Homeಮುಖಪುಟಎಸ್.ಎಲ್ ಭೈರಪ್ಪನವರು ಬ್ರಾಹ್ಮಣರಿಗೆ ಅಧಿಕಾರ ಬೇಕು ಎಂದು ನೇರವಾಗಿ ಹೇಳುವ ಧೈರ್ಯ ಇಲ್ಲದೇ ಇವೆಲ್ಲಾ ಹೇಳುತ್ತಿದ್ದಾರೆ

ಎಸ್.ಎಲ್ ಭೈರಪ್ಪನವರು ಬ್ರಾಹ್ಮಣರಿಗೆ ಅಧಿಕಾರ ಬೇಕು ಎಂದು ನೇರವಾಗಿ ಹೇಳುವ ಧೈರ್ಯ ಇಲ್ಲದೇ ಇವೆಲ್ಲಾ ಹೇಳುತ್ತಿದ್ದಾರೆ

- Advertisement -
- Advertisement -

| ಡಾ.ಅನುಸೂಯ ಕಾಂಬಳೆ |

ಸಂವಿಧಾನದಲ್ಲಿ ಧರ್ಮಶಾಸ್ತ್ರವಿಲ್ಲ, ಇನ್ನು ಮುಂದೆ ಹೆಂಡತಿಯಿಂದ ಸಹಿ ಪಡೆದುಕೊಂಡು ಮುಟ್ಟಬೇಕಾಗುತ್ತದೆ ಎಂಬ ಎಸ್.ಎಲ್.ಭೈರಪ್ಪನವರ ಮಾತುಗಳಿಗೆ ಹಲವು ಬರಹಗಾರ್ತಿಯರು ಪ್ರತಿಕ್ರಿಯಿಸಿದ್ದನ್ನು ಹಿಂದೆಯೇ ಪ್ರಕಟಿಸಿದ್ದೆವು. ಅದರ ಮುಂದುವರಿಕೆಯಾಗಿ ಪ್ರಾಧ್ಯಾಪಕಿ, ಕವಯತ್ರಿ ಮತ್ತು ಚಿಂತಕರಾದ ಡಾ.ಅನಸೂಯ ಕಾಂಬಳೆಯವರ ಬರಹ ಇಲ್ಲಿದೆ.

ಪರಂಪರೆಯ ಪ್ರಜ್ಞೆ ಮತ್ತು ರಾಷ್ಟ್ರೀಯತೆ ಎರಡು ಭಿನ್ನವಾದವು. ಭೈರಪ್ಪನವರ ಮಾತಿಗೆ ಪ್ರತಿಕ್ರಿಯಿಸುವುದು ಅಂತ ವಿಶೇಷ ಅನಿಸುವುದಿಲ್ಲ. ಧರ್ಮಶಾಸ್ತ್ರವೇ ರಾಷ್ಟ್ರೀಯ ಗ್ರಂಥವಾಗಬೇಕೆಂದು ಏಕೆ ಹೇಳುತ್ತಿದ್ದಾರೆ ಎನ್ನುವುದು ಸಾಮಾನ್ಯರಿಗೂ ತಿಳಿಯುವ ಸಂಗತಿ. ಅವರು ಹೇಳುವ ಧರ್ಮ ರಾಷ್ಟ್ರವನ್ನು ಪ್ರತಿನಿಧಿಸುವ ಧರ್ಮವಲ್ಲ. ಕೇವಲ ಮೂರು ಪ್ರತಿಶತದಷ್ಟು ಜನರಿಗೆ ಅನ್ವಯಿಸುವುದು ಮತ್ತು ಅಧಿಕಾರವನ್ನು ಅವರಿಗೆ ನಿಗದಿಗೊಳಿಸುವರಿಂದ ಹೇಳುತ್ತಿರುವ ರಾಜಕಾರಣದ ಭಾಗವೇ ಆಗಿದೆ ಹೊರತು ಪರಂಪರೆಯ ಪ್ರಶ್ನೆ ಅಲ್ಲ. ಬ್ರಾಹ್ಮಣರಿಗೆ ಅಧಿಕಾರ ಇರಬೇಕು, ಭಾರತದ ಬಹುಸಂಖ್ಯಾತರು ಸೇವಕರು ಆಗಿರಬೇಕು ಎಂದು ಹೇಳಲು ಧೈರ್ಯವಿಲ್ಲದೆ ಪರಂಪರೆ ಹೆಸರಿನ ಸಂಕೇತದ ಮೂಲಕ ಸೂಚಿಸುತ್ತಿದ್ದಾರೆ.
ಭೈರಪ್ಪನವರು ಹೇಳುವ ಧರ್ಮ ಭಾರತೀಯರ ಭಾವೈಕ್ಯತೆಯನ್ನು ಹೊಂದಿಲ್ಲ. ವರ್ಣ, ಜಾತಿ, ಲಿಂಗ ನೆಲೆಯಲ್ಲಿ ಅಧಿಕಾರದ ವಿಭಜನೆ ಮಾಡುತ್ತಾ ಮನುಷ್ಯ ಮನುಷ್ಯರ ನಡುವೆ ಬೇಧ ಸಂಸ್ಕೃತಿಯನ್ನು ಬಿತ್ತುತ್ತದೆ. ಮೇಲು – ಕೀಳು ಎನ್ನುವ ಶ್ರೇಣೀಕರಣದ ಮೂಲಕ ಒಡೆದು ಆಳುವ ನೀತಿಯನ್ನು ಅನುಸರಿಸುತ್ತವೆ. ಇದೇ ಪರಂಪರೆ ಅನ್ನುವುದಾದರೆ ಬೈರಪ್ಪನವರು ಹೇಳುತ್ತಿರುವುದು ಏನನ್ನು? ನಮ್ಮ ಸಂವಿಧಾನ ವಿಶ್ವ ಮಾನವ ತತ್ವಗಳನ್ನು ಹೊಂದಿದೆ. ಅದರ ಪ್ರಸ್ತಾವನೆಯಲ್ಲಿ “ನಾವು” ಅನ್ನುವ ಪದವೇ ಭಾರತೀಯರ ಭವ್ಯ ಪರಂಪರೆ ಮತ್ತು ಸಾಂಸ್ಕೃತಿಕ ಅನನ್ಯತೆಯನ್ನು ಹೇಳುತ್ತಿಲ್ಲವೆ? ನಮ್ಮ ಸಂವಿಧಾನದ ಆತ್ಮವಾದ ಸಮಾನತೆ, ಸ್ವಾತಂತ್ರ, ಭ್ರಾತೃತ್ವ, ಸಾಮಾಜಿಕ ನ್ಯಾಯದ ಪರಿಕಲ್ಪನೆಗಳು ಮಾನವನಲ್ಲಿ ಇರಬೇಕಾದ ಮೂಲಭೂತ ಗುಣಗಳನ್ನು ಬೇರೆ ಬೇರೆ ದೇಶಗಳಿಂದ ಎರವಲು ತಂದವುಗಳೆಂದು ಹೇಳಲಾದೀತೆ? ನಮ್ಮ ಸಂವಿಧಾನದಲ್ಲಿ ಅಂತರ್ಗತವಾದ ಮಾನವತಾವಾದವು ಭೈರಪ್ಪನವರು ಹೇಳುವ ಸಾಂಸ್ಥಿಕ ಧರ್ಮದಲ್ಲಿ ಇದೆಯೇ? ಮನುಷ್ಯನ ಸ್ವಾವಲಂಬನೆ, ಸ್ವಾಯತ್ತತೆಯನ್ನು ನಾಶಮಾಡುವ ಆತನ ಸಹಜ ಶಕ್ತಿಯನ್ನು ನಾಶ ಮಾಡಿ ನಿಷ್ಕ್ರಿಯಗೊಳಿಸುವ, ಜನರನ್ನು ಸದಾ ಭಯ ಮತ್ತು ಆತಂಕದಲ್ಲಿ ಇಡುವ ಮೌಢ್ಯವನ್ನು ಬಿತ್ತುತ್ತ ಅಧಿಕಾರ ಮತ್ತು ಆದಾಯದ ಮೂಲಗಳಿಂದ ವಂಚಿಸುವ ಭಾರತದ ಬಹುಜನ ಸಮುದಾಯವನ್ನು ಸೇವಕರನ್ನಾಗಿಸುವ ಧರ್ಮಶಾಸ್ತ್ರ ರಾಷ್ಟ್ರೀಯ ಗ್ರಂಥವಾದರೆ ಭಾರತೀಯತೆಯ, ಪ್ರಜಾಪ್ರಭುತ್ವದ ನಾಶವೇ ಆಗುತ್ತದೆ. ಬೈರಪ್ಪನವರ ಧರ್ಮಶಾಸ್ತ್ರ ಗ್ರಂಥವು ದೈವ ಕೇಂದ್ರಿತವಾದುದೇ ಹೊರತು ಮಾನವ ಕೇಂದ್ರಿತ ಅಲ್ಲ. ನಮ್ಮ ಸಂವಿಧಾನವು ಮನುಷ್ಯನ ಮೂಲಕ ನೋಡುವ ಮಾನವತಾವಾದವನ್ನು ಕಟ್ಟಿಕೊಡುವ ಮೂಲಕ ಮನುಷ್ಯನಿಗೆ ಅಪಾರ ಗೌರವ- ಘನತೆಯನ್ನು ತಂದು ಕೊಟ್ಟಿದೆ. ಅದಕ್ಕಾಗಿಯೇ ಭೈರಪ್ಪ ಮತ್ತು ಭೈರಪ್ಪರಂತ ಮೂಲಭೂತವಾದಿಗಳು ಪರಂಪರೆಯ ಹೆಸರಿನಲ್ಲಿ ಅದನ್ನು ವಿರೋಧಿಸುತ್ತಿದ್ದಾರೆ. ಉಗ್ರ ಮಹಿಳಾ ವಿರೋಧಿಯಾದ ಭೈರಪ್ಪನವರು ಮಹಿಳೆಯ ದೇಹದ ಮೇಲೆ ಪುರುಷಾಧಿಕಾರವನ್ನು ಸ್ಥಾಪಿಸಿದ್ದ ಮನುಸ್ಮೃತಿ ಬೆಂಬಲಿಸುತ್ತಿದ್ದಾರೆ. ಸಂವಿಧಾನವು ಮಹಿಳೆಗೆ ಕಾನೂನಾತ್ಮಕ ಮತ್ತು ಸಂವಿಧಾನಾತ್ಮಕ ಹಕ್ಕುಗಳನ್ನು ನೀಡುವ ಮೂಲಕ ಅವಳಿಗೆ ಗೌರವದ ಬದುಕು ನೀಡಿದೆ. ತಮ್ಮ ಬರಹ ಮತ್ತು ಮಾತಿನ ಮೂಲಕವೇ ಭೈರಪ್ಪನವರು ಮಹಿಳೆಯರನ್ನು ಅವಮಾನಿಸುವ ಮೂಲಕ ಅವಳ ಹಕ್ಕು ಮತ್ತು ಅಧಿಕಾರವನ್ನು ನಿರಾಕರಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...