ದೇಶಾದ್ಯಂತ ಧ್ವಂಸ ಕ್ರಮಗಳನ್ನು ಪೂರ್ವ ಸೂಚನೆ ಮತ್ತು ವಿಚಾರಣೆಯ ಅವಕಾಶವಿಲ್ಲದೆ ತಡೆಯುವ ನವೆಂಬರ್ 2024 ರ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಸಂಭಾಲ್ ಧ್ವಂಸ ಪ್ರಕರಣ
“ಹೈಕೋರ್ಟ್ ಮುಂದೆ ಈ ಅರ್ಜಿ ಸಲ್ಲಿಸಿ. ಆದೇಶದ ಉಲ್ಲಂಘನೆಯಾಗಿದ್ದರೆ, ಹೈಕೋರ್ಟ್ ಅದನ್ನು ಆಲಿಸಬಹುದು” ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿನೋದ್ ಚಂದ್ರನ್ ಅವರ ಸುಪ್ರೀಂ ಕೋರ್ಟ್ನ ದ್ವಿಸದಸ್ಯ ಪೀಠ ಹೇಳಿದೆ. ಸಂಭಾಲ್ ಧ್ವಂಸ ಪ್ರಕರಣ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮೊಹಮ್ಮದ್ ಘಯೂರ್ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿದ ಸುಪ್ರೀಂ ಕೋರ್ಟ್ ತನ್ನ ನ್ಯಾಯಾಂಗ ನಿಂದನೆ ಅರ್ಜಿಯೊಂದಿಗೆ ಹೈಕೋರ್ಟ್ ಅನ್ನು ಸಂಪರ್ಕಿಸಲು ಕೇಳಿಕೊಂಡಿದೆ.
ನ್ಯಾಯಾಲಯದ ನಿರ್ದೇಶನಗಳ ಹೊರತಾಗಿಯೂ, ಜನವರಿ 10 ಮತ್ತು 11 ರ ನಡುವೆ ಉತ್ತರ ಪ್ರದೇಶದ ಅಧಿಕಾರಿಗಳು ಪೂರ್ವ ಸೂಚನೆ ಇಲ್ಲದೆ ಸಂಭಾಲ್ನಲ್ಲಿರುವ ತಮ್ಮ ಆಸ್ತಿಯ ಒಂದು ಭಾಗವನ್ನು ಕೆಡವಿದ್ದಾರೆ ಎಂದು ಆರೋಪಿಸಿ ಘಯೂರ್ ಅವರು ಸುಪ್ರೀಂ ಕೋರ್ಟ್ನ ಬಾಗಿಲು ತಟ್ಟಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿದ್ದರು.
ಇದನ್ನೂಓದಿ: ದೆಹಲಿ ಚುನಾವಣೆ | ಎಎಪಿಗೆ ಭಾರಿ ಮುಖಭಂಗ; ಕೇಜ್ರಿವಾಲ್ಗೆ ಸೋಲು


