ಮಂಗಳೂರಿನ ಬಿಜೈ ಬಳಿಯ ಕಲರ್ಸ್ ಯುನಿಸೆಕ್ಸ್ ಸೆಲೂನ್ ಮೇಲೆ ರಾಮ ಸೇನೆ ದುಷ್ಕರ್ಮಿಗಳು ದಾಂಧಲೆ ಮೆರೆಯಲು ಮಂಗಳೂರು ನಗರದ ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ನೇರ ಹೊಣೆ ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಗುರುವಾರ ಆರೋಪಿಸಿದೆ. ಅನೈತಿಕ ಚಟುವಟಿಕೆಗಳಿಗೆ ಮುಕ್ತ ಅವಕಾಶಕೊಟ್ಟು ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವ ಕಾರಣಕ್ಕೆ ಮತ್ತೆ ನೈತಿಕ ಪೊಲೀಸ್ ಗಿರಿ ತಲೆಎತ್ತಿ ಮಂಗಳೂರಿನ ಮಾನವನ್ನು ಹರಾಜಿಗಿಟ್ಟಿದೆ ಎಂದು ಸಂಘಟನೆ ಆರೋಪಿಸಿದೆ. ಸೆಲೂನ್ ಮೇಲೆ ರಾಮ ಸೇನಾ
ಈ ಬಗ್ಗೆ ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಮತ್ತು ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್, “ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಮಸಾಜ್ ಪಾರ್ಲರ್, ಅಕ್ರಮ ಮರಳುಗಾರಿಕೆ, ವೇಶ್ಯಾವಾಟಿಕೆ, ಜುಗಾರಿ ಅಡ್ಡೆ, ಮಡ್ಕ ಸೇರಿದಂತೆ ಹಲವು ಬಗೆಯ ಗ್ಯಾಂಬ್ಲಿಂಗ್ ಗಳು ರಾಜಾರೋಷವಾಗಿ ನಡೆಯುತ್ತಲೆ ಇದೆ. ಈ ಬಗ್ಗೆ ಡಿವೈಎಫ್ಐ ಸಂಘಟನೆ ಪ್ರಾರಂಭದಿಂದಲೇ ಆರೋಪಿಸುತ್ತಾ ಬಂದಿದ್ದರೂ, ಈಗಿನ ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಈ ಬಗ್ಗೆ ಈವರೆಗೂ ಯಾವುದೇ ಕ್ರಮಕೈಗೊಳ್ಳದೆ ಅವುಗಳಿಗೆ ಮುಕ್ತವಾಗಿ ಅವಕಾಶಕೊಟ್ಟು ನಗರದಲ್ಲಿಂದು ಹರಾಜಕತೆಯನ್ನು ಸೃಷ್ಟಿಸಿದ್ದಾರೆ.” ಎಂದು ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಪ್ರಗತಿಪರರು ನಡೆಸುವ ಜನಪರ ಹೋರಾಟಗಳಿಗೆ ಅವಕಾಶಕೊಡದೆ ವಿನಾಕಾರಣ ಕೇಸು ದಾಖಲಿಸುವ ಕಮೀಷನರ್ ಅನುಪಮ್ ಅದೇ ಸಂಘಪರಿವಾರದ ಕಾರ್ಯಕ್ರಮಕ್ಕೆ ಎಲ್ಲೆಂದರಲ್ಲಿ (ಕಾನೂನು ನಿಯಮ ಮೀರಿ) ಅವಕಾಶ ಕಲ್ಪಿಸಿ ನೇರ ಬೆಂಬಲಿಸುತ್ತಾ ಬಂದ ಕಾರಣಕ್ಕೆ ಇಂದು ರಾಮ ಸೇನೆ ಕಾರ್ಯಕರ್ತರು ಮತ್ತೆ ನಗರದಲ್ಲಿ ನೈತಿಕ ಗೂಂಡಾಗಿರಿ ಮೆರೆಯಲು ಅವಕಾಶ ಮಾಡಿಕೊಟ್ಟಂತಾಗಿದೆ. ಈಗಾಗಲೇ ಒಂದಷ್ಟು ನಿಯಂತ್ರಿಸಲಾಗಿದ್ದ ಸಂಘಪಾರಿವಾರದ ನೈತಿಕ ಪೊಲೀಸ್ ಗಿರಿ ಮತ್ತೆ ಪುನರಾವರ್ತಿಸುವಲ್ಲಿ ಕಮೀಷನರ್ ಅಗ್ರವಾಲ್ ನೇರ ಹೊಣೆಯಾಗಿದ್ದು ಮಂಗಳೂರು ನಗರದ ಮಾನವನ್ನು ಮತ್ತೆ ಹರಾಜು ಹಾಕಿ ತಲೆ ತಗ್ಗಿಸುವಂತೆ ಮಾಡಿದೆ” ಎಂದು ಡಿವೈಎಫ್ಐ ಹೇಳಿದೆ. ಸೆಲೂನ್ ಮೇಲೆ ರಾಮ ಸೇನಾ
“ನಗರದ ಪೊಲೀಸ್ ಇಲಾಖೆಯ ವೈಫಲ್ಯತೆ ಬಗ್ಗೆ ಮತ್ತು ಕಳಂಕಿತ ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲರನ್ನು ಅಮಾನತುಗೊಳಿಸಿ ವರ್ಗಾಹಿಸಲು ಮುಖ್ಯಮಂತ್ರಿ, ಗೃಹ ಮಂತ್ರಿಗಳ ಗಮನಕ್ಕೆ ತಂದರೂ ಈ ಬಗ್ಗೆ ಕ್ರಮಕೈಗೊಳ್ಳುವಲ್ಲಿ ಬೇಜವಾಬ್ದಾರಿಯನ್ನು ವಹಿಸಿದ್ದಾರೆ. ನಗರದ ಪೊಲೀಸ್ ಅವ್ಯವಸ್ಥೆಯನ್ನು ಸರಿಪಡಿಸದ ಕಾರಣಕ್ಕೆ ಸಂಘಪರಿವಾರದ ಕಾರ್ಯಕರ್ತರು ಮತ್ತೆ ನೈತಿಕ ಪೊಲೀಸ್ ಗಿರಿ ಮೂಲಕ ನಗರದಲ್ಲಿ ಮೆರೆಯಲು ಅವಕಾಶ ಮಾಡಿಕೊಟ್ಟಂತಾಗಿದೆ” ಎಂದು ಸಂಘಟನೆ ಹೇಳಿದೆ.
ಈ ಎಲ್ಲಾ ಬೆಳವಣೆಗೆ ಮಂಗಳೂರು ನಗರದಲ್ಲಿ ಮತ್ತೆ ಅಶಾಂತಿ ಸೃಷ್ಟಿಸಿ ಸಾಮಾರಸ್ಯ ಕದಡಲು ಅವಕಾಶ ಮಾಡಿಕೊಡುವಂತಹ ಬೆಳವಣೆಗೆಗೂ ಕಾಂಗ್ರೇಸ್ ಸರಕಾರವೂ ನೇರ ಹೊಣೆ ಹೊರಬೇಕಾಗಿದೆ ಎಂದು ಡಿವೈಎಫ್ಐ ಹೇಳಿದೆ.
ಕರ್ನಾಟಕ ರಾಜ್ಯ ಸರಕಾರ ಈ ಕೂಡಲೇ ಎಚ್ಚೆತ್ತು ರಾಮ ಸೇನೆ ನಡೆಸಿದ ದಾಂಧಲೆ ನೈತಿಕಪೊಲೀಸ್ ಗಿರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿರುವ ಡಿವೈಎಫ್ಐ, ಮಂಗಳೂರು ನಗರದಲ್ಲಿ ಹದಗೆಟ್ಟಿರುವ ಪೊಲೀಸ್ ವ್ಯವಸ್ಥೆಯನ್ನು ಸರಿಪಡಿಸಬೇಕು. ಅಕ್ರಮ ಚಟುವಟಿಕೆ ನಿಯಂತ್ರಿಸಲಾಗದ ಕಳಂಕಿತ ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲರನ್ನು ಕೂಡಲೇ ಅಮಾನತುಗೊಳಿಸಿ ವರ್ಗಾಹಿಸಬೇಕು” ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ಇದನ್ನೂಓದಿ: ಬಂಧನ ಕೇಂದ್ರದಿಂದ ವಿದೇಶಿಯರ ಗಡೀಪಾರು ಮಾಡುವಲ್ಲಿ ಅಸ್ಸಾಂ ಸರ್ಕಾರ ವಿಫಲ – ಸುಪ್ರೀಂಕೋರ್ಟ್ ಟೀಕೆ
ಬಂಧನ ಕೇಂದ್ರದಿಂದ ವಿದೇಶಿಯರ ಗಡೀಪಾರು ಮಾಡುವಲ್ಲಿ ಅಸ್ಸಾಂ ಸರ್ಕಾರ ವಿಫಲ – ಸುಪ್ರೀಂಕೋರ್ಟ್ ಟೀಕೆ


