Homeಮುಖಪುಟಎಸ್.ಎಲ್ ಭೈರಪ್ಪನವರು ಬ್ರಾಹ್ಮಣರಿಗೆ ಅಧಿಕಾರ ಬೇಕು ಎಂದು ನೇರವಾಗಿ ಹೇಳುವ ಧೈರ್ಯ ಇಲ್ಲದೇ ಇವೆಲ್ಲಾ ಹೇಳುತ್ತಿದ್ದಾರೆ

ಎಸ್.ಎಲ್ ಭೈರಪ್ಪನವರು ಬ್ರಾಹ್ಮಣರಿಗೆ ಅಧಿಕಾರ ಬೇಕು ಎಂದು ನೇರವಾಗಿ ಹೇಳುವ ಧೈರ್ಯ ಇಲ್ಲದೇ ಇವೆಲ್ಲಾ ಹೇಳುತ್ತಿದ್ದಾರೆ

- Advertisement -
- Advertisement -

| ಡಾ.ಅನುಸೂಯ ಕಾಂಬಳೆ |

ಸಂವಿಧಾನದಲ್ಲಿ ಧರ್ಮಶಾಸ್ತ್ರವಿಲ್ಲ, ಇನ್ನು ಮುಂದೆ ಹೆಂಡತಿಯಿಂದ ಸಹಿ ಪಡೆದುಕೊಂಡು ಮುಟ್ಟಬೇಕಾಗುತ್ತದೆ ಎಂಬ ಎಸ್.ಎಲ್.ಭೈರಪ್ಪನವರ ಮಾತುಗಳಿಗೆ ಹಲವು ಬರಹಗಾರ್ತಿಯರು ಪ್ರತಿಕ್ರಿಯಿಸಿದ್ದನ್ನು ಹಿಂದೆಯೇ ಪ್ರಕಟಿಸಿದ್ದೆವು. ಅದರ ಮುಂದುವರಿಕೆಯಾಗಿ ಪ್ರಾಧ್ಯಾಪಕಿ, ಕವಯತ್ರಿ ಮತ್ತು ಚಿಂತಕರಾದ ಡಾ.ಅನಸೂಯ ಕಾಂಬಳೆಯವರ ಬರಹ ಇಲ್ಲಿದೆ.

ಪರಂಪರೆಯ ಪ್ರಜ್ಞೆ ಮತ್ತು ರಾಷ್ಟ್ರೀಯತೆ ಎರಡು ಭಿನ್ನವಾದವು. ಭೈರಪ್ಪನವರ ಮಾತಿಗೆ ಪ್ರತಿಕ್ರಿಯಿಸುವುದು ಅಂತ ವಿಶೇಷ ಅನಿಸುವುದಿಲ್ಲ. ಧರ್ಮಶಾಸ್ತ್ರವೇ ರಾಷ್ಟ್ರೀಯ ಗ್ರಂಥವಾಗಬೇಕೆಂದು ಏಕೆ ಹೇಳುತ್ತಿದ್ದಾರೆ ಎನ್ನುವುದು ಸಾಮಾನ್ಯರಿಗೂ ತಿಳಿಯುವ ಸಂಗತಿ. ಅವರು ಹೇಳುವ ಧರ್ಮ ರಾಷ್ಟ್ರವನ್ನು ಪ್ರತಿನಿಧಿಸುವ ಧರ್ಮವಲ್ಲ. ಕೇವಲ ಮೂರು ಪ್ರತಿಶತದಷ್ಟು ಜನರಿಗೆ ಅನ್ವಯಿಸುವುದು ಮತ್ತು ಅಧಿಕಾರವನ್ನು ಅವರಿಗೆ ನಿಗದಿಗೊಳಿಸುವರಿಂದ ಹೇಳುತ್ತಿರುವ ರಾಜಕಾರಣದ ಭಾಗವೇ ಆಗಿದೆ ಹೊರತು ಪರಂಪರೆಯ ಪ್ರಶ್ನೆ ಅಲ್ಲ. ಬ್ರಾಹ್ಮಣರಿಗೆ ಅಧಿಕಾರ ಇರಬೇಕು, ಭಾರತದ ಬಹುಸಂಖ್ಯಾತರು ಸೇವಕರು ಆಗಿರಬೇಕು ಎಂದು ಹೇಳಲು ಧೈರ್ಯವಿಲ್ಲದೆ ಪರಂಪರೆ ಹೆಸರಿನ ಸಂಕೇತದ ಮೂಲಕ ಸೂಚಿಸುತ್ತಿದ್ದಾರೆ.
ಭೈರಪ್ಪನವರು ಹೇಳುವ ಧರ್ಮ ಭಾರತೀಯರ ಭಾವೈಕ್ಯತೆಯನ್ನು ಹೊಂದಿಲ್ಲ. ವರ್ಣ, ಜಾತಿ, ಲಿಂಗ ನೆಲೆಯಲ್ಲಿ ಅಧಿಕಾರದ ವಿಭಜನೆ ಮಾಡುತ್ತಾ ಮನುಷ್ಯ ಮನುಷ್ಯರ ನಡುವೆ ಬೇಧ ಸಂಸ್ಕೃತಿಯನ್ನು ಬಿತ್ತುತ್ತದೆ. ಮೇಲು – ಕೀಳು ಎನ್ನುವ ಶ್ರೇಣೀಕರಣದ ಮೂಲಕ ಒಡೆದು ಆಳುವ ನೀತಿಯನ್ನು ಅನುಸರಿಸುತ್ತವೆ. ಇದೇ ಪರಂಪರೆ ಅನ್ನುವುದಾದರೆ ಬೈರಪ್ಪನವರು ಹೇಳುತ್ತಿರುವುದು ಏನನ್ನು? ನಮ್ಮ ಸಂವಿಧಾನ ವಿಶ್ವ ಮಾನವ ತತ್ವಗಳನ್ನು ಹೊಂದಿದೆ. ಅದರ ಪ್ರಸ್ತಾವನೆಯಲ್ಲಿ “ನಾವು” ಅನ್ನುವ ಪದವೇ ಭಾರತೀಯರ ಭವ್ಯ ಪರಂಪರೆ ಮತ್ತು ಸಾಂಸ್ಕೃತಿಕ ಅನನ್ಯತೆಯನ್ನು ಹೇಳುತ್ತಿಲ್ಲವೆ? ನಮ್ಮ ಸಂವಿಧಾನದ ಆತ್ಮವಾದ ಸಮಾನತೆ, ಸ್ವಾತಂತ್ರ, ಭ್ರಾತೃತ್ವ, ಸಾಮಾಜಿಕ ನ್ಯಾಯದ ಪರಿಕಲ್ಪನೆಗಳು ಮಾನವನಲ್ಲಿ ಇರಬೇಕಾದ ಮೂಲಭೂತ ಗುಣಗಳನ್ನು ಬೇರೆ ಬೇರೆ ದೇಶಗಳಿಂದ ಎರವಲು ತಂದವುಗಳೆಂದು ಹೇಳಲಾದೀತೆ? ನಮ್ಮ ಸಂವಿಧಾನದಲ್ಲಿ ಅಂತರ್ಗತವಾದ ಮಾನವತಾವಾದವು ಭೈರಪ್ಪನವರು ಹೇಳುವ ಸಾಂಸ್ಥಿಕ ಧರ್ಮದಲ್ಲಿ ಇದೆಯೇ? ಮನುಷ್ಯನ ಸ್ವಾವಲಂಬನೆ, ಸ್ವಾಯತ್ತತೆಯನ್ನು ನಾಶಮಾಡುವ ಆತನ ಸಹಜ ಶಕ್ತಿಯನ್ನು ನಾಶ ಮಾಡಿ ನಿಷ್ಕ್ರಿಯಗೊಳಿಸುವ, ಜನರನ್ನು ಸದಾ ಭಯ ಮತ್ತು ಆತಂಕದಲ್ಲಿ ಇಡುವ ಮೌಢ್ಯವನ್ನು ಬಿತ್ತುತ್ತ ಅಧಿಕಾರ ಮತ್ತು ಆದಾಯದ ಮೂಲಗಳಿಂದ ವಂಚಿಸುವ ಭಾರತದ ಬಹುಜನ ಸಮುದಾಯವನ್ನು ಸೇವಕರನ್ನಾಗಿಸುವ ಧರ್ಮಶಾಸ್ತ್ರ ರಾಷ್ಟ್ರೀಯ ಗ್ರಂಥವಾದರೆ ಭಾರತೀಯತೆಯ, ಪ್ರಜಾಪ್ರಭುತ್ವದ ನಾಶವೇ ಆಗುತ್ತದೆ. ಬೈರಪ್ಪನವರ ಧರ್ಮಶಾಸ್ತ್ರ ಗ್ರಂಥವು ದೈವ ಕೇಂದ್ರಿತವಾದುದೇ ಹೊರತು ಮಾನವ ಕೇಂದ್ರಿತ ಅಲ್ಲ. ನಮ್ಮ ಸಂವಿಧಾನವು ಮನುಷ್ಯನ ಮೂಲಕ ನೋಡುವ ಮಾನವತಾವಾದವನ್ನು ಕಟ್ಟಿಕೊಡುವ ಮೂಲಕ ಮನುಷ್ಯನಿಗೆ ಅಪಾರ ಗೌರವ- ಘನತೆಯನ್ನು ತಂದು ಕೊಟ್ಟಿದೆ. ಅದಕ್ಕಾಗಿಯೇ ಭೈರಪ್ಪ ಮತ್ತು ಭೈರಪ್ಪರಂತ ಮೂಲಭೂತವಾದಿಗಳು ಪರಂಪರೆಯ ಹೆಸರಿನಲ್ಲಿ ಅದನ್ನು ವಿರೋಧಿಸುತ್ತಿದ್ದಾರೆ. ಉಗ್ರ ಮಹಿಳಾ ವಿರೋಧಿಯಾದ ಭೈರಪ್ಪನವರು ಮಹಿಳೆಯ ದೇಹದ ಮೇಲೆ ಪುರುಷಾಧಿಕಾರವನ್ನು ಸ್ಥಾಪಿಸಿದ್ದ ಮನುಸ್ಮೃತಿ ಬೆಂಬಲಿಸುತ್ತಿದ್ದಾರೆ. ಸಂವಿಧಾನವು ಮಹಿಳೆಗೆ ಕಾನೂನಾತ್ಮಕ ಮತ್ತು ಸಂವಿಧಾನಾತ್ಮಕ ಹಕ್ಕುಗಳನ್ನು ನೀಡುವ ಮೂಲಕ ಅವಳಿಗೆ ಗೌರವದ ಬದುಕು ನೀಡಿದೆ. ತಮ್ಮ ಬರಹ ಮತ್ತು ಮಾತಿನ ಮೂಲಕವೇ ಭೈರಪ್ಪನವರು ಮಹಿಳೆಯರನ್ನು ಅವಮಾನಿಸುವ ಮೂಲಕ ಅವಳ ಹಕ್ಕು ಮತ್ತು ಅಧಿಕಾರವನ್ನು ನಿರಾಕರಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...