ತಿಯರು ಪ್ರತಿಕ್ರಿಯಿಸಿದ್ದನ್ನು ಹಿಂದೆಯೇ ಪ್ರಕಟಿಸಿದ್ದೆವು. ಅದರ ಮುಂದುವರಿಕೆಯಾಗಿ ಪ್ರಾಧ್ಯಾಪಕಿ, ಕವಯತ್ರಿ ಮತ್ತು ಚಿಂತಕರಾದ ಡಾ.ಅನಸೂಯ ಕಾಂಬಳೆಯವರ ಬರಹ ಇಲ್ಲಿದೆ.

ಪರಂಪರೆಯ ಪ್ರಜ್ಞೆ ಮತ್ತು ರಾಷ್ಟ್ರೀಯತೆ ಎರಡು ಭಿನ್ನವಾದವು. ಭೈರಪ್ಪನವರ ಮಾತಿಗೆ ಪ್ರತಿಕ್ರಿಯಿಸುವುದು ಅಂತ ವಿಶೇಷ ಅನಿಸುವುದಿಲ್ಲ. ಧರ್ಮಶಾಸ್ತ್ರವೇ ರಾಷ್ಟ್ರೀಯ ಗ್ರಂಥವಾಗಬೇಕೆಂದು ಏಕೆ ಹೇಳುತ್ತಿದ್ದಾರೆ ಎನ್ನುವುದು ಸಾಮಾನ್ಯರಿಗೂ ತಿಳಿಯುವ ಸಂಗತಿ. ಅವರು ಹೇಳುವ ಧರ್ಮ ರಾಷ್ಟ್ರವನ್ನು ಪ್ರತಿನಿಧಿಸುವ ಧರ್ಮವಲ್ಲ. ಕೇವಲ ಮೂರು ಪ್ರತಿಶತದಷ್ಟು ಜನರಿಗೆ ಅನ್ವಯಿಸುವುದು ಮತ್ತು ಅಧಿಕಾರವನ್ನು ಅವರಿಗೆ ನಿಗದಿಗೊಳಿಸುವರಿಂದ ಹೇಳುತ್ತಿರುವ ರಾಜಕಾರಣದ ಭಾಗವೇ ಆಗಿದೆ ಹೊರತು ಪರಂಪರೆಯ ಪ್ರಶ್ನೆ ಅಲ್ಲ. ಬ್ರಾಹ್ಮಣರಿಗೆ ಅಧಿಕಾರ ಇರಬೇಕು, ಭಾರತದ ಬಹುಸಂಖ್ಯಾತರು ಸೇವಕರು ಆಗಿರಬೇಕು ಎಂದು ಹೇಳಲು ಧೈರ್ಯವಿಲ್ಲದೆ ಪರಂಪರೆ ಹೆಸರಿನ ಸಂಕೇತದ ಮೂಲಕ ಸೂಚಿಸುತ್ತಿದ್ದಾರೆ.
ಭೈರಪ್ಪನವರು ಹೇಳುವ ಧರ್ಮ ಭಾರತೀಯರ ಭಾವೈಕ್ಯತೆಯನ್ನು ಹೊಂದಿಲ್ಲ. ವರ್ಣ, ಜಾತಿ, ಲಿಂಗ ನೆಲೆಯಲ್ಲಿ ಅಧಿಕಾರದ ವಿಭಜನೆ ಮಾಡುತ್ತಾ ಮನುಷ್ಯ ಮನುಷ್ಯರ ನಡುವೆ ಬೇಧ ಸಂಸ್ಕೃತಿಯನ್ನು ಬಿತ್ತುತ್ತದೆ. ಮೇಲು – ಕೀಳು ಎನ್ನುವ ಶ್ರೇಣೀಕರಣದ ಮೂಲಕ ಒಡೆದು ಆಳುವ ನೀತಿಯನ್ನು ಅನುಸರಿಸುತ್ತವೆ. ಇದೇ ಪರಂಪರೆ ಅನ್ನುವುದಾದರೆ ಬೈರಪ್ಪನವರು ಹೇಳುತ್ತಿರುವುದು ಏನನ್ನು? ನಮ್ಮ ಸಂವಿಧಾನ ವಿಶ್ವ ಮಾನವ ತತ್ವಗಳನ್ನು ಹೊಂದಿದೆ. ಅದರ ಪ್ರಸ್ತಾವನೆಯಲ್ಲಿ “ನಾವು” ಅನ್ನುವ ಪದವೇ ಭಾರತೀಯರ ಭವ್ಯ ಪರಂಪರೆ ಮತ್ತು ಸಾಂಸ್ಕೃತಿಕ ಅನನ್ಯತೆಯನ್ನು ಹೇಳುತ್ತಿಲ್ಲವೆ? ನಮ್ಮ ಸಂವಿಧಾನದ ಆತ್ಮವಾದ ಸಮಾನತೆ, ಸ್ವಾತಂತ್ರ, ಭ್ರಾತೃತ್ವ, ಸಾಮಾಜಿಕ ನ್ಯಾಯದ ಪರಿಕಲ್ಪನೆಗಳು ಮಾನವನಲ್ಲಿ ಇರಬೇಕಾದ ಮೂಲಭೂತ ಗುಣಗಳನ್ನು ಬೇರೆ ಬೇರೆ ದೇಶಗಳಿಂದ ಎರವಲು ತಂದವುಗಳೆಂದು ಹೇಳಲಾದೀತೆ? ನಮ್ಮ ಸಂವಿಧಾನದಲ್ಲಿ ಅಂತರ್ಗತವಾದ ಮಾನವತಾವಾದವು ಭೈರಪ್ಪನವರು ಹೇಳುವ ಸಾಂಸ್ಥಿಕ ಧರ್ಮದಲ್ಲಿ ಇದೆಯೇ? ಮನುಷ್ಯನ ಸ್ವಾವಲಂಬನೆ, ಸ್ವಾಯತ್ತತೆಯನ್ನು ನಾಶಮಾಡುವ ಆತನ ಸಹಜ ಶಕ್ತಿಯನ್ನು ನಾಶ ಮಾಡಿ ನಿಷ್ಕ್ರಿಯಗೊಳಿಸುವ, ಜನರನ್ನು ಸದಾ ಭಯ ಮತ್ತು ಆತಂಕದಲ್ಲಿ ಇಡುವ ಮೌಢ್ಯವನ್ನು ಬಿತ್ತುತ್ತ ಅಧಿಕಾರ ಮತ್ತು ಆದಾಯದ ಮೂಲಗಳಿಂದ ವಂಚಿಸುವ ಭಾರತದ ಬಹುಜನ ಸಮುದಾಯವನ್ನು ಸೇವಕರನ್ನಾಗಿಸುವ ಧರ್ಮಶಾಸ್ತ್ರ ರಾಷ್ಟ್ರೀಯ ಗ್ರಂಥವಾದರೆ ಭಾರತೀಯತೆಯ, ಪ್ರಜಾಪ್ರಭುತ್ವದ ನಾಶವೇ ಆಗುತ್ತದೆ. ಬೈರಪ್ಪನವರ ಧರ್ಮಶಾಸ್ತ್ರ ಗ್ರಂಥವು ದೈವ ಕೇಂದ್ರಿತವಾದುದೇ ಹೊರತು ಮಾನವ ಕೇಂದ್ರಿತ ಅಲ್ಲ. ನಮ್ಮ ಸಂವಿಧಾನವು ಮನುಷ್ಯನ ಮೂಲಕ ನೋಡುವ ಮಾನವತಾವಾದವನ್ನು ಕಟ್ಟಿಕೊಡುವ ಮೂಲಕ ಮನುಷ್ಯನಿಗೆ ಅಪಾರ ಗೌರವ- ಘನತೆಯನ್ನು ತಂದು ಕೊಟ್ಟಿದೆ. ಅದಕ್ಕಾಗಿಯೇ ಭೈರಪ್ಪ ಮತ್ತು ಭೈರಪ್ಪರಂತ ಮೂಲಭೂತವಾದಿಗಳು ಪರಂಪರೆಯ ಹೆಸರಿನಲ್ಲಿ ಅದನ್ನು ವಿರೋಧಿಸುತ್ತಿದ್ದಾರೆ. ಉಗ್ರ ಮಹಿಳಾ ವಿರೋಧಿಯಾದ ಭೈರಪ್ಪನವರು ಮಹಿಳೆಯ ದೇಹದ ಮೇಲೆ ಪುರುಷಾಧಿಕಾರವನ್ನು ಸ್ಥಾಪಿಸಿದ್ದ ಮನುಸ್ಮೃತಿ ಬೆಂಬಲಿಸುತ್ತಿದ್ದಾರೆ. ಸಂವಿಧಾನವು ಮಹಿಳೆಗೆ ಕಾನೂನಾತ್ಮಕ ಮತ್ತು ಸಂವಿಧಾನಾತ್ಮಕ ಹಕ್ಕುಗಳನ್ನು ನೀಡುವ ಮೂಲಕ ಅವಳಿಗೆ ಗೌರವದ ಬದುಕು ನೀಡಿದೆ. ತಮ್ಮ ಬರಹ ಮತ್ತು ಮಾತಿನ ಮೂಲಕವೇ ಭೈರಪ್ಪನವರು ಮಹಿಳೆಯರನ್ನು ಅವಮಾನಿಸುವ ಮೂಲಕ ಅವಳ ಹಕ್ಕು ಮತ್ತು ಅಧಿಕಾರವನ್ನು ನಿರಾಕರಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...