Homeಮುಖಪುಟಮಹರಾಷ್ಟ್ರದ ಚುನಾವಣಾ ಫಲಿತಾಂಶದ ಸುತ್ತ ಒಂದು ನೋಟ

ಮಹರಾಷ್ಟ್ರದ ಚುನಾವಣಾ ಫಲಿತಾಂಶದ ಸುತ್ತ ಒಂದು ನೋಟ

- Advertisement -
- Advertisement -
ಶ್ರಿರಂಜನ್ ಅವತೆ,  ಸಾವಿತ್ರಿಬಾಯಿ ಫುಲೆ ಯುನಿವರ್ಸಿಟಿ, ಪುಣೆ

ಇಂಗ್ಲಿಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

ಮಹಾರಾಷ್ಟ್ರದ ನಾಲ್ಕನೇ ಮತ್ತು ಕೊನೆಯ ಹಂತದ ಮತದಾನ ಏಪ್ರಿಲ್ 29ರಂದು ನಡೆಯಿತು. 48 ಕ್ಷೇತ್ರಗಳಿರುವ ಇಲ್ಲಿ 2014ರಲ್ಲಿ 60.32% ಮತದಾನ ಆಗಿದ್ದರೆ ಈ ಸಲ 60.68% ಮತದಾನ ಆಯಿತು. ಮತದಾನದ ಪ್ರಮಾಣದಲ್ಲಿ ಹೆಚ್ಚಿನ ಬದಲಾವಣೆ ಇಲ್ಲದಿದ್ದರೂ ಮತದಾನದ ಮಾದರಿ ಗಮನಾರ್ಹವಾಗಿ ಬದಲಾಗಿದೆ. 2014ರಲ್ಲಿ ಹಿಂದಿ ಹೃದಯಭಾಗದಲ್ಲಿ ಇದ್ದ ಮೋದಿ ಅಲೆ ಮಹಾರಾಷ್ಟ್ರದಲ್ಲೂ ಇತ್ತು. ಈಗ ಆ ಅಲೆ ಕಣ್ಮರೆಯಾಗಿದೆ. ಹಾಗೂ ಮೋದಿಯ ಜನಪ್ರಿಯತೆಯ ಹೊರತಾಗಿಯೂ ಕೇಂದ್ರದ ಪ್ರಬಲ ನಿರೂಪಣೆಯ ಶಕ್ತಿ ಕುಂದಿದೆ. ಹಾಗಾಗಿ, ಈ ಚುನಾವಣೆಗಳಲ್ಲಿ ಸ್ಥಳೀಯ ಲೆಕ್ಕಾಚಾರಗಳು ನಿರ್ಣಾಯಕವಾಗಿವೆ. ಪ್ರಚಾರದುದ್ದಕ್ಕೂ ರಾಜಕೀಯ ಪಕ್ಷಗಳು ಅಳವಡಿಸಿದ ತಂತ್ರಗಾರಿಕೆಯಿಂದ ಬದಲಾದ ಮೂಡ್ ಸ್ಪಷ್ಟವಾಗಿತ್ತು.

ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರ
ಮಹಾರಾಷ್ಟ್ರದ ರಾಜಕಾರಣದಲ್ಲಿ ನಾಲ್ಕು ಪ್ರಮುಖ ಪಕ್ಷಗಳಿದ್ದರೂ, ಸ್ಪರ್ಧೆ ಇರುವುದು ಕಾಂಗ್ರೆಸ್-ಎನ್‍ಸಿಪಿ ಕೂಟ ಮತ್ತು ಶಿವಸೇನೆ-ಬಿಜೆಪಿಯ ಮಧ್ಯೆ. ಮೂರನೇ ತುದಿಯಲ್ಲಿ ಪ್ರಕಾಶ್ ಅಂಬೇಡ್ಕರ್ ಅವರ ಭಾರತೀಯ ರಿಪಬ್ಲಿಕ್ ಪಾರ್ಟಿ ಮತ್ತು ಅಸಾದುದ್ದಿನ್ ಒವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್ ಮುಸ್ಲಿಮೀನ್ ಮಧ್ಯದ ಏರ್ಪಟ್ಟ ಮೈತ್ರಿಕೂಟವಾದ ವಂಚಿತ್ ಬಹುಜನ್ ಅಘಾಡಿ (ವಿಬಿಏ) ಇದೆ. ಕಾಂಗ್ರೆಸ್ ಮತ್ತು ಬಿಜೆಪಿ ಇವರೆಡರ ವಿರುದ್ಧ ನಮ್ಮ ಹೋರಾಟ ಎಂದು ವಿಬಿಏ ಹೇಳಿಕೊಂಡರೂ ಯುಪಿಏ ಮತ್ತು ವಿಬಿಏದ ಮತದಾರರ ಬೇಸ್ ಕೆಲವು ಕ್ಷೇತ್ರಗಳಲ್ಲಿ ವಿಭಜಿತವಾಗುವ ಸಾಧ್ಯತೆ ಇರುವುದರಿಂದ ಯುಪಿಏಗೆ ಈ ಹೊಸ ಮೈತ್ರಿಕೂಟದಿಂದ ತೊಂದರೆ ಆಗಬಹುದಾಗಿದೆ.
ಬಿಜೆಪಿ ಈ ಎರಡು ತಂತ್ರಗಾರಿಕೆಗಳನ್ನು ಬಳಸುತ್ತಿದೆ:

ಮೊದಲನೇಯದಾಗಿ, ಸ್ಥಳೀಯ ಪ್ರಭಾವಿ ಮತ್ತು ಪ್ರಮುಖ ನಾಯಕರನ್ನು ಹೇಗಾದರೂ ಮಾಡಿ ಬಿಜೆಪಿ ತನ್ನ ತೆಕ್ಕೆಗೆ ಎಳೆದುಕೊಂಡಿದೆ. ಅಹ್ಮದ್‍ನಗರದಿಂದ ವಿಖೆ ಪಾಟಿಲ (ರಾಧಾಕೃಷ್ಣ ವಿಖೆ ಪಾಟೀಲ ಅವರು ವಿರೋಧ ಪಕ್ಷದ ನಾಯಕಾಗಿದ್ದರು) ಮತ್ತು ಮಾಧಾದಿಂದ ಮೊಹಿತೆ ಪಾಟೀಲ್ ಅವರನ್ನು ಯಶಸ್ವಿಯಾಗಿ ಬಿಜೆಪಿಗೆ ಬರಮಾಡಿಕೊಂಡರು.

ಎರಡನೇಯದಾಗಿ, ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಮತ್ತು ಅವರ ತಂಡ ಫುಲ್ವಾಮಾ ಮತ್ತು ಬಾಲಾಕೋಟ್ ಘಟನೆಗಳನ್ನು ಬಳಸಿ ರಾಷ್ಟ್ರೀಯ ಸುರಕ್ಷತೆಯ ವಿಷಯದ ಮೇಲೆ ತೀವ್ರವಾಗಿ ಪ್ರಚಾರ ಮಾಡಿದ್ದಾರೆ. ಪ್ರಧಾನಿ ಮೋದಿ ಕೂಡ ಇದೇ ವಿಷಯಗಳ ಮೇಲೆ ಪ್ರಚಾರ ಮಾಡಿ ನಿರುದ್ಯೋಗ ಮತ್ತು ಕೃಷಿ ಬಿಕ್ಕಟ್ಟನ್ನು ಕಡೆಗಣಿಸಿದರು. ಮತ್ತೊಂದು ಕುತುಹೂಲಕಾರಿ ವಿಷಯವೇನೆಂದರೆ, ಈ ಸಲ ಗುಜರಾತಿನ ಡೆವಲಪ್‍ಮೆಂಟ್ ಮಾಡೆಲ್ ಬಗ್ಗೆ ಮತ್ತು ಅಭಿವೃದ್ಧಿಯ ವಿಷಯಗಳು ಮೋದಿಯ ಭಾಷಣದಲ್ಲಿ ಕಾಣಿಸಿಕೊಳ್ಳಲಿಲ್ಲ. ಅದರ ಬದಲಾಗಿ, ಜಾತಿ ಮತ್ತು ಧರ್ಮದ ಬಗ್ಗೆ ಅವರ ಮಾತುಗಳು ಕೇಂದ್ರೀಕೃತವಾಗಿದ್ದವು.

ಭೋಪಾಲ್‍ದಿಂದ ಪ್ರಗ್ಯಾ ಠಾಕುರ್ ಅವರು ಸ್ಪರ್ಧಿಸುವುದು ತಿಳಿದ ನಂತರ ಧಾರ್ಮಿಕ ಧೃವೀಕರಣ ತಂತ್ರಗಾರಿಕೆ ಇನ್ನಷ್ಟು ಸ್ಪಷ್ಟವಾಯಿತು. ಎಲ್ಲರಿಗೂ ಗೊತ್ತಿರುವ ಹಾಗೆ ಪ್ರಗ್ಯಾ ಠಾಕುರ್ ಮಾಲೆಗಾಂವ್ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಲಾತೂರ್‍ನಲ್ಲಿ ಮಾತನಾಡುತ್ತ ಪ್ರಧಾನಿ ಹೇಳಿದ್ದು, “ಮೊದಲ ಬಾರಿ ಮತದಾನ ಮಾಡುವವರಿಗೆ ನಾನು ಕೇಳುವುದೇನೆಂದರೆ, ಬಾಲಾಕೋಟ್ ಏರ್‍ಸ್ಟ್ರೈಕ್‍ನ್ನು ಮಾಡಿದ ಶೂರಸೈನಿಕರಿಗೆ ನೀವು ನಿಮ್ಮ ಮತ ಸಮರ್ಪಿಸಬಲ್ಲಿರಾ? ಫುಲ್ವಾಮಾ ದುರಂತದಲ್ಲಿ ಮಡಿದ ಶೂರ ಹುತಾತ್ಮರ ಹೆಸರಲ್ಲಿ ನಿಮ್ಮ ಮೊದಲ ಮತ ಹಾಕುವುರಾ?” ಆದರೆ 2014ರಂತೆ ಜನರನ್ನು ತನ್ನ ªಮಾತುಗಳಿಂದ ಮೋದಿಯವರಿಗೆ ಹುರುಪು ತುಂಬಲು ಆಗಲಿಲ್ಲ ಅನ್ನುವುದು ನಿಜ.

ಎನ್‍ಡಿಏ ಮುಗ್ಗರಿಸುತ್ತಿರುವ ಸಂದರ್ಭದಲ್ಲಿಯೇ ಯುಪಿಏ ಕೂಡ ದಿಶಾಹೀನವೇ ಆಗಿತ್ತು. ಕಾಂಗ್ರೆಸ್ ಪಕ್ಷವು ಆಂತರಿಕ ಕಲಹಗಳನ್ನು ಎದುರಿಸುತ್ತಿತ್ತು ಹಾಗೂ ಅವುಗಳನ್ನು ನಿರ್ವಹಿಸಿ, ಬಿಜೆಪಿಯನ್ನು ಪ್ರಬಲವಾಗಿ ಎದುರಿಸಲು ಆಗಲಿಲ್ಲ. ಪಶ್ಚಿಮ ಮಹಾರಾಷ್ಟ್ರದಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಎನ್‍ಸಿಪಿಯಿಂದ ಕಣಕ್ಕಿಳಿಸಿದ ಶರದ್ ಪವಾರ್ ಅವರು ಮರಳಿ ತನ್ನ ಶಕ್ತಿಯನ್ನು ಪಡೆಯಬಹುದು ಎಂದು ಅಂದಾಜಿಸಲಾಗುತ್ತಿದೆ. ಇತ್ತ ಬಿಜೆಪಿಯ ಮೈತ್ರಿಪಕ್ಷವಾದ ಶಿವಸೇನೆ ಮತದಾರರ ವಿಶ್ವಾಸವನ್ನು ಗಳಿಸುವಲ್ಲಿ ವಿಫಲಾಗುತ್ತಿದೆ ಎನ್ನುವ ಸಂಕೇತಗಳಿವೆ ಹಾಗೂ ಕಳೆದ ನಾಲ್ಕೂವರೆ ವರ್ಷಗಳಿಂದ ಮೋದಿ-ಶಾ ಮತ್ತು ಬಿಜೆಪಿಯನ್ನು ಕಟುವಾಗಿ ಟೀಕಿಸುತ್ತಿದ್ದ ಶಿವಸೇನೆ ಚುನಾವಣೆಯ ಸಂದರ್ಭದಲ್ಲಿ ಮೈತ್ರಿ ಮಾಡಿಕೊಂಡಿರುವುದರಿಂದ ತನ್ನ ಸೀಟುಗಳನ್ನು ಕಳೆದುಕೊಳ್ಳಬಹುದು ಎನ್ನುವ ಸಂಕೇತಗಳಿವೆ.

ರಾಜ್ ಠಾಕ್ರೆ ಫ್ಯಾಕ್ಟರ್
ಈ ಸಲದ ಚುನಾವಣಾ ಜ್ವರ ಕಾವೇರದೇ, ತುಂಬಾ ಆಯಾಸಕರವಾಗಿದ್ದ ಸಮಯದಲ್ಲಿ, ಮಹಾರಾಷ್ಟ್ರ ನವನಿರ್ಮಾಣ ಸೇನೆಯ(ಎಮ್‍ಎನ್‍ಎಸ್) ನಾಯಕ ರಾಜ್ ಠಾಕ್ರೆಯ ಪ್ರವೇಶದಿಂದ ವಿರೋಧಪಕ್ಷಕ್ಕೆ ಬಲತುಂಬಿತಂತಾಯಿತು. ಎಮ್‍ಎನ್‍ಎಸ್ ತನ್ನ ಪಕ್ಷದಿಂದ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲ ಹಾಗೂ ರಾಜ್ ಠಾಕ್ರೆಯವರು ಮೋದಿ-ಶಾ ವಿರುದ್ಧ ಗಟ್ಟಿಯಾಗಿ ಪ್ರಚಾರ ಮಾಡಿದರು. ಅವರ ಭಾಷಣಗಳು ತಮ್ಮ ವಾಕ್‍ಚಾತುರ್ಯದೊಂದಿಗೆ ಮೋದಿ-ಶಾ ಅವರ ಆಶ್ವಾಸನೆಗಳನ್ನು ಪರಿಶೀಲಿಸುವ ವೀಡಿಯೋ ಪ್ರೆಸೆಂಟೇಷನ್ ಕೂಡ ಹೊಂದಿರುತ್ತಿದ್ದವು. ರಾಜ್ ಠಾಕ್ರೆಯ ರ್ಯಾಲಿಗಳಲ್ಲಿ ಹಿಂದೆಂದೂ ಕಾಣದಷ್ಟು ಜನರು ಭಾಗವಹಿಸಿದರು ಹಾಗೂ ರಾಜ್ ಠಾಕ್ರೆಯ ಪ್ರಾಬಲ್ಯವಿರುವ ಮುಂಬಯಿ ನಾಶಿಕ್ ಪ್ರದೇಶದಲ್ಲಿ ಮತದಾರರನ್ನು ಬಿಜಪಿ ವಿರುದ್ಧ ಮತಚಲಾಯಿಸುವಂತೆ ಓಲೈಕೆಯಾಗಿರುವ ಸಾಧ್ಯತೆ ಇದೆ. ರಾಜ್ ಠಾಕ್ರೆಯ ಭಾಷಣದ ವಿಡಿಯೋಗಳು ಮತ್ತು ಅವರು ತೋರಿಸುತ್ತಿದ್ದ ವಿಡಿಯೋಗಳನ್ನು ಮಹಾರಾಷ್ಟ್ರದ ಹೊರಗೆ ಸಬ್‍ಟೈಟಲ್‍ಗಳನ್ನು ಹಾಕಿ ತೋರಿಸಲಾಗುತ್ತಿದೆ ಹಾಗು ಅದರಿಂದ ಎನ್‍ಡಿಏ ಹುಟ್ಟುಹಾಕಿದ ರಾಷ್ಟ್ರೀಯ ಸುರಕ್ಷತೆಯ ಕಥನಕ್ಕೆ ವಿರುದ್ಧದ ಕಥನವನ್ನು ಸೃಷ್ಟಿಸುವಂತೆ ಆಗಿದೆ.

ವಲಯಾವಾರು ಟ್ರೆಂಡ್‍ಗಳು
ಮಹಾರಾಷ್ಟ್ರವು ಐದು ಪ್ರಮುಖ ವಲಯಗಳನ್ನು ಹೊಂದಿದೆ; ವಿದರ್ಭ (10 ಲೋಕಸಭೆ ಕ್ಷೇತ್ರಗಳು), ಮರಾಠವಾಡಾ (8), ಉತ್ತರ ಮಹಾರಾಷ್ಟ್ರ(6), ಮುಂಬಯಿ-ಕೊಂಕಣ್(12) ಹಾಗೂ ಕೆಂದ್ರ/ಪಶ್ಚಿಮ ಮಹಾರಾಷ್ಟ್ರ(12), ಹೀಗೆ ಒಟ್ಟಾರೆ 48 ಲೋಕಸಭೆ ಕ್ಷೇತ್ರಗಳು. ವಿದರ್ಭವು ಬಿಜೆಪಿಯ ಭದ್ರಕೋಟೆಯಾಗಿರುವುದರಿಂದ 2014ರಲ್ಲಿ ಮೋದಿ ಪ್ರಧಾನಿ ಆದ ನಂತರ ಮಹಾರಾಷ್ಟ್ರದ ಅಧಿಕಾರ ಕೇಂದ್ರವು ಪಶ್ಚಿಮ ಮಹಾರಾಷ್ಟ್ರದಿಂದ ವಿದರ್ಭಕ್ಕೆ ಸ್ಥಳಾಂತರಗೊಂಡಿತು. ಈ ಸಲ ಮೋದಿ ರ್ಯಾಲಿಗಳಲ್ಲಿ ಕಂಡುಬಂದ ನೀರಸ ಪ್ರತಿಕ್ರಿಯೆಯಿಂದ ಬಿಜೆಪಿ ಆತಂಕೊಂಡಿದೆ. 2014ರ ಚುನಾವಣೆಯಲ್ಲಿ ವಿದರ್ಭದ ಎಲ್ಲಾ ಸೀಟುಗಳಲ್ಲೂ ಎನ್‍ಡಿಏ ಗೆದ್ದಿತ್ತು. ಈ ವಲಯದ ಫಲಿತಾಂಶಗಳು ಕೃಷಿ ಬಿಕ್ಕಟ್ಟಿನ ಬಗ್ಗೆ ಬಿಜೆಪಿಗೆ ಒಂದು ಲಿಟ್ಮಸ್ ಟೆಸ್ಟ್ ಆಗಿ ಪರಿಮಣಿಸಲಿವೆ.

ಅದರಂತೆಯೇ, ರಾಜ್ಯದಲ್ಲಿ ಬರ ಮತ್ತು ಕೃಷಿ ಬಿಕ್ಕಟ್ಟಿನಿಂದ ಅತ್ಯಂತ ಹೆಚ್ಚು ಪೀಡಿತವಾದ ಮರಾಠವಾಡದಲ್ಲೂ ಏನಾಗುವುದೆನ್ನುವುದೂ ಬಿಜೆಪಿಯ ಆಡಳಿತದ ಪರೀಕ್ಷೆಯಾಗಿದೆ. ಉತ್ತರ ಮಹಾರಾಷ್ಟ್ರದಲ್ಲೂ ರೈತರು ಮತ ಚಲಾಯಿಸುವಾಗ ಕೃಷಿ ಬಿಕ್ಕಟ್ಟೇ ಪ್ರಧಾನ ಪಾತ್ರ ವಹಿಸಲಿದೆ. ಇದರ ಹೊರತಾಗಿ ಈ ಪ್ರದೇಶದಲ್ಲಿ ಅರಣ್ಯ ಹಕ್ಕು ಕಾಯಿದೆ ಹಾಗೂ ಆದಿವಾಸಿ ಮತ್ತು ಧನಗರ್ (ಕುರುಬರು) ಅವರ ನಡುವಿನ ಸಂಘರ್ಷದ ವಿಷಯಗಳೂ ನಿರ್ಣಾಯಕ ಪಾತ್ರ ವಹಿಸಲಿವೆ. ಮರಾಠರಿಗೆ 16% ಮೀಸಲಾತಿ ನೀಡುವ ಬಿಜೆಪಿಯ ನಿರ್ಣಯದಿಂದ ಇಲ್ಲಿಯ ಓಬಿಸಿ ಜನರು ಮುನಿಸಿಕೊಂಡಿದ್ದಾರೆ, ಈ ಅಂಶ ಕೇಂದ್ರ ಮತ್ತು ಪಶ್ಚಿಮ ಮಹಾರಾಷ್ಟ್ರದಲ್ಲಿ ನಿರ್ಣಾಯಕವಾಗಬಹುದಾಗಿದೆ. ಎನ್‍ಸಿಪಿಯ ಛಗನ್ ಭುಜಬಲ್ ಅವರು ಒಬಿಸಿ ಸಮುದಾಯದ ಮುಖವಾಗಿದ್ದು, ಈ ಸನ್ನಿವೇಶವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಸಾಧ್ಯವಾಷ್ಟು ಪ್ರಯತ್ನ ಮಾಡಿದ್ದಾರೆ. ನಿರುದ್ಯೋಗದ ಸಮಸ್ಯೆ ಎಲ್ಲಾ ವಲಯಗಳಲ್ಲೂ ಇದ್ದೇ ಇದೆ. ನಗರಪ್ರದೇಶದ ಕ್ಷೇತ್ರಗಳ ಹೆಚ್ಚಿನ ಭಾಗ ಬಿಜೆಪಿಗೆ ಬೆಂಬಲ ನೀಡಿದಂತೆ ಕಂಡುಬಂದರೂ, ಗ್ರಾಮೀಣ ಭಾಗದ ಮತದಾರ ಬಿಜೆಪಿಯಿಂದ ಬಹಳ ದೂರ ಸರಿದಿದ್ದು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್‍ಗೆ ಗಟ್ಟಿಯಾದ ನಾಯಕತ್ವ ಇಲ್ಲದಿರುವುದು ಹಾಗೂ ಮೈತ್ರಿ ಮಾಡಿಕೊಳ್ಳುವಲ್ಲಿ ಇತರ ಪಕ್ಷಗಳೊಂದಿಗೆ ಸರಿಯಾಗಿ ಕೋ-ಆರ್ಡಿನೇಟ್ ಮಾಡುವಲ್ಲಿ ಸಫಲಾಗಿಲ್ಲ ಹಾಗಾಗಿ ಮಹಾರಾಷ್ಟ್ರದ ರಾಜಕೀಯದಲ್ಲಿ ಶರದ್ ಪವಾರ್ ಮತ್ತು ಅವರ ಎನ್‍ಸಿಪಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಮುನ್ನೋಟ
ಸಂಖ್ಯೆಗಳನ್ನಷ್ಟೇ ನೋಡಬೇಕೆಂದರೆ, ಬಿಜೆಪಿ-ಶಿವಸೇನೆಯ ಸಂಖ್ಯೆ 30ಕ್ಕಿಂತ ಕೆಳಗಿಳಿಯಲಿದೆ ಹಾಗೂ ಕಾಂಗ್ರೆಸ್-ಎನ್‍ಸಿಪಿ 20ನ್ನು ಕ್ರಾಸ್ ಮಾಡಬಹುದಾಗಿದೆ. ಈ ಚುನಾವಣೆಯಲ್ಲಿ ಜನರ ಪ್ರಮುಖ ವಿಷಯಗಳು ಹಿನ್ನೆಲೆಗೆ ಸರಿದಿದ್ದಂತೂ ಸ್ಪಷ್ಟ. ಬಿಜೆಪಿ-ಶಿವಸೇನೆ ಮೈತ್ರಿಕೂಟವು ಹಿಂದುತ್ವ ಮತ್ತು ರಾಷ್ಟ್ರೀಯ ಸುರಕ್ಷತೆಯ ಮೇಲೆಯೇ ತನ್ನ ರಾಜಕೀಯವನ್ನು ಕೇಂದ್ರೀಕರಿಸಿದರೆ, ಕಾಂಗ್ರೆಸ್-ಎನ್‍ಸಿಪಿ ಕೂಟವು, ಎಮ್‍ಎನ್‍ಎಸ್‍ನ ಸಹಾಯದೊಂದಿಗೆ ನಿರುದ್ಯೋಗ ಮತ್ತು ಕೃಷಿ ಬಿಕ್ಕಟ್ಟನ್ನು ಮುನ್ನೆಲೆಗೆ ತರಲು ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಇಷ್ಟೆಲ್ಲಾ ಹೇಳಿದ ನಂತರವೂ, ಜನಾದೇಶದ ಮತ್ತು ರಾಜಕೀಯ ವಾತಾವರಣದ ಸ್ಪಷ್ಟ ಸೂಚನೆಗಳು ಕಾಣುತ್ತಿಲ್ಲವಾದುದರಿಂದ ಮಹಾರಾಷ್ಟ್ರದ ಭವಿಷ್ಯ ನಿಂತಿರುವುದು ಅಸ್ಥಿರವಾದ ನೆಲದ ಮೇಲೆಯೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...